Homeಮುಖಪುಟರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

- Advertisement -
- Advertisement -

‘ಖೋ ಖೋ’ ಆಟವನ್ನೇ ಉಸಿರಾಡುತ್ತಾ, ತನ್ನ ಗುರು ದತ್ತಣ್ಣ ಹೇಳಿದ ಮಾರ್ಗದಲ್ಲಿ ಹೆಜ್ಜೆ ಇಟ್ಟು ರಾಷ್ಟ್ರಮಟ್ಟದಲ್ಲೂ ಆಟಗಾರನಾಗಿದ್ದ ಮನೋಹರ್‌ (ಶರಣ್‌) ಎಂಬ ಯುವಕ ಕೊನೆಗೆ ಕೆಲಸವೂ ಇಲ್ಲದೆ ಪರಿತಪಿಸುತ್ತಾನೆ. ಖೋಖೋ ಆಟಕ್ಕೆ ಮಾನ್ಯತೆ ಇಲ್ಲವಾಗಿ, ಅದನ್ನೇ ನಂಬಿದ್ದ ಆಟಗಾರರು ಬೀದಿಪಾಲಾಗುತ್ತಾರೆ. ಓದಿನಲ್ಲಿ ಮುಂದಿದ್ದ ಶಿಷ್ಯನನ್ನು ಆಟದತ್ತ ಎಳೆತಂದು ದಿಕ್ಕು ತಪ್ಪಿಸಿದೆ ಎಂಬ ಕೊರಗಿನಲ್ಲಿರುವ ಪಿ.ಟಿ.ಮಾಸ್ಟರ್‌ ದತ್ತಣ್ಣ, ಮನೋಹರ್‌ಗಾಗಿ ಒಂದು ಕೆಲಸ ಹುಡುಕಿಕೊಡಲು ಪರದಾಡುತ್ತಿದ್ದಾರೆ. ಕೊನೆಗೆ ‘ಬೆಟ್ಟದಪುರ’ ಎಂಬ ಕುಗ್ರಾಮದ ಹಿಂದುಳಿದ ಶಾಲೆಯೊಂದರಲ್ಲಿ ಕೆಲಸ ಕೊಡಿಸುತ್ತಾರೆ. ಆಲಸ್ಯ, ಉದಾಸೀನತೆ ಬೆಳೆಸಿಕೊಂಡಿದ್ದ ಮನೋಹರ್‌ ಬೆಟ್ಟದಪುರಕ್ಕೆ ಪಿ.ಟಿ.ಮಾಸ್ಟರ್‌ ಆಗಿ ಬಂದ ಮೇಲೆ ಏನಾಯಿತು?- ಎಂಬುದೇ ‘ಗುರು ಶಿಷ್ಯರು’ ಸಿನಿಮಾ.

ಹಳೆಯ ಫಾರ್ಮುಲಾಗಳಿಂದಲೇ ಜಡ್ಡುಗಟ್ಟಿದ ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಹೊಸ ನೀರು ಹರಿಯಬೇಕು. ಹೊಸ ಪ್ರತಿಭೆಗಳು ಅನಾವರಣವಾಗಬೇಕು. ಆಗ ಮಾತ್ರ ಒಂದು ವ್ಯವಸ್ಥೆಯೊಳಗೆ ಚಲನೆಶೀಲತೆ ಬರುತ್ತದೆ. ‘ಜಂಟಲ್‌ ಮ್ಯಾನ್‌’ ಎಂಬ ಸದಭಿರುಚಿಯ ಸಿನಿಮಾ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ವಿಸ್ತರಣೆ ಮಾಡಿದ್ದಾರೆ. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದ್ದಾರೆ.

1981ರಲ್ಲಿ ಎಚ್.ಆರ್‌.ಭಾರ್ಗವ್‌ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್‌ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್‌’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.

ಡಬ್ಬಲ್‌ ಮೀನಿಂಗ್‌ಗಳೇ ಹಾಸ್ಯದ ಮುಖವಾಡ ಹೊತ್ತು ರಾರಾಜಿಸುತ್ತಿರುವ ಹೊತ್ತಿನಲ್ಲಿ ಸಹ್ಯವಾದ ಸಂಭಾಷಣೆಯ ಮೂಲಕ ನಗಿಸಬಹುದು ಎಂಬುದನ್ನು ‘ಮಾಸ್ತಿ’ಯವರ ಸಂಭಾಷಣೆ ಸಾಬೀತು ಮಾಡಿದೆ. ಎಲ್ಲಿಯೂ ಅತಿರೇಕವೆನಿಸದ ಹದವಾದ ಸಂಭಾಷಣೆ ಬರೆಯಲಾಗಿದೆ.

ಜಡೇಶ ಅವರು ಕಥೆ ಹಾಗೂ ಚಿತ್ರಕತೆಗೆ ನೀಡಿರುವ ಒತ್ತು ಢಾಳಾಗಿ ಕಾಣುತ್ತದೆ. ಸಂತೆಗೆ ಮೂರು ಮೊಳ ನೇಯ್ಯದಂತೆ ಅಚ್ಚುಕಟ್ಟುತನ ಮೆರೆದಿದ್ದಾರೆ. ಪ್ರತಿಪಾತ್ರಕ್ಕೂ ಮಹತ್ವ ನೀಡಿದ್ದಾರೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಉಂಟು ಮಾಡಿದ ಸಾಮಾಜಿಕ ಪರಿವರ್ತನೆ, ಅದಕ್ಕೆ ಫ್ಯೂಡಲ್‌ ವ್ಯವಸ್ಥೆ ತೋರಿದ ಅಸಹನೆ, ಜೂಜಿನ ಮೋಜು ಇತ್ಯಾದಿ ಅಂಶಗಳನ್ನು ಒಳಗೊಂಡ ಪರಿಸರದಲ್ಲಿ ಕಥೆ ಸಾಗುತ್ತದೆ.

ಜೂಜುಪ್ರಿಯ ಜಮೀನ್ದಾರ (ಅಪೂರ್ವ ಕಾಸರವಳ್ಳಿ) ವಿರುದ್ಧ ಹೋರಾಡುತ್ತಿರುವ ಬೆಟ್ಟದಪುರದ ಜನರು ಖೋ ಖೋ ಆಟದಲ್ಲಿ ಗೆದ್ದು ತಮ್ಮ ಜಮೀನುಗಳನ್ನು ಉಳಿಸುತ್ತೇವೆ ಎಂದು ಸವಾಲು ಹಾಕುವುದು, ತಮ್ಮ ನಂಬಿಕೆಗೆ ಪಿ.ಟಿ. ಮಾಸ್ಟರ್ ಮನೋಹರ್‌ ಮೋಸ ಮಾಡಿದ್ದಾನೆಂದು ಬೇಸರಗೊಂಡ ಊರಿನ ಜನರು ತಮ್ಮ ಮಕ್ಕಳನ್ನು ಖೋ ಖೋ ಆಡಲು ಕಳಿಸದಿರುವಾಗ ಊರ ಹೊರಗೆ ವಾಸಿಸುತ್ತಿರುವ ಹಂದಿ ಜೋಗರ ಹುಡುಗನನ್ನು, ಬಹು ಆಳದ ಕೆರೆಗೆ ಧುಮುಕಿ ಮೀನು ಹಿಡಿಯುವ ಬೆಸ್ತರ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳುವುದು, ಊರು ಬಿಟ್ಟು ಹೋದ ಮುಸ್ಲಿಮ್ ಹುಡುಗರು ಮತ್ತೆ ತಂಡಕ್ಕೆ ಬಂದು ಸೇರುವುದು- ಇತ್ಯಾದಿ ದೃಶ್ಯಗಳು ಅಮೀರ್‌ ಖಾನ್‌ ಅಭಿನಯದ ‘ಲಗಾನ್‌’ ಸಿನಿಮಾವನ್ನು ನೆನಪಿಸುತ್ತವೆ.

ಕ್ಷಾಮದಿಂದ ನೊಂದ ಊರಿನ ಜನ ಎಲ್ಲ ಜಾತಿ ಮತವನ್ನು ಮರೆತು, ಒಂದಾಗಿ ಕ್ರಿಕೆಟ್ ಕಲಿತು ನಂತರ ಬ್ರಿಟಿಷರನ್ನು ಸೋಲಿಸಿದ್ದನ್ನು ಲಗಾನ್‌ನಲ್ಲಿ ಕಾಣಬಹುದು. ಜಡೇಶ ಅವರ ಕಥೆಯಲ್ಲೂ ಈ ಸ್ವರೂಪ ಕಂಡು ಬರುತ್ತದೆ. ಜಮೀನ್ದಾರನ ವಿರುದ್ಧ ಪಣ ತೊಟ್ಟು ಊರನ್ನು ಉಳಿಸಲು ಖೋ ಖೋ ಆಡುತ್ತಾರೆ. ಸ್ವಾತಂತ್ರ್ಯ ವೂರ್ವದ ಕಥೆಯಾದ ಲಗಾನ್‌ನಲ್ಲಿ ಅಸ್ಪೃಶ್ಯತೆ ಅಳಿಸಿ ಭಾರತೀಯರು ಒಂದಾಗಿ ಹೋರಾಡಬೇಕಾದ ಎಳೆ ಬರುತ್ತದೆ. ಸ್ವಾತಂತ್ರ್ಯ ನಂತರದ ಕಥೆಯಾದ ಗುರು ಶಿಷ್ಯರಲ್ಲಿ ಹಂದಿಜೋಗರು ಊರ ಹೊರಗೆ ಇರುವಂತೆ ತೋರಿಸಲಾಗಿದೆ. ಹಂದಿಜೋಗರ ಹುಡುಗ ತಂಡಕ್ಕೆ ಬಂದು ಸೇರಿದಾಗಲಾಗಲೀ, ಹಂದಿಯನ್ನು ಓಡಿಸಿಕೊಂಡು ಶಾಲಾ ಅಂಗಳದಲ್ಲಿ ನಿರ್ಭಿಡೆಯಿಂದ ಹಿಡಿಯುವ ವೇಳೆಯಲ್ಲಾಗಲೀ ಅಸ್ಪೃಶ್ಯತೆಯ ಅಂಜಿಕೆ ಪ್ರದರ್ಶನವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಕ್ಕೆ ಹೋಗದಂತೆ ನಿಭಾಯಿಸಿರುವುದು ಜಡೇಶ್ ಅವರ ಜಾಣ್ಮೆಯೂ ಹೌದು.

ಗಾಂಧಿಯ ಪ್ರತಿಮೆಯ ಎದುರು ನಿಂತು, “ಮಾಡು ಇಲ್ಲವೇ ಮಡಿ” ಎಂದು ಪಣ ತೊಡುವ ಬೆಟ್ಟದಪುರದ ತಂಡ, ಕನ್ನಡ ಭಾವುಟ ಹಿಡಿದು ಬರುವ ಪಿ.ಟಿ.ಮಾಸ್ಟರ್ ಮನೋಹರ್‌- ದೃಶ್ಯಗಳು ನಿರ್ದೇಶಕರ ಅಸ್ಮಿತೆಯ ಗುರುತುಗಳಾಗಿ ಕಾಣುತ್ತವೆ.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ. ಅಂದಹಾಗೆ ಶಾಲಾ ಬಾಲಕನ ಲವ್ ಸ್ಟೋರಿಗೆ ನೀಡಿರುವ ಸ್ಪೇಸ್‌ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳೀಕರ್‌, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. ಅಜನೀಶ್ ಅವರ ಸಂಗೀತ ಮೆಚ್ಚುಗೆಯಾಗುತ್ತದೆ. ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ಅರೂರ್‌ ಸುಧಾಕರ್‌ ಶೆಟ್ಟಿಯವರು ಹಳ್ಳಿಯ ಪರಿಸರವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...