Homeಮುಖಪುಟಮೊದಲ ದಲಿತ ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ

ಮೊದಲ ದಲಿತ ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ

- Advertisement -
- Advertisement -

ಇಂದು ಮಲಯಾಳಂ ಸಿನಿಮಾದ ಮೊದಲ ನಟಿ ಪಿಕೆ ರೋಸಿಯವರ 120ನೇ ಜನ್ಮದಿನವನ್ನು ಗೌರವಿಸುವುದಕ್ಕಾಗಿ ಗೂಗಲ್‌ ತನ್ನ‌ ಡೂಡಲ್ ಗೌರವ ಸೂಚಿಸಿದೆ

ಭಾರತೀಯ ಸಿನಿಮಾ ಚರಿತ್ರೆ ಅಷ್ಟಾಗಿ ಗುರುತಿಸಿಲ್ಲದ ಪಿ‌ಕೆ ರೋಸಿ ಕೇವಲ ಮೊದಲ ಮಲಯಾಳಿ ನಟಿ ಮಾತ್ರವಲ್ಲ, ಮೊದಲ ದಲಿತ ಸಮುದಾಯದ ನಟಿ ಕೂಡ ಎನ್ನುವುದು ಗಮನಿಸಬೇಕಾದ ವಿಷಯ. ಕೇವಲ ದಲಿತ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಸಿನಿಮಾರಂಗವನ್ನು, ಅಷ್ಟೇಕೆ ತಾನು ಹುಟ್ಟಿ ಬೆಳೆದ ತನ್ನ ಸ್ವಂತ ನೆಲವನ್ನು ಸಹ ಬಿಟ್ಟು ಬದುಕಬೇಕಾಯಿತು.

1903ನೇ ಇಸವಿಯ ಫೆಬ್ರವರಿ 10ರಂದು ಕೇರಳದ ಪುಲಯ ಸಮುದಾಯದ ನಂಡನ್ ಕೊಡಿಲ್ ಪೌಲೋಸ್ ಮತ್ತು ಕುಂಜಿ ದಂಪತಿಗಳ ಮಗಳಾಗಿ ಪಿಕೆ ರೋಸಿ ಜನಿಸಿದರು‌. ದಲಿತ ಅಸ್ಪೃಶ್ಯ ಪುಲಯ ಸಮುದಾಯದ ರೋಸಿ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ಬಡತನದಲ್ಲಿ ಬದುಕಿದ ರೋಸಿ ಕೃಷಿ ಕೂಲಿಯಾಗಿದ್ದವರು. ಅಭಿನಯದ ಕಡೆ ಆಸಕ್ತಿಯಿದ್ದುದರಿಂದಾಗಿ ಬದುಕು ಕಟ್ಟಿಕೊಳ್ಳಲು ರಂಗಭೂಮಿಯತ್ತ ಆಕರ್ಷಿತರಾಗಿ ಒಂದು ರಂಗತಂಡವನ್ನು ಸೇರಿಕೊಂಡರು. ಆ ಕಾಲದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುವುದು ಅಗೌರವದ ನಡೆಯಾಗಿತ್ತು, ರಂಗನಟಿಯರನ್ನು ಕೀಳಾಗಿ ನೋಡಲಾಗುತ್ತಿತ್ತು. ಸಮಾಜ ಎಷ್ಟೇ ಅಪಮಾನದಿಂದ ನೋಡಿದರು ಅಭಿನಯದ ಕುರಿತ ತಮ್ಮ ಪ್ರೀತಿಯಿಂದಾಗಿ ರೋಸಿ ರಂಗಭೂಮಿಯನ್ನು ತ್ಯಜಿಸಲಿಲ್ಲ.

ಆಗ ಮಲಯಾಳಂ ಸಿನಿಮಾದ ಪ್ರವರ್ತಕ ನಿರ್ದೇಶಕರಲ್ಲೊಬ್ಬರಾಗಿದ್ದ ಜೆಸಿ ಡೇನಿಯಲ್ ತಾವು ತಯಾರಿಸಬೇಕೆಂದುಕೊಂಡಿದ್ದ ‘ವಿಗಟಕುಮಾರನ್’ ಎನ್ನುವ ಮೂಕಿ ಸಿನಿಮಾಕ್ಕೆ ರೋಸಿಯವರನ್ನು ನಾಯಕನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ದಲಿತ ಸಮುದಾಯದ ರೋಸಿಯವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿದ್ದನ್ನು ಸಂಪ್ರದಾಯಸ್ಥ ಜಾತಿವಾದಿಗಳು ಖಂಡಿಸುತ್ತಾರೆ. ಸಿನಿಮಾರಂಗ ಯಾವತ್ತೂ ಮೇಲ್ಜಾತಿಗಳ ಹಿಡಿತದಲ್ಲೇ ಇರುವುದರಿಂದ ಡೇನಿಯಲ್‌ರಿಗೆ ಈ ಸಿನಿಮಾ ಮುಗಿಸುವುದು ಬಹಳ ಕಷ್ಟವಾಗುತ್ತದೆ. ಕೆಲವು ಮೇಲ್ಜಾತಿಯ ತಂತ್ರಜ್ಞರು ಸಿನಿಮಾದಿಂದ ಹೊರನಡೆಯುತ್ತಾರೆ. ಅನೇಕ ಸವಾಲುಗಳ ನಡುವೆ ಸಿನಿಮಾ ಮುಗಿಸುವ ಡೇನಿಯಲ್ ಸಿನಿಮಾವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಂದು ಘಟನೆ ಎದುರಾಗುತ್ತದೆ.

ಸಿನಿಮಾ‌ ಬಿಡುಗಡೆಗೆ ಮುಂಚೆ ಸಿನಿಮಾದ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಇಡೀ ಮಲಯಾಳಂ ಸಿನಿಮಾರಂಗ ಈ ಸಿನಿಮಾದ ವಿರುದ್ಧ ನಿಲ್ಲುತ್ತದೆ. ಡೇನಿಯಲ್‌ರ ಸತತ ಪ್ರಯತ್ನದಿಂದಾಗಿ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಅಸ್ಪೃಶ್ಯ ಮಹಿಳೆಯ ಜೊತೆಗೆ ಕೂತು ಸಿನಿಮಾ ನೋಡಲು ನಿರಾಕರಿಸುವ ಸಿನಿಮಾ ಮಂದಿ ಚಿತ್ರ ಪ್ರದರ್ಶನಕ್ಕೆ ರೋಸಿ ಬರಬಾರದು ಎನ್ನುವ ಷರತ್ತನ್ನು ವಿಧಿಸುತ್ತಾರೆ. ತಾವು ನಟಿಸಿದ ಸಿನಿಮಾದ ಪ್ರದರ್ಶನಕ್ಕೆ ತಾವೇ ಹೋಗಲಾಗದ ಕಾರಣಕ್ಕೆ ಚಿತ್ರಮಂದಿರದ ಹೊರಗೆ ಕಾಯಬೇಕಾದ ಪರಿಸ್ಥಿತಿ ರೋಸಿಯವರಿಗೆ ಬರುತ್ತದೆ.

ಇದನ್ನೂ ಓದಿ: ‘ಪ್ಯಾನ್‌ ಇಂಡಿಯಾ’ ಆಚೆಗಿನ ಚಿತ್ರ ಜಗತ್ತು: 2022ರಲ್ಲಿ ತೆರೆಕಂಡ ಹತ್ತು ಸದಭಿರುಚಿಯ ಸಿನಿಮಾಗಳು

ಚಿತ್ರ ಶುರುವಾದ ಮೇಲೆ ಚಿತ್ರಮಂದಿರದಲ್ಲಿ ಗದ್ದಲವಾಗುತ್ತದೆ. ಕಾರಣ ರೋಸಿ ನಟಿಸಿದ್ದ ಪಾತ್ರ ನಾಯರ್ ಸಮುದಾಯದ ಹೆಣ್ಣಿನ ಪಾತ್ರ‌. ಚಿತ್ರದ ಒಂದು ದೃಶ್ಯದಲ್ಲಿ ಮಲ್ಲಿಗೆ ಹೂವನ್ನು ಮುಡಿದಿರುವ ನಾಯಕಿಯ ಹತ್ತಿರಕ್ಕೆ ಬರುವ ನಾಯಕ ಆಕೆಯ ಮುಡಿಯಲ್ಲಿರುವ ಮಲ್ಲಿಗೆ ಹೂವನ್ನು ಮೂಸಿ ಸಂಭ್ರಮಿಸುತ್ತಾನೆ. ಅಸ್ಪೃಶ್ಯ ದಲಿತ ಸಮುದಾಯದ ಹೆಣ್ಣೊಬ್ಬಳು ನಾಯರ್ ಮಹಿಳೆಯ ಪಾತ್ರ ಮಾಡಿದ್ದಲ್ಲದೆ, ಮೇಲ್ಜಾತಿಯ ಪಾತ್ರವೊಂದು ಆಕೆಯನ್ನು ಕಾಮಿಸುವಂತೆ ಚಿತ್ರಿಸಿದ ಕಾರಣಕ್ಕೆ ಜನ ಸಿಟ್ಟಿಗೆದ್ದು ನಿರ್ದೇಶಕ ಡೇನಿಯಲ್‌ರ ಮೇಲೆ ಹಲ್ಲೆ ಮಾಡುತ್ತಾರೆ. ರೋಸಿಯವರನ್ನು ಹುಡುಕಿಕೊಂಡು ಹೋದ ಹಲ್ಲೆಕೋರರು ಆಕೆಯ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ತಮ್ಮ ಜೀವ ಉಳಿಸಿಕೊಳ್ಳಲು ದಾರಿಯಲ್ಲಿ ಸಿಕ್ಕ ಲಾರಿಯನ್ನು ಹತ್ತಿಕೊಂಡು ಆವತ್ತು ತ್ರಿವೆಂಡ್ರಂ ಅನ್ನು ಬಿಟ್ಟು ಹೋದ ರೋಸಿ ಕೊನೆಯವರೆಗೂ ತಮ್ಮ ಊರಿಗೆ ಮರಳಲೇ‌ ಇಲ್ಲ. ರೋಸಿ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿದ್ದಕ್ಕಾಗಿ ಚಿತ್ರದ ನಿರ್ಮಾಪಕ ಡೇನಿಯಲ್ ದಿವಾಳಿಯಾಗುತ್ತಾರೆ. ಮಲಯಾಳಂ ಸಿನಿಮಾರಂಗಕ್ಕೆ ರೋಸಿಯವರ ಮೇಲೆ ಎಷ್ಟು ಸಿಟ್ಟಿರುತ್ತದೆ ಎಂದರೆ ಅವರ ಕೊನೆಗಾಲದವರೆಗೂ ತಮ್ಮ ಐಡೆಂಟಿಟಿಯನ್ನು ಮುಚ್ಚಿಟ್ಟೆ ಬದುಕುತ್ತಾರೆ. ತಾವು ನಟಿ ಎನ್ನುವುದನ್ನು ಹೇಳಿಕೊಳ್ಳಲಾಗದೆ ಜೀವಮಾನವಿಡಿ ನರಳುತ್ತಾರೆ.

ದಲಿತರು ಇವತ್ತಿಗೂ ಸಿನಿಮಾರಂಗದಲ್ಲಿ survive ಆಗಬೇಕಾದರೆ ತಮ್ಮ ಐಡೆಂಟಿಟಿಯನ್ನು ಅಡಗಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ದಲಿತರ ಈ Invisibilityಗೆ ಮೊದಲ ಸಂಕೇತವಾಗಿ ಪಿಕೆ ರೋಸಿಯವರು ಇತಿಹಾಸದಲ್ಲಿ ಉಳಿದಿದ್ದಾರೆ.

ಭಾರತೀಯ ಸಿನಿಮಾರಂಗದ ಆರಂಭದ ದಿನಗಳಲ್ಲೆ ರೋಸಿಯವರು ಸಿನಿಮಾರಂಗವನ್ನು ಪ್ರವೇಶಿಸಿದರೂ ತಮ್ಮ ಜಾತಿಯ ಕಾರಣಕ್ಕೆ ಶಾಶ್ವತವಾಗಿ ಅಂಚಿಗೆ ತಳ್ಳಲ್ಪಟ್ಟರು. ಅವರ ಬದುಕನ್ನು, ಭಾರತೀಯ ಸಿನಿಮಾದಲ್ಲಿ ದಲಿತರ ಬದುಕಿನ ಆರಂಭದ ಬಿಂದು ಎಂದು ‘Dalit Cinema in India’ ಎನ್ನುವ ತಮ್ಮ ಲೇಖನದಲ್ಲಿ ದಲಿತ ಸಮುದಾಯದ ಮಾರ್ಗಪ್ರವರ್ತಕ ಲೇಖಕ ಪ ರಂಜಿತ್ ದಾಖಲಿಸುತ್ತಾರೆ. ಅಲ್ಲದೆ ತಮ್ಮ Neelam Cultural Centerನ ಮೂಲಕ ಪ್ರತಿವರ್ಷ ಆಚರಿಸುವ Dalit History Monthನ ಭಾಗವಾಗಿ ಕಳೆದ ವರ್ಷ ಪಿಕೆ ರೋಸಿಯವರ ನೆನಪಿನಲ್ಲಿ ದಲಿತ ಸಿನಿಮಾ ಹಬ್ಬವನ್ನು ಆಯೋಜಿಸುವ ಮೂಲಕ ಗೌರವಿಸಿದ್ದರು.

ಇವತ್ತು ನಾಗರಾಜ್ ಮಂಜುಳೆ, ಪ ರಂಜಿತ್, ಮಾರಿ ಸೆಲ್ವರಾಜ್, ನೀರಜ್ ಗಾಯ್‌ವಾನ್ ಮುಂತಾದವರು ತಮ್ಮ ಸಿನಿಮಾಗಳ ಮೂಲಕ ದಲಿತ ಸಂವೇದನೆಯನ್ನು ಭಾರತೀಯ ಸಿನಿಮಾರಂಗದಲ್ಲಿ ಮೂಡಿಸಿದ್ದಾರೆ. ದಲಿತ ಸಿನಿಮಾ ಎನ್ನುವುದು ಮುಖ್ಯವಾಹಿನಿಯ ಸಿನಿಮಾ ಆಗಬಹುದು, ದಲಿತರ ವಸ್ತುವನ್ನಿಟ್ಟುಕೊಂಡ ಸಿನಿಮಾಗಳಲ್ಲಿ ರಜನಿಕಾಂತ್ ತರದ ಸ್ಟಾರ್ ನಟರು ಕೂಡ ನಟಿಸಬಹುದು ಅನ್ನುವಷ್ಟರ ಮಟ್ಟಿಗೆ ಮಾನ್ಯತೆ, ಯಶಸ್ಸು ದಲಿತ ಸಿನಿಮಾಗಳಿಗೆ ಸಿಕ್ಕಿದೆ. ಆದರೆ ದಲಿತ ವಸ್ತುಗಳನ್ನು ಇಟ್ಟುಕೊಂಡು ದಲಿತ ನಿರ್ದೇಶಕರೇ ಮಾಡುವ ಸಿನಿಮಾಗಳಲ್ಲಿ ಸ್ತ್ರೀಪಾತ್ರಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ದಲಿತ ಮಹಿಳೆಯರ‌ ಪ್ರಾತಿನಿಧ್ಯದ ಪ್ರಶ್ನೆಯನ್ನು ದಲಿತ ಮಹಿಳೆಯರು ಬಹಳ ಗಂಭೀರವಾಗಿ ಎತ್ತಿದ್ದಾರೆ.

ಪ ರಂಜಿತ್ ತರದ ಮಾರ್ಗ ಪ್ರವರ್ತಕ ಸಿನಿಮಾ‌ ನಿರ್ದೇಶಕರ ಸಿನಿಮಾಗಳಲ್ಲಿಯೂ ಕೂಡ ದಲಿತ ಮಹಿಳೆಯರ ಪಾತ್ರಗಳನ್ನು ಮೇಲ್ಜಾತಿಗಳಿಂದ ಬಂದ, ಶ್ವೇತವರ್ಣದ ನಟಿಯರೇ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆ ಪಾತ್ರಗಳ ಜೊತೆಗೆ ನಮ್ಮನ್ನು ಸಮೀಕರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಿಮರ್ಶೆಯನ್ನು ಕಿರುಬ ಮುನಿಸ್ವಾಮಿ ತರದ ಹೊಸತಲೆಮಾರಿನ ಚಿಂತಕಿಯರು ಎತ್ತಿದ್ದಾರೆ. ದಲಿತ ವಸ್ತುವಿನ ಸಿನಿಮಾಗಳು authentic ಅನ್ನಿಸಿಕೊಳ್ಳಬೇಕಾದರೆ ದಲಿತ ನಿರ್ದೇಶಕರೇ ಬರಬೇಕಾಯಿತು. ಇದೇ ರೀತಿ ದಲಿತ ಹೆಣ್ಣುಮಕ್ಕಳೆ ದಲಿತ ಪಾತ್ರಗಳನ್ನು ನಿರ್ವಹಿಸುವ ಕಾಲ ಬೇಗ ಬರಲಿ ಎಂದು ಆಶಿಸಬೇಕಾಗುತ್ತದೆ.

ನೂರು ವರ್ಷಕ್ಕೂ ಮೀರಿ ಸಿನಿಮಾ‌‌ ಇತಿಹಾಸವಿರುವ ದೇಶದಲ್ಲಿ ದಲಿತ ಮಹಿಳೆಯರು ಇವತ್ತಿಗೂ ಸಿನಿಮಾ ರಂಗದಲ್ಲಿ ಅದೃಶ್ಯರಾಗಿಯೇ ಉಳಿದಿರುವಾಗ ಪಿಕೆ ರೋಸಿಯವರು ಶತಮಾನದ ಹಿಂದೆಯೇ ಚಿತ್ರರಂಗಕ್ಕೆ ಬಂದು ಜಾತಿವ್ಯವಸ್ಥೆಗೆ ಸವಾಲು ಹಾಕ್ಕಿದ್ದು ಆ ಕಾರಣಕ್ಕಾಗಿಯೇ ತಮ್ಮ ಜೀವಮಾನದುದ್ದಕ್ಕೂ ಅಜ್ಞಾತವಾಗಿಯೇ ಉಳಿದಿದ್ದು ಯಾವತ್ತೂ ದಲಿತ ಸಮುದಾಯ ಮರೆಯಬಾರದ ವಿಷಯ.

ತಾವು ಅದೃಶ್ಯರಾದರೂ ಒಂದು ಮಾದರಿಯಾಗಿ ಇತಿಹಾಸದಲ್ಲಿ ಉಳಿದುಹೋಗಿರುವ ಪಿಕೆ ರೋಸಿಯವರಿಗೆ ಅವರ ನೂರಾ ಇಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜೈ ಭೀಮ್.

ಕೃಪೆ: ಈ ದಿನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...