HomeUncategorizedಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

- Advertisement -
- Advertisement -

ಚುನಾವಣಾ ನಿಮಿತ್ತ ನ್ಯೂಷ್ ನೇಷನ್ ಎಂಬ ಟಿವಿ ಚಾನೆಲ್ ಒಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಚೌರಾಸಿಯ ಎಂಬ ಸಂದರ್ಶಕ ಇಬ್ಬರನ್ನು ಸಂದರ್ಶಿಸಿದ್ದರೂ, ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರರ ಭ್ರಷ್ಟಾಚಾರ ಪ್ರಕರಣ, 1984ರ ಸಿಖ್ ಹತ್ಯಾಕಾಂಡದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದರು. ಇದು ಸರಿಯಾದುದ್ದೆ. ಆದರೆ ಮೋದಿಯವರಿಗೆ ಮಾತ್ರ ಯಾವ ತಿಂಡಿ ಇಷ್ಟ, ಯಾವ ಬಟ್ಟೆ ಹಾಕ್ತಿರಿ? ರೋಟಿ ಮಾಡೋಕೆ ಬರುತ್ತಾ, ಕವನ ಬರಿತೀರಾ ಎಂಬಂಥ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋ ನೋಡಿ, ಅವರು ಕೇಳಿದ ಪ್ರಶ್ನೆಗಳನ್ನು ತಿಳಿಯಲು ಕೆಳಗೆ ಓದಿ.

ವಿಡಿಯೋ ನೊಡಿ

ಸಂದರ್ಶಕ – ಮೋದಿಗೆ: ತಾವು ಏನು ಊಟ-ತಿಂಡಿ ಇಷ್ಟಪಡುತ್ತೀರಿ ಹಾಗೂ ದಿನಕ್ಕೆ ಎಷ್ಟು ಸಲ ಊಟ ಮಾಡುತ್ತೀರಿ?

ರಾಹುಲ್‍ಗೆ: ‘ನ್ಯಾಯ್’ ಯೋಜನೆಯ ಕುರಿತು ನ್ಯೂಸ್ ನೇಶನ್ ಸಂದರ್ಶನದಲ್ಲಿ ಮೋದಿಯವರನ್ನು ಕೇಳಲಾಯಿತು – ‘ರಾಹುಲ್‍ಜೀ ‘ನ್ಯಾಯ್’ ಯೋಜನೆ ಮುಂದಿಟ್ಟಿದ್ದಾರೆ; ಅದರ ಪ್ರಕಾರ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಕ್ಕೆ ಮೋದಿಯವರು, “ನನ್ನ ಬಳಿ ಟ್ರಾಕ್ ರಿಕಾರ್ಡ್ ಇದೆ, ರಾಹುಲ್‍ಜೀ ಬಳಿ ಟೇಪ್ ರೆಕಾರ್ಡರ್ ಇದೆ” ಎಂದರು.

ಮೋದಿಗೆ: ತಾವು ಕ್ಯಾಲರಿ-ಕಾನ್ಶಸ್ ಆಗಿದೀರಾ – ದಿನಕ್ಕೆ ಇಷ್ಟು ಕ್ಯಾಲರಿ ತಿನ್ನಬೇಕು, ಈಗ ಇಷ್ಟು ಕ್ಯಾಲರಿ ತಿಂದುಬಿಟ್ಟಿದೀನಿ, ಸ್ವಲ್ಪ ತಿನ್ನಬೇಕು … ಇತ್ಯಾದಿ?

ರಾಹುಲ್‍ಗೆ: ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಅಥವಾ ಬಿಜೆಪಿಯ ಹೊರತಾಗಿ ಇನ್ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‍ನ ಕಂಟ್ರಾಕ್ಟನ್ನು ಮರು ಪರಿಶೀಲನೆ (ರೀ-ನೆಗೋಶಿಯೇಟ್) ನಡೆಸಲಾಗುವುದಾ?

ಮೋದಿಗೆ: ತಾವು ಏನೇನು ಅಡಿಗೆ ತಯಾರಿಸುತ್ತೀರಿ?
ಮೋದಿ: ಎಲ್ಲವನ್ನೂ ತಯಾರಿಸ್ತೀನಿ …
ಸಂ: ರೊಟ್ಟಿಯನ್ನು ಕೂಡಾ …?
ಮೋ: ಓಹೋ, ಎಲ್ಲವನ್ನೂ ತಯಾರಿಸ್ತೀನಿ.

ಸಂ – ರಾಹುಲ್‍ಗೆ: ಒಂದುವೇಳೆ ಅದರಲ್ಲಿ ರಫೇಲ್‍ನ ಕಂಟ್ರಾಕ್ಟ್‍ನಲ್ಲಿ ತಪ್ಪಾಗಿದೆ ಎಂದಾದಲ್ಲಿ ‘ಅದನ್ನು ರದ್ದುಪಡಿಸಲಾಗುವುದು’ ಅಥವಾ ‘ರೀ-ನೆಗೋಶಿಯೇಟ್ ಮಾಡಲಾಗುವುದು’ ಎಂದು ತಾವೇಕೆ ಓಪನ್ನಾಗಿ ಹೇಳುವುದಿಲ್ಲ? ಯಾಕೆಂದರೆ ಈ ಡೀಲ್‍ನಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನೀವು ತಿಳಿಯುತ್ತೀರಲ್ಲ…

ಮೋದಿಗೆ: ಕಳೆದ ಐದು ವರ್ಷಗಳಲ್ಲಿ ಎಂದಾದರೂ ನೀವು ಅಡಿಗೆಮನೆಗೆ ಹೋಗಲು ಸಾಧ್ಯವಾಗಿದೆಯಾ?
ರಾಹುಲ್‍ಗೆ: ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿರುವಾಗ ತನಿಖೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದಲ್ಲವೆ?

ಮೋದಿಗೆ: ಪ್ರಧಾನ ಮಂತ್ರಿಗಳೆ, ಒಂದು ಬಹಳ ಮಹತ್ವಪೂರ್ಣ ವಿಚಾರ ಏನೆಂದರೆ, ನಿಮ್ಮ ವೇಷಭೂಷಣ ನಿಮಗೆ ಬಹಳ ಒಪ್ಪುತ್ತದೆ (ಸ್ಯೂಟ್ ಆಗುತ್ತದೆ).
ರಾಹುಲ್‍ಗೆ: ರಾಹುಲ್‍ಜೀ, ನಾವು ಪಂಜಾಬಿನಲ್ಲಿದೀವಿ. ಈಚೆಗಷ್ಟೇ ಒಂದು ವಿಚಾರ ಚರ್ಚೆಗೆ ಬಂದಿತ್ತು – 1984ರಲ್ಲಿ ನಡೆದಿದ್ದ ಸಿಖ್ ಗಲಭೆ(ರಯಟ್ಸ್)ಗಳಿಗೆ ಸಂಬಂಧಪಟ್ಟಂತೆ ಸ್ಯಾಮ್ ಪಿತ್ರೋದಾ ಅವರು “ಏನು ಆಗಿದೆಯೋ ಆಗಿದೆ” ಎಂದು ಹೇಳಿದ್ದರು …

ಮೋದಿಗೆ: ಅಂದರೆ ತಾವು ಫ್ಯಾಶನ್ ಬಗ್ಗೆ, ಬಟ್ಟೆಬರೆ ಬಗ್ಗೆಯೂ ಅಷ್ಟೊಂದು ಆಸಕ್ತಿ ಹೊಂದಿದೀರಾ? ಅದರ ಬಗ್ಗೆ ಏನಾದರೂ ಓದುತ್ತೀರಾ? ಯಾವ ಅಕೇಶನ್‍ಗೆ ಎಂತಹ ಉಡುಗೆ ತೊಡಬೇಕು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ರಾಹುಲ್‍ಗೆ: … ಅವು ಸಂಘಟಿತವಾದ ಗಲಭೆಗಳಾಗಿದ್ದವು, ಅವುಗಳಿಗೆ ಕಾಂಗ್ರೆಸ್ ಪಕ್ಷವೇ ಜವಾಬ್ದಾರ ಎಂದು ಬಿಜೆಪಿಯ ಆರೋಪ…

ಮೋದಿಗೆ: ತಾವು ಜೇಬಿನಲ್ಲಿ ಪರ್ಸ್ ಇಟ್ಕೊಳ್ತೀರಾ?
ರಾಹುಲ್‍ಗೆ: … ಅವರು ಹೇಳಿದರು – ಗುಜರಾತಿನಲ್ಲಿ ಕಾಂಗ್ರೆಸ್ಸು ಜಿಎಸ್‍ಟಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆ ಎದುರಿಸಿತು, ಸೂರತ್‍ನಲ್ಲಿ ಅದರ ಬಗ್ಗೆ ಬಹಳ ಪ್ರಚಾರ ಕೂಡ ನಡೆಯಿತು. ಆದರೆ ಸೂರತ್‍ನ ಎಲ್ಲ ಸೀಟುಗಳನ್ನೂ ನಾವೇ ಗೆದ್ದೆವು … ಈಗ ಐದು ವರ್ಷಗಳ ಕೆಲಸಕಾರ್ಯಗಳ ಮೇಲೆ ಚುನಾವಣೆ ನಡೆಯುತ್ತಿದೆ – ಎಂದು.

ಇದಕ್ಕೆ ರಾಹುಲ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೆಂದರೆ, ಪ್ರಧಾನ ಮಂತ್ರಿಯ ಈ ಉತ್ತರ ಇತ್ತಲ್ಲ, ಅದೂ ಸಹ ಅವರಿಗೆ ಕೊಡಲಾಗಿದ್ದ ನೋಟ್‍ಶೀಟ್‍ನಲ್ಲಿತ್ತಾ? ಅವರ ಮುಂದೊಂದು ಕಾಗದ ಇಟ್ಟಿದ್ದಿರಲ್ಲ, ಅದರಲ್ಲಿ ಈ ಉತ್ತರವನ್ನೂ ಬರೆಯಲಾಗಿತ್ತಾ ಅಥವಾ ಬರೆದಿರಲಿಲ್ಲವಾ? ಎಂದು ಹೇಳಿದ್ದಲ್ಲದೇ ನೀವು ಬೇಕಾದರೆ ಇದನ್ನು ಎಡಿಟ್ ಮಾಡಿಕೊಳ್ಳಿ ಎಂದು ಹೇಳಿ ನಗೆ ಹುಟ್ಟಿಸಿದ್ದರು.

ಈ ರೀತಿಯಾಗಿ ಇಂದು ಮೀಡಿಯಾಗಳು ಸಂಪೂರ್ಣ ಮೋದಿಮಯವಾಗಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಬಲು ಅಪಾಯಕಾರಿ. ಇದು ಮಾಧ್ಯಮಗಳ ದಿವಾಳಿತನ, ಮೋದಿಯವರಿಗೆ ಮಾಧ್ಯಮಗಳ ಮೇಲಿರುವ ಭಯವನ್ನು ಸಹ ತೋರಿಸುತ್ತದೆ. ಮೊದಲೇ ಇಂತಹದೇ ಪ್ರಶ್ನೆಗಳನ್ನು ಕೇಳಬೇಕು ಎಂದು ಸ್ಕ್ರಿಪ್ಟ್ ಪ್ರಶ್ನೆಗಳನ್ನು ಬರೆದುಕೊಟ್ಟು ಸಂದರ್ಶನ ನಡೆಸಬೇಕಾದ ದುರ್ಗತಿಗೆ ಇಂತಹ ಚಾನೆಲ್‍ಗಳು ಇಳಿದಿವೆ.
ಕೊನೆಯಲ್ಲಿ ಒಂದು ಮಾತು: ಮೋದಿಯ ಸಂದರ್ಶನಕ್ಕೆ ಜೊತೆಯಲ್ಲಿ ಒಬ್ಬ ‘ಮಾಡ್’ ಮಹಿಳೆಯನ್ನು ಕರೆದೊಯ್ದಿದ್ದ ಚೌರಾಸಿಯ, ರಾಹುಲ್ ಸಂದರ್ಶನಕ್ಕೆ ಜೊತೆಗೊಬ್ಬ ಪುರುಷನನ್ನು ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಅಸಮಾನತೆ ಮಾಡಿದ್ದಾರೆ ನೋಡಿ.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...