Homeಮುಖಪುಟಗ್ರಾಮಭಾರತ - 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಗ್ರಾಮಭಾರತ – 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

- Advertisement -
- Advertisement -

ಪೀಠಿಕೆ

ಕೊರೋನಾ ಪಿಡುಗಿಗೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿದ ರೀತಿ ಬಗ್ಗೆ ಈಗಾಗಲೇ ಸಾಕಷ್ಟು ವ್ಯಾಖ್ಯಾನಗಳು ಬಂದಿವೆ. ಮೂಲತಃ ಇದು knee jerk reaction  ಅನ್ನುವುದರಲ್ಲಿ ಸಂದೇಹವಿಲ್ಲ. ಕೊರೋನಾ ಎದುರಿಸಲು ಬೇಕಾದ ಪೂರ್ವ ಸಿದ್ಧತೆಗಳು ಆಗಿರಲಿಲ್ಲ. ಅದಿರಲಿ, ಈ ಲಾಕ್ ಡೌನ್ ನಮ್ಮ ಕೃಷಿಲೋಕ ಮತ್ತು ವಲಸೆ ಹೊಗಿದ್ದ ಇದೇ ಗ್ರಾಮಾಂತರದ ಕಳ್ಳುಬಳ್ಳಿಗಳ ಮೇಲೆ ಮಾಡಿದ ಘಾತಕ ಪರಿಣಾಮದ ಬಗ್ಗೆ ತಡವಾಗಿ ನಮ್ಮ ಸರಕಾರ ಪ್ರತಿಕ್ರಿಯಿಸತೊಡಗಿದೆ. ಎಲ್ಲೂ ಹೋಗಲಾಗದೇ ಯಾವ ವ್ಯವಹಾರವೂ ಮಾಡಲಾಗದೇ, ಕನಿಷ್ಠ ಆರೋಗ್ಯ ಸೌಲಭ್ಯಕ್ಕೂ ಪರದಾಡಬೇಕಾಗಿ ಬಂದ ಸ್ಥಿತಿ ಒಂದೆಡೆಯಾದರೆ, ಕೊರೋನಾ ಭೀತಿಯಿಂದ ದೀಪ ಹಚ್ಚುವುದರಿಂದ ಹಿಡಿದು, ಹೊರಗಿನಿಂದ ಬಂದವರನ್ನು ಊರಿಗೆ ಸೇರಿಸದೇ ಇದ್ದ ಕತೆಗಳಿವೆ.

ಬೇಸಿಗೆಯಲ್ಲಿ ಕೊಳವೆ ಬಾವಿ ಸೌಲಭ್ಯದಿಂದ ಒಂದಷ್ಟು ಹಣ್ಣು ತರಕಾರಿ ಬೆಳೆದ ರೈತರ ಪಾಡು ನಾಯಿ ಪಾಡಾದ ಕತೆಗಳು ಇನ್ನೂ ಬರುತ್ತಲೇ ಇವೆ.

ಇವೆಲ್ಲಾ  ಕೊರೊನಾ ಕಾರಣಕ್ಕಲ್ಲ; ಸರಕಾರ ಅದಕ್ಕೆ ಪ್ರತಿಕ್ರಿಯಿಸಿದ ಕಾರಣಕ್ಕೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.  ಇಡೀ ಗ್ರಾಮ ಭಾರತವೇ ಲಕ್ವಾ ಹೊಡೆದ ಮಟ್ಟಕ್ಕೆ ತಂದಿಟ್ಟ ಉಪಕ್ರಮ ಇದು.  ಇನ್ನೀಗ ಕೊರೋನಾ ಎಷ್ಟು ಹರಡಿದೆ ಎಂಬ  ಪರೀಕ್ಷೆಗಳೇ ಸೀಮಿತವಾಗಿ ಕೊರೋನಾ ಗ್ರಾಮಭಾರತವನ್ನು ಹೊಕ್ಕರೆ ಏನಾಗಬಹುದು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಠತೆ ಇಲ್ಲ. Co morbidity ಎಂದು ಕರೆಯುವ  ಅನ್ಯ ಕಾಯಿಲೆಗಳಿಂದ ಸೊರಗಿರುವ  ಸ್ಥಿತಿಯಲ್ಲಿ ನಮ್ಮ ಗ್ರಾಮಭಾರತದ ಸಮುದಾಯಗಳಿವೆ. ಅಪೌಷ್ಟಿಕತೆ  ಒಂದೆಡೆಯಾದರೆ,  ಕುಡಿತ ಇನ್ನಿತರೇ ಚಟಗಳ ಕಾರಣದಿಂದ ಬಸವಳಿದಿರುವ ಮಧ್ಯ ವಯಸ್ಸು ದಾಟಿದ ಗಂಡಸರ ಸಂಖ್ಯೆ  ಸರಕಾರದ ಲೆಕ್ಕಕ್ಕೂ ಮೀರಿದ್ದು. ಈ ಇಡಿ ಇಡಿ ಸಮುದಾಯಗಳೇ ಕೊರೋನಾಕ್ಕೆ ಸುಲಭದ ತುತ್ತಾಗುವ ಸಾಧ್ಯತೆಗಳಿವೆ.

ಇದನ್ನು ತಡೆಗಟ್ಟುವ ಕ್ರಮಗಳು ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದು ಅರ್ಧ ಸತ್ಯ. ಪೂರ್ಣ ಸತ್ಯವೆಂದರೆ ಜೀವನೋಪಾಯಗಳಿಗೆ ಬಂದ ಕುತ್ತು; ಕೆಲಸ ಕಳೆದುಕೊಂಡು ಊರಿಗೆ ಮರಳಿದ ದುಗುಡ, ಮುಂದೇನು ಎಂದು ಖಾತ್ರಿಯಿಲ್ಲದ ತಲ್ಲಣ- ಇವನ್ನೆಲ್ಲಾ ಪರಿಗಣಿಸಿದರೆ ಕೊರೋನಾ ಮತ್ತು ಸರಕಾರ ಎರಡೂ ನಮ್ಮ ರೈತ-ಮಹಿಳೆ- ಕಾರ್ಮಿಕ ವರ್ಗದವರಿಗೆ ಎಂಥಾ  ಘಾಸಿಮಾಡಿದೆ ಎಂಬುದರ ಅಂದಾಜು ಸಿಗುತ್ತದೆ.

ನಮ್ಮ ಹಳ್ಳಿಗಳಲ್ಲಿ ಏನಾಗುತ್ತಿದೆ, ಎಂಥಾ ಸ್ಥಿತಿ ಇದೆ ಎಂಬ ಬಗ್ಗೆ ಒಂದಷ್ಟು ಗೆಳೆಯರಲ್ಲಿ ವರದಿಗಳನ್ನು ಕೇಳಿದೆವು. ಇವು ಮೂಲತಃ ಅಗುಳು ನೋಡಿ ಅನ್ನ ಬೆಂದಿತಾ ಎಂದು ನೋಡುವ ಕ್ರಮ ಅಷ್ಟೇ. ಮುಂದಿನ ದಿನಗಳಲ್ಲಿ ಈ ದುಗುಡ, ನಿರಾಸೆಗಳ ಹಂತ ಕರಗಿ ಉತ್ತಮ ಬಾಳ್ವೆ ಒದಗಿ ಬರಲಿ, ಅದನ್ನು ಸಾಧ್ಯಗೊಳಿಸುವಲ್ಲಿ ಸರಕಾರದ ಪಾತ್ರ ದೊಡ್ಡದು. ಇಲ್ಲಿನ ವರದಿಗಳು ಒಟ್ಟಾರೆಯಾಗಿಯೂ,ಸ್ಥಳೀಯವಾಗಿಯೂ ಕ್ರಿಯಾಶೀಲ ಸ್ಪಂದನೆಗೆ ಕಾರಣವಾದರೆ  ಸಾರ್ಥಕ. – ಕೆ.ಪಿ ಸುರೇಶ್ (ಸರಣಿ ಸಂಪಾದಕರು)

ವರದಿ-2

ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವಿನ ಯಂತ್ರಗಳು

  • ಸುನಿಲ್ ಶಂಕರಘಟ್ಟ

ಶಿವಮೊಗ್ಗ ಮಲೆನಾಡು ಭಾಗ ಹಾಗೂ ಜಲಾಶಯಗಳು ಇರುವುದರಿಂದ ಭತ್ತದ ಬೆಳೆಗೆ ಕೊಂಚ ಅನುಕೂಲಕರ ಪ್ರದೇಶವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನ ಪರಿಣಾಮದಿಂದ ಬೇಸಿಗೆಯಲ್ಲಿ ಬೆಳೆದ ಭತ್ತದ ಫಸಲು ಸುರಕ್ಷಿತವಾಗಿ ಕೈಸೇರುವುದೇ ಎಂಬ ಅನುಮಾನ ರೈತರಲ್ಲಿ ಮನೆಮಾಡಿದೆ. ಭದ್ರಾ ಮತ್ತು ತುಂಗ ಜಲಾಶಯದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಬೇಸಿಗೆ ಅಂತ್ಯದ ವೇಳೆಗೆ ಅಂದರೆ ಮೇ ಆರಂಭದ ಸಮಯದಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತದೆ.

ಶಿವಮೊಗ್ಗದ ಭದ್ರಾವತಿ ಹಾಗೂ ಚಿಕ್ಕಮಗಳೂರಿನ ತರೀಕೆರೆ ಭಾಗದಲ್ಲಿ ಈ ಸಮಯದಲ್ಲಿ ಭತ್ತ ಬೆಳೆಯಲಾಗುತ್ತದೆ. ಇಲ್ಲಿ ಬೇಸಿಗೆ ಸಮಯದಲ್ಲಿ ಜ್ಯೋತಿ ತಳಿಯ ಭತ್ತ ಹಾಗೂ ಮಳೆಗಾಲದ ಸಮಯದಲ್ಲಿ ಸೋನ ಮಸೂರಿ ಹಾಗೂ ಇನ್ನಿತರ ಭತ್ತದ ತಳಿಗಳನ್ನು ಬೆಳೆಯಲಾಗುತ್ತದೆ. ವಾಡಿಕೆ ಹಾಗೂ ಭತ್ತದ ಬೆಳೆವಣಿಗೆಯ ಆಧಾರದ ಮೇಲೆ ಭದ್ರಾವತಿ ಭಾಗದಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಭತ್ತ ಕಟಾವಿನ ಪ್ರಕ್ರಿಯೆ ಆರಂಭವಾಗುವ ಸಮಯವಾಗಿದೆ. ಮೊದಲು ಕೂಲಿ ಕಾರ್ಮಿಕರಿಂದ ಭತ್ತದ ಪೈರುಗಳನ್ನು ಕಟಾವು ಮಾಡುವರೂಢಿ ಇತ್ತು. ಈಗ ಯಂತ್ರಗಳಿಂದ ಕಟಾವು ಮಾಡಿಸಲಾಗುತ್ತದೆ. ಇಂದು ಆಧುನಿಕತೆಯ ಭರಾಟೆಯಲ್ಲಿ ಜನರು ನಗರ  ಸಂಸ್ಕೃತಿಗೆ ಒಗ್ಗಿಕೊಂಡ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಆಳುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರ ಕೈಯಿಂದ ಕಟಾವು ಮಾಡಿಸುವ ಕ್ರಮ ಬಹುತೇಕ ನಿಂತುಹೋಗಿದೆ. ಹಾಗೊಂದು ವೇಳೆ ಮಾಡಿಸಲು ಯತ್ನಿಸಿದರು ಲಾಕ್‍ಡೌನ್‍ ದೆಸೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಸಿಗಲಾರರು.

ತಂತ್ರಜ್ಞಾನ ಹಾಗೂ ಯಂತ್ರಗಳ ಅಭಿವೃದ್ಧಿಯ ದೆಸೆಯಿಂದ ಸುಮಾರು ಎಂಟತ್ತು ವರ್ಷಗಳಿಂದ ಕಟಾವಿನ ಕೆಲಸ ಯಂತ್ರಗಳಿಂದಲೇ ಮಾಡಿಸಲಾಗುತ್ತಿದೆ. ಹಾಗಾಗಿ ಇಲ್ಲಿನ ಕಟಾವಿನ ಕೆಲಸಕ್ಕೆ ಬೇಡಿಕೆ ಇರುವುದನ್ನು ಕಂಡುಕೊಂಡ ತಮಿಳುನಾಡಿನ ಕೃಷಿ ಯಂತ್ರದ ಮಾಲೀಕರು ಇಲ್ಲಿ ಪ್ರತಿ ವರ್ಷ ಗುಂಪು ಗುಂಪಾಗಿ ಕೃಷಿ ಯಂತ್ರಗಳನ್ನು ಭತ್ತ ಕಟಾವಿಗಾಗಿ ಕಳಿಸಿಕೊಡುತ್ತಾರೆ. ಸುಮಾರು 25 ಲಕ್ಷ ಮೌಲ್ಯವಿರುವ ಬೃಹತ್ ಯಂತ್ರಗಳನ್ನು ಕ್ಯಾಂಟರ್ ವಾಹನದಲ್ಲಿ ಇರಿಸಿ ಸಾಗಿಸಲಾಗುತ್ತದೆ. ಹತ್ತು ಬೃಹತ್ ಯಂತ್ರಗಳ ಮಾಲಿಕತ್ವ ಹೊಂದಿರುವ ಕಂಪನಿಗಳು ಸೀಜನ್ ಸಮಯದಲ್ಲಿ ಕರ್ನಾಟಕ, ಆಂಧ್ರ, ಕೇರಳ ಹೀಗೆ ಭತ್ತ ಬೆಳೆಯುವ ರಾಜ್ಯಗಳಿಗೆ ತಮ್ಮ ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅಂತೆಯೇ ಪ್ರಸ್ತುತ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಕ್ಕೆ ಯಂತ್ರಗಳ ಆಗಮಿಸುವ ಸಮಯ ಸಮೀಪಿಸಿದೆ.

 

ಭತ್ತಕಟಾವಿನ ಪ್ರಕ್ರಿಯೆಯಲ್ಲಿ ಮಾಲೀಕರು ಮತ್ತು ರೈತರಿಗೆ ಸಂಪರ್ಕ ಕಲ್ಪಿಸಲು ಮಧ್ಯವರ್ತಿಗಳ ಪಾತ್ರ ಪ್ರಮುಖವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಮಧ್ಯವರ್ತಿ ಪಾತ್ರ ಇದ್ದು, ಸ್ಥಳೀಯ ಮಧ್ಯವರ್ತಿಯು ಕಟಾವಿನ ಸಮಯ, ಬೇಡಿಕೆ, ಕಟಾವಿನ ಪ್ರಮಾಣ ಇನ್ನಿತರ ಮಾಹಿತಿಗಳ ಜೊತೆಗೆ ತಮಿಳುನಾಡಿನಲ್ಲಿರುವ ಮಧ್ಯವರ್ತಿಯ ಸಂಪರ್ಕ ಸಾಧಿಸುತ್ತಾರೆ. ಯಂತ್ರಗಳ ಕಂಪನಿಗಳ ಸಂಪರ್ಕ ಹೊಂದಿರುವ ತಮಿಳುನಾಡಿನ ಮಧ್ಯವರ್ತಿ ಕಂಪನಿಗಳಿಗೆ ಮುಂಗಡವಾಗಿ ಮೂವತ್ತರಿಂದ ಐವತ್ತು ಲಕ್ಷರೂಪಾಯಿ ಹಣ ಸಂದಾಯ ಮಾಡಿ ಅಗತ್ಯವಿರುವ ಯಂತ್ರಗಳನ್ನು ಆಯಾ ಪ್ರದೇಶಕ್ಕೆ ಕಳಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ಇರುವ ಪ್ರದೇಶವಾರು ಮಧ್ಯವರ್ತಿಗಳು ಯಾವ ದಿನ ಯಾವ ರೈತರಿಗೆ ಯಂತ್ರಗಳ ಅಗತ್ಯಇದೆ ಎಂದು ತಿಳಿದು ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅದಕ್ಕಾಗಿ ರೈತರೇ ತಮ್ಮ ಜಮೀನಿನ ಭತ್ತದ ಕಟಾವಿಗೆ ಯಂತ್ರಗಳ ಬೇಡಿಕೆ ಇಡುತ್ತಾರೆ.

ಒಂದು ಪ್ರದೇಶದ ಪ್ರತ್ಯೇಕ ಜಮೀನಿನಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಐದಾರು ಯಂತ್ರಗಳಿಗೆ ಒಬ್ಬ ಉಸ್ತುವಾರಿ ಇರುತ್ತಾರೆ. ಇವರು ಯಂತ್ರಗಳ ನಿರ್ವಹಣೆ ಹಾಗೂ ನಿಗದಿತ ಸಮಯಕ್ಕೆ ರೈತರ ಜಮೀನಿನ ಕಟಾವು ಮಾಡಿಸಿಕೊಡುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ಗಂಟೆಗೆ ಸರಾಸರಿ 2400 ಯಿಂದ 2800 ರೂಪಾಯಿ ವೆರೆಗೆ ಯಂತ್ರಗಳಿಗೆ ಪಾವತಿ ಮಾಡಬೇಕಿರುತ್ತದೆ. ಯಂತ್ರಗಳು ಕೆಲಸ ಮಾಡುವ ಅವಧಿಗಳನ್ನು ಬರೆಯುವ ಮತ್ತು ಪಾಲಿಸುವ ಜವಾಬ್ದಾರಿ ಆಯಾ ಯಂತ್ರದ ಚಾಲಕರದ್ದಾಗಿರುತ್ತದೆ. ಚಾಲಕರ ಹಾಗೂ ಸಹಾಯಕರ ಸಂಬಳವನ್ನು ಮಧ್ಯವರ್ತಿಗಳೇ ಕೊಡುತ್ತಾರೆ. ರೈತರು ಕೂಡ ಯಂತ್ರಗಳ ಬಾಡಿಗೆಯನ್ನು ಮಧ್ಯವರ್ತಿಗಳಿಗೆ ನೀಡಬೇಕಾಗಿರುತ್ತದೆ. ತಮಿಳುನಾಡಿನ ಯಂತ್ರಗಳ ಮಾಲೀಕರು ನೇರವಾಗಿ ಇಲ್ಲಿಗೆ ಬಂದು ಉಸ್ತುವಾರಿ ವಹಿಸುವುದು ಕಷ್ಟಸಾಧ್ಯವಾದ್ದರಿಂದ ಮಧ್ಯವರ್ತಿಗಳು ಮೂಲಕ ವ್ಯವಹಾರ ನಡೆಸುತ್ತಾರೆ. ಹೀಗೆ ಬೇರೆ ಬೇರೆ ಕಂಪನಿಯ ಯಂತ್ರಗಳು ಅಘೋಷಿತವಾಗಿ ಬೇರೆ ಬೇರೆ ಪ್ರದೇಶಗಳನ್ನು ವಿಂಗಡಣೆ ಮಾಡಿಕೊಂಡಿರುತ್ತವೆ. ಭದ್ರಾವತಿ ಭಾಗದಲ್ಲಿ ಶಂಕರಘಟ್ಟ, ಹುಣಸೆಕಟ್ಟೆ, ಮಾಲ್ಲೇನಹಳ್ಳಿ, ನಲ್ಲಿಸರ, ಗೋಣಿಬೀಡು, ಹೊನ್ನಟ್ಟಿ ಹೊಸೂರು, ಕಾಳನಕಟ್ಟೆ, ದೊಡ್ಡಕೊಪ್ಪನ ಹಳ್ಳಿ, ಹಿರಿಯೂರು, ವಿಶ್ವೇಶ್ವರನಗರ, ಸಿದ್ಧಾಪುರ ಹೀಗೆ ನೀರಾವರಿ ಪ್ರದೇಶಗಳಲ್ಲಿ ಈ ಯಂತ್ರಗಳು ಕಟಾವು ಕಾರ್ಯ ಮಾಡುತ್ತವೆ. ಒಂದೊಂದು ಊರಿನಲ್ಲೂ ಮೂರರಿಂದ ನಾಲ್ಕು ಯಂತ್ರಗಳ ಅವಶ್ಯಕತೆ ಇರುತ್ತದೆ.

ಕೂಲಿ ಕಾರ್ಮಿಕರಿಂದ ಕಟಾವು ಮಾಡಿಸುವುದಕ್ಕಿಂತಲೂ ಯಂತ್ರಗಳಿಂದ ಮಾಡಿಸುವ ಕಟಾವು ರೈತರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆರ್ಥಿಕವಾಗಿ ಹಾಗೂ ಸರಳ ಕಟಾವು ಪ್ರಕ್ರಿಯೆಯ ದೃಷ್ಟಿಯಿಂದ ಯಂತ್ರಗಳ ಕಟಾವಿಗೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾರೆ. ಕೂಲಿ ಕಾರ್ಮಿಕರಿಗೆ ಕೊಡುವ ಕೂಲಿಯ ಮೊತ್ತಕ್ಕೆ ಹೋಲಿಸಿಕೊಂಡರೆ ಯಂತ್ರಗಳಿಗೆ ಕೊಡುವ ಬಾಡಿಗೆಯ ಹಣ ಕಡಿಮೆಯಾಗಿದೆ. ಕೂಲಿ ಕಾರ್ಮಿಕರು ಕೈಯಿಂದ ಭತ್ತದ ಪೈರುಗಳನ್ನು ಕಟಾವು ಮಾಡುವುದರಿಂದ ತೆನೆಗಳು ಅಲುಗಾಡಿ ಸ್ವಲ್ಪ ಪ್ರಮಾಣದ ಭತ್ತ ನೆಲಕ್ಕೆ ಬಿದ್ದು ವ್ಯರ್ಥವಾಗುತ್ತದೆ. ಅಲ್ಲದೆ ಕಟಾವಿನ ನಂತರ ಭತ್ತ ಬಡಿಯುವ ಯಂತ್ರಕ್ಕೆ ಪ್ರತ್ಯೇಕ ಆಳುಗಳ ಅವಶ್ಯಕತೆ ಇರುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ ಯಂತ್ರಗಳಿಂದ ಕಟಾವು ಮಾಡಿಸುವುದರಿಂದ ಭತ್ತ ವ್ಯರ್ಥವಾಗುವುದನ್ನು ತಡೆಯುವುದರ ಜೊತೆಗೆ ಕಟಾವು ಹಾಗೂ ಭತ್ತ ಬಡಿಯುವ ಕೆಲಸ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಭತ್ತವನ್ನು ಸಂಗ್ರಹಣೆ ಮಾಡಿ, ಮಾರಾಟ ಮಾಡಲು ಸಿದ್ಧವಾಗಿರುತ್ತದೆ. ಇದರಿಂದ ರೈತರು ನೈಸರ್ಗಿಕ ಅಸಮತೋಲನವನ್ನು ಗಮನದಲ್ಲಿರಿಸಿ ಹೆಚ್ಚು ಬೆಲೆ ಇರುವ ಸಮಯಕ್ಕೆ ಭತ್ತ ಕಟಾವು ಮಾಡಿಸಲು ಅನುಕೂಲಕರವಾಗಿರುತ್ತದೆ.

ಆದರೆ ಈ ಬಾರಿ ಕೊರೊನ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಜಾರಿ ಇರುವ ಲಾಕ್‍ಡೌನ್‍ ದೆಸೆಯಿಂದ ಬಿಗಿ ಬಂದೋಬಸ್ತ್ ಹಾಗೂ ಕಠಿಣ ನಿಯಮಗಳು ಜಾರಿಯಲ್ಲಿದೆ. ಈ ಮಧ್ಯೆ ಯಂತ್ರಗಳು ಕರ್ನಾಟಕದ ಗಡಿದಾಟಲು ಕಷ್ಟವಾಗಬಹುದು. ಆಗೊಂದು ವೇಳೆ ಯಂತ್ರಗಳು ಕಟಾವಿನ ಸಮಯಕ್ಕೆ ಸಿಗದೇ ಹೋದರೆ ಭತ್ತಕಟಾವಿಗೆ ಬಹಳಷ್ಟು ತೊಂದರೆಯಾಗುತ್ತದೆ. ಇದರಿಂದ ರೈತರು ಭತ್ತಕಟಾವು ಮಾಡುವುದು ಹೇಗೆಂದು ಚಿಂತಿತರಾಗಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಿಂದ ಮಳೆ ಆರಂಭವಾಗುವುದರಿಂದ ಸರಿಯಾದ ಸಮಯಕ್ಕೆ ಭತ್ತ ಕಟಾವಾಗದಿದ್ದರೆ ಬೆಳೆದ ಭತ್ತದ ತೆನೆ ನೆಲಕ್ಕೆ ಬಾಗುತ್ತದೆ. ತಡವಾಗಿ ಕಟಾವು ಆರಂಭಿಸಿದರೆ ಯಂತ್ರವು ಗದ್ದೆಯಲ್ಲಿ ಚಲಿಸಲು ಹರಸಾಹಸ ಪಡಬೇಕಾಗುತ್ತದೆ.

ಇದರಿಂದ ಎಚ್ಚೆತ್ತ ಕೆಲ ರೈತರು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಯಂತ್ರಗಳ ಸಂಚಾರಕ್ಕೆ ಅನುಮತಿ ಕೋರಿ ಮನವಿ ಸಲ್ಲಿದ್ದಾರೆ. ಇದಕ್ಕೆ ಸ್ಪಂಧಿಸಿರುವ ಜಿಲ್ಲಾಡಳಿತ ಕೃಷಿ ಇಲಾಖೆಯೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ಯಂತ್ರಗಳ ಪ್ರವೇಶಕ್ಕೆ ಮೊದಲ ಆಧ್ಯತೆಕೊಟ್ಟು ಅನುಮತಿ ನೀಡಲಾಗುವುದು ಎಂದು ಹೇಳಿದೆ. ಇದರ ಜೊತೆಗೆ ನಿಯಮಗಳನ್ನು ಹೇಳಿದ್ದು, ಯಂತ್ರದ ಚಾಲಕ, ಲಾರಿ ಚಾಲಕ ಮತ್ತು ಸಹಾಯಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ಅವರು ಕರ್ನಾಟಕದ ಒಳಗೆ ಸಂಚಾರಿಸಬಹದು ಎಂದು ಹೇಳಿದೆ. ಕರ್ನಾಟಕದ ರೈತರ ಹಿತದೃಷ್ಟಿಯಿಂದ ನಿಯಮಗಳು ಒಳಿತಾದರು, ನಿಯಮಗಳನ್ನು ಪಾಲಿಸಲಾಗದೆ ಕರ್ನಾಟಕಕ್ಕೆ ಬರುವ ಯಂತ್ರಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.


ಇದನ್ನೂ ಓದಿ: ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...