Homeಮುಖಪುಟರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

- Advertisement -
- Advertisement -

‘ಖೋ ಖೋ’ ಆಟವನ್ನೇ ಉಸಿರಾಡುತ್ತಾ, ತನ್ನ ಗುರು ದತ್ತಣ್ಣ ಹೇಳಿದ ಮಾರ್ಗದಲ್ಲಿ ಹೆಜ್ಜೆ ಇಟ್ಟು ರಾಷ್ಟ್ರಮಟ್ಟದಲ್ಲೂ ಆಟಗಾರನಾಗಿದ್ದ ಮನೋಹರ್‌ (ಶರಣ್‌) ಎಂಬ ಯುವಕ ಕೊನೆಗೆ ಕೆಲಸವೂ ಇಲ್ಲದೆ ಪರಿತಪಿಸುತ್ತಾನೆ. ಖೋಖೋ ಆಟಕ್ಕೆ ಮಾನ್ಯತೆ ಇಲ್ಲವಾಗಿ, ಅದನ್ನೇ ನಂಬಿದ್ದ ಆಟಗಾರರು ಬೀದಿಪಾಲಾಗುತ್ತಾರೆ. ಓದಿನಲ್ಲಿ ಮುಂದಿದ್ದ ಶಿಷ್ಯನನ್ನು ಆಟದತ್ತ ಎಳೆತಂದು ದಿಕ್ಕು ತಪ್ಪಿಸಿದೆ ಎಂಬ ಕೊರಗಿನಲ್ಲಿರುವ ಪಿ.ಟಿ.ಮಾಸ್ಟರ್‌ ದತ್ತಣ್ಣ, ಮನೋಹರ್‌ಗಾಗಿ ಒಂದು ಕೆಲಸ ಹುಡುಕಿಕೊಡಲು ಪರದಾಡುತ್ತಿದ್ದಾರೆ. ಕೊನೆಗೆ ‘ಬೆಟ್ಟದಪುರ’ ಎಂಬ ಕುಗ್ರಾಮದ ಹಿಂದುಳಿದ ಶಾಲೆಯೊಂದರಲ್ಲಿ ಕೆಲಸ ಕೊಡಿಸುತ್ತಾರೆ. ಆಲಸ್ಯ, ಉದಾಸೀನತೆ ಬೆಳೆಸಿಕೊಂಡಿದ್ದ ಮನೋಹರ್‌ ಬೆಟ್ಟದಪುರಕ್ಕೆ ಪಿ.ಟಿ.ಮಾಸ್ಟರ್‌ ಆಗಿ ಬಂದ ಮೇಲೆ ಏನಾಯಿತು?- ಎಂಬುದೇ ‘ಗುರು ಶಿಷ್ಯರು’ ಸಿನಿಮಾ.

ಹಳೆಯ ಫಾರ್ಮುಲಾಗಳಿಂದಲೇ ಜಡ್ಡುಗಟ್ಟಿದ ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಹೊಸ ನೀರು ಹರಿಯಬೇಕು. ಹೊಸ ಪ್ರತಿಭೆಗಳು ಅನಾವರಣವಾಗಬೇಕು. ಆಗ ಮಾತ್ರ ಒಂದು ವ್ಯವಸ್ಥೆಯೊಳಗೆ ಚಲನೆಶೀಲತೆ ಬರುತ್ತದೆ. ‘ಜಂಟಲ್‌ ಮ್ಯಾನ್‌’ ಎಂಬ ಸದಭಿರುಚಿಯ ಸಿನಿಮಾ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ವಿಸ್ತರಣೆ ಮಾಡಿದ್ದಾರೆ. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದ್ದಾರೆ.

1981ರಲ್ಲಿ ಎಚ್.ಆರ್‌.ಭಾರ್ಗವ್‌ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್‌ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್‌’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.

ಡಬ್ಬಲ್‌ ಮೀನಿಂಗ್‌ಗಳೇ ಹಾಸ್ಯದ ಮುಖವಾಡ ಹೊತ್ತು ರಾರಾಜಿಸುತ್ತಿರುವ ಹೊತ್ತಿನಲ್ಲಿ ಸಹ್ಯವಾದ ಸಂಭಾಷಣೆಯ ಮೂಲಕ ನಗಿಸಬಹುದು ಎಂಬುದನ್ನು ‘ಮಾಸ್ತಿ’ಯವರ ಸಂಭಾಷಣೆ ಸಾಬೀತು ಮಾಡಿದೆ. ಎಲ್ಲಿಯೂ ಅತಿರೇಕವೆನಿಸದ ಹದವಾದ ಸಂಭಾಷಣೆ ಬರೆಯಲಾಗಿದೆ.

ಜಡೇಶ ಅವರು ಕಥೆ ಹಾಗೂ ಚಿತ್ರಕತೆಗೆ ನೀಡಿರುವ ಒತ್ತು ಢಾಳಾಗಿ ಕಾಣುತ್ತದೆ. ಸಂತೆಗೆ ಮೂರು ಮೊಳ ನೇಯ್ಯದಂತೆ ಅಚ್ಚುಕಟ್ಟುತನ ಮೆರೆದಿದ್ದಾರೆ. ಪ್ರತಿಪಾತ್ರಕ್ಕೂ ಮಹತ್ವ ನೀಡಿದ್ದಾರೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಉಂಟು ಮಾಡಿದ ಸಾಮಾಜಿಕ ಪರಿವರ್ತನೆ, ಅದಕ್ಕೆ ಫ್ಯೂಡಲ್‌ ವ್ಯವಸ್ಥೆ ತೋರಿದ ಅಸಹನೆ, ಜೂಜಿನ ಮೋಜು ಇತ್ಯಾದಿ ಅಂಶಗಳನ್ನು ಒಳಗೊಂಡ ಪರಿಸರದಲ್ಲಿ ಕಥೆ ಸಾಗುತ್ತದೆ.

ಜೂಜುಪ್ರಿಯ ಜಮೀನ್ದಾರ (ಅಪೂರ್ವ ಕಾಸರವಳ್ಳಿ) ವಿರುದ್ಧ ಹೋರಾಡುತ್ತಿರುವ ಬೆಟ್ಟದಪುರದ ಜನರು ಖೋ ಖೋ ಆಟದಲ್ಲಿ ಗೆದ್ದು ತಮ್ಮ ಜಮೀನುಗಳನ್ನು ಉಳಿಸುತ್ತೇವೆ ಎಂದು ಸವಾಲು ಹಾಕುವುದು, ತಮ್ಮ ನಂಬಿಕೆಗೆ ಪಿ.ಟಿ. ಮಾಸ್ಟರ್ ಮನೋಹರ್‌ ಮೋಸ ಮಾಡಿದ್ದಾನೆಂದು ಬೇಸರಗೊಂಡ ಊರಿನ ಜನರು ತಮ್ಮ ಮಕ್ಕಳನ್ನು ಖೋ ಖೋ ಆಡಲು ಕಳಿಸದಿರುವಾಗ ಊರ ಹೊರಗೆ ವಾಸಿಸುತ್ತಿರುವ ಹಂದಿ ಜೋಗರ ಹುಡುಗನನ್ನು, ಬಹು ಆಳದ ಕೆರೆಗೆ ಧುಮುಕಿ ಮೀನು ಹಿಡಿಯುವ ಬೆಸ್ತರ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳುವುದು, ಊರು ಬಿಟ್ಟು ಹೋದ ಮುಸ್ಲಿಮ್ ಹುಡುಗರು ಮತ್ತೆ ತಂಡಕ್ಕೆ ಬಂದು ಸೇರುವುದು- ಇತ್ಯಾದಿ ದೃಶ್ಯಗಳು ಅಮೀರ್‌ ಖಾನ್‌ ಅಭಿನಯದ ‘ಲಗಾನ್‌’ ಸಿನಿಮಾವನ್ನು ನೆನಪಿಸುತ್ತವೆ.

ಕ್ಷಾಮದಿಂದ ನೊಂದ ಊರಿನ ಜನ ಎಲ್ಲ ಜಾತಿ ಮತವನ್ನು ಮರೆತು, ಒಂದಾಗಿ ಕ್ರಿಕೆಟ್ ಕಲಿತು ನಂತರ ಬ್ರಿಟಿಷರನ್ನು ಸೋಲಿಸಿದ್ದನ್ನು ಲಗಾನ್‌ನಲ್ಲಿ ಕಾಣಬಹುದು. ಜಡೇಶ ಅವರ ಕಥೆಯಲ್ಲೂ ಈ ಸ್ವರೂಪ ಕಂಡು ಬರುತ್ತದೆ. ಜಮೀನ್ದಾರನ ವಿರುದ್ಧ ಪಣ ತೊಟ್ಟು ಊರನ್ನು ಉಳಿಸಲು ಖೋ ಖೋ ಆಡುತ್ತಾರೆ. ಸ್ವಾತಂತ್ರ್ಯ ವೂರ್ವದ ಕಥೆಯಾದ ಲಗಾನ್‌ನಲ್ಲಿ ಅಸ್ಪೃಶ್ಯತೆ ಅಳಿಸಿ ಭಾರತೀಯರು ಒಂದಾಗಿ ಹೋರಾಡಬೇಕಾದ ಎಳೆ ಬರುತ್ತದೆ. ಸ್ವಾತಂತ್ರ್ಯ ನಂತರದ ಕಥೆಯಾದ ಗುರು ಶಿಷ್ಯರಲ್ಲಿ ಹಂದಿಜೋಗರು ಊರ ಹೊರಗೆ ಇರುವಂತೆ ತೋರಿಸಲಾಗಿದೆ. ಹಂದಿಜೋಗರ ಹುಡುಗ ತಂಡಕ್ಕೆ ಬಂದು ಸೇರಿದಾಗಲಾಗಲೀ, ಹಂದಿಯನ್ನು ಓಡಿಸಿಕೊಂಡು ಶಾಲಾ ಅಂಗಳದಲ್ಲಿ ನಿರ್ಭಿಡೆಯಿಂದ ಹಿಡಿಯುವ ವೇಳೆಯಲ್ಲಾಗಲೀ ಅಸ್ಪೃಶ್ಯತೆಯ ಅಂಜಿಕೆ ಪ್ರದರ್ಶನವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಕ್ಕೆ ಹೋಗದಂತೆ ನಿಭಾಯಿಸಿರುವುದು ಜಡೇಶ್ ಅವರ ಜಾಣ್ಮೆಯೂ ಹೌದು.

ಗಾಂಧಿಯ ಪ್ರತಿಮೆಯ ಎದುರು ನಿಂತು, “ಮಾಡು ಇಲ್ಲವೇ ಮಡಿ” ಎಂದು ಪಣ ತೊಡುವ ಬೆಟ್ಟದಪುರದ ತಂಡ, ಕನ್ನಡ ಭಾವುಟ ಹಿಡಿದು ಬರುವ ಪಿ.ಟಿ.ಮಾಸ್ಟರ್ ಮನೋಹರ್‌- ದೃಶ್ಯಗಳು ನಿರ್ದೇಶಕರ ಅಸ್ಮಿತೆಯ ಗುರುತುಗಳಾಗಿ ಕಾಣುತ್ತವೆ.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ. ಅಂದಹಾಗೆ ಶಾಲಾ ಬಾಲಕನ ಲವ್ ಸ್ಟೋರಿಗೆ ನೀಡಿರುವ ಸ್ಪೇಸ್‌ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳೀಕರ್‌, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. ಅಜನೀಶ್ ಅವರ ಸಂಗೀತ ಮೆಚ್ಚುಗೆಯಾಗುತ್ತದೆ. ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ಅರೂರ್‌ ಸುಧಾಕರ್‌ ಶೆಟ್ಟಿಯವರು ಹಳ್ಳಿಯ ಪರಿಸರವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...