HomeUncategorizedಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

- Advertisement -
- Advertisement -

ಚುನಾವಣಾ ನಿಮಿತ್ತ ನ್ಯೂಷ್ ನೇಷನ್ ಎಂಬ ಟಿವಿ ಚಾನೆಲ್ ಒಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಚೌರಾಸಿಯ ಎಂಬ ಸಂದರ್ಶಕ ಇಬ್ಬರನ್ನು ಸಂದರ್ಶಿಸಿದ್ದರೂ, ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರರ ಭ್ರಷ್ಟಾಚಾರ ಪ್ರಕರಣ, 1984ರ ಸಿಖ್ ಹತ್ಯಾಕಾಂಡದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದರು. ಇದು ಸರಿಯಾದುದ್ದೆ. ಆದರೆ ಮೋದಿಯವರಿಗೆ ಮಾತ್ರ ಯಾವ ತಿಂಡಿ ಇಷ್ಟ, ಯಾವ ಬಟ್ಟೆ ಹಾಕ್ತಿರಿ? ರೋಟಿ ಮಾಡೋಕೆ ಬರುತ್ತಾ, ಕವನ ಬರಿತೀರಾ ಎಂಬಂಥ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋ ನೋಡಿ, ಅವರು ಕೇಳಿದ ಪ್ರಶ್ನೆಗಳನ್ನು ತಿಳಿಯಲು ಕೆಳಗೆ ಓದಿ.

ವಿಡಿಯೋ ನೊಡಿ

ಸಂದರ್ಶಕ – ಮೋದಿಗೆ: ತಾವು ಏನು ಊಟ-ತಿಂಡಿ ಇಷ್ಟಪಡುತ್ತೀರಿ ಹಾಗೂ ದಿನಕ್ಕೆ ಎಷ್ಟು ಸಲ ಊಟ ಮಾಡುತ್ತೀರಿ?

ರಾಹುಲ್‍ಗೆ: ‘ನ್ಯಾಯ್’ ಯೋಜನೆಯ ಕುರಿತು ನ್ಯೂಸ್ ನೇಶನ್ ಸಂದರ್ಶನದಲ್ಲಿ ಮೋದಿಯವರನ್ನು ಕೇಳಲಾಯಿತು – ‘ರಾಹುಲ್‍ಜೀ ‘ನ್ಯಾಯ್’ ಯೋಜನೆ ಮುಂದಿಟ್ಟಿದ್ದಾರೆ; ಅದರ ಪ್ರಕಾರ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಕ್ಕೆ ಮೋದಿಯವರು, “ನನ್ನ ಬಳಿ ಟ್ರಾಕ್ ರಿಕಾರ್ಡ್ ಇದೆ, ರಾಹುಲ್‍ಜೀ ಬಳಿ ಟೇಪ್ ರೆಕಾರ್ಡರ್ ಇದೆ” ಎಂದರು.

ಮೋದಿಗೆ: ತಾವು ಕ್ಯಾಲರಿ-ಕಾನ್ಶಸ್ ಆಗಿದೀರಾ – ದಿನಕ್ಕೆ ಇಷ್ಟು ಕ್ಯಾಲರಿ ತಿನ್ನಬೇಕು, ಈಗ ಇಷ್ಟು ಕ್ಯಾಲರಿ ತಿಂದುಬಿಟ್ಟಿದೀನಿ, ಸ್ವಲ್ಪ ತಿನ್ನಬೇಕು … ಇತ್ಯಾದಿ?

ರಾಹುಲ್‍ಗೆ: ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಅಥವಾ ಬಿಜೆಪಿಯ ಹೊರತಾಗಿ ಇನ್ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‍ನ ಕಂಟ್ರಾಕ್ಟನ್ನು ಮರು ಪರಿಶೀಲನೆ (ರೀ-ನೆಗೋಶಿಯೇಟ್) ನಡೆಸಲಾಗುವುದಾ?

ಮೋದಿಗೆ: ತಾವು ಏನೇನು ಅಡಿಗೆ ತಯಾರಿಸುತ್ತೀರಿ?
ಮೋದಿ: ಎಲ್ಲವನ್ನೂ ತಯಾರಿಸ್ತೀನಿ …
ಸಂ: ರೊಟ್ಟಿಯನ್ನು ಕೂಡಾ …?
ಮೋ: ಓಹೋ, ಎಲ್ಲವನ್ನೂ ತಯಾರಿಸ್ತೀನಿ.

ಸಂ – ರಾಹುಲ್‍ಗೆ: ಒಂದುವೇಳೆ ಅದರಲ್ಲಿ ರಫೇಲ್‍ನ ಕಂಟ್ರಾಕ್ಟ್‍ನಲ್ಲಿ ತಪ್ಪಾಗಿದೆ ಎಂದಾದಲ್ಲಿ ‘ಅದನ್ನು ರದ್ದುಪಡಿಸಲಾಗುವುದು’ ಅಥವಾ ‘ರೀ-ನೆಗೋಶಿಯೇಟ್ ಮಾಡಲಾಗುವುದು’ ಎಂದು ತಾವೇಕೆ ಓಪನ್ನಾಗಿ ಹೇಳುವುದಿಲ್ಲ? ಯಾಕೆಂದರೆ ಈ ಡೀಲ್‍ನಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನೀವು ತಿಳಿಯುತ್ತೀರಲ್ಲ…

ಮೋದಿಗೆ: ಕಳೆದ ಐದು ವರ್ಷಗಳಲ್ಲಿ ಎಂದಾದರೂ ನೀವು ಅಡಿಗೆಮನೆಗೆ ಹೋಗಲು ಸಾಧ್ಯವಾಗಿದೆಯಾ?
ರಾಹುಲ್‍ಗೆ: ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿರುವಾಗ ತನಿಖೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದಲ್ಲವೆ?

ಮೋದಿಗೆ: ಪ್ರಧಾನ ಮಂತ್ರಿಗಳೆ, ಒಂದು ಬಹಳ ಮಹತ್ವಪೂರ್ಣ ವಿಚಾರ ಏನೆಂದರೆ, ನಿಮ್ಮ ವೇಷಭೂಷಣ ನಿಮಗೆ ಬಹಳ ಒಪ್ಪುತ್ತದೆ (ಸ್ಯೂಟ್ ಆಗುತ್ತದೆ).
ರಾಹುಲ್‍ಗೆ: ರಾಹುಲ್‍ಜೀ, ನಾವು ಪಂಜಾಬಿನಲ್ಲಿದೀವಿ. ಈಚೆಗಷ್ಟೇ ಒಂದು ವಿಚಾರ ಚರ್ಚೆಗೆ ಬಂದಿತ್ತು – 1984ರಲ್ಲಿ ನಡೆದಿದ್ದ ಸಿಖ್ ಗಲಭೆ(ರಯಟ್ಸ್)ಗಳಿಗೆ ಸಂಬಂಧಪಟ್ಟಂತೆ ಸ್ಯಾಮ್ ಪಿತ್ರೋದಾ ಅವರು “ಏನು ಆಗಿದೆಯೋ ಆಗಿದೆ” ಎಂದು ಹೇಳಿದ್ದರು …

ಮೋದಿಗೆ: ಅಂದರೆ ತಾವು ಫ್ಯಾಶನ್ ಬಗ್ಗೆ, ಬಟ್ಟೆಬರೆ ಬಗ್ಗೆಯೂ ಅಷ್ಟೊಂದು ಆಸಕ್ತಿ ಹೊಂದಿದೀರಾ? ಅದರ ಬಗ್ಗೆ ಏನಾದರೂ ಓದುತ್ತೀರಾ? ಯಾವ ಅಕೇಶನ್‍ಗೆ ಎಂತಹ ಉಡುಗೆ ತೊಡಬೇಕು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ರಾಹುಲ್‍ಗೆ: … ಅವು ಸಂಘಟಿತವಾದ ಗಲಭೆಗಳಾಗಿದ್ದವು, ಅವುಗಳಿಗೆ ಕಾಂಗ್ರೆಸ್ ಪಕ್ಷವೇ ಜವಾಬ್ದಾರ ಎಂದು ಬಿಜೆಪಿಯ ಆರೋಪ…

ಮೋದಿಗೆ: ತಾವು ಜೇಬಿನಲ್ಲಿ ಪರ್ಸ್ ಇಟ್ಕೊಳ್ತೀರಾ?
ರಾಹುಲ್‍ಗೆ: … ಅವರು ಹೇಳಿದರು – ಗುಜರಾತಿನಲ್ಲಿ ಕಾಂಗ್ರೆಸ್ಸು ಜಿಎಸ್‍ಟಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆ ಎದುರಿಸಿತು, ಸೂರತ್‍ನಲ್ಲಿ ಅದರ ಬಗ್ಗೆ ಬಹಳ ಪ್ರಚಾರ ಕೂಡ ನಡೆಯಿತು. ಆದರೆ ಸೂರತ್‍ನ ಎಲ್ಲ ಸೀಟುಗಳನ್ನೂ ನಾವೇ ಗೆದ್ದೆವು … ಈಗ ಐದು ವರ್ಷಗಳ ಕೆಲಸಕಾರ್ಯಗಳ ಮೇಲೆ ಚುನಾವಣೆ ನಡೆಯುತ್ತಿದೆ – ಎಂದು.

ಇದಕ್ಕೆ ರಾಹುಲ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೆಂದರೆ, ಪ್ರಧಾನ ಮಂತ್ರಿಯ ಈ ಉತ್ತರ ಇತ್ತಲ್ಲ, ಅದೂ ಸಹ ಅವರಿಗೆ ಕೊಡಲಾಗಿದ್ದ ನೋಟ್‍ಶೀಟ್‍ನಲ್ಲಿತ್ತಾ? ಅವರ ಮುಂದೊಂದು ಕಾಗದ ಇಟ್ಟಿದ್ದಿರಲ್ಲ, ಅದರಲ್ಲಿ ಈ ಉತ್ತರವನ್ನೂ ಬರೆಯಲಾಗಿತ್ತಾ ಅಥವಾ ಬರೆದಿರಲಿಲ್ಲವಾ? ಎಂದು ಹೇಳಿದ್ದಲ್ಲದೇ ನೀವು ಬೇಕಾದರೆ ಇದನ್ನು ಎಡಿಟ್ ಮಾಡಿಕೊಳ್ಳಿ ಎಂದು ಹೇಳಿ ನಗೆ ಹುಟ್ಟಿಸಿದ್ದರು.

ಈ ರೀತಿಯಾಗಿ ಇಂದು ಮೀಡಿಯಾಗಳು ಸಂಪೂರ್ಣ ಮೋದಿಮಯವಾಗಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಬಲು ಅಪಾಯಕಾರಿ. ಇದು ಮಾಧ್ಯಮಗಳ ದಿವಾಳಿತನ, ಮೋದಿಯವರಿಗೆ ಮಾಧ್ಯಮಗಳ ಮೇಲಿರುವ ಭಯವನ್ನು ಸಹ ತೋರಿಸುತ್ತದೆ. ಮೊದಲೇ ಇಂತಹದೇ ಪ್ರಶ್ನೆಗಳನ್ನು ಕೇಳಬೇಕು ಎಂದು ಸ್ಕ್ರಿಪ್ಟ್ ಪ್ರಶ್ನೆಗಳನ್ನು ಬರೆದುಕೊಟ್ಟು ಸಂದರ್ಶನ ನಡೆಸಬೇಕಾದ ದುರ್ಗತಿಗೆ ಇಂತಹ ಚಾನೆಲ್‍ಗಳು ಇಳಿದಿವೆ.
ಕೊನೆಯಲ್ಲಿ ಒಂದು ಮಾತು: ಮೋದಿಯ ಸಂದರ್ಶನಕ್ಕೆ ಜೊತೆಯಲ್ಲಿ ಒಬ್ಬ ‘ಮಾಡ್’ ಮಹಿಳೆಯನ್ನು ಕರೆದೊಯ್ದಿದ್ದ ಚೌರಾಸಿಯ, ರಾಹುಲ್ ಸಂದರ್ಶನಕ್ಕೆ ಜೊತೆಗೊಬ್ಬ ಪುರುಷನನ್ನು ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಅಸಮಾನತೆ ಮಾಡಿದ್ದಾರೆ ನೋಡಿ.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...