Homeಗೌರಿ ಕಾರ್ನರ್ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಅಜ್ಞಾತವಾಸದಲ್ಲಿದ್ದಾಗ ಗೌರಿ ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದ್ದರು.

- Advertisement -
- Advertisement -

ಗೌರಿ ಲಂಕೇಶ್ ಜೊತೆಗೆ ನನ್ನ ಮುಖಾಮುಖಿ ಒಡನಾಟ ಶುರುವಾಗಿದ್ದು ನಾನು ಮತ್ತು ನೂರ್ ಶ್ರೀಧರ್ ಅಜ್ಞಾತವಾಸದಿಂದ (‘ಅಂಡರ್‌ಗ್ರೌಂಡ್’ನಿಂದ) ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆಯ ಸಂದರ್ಭದಲ್ಲಿ – ಅಂದರೆ ಸುಮಾರು 2014ರ ಕೊನೆಯ ಭಾಗದಲ್ಲಿ. ಅಲ್ಲಿಯವರೆಗೂ ಇಬ್ಬರಿಗೂ ಮತ್ತೊಬ್ಬರ ಬಗೆಗೆ ಗೊತ್ತಿತ್ತೇ ಹೊರತು ಮುಖತಃ ಭೇಟಿ ಆಗಿರಲಿಲ್ಲ. 2012ರಲ್ಲಿ ಪತ್ರಿಕೆಯ ಉಳಿವು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅವರಿಗೊಂದು ದೀರ್ಘ ಪತ್ರ ಬರೆದಿದ್ದೆ. ಅವರು ಕೂಡಲೇ ಸ್ಪಂದಿಸಿದ್ದರು. ಅಷ್ಟೇ.

2013-14ರಲ್ಲಿ ಶ್ರೀ ಎಚ್.ಎಸ್.ದೊರೆಸ್ವಾಮಿಯವರ ಮುಂದಾಳ್ತನದಲ್ಲಿ ‘ಶಾಂತಿಗಾಗಿ ನಾಗರಿಕರ ವೇದಿಕೆ’ಯಡಿ ಎ.ಕೆ.ಸುಬ್ಬಯ್ಯ, ದೇವನೂರು ಮಹಾದೇವ, ಇಂದೂಧರ ಹೊನ್ನಾಪುರ, ಗೌರಿ ಇನ್ನೂ ಮುಂತಾದ ಸಹೃದಯರು ನಮ್ಮಗಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಗಂಭೀರವಾಗಿ ಕೈಗೆತ್ತಿಕೊಂಡರಷ್ಟೆ. ಅದರ ಕೊನೆಯ ಹಂತದಲ್ಲಿ, ಈ ತಂಡದವರು ಸರ್ಕಾರದ ಜೊತೆ ಕೊನೆಯ ಸುತ್ತಿನ ಮಾತುಕತೆಗಳಿಗೆ ಮುಂದಾಗುವ ಮೊದಲು ನಮ್ಮ ಜೊತೆ ನೇರವಾಗಿ ಚರ್ಚಿಸಬೇಕು ಎಂಬ ಪ್ರಸ್ತಾಪ ಬಂದು, ಅದಕ್ಕಾಗಿ ಯಾರೋ ಒಬ್ಬರ ಸ್ನೇಹಿತರ ತೋಟದ ಮನೆಯಲ್ಲಿ ಭೇಟಿ ವ್ಯವಸ್ಥೆಯಾಗಿತ್ತು. ಅಲ್ಲಿ ಅವರುಗಳು ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದರು.

ನಾವು ಅಜ್ಞಾತವಾಸದಿಂದ ಹೊರಬರುತ್ತಿರುವುದು ಒಂದು ತಾತ್ಕಾಲಿಕ ಕಾರ್ಯತಂತ್ರದ, ‘ಹಿಡನ್ ಅಜೆಂಡಾ’ದ ಭಾಗವಾಗಿ ಅಲ್ಲ; ಬದಲಿಗೆ, ಸಂವಿಧಾನದ ಚೌಕಟ್ಟಿನಲ್ಲಿ ಬಹಿರಂಗವಾದ ಸಮೂಹ ಹೋರಾಟ ಕಟ್ಟದೆ, ದೇಶವ್ಯಾಪಿಯಾಗಿ ಎಲ್ಲ ಜನಸಮುದಾಯಗಳನ್ನು ಒಳಗೊಂಡ ಬೃಹತ್ ಸಮೂಹ ಚಳವಳಿ ಎದ್ದುನಿಲ್ಲದೆ ಈ ದೇಶದಲ್ಲಿ ಕ್ರಾಂತಿ ಅಥವಾ ಯಾವುದೇ ಮೂಲಭೂತ ಸಾಮಾಜಿಕ-ಆರ್ಥಿಕ-ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ ಎನ್ನುವುದು ಈ ಮೂರು ದಶಕಕ್ಕೂ ಹೆಚ್ಚು ಕಾಲದ ಹೋರಾಟದಲ್ಲಿ ನಮಗೆ ದೃಢವಾಗಿ ಮನವರಿಕೆಯಾಗಿದೆ; ಆದ್ದರಿಂದ ನಾವು ನಮ್ಮ ಹಳೆಯ ನಿಲುವುಗಳಿಗೆ ಅಂಟಿಕೂರದೆ, ದೇಶದ ಈ ಕಾಲಘಟ್ಟದ ವಾಸ್ತವಕ್ಕೆ ಹೊಂದುವಂತಹ ಸಮೂಹ ಚಳವಳಿ-ಹೋರಾಟಗಳನ್ನು ರೂಪಿಸಬೇಕು, ಸಮಾಜದೊಳಗಿನ ಎಲ್ಲ ಬಗೆಯ ಅಸಮಾನತೆ-ತಾರತಮ್ಯಗಳ ವಿರುದ್ಧವೂ ಸಂಘಟನೆ-ಹೋರಾಟಗಳನ್ನು ಕಟ್ಟಬೇಕು; ಅದರಲ್ಲಿ ಎಲ್ಲ ಶೋಷಿತ-ದಮನಿತ ಸಮುದಾಯಗಳನ್ನೂ ಒಳಗೊಳ್ಳಬೇಕು, ಎಲ್ಲಾ ಜನಪರ-ಪ್ರಜಾಪ್ರಭುತ್ವವಾದಿ-ದೇಶಪ್ರೇಮಿ ಪ್ರಜ್ಞಾವಂತರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನಮ್ಮ ಮೂಲಭೂತ ಪರಿಕಲ್ಪನೆಗಳನ್ನು ಅವರ ಮುಂದಿಟ್ಟೆವು.

ಅಷ್ಟೇ ಅಲ್ಲದೆ, ಅವರುಗಳು ನಮ್ಮ ಮೇಲೆ ಇಡುತ್ತಿರುವ ವಿಶ್ವಾಸಕ್ಕೆ ನಾವು ಖಂಡಿತಾ ಎರಡು ಬಗೆಯುವುದಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಟ್ಟೆವು; ಇದರಿಂದ ಅವರುಗಳಿಗೆ ನಮ್ಮ ಪ್ರಾಮಾಣಿಕತೆಯ ಬಗ್ಗೆ ಪೂರ್ತಿ ನಂಬಿಕೆ ಉಂಟಾಯಿತೆನ್ನಿಸುತ್ತೆ. ನಮ್ಮನ್ನು ಮುಖ್ಯವಾಹಿನಿಗೆ ಕರೆತರುವ ಕೊನೇ ಹಂತದ ಪ್ರಯತ್ನವನ್ನು ದೃಢವಾಗಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಕೈಗೊಳ್ಳಲು ಅವರು ತೀರ್ಮಾನ ಮಾಡಿದರು. ಮುಂದೆ ನಡೆದದ್ದೆಲ್ಲ ಎಲ್ಲರಿಗೂ ತಿಳಿದೇ ಇದೆ.

ಅಂದು ಈ ಎಲ್ಲ ಚರ್ಚೆ ನಡೆದ ನಂತರ, ಅವರುಗಳು ‘ಮೈಚಳಿ ಬಿಟ್ಟು’ ನಮ್ಮೊಂದಿಗೆ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ, ತಮಾಷೆಯಾಗಿ ಮಾತಾಡುತ್ತ ಕಳೆದರು. ಪರಸ್ಪರ ವಿಶ್ವಾಸ, ಆತ್ಮೀಯತೆಯ ಭಾವನೆಯೊಂದಿಗೆ ನಾವಿಬ್ಬರೂ ವಾಪಸ್ ಹೊರಟೆವು. ಗೌರಿ ಈ ಇಡೀ ಪ್ರಕ್ರಿಯೆಯಲ್ಲಿ ಎಷ್ಟೊಂದು ಕಕ್ಕುಲಾತಿಯಿಂದ, ಉತ್ಕಟತೆಯಿಂದ ತೊಡಗಿಸಿಕೊಂಡರೆಂದರೆ, ಅವರು ಇರದಿದ್ದರೆ ನಾವು ಬಹಿರಂಗಕ್ಕೆ ಬರುವ ಪ್ರಕ್ರಿಯೆ ಇಷ್ಟು ಸುಮುಖವಾಗಿ ಪೂರ್ಣಗೊಳ್ಳಲು ಸಾಧ್ಯವಿತ್ತಾ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಆ ನಂತರವೂ ಸಹ ಕಳೆದ ಐದೂಮುಕ್ಕಾಲು ವರ್ಷಗಳಲ್ಲಿ ದೊರೆಸ್ವಾಮಿಯವರ ಜೊತೆ ನಿಂತು, ಇನ್ನೂ ಹಲವಾರು ಸಮಾನ ಮನಸ್ಕ ಹೋರಾಟ ನಿರತ ಸಂಘನೆಗಳನ್ನೂ, ಮುಂದಾಳುಗಳನ್ನೂ ಜೊತೆಗೂಡಿಕೊಂಡು ನಾವು ಏನೇನು ಜನಪರ ಕೆಲಸಗಳನ್ನು ಮಾಡುತ್ತ ಬರಲು ಸಾಧ್ಯವಾಯಿತೋ, ಅದೆಲ್ಲದರಲ್ಲೂ ಗೌರಿಯವರ ಪಾತ್ರ ಅಚ್ಚಳಿಯದೆ ಬೆಸೆದುಕೊಂಡಿದೆ. ಅವರ ಹತ್ಯೆಯೊಂದು ಹೇಗೆ ಇಡೀ ನಾಡಿನ ಜನಪರ ಹೋರಾಟ-ಚಳವಳಿಗಳಿಗೆ ಉಂಟಾದ ಮರ್ಮಾಘಾತವೋ ಹಾಗೆಯೇ ನಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಿಗೂ ಉಂಟಾದ ಗಂಭೀರ ನಷ್ಟ ಎಂದರೆ ಉತ್ಪ್ರೇಕ್ಷೆಯಲ್ಲ.


ಇದಮ್ಮೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮಾತಾಡುವಾಗ “ಹತ್ಯೆ” ಎಂಬ ಪದವನ್ನು ಕನ್ನಡಿಗರು ಬಳಸುವುದನ್ನು ಕೇಳಿದ್ದೀರಾ?

LEAVE A REPLY

Please enter your comment!
Please enter your name here

- Advertisment -

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...