Homeಮುಖಪುಟವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

- Advertisement -
- Advertisement -

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕರ್ನಾಟಕ ಸರ್ಕಾರ ನಿಗದಿತ ಬಸ್‌ ದರಕ್ಕಿಂತ ಮೂರು ಪಟ್ಟು ಹೆಚ್ಚುಮಾಡಿತ್ತು. ಇದರ ಕುರಿತು ಆಕ್ರೋಶ ಬಂದ ನಂತರ ಆ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದರ ಕುರಿತಾಗಿ ಶಿವಸುಂದರ್‌ರವರು ವಿವರವಾದ ವರದಿ ಬರೆದಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ನಿನ್ನೆ ಮೇ ದಿನ. ಅದರ ಬಹುಮಾನವೆಂಬಂತೆ ವಲಸೆ ಕಾರ್ಮಿಕರು ತಮ್ಮಊರುಗಳಿಗೆ ಹೋಗಲು ಉಚಿತವಾಗಿ KSRTC ಸಾರಿಗೆ ಕಲ್ಪಿಸುತ್ತೇವೆಂದು ಕರ್ನಾಟಕದ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಆಗುತ್ತಿರುವುದೇ ಬೇರೆ..

ಕಳೆದರಡು ತಿಂಗಳಿಂದ ಕೂಲಿ ಇರಲಿ ಹೊಟ್ಟೆಪಾಡಿಗು ಗತಿ ಇಲ್ಲದೆ ತತ್ತರಿಸುತ್ತಿರುವ ವಲಸೆ ಕೂಲಿಗಳಿಂದ KSRTC ಮೂಲಕ ಸರ್ಕಾರ ಮೂರುಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿದೆ. ಅದಕ್ಕೆ ಮುಂದೊಡ್ಡುತ್ತಿರುವ ನೆಪ ಕೋವಿಡ್ ಮುನ್ನೆಚ್ಚರಿಕೆ.

ಅಂದರೆ ಕೋವಿಡ್ ಕಾರಣದಿಂದ ಬಸ್ಸೊಳಗೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ 52 ಸೀಟುಗಳ ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕಿದೆ. . ಹೀಗಾಗಿ ಉಳಿದ ಸೀಟುಗಳ ಟಿಕೇಟಿನ ಹೊರೆಯನ್ನು ಸರ್ಕಾರ ಪ್ರಯಾಣ ಮಾಡುವ ಸಂತ್ರಸ್ತ ವಲಸೆ ಕಾರ್ಮಿಕರ ಮೇಲೆ ಹಾಕುತ್ತಿದೆ. ಆದರಿಂದಲೇ ರೂಟ್ ಬಸ್ಸುಗಳನ್ನು ಬಿಡದೆ ಪ್ರಯಾಣದ ಗುತ್ತಿಗೆಯ ಮೇಲೆ ಬಸ್ಸನ್ನು ನೀಡುತ್ತಿದೆ.

ತಮ್ಮದಲ್ಲದ ತಪ್ಪಿಗೆ ಇನ್ನಿಲ್ಲದ ಶಿಕ್ಷೆಯನ್ನು ಅನುಭವಿಸುತ್ತಿರುವ ವಲಸೆ ಕಾರ್ಮಿಕರನ್ನು ಒಂದು ನಾಗರಿಕ ಸರ್ಕಾರ ಪುಕ್ಕಟೆಯಾಗಿ ಅವರವರ ಊರಿಗೆ ತಲುಪಿಸಬೇಕಿತ್ತು. ಆದರೆ ಇದು ಹೃದಯಹೀನ ಸರ್ಕಾರ.

ಮತ್ತೀಗ ಈ ಸಂದರ್ಭದಲ್ಲೂ ಹೇಗೆ ರಣಹದ್ದುಗಳಂತೆ ವಲಸೆ ಕಾರ್ಮಿಕರನ್ನು ಸುಲಿಯುತ್ತಿದೆ ಎಂಬುದು ಈ ಸರಳ ಲೆಕ್ಕಾಚಾರ ನೋಡಿದರೆ ಅರ್ಥವಾಗುತ್ತದೆ:

ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 60 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಲ್ಲಿ 28 ಲಕ್ಷ ಜನ ಕಟ್ಟಡ ಹಾಗು ಇತರ ನಿರ್ಮಾಣ ಕಾಮಗಾರಿಗಳಲ್ಲಿ (Building And Other Construction Workers- BOCW) ಕೆಲಸ ಮಾಡುವ ಕಟ್ಟಡ ಕಾರ್ಮಿಕರು.

ಈ ಕಟ್ಟಡ ವಲಯದ ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ 1994ರಲ್ಲಿ ಒಂದು ಕಾಯಿದೆಯು ರೂಪಿತವಾಯಿತು. ಅದಕ್ಕೆ ಸಂಬಂಧಪಟ್ಟ ನೀತಿ ನಿಯಮಾವಳಿಗಳನ್ನು ಕರ್ನಾಟಕ ಸರ್ಕಾರವು 2007ರಲ್ಲಿ ರೂಪಿಸಿತು.

ಈ ಕಾಯಿದೆಯಡಿ, ನಿರ್ಮಾಣವಾಗುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳ ಮೇಲೆ ಶೇ. 1 ರಷ್ಟು ಸೆಸ್ ಅನ್ನು ವಿಧಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯನ್ನು ಸ್ಥಾಪಿಸಲಾಯಿತು.

ಈ ಹಣವನ್ನು ಕಟ್ಟಡ ಕಾರ್ಮಿಕರ ಸಂಕ್ಷೇಮ, ವೈದ್ಯಕೀಯ, ಶಿಕ್ಷಣ , ಮರಣ, ವಿವಾಹ, ಕೌಶಲ್ಯ ತರಬೇತಿ ಹಾಗು ಅಪಘಾತ ಪರಿಹಾರಗಳಿಗಾಗಿ ವಿನಿಯೋಗಿಸಬೇಕೆಂದು ಕಾನೂನು ಮಾಡಲಾಯಿತು. ಆದರೆ ಇದರ ಸೌಲಭ್ಯ ಪಡೆಯಬೇಕೆಂದರೆ ಕಟ್ಟಡ ಕಾರ್ಮಿಕರು ಇದರಡಿ ನೋಂದಾಯಿಸಿಕೊಂಡಿರಬೇಕು.

ಆದರೆ ಬಹುಪಾಲು ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಅನ ಕ್ಷರಸ್ಥರು ಆಗಿರುವುದರಿಂದ ಶೇ. 75 ಭಾಗ ಕೂಲಿಗಳು ನೋಂದಾಯಿಸಿಕೊಂಡಿಲ್ಲ. ಈ ಯೋಜನೆಗಳ ಅರಿವು ಅವರಿಗಿಲ್ಲ. ಹೀಗಾಗಿಯೇ ಇದರಲ್ಲಿ ಸಂಗ್ರಹವಾಗಿರುವ ಶೇ. 90 ರಷ್ಟು ಹಣ ವ್ಯಯವಾಗುವುದೇ ಇಲ್ಲ.

ಇವತ್ತಿನ ಕೋವಿಡ್ ಸಂದರ್ಭದಲ್ಲಿ ಹಾಗು ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಅನ್ಯಾಯ ಇನ್ನಷ್ಟು ಅಮಾನುಷವಾಗಿ ನಡೆಯುತ್ತಿದೆ.

ಉದಾಹರಣೆಗೆ: ಕರ್ನಾಟಕದಲ್ಲಿ ಬಹುಪಾಲು ವಲಸೆ ಕಾರ್ಮಿಕರು ಕೆಲಸಮಾಡುವುದು ಕಟ್ಟಡ ಹಾಗು ಇತರ ನಿರ್ಮಾಣ ಕ್ಷೇತ್ರಗಳಲ್ಲಿ. 2019-20ರ ವೇಳೆಗೆ ಕರ್ನಾಟಕದಲ್ಲಿ ಕಟ್ಟಡ ಹಾಗು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8000 ಕೋಟಿ ರು. ಹಣ ಕೊಳೆಯುತ್ತಾ ಬಿದ್ದಿತ್ತು

ಕಟ್ಟಡ ಕಾರ್ಮಿಕರ ಸಂಕಷ್ಟಗಳನ್ನೂ ಬಗೆಹರಿಸಲೆಂದೇ ತಾನೇ ಈ ಹಣ ಇರುವುದು? ಹಾಗಿದ್ದಲ್ಲಿ ತಮ್ಮತಮ್ಮ ಊರಿಗೆ ಹೋಗಲು ಉಚಿತವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರವು ಈ ಹಣವನ್ನು ಬಳಸಿಕೊಳ್ಳಬಹುದಲ್ಲಾ? ಅದಕ್ಕೆ ಎಷ್ಟು ಖರ್ಚಾಗಬಹುದು?

ಈಗ ಸರ್ಕಾರದ ಲೆಕ್ಕಾಚಾರದ ಪ್ರಕಾರ ಅಂದಾಜು ಒಂದು. ಲಕ್ಷ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವನ್ನು ಒದಗಿಸಲಾಗುತ್ತಿದೆ. ಅವರೆಲ್ಲರೂ ಊರಿಗೆ ಹೋಗಿ ಬದುಕು ಕಂಡುಕೊಳ್ಳಲು ಬಯಸುತ್ತಿರುತ್ತಾರೆ. ಇದರ ಜೊತೆಗೆ ಸರ್ಕಾರದ ಪರಿಹಾರ ವ್ಯಾಪ್ತಿಯಲ್ಲಿ ರದ ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ಹೋಗಲು ತವಕಿಸುತ್ತಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚೆಂದರೆ 5 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ.

KSARTC ಯ ಒಂದು ಕರ್ನಾಟಕ ಸಾರಿಗೆ ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡರೆ ಒಂದು ಕಿಮೀ ಗೆ 37 ರು. ಮತ್ತು ಟೋಲ್ ಶುಲ್ಕ ತಲಾ ರು. 2 ಸೇರಿ ಒಟ್ಟು ಒಂದು ಕಿಮೀಗೆ 39 ರೂಗಳಾಗುತ್ತದೆ.

ಈಗ ಬೆಂಗಳೂರಿನಿಂದ ಬೀದರ್ 700 ಕಿಮಿ ದೂರದಲ್ಲಿದೆ. ಬೆಳಗಾವಿ 600, ರಾಯಚೂರು 450, ಕೋಲಾರ 70 ಕಿಮಿ ದೂರ. ಹೀಗಾಗಿ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಊರು ಬೆಂಗಳೂರಿನಿಂದ ಸರಾಸರಿ 500 ಕಿಮಿ ದೂರದಲ್ಲಿದೆ ಎಂದಿಟ್ಟುಕೊಳ್ಳೋಣ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ಬರಲು ಒಟ್ಟು 1000 ಕಿಮಿ ಪ್ರಯಾಣವಾಗುತ್ತದೆ. KSRTC ಯ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಮೇಲೆ ಹೇಳಿದಂತೆ ಕಿಮೀಗೆ 39ರು.ಗಳಂತೆ 1000 ಕಿಮೀಗೆ 39000 ರು.ಗಳಾಗುತ್ತದೆ .

ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಬಸ್ಸಿನಲ್ಲಿ 52 ಜನರ ಬದಲು 30 ಜನರೇ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 3,300 ಬಸ್ಸುಗಳು ಬೇಕಾಗುತ್ತದೆ.

ಆಗ ಒಂದು ಬಸ್ಸಿಗೆ 39,000 ರು.ನಂತೆ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬೇಕಾದ 3,300 ಬಸ್ಸುಗಳಿಗೆ ಬೇಕಾಗುವುದು ಕೇವಲ 13 ಕೋಟಿ ರು.ಗಳು ಮಾತ್ರ.

ಈ ಲೆಕ್ಕಾಚಾರದಂತೆ ಎಲ್ಲಾ ಐದು ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಬೇಕಾಗುವುದು 65 ಕೋಟಿ ರು. ಗಳು ಮಾತ್ರ !!

ಇದು ವಲಸೆ ಕಾರ್ಮಿಕರ ಸಂಕ್ಷೇಮ ನಿಧಿಯಲ್ಲಿ ಬಳಸದೆ ಕೊಳೆಯುತ್ತಿರುವ 8000 ಕೋಟಿಯ ಶೇ. 1 ಕ್ಕಿಂತ ಕಡಿಮೆ!!!

ಹೀಗೆ ಸರ್ಕಾರ ಬೇರೆ ಯಾವುದೇ ಹಣವನ್ನು ವೆಚ್ಚ ಮಾಡದೆ ಕಾರ್ಮಿಕರ ಸಂಕ್ಷೇಮಕ್ಕೆಂದೇ ಕೂಡಿಟ್ಟಿರುವ ಹಣದ ಅತ್ಯಲ್ಪ ಪಾಲನ್ನು ಅವರಿಗೆಂದೇ ವೆಚ್ಚ ಮಾಡಿದರು ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಬಹುದು.

ಆದರೂ ಸರ್ಕಾರವು ಏಕೆ ಕಾರ್ಮಿಕರ ದುಡ್ಡನು ಕಾರ್ಮಿಕರಿಗೆ ವೆಚ್ಚ ಮಾಡದೆ ಉಲ್ಟಾ ಅವರಿಂದಲೇ ಮೂರುಪಟ್ಟು ದುಡ್ಡನ್ನು ಹೀರುತ್ತಿದೆ??

ಇದಕ್ಕೆ ಎರಡು ಅಮಾನುಷ ಹಾಗು ದುಷ್ಟ ಕಾರಣಗಳಿವೆ..

ಮೊದಲನೆಯದಾಗಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ , ಕೇಂದ್ರ ಸರ್ಕಾರದ ಅಸಹಕಾರಿ ಧೋರಣೆಯಿಂದಾಗಿ ಹಾಗು ಇದೀಗ ಕೋವಿಡ್ ಲಾಕ್ದೌನಿನಿಂದಾಗಿ ಮತ್ತು ಕೇಂದ್ರ ವು ರಾಜ್ಯದ ತೆರಿಗೆ ಪಾಲಿನ ಪಾಲಿನ ಹಣವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಕರ್ನಾಟಕ ಸರ್ಕಾರದ ಬಳಿ ಸರ್ಕಾರ ನಡೆಸುವುದಕ್ಕಿರಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೆಚ್ಚಗಳನ್ನು ಮಾಡುವುದಕ್ಕೂ ಹಣವಿಲ್ಲ.

ಈ ಬಿಕ್ಕಟ್ಟಿನಿಂದ ಪಾರಾಗಲು ದುಷ್ಟ ಕೇಂದ್ರ ಸರ್ಕಾರ ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದೆ.

ಅದರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ನಿಧಿಯಲ್ಲಿರುವ ಕಾರ್ಮಿಕರಿಗೆ ಸೇರಬೇಕಿರುವ 8000 ಕೋಟಿ ಹಣವನ್ನು ಕೋವಿಡ್ ಹಾಗು ಇತರ ಬಾಬತ್ತುಗಳಿಗೆ ವೆಚ್ಚ ಮಾಡಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಆದೇಶಿಸಿದೆ. ..!

ಆದ್ದರಿಂದಲೇ ಪ್ರಾರಂಭದಲ್ಲಿ 16,500 ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಿದ ಕರ್ನಾಟಕ ಸರ್ಕಾರ ನಿನ್ನೆಯಿಂದ ಅದನ್ನು ಬಂದ್ ಮಾಡಿಡೇ ಮತ್ತು ಉಲ್ಟಾ ವಲಸೆಕಾರ್ಮಿಕರನ್ನೇ ಸುಲಿಯಲು ಹೊರಟಿದೆ.

ಇನ್ನೊಂದು ಅಮಾನುಷ ಕಾರಣವೆಂದರೆ , ಮೇ 4 ರಿಂದ ಬಹುಪಾಲು ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ಪ್ರಾರಂಭವಾಗಲಿದ್ದು ಮತ್ತೆ ಅಲ್ಲಿ ಅಗ್ಗದ ದರದಲ್ಲಿ ಕೆಲಸ ಮಾಡಲು ಈ ವಲಸೆ ಕಾರ್ಮಿಕರ ಅಗತ್ಯವಿದೆ. ಆದರೆ ಈ ಕೋವಿಡ್ ಬಿಕ್ಕಟ್ಟಿನ ಈ ನಗರ ಮತ್ತು ಸರ್ಕಾರ ಗಳ ಅಮಾನುಷ ನಡವಳಿಕೆಗಳಿಂದ ಕಂಗೆಟ್ಟು ಊರಿಗೆ ಹೊರಟಿರುವ ಈ ವಲಸೆ ಕಾರ್ಮಿಕರು ಊರಿಗೆ ಹೋಗಿಬಿಟ್ಟರೆ ಸದ್ಯಕ್ಕೆ ವಾಪಸ್ ಬರುವ ಸೂಚನೆಗಳಿಲ್ಲ. ಹಾಗಾದಲ್ಲಿ ನಗರದ ಆರ್ಥಿಕತೆ ಅಗ್ಗದ ಕೂಲಿಯಿಲ್ಲದೆ ತಲೆ ಎತ್ತುವುದಿಲ್ಲ.

ಈ ಬಂಡವಾಳಶಾಹಿ ಪರ ದುಷ್ಟ ಲೆಕ್ಕಾಕಾರಗಳಿನ್ನಿಟ್ಟುಕೊಂದು ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಪ್ಪಿಸಲೆಂದೇ ಮೂರುಪಟ್ಟು ಹೆಚ್ಚಿನ ದರವನ್ನು ವಿಧಿಸಿ ಊರಿಗೆ ಹೋಗುವವರನ್ನು ನಿರುತ್ತೇಜಗೊಳಿಸಲಾಗುತ್ತಿದೆ.

ಇಂದು ಕಾರ್ಮಿಕ ದಿನಕ್ಕೆ ಶುಭಾಶಯಗಳನ್ನು ಹೇಳುವ ನೆಪದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ “ಮನವಿ” ಯ ಹಿಂದಿನ ಕ್ರೌರ್ಯವಿದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...