Homeಮುಖಪುಟಗ್ರಾಮಭಾರತ - 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಗ್ರಾಮಭಾರತ – 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

- Advertisement -
- Advertisement -

ಪೀಠಿಕೆ

ಕೊರೋನಾ ಪಿಡುಗಿಗೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿದ ರೀತಿ ಬಗ್ಗೆ ಈಗಾಗಲೇ ಸಾಕಷ್ಟು ವ್ಯಾಖ್ಯಾನಗಳು ಬಂದಿವೆ. ಮೂಲತಃ ಇದು knee jerk reaction  ಅನ್ನುವುದರಲ್ಲಿ ಸಂದೇಹವಿಲ್ಲ. ಕೊರೋನಾ ಎದುರಿಸಲು ಬೇಕಾದ ಪೂರ್ವ ಸಿದ್ಧತೆಗಳು ಆಗಿರಲಿಲ್ಲ. ಅದಿರಲಿ, ಈ ಲಾಕ್ ಡೌನ್ ನಮ್ಮ ಕೃಷಿಲೋಕ ಮತ್ತು ವಲಸೆ ಹೊಗಿದ್ದ ಇದೇ ಗ್ರಾಮಾಂತರದ ಕಳ್ಳುಬಳ್ಳಿಗಳ ಮೇಲೆ ಮಾಡಿದ ಘಾತಕ ಪರಿಣಾಮದ ಬಗ್ಗೆ ತಡವಾಗಿ ನಮ್ಮ ಸರಕಾರ ಪ್ರತಿಕ್ರಿಯಿಸತೊಡಗಿದೆ. ಎಲ್ಲೂ ಹೋಗಲಾಗದೇ ಯಾವ ವ್ಯವಹಾರವೂ ಮಾಡಲಾಗದೇ, ಕನಿಷ್ಠ ಆರೋಗ್ಯ ಸೌಲಭ್ಯಕ್ಕೂ ಪರದಾಡಬೇಕಾಗಿ ಬಂದ ಸ್ಥಿತಿ ಒಂದೆಡೆಯಾದರೆ, ಕೊರೋನಾ ಭೀತಿಯಿಂದ ದೀಪ ಹಚ್ಚುವುದರಿಂದ ಹಿಡಿದು, ಹೊರಗಿನಿಂದ ಬಂದವರನ್ನು ಊರಿಗೆ ಸೇರಿಸದೇ ಇದ್ದ ಕತೆಗಳಿವೆ.

ಬೇಸಿಗೆಯಲ್ಲಿ ಕೊಳವೆ ಬಾವಿ ಸೌಲಭ್ಯದಿಂದ ಒಂದಷ್ಟು ಹಣ್ಣು ತರಕಾರಿ ಬೆಳೆದ ರೈತರ ಪಾಡು ನಾಯಿ ಪಾಡಾದ ಕತೆಗಳು ಇನ್ನೂ ಬರುತ್ತಲೇ ಇವೆ.

ಇವೆಲ್ಲಾ  ಕೊರೊನಾ ಕಾರಣಕ್ಕಲ್ಲ; ಸರಕಾರ ಅದಕ್ಕೆ ಪ್ರತಿಕ್ರಿಯಿಸಿದ ಕಾರಣಕ್ಕೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.  ಇಡೀ ಗ್ರಾಮ ಭಾರತವೇ ಲಕ್ವಾ ಹೊಡೆದ ಮಟ್ಟಕ್ಕೆ ತಂದಿಟ್ಟ ಉಪಕ್ರಮ ಇದು.  ಇನ್ನೀಗ ಕೊರೋನಾ ಎಷ್ಟು ಹರಡಿದೆ ಎಂಬ  ಪರೀಕ್ಷೆಗಳೇ ಸೀಮಿತವಾಗಿ ಕೊರೋನಾ ಗ್ರಾಮಭಾರತವನ್ನು ಹೊಕ್ಕರೆ ಏನಾಗಬಹುದು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಠತೆ ಇಲ್ಲ. Co morbidity ಎಂದು ಕರೆಯುವ  ಅನ್ಯ ಕಾಯಿಲೆಗಳಿಂದ ಸೊರಗಿರುವ  ಸ್ಥಿತಿಯಲ್ಲಿ ನಮ್ಮ ಗ್ರಾಮಭಾರತದ ಸಮುದಾಯಗಳಿವೆ. ಅಪೌಷ್ಟಿಕತೆ  ಒಂದೆಡೆಯಾದರೆ,  ಕುಡಿತ ಇನ್ನಿತರೇ ಚಟಗಳ ಕಾರಣದಿಂದ ಬಸವಳಿದಿರುವ ಮಧ್ಯ ವಯಸ್ಸು ದಾಟಿದ ಗಂಡಸರ ಸಂಖ್ಯೆ  ಸರಕಾರದ ಲೆಕ್ಕಕ್ಕೂ ಮೀರಿದ್ದು. ಈ ಇಡಿ ಇಡಿ ಸಮುದಾಯಗಳೇ ಕೊರೋನಾಕ್ಕೆ ಸುಲಭದ ತುತ್ತಾಗುವ ಸಾಧ್ಯತೆಗಳಿವೆ.

ಇದನ್ನು ತಡೆಗಟ್ಟುವ ಕ್ರಮಗಳು ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದು ಅರ್ಧ ಸತ್ಯ. ಪೂರ್ಣ ಸತ್ಯವೆಂದರೆ ಜೀವನೋಪಾಯಗಳಿಗೆ ಬಂದ ಕುತ್ತು; ಕೆಲಸ ಕಳೆದುಕೊಂಡು ಊರಿಗೆ ಮರಳಿದ ದುಗುಡ, ಮುಂದೇನು ಎಂದು ಖಾತ್ರಿಯಿಲ್ಲದ ತಲ್ಲಣ- ಇವನ್ನೆಲ್ಲಾ ಪರಿಗಣಿಸಿದರೆ ಕೊರೋನಾ ಮತ್ತು ಸರಕಾರ ಎರಡೂ ನಮ್ಮ ರೈತ-ಮಹಿಳೆ- ಕಾರ್ಮಿಕ ವರ್ಗದವರಿಗೆ ಎಂಥಾ  ಘಾಸಿಮಾಡಿದೆ ಎಂಬುದರ ಅಂದಾಜು ಸಿಗುತ್ತದೆ.

ನಮ್ಮ ಹಳ್ಳಿಗಳಲ್ಲಿ ಏನಾಗುತ್ತಿದೆ, ಎಂಥಾ ಸ್ಥಿತಿ ಇದೆ ಎಂಬ ಬಗ್ಗೆ ಒಂದಷ್ಟು ಗೆಳೆಯರಲ್ಲಿ ವರದಿಗಳನ್ನು ಕೇಳಿದೆವು. ಇವು ಮೂಲತಃ ಅಗುಳು ನೋಡಿ ಅನ್ನ ಬೆಂದಿತಾ ಎಂದು ನೋಡುವ ಕ್ರಮ ಅಷ್ಟೇ. ಮುಂದಿನ ದಿನಗಳಲ್ಲಿ ಈ ದುಗುಡ, ನಿರಾಸೆಗಳ ಹಂತ ಕರಗಿ ಉತ್ತಮ ಬಾಳ್ವೆ ಒದಗಿ ಬರಲಿ, ಅದನ್ನು ಸಾಧ್ಯಗೊಳಿಸುವಲ್ಲಿ ಸರಕಾರದ ಪಾತ್ರ ದೊಡ್ಡದು. ಇಲ್ಲಿನ ವರದಿಗಳು ಒಟ್ಟಾರೆಯಾಗಿಯೂ,ಸ್ಥಳೀಯವಾಗಿಯೂ ಕ್ರಿಯಾಶೀಲ ಸ್ಪಂದನೆಗೆ ಕಾರಣವಾದರೆ  ಸಾರ್ಥಕ. – ಕೆ.ಪಿ ಸುರೇಶ್ (ಸರಣಿ ಸಂಪಾದಕರು)

ವರದಿ-2

ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವಿನ ಯಂತ್ರಗಳು

  • ಸುನಿಲ್ ಶಂಕರಘಟ್ಟ

ಶಿವಮೊಗ್ಗ ಮಲೆನಾಡು ಭಾಗ ಹಾಗೂ ಜಲಾಶಯಗಳು ಇರುವುದರಿಂದ ಭತ್ತದ ಬೆಳೆಗೆ ಕೊಂಚ ಅನುಕೂಲಕರ ಪ್ರದೇಶವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನ ಪರಿಣಾಮದಿಂದ ಬೇಸಿಗೆಯಲ್ಲಿ ಬೆಳೆದ ಭತ್ತದ ಫಸಲು ಸುರಕ್ಷಿತವಾಗಿ ಕೈಸೇರುವುದೇ ಎಂಬ ಅನುಮಾನ ರೈತರಲ್ಲಿ ಮನೆಮಾಡಿದೆ. ಭದ್ರಾ ಮತ್ತು ತುಂಗ ಜಲಾಶಯದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಬೇಸಿಗೆ ಅಂತ್ಯದ ವೇಳೆಗೆ ಅಂದರೆ ಮೇ ಆರಂಭದ ಸಮಯದಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತದೆ.

ಶಿವಮೊಗ್ಗದ ಭದ್ರಾವತಿ ಹಾಗೂ ಚಿಕ್ಕಮಗಳೂರಿನ ತರೀಕೆರೆ ಭಾಗದಲ್ಲಿ ಈ ಸಮಯದಲ್ಲಿ ಭತ್ತ ಬೆಳೆಯಲಾಗುತ್ತದೆ. ಇಲ್ಲಿ ಬೇಸಿಗೆ ಸಮಯದಲ್ಲಿ ಜ್ಯೋತಿ ತಳಿಯ ಭತ್ತ ಹಾಗೂ ಮಳೆಗಾಲದ ಸಮಯದಲ್ಲಿ ಸೋನ ಮಸೂರಿ ಹಾಗೂ ಇನ್ನಿತರ ಭತ್ತದ ತಳಿಗಳನ್ನು ಬೆಳೆಯಲಾಗುತ್ತದೆ. ವಾಡಿಕೆ ಹಾಗೂ ಭತ್ತದ ಬೆಳೆವಣಿಗೆಯ ಆಧಾರದ ಮೇಲೆ ಭದ್ರಾವತಿ ಭಾಗದಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಭತ್ತ ಕಟಾವಿನ ಪ್ರಕ್ರಿಯೆ ಆರಂಭವಾಗುವ ಸಮಯವಾಗಿದೆ. ಮೊದಲು ಕೂಲಿ ಕಾರ್ಮಿಕರಿಂದ ಭತ್ತದ ಪೈರುಗಳನ್ನು ಕಟಾವು ಮಾಡುವರೂಢಿ ಇತ್ತು. ಈಗ ಯಂತ್ರಗಳಿಂದ ಕಟಾವು ಮಾಡಿಸಲಾಗುತ್ತದೆ. ಇಂದು ಆಧುನಿಕತೆಯ ಭರಾಟೆಯಲ್ಲಿ ಜನರು ನಗರ  ಸಂಸ್ಕೃತಿಗೆ ಒಗ್ಗಿಕೊಂಡ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಆಳುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರ ಕೈಯಿಂದ ಕಟಾವು ಮಾಡಿಸುವ ಕ್ರಮ ಬಹುತೇಕ ನಿಂತುಹೋಗಿದೆ. ಹಾಗೊಂದು ವೇಳೆ ಮಾಡಿಸಲು ಯತ್ನಿಸಿದರು ಲಾಕ್‍ಡೌನ್‍ ದೆಸೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಸಿಗಲಾರರು.

ತಂತ್ರಜ್ಞಾನ ಹಾಗೂ ಯಂತ್ರಗಳ ಅಭಿವೃದ್ಧಿಯ ದೆಸೆಯಿಂದ ಸುಮಾರು ಎಂಟತ್ತು ವರ್ಷಗಳಿಂದ ಕಟಾವಿನ ಕೆಲಸ ಯಂತ್ರಗಳಿಂದಲೇ ಮಾಡಿಸಲಾಗುತ್ತಿದೆ. ಹಾಗಾಗಿ ಇಲ್ಲಿನ ಕಟಾವಿನ ಕೆಲಸಕ್ಕೆ ಬೇಡಿಕೆ ಇರುವುದನ್ನು ಕಂಡುಕೊಂಡ ತಮಿಳುನಾಡಿನ ಕೃಷಿ ಯಂತ್ರದ ಮಾಲೀಕರು ಇಲ್ಲಿ ಪ್ರತಿ ವರ್ಷ ಗುಂಪು ಗುಂಪಾಗಿ ಕೃಷಿ ಯಂತ್ರಗಳನ್ನು ಭತ್ತ ಕಟಾವಿಗಾಗಿ ಕಳಿಸಿಕೊಡುತ್ತಾರೆ. ಸುಮಾರು 25 ಲಕ್ಷ ಮೌಲ್ಯವಿರುವ ಬೃಹತ್ ಯಂತ್ರಗಳನ್ನು ಕ್ಯಾಂಟರ್ ವಾಹನದಲ್ಲಿ ಇರಿಸಿ ಸಾಗಿಸಲಾಗುತ್ತದೆ. ಹತ್ತು ಬೃಹತ್ ಯಂತ್ರಗಳ ಮಾಲಿಕತ್ವ ಹೊಂದಿರುವ ಕಂಪನಿಗಳು ಸೀಜನ್ ಸಮಯದಲ್ಲಿ ಕರ್ನಾಟಕ, ಆಂಧ್ರ, ಕೇರಳ ಹೀಗೆ ಭತ್ತ ಬೆಳೆಯುವ ರಾಜ್ಯಗಳಿಗೆ ತಮ್ಮ ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅಂತೆಯೇ ಪ್ರಸ್ತುತ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಕ್ಕೆ ಯಂತ್ರಗಳ ಆಗಮಿಸುವ ಸಮಯ ಸಮೀಪಿಸಿದೆ.

 

ಭತ್ತಕಟಾವಿನ ಪ್ರಕ್ರಿಯೆಯಲ್ಲಿ ಮಾಲೀಕರು ಮತ್ತು ರೈತರಿಗೆ ಸಂಪರ್ಕ ಕಲ್ಪಿಸಲು ಮಧ್ಯವರ್ತಿಗಳ ಪಾತ್ರ ಪ್ರಮುಖವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಮಧ್ಯವರ್ತಿ ಪಾತ್ರ ಇದ್ದು, ಸ್ಥಳೀಯ ಮಧ್ಯವರ್ತಿಯು ಕಟಾವಿನ ಸಮಯ, ಬೇಡಿಕೆ, ಕಟಾವಿನ ಪ್ರಮಾಣ ಇನ್ನಿತರ ಮಾಹಿತಿಗಳ ಜೊತೆಗೆ ತಮಿಳುನಾಡಿನಲ್ಲಿರುವ ಮಧ್ಯವರ್ತಿಯ ಸಂಪರ್ಕ ಸಾಧಿಸುತ್ತಾರೆ. ಯಂತ್ರಗಳ ಕಂಪನಿಗಳ ಸಂಪರ್ಕ ಹೊಂದಿರುವ ತಮಿಳುನಾಡಿನ ಮಧ್ಯವರ್ತಿ ಕಂಪನಿಗಳಿಗೆ ಮುಂಗಡವಾಗಿ ಮೂವತ್ತರಿಂದ ಐವತ್ತು ಲಕ್ಷರೂಪಾಯಿ ಹಣ ಸಂದಾಯ ಮಾಡಿ ಅಗತ್ಯವಿರುವ ಯಂತ್ರಗಳನ್ನು ಆಯಾ ಪ್ರದೇಶಕ್ಕೆ ಕಳಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ಇರುವ ಪ್ರದೇಶವಾರು ಮಧ್ಯವರ್ತಿಗಳು ಯಾವ ದಿನ ಯಾವ ರೈತರಿಗೆ ಯಂತ್ರಗಳ ಅಗತ್ಯಇದೆ ಎಂದು ತಿಳಿದು ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅದಕ್ಕಾಗಿ ರೈತರೇ ತಮ್ಮ ಜಮೀನಿನ ಭತ್ತದ ಕಟಾವಿಗೆ ಯಂತ್ರಗಳ ಬೇಡಿಕೆ ಇಡುತ್ತಾರೆ.

ಒಂದು ಪ್ರದೇಶದ ಪ್ರತ್ಯೇಕ ಜಮೀನಿನಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಐದಾರು ಯಂತ್ರಗಳಿಗೆ ಒಬ್ಬ ಉಸ್ತುವಾರಿ ಇರುತ್ತಾರೆ. ಇವರು ಯಂತ್ರಗಳ ನಿರ್ವಹಣೆ ಹಾಗೂ ನಿಗದಿತ ಸಮಯಕ್ಕೆ ರೈತರ ಜಮೀನಿನ ಕಟಾವು ಮಾಡಿಸಿಕೊಡುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ಗಂಟೆಗೆ ಸರಾಸರಿ 2400 ಯಿಂದ 2800 ರೂಪಾಯಿ ವೆರೆಗೆ ಯಂತ್ರಗಳಿಗೆ ಪಾವತಿ ಮಾಡಬೇಕಿರುತ್ತದೆ. ಯಂತ್ರಗಳು ಕೆಲಸ ಮಾಡುವ ಅವಧಿಗಳನ್ನು ಬರೆಯುವ ಮತ್ತು ಪಾಲಿಸುವ ಜವಾಬ್ದಾರಿ ಆಯಾ ಯಂತ್ರದ ಚಾಲಕರದ್ದಾಗಿರುತ್ತದೆ. ಚಾಲಕರ ಹಾಗೂ ಸಹಾಯಕರ ಸಂಬಳವನ್ನು ಮಧ್ಯವರ್ತಿಗಳೇ ಕೊಡುತ್ತಾರೆ. ರೈತರು ಕೂಡ ಯಂತ್ರಗಳ ಬಾಡಿಗೆಯನ್ನು ಮಧ್ಯವರ್ತಿಗಳಿಗೆ ನೀಡಬೇಕಾಗಿರುತ್ತದೆ. ತಮಿಳುನಾಡಿನ ಯಂತ್ರಗಳ ಮಾಲೀಕರು ನೇರವಾಗಿ ಇಲ್ಲಿಗೆ ಬಂದು ಉಸ್ತುವಾರಿ ವಹಿಸುವುದು ಕಷ್ಟಸಾಧ್ಯವಾದ್ದರಿಂದ ಮಧ್ಯವರ್ತಿಗಳು ಮೂಲಕ ವ್ಯವಹಾರ ನಡೆಸುತ್ತಾರೆ. ಹೀಗೆ ಬೇರೆ ಬೇರೆ ಕಂಪನಿಯ ಯಂತ್ರಗಳು ಅಘೋಷಿತವಾಗಿ ಬೇರೆ ಬೇರೆ ಪ್ರದೇಶಗಳನ್ನು ವಿಂಗಡಣೆ ಮಾಡಿಕೊಂಡಿರುತ್ತವೆ. ಭದ್ರಾವತಿ ಭಾಗದಲ್ಲಿ ಶಂಕರಘಟ್ಟ, ಹುಣಸೆಕಟ್ಟೆ, ಮಾಲ್ಲೇನಹಳ್ಳಿ, ನಲ್ಲಿಸರ, ಗೋಣಿಬೀಡು, ಹೊನ್ನಟ್ಟಿ ಹೊಸೂರು, ಕಾಳನಕಟ್ಟೆ, ದೊಡ್ಡಕೊಪ್ಪನ ಹಳ್ಳಿ, ಹಿರಿಯೂರು, ವಿಶ್ವೇಶ್ವರನಗರ, ಸಿದ್ಧಾಪುರ ಹೀಗೆ ನೀರಾವರಿ ಪ್ರದೇಶಗಳಲ್ಲಿ ಈ ಯಂತ್ರಗಳು ಕಟಾವು ಕಾರ್ಯ ಮಾಡುತ್ತವೆ. ಒಂದೊಂದು ಊರಿನಲ್ಲೂ ಮೂರರಿಂದ ನಾಲ್ಕು ಯಂತ್ರಗಳ ಅವಶ್ಯಕತೆ ಇರುತ್ತದೆ.

ಕೂಲಿ ಕಾರ್ಮಿಕರಿಂದ ಕಟಾವು ಮಾಡಿಸುವುದಕ್ಕಿಂತಲೂ ಯಂತ್ರಗಳಿಂದ ಮಾಡಿಸುವ ಕಟಾವು ರೈತರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆರ್ಥಿಕವಾಗಿ ಹಾಗೂ ಸರಳ ಕಟಾವು ಪ್ರಕ್ರಿಯೆಯ ದೃಷ್ಟಿಯಿಂದ ಯಂತ್ರಗಳ ಕಟಾವಿಗೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾರೆ. ಕೂಲಿ ಕಾರ್ಮಿಕರಿಗೆ ಕೊಡುವ ಕೂಲಿಯ ಮೊತ್ತಕ್ಕೆ ಹೋಲಿಸಿಕೊಂಡರೆ ಯಂತ್ರಗಳಿಗೆ ಕೊಡುವ ಬಾಡಿಗೆಯ ಹಣ ಕಡಿಮೆಯಾಗಿದೆ. ಕೂಲಿ ಕಾರ್ಮಿಕರು ಕೈಯಿಂದ ಭತ್ತದ ಪೈರುಗಳನ್ನು ಕಟಾವು ಮಾಡುವುದರಿಂದ ತೆನೆಗಳು ಅಲುಗಾಡಿ ಸ್ವಲ್ಪ ಪ್ರಮಾಣದ ಭತ್ತ ನೆಲಕ್ಕೆ ಬಿದ್ದು ವ್ಯರ್ಥವಾಗುತ್ತದೆ. ಅಲ್ಲದೆ ಕಟಾವಿನ ನಂತರ ಭತ್ತ ಬಡಿಯುವ ಯಂತ್ರಕ್ಕೆ ಪ್ರತ್ಯೇಕ ಆಳುಗಳ ಅವಶ್ಯಕತೆ ಇರುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ ಯಂತ್ರಗಳಿಂದ ಕಟಾವು ಮಾಡಿಸುವುದರಿಂದ ಭತ್ತ ವ್ಯರ್ಥವಾಗುವುದನ್ನು ತಡೆಯುವುದರ ಜೊತೆಗೆ ಕಟಾವು ಹಾಗೂ ಭತ್ತ ಬಡಿಯುವ ಕೆಲಸ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಭತ್ತವನ್ನು ಸಂಗ್ರಹಣೆ ಮಾಡಿ, ಮಾರಾಟ ಮಾಡಲು ಸಿದ್ಧವಾಗಿರುತ್ತದೆ. ಇದರಿಂದ ರೈತರು ನೈಸರ್ಗಿಕ ಅಸಮತೋಲನವನ್ನು ಗಮನದಲ್ಲಿರಿಸಿ ಹೆಚ್ಚು ಬೆಲೆ ಇರುವ ಸಮಯಕ್ಕೆ ಭತ್ತ ಕಟಾವು ಮಾಡಿಸಲು ಅನುಕೂಲಕರವಾಗಿರುತ್ತದೆ.

ಆದರೆ ಈ ಬಾರಿ ಕೊರೊನ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಜಾರಿ ಇರುವ ಲಾಕ್‍ಡೌನ್‍ ದೆಸೆಯಿಂದ ಬಿಗಿ ಬಂದೋಬಸ್ತ್ ಹಾಗೂ ಕಠಿಣ ನಿಯಮಗಳು ಜಾರಿಯಲ್ಲಿದೆ. ಈ ಮಧ್ಯೆ ಯಂತ್ರಗಳು ಕರ್ನಾಟಕದ ಗಡಿದಾಟಲು ಕಷ್ಟವಾಗಬಹುದು. ಆಗೊಂದು ವೇಳೆ ಯಂತ್ರಗಳು ಕಟಾವಿನ ಸಮಯಕ್ಕೆ ಸಿಗದೇ ಹೋದರೆ ಭತ್ತಕಟಾವಿಗೆ ಬಹಳಷ್ಟು ತೊಂದರೆಯಾಗುತ್ತದೆ. ಇದರಿಂದ ರೈತರು ಭತ್ತಕಟಾವು ಮಾಡುವುದು ಹೇಗೆಂದು ಚಿಂತಿತರಾಗಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಿಂದ ಮಳೆ ಆರಂಭವಾಗುವುದರಿಂದ ಸರಿಯಾದ ಸಮಯಕ್ಕೆ ಭತ್ತ ಕಟಾವಾಗದಿದ್ದರೆ ಬೆಳೆದ ಭತ್ತದ ತೆನೆ ನೆಲಕ್ಕೆ ಬಾಗುತ್ತದೆ. ತಡವಾಗಿ ಕಟಾವು ಆರಂಭಿಸಿದರೆ ಯಂತ್ರವು ಗದ್ದೆಯಲ್ಲಿ ಚಲಿಸಲು ಹರಸಾಹಸ ಪಡಬೇಕಾಗುತ್ತದೆ.

ಇದರಿಂದ ಎಚ್ಚೆತ್ತ ಕೆಲ ರೈತರು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಯಂತ್ರಗಳ ಸಂಚಾರಕ್ಕೆ ಅನುಮತಿ ಕೋರಿ ಮನವಿ ಸಲ್ಲಿದ್ದಾರೆ. ಇದಕ್ಕೆ ಸ್ಪಂಧಿಸಿರುವ ಜಿಲ್ಲಾಡಳಿತ ಕೃಷಿ ಇಲಾಖೆಯೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ಯಂತ್ರಗಳ ಪ್ರವೇಶಕ್ಕೆ ಮೊದಲ ಆಧ್ಯತೆಕೊಟ್ಟು ಅನುಮತಿ ನೀಡಲಾಗುವುದು ಎಂದು ಹೇಳಿದೆ. ಇದರ ಜೊತೆಗೆ ನಿಯಮಗಳನ್ನು ಹೇಳಿದ್ದು, ಯಂತ್ರದ ಚಾಲಕ, ಲಾರಿ ಚಾಲಕ ಮತ್ತು ಸಹಾಯಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ಅವರು ಕರ್ನಾಟಕದ ಒಳಗೆ ಸಂಚಾರಿಸಬಹದು ಎಂದು ಹೇಳಿದೆ. ಕರ್ನಾಟಕದ ರೈತರ ಹಿತದೃಷ್ಟಿಯಿಂದ ನಿಯಮಗಳು ಒಳಿತಾದರು, ನಿಯಮಗಳನ್ನು ಪಾಲಿಸಲಾಗದೆ ಕರ್ನಾಟಕಕ್ಕೆ ಬರುವ ಯಂತ್ರಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.


ಇದನ್ನೂ ಓದಿ: ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...