Homeಮುಖಪುಟವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

- Advertisement -
- Advertisement -

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕರ್ನಾಟಕ ಸರ್ಕಾರ ನಿಗದಿತ ಬಸ್‌ ದರಕ್ಕಿಂತ ಮೂರು ಪಟ್ಟು ಹೆಚ್ಚುಮಾಡಿತ್ತು. ಇದರ ಕುರಿತು ಆಕ್ರೋಶ ಬಂದ ನಂತರ ಆ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದರ ಕುರಿತಾಗಿ ಶಿವಸುಂದರ್‌ರವರು ವಿವರವಾದ ವರದಿ ಬರೆದಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ನಿನ್ನೆ ಮೇ ದಿನ. ಅದರ ಬಹುಮಾನವೆಂಬಂತೆ ವಲಸೆ ಕಾರ್ಮಿಕರು ತಮ್ಮಊರುಗಳಿಗೆ ಹೋಗಲು ಉಚಿತವಾಗಿ KSRTC ಸಾರಿಗೆ ಕಲ್ಪಿಸುತ್ತೇವೆಂದು ಕರ್ನಾಟಕದ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಆಗುತ್ತಿರುವುದೇ ಬೇರೆ..

ಕಳೆದರಡು ತಿಂಗಳಿಂದ ಕೂಲಿ ಇರಲಿ ಹೊಟ್ಟೆಪಾಡಿಗು ಗತಿ ಇಲ್ಲದೆ ತತ್ತರಿಸುತ್ತಿರುವ ವಲಸೆ ಕೂಲಿಗಳಿಂದ KSRTC ಮೂಲಕ ಸರ್ಕಾರ ಮೂರುಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿದೆ. ಅದಕ್ಕೆ ಮುಂದೊಡ್ಡುತ್ತಿರುವ ನೆಪ ಕೋವಿಡ್ ಮುನ್ನೆಚ್ಚರಿಕೆ.

ಅಂದರೆ ಕೋವಿಡ್ ಕಾರಣದಿಂದ ಬಸ್ಸೊಳಗೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ 52 ಸೀಟುಗಳ ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕಿದೆ. . ಹೀಗಾಗಿ ಉಳಿದ ಸೀಟುಗಳ ಟಿಕೇಟಿನ ಹೊರೆಯನ್ನು ಸರ್ಕಾರ ಪ್ರಯಾಣ ಮಾಡುವ ಸಂತ್ರಸ್ತ ವಲಸೆ ಕಾರ್ಮಿಕರ ಮೇಲೆ ಹಾಕುತ್ತಿದೆ. ಆದರಿಂದಲೇ ರೂಟ್ ಬಸ್ಸುಗಳನ್ನು ಬಿಡದೆ ಪ್ರಯಾಣದ ಗುತ್ತಿಗೆಯ ಮೇಲೆ ಬಸ್ಸನ್ನು ನೀಡುತ್ತಿದೆ.

ತಮ್ಮದಲ್ಲದ ತಪ್ಪಿಗೆ ಇನ್ನಿಲ್ಲದ ಶಿಕ್ಷೆಯನ್ನು ಅನುಭವಿಸುತ್ತಿರುವ ವಲಸೆ ಕಾರ್ಮಿಕರನ್ನು ಒಂದು ನಾಗರಿಕ ಸರ್ಕಾರ ಪುಕ್ಕಟೆಯಾಗಿ ಅವರವರ ಊರಿಗೆ ತಲುಪಿಸಬೇಕಿತ್ತು. ಆದರೆ ಇದು ಹೃದಯಹೀನ ಸರ್ಕಾರ.

ಮತ್ತೀಗ ಈ ಸಂದರ್ಭದಲ್ಲೂ ಹೇಗೆ ರಣಹದ್ದುಗಳಂತೆ ವಲಸೆ ಕಾರ್ಮಿಕರನ್ನು ಸುಲಿಯುತ್ತಿದೆ ಎಂಬುದು ಈ ಸರಳ ಲೆಕ್ಕಾಚಾರ ನೋಡಿದರೆ ಅರ್ಥವಾಗುತ್ತದೆ:

ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 60 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಲ್ಲಿ 28 ಲಕ್ಷ ಜನ ಕಟ್ಟಡ ಹಾಗು ಇತರ ನಿರ್ಮಾಣ ಕಾಮಗಾರಿಗಳಲ್ಲಿ (Building And Other Construction Workers- BOCW) ಕೆಲಸ ಮಾಡುವ ಕಟ್ಟಡ ಕಾರ್ಮಿಕರು.

ಈ ಕಟ್ಟಡ ವಲಯದ ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ 1994ರಲ್ಲಿ ಒಂದು ಕಾಯಿದೆಯು ರೂಪಿತವಾಯಿತು. ಅದಕ್ಕೆ ಸಂಬಂಧಪಟ್ಟ ನೀತಿ ನಿಯಮಾವಳಿಗಳನ್ನು ಕರ್ನಾಟಕ ಸರ್ಕಾರವು 2007ರಲ್ಲಿ ರೂಪಿಸಿತು.

ಈ ಕಾಯಿದೆಯಡಿ, ನಿರ್ಮಾಣವಾಗುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳ ಮೇಲೆ ಶೇ. 1 ರಷ್ಟು ಸೆಸ್ ಅನ್ನು ವಿಧಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯನ್ನು ಸ್ಥಾಪಿಸಲಾಯಿತು.

ಈ ಹಣವನ್ನು ಕಟ್ಟಡ ಕಾರ್ಮಿಕರ ಸಂಕ್ಷೇಮ, ವೈದ್ಯಕೀಯ, ಶಿಕ್ಷಣ , ಮರಣ, ವಿವಾಹ, ಕೌಶಲ್ಯ ತರಬೇತಿ ಹಾಗು ಅಪಘಾತ ಪರಿಹಾರಗಳಿಗಾಗಿ ವಿನಿಯೋಗಿಸಬೇಕೆಂದು ಕಾನೂನು ಮಾಡಲಾಯಿತು. ಆದರೆ ಇದರ ಸೌಲಭ್ಯ ಪಡೆಯಬೇಕೆಂದರೆ ಕಟ್ಟಡ ಕಾರ್ಮಿಕರು ಇದರಡಿ ನೋಂದಾಯಿಸಿಕೊಂಡಿರಬೇಕು.

ಆದರೆ ಬಹುಪಾಲು ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಅನ ಕ್ಷರಸ್ಥರು ಆಗಿರುವುದರಿಂದ ಶೇ. 75 ಭಾಗ ಕೂಲಿಗಳು ನೋಂದಾಯಿಸಿಕೊಂಡಿಲ್ಲ. ಈ ಯೋಜನೆಗಳ ಅರಿವು ಅವರಿಗಿಲ್ಲ. ಹೀಗಾಗಿಯೇ ಇದರಲ್ಲಿ ಸಂಗ್ರಹವಾಗಿರುವ ಶೇ. 90 ರಷ್ಟು ಹಣ ವ್ಯಯವಾಗುವುದೇ ಇಲ್ಲ.

ಇವತ್ತಿನ ಕೋವಿಡ್ ಸಂದರ್ಭದಲ್ಲಿ ಹಾಗು ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಅನ್ಯಾಯ ಇನ್ನಷ್ಟು ಅಮಾನುಷವಾಗಿ ನಡೆಯುತ್ತಿದೆ.

ಉದಾಹರಣೆಗೆ: ಕರ್ನಾಟಕದಲ್ಲಿ ಬಹುಪಾಲು ವಲಸೆ ಕಾರ್ಮಿಕರು ಕೆಲಸಮಾಡುವುದು ಕಟ್ಟಡ ಹಾಗು ಇತರ ನಿರ್ಮಾಣ ಕ್ಷೇತ್ರಗಳಲ್ಲಿ. 2019-20ರ ವೇಳೆಗೆ ಕರ್ನಾಟಕದಲ್ಲಿ ಕಟ್ಟಡ ಹಾಗು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8000 ಕೋಟಿ ರು. ಹಣ ಕೊಳೆಯುತ್ತಾ ಬಿದ್ದಿತ್ತು

ಕಟ್ಟಡ ಕಾರ್ಮಿಕರ ಸಂಕಷ್ಟಗಳನ್ನೂ ಬಗೆಹರಿಸಲೆಂದೇ ತಾನೇ ಈ ಹಣ ಇರುವುದು? ಹಾಗಿದ್ದಲ್ಲಿ ತಮ್ಮತಮ್ಮ ಊರಿಗೆ ಹೋಗಲು ಉಚಿತವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರವು ಈ ಹಣವನ್ನು ಬಳಸಿಕೊಳ್ಳಬಹುದಲ್ಲಾ? ಅದಕ್ಕೆ ಎಷ್ಟು ಖರ್ಚಾಗಬಹುದು?

ಈಗ ಸರ್ಕಾರದ ಲೆಕ್ಕಾಚಾರದ ಪ್ರಕಾರ ಅಂದಾಜು ಒಂದು. ಲಕ್ಷ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವನ್ನು ಒದಗಿಸಲಾಗುತ್ತಿದೆ. ಅವರೆಲ್ಲರೂ ಊರಿಗೆ ಹೋಗಿ ಬದುಕು ಕಂಡುಕೊಳ್ಳಲು ಬಯಸುತ್ತಿರುತ್ತಾರೆ. ಇದರ ಜೊತೆಗೆ ಸರ್ಕಾರದ ಪರಿಹಾರ ವ್ಯಾಪ್ತಿಯಲ್ಲಿ ರದ ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ಹೋಗಲು ತವಕಿಸುತ್ತಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚೆಂದರೆ 5 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ.

KSARTC ಯ ಒಂದು ಕರ್ನಾಟಕ ಸಾರಿಗೆ ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡರೆ ಒಂದು ಕಿಮೀ ಗೆ 37 ರು. ಮತ್ತು ಟೋಲ್ ಶುಲ್ಕ ತಲಾ ರು. 2 ಸೇರಿ ಒಟ್ಟು ಒಂದು ಕಿಮೀಗೆ 39 ರೂಗಳಾಗುತ್ತದೆ.

ಈಗ ಬೆಂಗಳೂರಿನಿಂದ ಬೀದರ್ 700 ಕಿಮಿ ದೂರದಲ್ಲಿದೆ. ಬೆಳಗಾವಿ 600, ರಾಯಚೂರು 450, ಕೋಲಾರ 70 ಕಿಮಿ ದೂರ. ಹೀಗಾಗಿ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಊರು ಬೆಂಗಳೂರಿನಿಂದ ಸರಾಸರಿ 500 ಕಿಮಿ ದೂರದಲ್ಲಿದೆ ಎಂದಿಟ್ಟುಕೊಳ್ಳೋಣ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ಬರಲು ಒಟ್ಟು 1000 ಕಿಮಿ ಪ್ರಯಾಣವಾಗುತ್ತದೆ. KSRTC ಯ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಮೇಲೆ ಹೇಳಿದಂತೆ ಕಿಮೀಗೆ 39ರು.ಗಳಂತೆ 1000 ಕಿಮೀಗೆ 39000 ರು.ಗಳಾಗುತ್ತದೆ .

ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಬಸ್ಸಿನಲ್ಲಿ 52 ಜನರ ಬದಲು 30 ಜನರೇ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 3,300 ಬಸ್ಸುಗಳು ಬೇಕಾಗುತ್ತದೆ.

ಆಗ ಒಂದು ಬಸ್ಸಿಗೆ 39,000 ರು.ನಂತೆ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬೇಕಾದ 3,300 ಬಸ್ಸುಗಳಿಗೆ ಬೇಕಾಗುವುದು ಕೇವಲ 13 ಕೋಟಿ ರು.ಗಳು ಮಾತ್ರ.

ಈ ಲೆಕ್ಕಾಚಾರದಂತೆ ಎಲ್ಲಾ ಐದು ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಬೇಕಾಗುವುದು 65 ಕೋಟಿ ರು. ಗಳು ಮಾತ್ರ !!

ಇದು ವಲಸೆ ಕಾರ್ಮಿಕರ ಸಂಕ್ಷೇಮ ನಿಧಿಯಲ್ಲಿ ಬಳಸದೆ ಕೊಳೆಯುತ್ತಿರುವ 8000 ಕೋಟಿಯ ಶೇ. 1 ಕ್ಕಿಂತ ಕಡಿಮೆ!!!

ಹೀಗೆ ಸರ್ಕಾರ ಬೇರೆ ಯಾವುದೇ ಹಣವನ್ನು ವೆಚ್ಚ ಮಾಡದೆ ಕಾರ್ಮಿಕರ ಸಂಕ್ಷೇಮಕ್ಕೆಂದೇ ಕೂಡಿಟ್ಟಿರುವ ಹಣದ ಅತ್ಯಲ್ಪ ಪಾಲನ್ನು ಅವರಿಗೆಂದೇ ವೆಚ್ಚ ಮಾಡಿದರು ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಬಹುದು.

ಆದರೂ ಸರ್ಕಾರವು ಏಕೆ ಕಾರ್ಮಿಕರ ದುಡ್ಡನು ಕಾರ್ಮಿಕರಿಗೆ ವೆಚ್ಚ ಮಾಡದೆ ಉಲ್ಟಾ ಅವರಿಂದಲೇ ಮೂರುಪಟ್ಟು ದುಡ್ಡನ್ನು ಹೀರುತ್ತಿದೆ??

ಇದಕ್ಕೆ ಎರಡು ಅಮಾನುಷ ಹಾಗು ದುಷ್ಟ ಕಾರಣಗಳಿವೆ..

ಮೊದಲನೆಯದಾಗಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ , ಕೇಂದ್ರ ಸರ್ಕಾರದ ಅಸಹಕಾರಿ ಧೋರಣೆಯಿಂದಾಗಿ ಹಾಗು ಇದೀಗ ಕೋವಿಡ್ ಲಾಕ್ದೌನಿನಿಂದಾಗಿ ಮತ್ತು ಕೇಂದ್ರ ವು ರಾಜ್ಯದ ತೆರಿಗೆ ಪಾಲಿನ ಪಾಲಿನ ಹಣವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಕರ್ನಾಟಕ ಸರ್ಕಾರದ ಬಳಿ ಸರ್ಕಾರ ನಡೆಸುವುದಕ್ಕಿರಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೆಚ್ಚಗಳನ್ನು ಮಾಡುವುದಕ್ಕೂ ಹಣವಿಲ್ಲ.

ಈ ಬಿಕ್ಕಟ್ಟಿನಿಂದ ಪಾರಾಗಲು ದುಷ್ಟ ಕೇಂದ್ರ ಸರ್ಕಾರ ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದೆ.

ಅದರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ನಿಧಿಯಲ್ಲಿರುವ ಕಾರ್ಮಿಕರಿಗೆ ಸೇರಬೇಕಿರುವ 8000 ಕೋಟಿ ಹಣವನ್ನು ಕೋವಿಡ್ ಹಾಗು ಇತರ ಬಾಬತ್ತುಗಳಿಗೆ ವೆಚ್ಚ ಮಾಡಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಆದೇಶಿಸಿದೆ. ..!

ಆದ್ದರಿಂದಲೇ ಪ್ರಾರಂಭದಲ್ಲಿ 16,500 ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಿದ ಕರ್ನಾಟಕ ಸರ್ಕಾರ ನಿನ್ನೆಯಿಂದ ಅದನ್ನು ಬಂದ್ ಮಾಡಿಡೇ ಮತ್ತು ಉಲ್ಟಾ ವಲಸೆಕಾರ್ಮಿಕರನ್ನೇ ಸುಲಿಯಲು ಹೊರಟಿದೆ.

ಇನ್ನೊಂದು ಅಮಾನುಷ ಕಾರಣವೆಂದರೆ , ಮೇ 4 ರಿಂದ ಬಹುಪಾಲು ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ಪ್ರಾರಂಭವಾಗಲಿದ್ದು ಮತ್ತೆ ಅಲ್ಲಿ ಅಗ್ಗದ ದರದಲ್ಲಿ ಕೆಲಸ ಮಾಡಲು ಈ ವಲಸೆ ಕಾರ್ಮಿಕರ ಅಗತ್ಯವಿದೆ. ಆದರೆ ಈ ಕೋವಿಡ್ ಬಿಕ್ಕಟ್ಟಿನ ಈ ನಗರ ಮತ್ತು ಸರ್ಕಾರ ಗಳ ಅಮಾನುಷ ನಡವಳಿಕೆಗಳಿಂದ ಕಂಗೆಟ್ಟು ಊರಿಗೆ ಹೊರಟಿರುವ ಈ ವಲಸೆ ಕಾರ್ಮಿಕರು ಊರಿಗೆ ಹೋಗಿಬಿಟ್ಟರೆ ಸದ್ಯಕ್ಕೆ ವಾಪಸ್ ಬರುವ ಸೂಚನೆಗಳಿಲ್ಲ. ಹಾಗಾದಲ್ಲಿ ನಗರದ ಆರ್ಥಿಕತೆ ಅಗ್ಗದ ಕೂಲಿಯಿಲ್ಲದೆ ತಲೆ ಎತ್ತುವುದಿಲ್ಲ.

ಈ ಬಂಡವಾಳಶಾಹಿ ಪರ ದುಷ್ಟ ಲೆಕ್ಕಾಕಾರಗಳಿನ್ನಿಟ್ಟುಕೊಂದು ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಪ್ಪಿಸಲೆಂದೇ ಮೂರುಪಟ್ಟು ಹೆಚ್ಚಿನ ದರವನ್ನು ವಿಧಿಸಿ ಊರಿಗೆ ಹೋಗುವವರನ್ನು ನಿರುತ್ತೇಜಗೊಳಿಸಲಾಗುತ್ತಿದೆ.

ಇಂದು ಕಾರ್ಮಿಕ ದಿನಕ್ಕೆ ಶುಭಾಶಯಗಳನ್ನು ಹೇಳುವ ನೆಪದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ “ಮನವಿ” ಯ ಹಿಂದಿನ ಕ್ರೌರ್ಯವಿದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಾಸಿಕ್‌ನ...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...