Homeಮುಖಪುಟಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

ಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

- Advertisement -
- Advertisement -

ಕೇರಳದ ಬಿನು ಮ್ಯಾಥ್ಯೂ ‘ಕೌಂಟರ್ ಕರೆಂಟ್ಸ್’ ವೆಬ್‍ಸೈಟ್‍ನ ಸ್ಥಾಪಕರಲ್ಲೊಬ್ಬರು. ವೆಬ್‍ಲೋಕ ಇನ್ನೂ ತೆರೆಯುತ್ತಿರುವಾಗಲೇ ಇಂಗ್ಲಿಷಿನಲ್ಲಿ ದೇಶದ ಪರ್ಯಾಯ ದನಿಗಳಿಗೆ ಅದರಲ್ಲಿ ವೇದಿಕೆಯನ್ನು ಕಲ್ಪಿಸಿದ್ದು ಕೌಂಟರ್‍ಕರೆಂಟ್ಸ್. ಬಹು ಹಿಂದೆಯೇ ಜನಪರ ಆಂದೋಲನಗಳ ಕುರಿತ ಮಾಹಿತಿ ಮತ್ತು ಚಿಂತನೆಗಳು ಆ ವೆಬ್‍ತಾಣದಲ್ಲಿ ಜಗತ್ತಿನ ಓದುಗರಿಗೆ ಲಭ್ಯವಿದ್ದವು. 2001ರಿಂದ ಇಲ್ಲಿಯವರೆಗೆ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿದ್ದು ಬಿನು ಮ್ಯಾಥ್ಯೂ.ಈ ಲೇಖನವನ್ನು ಕನ್ನಡಕ್ಕೆ ಶಂಕರ ಎನ್. ಕೆಂಚನೂರುಅವರು ಅನುವಾದಿಸಿದ್ದಾರೆ

ಭಯೋತ್ಪಾದನೆಯೆದುರಿನ ಹೋರಾಟದಲ್ಲಿ ನಾವು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಭಯೋತ್ಪಾದನೆಗೆ ಒಂದು ಸಂದರ್ಭವಿದೆ. ಈ ಲೇಖನದಲ್ಲಿ ನಾನು ಗೌರಿಯ ಹುತಾತ್ಮತೆಯನ್ನು ಆ ಸಂದರ್ಭದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು 2002ರಲ್ಲಿ ಕೌಂಟರ್ ಕರೆಂಟ್ಸ್.ಆರ್ಗ್ (Counter Currents.org) ಪ್ರಾರಂಭಿಸಿದಾಗ, ವಾತಾವರಣದಲ್ಲಿನ CO2 ಮಟ್ಟವು 370 ಪಿ.ಪಿ.ಎಮ್ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. 17 ವರ್ಷಗಳ ನಂತರ ಈಗ ಅದು 420 ಪಿಪಿಎಂ ತಲುಪಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ CO2 ಮತ್ತು CO2 ಸಮಾನ ಅಂಶಗಳು 496 ಪಿ.ಪಿ.ಎಮ್ ತಲುಪಿದೆ ಎಂದು ಇತ್ತೀಚೆಗೆ ನಾಸಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಾತಾವರಣದಲ್ಲಿ CO2 ಮಟ್ಟವು ವಾರ್ಷಿಕ 3 ಪಿ.ಪಿ.ಎಮ್‍ನಷ್ಟು ಹೆಚ್ಚುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಭೂಮಿಯನ್ನು ಉಳಿಸಲು ನಮಗೆ ಕೇವಲ ಒಂದು ದಶಕವಷ್ಟೇ ಉಳಿದಿದೆಯೆಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂಟರ್‍ನ್ಯಾಷನಲ್ ಎನರ್ಜಿ ಏಜೆನ್ಸಿ (ಐ.ಇ.ಎ) 2010ರಲ್ಲಿ ಪ್ರಕಟಿಸಿದ ತನ್ನ ‘ವರ್ಲ್ಡ್ ಪವರ್ ಔಟ್‍ಲುಕ್’ ಎಂಬ ವರದಿಯು ಆಶ್ವರ್ಯಗೊಳಿಸುವ ಅಂಶಗಳನ್ನು ಬಹಿರಂಗ ಮಾಡಿದೆ. ಸಾಂಪ್ರದಾಯಿಕ ತೈಲ ಅಂದರೆ, ಸುಲಭವಾಗಿ ಹೊರತೆಗೆಯಬಹುದಾದ ತೈಲದ ಉತ್ಪಾದನಾ ಮಟ್ಟವು 2005ರ ಆಸುಪಾಸಿನಲ್ಲಿ ಗರಿಷ್ಠ ಉತ್ಪಾದನೆಯನ್ನು ತಲುಪಿತ್ತು.

ಅದು ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ ಸುಲಭವಾಗಿ ಲಭ್ಯವಿರುವ ತೈಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅಂದರೆ ತೈಲವು ಮುಗಿದುಹೋದ ನಂತರ, ನಾಗರಿಕತೆಯೂ ಸಹ ಮುಗಿದುಹೋಗುತ್ತದೆ. ಅಂದರೆ ತಮ್ಮದಲ್ಲದ ತಪ್ಪಿಗಾಗಿ ನೂರಾರು ಕೋಟಿ ಜನರು ನಾಶವಾಗುತ್ತಾರೆ. ಆಧುನಿಕ ನಾಗರಿಕತೆಯನ್ನು ಸಾಧ್ಯವಾಗಿಸುವ ನೀರು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲೂ ಹೀಗೇ ಆಗುತ್ತಿದೆ.

ಈಗ ನಾವು ನಮ್ಮ ಚರ್ಚೆಯ ಚೌಕಟ್ಟನ್ನು ಸಿದ್ಧಪಡಿಸಿದ್ದಾಯಿತು, ಮುಂದಿನ ಭವಿಷ್ಯದ ಬಗ್ಗೆ ಅವಲೋಕಿಸೋಣ. ನಾವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ.

ಪರಿಸರ ಕುಸಿತ

ಪ್ಯಾರಿಸ್ ಒಪ್ಪಂದದಲ್ಲಿನ ಪ್ರಕಾರ ಇಂಗಾಲದ ಹೊರಸೂಸುವಿಕೆಯ ಕಡಿತದ ಪ್ರಮಾಣವನ್ನು ಸಾಧಿಸಿದರೂ ಸಹ, ವಿಜ್ಞಾನಿಗಳು `ಹಾಟ್ ಹೌಸ್ ಅರ್ಥ್”ಎಂದು ಕರೆಯುವ ಪರಿಸ್ಥಿತಿಗಳು ಭೂಮಿಗೆ ಪ್ರವೇಶಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಪ್ರಕಟಿಸಿದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಪಿ.ಎನ್.ಎ.ಎಸ್) ವರದಿಯು ಸಾರಿ ಹೇಳಿದೆ. “ಹಾಟ್ ಹೌಸ್ ಅರ್ಥ್” ಹವಾಮಾನವು ದೀರ್ಘಾವಧಿಯಲ್ಲಿ ಕೈಗಾರಿಕಾ ಪೂರ್ವದ ತಾಪಮಾನಕ್ಕಿಂತ ಜಾಗತಿಕ ಸರಾಸರಿ 4-5 ಡಿಗ್ರಿ ಸೆಂಟಿಗ್ರೇಡ್‍ಗಳಷ್ಟು ತಾಪಮಾನ ಏರಿಕೆಯಾಗಲಿದೆ ಮತ್ತು ಸಮುದ್ರ ಮಟ್ಟವು ಇಂದಿನ ಮಟ್ಟಕ್ಕಿಂತ 10-60 ಮೀ ಏರಿಕೆಯಾಗಲಿದೆ. “ಈ ಸನ್ನಿವೇಶವನ್ನು ತಪ್ಪಿಸಬೇಕೆಂದರೆ ಭೂ-ಪರಿಸರದ ಶೋಷಣೆಯಲ್ಲಿ ತೊಡಗಿರುವ ಮಾನವ ಕ್ರಿಯೆಗಳನ್ನು ಬದಲಿಸಿ ಭೂ-ಪರಿಸರ ವ್ಯವಸ್ಥೆಯ ಉಸ್ತುವಾರಿ ಕಡೆಗೆ ಮರುನಿರ್ದೇಶಿಸುವ ಅಗತ್ಯವಿದೆ” ಎಂದು ವರದಿ ಎಚ್ಚರಿಸಿದೆ. ಭೂಮಿಯ ಮೇಲಿನ ಬಹುತೇಕ ಪ್ರಭೇದಗಳು ಹಾಗೂ ಮಾನವ ಪ್ರಭೇದದ ಬಹುತೇಕರ ಮೇಲೆ ಈ ಹಾಟ್ ಹೌಸ್ ಅರ್ಥ್‍ನ ದುಷ್ಪರಿಣಾಮಗಳು ಉಂಟಾಗಲಿವೆ.

ಆರ್ಥಿಕ ಕುಸಿತ

ನಮ್ಮ ಭೂಮಿಯು ವೆಂಟಿಲೇಟರ್‍ನಲ್ಲಿ ಇರುವುದರಿಂದ ಮತ್ತು ನಮ್ಮ ಹೆಚ್ಚಿನ ಸಂಪನ್ಮೂಲಗಳು ಖಾಲಿಯಾದ ನಂತರ ನಾವು ಆರ್ಥಿಕ ಕುಸಿತವನ್ನು ಎದುರಿಸಲಿದ್ದೇವೆ. ಇಲ್ಲಾ ಇಲ್ಲ. ನಾವು ಈಗಾಗಲೇ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದೇವೆ.

ಸಾಮಾಜಿಕ ಕುಸಿತ

ಮೇಲೆ ತಿಳಿಸಿದ ಎರಡೂ ಕುಸಿತಗಳು ಊಹಿಸಲಾಗದ ಪ್ರಮಾಣದಲ್ಲಿ ಸಾಮಾಜಿಕ ಕುಸಿತವನ್ನು ತರುತ್ತವೆ. ಹೌದು, ಇದು ಈಗಾಗಲೇ ನಡೆಯುತ್ತಿದೆ. ಈ ಕುಸಿತವು ಸಾಮಾಜಿಕ ಅಸಹನೆ, ದ್ವೇಷ, ಯುದ್ಧಗಳು, ಗಲಭೆಗಳು ಮತ್ತು ತಪ್ಪಿಸಬಹುದಾದ ನೂರಾರು ಕೋಟಿ ಸಾವುಗಳಿಗೆ ಸಾಕ್ಷಿಯಾಗಲಿದೆ. ಇದು ಜನಸಂಖ್ಯೆಯ ಪ್ರಬಲ ವಿಭಾಗಗಳು ಸರ್ವಾಧಿಕಾರಿಗಳನ್ನು ಬಯಸುವ ಪ್ರವೃತ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಾವು ಈಗಾಗಲೇ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇದು ಭಾರತದಲ್ಲಿ ನರೇಂದ್ರ ಮೋದಿ ರೂಪದಲ್ಲಿದ್ದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಗಿದೆ. ಈ ಪ್ರವೃತ್ತಿ ಮುಂದುವರೆಯಲಿದೆ ಮಾತ್ರವಲ್ಲ, ಪ್ರಪಂಚದ ಇತರ ಭಾಗಗಳಿಗೂ ಹರಡಲಿದೆ. ಗೌರಿ ಲಂಕೇಶ್ ಅವರ ಜೀವವನ್ನು ತೆಗೆದುಕೊಂಡ ಸನಾತನ ಸಂಸ್ಥೆಯಂತಹ ದ್ವೇಷದ ಬೀಜಗಳು ಅನೇಕ ಕಡೆಗಳಲ್ಲಿ ಮೊಳಕೆಯೊಡೆಯುವುದನ್ನು ನಾವು ನೋಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕರು ಗೌರಿಯ ಸ್ಥಿತಿಯನ್ನು ಎದುರಿಸಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.

ನಾವು ಏನು ಮಾಡಬಹುದು?

ಶಿಕ್ಷಣ, ಸಂಘಟನೆ, ಆಂದೋಲನ ಮತ್ತು ಕ್ರಿಯೆಗಿಳಿಯುವುದು!

ಪ್ರತಿರೋಧದ ಬೀಜಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಚಿಗುರೊಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ಸ್ವೀಡಿಷ್ ಹುಡುಗಿ ಗ್ರೆಟಾ ಥನ್ಬರ್ಗ್ ನೇತೃತ್ವದ ಶಾಲಾ ಮುಷ್ಕರ. ಕೊನೆಗೆ, ಮುಂದಿನ ಪೀಳಿಗೆಯವರು ಹಳೆಯ ತಲೆಮಾರುಗಳ ಲಾಭಕ್ಕಾಗಿ ಬೆಲೆ ತೆರಲಿದ್ದಾರೆ. ಎಕ್ಸ್ಟಿಂಕ್ಷನ್ ರೆಬೆಲಿಯನ್ (ಅಳಿವಿನಂಚಿನ ಬಂಡಾಯ) ಯುರೋಪಿನಲ್ಲಿ ಜನಪ್ರಿಯವಾಗುತ್ತಿರುವ ಮತ್ತೊಂದು ಪ್ರತಿಭಟನಾ ಕ್ರಮವಾಗಿದೆ. ಟ್ರಾನ್ಸಿಷನ್ ಟೌನ್ಸ್ (ಪರಿವರ್ತನಾ ಪಟ್ಟಣಗಳು) ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯ ಮಾರ್ಗವಾಗಿದೆ.

ಜಾಗತಿಕ ತಾಪಮಾನ ಏರಿಕೆ, ಸಂಪನ್ಮೂಲ ಬಿಕ್ಕಟ್ಟು, ಪರಿಸರ ನಾಶಗಳು ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುಸಿತದ ಹಾದಿಗೆ ಕೊಂಡೊಯ್ದಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಇತ್ಯಾದಿಗಳು ನಡೆದಿರುವ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಈ ಕಟು ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲವೂ ನನಗೆ ಶೂನ್ಯ ಎನಿಸುತ್ತದೆ. ಪ್ರಸ್ತುತದಲ್ಲಿ ನಡೆಯುತ್ತಿರುವುದು ಮಾತ್ರ ಕುರುಡರು ಮತ್ತು ಆನೆಯ ಕತೆಯಂತೆ ಕಾಣುತ್ತಿದೆ.

ನಾವೆಲ್ಲರೂ ನಿಧಾನವಾಗಿ ಕಾವೇರುತ್ತಿರುವ ನೀರಿನಲ್ಲಿ ಇರುವ ಕಪ್ಪೆಗಳು. ನಿಜವಾಗಿಯೂ ಏನಾಗುತ್ತಿದೆ ಎಂಬುದು ನಮಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಿಧಾನವಾಗಿ ಬಿಸಿಯೇರುತ್ತಿರುವ ನೀರಿನಿಂದ ಹೊರಬಂದು ನಾವು ಎದುರಿಸುತ್ತಿರುವ ವಿಪತ್ತನ್ನು ಅರಿತುಕೊಳ್ಳಲೇಬೇಕಾದ ಸಮಯವಿದು. ನಮ್ಮ ಕತೆಗಳನ್ನು ಹೇಳಲು, ನಮ್ಮ ಪ್ರತಿರೋಧವನ್ನು ಸಂಘಟಿಸಲು ನಾವು ಸಂಪೂರ್ಣ ಹೊಸ ಮಾದರಿಗಳನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ.

ಹಳೆಯ ಜಗತ್ತು ಸತ್ತು ಬಿದ್ದಿದೆ. ಹೊಸ ಪ್ರಪಂಚದ ಹುಟ್ಟಿನ ಹೆರಿಗೆ ನೋವುಗಳನ್ನು ನಾವು ಆಲಿಸುತ್ತಿದ್ದೇವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...