Homeಚಳವಳಿ"ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು"

“ಗಾಂಧೀಜಿಗಿಂತ ದೊಡ್ಡ ಹಿಂದು ಯಾರೂ ಇಲ್ಲ: ಸ್ವಾತಂತ್ರ್ಯ ತಂದು ಕೊಟ್ಟವನನ್ನೇ ಬಿಡಲಿಲ್ಲ ನಾವು”

- Advertisement -
- Advertisement -

ಉತ್ತರಪ್ರದೇಶದ ವಾರಾಣಸಿಯ ಸೆಂಟ್ರಲ್ ಹಿಂದು ಬಾಲಕರ ಶಾಲೆಯ ವಿದ್ಯಾರ್ಥಿ ಆಯುಷ್ ಚತುರ್ವೇದಿ, ಗಾಂಧಿ ಜಯಂತಿಯಂದು ಮಾಡಿದ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಧರ್ಮ ಹಾಗೂ ಕೋಮುಗಳ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆಗೆ ಆಯುಷ್ ಭಾಷಣ ತಕ್ಕ ತಿರುಗೇಟು ನೀಡಿದೆ. ಗಾಂಧೀಜಿಯವರ ಕಥೆಯೊಂದಿಗೆ ಆರಂಭವಾಗುವ ಆತನ ಭಾಷಣವನ್ನು ರಾಜಶೇಖರ್ ಅಕ್ಕಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ…

ಮಹಾತ್ಮ ಗಾಂಧೀಜಿ ಒಂದು ಬಾರಿ ರೈಲಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದರು. ಆ ಕಾಲದಲ್ಲಿ ವರ್ಣಭೇದ ನೀತಿ ವ್ಯಾಪಕವಾಗಿತ್ತು. ವರ್ಣಭೇದ ನೀತಿಯಿಂದಾಗಿಯೇ ಗಾಂಧೀಜಿಯವರನ್ನು ಟ್ರೇನ್‍ನಿಂದ ಹೊರದಬ್ಬಲಾಯಿತು. ಅಂದು ಆದ ಗಾಯವನ್ನು ಗಾಂಧೀಜಿಯವರು ಮಾಯಲು ಬಿಡಲೇ ಇಲ್ಲ. ಗಾಯವನ್ನು ಇನ್ನಷ್ಟು ಕೆದರಿದರು. ಇದರಿಂದ ಮಹಾತ್ಮನಿಗೆ ಸಿಕ್ಕ ಅಸ್ತ್ರವೇ ಅಸಹಕಾರ ಚಳವಳಿ.

ದುಷ್ಟರು ಹೇಳುವುದನ್ನು ಮಾಡದೇ ಇರುವುದೇ ಅಸಹಕಾರ ಚಳವಳಿ. ಇದರಿಂದಲೇ ಒಂದು ಇತಿಹಾಸದ ಪ್ರಾರಂಭವಾಯಿತು. ಲೂಯಿ ಫಿಷರ್ ಒಂದು ಮಾತು ಹೇಳುತ್ತಾರೆ, ರೈಲಿನಿಂದ ಗಾಂಧೀಜಿಯವರನ್ನು ಹೊರದಬ್ಬಿದ ಬ್ರಿಟಿಷ್ ವ್ಯಕ್ತಿಗೆ ತಾನು ಹೊರದಬ್ಬಿದ ವ್ಯಕ್ತಿ ಮುಂದೊಂದು ದಿನ ಬ್ರಿಟಿಷ್ ಆಳ್ವಿಕೆಯನ್ನು ವಿಶ್ವದಿಂದ ಸಂಪೂರ್ಣವಾಗಿ ಹೊರದಬ್ಬುತ್ತಾನೆ ಎಂದು ಮೊದಲೇ ತಿಳಿದಿದ್ದರೆ ಬ್ರಿಟಿಷ್ ವ್ಯಕ್ತಿ ಅಂತಹ ತಪ್ಪು ಮಾಡುತ್ತಿರಲಿಲ್ಲವೇನೋ..?

ಅತ್ಯಂತ ವಿಡಂಬನೆಯ ಒಂದು ವಿಷಯವೇನೆಂದರೆ, ಗಾಂಧೀಜಿಯ ದೇಶವಾಸಿಗಳೇ ಗಾಂಧೀಜಿಯನ್ನು ಅತ್ಯಂತ ಕಡಿಮೆ ಓದಿಕೊಂಡಿದ್ದಾರೆ ಮತ್ತು ಅರ್ಥೈಸಿಕೊಂಡಿದ್ದಾರೆ. ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಅವರ ಪುಸ್ತಕಗಳನ್ನು ಓದುವ ಯುವಜನತೆ, ಒಂದು ವೇಳೆ ಗಾಂಧೀಜಿಯವರನ್ನು ಗಂಭೀರವಾಗಿ ಓದಿಕೊಂಡಿದ್ದರೆ, ಇಂದು ನಮ್ಮ ಪೀಳಿಗೆಯ ಪಾಠಗಳೇ ಬೇರೆಯಾಗಿರುತ್ತಿದ್ದವು. ಆದರೆ, ನಾವು ಹಾಗೆ ಮಾಡಲಿಲ್ಲ. ಹಾಗೂ ಇದೇ ಕಾರಣಕ್ಕಾಗಿ ನಾವೆಲ್ಲ ಫ್ಯಾನ್ಸಿ ಫೇಸ್‍ಬುಕ್ ಗ್ಯಾಂಗ್ ಆಗಿ ಬದಲಾಗಿದ್ದೇವೆ.

ದೇಶ ವಿಭಜನೆಯ ಶಾಶ್ವತ ಕಾರಣ ಗಾಂಧೀಜಿ ಎಂದು ನಂಬುವುದು ಹಾಗೂ ಗಾಂಧೀಜಿಯವರನ್ನು ಮುಸ್ಲಿಂ ಪರ ಎಂದು ಕರೆಯುವುದು. ಒಂದು ಮಾತು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಗಾಂಧಿಗಿಂತ ದೊಡ್ಡ, ಮಹಾನ್ ಹಿಂದು ಯಾರೂ ಆಗಿಲ್ಲ. ಆದರೆ ಗಾಂಧೀಜಿಯ ‘ಹೇ ರಾಮ್’ ಮಂತ್ರ ಮಠಣದಿಂದ ಇತರೆ ಸಮುದಾಯಗಳು ಹೆದರುತ್ತಿರಲಿಲ್ಲ. ಏಕೆಂದರೆ, ಗಾಂಧೀಜಿ ಜಾತ್ಯತೀತತೆಯ ಪ್ರತೀಕವಾಗಿದ್ದರು. ಪ್ರಸ್ತುತ ಅಹಿಂಸೆಯನ್ನು ಹೇಡಿತನದ ಮತ್ತು ದೌರ್ಬಲ್ಯದ ಪ್ರತೀಕ ಎಂದೇ ಹೇಳಲಾಗುತ್ತಿದೆ. ಆದರೆ ಜನರು ಮರೆಯುತ್ತಿರುವ ಅಂಶವೇನೆಂದರೆ ವಿಶ್ವದ ಅತಿ ದೊಡ್ಡ ಸೇನೆಯೊಂದಿಗೆ ಶಸ್ತ್ರಾಸ್ತ್ರಗಳಿಂದ ಹೋರಾಟ ಮಾಡುವುದು ಸಾಧ್ಯವಿಲ್ಲ. ಅದಕ್ಕೆ ನಾವು ಆಯ್ಕೆ ಮಾಡಿಕೊಳ್ಳುವ ಅಸ್ತ್ರದ ಸಾಟಿಯನ್ನು ಅವರಿಗೆ ಮಾಡಲು ಸಾಧ್ಯವಾಗಬಾರದು. ಆ ಅಸ್ತ್ರವೇ ಅಹಿಂಸೆ. ಒಂದು ಕಣ್ಣಿಗೆ ಇನ್ನೊಂದು ಕಣ್ಣನ್ನು ತೆಗೆಯುವುದರಿಂದ ಸಂಪೂರ್ಣ ವಿಶ್ವವೇ ಕುರುಡಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದರು. ನಿಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚಿಸದ ಶಿಕ್ಷಣ, ಮೂರ್ಖ ಶಿಕ್ಷಣವೆಂದೂ ಬಾಪೂಜಿ ಹೇಳುತ್ತಿದ್ದರು.

ಗಾಂಧೀಜಿ ಮತ್ತು ಇತರೆ ನಾಯಕರ, ಸೇನಾನಿಗಳ ಬಲಿದಾನ, ಆಂದೋಲನ ಮತ್ತು ಜೈಲುವಾಸದ ಪರಿಣಾಮ 1947ರ ಆಗಸ್ಟ್ 15ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮನನ್ನು ನಾವೆಷ್ಟು ಪ್ರೀತಿಸಿದೆವೆಂದರೆ ಮಾರನೇ ವರ್ಷ ಮೂರು ಗುಂಡು ಹಾರಿಸಿ ಅವರ ಸಮಾಧಿ ಮಾಡಿಬಿಟ್ಟೆವು. ಆದರೆ ಗಾಂಧಿ ಎಂದೂ ಸಾಯುವವರಲ್ಲ. ಏಕೆಂದರೆ ಗಾಂಧಿ ಎನ್ನುವುದು ಒಂದು ವಿಚಾರದ ಹೆಸರು, ಅದು ಒಬ್ಬ ವ್ಯಕ್ತಿಯ ಹೆಸರಲ್ಲ. ಹೀಗಾಗಿ ವಿಚಾರ ಎಂದಿಗೂ ಜೀವಂತವಾಗಿರುತ್ತದೆ.

ಕೊನೆಯದಾಗಿ, ದುಷ್ಯಂತ್ ಕುಮಾರ್ ಅವರ ಒಂದು ಕವಿತೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ದೇವರಿಲ್ಲವೇ? ಆಯಿತು, ಒಬ್ಬ ವ್ಯಕ್ತಿಯ ಕನಸಾದರೂ ಇದೆಯಲ್ಲ.

ನೋಡಲು ಒಂದು ಸುಂದರ ದೃಷ್ಯವಂತೂ ಇದೆಯಲ್ಲ

ಕಲ್ಲು ಕರಗುವುದಿಲ್ಲವೆಂದು ಅವರು ಸಮಾಧಾನದಲ್ಲಿದ್ದಾರೆ

ಧ್ವನಿಯಲ್ಲಿ ಪರಿಣಾಮ ಕಾಣಲೆಂದು ನಾನು ಕಾತುರನಾಗಿದ್ದೇನೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಮತ್ತೊಬ್ಬ ನಾಯಕ, ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವು

ಟೆಹ್ರಾನ್: ಇಸ್ರೇಲಿ-ಅಮೆರಿಕನ್ ಕ್ಷಿಪಣಿ ದಾಳಿಯಲ್ಲಿ ಇರಾನ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ದೃಢಪಡಿಸಿದೆ. ಸರ್ಕಾರಿ ಸ್ವಾಮ್ಯದ ತಸ್ನಿಮ್ ಸುದ್ದಿ ಸಂಸ್ಥೆ...

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; 26 ವರ್ಷದ ಪಶುವೈದ್ಯೆ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಮೃಗಾಲಯದಲ್ಲಿ ಗುರುವಾರ ತಡರಾತ್ರಿ ನೀರಾನೆ ದಾಳಿಗೆ ಒಳಗಾಗಿದ್ದ 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದವರಾದ ಸಮೀಕ್ಷಾ,...

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...

ಕಥುವಾ ಪ್ರಕರಣ: ವೈಯಕ್ತಿಕ ಭದ್ರತೆ ಕಡಿತ; ‘ಮಗಳು ಶಾಲೆಗೆ ಹೋಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ವಕೀಲೆ ದೀಪಿಕಾ ಪುಷ್ಕರ್ ನಾಥ್ 

2018 ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ ಕುಟುಂಬವನ್ನು ಪ್ರತಿನಿಧಿಸಿದ್ದ ಜಮ್ಮುವಿನ ಪ್ರಮುಖ ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ದೀಪಿಕಾ ಪುಷ್ಕರ್ ನಾಥ್, ತಮ್ಮ ವೈಯಕ್ತಿಕ...

ಒಡಿಶಾ| ದಲಿತ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಸಾಮಾಜಿಕ ಬಹಿಷ್ಕಾರದ ಆತಂಕಕಾರಿ ಪ್ರಕರಣವೊಂದು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ಅರ್ಜುನಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ...

‘ಕೇವಲ ಗಾಳಿಯಲ್ಲಿ ಕ್ರಾಂತಿ ಸಾಧ್ಯವಿಲ್ಲ, ನೆಲದ ಘಟಕವೂ ಬೇಕು’; ಇರಾನ್ ಮೇಲಿನ ಯುದ್ಧದಲ್ಲಿ ‘ಭೂ-ದಾಳಿ’ಯ ಸುಳಿವು ನೀಡಿದ ನೆತನ್ಯಾಹು

‘ನೀವು ಗಾಳಿಯಿಂದ ಕ್ರಾಂತಿಗಳನ್ನು ಮಾಡಲು ಸಾಧ್ಯವಿಲ್ಲ’ ಈ ಹೇಳಿಕೆಯ ಮೂಲಕ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧಕ್ಕೆ 'ನೆಲದ ಅಂಶ'ದ ಸಾಧ್ಯತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುಳಿವು ನೀಡಿದ್ದಾರೆ ಎನ್ನುವ ಸುದ್ದಿ...

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...