Homeಮುಖಪುಟಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

ಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

- Advertisement -
- Advertisement -

ಕೇರಳದ ಬಿನು ಮ್ಯಾಥ್ಯೂ ‘ಕೌಂಟರ್ ಕರೆಂಟ್ಸ್’ ವೆಬ್‍ಸೈಟ್‍ನ ಸ್ಥಾಪಕರಲ್ಲೊಬ್ಬರು. ವೆಬ್‍ಲೋಕ ಇನ್ನೂ ತೆರೆಯುತ್ತಿರುವಾಗಲೇ ಇಂಗ್ಲಿಷಿನಲ್ಲಿ ದೇಶದ ಪರ್ಯಾಯ ದನಿಗಳಿಗೆ ಅದರಲ್ಲಿ ವೇದಿಕೆಯನ್ನು ಕಲ್ಪಿಸಿದ್ದು ಕೌಂಟರ್‍ಕರೆಂಟ್ಸ್. ಬಹು ಹಿಂದೆಯೇ ಜನಪರ ಆಂದೋಲನಗಳ ಕುರಿತ ಮಾಹಿತಿ ಮತ್ತು ಚಿಂತನೆಗಳು ಆ ವೆಬ್‍ತಾಣದಲ್ಲಿ ಜಗತ್ತಿನ ಓದುಗರಿಗೆ ಲಭ್ಯವಿದ್ದವು. 2001ರಿಂದ ಇಲ್ಲಿಯವರೆಗೆ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿದ್ದು ಬಿನು ಮ್ಯಾಥ್ಯೂ.ಈ ಲೇಖನವನ್ನು ಕನ್ನಡಕ್ಕೆ ಶಂಕರ ಎನ್. ಕೆಂಚನೂರುಅವರು ಅನುವಾದಿಸಿದ್ದಾರೆ

ಭಯೋತ್ಪಾದನೆಯೆದುರಿನ ಹೋರಾಟದಲ್ಲಿ ನಾವು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಭಯೋತ್ಪಾದನೆಗೆ ಒಂದು ಸಂದರ್ಭವಿದೆ. ಈ ಲೇಖನದಲ್ಲಿ ನಾನು ಗೌರಿಯ ಹುತಾತ್ಮತೆಯನ್ನು ಆ ಸಂದರ್ಭದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು 2002ರಲ್ಲಿ ಕೌಂಟರ್ ಕರೆಂಟ್ಸ್.ಆರ್ಗ್ (Counter Currents.org) ಪ್ರಾರಂಭಿಸಿದಾಗ, ವಾತಾವರಣದಲ್ಲಿನ CO2 ಮಟ್ಟವು 370 ಪಿ.ಪಿ.ಎಮ್ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. 17 ವರ್ಷಗಳ ನಂತರ ಈಗ ಅದು 420 ಪಿಪಿಎಂ ತಲುಪಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ CO2 ಮತ್ತು CO2 ಸಮಾನ ಅಂಶಗಳು 496 ಪಿ.ಪಿ.ಎಮ್ ತಲುಪಿದೆ ಎಂದು ಇತ್ತೀಚೆಗೆ ನಾಸಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಾತಾವರಣದಲ್ಲಿ CO2 ಮಟ್ಟವು ವಾರ್ಷಿಕ 3 ಪಿ.ಪಿ.ಎಮ್‍ನಷ್ಟು ಹೆಚ್ಚುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಭೂಮಿಯನ್ನು ಉಳಿಸಲು ನಮಗೆ ಕೇವಲ ಒಂದು ದಶಕವಷ್ಟೇ ಉಳಿದಿದೆಯೆಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂಟರ್‍ನ್ಯಾಷನಲ್ ಎನರ್ಜಿ ಏಜೆನ್ಸಿ (ಐ.ಇ.ಎ) 2010ರಲ್ಲಿ ಪ್ರಕಟಿಸಿದ ತನ್ನ ‘ವರ್ಲ್ಡ್ ಪವರ್ ಔಟ್‍ಲುಕ್’ ಎಂಬ ವರದಿಯು ಆಶ್ವರ್ಯಗೊಳಿಸುವ ಅಂಶಗಳನ್ನು ಬಹಿರಂಗ ಮಾಡಿದೆ. ಸಾಂಪ್ರದಾಯಿಕ ತೈಲ ಅಂದರೆ, ಸುಲಭವಾಗಿ ಹೊರತೆಗೆಯಬಹುದಾದ ತೈಲದ ಉತ್ಪಾದನಾ ಮಟ್ಟವು 2005ರ ಆಸುಪಾಸಿನಲ್ಲಿ ಗರಿಷ್ಠ ಉತ್ಪಾದನೆಯನ್ನು ತಲುಪಿತ್ತು.

ಅದು ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ ಸುಲಭವಾಗಿ ಲಭ್ಯವಿರುವ ತೈಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅಂದರೆ ತೈಲವು ಮುಗಿದುಹೋದ ನಂತರ, ನಾಗರಿಕತೆಯೂ ಸಹ ಮುಗಿದುಹೋಗುತ್ತದೆ. ಅಂದರೆ ತಮ್ಮದಲ್ಲದ ತಪ್ಪಿಗಾಗಿ ನೂರಾರು ಕೋಟಿ ಜನರು ನಾಶವಾಗುತ್ತಾರೆ. ಆಧುನಿಕ ನಾಗರಿಕತೆಯನ್ನು ಸಾಧ್ಯವಾಗಿಸುವ ನೀರು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲೂ ಹೀಗೇ ಆಗುತ್ತಿದೆ.

ಈಗ ನಾವು ನಮ್ಮ ಚರ್ಚೆಯ ಚೌಕಟ್ಟನ್ನು ಸಿದ್ಧಪಡಿಸಿದ್ದಾಯಿತು, ಮುಂದಿನ ಭವಿಷ್ಯದ ಬಗ್ಗೆ ಅವಲೋಕಿಸೋಣ. ನಾವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ.

ಪರಿಸರ ಕುಸಿತ

ಪ್ಯಾರಿಸ್ ಒಪ್ಪಂದದಲ್ಲಿನ ಪ್ರಕಾರ ಇಂಗಾಲದ ಹೊರಸೂಸುವಿಕೆಯ ಕಡಿತದ ಪ್ರಮಾಣವನ್ನು ಸಾಧಿಸಿದರೂ ಸಹ, ವಿಜ್ಞಾನಿಗಳು `ಹಾಟ್ ಹೌಸ್ ಅರ್ಥ್”ಎಂದು ಕರೆಯುವ ಪರಿಸ್ಥಿತಿಗಳು ಭೂಮಿಗೆ ಪ್ರವೇಶಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಪ್ರಕಟಿಸಿದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಪಿ.ಎನ್.ಎ.ಎಸ್) ವರದಿಯು ಸಾರಿ ಹೇಳಿದೆ. “ಹಾಟ್ ಹೌಸ್ ಅರ್ಥ್” ಹವಾಮಾನವು ದೀರ್ಘಾವಧಿಯಲ್ಲಿ ಕೈಗಾರಿಕಾ ಪೂರ್ವದ ತಾಪಮಾನಕ್ಕಿಂತ ಜಾಗತಿಕ ಸರಾಸರಿ 4-5 ಡಿಗ್ರಿ ಸೆಂಟಿಗ್ರೇಡ್‍ಗಳಷ್ಟು ತಾಪಮಾನ ಏರಿಕೆಯಾಗಲಿದೆ ಮತ್ತು ಸಮುದ್ರ ಮಟ್ಟವು ಇಂದಿನ ಮಟ್ಟಕ್ಕಿಂತ 10-60 ಮೀ ಏರಿಕೆಯಾಗಲಿದೆ. “ಈ ಸನ್ನಿವೇಶವನ್ನು ತಪ್ಪಿಸಬೇಕೆಂದರೆ ಭೂ-ಪರಿಸರದ ಶೋಷಣೆಯಲ್ಲಿ ತೊಡಗಿರುವ ಮಾನವ ಕ್ರಿಯೆಗಳನ್ನು ಬದಲಿಸಿ ಭೂ-ಪರಿಸರ ವ್ಯವಸ್ಥೆಯ ಉಸ್ತುವಾರಿ ಕಡೆಗೆ ಮರುನಿರ್ದೇಶಿಸುವ ಅಗತ್ಯವಿದೆ” ಎಂದು ವರದಿ ಎಚ್ಚರಿಸಿದೆ. ಭೂಮಿಯ ಮೇಲಿನ ಬಹುತೇಕ ಪ್ರಭೇದಗಳು ಹಾಗೂ ಮಾನವ ಪ್ರಭೇದದ ಬಹುತೇಕರ ಮೇಲೆ ಈ ಹಾಟ್ ಹೌಸ್ ಅರ್ಥ್‍ನ ದುಷ್ಪರಿಣಾಮಗಳು ಉಂಟಾಗಲಿವೆ.

ಆರ್ಥಿಕ ಕುಸಿತ

ನಮ್ಮ ಭೂಮಿಯು ವೆಂಟಿಲೇಟರ್‍ನಲ್ಲಿ ಇರುವುದರಿಂದ ಮತ್ತು ನಮ್ಮ ಹೆಚ್ಚಿನ ಸಂಪನ್ಮೂಲಗಳು ಖಾಲಿಯಾದ ನಂತರ ನಾವು ಆರ್ಥಿಕ ಕುಸಿತವನ್ನು ಎದುರಿಸಲಿದ್ದೇವೆ. ಇಲ್ಲಾ ಇಲ್ಲ. ನಾವು ಈಗಾಗಲೇ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದೇವೆ.

ಸಾಮಾಜಿಕ ಕುಸಿತ

ಮೇಲೆ ತಿಳಿಸಿದ ಎರಡೂ ಕುಸಿತಗಳು ಊಹಿಸಲಾಗದ ಪ್ರಮಾಣದಲ್ಲಿ ಸಾಮಾಜಿಕ ಕುಸಿತವನ್ನು ತರುತ್ತವೆ. ಹೌದು, ಇದು ಈಗಾಗಲೇ ನಡೆಯುತ್ತಿದೆ. ಈ ಕುಸಿತವು ಸಾಮಾಜಿಕ ಅಸಹನೆ, ದ್ವೇಷ, ಯುದ್ಧಗಳು, ಗಲಭೆಗಳು ಮತ್ತು ತಪ್ಪಿಸಬಹುದಾದ ನೂರಾರು ಕೋಟಿ ಸಾವುಗಳಿಗೆ ಸಾಕ್ಷಿಯಾಗಲಿದೆ. ಇದು ಜನಸಂಖ್ಯೆಯ ಪ್ರಬಲ ವಿಭಾಗಗಳು ಸರ್ವಾಧಿಕಾರಿಗಳನ್ನು ಬಯಸುವ ಪ್ರವೃತ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಾವು ಈಗಾಗಲೇ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇದು ಭಾರತದಲ್ಲಿ ನರೇಂದ್ರ ಮೋದಿ ರೂಪದಲ್ಲಿದ್ದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಗಿದೆ. ಈ ಪ್ರವೃತ್ತಿ ಮುಂದುವರೆಯಲಿದೆ ಮಾತ್ರವಲ್ಲ, ಪ್ರಪಂಚದ ಇತರ ಭಾಗಗಳಿಗೂ ಹರಡಲಿದೆ. ಗೌರಿ ಲಂಕೇಶ್ ಅವರ ಜೀವವನ್ನು ತೆಗೆದುಕೊಂಡ ಸನಾತನ ಸಂಸ್ಥೆಯಂತಹ ದ್ವೇಷದ ಬೀಜಗಳು ಅನೇಕ ಕಡೆಗಳಲ್ಲಿ ಮೊಳಕೆಯೊಡೆಯುವುದನ್ನು ನಾವು ನೋಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕರು ಗೌರಿಯ ಸ್ಥಿತಿಯನ್ನು ಎದುರಿಸಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.

ನಾವು ಏನು ಮಾಡಬಹುದು?

ಶಿಕ್ಷಣ, ಸಂಘಟನೆ, ಆಂದೋಲನ ಮತ್ತು ಕ್ರಿಯೆಗಿಳಿಯುವುದು!

ಪ್ರತಿರೋಧದ ಬೀಜಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಚಿಗುರೊಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ಸ್ವೀಡಿಷ್ ಹುಡುಗಿ ಗ್ರೆಟಾ ಥನ್ಬರ್ಗ್ ನೇತೃತ್ವದ ಶಾಲಾ ಮುಷ್ಕರ. ಕೊನೆಗೆ, ಮುಂದಿನ ಪೀಳಿಗೆಯವರು ಹಳೆಯ ತಲೆಮಾರುಗಳ ಲಾಭಕ್ಕಾಗಿ ಬೆಲೆ ತೆರಲಿದ್ದಾರೆ. ಎಕ್ಸ್ಟಿಂಕ್ಷನ್ ರೆಬೆಲಿಯನ್ (ಅಳಿವಿನಂಚಿನ ಬಂಡಾಯ) ಯುರೋಪಿನಲ್ಲಿ ಜನಪ್ರಿಯವಾಗುತ್ತಿರುವ ಮತ್ತೊಂದು ಪ್ರತಿಭಟನಾ ಕ್ರಮವಾಗಿದೆ. ಟ್ರಾನ್ಸಿಷನ್ ಟೌನ್ಸ್ (ಪರಿವರ್ತನಾ ಪಟ್ಟಣಗಳು) ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯ ಮಾರ್ಗವಾಗಿದೆ.

ಜಾಗತಿಕ ತಾಪಮಾನ ಏರಿಕೆ, ಸಂಪನ್ಮೂಲ ಬಿಕ್ಕಟ್ಟು, ಪರಿಸರ ನಾಶಗಳು ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುಸಿತದ ಹಾದಿಗೆ ಕೊಂಡೊಯ್ದಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಇತ್ಯಾದಿಗಳು ನಡೆದಿರುವ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಈ ಕಟು ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲವೂ ನನಗೆ ಶೂನ್ಯ ಎನಿಸುತ್ತದೆ. ಪ್ರಸ್ತುತದಲ್ಲಿ ನಡೆಯುತ್ತಿರುವುದು ಮಾತ್ರ ಕುರುಡರು ಮತ್ತು ಆನೆಯ ಕತೆಯಂತೆ ಕಾಣುತ್ತಿದೆ.

ನಾವೆಲ್ಲರೂ ನಿಧಾನವಾಗಿ ಕಾವೇರುತ್ತಿರುವ ನೀರಿನಲ್ಲಿ ಇರುವ ಕಪ್ಪೆಗಳು. ನಿಜವಾಗಿಯೂ ಏನಾಗುತ್ತಿದೆ ಎಂಬುದು ನಮಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಿಧಾನವಾಗಿ ಬಿಸಿಯೇರುತ್ತಿರುವ ನೀರಿನಿಂದ ಹೊರಬಂದು ನಾವು ಎದುರಿಸುತ್ತಿರುವ ವಿಪತ್ತನ್ನು ಅರಿತುಕೊಳ್ಳಲೇಬೇಕಾದ ಸಮಯವಿದು. ನಮ್ಮ ಕತೆಗಳನ್ನು ಹೇಳಲು, ನಮ್ಮ ಪ್ರತಿರೋಧವನ್ನು ಸಂಘಟಿಸಲು ನಾವು ಸಂಪೂರ್ಣ ಹೊಸ ಮಾದರಿಗಳನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ.

ಹಳೆಯ ಜಗತ್ತು ಸತ್ತು ಬಿದ್ದಿದೆ. ಹೊಸ ಪ್ರಪಂಚದ ಹುಟ್ಟಿನ ಹೆರಿಗೆ ನೋವುಗಳನ್ನು ನಾವು ಆಲಿಸುತ್ತಿದ್ದೇವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪವಾಸ ಕೊನೆಗೊಳಿಸಲು ನಿರಾಕರಿಸಿದ ಸೋನಮ್ ವಾಂಗ್‌ಚುಕ್ : 19ನೇ ದಿನವೂ ಮುಂದುವರಿದ ಸತ್ಯಾಗ್ರಹ; ಇನ್ನಷ್ಟು ಹದಗೆಟ್ಟ ಆರೋಗ್ಯ

ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...