Homeಚಳವಳಿ"ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು"

“ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು”

- Advertisement -
- Advertisement -

ಉತ್ತರಪ್ರದೇಶದ ವಾರಾಣಸಿಯ ಸೆಂಟ್ರಲ್ ಹಿಂದು ಬಾಲಕರ ಶಾಲೆಯ ವಿದ್ಯಾರ್ಥಿ ಆಯುಷ್ ಚತುರ್ವೇದಿ, ಗಾಂಧಿ ಜಯಂತಿಯಂದು ಮಾಡಿದ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಧರ್ಮ ಹಾಗೂ ಕೋಮುಗಳ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆಗೆ ಆಯುಷ್ ಭಾಷಣ ತಕ್ಕ ತಿರುಗೇಟು ನೀಡಿದೆ. ಗಾಂಧೀಜಿಯವರ ಕಥೆಯೊಂದಿಗೆ ಆರಂಭವಾಗುವ ಆತನ ಭಾಷಣವನ್ನು ರಾಜಶೇಖರ್ ಅಕ್ಕಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ…

ಮಹಾತ್ಮ ಗಾಂಧೀಜಿ ಒಂದು ಬಾರಿ ರೈಲಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದರು. ಆ ಕಾಲದಲ್ಲಿ ವರ್ಣಭೇದ ನೀತಿ ವ್ಯಾಪಕವಾಗಿತ್ತು. ವರ್ಣಭೇದ ನೀತಿಯಿಂದಾಗಿಯೇ ಗಾಂಧೀಜಿಯವರನ್ನು ಟ್ರೇನ್‍ನಿಂದ ಹೊರದಬ್ಬಲಾಯಿತು. ಅಂದು ಆದ ಗಾಯವನ್ನು ಗಾಂಧೀಜಿಯವರು ಮಾಯಲು ಬಿಡಲೇ ಇಲ್ಲ. ಗಾಯವನ್ನು ಇನ್ನಷ್ಟು ಕೆದರಿದರು. ಇದರಿಂದ ಮಹಾತ್ಮನಿಗೆ ಸಿಕ್ಕ ಅಸ್ತ್ರವೇ ಅಸಹಕಾರ ಚಳವಳಿ.

ದುಷ್ಟರು ಹೇಳುವುದನ್ನು ಮಾಡದೇ ಇರುವುದೇ ಅಸಹಕಾರ ಚಳವಳಿ. ಇದರಿಂದಲೇ ಒಂದು ಇತಿಹಾಸದ ಪ್ರಾರಂಭವಾಯಿತು. ಲೂಯಿ ಫಿಷರ್ ಒಂದು ಮಾತು ಹೇಳುತ್ತಾರೆ, ರೈಲಿನಿಂದ ಗಾಂಧೀಜಿಯವರನ್ನು ಹೊರದಬ್ಬಿದ ಬ್ರಿಟಿಷ್ ವ್ಯಕ್ತಿಗೆ ತಾನು ಹೊರದಬ್ಬಿದ ವ್ಯಕ್ತಿ ಮುಂದೊಂದು ದಿನ ಬ್ರಿಟಿಷ್ ಆಳ್ವಿಕೆಯನ್ನು ವಿಶ್ವದಿಂದ ಸಂಪೂರ್ಣವಾಗಿ ಹೊರದಬ್ಬುತ್ತಾನೆ ಎಂದು ಮೊದಲೇ ತಿಳಿದಿದ್ದರೆ ಬ್ರಿಟಿಷ್ ವ್ಯಕ್ತಿ ಅಂತಹ ತಪ್ಪು ಮಾಡುತ್ತಿರಲಿಲ್ಲವೇನೋ..?

ಅತ್ಯಂತ ವಿಡಂಬನೆಯ ಒಂದು ವಿಷಯವೇನೆಂದರೆ, ಗಾಂಧೀಜಿಯ ದೇಶವಾಸಿಗಳೇ ಗಾಂಧೀಜಿಯನ್ನು ಅತ್ಯಂತ ಕಡಿಮೆ ಓದಿಕೊಂಡಿದ್ದಾರೆ ಮತ್ತು ಅರ್ಥೈಸಿಕೊಂಡಿದ್ದಾರೆ. ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಅವರ ಪುಸ್ತಕಗಳನ್ನು ಓದುವ ಯುವಜನತೆ, ಒಂದು ವೇಳೆ ಗಾಂಧೀಜಿಯವರನ್ನು ಗಂಭೀರವಾಗಿ ಓದಿಕೊಂಡಿದ್ದರೆ, ಇಂದು ನಮ್ಮ ಪೀಳಿಗೆಯ ಪಾಠಗಳೇ ಬೇರೆಯಾಗಿರುತ್ತಿದ್ದವು. ಆದರೆ, ನಾವು ಹಾಗೆ ಮಾಡಲಿಲ್ಲ. ಹಾಗೂ ಇದೇ ಕಾರಣಕ್ಕಾಗಿ ನಾವೆಲ್ಲ ಫ್ಯಾನ್ಸಿ ಫೇಸ್‍ಬುಕ್ ಗ್ಯಾಂಗ್ ಆಗಿ ಬದಲಾಗಿದ್ದೇವೆ.

ದೇಶ ವಿಭಜನೆಯ ಶಾಶ್ವತ ಕಾರಣ ಗಾಂಧೀಜಿ ಎಂದು ನಂಬುವುದು ಹಾಗೂ ಗಾಂಧೀಜಿಯವರನ್ನು ಮುಸ್ಲಿಂ ಪರ ಎಂದು ಕರೆಯುವುದು. ಒಂದು ಮಾತು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಗಾಂಧಿಗಿಂತ ದೊಡ್ಡ, ಮಹಾನ್ ಹಿಂದು ಯಾರೂ ಆಗಿಲ್ಲ. ಆದರೆ ಗಾಂಧೀಜಿಯ ‘ಹೇ ರಾಮ್’ ಮಂತ್ರ ಮಠಣದಿಂದ ಇತರೆ ಸಮುದಾಯಗಳು ಹೆದರುತ್ತಿರಲಿಲ್ಲ. ಏಕೆಂದರೆ, ಗಾಂಧೀಜಿ ಜಾತ್ಯತೀತತೆಯ ಪ್ರತೀಕವಾಗಿದ್ದರು. ಪ್ರಸ್ತುತ ಅಹಿಂಸೆಯನ್ನು ಹೇಡಿತನದ ಮತ್ತು ದೌರ್ಬಲ್ಯದ ಪ್ರತೀಕ ಎಂದೇ ಹೇಳಲಾಗುತ್ತಿದೆ. ಆದರೆ ಜನರು ಮರೆಯುತ್ತಿರುವ ಅಂಶವೇನೆಂದರೆ ವಿಶ್ವದ ಅತಿ ದೊಡ್ಡ ಸೇನೆಯೊಂದಿಗೆ ಶಸ್ತ್ರಾಸ್ತ್ರಗಳಿಂದ ಹೋರಾಟ ಮಾಡುವುದು ಸಾಧ್ಯವಿಲ್ಲ. ಅದಕ್ಕೆ ನಾವು ಆಯ್ಕೆ ಮಾಡಿಕೊಳ್ಳುವ ಅಸ್ತ್ರದ ಸಾಟಿಯನ್ನು ಅವರಿಗೆ ಮಾಡಲು ಸಾಧ್ಯವಾಗಬಾರದು. ಆ ಅಸ್ತ್ರವೇ ಅಹಿಂಸೆ. ಒಂದು ಕಣ್ಣಿಗೆ ಇನ್ನೊಂದು ಕಣ್ಣನ್ನು ತೆಗೆಯುವುದರಿಂದ ಸಂಪೂರ್ಣ ವಿಶ್ವವೇ ಕುರುಡಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದರು. ನಿಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚಿಸದ ಶಿಕ್ಷಣ, ಮೂರ್ಖ ಶಿಕ್ಷಣವೆಂದೂ ಬಾಪೂಜಿ ಹೇಳುತ್ತಿದ್ದರು.

ಗಾಂಧೀಜಿ ಮತ್ತು ಇತರೆ ನಾಯಕರ, ಸೇನಾನಿಗಳ ಬಲಿದಾನ, ಆಂದೋಲನ ಮತ್ತು ಜೈಲುವಾಸದ ಪರಿಣಾಮ 1947ರ ಆಗಸ್ಟ್ 15ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮನನ್ನು ನಾವೆಷ್ಟು ಪ್ರೀತಿಸಿದೆವೆಂದರೆ ಮಾರನೇ ವರ್ಷ ಮೂರು ಗುಂಡು ಹಾರಿಸಿ ಅವರ ಸಮಾಧಿ ಮಾಡಿಬಿಟ್ಟೆವು. ಆದರೆ ಗಾಂಧಿ ಎಂದೂ ಸಾಯುವವರಲ್ಲ. ಏಕೆಂದರೆ ಗಾಂಧಿ ಎನ್ನುವುದು ಒಂದು ವಿಚಾರದ ಹೆಸರು, ಅದು ಒಬ್ಬ ವ್ಯಕ್ತಿಯ ಹೆಸರಲ್ಲ. ಹೀಗಾಗಿ ವಿಚಾರ ಎಂದಿಗೂ ಜೀವಂತವಾಗಿರುತ್ತದೆ.

ಕೊನೆಯದಾಗಿ, ದುಷ್ಯಂತ್ ಕುಮಾರ್ ಅವರ ಒಂದು ಕವಿತೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ದೇವರಿಲ್ಲವೇ? ಆಯಿತು, ಒಬ್ಬ ವ್ಯಕ್ತಿಯ ಕನಸಾದರೂ ಇದೆಯಲ್ಲ.

ನೋಡಲು ಒಂದು ಸುಂದರ ದೃಷ್ಯವಂತೂ ಇದೆಯಲ್ಲ

ಕಲ್ಲು ಕರಗುವುದಿಲ್ಲವೆಂದು ಅವರು ಸಮಾಧಾನದಲ್ಲಿದ್ದಾರೆ

ಧ್ವನಿಯಲ್ಲಿ ಪರಿಣಾಮ ಕಾಣಲೆಂದು ನಾನು ಕಾತುರನಾಗಿದ್ದೇನೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...