Homeಮುಖಪುಟರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

- Advertisement -
- Advertisement -

‘ಖೋ ಖೋ’ ಆಟವನ್ನೇ ಉಸಿರಾಡುತ್ತಾ, ತನ್ನ ಗುರು ದತ್ತಣ್ಣ ಹೇಳಿದ ಮಾರ್ಗದಲ್ಲಿ ಹೆಜ್ಜೆ ಇಟ್ಟು ರಾಷ್ಟ್ರಮಟ್ಟದಲ್ಲೂ ಆಟಗಾರನಾಗಿದ್ದ ಮನೋಹರ್‌ (ಶರಣ್‌) ಎಂಬ ಯುವಕ ಕೊನೆಗೆ ಕೆಲಸವೂ ಇಲ್ಲದೆ ಪರಿತಪಿಸುತ್ತಾನೆ. ಖೋಖೋ ಆಟಕ್ಕೆ ಮಾನ್ಯತೆ ಇಲ್ಲವಾಗಿ, ಅದನ್ನೇ ನಂಬಿದ್ದ ಆಟಗಾರರು ಬೀದಿಪಾಲಾಗುತ್ತಾರೆ. ಓದಿನಲ್ಲಿ ಮುಂದಿದ್ದ ಶಿಷ್ಯನನ್ನು ಆಟದತ್ತ ಎಳೆತಂದು ದಿಕ್ಕು ತಪ್ಪಿಸಿದೆ ಎಂಬ ಕೊರಗಿನಲ್ಲಿರುವ ಪಿ.ಟಿ.ಮಾಸ್ಟರ್‌ ದತ್ತಣ್ಣ, ಮನೋಹರ್‌ಗಾಗಿ ಒಂದು ಕೆಲಸ ಹುಡುಕಿಕೊಡಲು ಪರದಾಡುತ್ತಿದ್ದಾರೆ. ಕೊನೆಗೆ ‘ಬೆಟ್ಟದಪುರ’ ಎಂಬ ಕುಗ್ರಾಮದ ಹಿಂದುಳಿದ ಶಾಲೆಯೊಂದರಲ್ಲಿ ಕೆಲಸ ಕೊಡಿಸುತ್ತಾರೆ. ಆಲಸ್ಯ, ಉದಾಸೀನತೆ ಬೆಳೆಸಿಕೊಂಡಿದ್ದ ಮನೋಹರ್‌ ಬೆಟ್ಟದಪುರಕ್ಕೆ ಪಿ.ಟಿ.ಮಾಸ್ಟರ್‌ ಆಗಿ ಬಂದ ಮೇಲೆ ಏನಾಯಿತು?- ಎಂಬುದೇ ‘ಗುರು ಶಿಷ್ಯರು’ ಸಿನಿಮಾ.

ಹಳೆಯ ಫಾರ್ಮುಲಾಗಳಿಂದಲೇ ಜಡ್ಡುಗಟ್ಟಿದ ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಹೊಸ ನೀರು ಹರಿಯಬೇಕು. ಹೊಸ ಪ್ರತಿಭೆಗಳು ಅನಾವರಣವಾಗಬೇಕು. ಆಗ ಮಾತ್ರ ಒಂದು ವ್ಯವಸ್ಥೆಯೊಳಗೆ ಚಲನೆಶೀಲತೆ ಬರುತ್ತದೆ. ‘ಜಂಟಲ್‌ ಮ್ಯಾನ್‌’ ಎಂಬ ಸದಭಿರುಚಿಯ ಸಿನಿಮಾ ನೀಡಿದ ನಿರ್ದೇಶಕ ಜಡೇಶ ಕೆ. ಹಂಪಿಯವರು ‘ಗುರು ಶಿಷ್ಯರು’ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ವಿಸ್ತರಣೆ ಮಾಡಿದ್ದಾರೆ. ಮೂರರಲ್ಲಿ ಮತ್ತೊಂದು ಆಗದಂತಹ ಕ್ರೀಡಾ ಕಥೆಯನ್ನು ನೀಡಿದ್ದಾರೆ.

1981ರಲ್ಲಿ ಎಚ್.ಆರ್‌.ಭಾರ್ಗವ್‌ ಅವರು ನಿರ್ದೇಶಿಸಿದ ‘ಗುರುಶಿಷ್ಯರು’ ಸಿನಿಮಾವನ್ನು ಕನ್ನಡಿಗರು ಮರೆಯಲಾರರು. ಈ ಟೈಟಲ್‌ ಚಿರಪರಿಚಿತ. ಜಡೇಶ ನಿರ್ದೇಶನದ ‘ಗುರುಶಿಷ್ಯರು’ 2022ರ ಸಿನಿಮಾದರೂ ಕಥೆ ನಡೆಯುವುದು 1995ರ ಕಾಲಘಟ್ಟದಲ್ಲಿ. ‘ಜಂಟಲ್‌ಮ್ಯಾನ್‌’ ಸಿನಿಮಾದಂತೆಯೇ ‘ಗುರುಶಿಷ್ಯರು’ ಮೊದಲಾರ್ಧ ಭರಪೂರ ರಂಜನೆಯಾದರೆ, ದ್ವಿತೀಯಾರ್ಥ ಚಿಂತನೆಗೆ ಹೊರಳುತ್ತದೆ.

ಡಬ್ಬಲ್‌ ಮೀನಿಂಗ್‌ಗಳೇ ಹಾಸ್ಯದ ಮುಖವಾಡ ಹೊತ್ತು ರಾರಾಜಿಸುತ್ತಿರುವ ಹೊತ್ತಿನಲ್ಲಿ ಸಹ್ಯವಾದ ಸಂಭಾಷಣೆಯ ಮೂಲಕ ನಗಿಸಬಹುದು ಎಂಬುದನ್ನು ‘ಮಾಸ್ತಿ’ಯವರ ಸಂಭಾಷಣೆ ಸಾಬೀತು ಮಾಡಿದೆ. ಎಲ್ಲಿಯೂ ಅತಿರೇಕವೆನಿಸದ ಹದವಾದ ಸಂಭಾಷಣೆ ಬರೆಯಲಾಗಿದೆ.

ಜಡೇಶ ಅವರು ಕಥೆ ಹಾಗೂ ಚಿತ್ರಕತೆಗೆ ನೀಡಿರುವ ಒತ್ತು ಢಾಳಾಗಿ ಕಾಣುತ್ತದೆ. ಸಂತೆಗೆ ಮೂರು ಮೊಳ ನೇಯ್ಯದಂತೆ ಅಚ್ಚುಕಟ್ಟುತನ ಮೆರೆದಿದ್ದಾರೆ. ಪ್ರತಿಪಾತ್ರಕ್ಕೂ ಮಹತ್ವ ನೀಡಿದ್ದಾರೆ. ಇಂದಿರಾ ಗಾಂಧಿಯವರು ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಉಂಟು ಮಾಡಿದ ಸಾಮಾಜಿಕ ಪರಿವರ್ತನೆ, ಅದಕ್ಕೆ ಫ್ಯೂಡಲ್‌ ವ್ಯವಸ್ಥೆ ತೋರಿದ ಅಸಹನೆ, ಜೂಜಿನ ಮೋಜು ಇತ್ಯಾದಿ ಅಂಶಗಳನ್ನು ಒಳಗೊಂಡ ಪರಿಸರದಲ್ಲಿ ಕಥೆ ಸಾಗುತ್ತದೆ.

ಜೂಜುಪ್ರಿಯ ಜಮೀನ್ದಾರ (ಅಪೂರ್ವ ಕಾಸರವಳ್ಳಿ) ವಿರುದ್ಧ ಹೋರಾಡುತ್ತಿರುವ ಬೆಟ್ಟದಪುರದ ಜನರು ಖೋ ಖೋ ಆಟದಲ್ಲಿ ಗೆದ್ದು ತಮ್ಮ ಜಮೀನುಗಳನ್ನು ಉಳಿಸುತ್ತೇವೆ ಎಂದು ಸವಾಲು ಹಾಕುವುದು, ತಮ್ಮ ನಂಬಿಕೆಗೆ ಪಿ.ಟಿ. ಮಾಸ್ಟರ್ ಮನೋಹರ್‌ ಮೋಸ ಮಾಡಿದ್ದಾನೆಂದು ಬೇಸರಗೊಂಡ ಊರಿನ ಜನರು ತಮ್ಮ ಮಕ್ಕಳನ್ನು ಖೋ ಖೋ ಆಡಲು ಕಳಿಸದಿರುವಾಗ ಊರ ಹೊರಗೆ ವಾಸಿಸುತ್ತಿರುವ ಹಂದಿ ಜೋಗರ ಹುಡುಗನನ್ನು, ಬಹು ಆಳದ ಕೆರೆಗೆ ಧುಮುಕಿ ಮೀನು ಹಿಡಿಯುವ ಬೆಸ್ತರ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳುವುದು, ಊರು ಬಿಟ್ಟು ಹೋದ ಮುಸ್ಲಿಮ್ ಹುಡುಗರು ಮತ್ತೆ ತಂಡಕ್ಕೆ ಬಂದು ಸೇರುವುದು- ಇತ್ಯಾದಿ ದೃಶ್ಯಗಳು ಅಮೀರ್‌ ಖಾನ್‌ ಅಭಿನಯದ ‘ಲಗಾನ್‌’ ಸಿನಿಮಾವನ್ನು ನೆನಪಿಸುತ್ತವೆ.

ಕ್ಷಾಮದಿಂದ ನೊಂದ ಊರಿನ ಜನ ಎಲ್ಲ ಜಾತಿ ಮತವನ್ನು ಮರೆತು, ಒಂದಾಗಿ ಕ್ರಿಕೆಟ್ ಕಲಿತು ನಂತರ ಬ್ರಿಟಿಷರನ್ನು ಸೋಲಿಸಿದ್ದನ್ನು ಲಗಾನ್‌ನಲ್ಲಿ ಕಾಣಬಹುದು. ಜಡೇಶ ಅವರ ಕಥೆಯಲ್ಲೂ ಈ ಸ್ವರೂಪ ಕಂಡು ಬರುತ್ತದೆ. ಜಮೀನ್ದಾರನ ವಿರುದ್ಧ ಪಣ ತೊಟ್ಟು ಊರನ್ನು ಉಳಿಸಲು ಖೋ ಖೋ ಆಡುತ್ತಾರೆ. ಸ್ವಾತಂತ್ರ್ಯ ವೂರ್ವದ ಕಥೆಯಾದ ಲಗಾನ್‌ನಲ್ಲಿ ಅಸ್ಪೃಶ್ಯತೆ ಅಳಿಸಿ ಭಾರತೀಯರು ಒಂದಾಗಿ ಹೋರಾಡಬೇಕಾದ ಎಳೆ ಬರುತ್ತದೆ. ಸ್ವಾತಂತ್ರ್ಯ ನಂತರದ ಕಥೆಯಾದ ಗುರು ಶಿಷ್ಯರಲ್ಲಿ ಹಂದಿಜೋಗರು ಊರ ಹೊರಗೆ ಇರುವಂತೆ ತೋರಿಸಲಾಗಿದೆ. ಹಂದಿಜೋಗರ ಹುಡುಗ ತಂಡಕ್ಕೆ ಬಂದು ಸೇರಿದಾಗಲಾಗಲೀ, ಹಂದಿಯನ್ನು ಓಡಿಸಿಕೊಂಡು ಶಾಲಾ ಅಂಗಳದಲ್ಲಿ ನಿರ್ಭಿಡೆಯಿಂದ ಹಿಡಿಯುವ ವೇಳೆಯಲ್ಲಾಗಲೀ ಅಸ್ಪೃಶ್ಯತೆಯ ಅಂಜಿಕೆ ಪ್ರದರ್ಶನವಾಗಿಲ್ಲ. ಈ ಕುರಿತು ಹೆಚ್ಚಿನ ವಿವರಕ್ಕೆ ಹೋಗದಂತೆ ನಿಭಾಯಿಸಿರುವುದು ಜಡೇಶ್ ಅವರ ಜಾಣ್ಮೆಯೂ ಹೌದು.

ಗಾಂಧಿಯ ಪ್ರತಿಮೆಯ ಎದುರು ನಿಂತು, “ಮಾಡು ಇಲ್ಲವೇ ಮಡಿ” ಎಂದು ಪಣ ತೊಡುವ ಬೆಟ್ಟದಪುರದ ತಂಡ, ಕನ್ನಡ ಭಾವುಟ ಹಿಡಿದು ಬರುವ ಪಿ.ಟಿ.ಮಾಸ್ಟರ್ ಮನೋಹರ್‌- ದೃಶ್ಯಗಳು ನಿರ್ದೇಶಕರ ಅಸ್ಮಿತೆಯ ಗುರುತುಗಳಾಗಿ ಕಾಣುತ್ತವೆ.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಲ್ಲಿ ಇರುವ ಸಾಮಾನ್ಯ ರೋಚಕತೆ ಇಲ್ಲಿಯೂ ಇದೆ. ವೈಯಕ್ತಿಕ ಸಾಧನೆಯ ಕಥಾ ಹಂದರವುಳ್ಳ ಸ್ಪೋರ್ಟ್ಸ್ ಡ್ರಾಮಾಗಳಿಗಿಂತ ಸಾಮಾಜಿಕ ವ್ಯವಸ್ಥೆಯೊಂದಿಗೆ ಬರೆತ ಕ್ರೀಡಾ ಕಥನಗಳಿಗೆ ಮಹತ್ವ ಇರುವುದನ್ನು ‘ಗುರು ಶಿಷ್ಯರು’ ಸಿನಿಮಾ ಮನಗಾಣಿಸಿದೆ. ಖೋ ಖೋ ಆಟಕ್ಕೆ ಹಾಗೂ ಖೋ ಖೋ ಆಟಗಾರರಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬ ಆಶಯವನ್ನು ಈ ಸಿನಿಮಾ ವ್ಯಕ್ತಪಡಿಸಿದೆ. ಅಂದಹಾಗೆ ಶಾಲಾ ಬಾಲಕನ ಲವ್ ಸ್ಟೋರಿಗೆ ನೀಡಿರುವ ಸ್ಪೇಸ್‌ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳೀಕರ್‌, ಖಳನಾಯಕನಾಗಿ ಅಪೂರ್ವ ಕಾಸರವಳ್ಳಿ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಶಿಷ್ಯರ ಪಾತ್ರದಲ್ಲಿ ನಟಿರುವ ಎಲ್ಲ ಮಕ್ಕಳೂ ಇಷ್ಟವಾಗುತ್ತಾರೆ. ಅಜನೀಶ್ ಅವರ ಸಂಗೀತ ಮೆಚ್ಚುಗೆಯಾಗುತ್ತದೆ. ಹಾಡುಗಳು ಇಂಪಾಗಿವೆ. ಛಾಯಾಗ್ರಾಹಕ ಅರೂರ್‌ ಸುಧಾಕರ್‌ ಶೆಟ್ಟಿಯವರು ಹಳ್ಳಿಯ ಪರಿಸರವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...