Homeಸಾಹಿತ್ಯ-ಸಂಸ್ಕೃತಿಕವನಕಳೆದುಹೋದನು ಹೇಗೆ ಪರಶುರಾಮ?

ಕಳೆದುಹೋದನು ಹೇಗೆ ಪರಶುರಾಮ?

- Advertisement -
- Advertisement -

ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ
ಎಲ್ಲಿರುವನೋ ನನ್ನ ಪರಶುರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ
ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮ

ಕೈಯಲ್ಲಿ ಬಂದೂಕು ಹಿಡಿದನಂತೆ
ನನ್ನಂಥ ಹೆಣ್ಣನ್ನೇ ಹೊಡೆದನಂತೆ
‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ
ಹೆತ್ತಮ್ಮನನ್ನೇ ಮರೆತಿದ್ದನಂತೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಏಳುಕೊಳ್ಳದೆಲ್ಲವಗ ಹರಕೆ ಹೊತ್ತಿದ್ದೆ
ಒಂಬತ್ತು ತಿಂಗಳು ಹೊಟ್ಟೆ ಹೊತ್ತಿದ್ದೆ
ರಕ್ತ ಮಾಂಸ ಬಸಿದು ಕೂಸ ಮಾಡಿದ್ದೆ
ನೋವು ಬ್ಯಾನಿ ತಿಂದು ಸತ್ತು ಹಡೆದಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ವರ್ಷಗಟ್ಟಲೆ ಎದೆಯ ಹಾಲು ಉಣಿಸಿದ್ದೆ
ತೋಳ ತೊಟ್ಟಿಲು ತೂಗಿ ಲಾಲಿ ಹಾಡಿದ್ದೆ
ತೆಪ್ಪೆಜ್ಜಿ ಕಿತ್ತಾಗ ಹಾಡಿ ಕುಣಿದಿದ್ದೆ
ತೊದಲನುಡಿಯೊಳಗ ಕೈಲಾಸ ಕಂಡಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಸಾಲಿಗಿ ಕಳಿಸಿದ ಸಡಗರ ಸಡಗರ
ಸಾಹೇಬನಾಗುವ ಕನಸಿನ ಸಡಗರ
ಕೂಲಿನಾಲಿ ಮಾಡಿ ಬೆಳೆಸಿದ ಸಡಗರ
ಬಡತನವ ಮರೆಸಿದ್ದ ಮುದ್ದು ಸುಕುಮಾರ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಹರೆಯವು ಮೈತುಂಬಿ ಹೋರಿಯಾಗಿದ್ದ
ಚೆಲುವೆಯರ ಕಣ್ಣಾಗ ಬುಗುರಿಯಾಗಿದ್ದ
ಅಪ್ಪನ ಹೆಗಲ ಭಾರ ಹೊರುತ್ತಿದ್ದ
ಅವ್ವನಲಿ ಸೊಸೆ ತರುವ ಕನಸ ಬೆಳೆಸಿದ್ದ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ನಿಂತಲ್ಲೇ ಕತ್ತರಿಸಿ ನೆಲಕ ಬಿದ್ದೇನಿ
ಎದೆಯಿಂದ ನೆಲವ ಬಗೆಯುತ್ತಿದ್ದೀನಿ
ಕಣ್ಣು ಕತ್ತಲಗೂಡಿ ಹೊರಳುತಿದ್ದೀನಿ
ಮಗನ ಹೆಸರಿಡಿದು ಚೀರುತಿದ್ದೀನಿ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯದ ಕೈಗೆ ಬಂದೂಕು ಕೊಟ್ಟವರಾರು ?
ಹರೆಯದ ಮೈ ಹೊಕ್ಕ ಕೊಲೆಗಡುಕರಾರು ?
ಯಾರು ಉಣಿಸಿದರವನ ಎದೆಗೆ ವಿಷವ ?
ಯಾರು ಕಕ್ಕಿಸಿದರು ನನ್ನೆದೆಯ ಹಾಲು ?
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಕರುಣೆ ಬಾರದೇನೋ ರಾಮ ಶ್ರೀರಾಮಾ
ಮರಣವಾದರೂ ನೀಡೋ ರಾಮ ಶ್ರೀರಾಮಾ
ಯಾರ ಸೇನೆಯಲ್ಲಿ ಕಳೆದುಹೋದೆಯೋ ರಾಮ
ಕಾಯುತಿರುವೆನು ತಾಯಿ ರಾಮಶ್ರೀರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮ
ಇಲ್ಲದಿರೆ ನನ್ನೊಡಲ ಬೆಂಕಿಯಲಿ ಬೂದಿಯಾಗೋ

-ಎಂ. ಡಿ. ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...