Homeಗೌರಿ ಕಾರ್ನರ್ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಅಜ್ಞಾತವಾಸದಲ್ಲಿದ್ದಾಗ ಗೌರಿ ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದ್ದರು.

- Advertisement -
- Advertisement -

ಗೌರಿ ಲಂಕೇಶ್ ಜೊತೆಗೆ ನನ್ನ ಮುಖಾಮುಖಿ ಒಡನಾಟ ಶುರುವಾಗಿದ್ದು ನಾನು ಮತ್ತು ನೂರ್ ಶ್ರೀಧರ್ ಅಜ್ಞಾತವಾಸದಿಂದ (‘ಅಂಡರ್‌ಗ್ರೌಂಡ್’ನಿಂದ) ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆಯ ಸಂದರ್ಭದಲ್ಲಿ – ಅಂದರೆ ಸುಮಾರು 2014ರ ಕೊನೆಯ ಭಾಗದಲ್ಲಿ. ಅಲ್ಲಿಯವರೆಗೂ ಇಬ್ಬರಿಗೂ ಮತ್ತೊಬ್ಬರ ಬಗೆಗೆ ಗೊತ್ತಿತ್ತೇ ಹೊರತು ಮುಖತಃ ಭೇಟಿ ಆಗಿರಲಿಲ್ಲ. 2012ರಲ್ಲಿ ಪತ್ರಿಕೆಯ ಉಳಿವು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅವರಿಗೊಂದು ದೀರ್ಘ ಪತ್ರ ಬರೆದಿದ್ದೆ. ಅವರು ಕೂಡಲೇ ಸ್ಪಂದಿಸಿದ್ದರು. ಅಷ್ಟೇ.

2013-14ರಲ್ಲಿ ಶ್ರೀ ಎಚ್.ಎಸ್.ದೊರೆಸ್ವಾಮಿಯವರ ಮುಂದಾಳ್ತನದಲ್ಲಿ ‘ಶಾಂತಿಗಾಗಿ ನಾಗರಿಕರ ವೇದಿಕೆ’ಯಡಿ ಎ.ಕೆ.ಸುಬ್ಬಯ್ಯ, ದೇವನೂರು ಮಹಾದೇವ, ಇಂದೂಧರ ಹೊನ್ನಾಪುರ, ಗೌರಿ ಇನ್ನೂ ಮುಂತಾದ ಸಹೃದಯರು ನಮ್ಮಗಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಗಂಭೀರವಾಗಿ ಕೈಗೆತ್ತಿಕೊಂಡರಷ್ಟೆ. ಅದರ ಕೊನೆಯ ಹಂತದಲ್ಲಿ, ಈ ತಂಡದವರು ಸರ್ಕಾರದ ಜೊತೆ ಕೊನೆಯ ಸುತ್ತಿನ ಮಾತುಕತೆಗಳಿಗೆ ಮುಂದಾಗುವ ಮೊದಲು ನಮ್ಮ ಜೊತೆ ನೇರವಾಗಿ ಚರ್ಚಿಸಬೇಕು ಎಂಬ ಪ್ರಸ್ತಾಪ ಬಂದು, ಅದಕ್ಕಾಗಿ ಯಾರೋ ಒಬ್ಬರ ಸ್ನೇಹಿತರ ತೋಟದ ಮನೆಯಲ್ಲಿ ಭೇಟಿ ವ್ಯವಸ್ಥೆಯಾಗಿತ್ತು. ಅಲ್ಲಿ ಅವರುಗಳು ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದರು.

ನಾವು ಅಜ್ಞಾತವಾಸದಿಂದ ಹೊರಬರುತ್ತಿರುವುದು ಒಂದು ತಾತ್ಕಾಲಿಕ ಕಾರ್ಯತಂತ್ರದ, ‘ಹಿಡನ್ ಅಜೆಂಡಾ’ದ ಭಾಗವಾಗಿ ಅಲ್ಲ; ಬದಲಿಗೆ, ಸಂವಿಧಾನದ ಚೌಕಟ್ಟಿನಲ್ಲಿ ಬಹಿರಂಗವಾದ ಸಮೂಹ ಹೋರಾಟ ಕಟ್ಟದೆ, ದೇಶವ್ಯಾಪಿಯಾಗಿ ಎಲ್ಲ ಜನಸಮುದಾಯಗಳನ್ನು ಒಳಗೊಂಡ ಬೃಹತ್ ಸಮೂಹ ಚಳವಳಿ ಎದ್ದುನಿಲ್ಲದೆ ಈ ದೇಶದಲ್ಲಿ ಕ್ರಾಂತಿ ಅಥವಾ ಯಾವುದೇ ಮೂಲಭೂತ ಸಾಮಾಜಿಕ-ಆರ್ಥಿಕ-ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ ಎನ್ನುವುದು ಈ ಮೂರು ದಶಕಕ್ಕೂ ಹೆಚ್ಚು ಕಾಲದ ಹೋರಾಟದಲ್ಲಿ ನಮಗೆ ದೃಢವಾಗಿ ಮನವರಿಕೆಯಾಗಿದೆ; ಆದ್ದರಿಂದ ನಾವು ನಮ್ಮ ಹಳೆಯ ನಿಲುವುಗಳಿಗೆ ಅಂಟಿಕೂರದೆ, ದೇಶದ ಈ ಕಾಲಘಟ್ಟದ ವಾಸ್ತವಕ್ಕೆ ಹೊಂದುವಂತಹ ಸಮೂಹ ಚಳವಳಿ-ಹೋರಾಟಗಳನ್ನು ರೂಪಿಸಬೇಕು, ಸಮಾಜದೊಳಗಿನ ಎಲ್ಲ ಬಗೆಯ ಅಸಮಾನತೆ-ತಾರತಮ್ಯಗಳ ವಿರುದ್ಧವೂ ಸಂಘಟನೆ-ಹೋರಾಟಗಳನ್ನು ಕಟ್ಟಬೇಕು; ಅದರಲ್ಲಿ ಎಲ್ಲ ಶೋಷಿತ-ದಮನಿತ ಸಮುದಾಯಗಳನ್ನೂ ಒಳಗೊಳ್ಳಬೇಕು, ಎಲ್ಲಾ ಜನಪರ-ಪ್ರಜಾಪ್ರಭುತ್ವವಾದಿ-ದೇಶಪ್ರೇಮಿ ಪ್ರಜ್ಞಾವಂತರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನಮ್ಮ ಮೂಲಭೂತ ಪರಿಕಲ್ಪನೆಗಳನ್ನು ಅವರ ಮುಂದಿಟ್ಟೆವು.

ಅಷ್ಟೇ ಅಲ್ಲದೆ, ಅವರುಗಳು ನಮ್ಮ ಮೇಲೆ ಇಡುತ್ತಿರುವ ವಿಶ್ವಾಸಕ್ಕೆ ನಾವು ಖಂಡಿತಾ ಎರಡು ಬಗೆಯುವುದಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಟ್ಟೆವು; ಇದರಿಂದ ಅವರುಗಳಿಗೆ ನಮ್ಮ ಪ್ರಾಮಾಣಿಕತೆಯ ಬಗ್ಗೆ ಪೂರ್ತಿ ನಂಬಿಕೆ ಉಂಟಾಯಿತೆನ್ನಿಸುತ್ತೆ. ನಮ್ಮನ್ನು ಮುಖ್ಯವಾಹಿನಿಗೆ ಕರೆತರುವ ಕೊನೇ ಹಂತದ ಪ್ರಯತ್ನವನ್ನು ದೃಢವಾಗಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಕೈಗೊಳ್ಳಲು ಅವರು ತೀರ್ಮಾನ ಮಾಡಿದರು. ಮುಂದೆ ನಡೆದದ್ದೆಲ್ಲ ಎಲ್ಲರಿಗೂ ತಿಳಿದೇ ಇದೆ.

ಅಂದು ಈ ಎಲ್ಲ ಚರ್ಚೆ ನಡೆದ ನಂತರ, ಅವರುಗಳು ‘ಮೈಚಳಿ ಬಿಟ್ಟು’ ನಮ್ಮೊಂದಿಗೆ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ, ತಮಾಷೆಯಾಗಿ ಮಾತಾಡುತ್ತ ಕಳೆದರು. ಪರಸ್ಪರ ವಿಶ್ವಾಸ, ಆತ್ಮೀಯತೆಯ ಭಾವನೆಯೊಂದಿಗೆ ನಾವಿಬ್ಬರೂ ವಾಪಸ್ ಹೊರಟೆವು. ಗೌರಿ ಈ ಇಡೀ ಪ್ರಕ್ರಿಯೆಯಲ್ಲಿ ಎಷ್ಟೊಂದು ಕಕ್ಕುಲಾತಿಯಿಂದ, ಉತ್ಕಟತೆಯಿಂದ ತೊಡಗಿಸಿಕೊಂಡರೆಂದರೆ, ಅವರು ಇರದಿದ್ದರೆ ನಾವು ಬಹಿರಂಗಕ್ಕೆ ಬರುವ ಪ್ರಕ್ರಿಯೆ ಇಷ್ಟು ಸುಮುಖವಾಗಿ ಪೂರ್ಣಗೊಳ್ಳಲು ಸಾಧ್ಯವಿತ್ತಾ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಆ ನಂತರವೂ ಸಹ ಕಳೆದ ಐದೂಮುಕ್ಕಾಲು ವರ್ಷಗಳಲ್ಲಿ ದೊರೆಸ್ವಾಮಿಯವರ ಜೊತೆ ನಿಂತು, ಇನ್ನೂ ಹಲವಾರು ಸಮಾನ ಮನಸ್ಕ ಹೋರಾಟ ನಿರತ ಸಂಘನೆಗಳನ್ನೂ, ಮುಂದಾಳುಗಳನ್ನೂ ಜೊತೆಗೂಡಿಕೊಂಡು ನಾವು ಏನೇನು ಜನಪರ ಕೆಲಸಗಳನ್ನು ಮಾಡುತ್ತ ಬರಲು ಸಾಧ್ಯವಾಯಿತೋ, ಅದೆಲ್ಲದರಲ್ಲೂ ಗೌರಿಯವರ ಪಾತ್ರ ಅಚ್ಚಳಿಯದೆ ಬೆಸೆದುಕೊಂಡಿದೆ. ಅವರ ಹತ್ಯೆಯೊಂದು ಹೇಗೆ ಇಡೀ ನಾಡಿನ ಜನಪರ ಹೋರಾಟ-ಚಳವಳಿಗಳಿಗೆ ಉಂಟಾದ ಮರ್ಮಾಘಾತವೋ ಹಾಗೆಯೇ ನಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಿಗೂ ಉಂಟಾದ ಗಂಭೀರ ನಷ್ಟ ಎಂದರೆ ಉತ್ಪ್ರೇಕ್ಷೆಯಲ್ಲ.


ಇದಮ್ಮೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮಾತಾಡುವಾಗ “ಹತ್ಯೆ” ಎಂಬ ಪದವನ್ನು ಕನ್ನಡಿಗರು ಬಳಸುವುದನ್ನು ಕೇಳಿದ್ದೀರಾ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...