HomeUncategorizedದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

ದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ಸಿನಲ್ಲಿ `ಅಸಂಗ್ರಹ’ ಎಂಬ ವ್ರತವನ್ನು ಕಾಂಗ್ರೆಸ್ಸಿಗರು ಪಾಲಿಸುತ್ತಿದ್ದರು. ಅಸಂಗ್ರಹ ಎಂದರೆ ಕೂಡಿಹಾಕದೆ ಇರುವುದು. ಸಂಗ್ರಹಬುದ್ಧಿ ದುರಾಸೆಯಿಂದ ಕೂಡಿದ ಬುದ್ಧಿ. ಕೂಡಿಹಾಕುವ ಬುದ್ಧಿ ಬೆಳೆದಹಾಗೆ ಇತರರ ಸ್ವತ್ತನ್ನು ಸ್ವಾಹ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಸಂಗ್ರಹ ಬುದ್ಧಿ ವೃದ್ಧಿಯಾದಂತೆ ನ್ಯಾಯಯುತವಾಗಿಯೋ ಅಪಮಾರ್ಗದಿಂದಲೋ ಸಂಪಾದನೆ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಇದರಿಂದ ಉಳ್ಳವರು, ಕೊಂಡವರ ಮಧ್ಯದ ಕಂದಕ ಬೆಳೆಯುತ್ತಾ ಹೋಗುತ್ತದೆ. ಧನಿಕ ವರ್ಗ ಬಡವರ ಸಮೂಹಗಳ ಮಾನವ ಸಂಬಂಧ ಕೆಡುತ್ತದೆ. ಇದು ಮುಂದೆ ವರ್ಗ ಕಲಹಕ್ಕೂ, ಘರ್ಷಣೆಗೂ ಕಾರಣವಾಗುತ್ತದೆ. ಲೆನಿನ್ನನ ಕಾಲದಲ್ಲಿ ರಷ್ಯಾದಲ್ಲಿ ಈ ಬಗೆಯ ಘರ್ಷಣೆ ಏರ್ಪಟ್ಟು ಶ್ರೀಮಂತ ಭೂಮಾಲೀಕರ ತಲೆಗಳನ್ನು ಕಡಿಯಲಾಯಿತು.

ಸ್ವಾತಂತ್ರ್ಯ ಬಂದಮೇಲೆ ಈ ಶ್ರೀಮಂತರ ವರ್ಗ ರಾಜಕೀಯ ಪಕ್ಷಗಳನ್ನು ಸೇರಿ ಶಾಸಕರು, ಪಾರ್ಲಿಮೆಂಟ್ ಸದಸ್ಯರೂ, ಮಂತ್ರಿಗಳೂ ಆಗಿದ್ದಾರೆ. ಹಿಂದೆ ನಾವು ದೇಶಕ್ಕಾಗಿ ತ್ಯಾಗ ಮಾಡಿದವರನ್ನು, ಸ್ವಾತಂತ್ರ್ಯ ಆಂದೋಲನದಲ್ಲಿ ಸೆರೆಮನೆಗೆ ಹೋಗಿದ್ದವರನ್ನು ಕಾಂಗ್ರೆಸ್ಸಿನಿಂದ ಚುನಾವಣೆಗೆ ನಿಲ್ಲಿಸುತ್ತಿದ್ದೆವು. ಇವರ ವಿರುದ್ಧವಾಗಿ ನಿಂತ ಪಟ್ಟಭದ್ರರು, ಸಾಹುಕಾರರು ಠೇವಣಿ ಕಳೆದುಕೊಳ್ಳುತ್ತಿದ್ದರು. ಈಗ ಕಾಲ ಎಷ್ಟು ಕೆಟ್ಟಿದೆಯೆಂದರೆ, ಈ ಪಟ್ಟಭದ್ರರ ಎದುರಾಳಿಯಾಗಿ ಸಮಾಜಸೇವಕ ನಿಂತರೆ ಅವನು ಠೇವಣಿ ಕಳೆದುಕೊಳ್ಳುತ್ತಾನೆ.

ಈ ಪಟ್ಟಭದ್ರರ ಪಟ್ಟಿಯಲ್ಲಿ ಕತ್ತಿ ಸೋದರರು, ಡಿ.ಕೆ. ಸೋದರರು, ದೇವೇಗೌಡರ ಕುಟುಂಬ, ಕುಪೇಂದ್ರ ರೆಡ್ಡಿ, ಎಂಟಿಬಿ ನಾಗರಾಜ್, ಈಶ್ವರಪ್ಪ, ಯಡಿಯೂರಪ್ಪ ಮತ್ತವರ ಮಕ್ಕಳು, ಕರಂದ್ಲಾಜೆ, ಹುಕ್ಕೇರಿ ಕುಟುಂಬ, ಜಾರಕಿಹೊಳಿ ಸಹೋದರರು ಮುಂತಾದ ನೂರಕ್ಕೂ ಹೆಚ್ಚು ಜನ ಇದ್ದಾರೆ.

ಗ್ರೀಕ್ ಜನಪದ ಕಥೆಗಳಲ್ಲಿ ಮೈದಾಸ್ ಎಂಬುವವನಿದ್ದನಂತೆ. ಅವನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತಂತೆ. ಅವನು ಚಿನ್ನದ ಆಸೆಯಿಂದ ತನ್ನ ಮಗಳನ್ನು ಮುಟ್ಟಿದನಂತೆ. ಅವಳೂ ಚಿನ್ನವಾದಳು. ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿದರೂ, ನೂರಾರು ಎಕರೆ ಜಮೀನು ಕೊಂಡರೂ, ನೂರಾರು ಸೈಟ್‌ಗಳನ್ನು ಮಾಡಿದರೂ ಇನ್ನೂ ದೋಚಬೇಕು, ಬಾಚಬೇಕು ಎಂಬ ದುರಾಸೆ ಇದೆಯಲ್ಲಾ, ಅಬ್ಬಾ! ಇಷ್ಟೆಲ್ಲ ಐಶ್ವರ್ಯವನ್ನು ಇವರು ಹೇಗೆ ಅನುಭವಿಸುತ್ತಾರೆ?

ಚಿಕ್ಕಮಕ್ಕಳನ್ನು ಸಮುದ್ರ ತಡಿಯಲ್ಲಿ ಬಿಟ್ಟುನೋಡಿ, ಅವರು ಕಪ್ಪೆಚಿಪ್ಪು, ಕವಡೆ ಆರಿಸಲು ಶುರು ಮಾಡುತ್ತಾರೆ. ಎಷ್ಟು ಸಂಗ್ರಹಿಸಿದರೂ ಆ ಮಕ್ಕಳಿಗೆ ತೃಪ್ತಿ ಅನ್ನುವುದೇ ಇರಲ್ಲ. ಕಂಡದ್ದನ್ನೆಲ್ಲ ಎತ್ತಿಟ್ಟುಕೊಳ್ಳುತ್ತಾರೆ. ಇಲ್ಲಿ ಮುಗ್ಧ ಮನಸ್ಸಿನ ಮಕ್ಕಳ ಸಂಗ್ರಹದ ಹಿಂದೆ ಅಷ್ಟೇ ಮುಗ್ಧವಾದ ಖುಷಿ ಇರುತ್ತದೆ. ಅದನ್ನು ಬಿಟ್ಟರೆ, ಯಾವ ದುರಾಸೆಯೂ ಇರುವುದಿಲ್ಲ. ಈ ಪಟ್ಟಭದ್ರರು ಆ ಮಕ್ಕಳಂತೆಯೇ ಮುಗಿಬಿದ್ದು ಆಸ್ತಿ ಮಾಡಲು ಹಪಾಹಪಿಸುತ್ತಾರೆ, ಆದರೆ ಅಂತಹ ಹಪಾಹಪಿತನದ ಹಿಂದೆ ಆ ಮಕ್ಕಳಿಗಿದ್ದಂತೆ ಮುಗ್ಧ ಖುಷಿ ಇರುವುದಿಲ್ಲ, ಬದಲಿಗೆ ಕೆಟ್ಟ ದುರಾಸೆ, ದುಷ್ಟ ಸಂಚುಗಳು ಇರುತ್ತವೆ. ಸಂಪಾದಿಸಿರುವ ಎಲ್ಲಾ ಐಶ್ವರ್ಯಕ್ಕೂ ದಾಖಲೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಇಷ್ಟೊಂದು ಕಲೆಹಾಕುವ ಅಗತ್ಯ ನಿಮಗಿದೆಯೇ? ಎಂದು ಕೇಳಿದರೆ, `ದುಡ್ಡು ಮಾಡಲು ಯೋಗ್ಯತೆ ಇಲ್ಲದಿರುವ ನೀವು ಕೇಳುವ ಮಾತು ಇದು. ನಿಮ್ಮನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ’ ಎನ್ನುತ್ತಾರೆ.

ಒಂದು ತಲೆಮಾರಿಗೆ ಬೇಕಾದಷ್ಟು, ಎರಡು ತಲೆಮಾರು ಕೂತು ತಿಂದರೂ ಸವೆಯದಷ್ಟು, ಅದಕ್ಕಿಂತಲೂ ಹೆಚ್ಚು ಸಂಪಾದಿಸಿ ಕೊನೆಗೆ ಲಾಯರಿಗೆ, ಕೋರ್ಟಿಗೆ, ಕಚೇರಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ಕೊಟ್ಟಿರಿ ಎಂದಿಟ್ಟುಕೊಳ್ಳಿ ಆಗ ನಿಮಗೆ ನೆಮ್ಮದಿ ಇರುತ್ತಾ? ಸೆರೆಮನೆ ವಾಸ, ಪೊಲೀಸ್ ಕಸ್ಟಡಿ, ವಿಚಾರಣೆ, ಮುಟ್ಟುಗೋಲು, ಸಜಾ ಇವುಗಳ ಭಯ ಸದಾ ಕಾಡುತ್ತಲೇ ಇರುತ್ತದೆಯಲ್ಲವೇ?. ಕೊಳ್ಳೆಹೊಡೆದ ಆಸ್ತಿ ಉಳಿಸಿಕೊಳ್ಳುವ ಆಲೋಚನೆಯಲ್ಲಿ ರಕ್ತದೊತ್ತಡ, ಹೃದಯಬೇನೆಯಂತಹ ತೀವ್ರತರನಾದ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಲಿಯೋ ಟಾಲ್‌ಸ್ಟಾಯ್ `ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’ ಎಂಬ ಒಂದು ಕತೆ ಬರೆದಿದ್ದಾನೆ. ಭೂಮಿ ದಾಹವುಳ್ಳ ಒಬ್ಬ ಮನುಷ್ಯ ಇದ್ದ. ಅವನಿಗೆ ಎಷ್ಟು ಭೂಮಿಕೊಂಡರೂ ತೃಪ್ತಿ ಇಲ್ಲ. ಇವನನ್ನು ಆ ಊರಿನ ಬೆಟ್ಟದ ಮೇಲಿರುವ ಸೈತಾನ್ ಬರಮಾಡಿಕೊಳ್ಳುತ್ತಾನೆ. `50 ಸಾವಿರ ಪೌಂಡ್ ಹಣವಿರುವ ಚೀಲ ಇಲ್ಲಿಡು, ಬೆಟ್ಟದ ಪೂರ್ವಭಾಗದಲ್ಲಿರುವ ಭೂಮಿಯೆಲ್ಲಾ ನನ್ನದೇ. ನೀನು ಬೆಳಿಗ್ಗೆ ಹೊರಟು ನಿನಗೆ ಬೇಕಾದ ಜಮೀನಿಗೆ ಇಂದು ಬಾಂದ್‌ಕಲ್ಲನ್ನು ಇಟ್ಟುಕೊಂಡು ಹೋಗು, ಸಂಜೆವೇಳೆಗೆ ನೀನೆಷ್ಟು ಜಮೀನಿಗೆ ಬಾಂದ್ ಕಲ್ಲು ಇಡುವೆಯೋ ಅದೆಲ್ಲಾ ನಿನ್ನದು. ಆದರೆ ಒಂದು ಕರಾರು. ನೀನು ಸೂರ್ಯಾಸ್ತಮಯದ ಹೊತ್ತಿಗೆ ಬೆಟ್ಟ ಹತ್ತಿ ನಾನು ಕುಳಿತಿರುವಲ್ಲಿಗೆ ಬರಬೇಕು. ನೀನು ಸೂರ್ಯಾಸ್ತದ ಒಳಗೆ ನಾನು ಕುಳಿತಿರುವಲ್ಲಿಗೆ ಬರುವೆಯಾದರೆ ನೀನು ಗುರುತಿಸಿರುವ ಎಲ್ಲಾ ಜಮೀನು ನಿನ್ನದು, ಆದರೆ ನೀನು ನಿಗದಿತ ಸಮಯದೊಳಗೆ ಈ ಸ್ಥಳ ತಲುಪಲು ವಿಫಲವಾದರೆ ಈ 50 ಸಾವಿರ ಪೌಂಡ್ ನನ್ನದಾಗುತ್ತದೆ, ನಿನಗೆ ಒಂದು ಕವಡೆ ಜಮೀನೂ ದಕ್ಕುವುದಿಲ್ಲ.

ಈ ಆಸೆಬುರುಕ ಸರಸರ ಬೆಟ್ಟ ಇಳಿದು ಪೂರ್ವ ದಿಕ್ಕಿನ ಜಮೀನುಗಳ ಅನ್ವೇಷಣೆಗಾಗಿ ಹೊರಟ. ಎದುರುಗಡೆ ವಿಸ್ತಾರವಾದ ಉತ್ಕೃಷ್ಟ ಜಮೀನು ಹರಡಿಕೊಂಡಿದೆ. ಅದರ ಪಕ್ಕದಲ್ಲಿ ನದಿ ಹರಿದುಹೋಗುತ್ತದೆ. ಜಮೀನನ್ನು ಸುತ್ತುಹಾಕಿ ಕಲ್ಲು ನೆಟ್ಟು ಮುಂದಕ್ಕೆ ಹೋದರೆ, ಒಂದು ದೊಡ್ಡ ಕೆರೆ, ಅದರ ಪಕ್ಕದಲ್ಲಿ ಹರಡಿಕೊಂಡಿದ್ದ ಜಮೀನು. ಅದಕ್ಕೂ ಪ್ರದಕ್ಷಿಣೆ ಹಾಕಿ ಕಲ್ಲು ನೆಟ್ಟಿದ್ದಾಯ್ತು. ಅಷ್ಟು ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮುಂದೆ ಹೊರಟ. ಒಂದು ವಿಶಾಲವಾದ ಪ್ರದೇಶ, ಬಂಜರು ಭೂಮಿ. ಅದರ ಆಚೆಗೆ ಕಾಣಿಸಿತು ಹಚ್ಚಹಸುರಿನ ವಿಸ್ತಾರವಾದ ಭೂಮಿ. ಅಲ್ಲಿಗೆ ದಾಪುಗಾಲು ಹಾಕುತ್ತಾ ಹೋದ. ಅದನ್ನೂ ಸುತ್ತಿ ಒಂದು ಕಲ್ಲುನೆಟ್ಟ. ಸಂಜೆ ನಾಲ್ಕೂವರೆ ಗಂಟೆ. ಬಹುದೂರ ನಡೆದು ಬಂದುಬಿಟ್ಟಿದ್ದಾನೆ. ಸೂರ್ಯ ಮುಳುಗುವುದರ ಒಳಗೆ ಬೆಟ್ಟದ ತುದಿ ಸೇರಬೇಕೆಂಬ ತವಕ. ಸುಸ್ತಾಗಿಬಿಟ್ಟಿದ್ದಾನೆ. ಏದುಸಿರು ಬಿಡುತ್ತಾ ಪ್ರಯಾಸದಿಂದ ಬೆಟ್ಟ ಹತ್ತಿದ. ಬೆಟ್ಟದ ತುದಿ ಮುಟ್ಟಬೇಕು, ಅಷ್ಟರಲ್ಲಿ ಸೂರ್ಯ ದಿಗಂತಕ್ಕೆ ಸರಿದಿದ್ದ. ಗಾಬರಿಯಾಯಿತು. ಜೀವ ಹಿಡಿದುಕೊಂಡು ಶಿಖರದತ್ತ ಧಾವಿಸಿದ. ಬೆಟ್ಟದ ಶಿಖರಕ್ಕೆ ಬಂದವನೇ ತಾನಿಟ್ಟು ಹೋಗಿದ್ದ ಹಣದ ಗಂಟನ್ನು ಪಟ್ಟಾಗಿ ಹಿಡಿದುಕೊಂಡ. ಆದರೆ ಪ್ರಾಣಪಕ್ಷಿ ಹಾರಿಹೋಯಿತು! ಇಷ್ಟೊಂದು ಪ್ರಯಾಸಪಟ್ಟು ನೂರಾರು ಎಕರೆ ಜಮೀನಿನ ಒಡೆಯನಾಗುವ ಅವನ ಆಸೆ ಕಮರಿಹೋಯಿತು.

ಅವನನ್ನು ಮೂರಡಿ, ಆರಡಿ ಅಳತೆಯ ಹಳ್ಳ ತೆಗೆದು ಹೂಳಲಾಯಿತು!

ತಾತ್ಪರ್ಯ ಇಷ್ಟೇ, ಅಪಮಾರ್ಗದಲ್ಲೇ ಆಗಲಿ, ಯೋಗ್ಯ ಮಾರ್ಗದಲ್ಲೇ ಆಗಲಿ ಮನುಷ್ಯ ಎಷ್ಟೇ ಎಕರೆ ಜಮೀನು ಸಂಪಾದಿಸಿಟ್ಟರೂ ಅವನಿಗೆ ದಕ್ಕುವುದು ಮೂರಡಿ, ಆರಡಿ ಜಾಗ ಮಾತ್ರ!

ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಂಡು, ದುರಾಸೆಯ ಪರಾಕಾಷ್ಠೆ ಏರಿರುವ ಡಿ.ಕೆ.ಶಿವಕುಮಾರ್ ಥರದವರಿಗೆ ಈ ಮಾತು ಅರ್ಥವಾದೀತೆಂದು ಭಾವಿಸಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಥೆ ಮಾರ್ಮಿಕವಾಗಿದೆ. ಇಷ್ಟಕ್ಕೆಲ್ಲಾ ಭ್ರಷ್ಟ ಮತದಾರರು ಕಾರಣ.

LEAVE A REPLY

Please enter your comment!
Please enter your name here

- Advertisment -

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...