Homeಕರ್ನಾಟಕಸಮಾಜದಿಂದ ಕಡೆಗಣಿಸಲ್ಪಟ್ಟ ಸೋಲಿಗ ಸಮುದಾಯದ ಕಥನ 'ಗೊರುಕನ 1974' ನೋಡಿ

ಸಮಾಜದಿಂದ ಕಡೆಗಣಿಸಲ್ಪಟ್ಟ ಸೋಲಿಗ ಸಮುದಾಯದ ಕಥನ ‘ಗೊರುಕನ 1974’ ನೋಡಿ

ಆಧುನಿಕತೆಯ ಓಟವೆಬ್ಬಿಸುವ ಧೂಳಿನಲ್ಲಿ ಗುರುತಿಸಲೂ ಸಿಗದೇ ಕಣ್ಮರೆಯಾಗಿರುವ ಮುಗ್ದ ಪ್ರಪಂಚವೇ ಸೋಲಿಗ ಆದಿವಾಸಿ ಬುಡಕಟ್ಟು ಸಮುದಾಯ.

- Advertisement -
- Advertisement -

ನಮ್ಮೊಳಗೇ ಇರುವ ಅಭಿವೃದ್ಧಿ ಎಂಬ ಭ್ರಮೆ ಅಥವಾ ಪರಿಕಲ್ಪನೆಯನ್ನು ಅರ್ಥಹೀನಗೊಳಿಸಿದರ ಫಲವಾಗಿಯೇ ನಾವು ವಿನಾಶದ ಅಂಚಿಗೆ ತಲುಪಿದ್ದೇವೆ. ಈ ನಮ್ಮ ಜೀವ ಜಗತ್ತು ಆಧುನಿಕತೆಯ ಓಟದಲ್ಲಿ ಸ್ಪರ್ಧೆಗಿಳಿಯುತ್ತಿರುವ ನಾವು ಜೀವಸೆಲೆಯನ್ನು ಕಳಕೊಂಡು ಯಾಂತ್ರಿಕವಾಗುತ್ತಿದ್ದೇವೆ. ಸಂವೇದನೆಗಳನ್ನೇ ಕಳೆದುಕೊಂಡ ಮೆಷಿನ್ ಗಳಾಗುತ್ತಿದ್ದೇವೆ. ಇಡೀ ಮಾನವ ಕುಲವೇ ಒಬ್ಬರೊಬ್ಬರ ಕೈಹಿಡಿದು ಜತೆ ಜತೆಯಾಗಿ ವಿಶ್ವಪಥದಲ್ಲಿ ಸಾಗುವುದನ್ನು ಮರೆತಿದ್ದೇವೆ. ತಂತ್ರಜ್ಞಾನ ಬಳಸಿ ನಾವು ಜಗತ್ತಿನ ಮೂಲೆ ಮೂಲೆಗಳನ್ನು ತಲುಪುತ್ತಿದ್ದೇವೆಯೇ ಹೊರತು ಹೃದಯಗಳನ್ನು, ಮನಸ್ಸುಗಳನ್ನು ತಲುಪುತ್ತಿಲ್ಲ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕುಂಟು. ಇದಕ್ಕೆ ಯಾವುದೇ ಕಾನೂನಿನ ತೊಡಕುಗಳೂ ಆಗಬಾರದು. ಆದರೆ ನಾವೇ ಕಟ್ಟಿಕೊಂಡ ವ್ಯವಸ್ಥೆ ನಮ್ಮವರನ್ನೇ ಅಂತ್ಯ ಕಾಣಿಸಹೊರಟಿರುವುದು ದುರಂತದ ಪರಮಾವಧಿ..‌

ಇಷ್ಟೆಲ್ಲಾ ಪೀಠಿಕೆಗೆ ಕಾರಣ…? ತಮ್ಮ ತಪ್ಪಿಲ್ಲದ, ತಮ್ಮ ಅರಿವಿನ ಪರಿದಿಗೇ ಬಾರದ ಕಾನೂನಿನ ಬಲೆಯಲ್ಲಿ ಬಲಿಯಾಗಿ, ನಮ್ಮ ಆಧುನಿಕತೆಯ ಓಟವೆಬ್ಬಿಸುವ ಧೂಳಿನಲ್ಲಿ ಗುರುತಿಸಲೂ ಸಿಗದೇ ಕಣ್ಮರೆಯಾಗಿರುವ ಮುಗ್ದ ಪ್ರಪಂಚವೇ ಸೋಲಿಗ ಆದಿವಾಸಿ ಬುಡಕಟ್ಟು ಸಮುದಾಯ.

ಕೆ ಟಿ ವಿಜಯ್ ಕುಮರ್

ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಕಾಡುಗಳಲ್ಲಿ ಪರಂಪರಾನುಗತವಾಗಿ ವಾಸಿಸುತ್ತಾ, ಕಾಡಲ್ಲಿ ಕಾಡಾಗಿ ಬೆರೆತು ಕಾಡಿನ ಭಾಗವಾಗಿಯೇ ಆಗಿಹೋಗಿದ್ದ ಈ ಸಮುದಾಯದ ಸಂಸ್ಕೃತಿಯೇ ಪ್ರಕೃತಿಯ ಆರಾಧನೆ. ಬದುಕಿನ ಪ್ರತಿಕ್ಷಣದಲ್ಲೂ ಹಸಿರನ್ನು ಉಸಿರಾಗಿಸಿಕೊಂಡು ಜೀವಿಸುತ್ತಿದ್ದ ಈ ಸಮುದಾಯವು ಸರ್ಕಾರದ ಅಂಧಾ ಕಾನೂನೊಂದರ ಅನ್ವಯ ಕಾಡಿನ ಅಂಚಿಗೆ ದೂಡಲ್ವಡುತ್ತಾರೆ!? ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದ ಸೋಲಿಗರ ನೆಮ್ಮದಿಯನ್ನು ಕೆಡಿಸಿ, ತಮ್ಮ ಕಾಡಲ್ಲಿ ತಮಗೇ ಉಳಿಯುವ ಹಕ್ಕು ಮತ್ತು ಸ್ವಾತಂತ್ರವಿಲ್ಲದಂತೆ ಮಾಡಿ ಮುಂದೆಂದೂ ಕಾಡಿಗೆ ಪ್ರವೇಶಿಸದಂತೆ ಸರ್ಕಾರ ನಿಷೇಧ ಹೇರಿತು. ಈ ನಿಷೇಧ ಸೋಲಿಗರ ಬದುಕನ್ನೇ ನಾಶವಾಗಿಸಿತು, ಅವರ ಸ್ವಚ್ಚಂದ ಜೀವನಾದಾರವನ್ನೇ ಕಸಿಯಿತು. ಬದುಕಲು ಬೇಕಾದ ಮೂಲಭೂತ ಅಗತ್ಯತೆಗಳನ್ನೇ ಸರ್ಕಾರ ಪೂರೈಸದೇ ಹೋದದ್ದು, ಕೊಳ್ಳುಬಾಕರ ಕಾಲಡಿಯಲ್ಲಿ ಸಿಲುಕಿ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲಾಗದೆ ಅತಂತ್ರಗೊಂಡ ಸೋಲಿಗರು ಶೋಚನೀಯ ಸ್ಥಿತಿಯಲ್ಲಿ ಈಗಲೂ ಬದುಕುತಿದ್ದಾರೆ, ಕಾಲ ತಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ.

ಡಿಂಗ್ರಿ ನರೇಶ್

ಸಮಾಜದಿಂದ ಕಡೆಗಣಿಸಲ್ಪಟ್ಟ ಈ ಸೋಲಿಗರ ಮತ್ತು ಇಂತದ್ದೇ ಶೋಷಣೆಗೊಳಗಾದವರ ಪರ ನ್ಯಾಯಕ್ಕಾಗಿ ಬೆಂಗಳೂರಿನ ಡಾ ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ಬೆಂಗಳೂರು ಗೊರುಕನ 1974 ನಾಟಕವನ್ನು ಸಿದ್ದಗೊಳಿಸಿ ಪ್ರದರ್ಶಿಸಲು ಮುಂದಾಗಿದೆ. ಡಾ ಕೆ.ಟಿ ವಿಜಯ್ ಕುಮಾರ್ ರವರ ಸೋಲಿಗರ ಬದುಕು ಬವಣೆಯ ಕುರಿತು ನಡೆಸಿದ ಸಂಶೋಧನೆಯ ಆಧಾರದ ಮೇಲೆ ರಂಗಕರ್ಮಿ ರಂಗನಾಥ ನೀನಾಸಂ ಕಥೆ ಹೆಣೆದು ನಾಟಕವಾಗಿ ರಚಿಸಿದ್ದಾರೆ, ಸದಾ ಶೋಷಣೆಯ ವಿರುದ್ದದ ದನಿಯಾಗಿ ರಂಗಕಾಯಕ ನಡೆಸುತ್ತಿರುವ ರಂಗಕರ್ಮಿ ಡಿಂಗ್ರಿ ನರೇಶ್ ನಾಟಕವನ್ನು ನಿರ್ದೇಶಿಸಿದ್ದಾರೆ. ನಾಟಕಕ್ಕೆ ಪೂರಕವಾಗಿ ಸಂಗೀತವನ್ನು ಸೂಕ್ಷ್ಮವಾಗಿ ಸಂಯೋಜಿಸಿದ್ದಾರೆ ರಾಘವ ಕಮ್ಮಾರ್. ಪಕ್ಕವಾದ್ಯದಲ್ಲಿ ಡಿಂಗ್ರಿ ಭರತ್ ಸಂಗೀತಕ್ಕೆ ಜತೆಗೂಡಿಸಿದ್ದಾರೆ. ಜಯರಾಮ್ ನೀನಾಸಂ ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿ ನಾಟಕಕ್ಕೆ ಬೆಳಕಾಗಿದ್ದಾರೆ. ಈ ನಾಟಕವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಭಿನಯಿಸುತ್ತಿರುವುದು ವಿಶೇಷ. ಯುವಕರೇ ಪ್ರಧಾನವಾಗಿರುವ ತಂಡವು ಪ್ರತಿಭೆಯಿಂದ ಕೂಡಿದ್ದು, ಸ್ವಸ್ಥ ಸಮಾಜವನ್ನು ಕಟ್ಟಲು ಕೈಜೋಡಿಸಿದ್ದಾರೆ. ಈ ನಾಟಕ 2019 ರ ಮೇ 31 ರಂದು ಸಂಜೆ 6 ಕ್ಕೆ ಕುವೆಂಪು ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

ಸಮಾಜಮುಖಯಾಗಿ ಯೋಚಿಸುವ ಯುವತಂಡ ಅಭಿನಯಿಸುವ ಈ ನಾಟಕ ನೋಡಲು ಅಥವಾ ಬೇರೆ ಕಡೆ ಪ್ರದರ್ಶಿಸ ಬಯಸುವವರು ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರಾಗಿ ಡಿಂಗ್ರಿ ನರೇಶ್ 8197707198 ಇವರನ್ನು ಸಂಪರ್ಕಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...