Homeಮುಖಪುಟರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

- Advertisement -
- Advertisement -

‘ಖೋ ಖೋ’ ಆಟವನ್ನೇ ಉಸಿರಾಡುತ್ತಾ, ತನ್ನ ಗುರು ದತ್ತಣ್ಣ ಹೇಳಿದ ಮಾರ್ಗದಲ್ಲಿ ಹೆಜ್ಜೆ ಇಟ್ಟು ರಾಷ್ಟ್ರಮಟ್ಟದಲ್ಲೂ ಆಟಗಾರನಾಗಿದ್ದ ಮನೋಹರ್‌ (ಶರಣ್‌) ಎಂಬ ಯುವಕ ಕೊನೆಗೆ ಕೆಲಸವೂ ಇಲ್ಲದೆ ಪರಿತಪಿಸುತ್ತಾನೆ. ಖೋಖೋ ಆಟಕ್ಕೆ ಮಾನ್ಯತೆ ಇಲ್ಲವಾಗಿ, ಅದನ್ನೇ ನಂಬಿದ್ದ ಆಟಗಾರರು ಬೀದಿಪಾಲಾಗುತ್ತಾರೆ. ಓದಿನಲ್ಲಿ ಮುಂದಿದ್ದ ಶಿಷ್ಯನನ್ನು ಆಟದತ್ತ ಎಳೆತಂದು ದಿಕ್ಕು ತಪ್ಪಿಸಿದೆ ಎಂಬ ಕೊರಗಿನಲ್ಲಿರುವ ಪಿ.ಟಿ.ಮಾಸ್ಟರ್‌ ದತ್ತಣ್ಣ, ಮನೋಹರ್‌ಗಾಗಿ ಒಂದು ಕೆಲಸ ಹುಡುಕಿಕೊಡಲು ಪರದಾಡುತ್ತಿದ್ದಾರೆ. ಕೊನೆಗೆ ‘ಬೆಟ್ಟದಪುರ’ ಎಂಬ ಕುಗ್ರಾಮದ ಹಿಂದುಳಿದ ಶಾಲೆಯೊಂದರಲ್ಲಿ ಕೆಲಸ ಕೊಡಿಸುತ್ತಾರೆ. ಆಲಸ್ಯ, ಉದಾಸೀನತೆ ಬೆಳೆಸಿಕೊಂಡಿದ್ದ ಮನೋಹರ್‌ ಬೆಟ್ಟದಪುರಕ್ಕೆ ಪಿ.ಟಿ.ಮಾಸ್ಟರ್‌ ಆಗಿ ಬಂದ ಮೇಲೆ ಏನಾಯಿತು?- ಎಂಬುದೇ ‘ಗುರು ಶಿಷ್ಯರು’ ಸಿನಿಮಾ.

ಹಳೆಯ ಫಾರ್ಮುಲಾಗಳಿಂದಲೇ ಜಡ್ಡುಗಟ್ಟಿದ ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಹೊಸ ನೀರು ಹರಿಯಬೇಕು. ಹೊಸ ಪ್ರತಿಭೆಗಳು ಅನಾವರಣವಾಗಬೇಕು. ಆಗ ಮಾತ್ರ ಒಂದು ವ್ಯವಸ್ಥೆಯೊಳಗೆ ಚಲನೆಶೀಲತೆ ಬರುತ್ತದೆ. ‘ಜಂಟಲ್‌ ಮ್ಯಾನ್‌’ ಎಂಬ ಸದಭಿರುಚಿಯ ಸಿನಿಮಾ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ವಿಸ್ತರಣೆ ಮಾಡಿದ್ದಾರೆ. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದ್ದಾರೆ.

1981ರಲ್ಲಿ ಎಚ್.ಆರ್‌.ಭಾರ್ಗವ್‌ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್‌ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್‌’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.

ಡಬ್ಬಲ್‌ ಮೀನಿಂಗ್‌ಗಳೇ ಹಾಸ್ಯದ ಮುಖವಾಡ ಹೊತ್ತು ರಾರಾಜಿಸುತ್ತಿರುವ ಹೊತ್ತಿನಲ್ಲಿ ಸಹ್ಯವಾದ ಸಂಭಾಷಣೆಯ ಮೂಲಕ ನಗಿಸಬಹುದು ಎಂಬುದನ್ನು ‘ಮಾಸ್ತಿ’ಯವರ ಸಂಭಾಷಣೆ ಸಾಬೀತು ಮಾಡಿದೆ. ಎಲ್ಲಿಯೂ ಅತಿರೇಕವೆನಿಸದ ಹದವಾದ ಸಂಭಾಷಣೆ ಬರೆಯಲಾಗಿದೆ.

ಜಡೇಶ ಅವರು ಕಥೆ ಹಾಗೂ ಚಿತ್ರಕತೆಗೆ ನೀಡಿರುವ ಒತ್ತು ಢಾಳಾಗಿ ಕಾಣುತ್ತದೆ. ಸಂತೆಗೆ ಮೂರು ಮೊಳ ನೇಯ್ಯದಂತೆ ಅಚ್ಚುಕಟ್ಟುತನ ಮೆರೆದಿದ್ದಾರೆ. ಪ್ರತಿಪಾತ್ರಕ್ಕೂ ಮಹತ್ವ ನೀಡಿದ್ದಾರೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಉಂಟು ಮಾಡಿದ ಸಾಮಾಜಿಕ ಪರಿವರ್ತನೆ, ಅದಕ್ಕೆ ಫ್ಯೂಡಲ್‌ ವ್ಯವಸ್ಥೆ ತೋರಿದ ಅಸಹನೆ, ಜೂಜಿನ ಮೋಜು ಇತ್ಯಾದಿ ಅಂಶಗಳನ್ನು ಒಳಗೊಂಡ ಪರಿಸರದಲ್ಲಿ ಕಥೆ ಸಾಗುತ್ತದೆ.

ಜೂಜುಪ್ರಿಯ ಜಮೀನ್ದಾರ (ಅಪೂರ್ವ ಕಾಸರವಳ್ಳಿ) ವಿರುದ್ಧ ಹೋರಾಡುತ್ತಿರುವ ಬೆಟ್ಟದಪುರದ ಜನರು ಖೋ ಖೋ ಆಟದಲ್ಲಿ ಗೆದ್ದು ತಮ್ಮ ಜಮೀನುಗಳನ್ನು ಉಳಿಸುತ್ತೇವೆ ಎಂದು ಸವಾಲು ಹಾಕುವುದು, ತಮ್ಮ ನಂಬಿಕೆಗೆ ಪಿ.ಟಿ. ಮಾಸ್ಟರ್ ಮನೋಹರ್‌ ಮೋಸ ಮಾಡಿದ್ದಾನೆಂದು ಬೇಸರಗೊಂಡ ಊರಿನ ಜನರು ತಮ್ಮ ಮಕ್ಕಳನ್ನು ಖೋ ಖೋ ಆಡಲು ಕಳಿಸದಿರುವಾಗ ಊರ ಹೊರಗೆ ವಾಸಿಸುತ್ತಿರುವ ಹಂದಿ ಜೋಗರ ಹುಡುಗನನ್ನು, ಬಹು ಆಳದ ಕೆರೆಗೆ ಧುಮುಕಿ ಮೀನು ಹಿಡಿಯುವ ಬೆಸ್ತರ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳುವುದು, ಊರು ಬಿಟ್ಟು ಹೋದ ಮುಸ್ಲಿಮ್ ಹುಡುಗರು ಮತ್ತೆ ತಂಡಕ್ಕೆ ಬಂದು ಸೇರುವುದು- ಇತ್ಯಾದಿ ದೃಶ್ಯಗಳು ಅಮೀರ್‌ ಖಾನ್‌ ಅಭಿನಯದ ‘ಲಗಾನ್‌’ ಸಿನಿಮಾವನ್ನು ನೆನಪಿಸುತ್ತವೆ.

ಕ್ಷಾಮದಿಂದ ನೊಂದ ಊರಿನ ಜನ ಎಲ್ಲ ಜಾತಿ ಮತವನ್ನು ಮರೆತು, ಒಂದಾಗಿ ಕ್ರಿಕೆಟ್ ಕಲಿತು ನಂತರ ಬ್ರಿಟಿಷರನ್ನು ಸೋಲಿಸಿದ್ದನ್ನು ಲಗಾನ್‌ನಲ್ಲಿ ಕಾಣಬಹುದು. ಜಡೇಶ ಅವರ ಕಥೆಯಲ್ಲೂ ಈ ಸ್ವರೂಪ ಕಂಡು ಬರುತ್ತದೆ. ಜಮೀನ್ದಾರನ ವಿರುದ್ಧ ಪಣ ತೊಟ್ಟು ಊರನ್ನು ಉಳಿಸಲು ಖೋ ಖೋ ಆಡುತ್ತಾರೆ. ಸ್ವಾತಂತ್ರ್ಯ ವೂರ್ವದ ಕಥೆಯಾದ ಲಗಾನ್‌ನಲ್ಲಿ ಅಸ್ಪೃಶ್ಯತೆ ಅಳಿಸಿ ಭಾರತೀಯರು ಒಂದಾಗಿ ಹೋರಾಡಬೇಕಾದ ಎಳೆ ಬರುತ್ತದೆ. ಸ್ವಾತಂತ್ರ್ಯ ನಂತರದ ಕಥೆಯಾದ ಗುರು ಶಿಷ್ಯರಲ್ಲಿ ಹಂದಿಜೋಗರು ಊರ ಹೊರಗೆ ಇರುವಂತೆ ತೋರಿಸಲಾಗಿದೆ. ಹಂದಿಜೋಗರ ಹುಡುಗ ತಂಡಕ್ಕೆ ಬಂದು ಸೇರಿದಾಗಲಾಗಲೀ, ಹಂದಿಯನ್ನು ಓಡಿಸಿಕೊಂಡು ಶಾಲಾ ಅಂಗಳದಲ್ಲಿ ನಿರ್ಭಿಡೆಯಿಂದ ಹಿಡಿಯುವ ವೇಳೆಯಲ್ಲಾಗಲೀ ಅಸ್ಪೃಶ್ಯತೆಯ ಅಂಜಿಕೆ ಪ್ರದರ್ಶನವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಕ್ಕೆ ಹೋಗದಂತೆ ನಿಭಾಯಿಸಿರುವುದು ಜಡೇಶ್ ಅವರ ಜಾಣ್ಮೆಯೂ ಹೌದು.

ಗಾಂಧಿಯ ಪ್ರತಿಮೆಯ ಎದುರು ನಿಂತು, “ಮಾಡು ಇಲ್ಲವೇ ಮಡಿ” ಎಂದು ಪಣ ತೊಡುವ ಬೆಟ್ಟದಪುರದ ತಂಡ, ಕನ್ನಡ ಭಾವುಟ ಹಿಡಿದು ಬರುವ ಪಿ.ಟಿ.ಮಾಸ್ಟರ್ ಮನೋಹರ್‌- ದೃಶ್ಯಗಳು ನಿರ್ದೇಶಕರ ಅಸ್ಮಿತೆಯ ಗುರುತುಗಳಾಗಿ ಕಾಣುತ್ತವೆ.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ. ಅಂದಹಾಗೆ ಶಾಲಾ ಬಾಲಕನ ಲವ್ ಸ್ಟೋರಿಗೆ ನೀಡಿರುವ ಸ್ಪೇಸ್‌ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳೀಕರ್‌, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. ಅಜನೀಶ್ ಅವರ ಸಂಗೀತ ಮೆಚ್ಚುಗೆಯಾಗುತ್ತದೆ. ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ಅರೂರ್‌ ಸುಧಾಕರ್‌ ಶೆಟ್ಟಿಯವರು ಹಳ್ಳಿಯ ಪರಿಸರವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...