Homeಚಳವಳಿ"ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು"

“ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು”

- Advertisement -
- Advertisement -

ಉತ್ತರಪ್ರದೇಶದ ವಾರಾಣಸಿಯ ಸೆಂಟ್ರಲ್ ಹಿಂದು ಬಾಲಕರ ಶಾಲೆಯ ವಿದ್ಯಾರ್ಥಿ ಆಯುಷ್ ಚತುರ್ವೇದಿ, ಗಾಂಧಿ ಜಯಂತಿಯಂದು ಮಾಡಿದ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಧರ್ಮ ಹಾಗೂ ಕೋಮುಗಳ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆಗೆ ಆಯುಷ್ ಭಾಷಣ ತಕ್ಕ ತಿರುಗೇಟು ನೀಡಿದೆ. ಗಾಂಧೀಜಿಯವರ ಕಥೆಯೊಂದಿಗೆ ಆರಂಭವಾಗುವ ಆತನ ಭಾಷಣವನ್ನು ರಾಜಶೇಖರ್ ಅಕ್ಕಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ…

ಮಹಾತ್ಮ ಗಾಂಧೀಜಿ ಒಂದು ಬಾರಿ ರೈಲಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದರು. ಆ ಕಾಲದಲ್ಲಿ ವರ್ಣಭೇದ ನೀತಿ ವ್ಯಾಪಕವಾಗಿತ್ತು. ವರ್ಣಭೇದ ನೀತಿಯಿಂದಾಗಿಯೇ ಗಾಂಧೀಜಿಯವರನ್ನು ಟ್ರೇನ್‍ನಿಂದ ಹೊರದಬ್ಬಲಾಯಿತು. ಅಂದು ಆದ ಗಾಯವನ್ನು ಗಾಂಧೀಜಿಯವರು ಮಾಯಲು ಬಿಡಲೇ ಇಲ್ಲ. ಗಾಯವನ್ನು ಇನ್ನಷ್ಟು ಕೆದರಿದರು. ಇದರಿಂದ ಮಹಾತ್ಮನಿಗೆ ಸಿಕ್ಕ ಅಸ್ತ್ರವೇ ಅಸಹಕಾರ ಚಳವಳಿ.

ದುಷ್ಟರು ಹೇಳುವುದನ್ನು ಮಾಡದೇ ಇರುವುದೇ ಅಸಹಕಾರ ಚಳವಳಿ. ಇದರಿಂದಲೇ ಒಂದು ಇತಿಹಾಸದ ಪ್ರಾರಂಭವಾಯಿತು. ಲೂಯಿ ಫಿಷರ್ ಒಂದು ಮಾತು ಹೇಳುತ್ತಾರೆ, ರೈಲಿನಿಂದ ಗಾಂಧೀಜಿಯವರನ್ನು ಹೊರದಬ್ಬಿದ ಬ್ರಿಟಿಷ್ ವ್ಯಕ್ತಿಗೆ ತಾನು ಹೊರದಬ್ಬಿದ ವ್ಯಕ್ತಿ ಮುಂದೊಂದು ದಿನ ಬ್ರಿಟಿಷ್ ಆಳ್ವಿಕೆಯನ್ನು ವಿಶ್ವದಿಂದ ಸಂಪೂರ್ಣವಾಗಿ ಹೊರದಬ್ಬುತ್ತಾನೆ ಎಂದು ಮೊದಲೇ ತಿಳಿದಿದ್ದರೆ ಬ್ರಿಟಿಷ್ ವ್ಯಕ್ತಿ ಅಂತಹ ತಪ್ಪು ಮಾಡುತ್ತಿರಲಿಲ್ಲವೇನೋ..?

ಅತ್ಯಂತ ವಿಡಂಬನೆಯ ಒಂದು ವಿಷಯವೇನೆಂದರೆ, ಗಾಂಧೀಜಿಯ ದೇಶವಾಸಿಗಳೇ ಗಾಂಧೀಜಿಯನ್ನು ಅತ್ಯಂತ ಕಡಿಮೆ ಓದಿಕೊಂಡಿದ್ದಾರೆ ಮತ್ತು ಅರ್ಥೈಸಿಕೊಂಡಿದ್ದಾರೆ. ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಅವರ ಪುಸ್ತಕಗಳನ್ನು ಓದುವ ಯುವಜನತೆ, ಒಂದು ವೇಳೆ ಗಾಂಧೀಜಿಯವರನ್ನು ಗಂಭೀರವಾಗಿ ಓದಿಕೊಂಡಿದ್ದರೆ, ಇಂದು ನಮ್ಮ ಪೀಳಿಗೆಯ ಪಾಠಗಳೇ ಬೇರೆಯಾಗಿರುತ್ತಿದ್ದವು. ಆದರೆ, ನಾವು ಹಾಗೆ ಮಾಡಲಿಲ್ಲ. ಹಾಗೂ ಇದೇ ಕಾರಣಕ್ಕಾಗಿ ನಾವೆಲ್ಲ ಫ್ಯಾನ್ಸಿ ಫೇಸ್‍ಬುಕ್ ಗ್ಯಾಂಗ್ ಆಗಿ ಬದಲಾಗಿದ್ದೇವೆ.

ದೇಶ ವಿಭಜನೆಯ ಶಾಶ್ವತ ಕಾರಣ ಗಾಂಧೀಜಿ ಎಂದು ನಂಬುವುದು ಹಾಗೂ ಗಾಂಧೀಜಿಯವರನ್ನು ಮುಸ್ಲಿಂ ಪರ ಎಂದು ಕರೆಯುವುದು. ಒಂದು ಮಾತು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಗಾಂಧಿಗಿಂತ ದೊಡ್ಡ, ಮಹಾನ್ ಹಿಂದು ಯಾರೂ ಆಗಿಲ್ಲ. ಆದರೆ ಗಾಂಧೀಜಿಯ ‘ಹೇ ರಾಮ್’ ಮಂತ್ರ ಮಠಣದಿಂದ ಇತರೆ ಸಮುದಾಯಗಳು ಹೆದರುತ್ತಿರಲಿಲ್ಲ. ಏಕೆಂದರೆ, ಗಾಂಧೀಜಿ ಜಾತ್ಯತೀತತೆಯ ಪ್ರತೀಕವಾಗಿದ್ದರು. ಪ್ರಸ್ತುತ ಅಹಿಂಸೆಯನ್ನು ಹೇಡಿತನದ ಮತ್ತು ದೌರ್ಬಲ್ಯದ ಪ್ರತೀಕ ಎಂದೇ ಹೇಳಲಾಗುತ್ತಿದೆ. ಆದರೆ ಜನರು ಮರೆಯುತ್ತಿರುವ ಅಂಶವೇನೆಂದರೆ ವಿಶ್ವದ ಅತಿ ದೊಡ್ಡ ಸೇನೆಯೊಂದಿಗೆ ಶಸ್ತ್ರಾಸ್ತ್ರಗಳಿಂದ ಹೋರಾಟ ಮಾಡುವುದು ಸಾಧ್ಯವಿಲ್ಲ. ಅದಕ್ಕೆ ನಾವು ಆಯ್ಕೆ ಮಾಡಿಕೊಳ್ಳುವ ಅಸ್ತ್ರದ ಸಾಟಿಯನ್ನು ಅವರಿಗೆ ಮಾಡಲು ಸಾಧ್ಯವಾಗಬಾರದು. ಆ ಅಸ್ತ್ರವೇ ಅಹಿಂಸೆ. ಒಂದು ಕಣ್ಣಿಗೆ ಇನ್ನೊಂದು ಕಣ್ಣನ್ನು ತೆಗೆಯುವುದರಿಂದ ಸಂಪೂರ್ಣ ವಿಶ್ವವೇ ಕುರುಡಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದರು. ನಿಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚಿಸದ ಶಿಕ್ಷಣ, ಮೂರ್ಖ ಶಿಕ್ಷಣವೆಂದೂ ಬಾಪೂಜಿ ಹೇಳುತ್ತಿದ್ದರು.

ಗಾಂಧೀಜಿ ಮತ್ತು ಇತರೆ ನಾಯಕರ, ಸೇನಾನಿಗಳ ಬಲಿದಾನ, ಆಂದೋಲನ ಮತ್ತು ಜೈಲುವಾಸದ ಪರಿಣಾಮ 1947ರ ಆಗಸ್ಟ್ 15ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮನನ್ನು ನಾವೆಷ್ಟು ಪ್ರೀತಿಸಿದೆವೆಂದರೆ ಮಾರನೇ ವರ್ಷ ಮೂರು ಗುಂಡು ಹಾರಿಸಿ ಅವರ ಸಮಾಧಿ ಮಾಡಿಬಿಟ್ಟೆವು. ಆದರೆ ಗಾಂಧಿ ಎಂದೂ ಸಾಯುವವರಲ್ಲ. ಏಕೆಂದರೆ ಗಾಂಧಿ ಎನ್ನುವುದು ಒಂದು ವಿಚಾರದ ಹೆಸರು, ಅದು ಒಬ್ಬ ವ್ಯಕ್ತಿಯ ಹೆಸರಲ್ಲ. ಹೀಗಾಗಿ ವಿಚಾರ ಎಂದಿಗೂ ಜೀವಂತವಾಗಿರುತ್ತದೆ.

ಕೊನೆಯದಾಗಿ, ದುಷ್ಯಂತ್ ಕುಮಾರ್ ಅವರ ಒಂದು ಕವಿತೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ದೇವರಿಲ್ಲವೇ? ಆಯಿತು, ಒಬ್ಬ ವ್ಯಕ್ತಿಯ ಕನಸಾದರೂ ಇದೆಯಲ್ಲ.

ನೋಡಲು ಒಂದು ಸುಂದರ ದೃಷ್ಯವಂತೂ ಇದೆಯಲ್ಲ

ಕಲ್ಲು ಕರಗುವುದಿಲ್ಲವೆಂದು ಅವರು ಸಮಾಧಾನದಲ್ಲಿದ್ದಾರೆ

ಧ್ವನಿಯಲ್ಲಿ ಪರಿಣಾಮ ಕಾಣಲೆಂದು ನಾನು ಕಾತುರನಾಗಿದ್ದೇನೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗದಗ | ಕ್ಯಾಂಟರ್-ಕ್ರೂಸರ್ ನಡುವೆ ಅಪಘಾತ : ಮೂವರು ಸ್ಥಳದಲ್ಲೇ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಗದಗ ಜಿಲ್ಲೆ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಜೇಂದ್ರಗಡದ...

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...

ದೇವಾಲಯ-ಶಾಲೆಗಳ ಬಳಿ ಇರುವ ಮಾಂಸ ಮಳಿಗೆಗಳ ಕುರಿತು ಏಕರೂಪ ನೀತಿ ರೂಪಿಸಿ: ತೆಲಂಗಾಣ ಹೈಕೋರ್ಟ್

ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು...

ಎಸ್‌ಐಆರ್ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ ಮಾಡುತ್ತಿದ್ದಾರೆ....

ಆರ್‌ಕಾಮ್ ಬ್ಯಾಂಕ್ ವಂಚನೆ ತನಿಖೆ: ಇಡಿ, ಸಿಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ; ದೇಶ ಬಿಟ್ಟು ಹೋಗದಂತೆ ಅನಿಲ್ ಅಂಬಾನಿಗೆ ತಾಕೀತು 

ರಿಲಯನ್ಸ್ ಕಮ್ಯುನಿಕೇಷನ್ಸ್, ಅದರ ಸಮೂಹ ಕಂಪನಿಗಳು ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಳಗೊಂಡ ಬೃಹತ್ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ...

ಅಸ್ಸಾಂ ಮುಖ್ಯಮಂತ್ರಿಯಿಂದ ‘100 ಪ್ರಕರಣಗಳ ಬೆದರಿಕೆ’: ‘ಇದು ಮಾನವ ಹಕ್ಕುಗಳ ರಕ್ಷಕರನ್ನು ಮೌನಗೊಳಿಸುವ ಪ್ರಯತ್ನ’ ಎಂದ ಹರ್ಷ್ ಮಂದರ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್ ಮಂದರ್ ಅವರ ವಿರುದ್ಧ "ಕನಿಷ್ಠ 100 ಪ್ರಕರಣಗಳು" ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕುಗಳ...