Homeಮುಖಪುಟಜೀನ್‌ಗಳ ಪರೀಕ್ಷೆ, ಮರುಹುಟ್ಟು ಪಡೆದ ದ್ವೇಷ ಪದ

ಜೀನ್‌ಗಳ ಪರೀಕ್ಷೆ, ಮರುಹುಟ್ಟು ಪಡೆದ ದ್ವೇಷ ಪದ

- Advertisement -
- Advertisement -

2019ಸೆಪ್ಟೆಂಬರ್‌ನಲ್ಲಿ ಇಡೀ ದಕ್ಷಿಣ ಏಷಿಯಾಗೆ ಸಂಬಂಧಿಸಿದ ಮಹತ್ವಪೂರ್ಣವಾದ ಒಂದು ಸಂಶೋಧನಾ ಬರಹವನ್ನು ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು; ಅದರ ಶೀರ್ಷಿಕೆ- The formation of human populations in South and Central Asia ಅಂದರೆ, ದಕ್ಷಿಣ ಮತ್ತು ಮಧ್ಯ ಏಷಿಯಾದಲ್ಲಿ ಮನುಷ್ಯ ಸಮೂಹದ ಸಂರಚನೆ. ನೂರಾರು ’ಪ್ರಾಚೀನ ಮನುಷ್ಯರ’ ಜೆನೆಟಿಕ್ ಅಧ್ಯಯನದ ಆಧಾರದ ಮೇಲೆ ಈ ಬರಹವನ್ನು 108 ವಿಜ್ಞಾನಿಗಳು ಜೊತೆಗೂಡಿ ಬರೆದಿದ್ದರು. ಉತ್ಕೃಷ್ಟ ವೈಜ್ಞಾನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚು ದೇಶಗಳ ವಿಜ್ಞಾನಿಗಳು ಇದನ್ನು ಬರೆದಿದ್ದರು. ಅದರ ಅನುಗುಣವಾಗಿ, ’ಆಧುನಿಕ ದಕ್ಷಿಣ ಏಷಿಯಾದ ಮೂಲ ಪ್ರಾಚೀನ ಜನಸಮೂಹವು ಇರಾನ್ ಮತ್ತು ದಕ್ಷಿಣ ಏಷಿಯಾದ ಪ್ರಾಚೀನ ಹೊಲೊಸೀನ್ ಜನಸಮೂಹಕ್ಕೆ ಸಂಬಂಧಿಸಿದ ಜನರ ಮಿಶ್ರಣವಾಗಿದೆ. ಸಿಂಧೂ ನಾಗರಿಕತೆಯೊಂದಿಗೆ (ಇಂಡಸ್ ವ್ಯಾಲಿ ಸಿವಿಲೈಜೇಷನ್) ಸಾಂಸ್ಕೃತಿಕ ಸಂಬಂಧ ಹೊಂದಿದ್ದ ಎರಡು ಸ್ಥಳಗಳಿಂದ ಬಂದ ಔಟ್‌ಲಯರ್ ವ್ಯಕ್ತಿಗಳಲ್ಲಿ (ಒಂದು ವ್ಯವಸ್ಥೆಯ ಹೊರಗಿರುವವರು) ನಾವು ಅದನ್ನು ಪತ್ತೆ ಮಾಡಿದ್ದೇವೆ. ಸಿಂಧೂ ನಾಗರಿಕತೆಯ ಪತನದ ನಂತರ, ಈ ಜನಸಮೂಹವು ಸ್ಟೆಪ್ ಪೂರ್ವಜರೊಂದಿಗೆ ಮತ್ತು ವಾಯುವ್ಯ ಗುಂಪುಗಳೊಂದಿಗೆ ಬೆರೆತು ’ಪ್ರಾಚೀನ ಉತ್ತರ ಭಾರತೀಯರು’ ಎಂಬ ಗುಂಪನ್ನು ರಚಿಸಿತು. ಈ ವರದಿಯು ಪುರಾತತ್ವ ಶಾಸ್ತ್ರದ ಮತ್ತು ಜೆನೆಟಿಕ್ಸ್‌ನ ಇತರ ವಿದ್ವಾಂಸರು ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತೆ ಪ್ರೇರೇಪಿಸಿತು.

ಇಷ್ಟೊಂದು ತಾಂತ್ರಿಕ ಸಂಕೀರ್ಣತೆ ಮತ್ತು ವೈಜ್ಞಾನಿಕ ಆಳವನ್ನು ಹೊಂದಿರುವ ಒಂದು ವರದಿ ಸಾಮಾನ್ಯವಾಗಿ ಸಾಮಾನ್ಯ ಪ್ರಜೆಗಳ ಆಸಕ್ತಿಯ ಪರಿಧಿಯ ಹೊರಗೇ ಇರುತ್ತದೆ. ಆದರೂ, ಇದು ಇಂದು ಗಣನೀಯ ಮಹತ್ವ ಪಡೆದುಕೊಳ್ಳುವುದು ಏಕೆಂದರೆ, ಭಾರತದಲ್ಲಿ ನಾಗರಿಕ ಸಮಾಜ ಎಂದೋ ತಿರಸ್ಕರಿಸಿದ್ದ, ನಿರ್ಮೂಲನೆ ಮಾಡಿದ್ದ, ಸಮಾಜವನ್ನು ಕ್ಷೆಭೆಗೊಳಪಡಿಸಬಹುದಾದ ಕೆಲವು ಪದಗಳು ಮತ್ತೆ ಹುಟ್ಟಿಸಲಾಗಿ, ಅವುಗಳಿಗೆ ಮರುಜೀವ ಕೊಡುತ್ತಿರುವುದರಿಂದ. ಇದರಲ್ಲಿ ಅತ್ಯಂತ ನಿರ್ಣಾಯಕ ಪದ: ಶುದ್ಧತೆ (ಪ್ಯೂರ್). ಹಾಗೆ ನೋಡಿದರೆ, ಈ ಪದ ಯಾರಿಗೂ ನೋವುಂಟುಮಾಡುವ ಪದ ಅಲ್ಲ. ಇದನ್ನು ಕಲಬೆರಕೆಯಾಗಬಹುದಾದ ಆಹಾರ ಅಥವಾ ಪಾನೀಯ ಅಥವಾ ಆಭರಣದ ಲೋಹಗಳಿಗೆ ಬಳಸಲಾಗುತ್ತದೆ. ಹಾಗೂ ಒಂದು ಭಾಷೆಯನ್ನು ಹೊರತುಪಡಿಸಿ, ಎಲ್ಲಾ ಭಾಷಗಳಲ್ಲೂ ಅದಕ್ಕೆ ಅದೊಂದೇ ಅರ್ಥವಿದೆ. ಆ ಅಪವಾದ ಯುಜೆನಿಕ್ಸ್. ಈ ಸಿದ್ಧಾಂತವನ್ನು ಅನೈತಿಕ ವಿಜ್ಞಾನ ಎಂದು ತೀವ್ರವಾಗಿ ಖಂಡಿಸಲಾಗಿದೆ. ಅದರಲ್ಲಿ ’ಶುದ್ಧ’ ಎಂಬ ಪದ ಮತ್ತು ಅದರ ವಿರುದ್ಧ ಪದವಾದ ’ಆಶುದ್ಧ’ಗಳನ್ನು ’ರಕ್ತ’ಕ್ಕೆ ವಿಶೇಷಣಗಳನ್ನಾಗಿ ಬಳಸಲಾಗಿ ಜನಾಂಗೀಯತೆಗೆ ಅಡಿಪಾಯವನ್ನು ಒದಗಿಸಲಾಗುತ್ತದೆ.

1930ರ ದಶಕದಲ್ಲಿ ಜರ್ಮನ್ ಭಾಷೆಯಲ್ಲಿ ಉಪಮಾನವರು (untermenschen—subhumans) ಎಂಬ ಪದವನ್ನು ಯಥೇಚ್ಛವಾಗಿ ಬಳಸಲಾಗುತ್ತಿತ್ತು. ಶುದ್ಧ ಆರ್ಯನ್ ರಕ್ತವನ್ನು ಹೊಂದದೇ ಇರುವ ವ್ಯಕ್ತಿಗಳಿಗಾಗಿ ಈ ಪದವನ್ನು ಬಳಸಲಾಯಿತು. ಇದಾದ ಒಂಬತ್ತು ದಶಕಗಳ ನಂತರವೂ (untermenschen—subhumans) ಉಪಮಾನವರ ಸಮಾಜಶಾಸ್ತ್ರದಿಂದಾಗಿರುವ ಭಯಾನಕ ದುರಂತಗಳಿಂದ ಜಗತ್ತು ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಅದು ಕೇವಲ ಒಂದು ಅವೈಜ್ಞಾನಿಕ ಪರಿಕಲ್ಪನೆ ಅಥವಾ ಅನೈತಿಕ ರಾಜಕಾರಣವಷ್ಟೇ ಆಗಿರಲಿಲ್ಲ, ಅದು ಕಾನ್ಸಂಟ್ರೇಷನ್ ಕ್ಯಾಂಪ್ ಮತ್ತು ಸಾಮೂಹಿಕ ಗೋರಿಗಳಿಗೆ ಲಕ್ಷಾಂತರ ಅಮಾಯಕರನ್ನು ತಳ್ಳುವ ಸೈದ್ಧಾಂತಿಕ ಸಾಧನವಾಯಿತು. 19ನೆಯ ಶತಮಾನದ ಜೊಹಾನ್ ಫಿಟ್ಷೆಯ ವೋಕಿಶ್ ರಾಷ್ಟ್ರೀಯತೆಯ ಪರಿಕಲ್ಪನೆ, ಸಾಮಾಜಿಕ ಪುನರ್‌ರಚನೆಗೆ ಅನ್ವಯಿಸಲಾದ ಯುಜೆನಿಕ್ಸ್, ಯಾವುದೇ ನಾಗರಿಕ ಕಾನೂನುಗಳ ಅಪಹಾಸ್ಯ ಮಾಡುವಂತೆ ನಡೆದುಕೊಂಡ ಹಿಟ್ಲರ್‌ನ ಸ್ಟಾರ್ಮ್‌ಸ್ಟೂಪರ್ಸ್‌ಗಳು ಹಾಗೂ ಜರ್ಮನಿಯ ತಾಂತ್ರಿಕ ಶಕ್ತಿಯು ಹಿಟ್ಲರಿಸಂಅನ್ನು ಸೃಷ್ಟಿಸಿದ ನಾಲ್ಕು ಸ್ತಂಭಗಳಾಗಿದ್ದವು.

ತನ್ನ ಹಿಂಸೆ ಮತ್ತು ಕ್ರೌರ್ಯಕ್ಕೆ ಹಿಟ್ಲರ್ ನೀಡಿದ ಸಮರ್ಥನೆಯೇನೆಂದರೆ, ಸರ್ಬ್‌ರು, ಪೋಲಿಸ್ ಜನರು, ಯಹೂದಿಗಳು, ಜಿಪ್ಸಿಗಳು, ಏಷಿಯನ್ನರು ’ಶುದ್ಧ ಆರ್ಯನ್ ರಕ್ತ’ದವರಲ್ಲ ಹಾಗೂ ಅದೇ ಕಾರಣಕ್ಕಾಗಿ ಅವರು ಬದುಕುಳಿಯಲು ಅರ್ಹರಲ್ಲ ಎಂದು. ಹಿಟ್ಲರ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ, 1935ರಲ್ಲಿ ಯಹೂದಿಗಳನ್ನು ಸೈನ್ಯ ಸೇರಲು ನಿರ್ಬಂಧಿಸಲಾಯಿತು ಹಾಗೂ ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಂತ ನಾಚಿಕೆಗೇಡಿನ ಕಾಯಿದೆಯಾದ ’ಜರ್ಮನ್ ರಕ್ತದ ಮತ್ತು ಮರ್ಯಾದೆಯ ರಕ್ಷಣೆ’ಯ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಅದು ’ಶುದ್ಧ ರಕ್ತದ ಜರ್ಮನ್ನರು’ ಮತ್ತು ’ಮಾಲಿನ್ಯಕಾರಕ’ ಯಹೂದಿಗಳ ನಡುವೆ ಅಂತರವಿವಾಹ ಮತ್ತು ಲೈಂಗಿಕ ಸಂಬಂಧಗಳನ್ನು ನಿಷೇಧಿಸಿತು.

ಆಘಾತಕಾರಿಯಾಗಿ, 2022ರ ಭಾರತದಲ್ಲಿ ’ಜನಾಂಗೀಯ ಶುದ್ಧತೆ’ ಎಂಬ ಅಸಹ್ಯ ಪದವು ಮರುಜನ್ಮ ಪಡೆದಿದೆ. ಜೂನ್ 1ರ ’ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯ ಪ್ರಕಾರ, ಒಕ್ಕೂಟ ಸರಕಾರದ ಸಂಸ್ಕೃತಿ ಸಚಿವಾಲಯವು ’ಭಾರತದಲ್ಲಿ ಜೆನೆಟಿಕ್ ಇತಿಹಾಸ ಮತ್ತು ಶುದ್ಧತೆಯ ಕುರುಹುಗಳನ್ನು ಸ್ಥಾಪಿಸಲು’ ಡಿಎನ್‌ಎ ಪ್ರೊಫೈಲಿಂಗ್ ಕಿಟ್‌ಗಳು ಹಾಗೂ ಸಾಧನಗಳಿಗೆ ಅನುದಾನ ನೀಡುತ್ತಿದೆ. ಈ ಯೋಜನೆಯನ್ನು ಶುರುಮಾಡಲು ಕಾರಣರಾದ ವಿಜ್ಞಾನಿಯು ಹೇಳಿದ್ದು, ’ಕಳೆದ 10,000 ವರ್ಷಗಳಲ್ಲಿ ಭಾರತೀಯ ಜನಸಮೂಹದಲ್ಲಿ ಜೀನ್‌ಗಳ ರೂಪಾಂತರ ಮತ್ತು ಮಿಶ್ರಣ ಹೇಗೆ ಆಗಿದೆ ಎಂಬುದನ್ನು ನಾವು ನೋಡಲಿಚ್ಛಿಸುತ್ತೇವೆ.’ ಹಾಗೂ ಇನ್ನೂ ಮುಂದುವರೆದು, ’ಆಗ ನಮ್ಮ ಬಳಿ ಭಾರತದ ಜೆನೆಟಿಕ್ ಇತಿಹಾಸದ ಸ್ಪಷ್ಟವಾದ ಪರಿಕಲ್ಪನೆ ಇರುತ್ತೆ, ಇದನ್ನು ನೀವು ಭಾರತದಲ್ಲಿ ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚುವ ಪ್ರಯತ್ನ ಎನ್ನಬಹುದು.’ ಸಂಸ್ಕೃತಿ ಸಚಿವಾಲಯವು ಈ ಸುದ್ದಿ ಸುಳ್ಳು ಎಂದು ತಕ್ಷಣವೇ ಘೋಷಿಸಿತು. ಆ ಹೇಳಿಕೆ ನೀಡಿದ್ದ ವಿಜ್ಞಾನಿಯು ಪತ್ರಿಕೆಯಲ್ಲಿ ಬಂದ ವರದಿಯಿಂದ ಅಂತರ ಕಾಯ್ದುಕೊಂಡು, ತನ್ನ ಮಾತುಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಹೇಳಿದರು. ಆದರೆ ಇದಾದನಂತರ, ಭಾರತದ ಗಣ್ಯ ವಿಜ್ಞಾನಿಗಳ ಒಂದು ಗುಂಪು ಒಂದು ಹೇಳಿಕೆಯನ್ನು ನೀಡಿ, ಈ ’ಜನಾಂಗ’ ಎಂಬ ಪರಿಕಲ್ಪನೆ ಎಷ್ಟು ಅಪಾಯಕಾರಿಯಾದದ್ದು ಮತ್ತು ಹಳತಾದದ್ದು ಎಂದು ಎಚ್ಚರಿಕೆ ನೀಡಿದರು ಹಾಗೂ ಜೆನೆಟಿಕ್ಸ್ ವಿಜ್ಞಾನವು ಜನಾಂಗವನ್ನು ಹೇಗೆ ವೈಜ್ಞಾನಿಕ ಪರಿಕಲ್ಪನೆ ಎಂದು ಪರಿಗಣಿಸುವುದಿಲ್ಲ ಎಂಬುದನ್ನು ವಿವರಿಸಿದರು. ಈ ಹೇಳಿಕೆ ನೀಡಿದ ಗುಂಪು ಕೆಲವು ಪ್ರಖ್ಯಾತ ಭಾರತೀಯ ವೈದ್ಯರು ಮತ್ತು ಇತಿಹಾಸಕಾರರನ್ನು ಒಳಗೊಂಡಿತ್ತು. ಭಾರತೀಯ ಸಂವಿಧಾನಕ್ಕೆ ಸಂಪೂರ್ಣವಾಗಿ

ವ್ಯತಿರಿಕ್ತವಾಗಿ ಹಾಗೂ ಅಪಾಯಕಾರಿಯಾಗಿರುವ ಈ ಪರಿಕಲ್ಪನೆಯ ಪ್ರಕಾರ, ಭಾರತೀಯ ಸಂದರ್ಭದಲ್ಲಿ ’ಜನಾಂಗೀಯ ಶುದ್ಧತೆ’ ಎಂಬುದರ ಅರ್ಥವಾದರೂ ಏನು? ಇದು ಮಾಲಿನ್ಯದ ಆತಂಕದ ಆಧಾರದ ಮೇಲೆ ಇರುವ,ಪುರಾತನಕಾಲದಿಂದಲೂ ಇರುವ ಜಾತಿಪದ್ಧತಿಗೆ ತಳಕುಹಾಕಿಕೊಂಡಿದೆಯೇ ಅಥವಾ ಮಧ್ಯಕಾಲೀನ ಸಮಯದಲ್ಲಿ ಭಾರತಕ್ಕೆ ವಲಸೆ ಬಂದವರನ್ನು ಗುರಿಮಾಡಲು ಪ್ರಯತ್ನಿಸುತ್ತಿದೆಯೇ? ಈ ಪ್ರಸಕ್ತ ಆಳ್ವಿಕೆಗೆ ಎರಡನೆಯ ದರ್ಜೆಯ ನಾಗರಿಕರನ್ನು ಸೃಷ್ಟಿಸಲು ಯಾವುದೇ ಜೆನೆಟಿಕ್ ಅಧ್ಯಯನಗಳು ಬೇಕಿಲ್ಲ; ಅದು ಈಗಾಗಲೇ ಸಮಾಜವನ್ನು ಒಡೆಯಲು ಹಲವಾರು ದಾರಿಗಳನ್ನು ಕಂಡುಕೊಂಡಿದೆ.

ಈ ಯೋಜನೆಯ ಹೃದಯಕ್ಕೆ ತಲುಪಬೇಕಾದರೆ, ಜೆನೆಟಿಕ್ ಪರೀಕ್ಷೆಗೆ ಒಳಪಡುವ ಸಮುದಾಯಗಳ ಪಟ್ಟಿಯನ್ನು ನೋಡಿದರೆ ಸಾಕು. ಅವರೆಲ್ಲ ನಿರ್ದಿಷ್ಟವಾಗಿ ’ಭಾಷಿಕ ದ್ವೀಪ’ಗಳಾಗಿ ಉಳಿದಿದ್ದವರು; ಮಹಾರಾಷ್ಟ್ರದ ಬುಲಧಾನಾ ಜಿಲ್ಲೆಯ ನೆಹಾಲಿಯರು ಅಥವಾ ಅಂಡಮಾನ್ ದ್ವೀಪಗಳ ಜರವಾ ಮತ್ತು ನಿಕೊಬಾರಿಯರು ಅಥವಾ ಒರಿಸ್ಸಾದ ಮಲಪಹಾಡಿಯರು ಮತ್ತು ಕೊಂಢರು. ಎರಡು ದಶಕಗಳ ಹಿಂದೆ ಬಹುರಾಷ್ಟ್ರೀಯ ಔಷಧಿ ಕಂಪನಿಗಳು ’ಅನ್ ಅಡಲ್ಟ್ರೇಟೆಡ್ ಸೆಲ್’ಗಳು ಅಂದರೆ ಕಲುಷಿತಗೊಳ್ಳದ ಕೋಶಗಳ ಹುಡುಕಾಟದಲ್ಲಿದ್ದಾಗ ಗುರಿ ಮಾಡಿದ ಸಮುದಾಯಗಳು ಯಾವು ಎಂದು ನೋಡಿದಾಗ, ಅವು ನಿರ್ದಿಷ್ಟವಾಗಿ ಇವೇ ಸಮುದಾಯಗಳು ಎಂದು ಗೊತ್ತಾಗುತ್ತದೆ. ಆ ಶೋಧ ಕೇವಲ ಒಂದು ಹುಚ್ಚು ಕಲ್ಪನೆ ಎಂದು ಸಾಬೀತಾಯಿತು. ಒಂದು ವೇಳೆ ಜೆನೆಟಿಕ್ಸ್‌ಗೆ ಅದು ಗೊತ್ತಿದ್ದರೆ, ಮತ್ತೆ ಆದಿವಾಸಿಗಳ ಬಳಿ ಏಕೆ ಹೋಗಬೇಕು? ಅದಕ್ಕೆ ಉತ್ತರವೇನೆಂದರೆ, ಭಾರತದಲ್ಲಿಯ ಭಿನ್ನಭಿನ್ನ ಜನಸಮೂಹಗಳು ಹಂಚಿಕೊಳ್ಳಲಾದ ಒಂದು ಮೈಟೊಕಾಂಡ್ರಿಯಲ್ ಡಿಎನ್‌ಎ ತಮ್ಮದು ಎಂದು ಹೇಳಿಕೊಳ್ಳುವುದು ಈಗಾಗಲೇ ಸ್ಪಷ್ಟವಾಗಿ ಸಾಬೀತಾಗಿದೆ, ಆ ಡಿಎನ್‌ಎ ತಾಯಿಯ ಕಡೆಯಿಂದ ಬರುತ್ತದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ವೈಜ್ಞಾನಿಕ ತಥ್ಯವನ್ನು ಬಳಸಿಕೊಂಡು, ಸಂಸ್ಕೃತಿ ಸಚಿವಾಲಯದ ಯೋಜನೆಯು ಸುಲಭವಾಗಿ ಆದಿವಾಸಿಗಳನ್ನು ಈ ಉಪಖಂಡದ ಏಕೈಕ ಮೂಲವಾಸಿಗಳೆಂಬ ವಾದವನ್ನು ತಳ್ಳಿಹಾಕಬಹುದು. ಇದರಿಂದ, ಹರಪ್ಪನ ನಾಗರಿಕತೆಗೆ ಮುನ್ನ ಇದ್ದ ಸಂಸ್ಕೃತ ಮಾತನಾಡುವ ಜನರು ಭಾರತದಿಂದ ಪಶ್ಚಿಮ ದಿಕ್ಕಿನಲ್ಲಿ ಏಷಿಯಾದ ಇತರ ಕಡೆಗೆ ಹಾಗೂ ಉತ್ತರದ ಸ್ಟೆಪ್ ಕಡೆಗೆ ವಲಸೆ ಹೋದರು ಎಂಬ ಕಪೊಕಲ್ಪಿತ ಮತ್ತು ಅವೈಜ್ಞಾನಿಕ ತಥ್ಯವನ್ನು ಪ್ರಚಾರ ಮಾಡಲು ಅವರಿಗೆ ದಾರಿ ಸುಲಭವಾಗುವುದು. ಇತಿಹಾಸದ ಆರ್‌ಎಸ್‌ಎಸ್‌ನ ನೋಟವು ಸಿಂಧು ಕಣಿವೆ ನಾಗರಿಕತೆಯ ಸಮಯದಲ್ಲಿ ಸಂಸ್ಕೃತದ ಬಳಕೆ ಇತ್ತು ಎಂದು ಸಾಬೀತುಪಡಿಸುವಲ್ಲಿ ಅತೀವ ಆಸಕ್ತಿ ಹೊಂದಿದೆ. ಈ ದೃಷ್ಟಿಕೋನವು ಸಂಪೂರ್ಣವಾಗಿ ಪೊಳ್ಳಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇದು ಸಂಸ್ಕೃತವು ಭಾರತದಲ್ಲಿ ಮೊದಲು ಅಭಿವೃದ್ಧಿ ಹೊಂದಿ, ನಂತರ ಭಾರತದ ಹೊರಗೆ ಬಹಳಷ್ಟು ಭಾಷೆಗಳ ಪೂರ್ವಜರಾಗಿ ವಿಶ್ವದ ಇತರೆಡೆ ಹರಡಿತು ಎಂಬ ಅವೈಜ್ಞಾನಿಕ ವಾದವನ್ನು ಹರಡಿಸುವ ಆಸಕ್ತಿ ಹೊಂದಿದೆ.

ಹಿಟ್ಲರ್ ಅಧಿಕಾರಕ್ಕೆ ಬರುವ ಅರ್ಧ ಶತಕ ಮುನ್ನ, ಆರ್ಯನ್ನರ ಕಪೊಕಲ್ಪಿತ ಇತಿಹಾಸಪೂರ್ವ ನಾಡಿನ ಬಗ್ಗೆ ಇಂತಹದೇ ವಾದಗಳನ್ನು ಮುಂದಿಡಲಾಗಿತ್ತು. ಈಗ ಕೂಡ ಆಟ ಅದೇ! ಈ ವಾದದಲ್ಲಿ ಹುರುಳಿಲ್ಲ ಎಂದು ನೂರಕ್ಕಿಂತ ಹೆಚ್ಚು ಅತ್ಯುತ್ತಮ ವಿಜ್ಞಾನಿಗಳ ಗುಂಪೊಂದು ಬಹಿರಂಗಪಡಿಸಿದ್ದರೂ ಈ ಆಟ ನಡೆದಿದೆ. ಆರ್‌ಎಸ್‌ಎಸ್ ಸಂಘಟನೆಯು ತನ್ನ ಸಾಂಸ್ಕೃತಿಕ ನಿರೂಪಣೆಗಾಗಿ ಒಂದು ಮರಳಿನ ಕೋಟೆಯನ್ನೇ ನಿರ್ಮಿಸಿದೆ. ಸಂಸ್ಕೃತಿ ಸಚಿವಾಲಯವು ಇದಕ್ಕೆ ಒಂದು ಹುಸಿ ವೈಜ್ಞಾನಿಕ ಶೋಕೇಸ್ ನಿರ್ಮಿಸುತ್ತಿದೆಯೇ? ಇದರಿಂದ ಆಗುವ ಪರಿಣಾಮವೇನೆಂದರೆ, ಆದಿವಾಸಿಗಳಿಗೆ ತಮ್ಮ ಸಾಂಸ್ಕೃತಿಕ ಸ್ಥಾನವನ್ನು ನಿರಾಕರಿಸುವುದಷ್ಟೇ ಅಲ್ಲ, ವಿಜ್ಞಾನಕ್ಕೆ ಅದರ ನ್ಯಾಯಸಮ್ಮತೆಯನ್ನು ನಿರಾಕರಿಸುವುದಷ್ಟೇ ಅಲ್ಲ, ಅದರೊಂದಿಗೆ ಅವರು ಹೇಳಿಕೊಳ್ಳುವ ಈ ’ಶುದ್ಧ’ ಮತ್ತು ’ಅಶುದ್ಧ’ ನಾಗರಿಕರ ನಡುವೆ ಸಾಮಾಜಿಕ ಅಸಾಮರಸ್ಯಕ್ಕೆ ನ್ಯಾಯಸಮ್ಮತೆ ನೀಡುತ್ತದೆ. ಜೀನ್ಸ್‌ಗಳನ್ನು ಪರೀಕ್ಷಿಸುತ್ತ ಹಾಗೂ ಪದಗಳಿಗೆ ಮರುಜೀವ ನೀಡುತ್ತಿರುವಾಗ, ಭಾರತೀಯ ಸಂವಿಧಾನ ನೀಡಿರುವ ಸಮಾನ ಪೌರತ್ವದ ಖಾತ್ರಿಯು ದ್ವೇಷ ಮತ್ತು ಅನ್ಯಾಯದಲ್ಲಿ ಮುಳುಗಿಹೋಗಬಹುದು. ’ಶುದ್ಧ’ ಎಂಬುದು ಕೇವಲ ಒಂದು ಮುಗ್ಧ ವಿಶೇಷಣವಲ್ಲ. ಅದನ್ನು ಜನಾಂಗಕ್ಕೆ ಅನ್ವಯಿಸಿದಾಗ ಅದು ವಿಷಕಾರಿಯಾಗಬಹುದು. ಒಂದು ನಾಗರಿಕ ಸಮಾಜದಲ್ಲಿ ಯಾವುದೇ ಸ್ಥಾನ ಇರಬಾರದಂತಹ ಪರಿಕಲ್ಪನೆಗೆ ಭಾರತೀಯರು ಜೊತೆಗೂಡುವುದಿಲ್ಲ ಎಂದು ಸಂಸ್ಕೃತಿ ಸಚಿವಾಲಯ ಭರವಸೆ ನೀಡುತ್ತದೆ ಎಂದು ಆಶಿಸುವ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್; ಪೊಲೀಸ್ ಕಣ್ಗಾವಲಿನ ಕರಾಳ ವ್ಯವಸ್ಥೆಗೆ ಇನ್ನಷ್ಟು ಪುಷ್ಠಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...