Homeಕರ್ನಾಟಕಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್‌ಬುಕ್ ಪೋಸ್ಟ್!

ಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್‌ಬುಕ್ ಪೋಸ್ಟ್!

ಫೇಸ್‌ಬುಕ್, ಟ್ವಿಟರ್‌ ಕೇವಲ ಮತ್ತೊಬ್ಬರನ್ನು ಟೀಕೆ ಮಾಡಲು, ಲೈಕ್, ಕಾಮೆಂಟ್‌ಗಳನ್ನು ಮಾಡಲು ಮಾತ್ರವಲ್ಲದೆ, ಈ ರೀತಿಯ ಜನಪರ ಕಾರ್ಯಗಳಿಗೂ ಬಳಕೆಯಾಗಲಿ ಎಂಬುದು ಹಲವರ ಅಭಿಮತ.

- Advertisement -
- Advertisement -

ಕೆಲವೊಮ್ಮೆ ನಾವು ರಸ್ತೆಯಲ್ಲಿ ಓಡಾಡುವಾಗ ರಸ್ತೆ ಬದಿಗೆ ಹರಿಸುವ ಒಂದು ಸಣ್ಣ ಗಮನ ಕೆಲವೊಬ್ಬರ ಜೀವನದಲ್ಲಿ ಭಾರಿ ಬದಲಾವಣೆ ತರಬಹುದು. ಇದಕ್ಕೆ ಉದಾಹರಣೆಯಾಗಿ ರಸ್ತೆಬದಿಯಲ್ಲಿ, ಬಿಸಿಲಿನಲ್ಲಿ, ಇಳಿವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ವೃದ್ಧರನ್ನು ಗಮನಿಸಿ ಬರೆದ ಫೇಸ್‌ಬುಕ್‌ ಪೋಸ್ಟ್ ಆವರ ಬದುಕನ್ನು ಬದಲಾಯಿಸಿದೆ.

ಹೌದು, ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಒಬ್ಬ ಅಜ್ಜ ಚಿಕ್ಕ ಚಿಕ್ಕ ಪ್ಯಾಕೇಟ್‌ಗಳಲ್ಲಿ ಗಿಡಗಳನ್ನು ಮಾರುತ್ತಿರುತ್ತಾರೆ. ಇವರು ಮಾರುವುದು ಎಲ್ಲಾ ಔಷಧಿಯ ಸಸ್ಯಗಳು ಎಂಬುದು ಗಮನಾರ್ಹ. ಆದರೆ ರಸ್ತೆಯಲ್ಲಿ ಓಡಾಡುವವರು ಇತ್ತ ಕಡೆ ಗಮನ ಇವರೆಡೆಗೆ ಹರಿಸುತ್ತಿದ್ದುದ್ದು ತುಂಬಾ ಕಡಿಮೆ.

ಈಗಿರುವಾಗ ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಗಿಡ ಮಾರುವ ಅಜ್ಜ, ಫೇಸ್‌ಬುಕ್ ಬಳಕೆದಾರ ಶಿವರಾಜ್ ಬಾಬು ಎಂಬುವರ ಕಣ್ಣಿಗೆ ಬಿದ್ದಿದ್ದಾರೆ. ಅಜ್ಜನ ಕುರಿತು 2 ಚಿತ್ರಗಳ ಜೊತೆಗೆ, ಸಹಾಯ ಮಾಡುವಂತೆ ಒಂದು ಮನವಿ ಪೋಸ್ಟ್ ಹಾಕಿದ್ದರು. ಅಜ್ಜನ ಬಳಿ ಇರುವ ಗಿಡಗಳ ಕುರಿತು, ರಸ್ತೆಯಲ್ಲಿ ಓಡಾಡುವಾಗ ಗಿಡ ತೆಗೆದುಕೊಂಡು ಸಹಾಯ ಮಾಡಿ ಎಂದಿದ್ದರು.

“ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಕೂತಿರುವ ಈ  ವೃದ್ಧನ ಹೆಸರು    ರೇವಣ್ಣಸಿದ್ದಪ್ಪ. ಈ ವಯಸ್ಸಿನಲ್ಲೂ ಭಿಕ್ಷೆ ಬೇಡದೆ ದುಡಿಯುವ ಹುಮ್ಮಸ್ಸು. ಇತನ ಬಳಿ ಇರುವುದು ಔಷಧಿ ಗಿಡಗಳು ಹಾಗೂ ವಿವಿಧ  ರೀತಿಯ ಗಿಡಗಳು. ದೊಡ್ಡ ಪತ್ರೆ, ಅಲೋವೆರಾ, ಕಾಮ ಸಂಜೀವಿನಿ, ಬ್ರಹ್ಮ ಕಮಲ  ಇತ್ಯಾದಿ ಗಿಡಗಳು. ಈ ರಸ್ತೆಯ ಬಳಿ ನೀವು ಹೋಗುವಾಗ ದಯವಿಟ್ಟು ಈ ವೃದ್ಧರ ಬಳಿ ಇರುವ ಗಿಡಗಳನ್ನು ತೆಗೆದುಕೊಂಡು ಹೋಗಿ ಈತನಿಗೆ ಸಹಾಯ ಮಾಡಿ. ಕೇವಲ 10 ರಿಂದ 30 ರೂಪಾಯಿ ಮಾತ್ರ” ಎಂದು ಫೋಸ್ಟ್ ಶೇರ್‌ ಮಾಡಿದ್ದರು.

ಫೇಸ್‌ಬುಕ್ ವೃದ್ಧರಿಗೆ ಸಹಾಯ
PC: screenshot@Shivaraj Babu

ಜೊತೆಗೆ “ನಂಬಿಕಸ್ತರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು ಚಿಂತಿಸಬೇಕಾಗಿಲ್ಲ!!!  ಏಕೆಂದರೆ  ಇತಿಹಾಸದಲ್ಲಿ ಉಳಿದಿರುವುದು ಪ್ರಾಮಾಣಿಕರೆ ಹೊರತು ಮೋಸಗಾರರಲ್ಲ!!!” ಎಂದು ಶೀರ್ಷಿಕೆ ಕೂಡ ನೀಡಿದ್ದರು. ಈ ಪೋಸ್ಟ್ ಎರಡು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಇದರ ಪ್ರತಿಫಲ ಇಂದು ಅಜ್ಜನ ಸ್ವಂತ ಪುಟ್ಟ ಅಂಗಡಿ ಆರಂಭವಾಗಿದೆ.

ಫೇಸ್‌ಬುಕ್‌ನಲ್ಲಿ ವಿಷಯ ತಿಳಿದ ಅನೇಕ ಮಂದಿ ವೃದ್ಧರ ಸಹಾಯಕ್ಕೆ ಮುಂದಾಗಿದ್ದಾರೆ. ನೆರಳಿಗಾಗಿ ಒಬ್ಬರು ದೊಡ್ಡ ಛತ್ರಿ ಒದಗಿಸಿದರೇ, ಇನ್ನೋಬ್ಬರು ಕುಳಿತುಕೊಳ್ಳು ಚೇರ್, ಗಿಡಗಳನ್ನು ಇಟ್ಟುಕೊಳ್ಳಲು ಟೇಬಲ್ ಹೀಗೆ ಅಜ್ಜನ ಹೊಸ ಪುಟ್ಟ ಅಂಗಡಿ ನಿರ್ಮಾಣವಾಗಿದೆ.

ನಟಿ, ಸಾಮಾಜಿಕ ಕಾರ್ಯಕರ್ತೆ ಸಂಯುಕ್ತ ಹೊರನಾಡು ತಮ್ಮ Change Makers of Kanakapura Road ತಂಡದ ಜತೆಗೂಡಿ ಆ ಅಜ್ಜನಿಗೆ ಒಂದು ಕೆನೊಪಿ, ಟೇಬಲ್ ಮತ್ತಿತರ ವಸ್ತುಗಳನ್ನು ಒದಗಿಸಿದ್ದಷ್ಟೇ ಅಲ್ಲದೇ  ಸಂಯುಕ್ತ ಅವರು ಒಂದಷ್ಟು ಗಿಡಗಳನ್ನು ಖರೀದಿಸಿದ್ದಾರೆ. ನಾವು ಅಶ್ವಿನಿ ಎಂಬುವರ ಟ್ವೀಟ್ ಗಮನಿಸಿ ಸಹಾಯಕ್ಕೆ ಬಂದಿದ್ದಾಗಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

PC: screenshot@Samyukta Hornad

ಸದ್ಯ ಅಜ್ಜ ಖುಷಿಯಲ್ಲಿದ್ದಾರೆ. ವೃದ್ಧರ ಬಗ್ಗೆ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಶಿವರಾಜ್ ಬಾಬು ಪೋಸ್ಟ್ ಶೇರ್ ಮಾಡಿ, ಅಜ್ಜನಿಗೆ ಸಹಾಯ ಮಾಡಿದ ಎಲ್ಲಾ ಬೆಂಗಳೂರು ಜನತೆಗೆ ಧನ್ಯವಾದ ಎಂದಿದ್ದಾರೆ.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

“ಧನ್ಯವಾದ ಬೆಂಗಳೂರು…. ವೃದ್ದನಿಗೆ ಸಹಾಯ ಮಾಡಿದ ಪ್ರತಿಯೊಬ್ಬ ರಿಗೂ ಧನ್ಯವಾದಗಳು.. ಶೇರ್ ಮಾಡಿ. ಈ ವಿಷಯವನ್ನು ನಮ್ಮ ಬೆಂಗಳೂರು ಜನತೆಗೆ ತಲುಪಿಸಿ ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದಿದ್ದಾರೆ.

Shivaraj Babu
PC: screenshot@Shivaraj Babu

ಇಂತಹ ಪುಟ್ಟ ಪುಟ್ಟ ಪ್ರಯತ್ನಗಳು ಸಾಕು ನಮ್ಮ ನಡುವೆ ಇರುವ ಎಷ್ಟೋ ಜೀವಗಳಿಗೆ ಸಹಾಯ ಮಾಡಲು ಎನ್ನುತ್ತಾರೆ ನೆಟ್ಟಿಗರು. ನಮ್ಮೊಳಗೆ ಒಂದು ಮನಸ್ಸಿದ್ದರೇ, ಇನ್ನೊಬ್ಬರ ನೋವಿಗೆ ಆಸರೆಯಾಗುವ ಕೊಂಚ ಸಹನೆಯಿದ್ದರೇ ಸಾಕು, ನಾವು ದಾರಿಯಲ್ಲಿ ನೋಡುವ ಒಂದು ಚಿಕ್ಕ ಚಿತ್ರಪಟ ಕೂಡ ಮತ್ತೊಂದು ಆಯಾಮವನ್ನು ಸೃಷ್ಟಿಸುತ್ತದೆ.

ಫೇಸ್‌ಬುಕ್, ಟ್ವಿಟರ್‌ ಕೇವಲ ಮತ್ತೊಬ್ಬರನ್ನು ಟೀಕೆ ಮಾಡಲು, ಲೈಕ್, ಕಾಮೆಂಟ್‌ಗಳನ್ನು ಮಾಡಲು ಮಾತ್ರವಲ್ಲ ಈ ರೀತಿಯ ಜನಪರ ಕಾರ್ಯಗಳಿಗೂ ಬಳಕೆಯಾಗಲಿ ಎನ್ನುವುದೇ ವೃದ್ಧರಿಗೆ ಸಹಾಯ ಮಾಡಿದವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಮಹಿಳೆಯರು ಕೆಲಸಕ್ಕೆ ಹೋಗಿದ್ದರಿಂದ METOO ಆರಂಭ: ಮುಖೇಶ್ ಖನ್ನಾ ಹೇಳಿಕೆಗೆ ತೀವ್ರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...