Homeಮುಖಪುಟಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

ಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

- Advertisement -
- Advertisement -

ಕೇರಳದ ಬಿನು ಮ್ಯಾಥ್ಯೂ ‘ಕೌಂಟರ್ ಕರೆಂಟ್ಸ್’ ವೆಬ್‍ಸೈಟ್‍ನ ಸ್ಥಾಪಕರಲ್ಲೊಬ್ಬರು. ವೆಬ್‍ಲೋಕ ಇನ್ನೂ ತೆರೆಯುತ್ತಿರುವಾಗಲೇ ಇಂಗ್ಲಿಷಿನಲ್ಲಿ ದೇಶದ ಪರ್ಯಾಯ ದನಿಗಳಿಗೆ ಅದರಲ್ಲಿ ವೇದಿಕೆಯನ್ನು ಕಲ್ಪಿಸಿದ್ದು ಕೌಂಟರ್‍ಕರೆಂಟ್ಸ್. ಬಹು ಹಿಂದೆಯೇ ಜನಪರ ಆಂದೋಲನಗಳ ಕುರಿತ ಮಾಹಿತಿ ಮತ್ತು ಚಿಂತನೆಗಳು ಆ ವೆಬ್‍ತಾಣದಲ್ಲಿ ಜಗತ್ತಿನ ಓದುಗರಿಗೆ ಲಭ್ಯವಿದ್ದವು. 2001ರಿಂದ ಇಲ್ಲಿಯವರೆಗೆ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿದ್ದು ಬಿನು ಮ್ಯಾಥ್ಯೂ.ಈ ಲೇಖನವನ್ನು ಕನ್ನಡಕ್ಕೆ ಶಂಕರ ಎನ್. ಕೆಂಚನೂರುಅವರು ಅನುವಾದಿಸಿದ್ದಾರೆ

ಭಯೋತ್ಪಾದನೆಯೆದುರಿನ ಹೋರಾಟದಲ್ಲಿ ನಾವು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಭಯೋತ್ಪಾದನೆಗೆ ಒಂದು ಸಂದರ್ಭವಿದೆ. ಈ ಲೇಖನದಲ್ಲಿ ನಾನು ಗೌರಿಯ ಹುತಾತ್ಮತೆಯನ್ನು ಆ ಸಂದರ್ಭದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು 2002ರಲ್ಲಿ ಕೌಂಟರ್ ಕರೆಂಟ್ಸ್.ಆರ್ಗ್ (Counter Currents.org) ಪ್ರಾರಂಭಿಸಿದಾಗ, ವಾತಾವರಣದಲ್ಲಿನ CO2 ಮಟ್ಟವು 370 ಪಿ.ಪಿ.ಎಮ್ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. 17 ವರ್ಷಗಳ ನಂತರ ಈಗ ಅದು 420 ಪಿಪಿಎಂ ತಲುಪಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ CO2 ಮತ್ತು CO2 ಸಮಾನ ಅಂಶಗಳು 496 ಪಿ.ಪಿ.ಎಮ್ ತಲುಪಿದೆ ಎಂದು ಇತ್ತೀಚೆಗೆ ನಾಸಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಾತಾವರಣದಲ್ಲಿ CO2 ಮಟ್ಟವು ವಾರ್ಷಿಕ 3 ಪಿ.ಪಿ.ಎಮ್‍ನಷ್ಟು ಹೆಚ್ಚುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಭೂಮಿಯನ್ನು ಉಳಿಸಲು ನಮಗೆ ಕೇವಲ ಒಂದು ದಶಕವಷ್ಟೇ ಉಳಿದಿದೆಯೆಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂಟರ್‍ನ್ಯಾಷನಲ್ ಎನರ್ಜಿ ಏಜೆನ್ಸಿ (ಐ.ಇ.ಎ) 2010ರಲ್ಲಿ ಪ್ರಕಟಿಸಿದ ತನ್ನ ‘ವರ್ಲ್ಡ್ ಪವರ್ ಔಟ್‍ಲುಕ್’ ಎಂಬ ವರದಿಯು ಆಶ್ವರ್ಯಗೊಳಿಸುವ ಅಂಶಗಳನ್ನು ಬಹಿರಂಗ ಮಾಡಿದೆ. ಸಾಂಪ್ರದಾಯಿಕ ತೈಲ ಅಂದರೆ, ಸುಲಭವಾಗಿ ಹೊರತೆಗೆಯಬಹುದಾದ ತೈಲದ ಉತ್ಪಾದನಾ ಮಟ್ಟವು 2005ರ ಆಸುಪಾಸಿನಲ್ಲಿ ಗರಿಷ್ಠ ಉತ್ಪಾದನೆಯನ್ನು ತಲುಪಿತ್ತು.

ಅದು ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ ಸುಲಭವಾಗಿ ಲಭ್ಯವಿರುವ ತೈಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅಂದರೆ ತೈಲವು ಮುಗಿದುಹೋದ ನಂತರ, ನಾಗರಿಕತೆಯೂ ಸಹ ಮುಗಿದುಹೋಗುತ್ತದೆ. ಅಂದರೆ ತಮ್ಮದಲ್ಲದ ತಪ್ಪಿಗಾಗಿ ನೂರಾರು ಕೋಟಿ ಜನರು ನಾಶವಾಗುತ್ತಾರೆ. ಆಧುನಿಕ ನಾಗರಿಕತೆಯನ್ನು ಸಾಧ್ಯವಾಗಿಸುವ ನೀರು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲೂ ಹೀಗೇ ಆಗುತ್ತಿದೆ.

ಈಗ ನಾವು ನಮ್ಮ ಚರ್ಚೆಯ ಚೌಕಟ್ಟನ್ನು ಸಿದ್ಧಪಡಿಸಿದ್ದಾಯಿತು, ಮುಂದಿನ ಭವಿಷ್ಯದ ಬಗ್ಗೆ ಅವಲೋಕಿಸೋಣ. ನಾವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ.

ಪರಿಸರ ಕುಸಿತ

ಪ್ಯಾರಿಸ್ ಒಪ್ಪಂದದಲ್ಲಿನ ಪ್ರಕಾರ ಇಂಗಾಲದ ಹೊರಸೂಸುವಿಕೆಯ ಕಡಿತದ ಪ್ರಮಾಣವನ್ನು ಸಾಧಿಸಿದರೂ ಸಹ, ವಿಜ್ಞಾನಿಗಳು `ಹಾಟ್ ಹೌಸ್ ಅರ್ಥ್”ಎಂದು ಕರೆಯುವ ಪರಿಸ್ಥಿತಿಗಳು ಭೂಮಿಗೆ ಪ್ರವೇಶಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಪ್ರಕಟಿಸಿದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಪಿ.ಎನ್.ಎ.ಎಸ್) ವರದಿಯು ಸಾರಿ ಹೇಳಿದೆ. “ಹಾಟ್ ಹೌಸ್ ಅರ್ಥ್” ಹವಾಮಾನವು ದೀರ್ಘಾವಧಿಯಲ್ಲಿ ಕೈಗಾರಿಕಾ ಪೂರ್ವದ ತಾಪಮಾನಕ್ಕಿಂತ ಜಾಗತಿಕ ಸರಾಸರಿ 4-5 ಡಿಗ್ರಿ ಸೆಂಟಿಗ್ರೇಡ್‍ಗಳಷ್ಟು ತಾಪಮಾನ ಏರಿಕೆಯಾಗಲಿದೆ ಮತ್ತು ಸಮುದ್ರ ಮಟ್ಟವು ಇಂದಿನ ಮಟ್ಟಕ್ಕಿಂತ 10-60 ಮೀ ಏರಿಕೆಯಾಗಲಿದೆ. “ಈ ಸನ್ನಿವೇಶವನ್ನು ತಪ್ಪಿಸಬೇಕೆಂದರೆ ಭೂ-ಪರಿಸರದ ಶೋಷಣೆಯಲ್ಲಿ ತೊಡಗಿರುವ ಮಾನವ ಕ್ರಿಯೆಗಳನ್ನು ಬದಲಿಸಿ ಭೂ-ಪರಿಸರ ವ್ಯವಸ್ಥೆಯ ಉಸ್ತುವಾರಿ ಕಡೆಗೆ ಮರುನಿರ್ದೇಶಿಸುವ ಅಗತ್ಯವಿದೆ” ಎಂದು ವರದಿ ಎಚ್ಚರಿಸಿದೆ. ಭೂಮಿಯ ಮೇಲಿನ ಬಹುತೇಕ ಪ್ರಭೇದಗಳು ಹಾಗೂ ಮಾನವ ಪ್ರಭೇದದ ಬಹುತೇಕರ ಮೇಲೆ ಈ ಹಾಟ್ ಹೌಸ್ ಅರ್ಥ್‍ನ ದುಷ್ಪರಿಣಾಮಗಳು ಉಂಟಾಗಲಿವೆ.

ಆರ್ಥಿಕ ಕುಸಿತ

ನಮ್ಮ ಭೂಮಿಯು ವೆಂಟಿಲೇಟರ್‍ನಲ್ಲಿ ಇರುವುದರಿಂದ ಮತ್ತು ನಮ್ಮ ಹೆಚ್ಚಿನ ಸಂಪನ್ಮೂಲಗಳು ಖಾಲಿಯಾದ ನಂತರ ನಾವು ಆರ್ಥಿಕ ಕುಸಿತವನ್ನು ಎದುರಿಸಲಿದ್ದೇವೆ. ಇಲ್ಲಾ ಇಲ್ಲ. ನಾವು ಈಗಾಗಲೇ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದೇವೆ.

ಸಾಮಾಜಿಕ ಕುಸಿತ

ಮೇಲೆ ತಿಳಿಸಿದ ಎರಡೂ ಕುಸಿತಗಳು ಊಹಿಸಲಾಗದ ಪ್ರಮಾಣದಲ್ಲಿ ಸಾಮಾಜಿಕ ಕುಸಿತವನ್ನು ತರುತ್ತವೆ. ಹೌದು, ಇದು ಈಗಾಗಲೇ ನಡೆಯುತ್ತಿದೆ. ಈ ಕುಸಿತವು ಸಾಮಾಜಿಕ ಅಸಹನೆ, ದ್ವೇಷ, ಯುದ್ಧಗಳು, ಗಲಭೆಗಳು ಮತ್ತು ತಪ್ಪಿಸಬಹುದಾದ ನೂರಾರು ಕೋಟಿ ಸಾವುಗಳಿಗೆ ಸಾಕ್ಷಿಯಾಗಲಿದೆ. ಇದು ಜನಸಂಖ್ಯೆಯ ಪ್ರಬಲ ವಿಭಾಗಗಳು ಸರ್ವಾಧಿಕಾರಿಗಳನ್ನು ಬಯಸುವ ಪ್ರವೃತ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಾವು ಈಗಾಗಲೇ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇದು ಭಾರತದಲ್ಲಿ ನರೇಂದ್ರ ಮೋದಿ ರೂಪದಲ್ಲಿದ್ದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಗಿದೆ. ಈ ಪ್ರವೃತ್ತಿ ಮುಂದುವರೆಯಲಿದೆ ಮಾತ್ರವಲ್ಲ, ಪ್ರಪಂಚದ ಇತರ ಭಾಗಗಳಿಗೂ ಹರಡಲಿದೆ. ಗೌರಿ ಲಂಕೇಶ್ ಅವರ ಜೀವವನ್ನು ತೆಗೆದುಕೊಂಡ ಸನಾತನ ಸಂಸ್ಥೆಯಂತಹ ದ್ವೇಷದ ಬೀಜಗಳು ಅನೇಕ ಕಡೆಗಳಲ್ಲಿ ಮೊಳಕೆಯೊಡೆಯುವುದನ್ನು ನಾವು ನೋಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕರು ಗೌರಿಯ ಸ್ಥಿತಿಯನ್ನು ಎದುರಿಸಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.

ನಾವು ಏನು ಮಾಡಬಹುದು?

ಶಿಕ್ಷಣ, ಸಂಘಟನೆ, ಆಂದೋಲನ ಮತ್ತು ಕ್ರಿಯೆಗಿಳಿಯುವುದು!

ಪ್ರತಿರೋಧದ ಬೀಜಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಚಿಗುರೊಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ಸ್ವೀಡಿಷ್ ಹುಡುಗಿ ಗ್ರೆಟಾ ಥನ್ಬರ್ಗ್ ನೇತೃತ್ವದ ಶಾಲಾ ಮುಷ್ಕರ. ಕೊನೆಗೆ, ಮುಂದಿನ ಪೀಳಿಗೆಯವರು ಹಳೆಯ ತಲೆಮಾರುಗಳ ಲಾಭಕ್ಕಾಗಿ ಬೆಲೆ ತೆರಲಿದ್ದಾರೆ. ಎಕ್ಸ್ಟಿಂಕ್ಷನ್ ರೆಬೆಲಿಯನ್ (ಅಳಿವಿನಂಚಿನ ಬಂಡಾಯ) ಯುರೋಪಿನಲ್ಲಿ ಜನಪ್ರಿಯವಾಗುತ್ತಿರುವ ಮತ್ತೊಂದು ಪ್ರತಿಭಟನಾ ಕ್ರಮವಾಗಿದೆ. ಟ್ರಾನ್ಸಿಷನ್ ಟೌನ್ಸ್ (ಪರಿವರ್ತನಾ ಪಟ್ಟಣಗಳು) ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯ ಮಾರ್ಗವಾಗಿದೆ.

ಜಾಗತಿಕ ತಾಪಮಾನ ಏರಿಕೆ, ಸಂಪನ್ಮೂಲ ಬಿಕ್ಕಟ್ಟು, ಪರಿಸರ ನಾಶಗಳು ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುಸಿತದ ಹಾದಿಗೆ ಕೊಂಡೊಯ್ದಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಇತ್ಯಾದಿಗಳು ನಡೆದಿರುವ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಈ ಕಟು ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲವೂ ನನಗೆ ಶೂನ್ಯ ಎನಿಸುತ್ತದೆ. ಪ್ರಸ್ತುತದಲ್ಲಿ ನಡೆಯುತ್ತಿರುವುದು ಮಾತ್ರ ಕುರುಡರು ಮತ್ತು ಆನೆಯ ಕತೆಯಂತೆ ಕಾಣುತ್ತಿದೆ.

ನಾವೆಲ್ಲರೂ ನಿಧಾನವಾಗಿ ಕಾವೇರುತ್ತಿರುವ ನೀರಿನಲ್ಲಿ ಇರುವ ಕಪ್ಪೆಗಳು. ನಿಜವಾಗಿಯೂ ಏನಾಗುತ್ತಿದೆ ಎಂಬುದು ನಮಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಿಧಾನವಾಗಿ ಬಿಸಿಯೇರುತ್ತಿರುವ ನೀರಿನಿಂದ ಹೊರಬಂದು ನಾವು ಎದುರಿಸುತ್ತಿರುವ ವಿಪತ್ತನ್ನು ಅರಿತುಕೊಳ್ಳಲೇಬೇಕಾದ ಸಮಯವಿದು. ನಮ್ಮ ಕತೆಗಳನ್ನು ಹೇಳಲು, ನಮ್ಮ ಪ್ರತಿರೋಧವನ್ನು ಸಂಘಟಿಸಲು ನಾವು ಸಂಪೂರ್ಣ ಹೊಸ ಮಾದರಿಗಳನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ.

ಹಳೆಯ ಜಗತ್ತು ಸತ್ತು ಬಿದ್ದಿದೆ. ಹೊಸ ಪ್ರಪಂಚದ ಹುಟ್ಟಿನ ಹೆರಿಗೆ ನೋವುಗಳನ್ನು ನಾವು ಆಲಿಸುತ್ತಿದ್ದೇವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...