HomeUncategorizedದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

ದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ಸಿನಲ್ಲಿ `ಅಸಂಗ್ರಹ’ ಎಂಬ ವ್ರತವನ್ನು ಕಾಂಗ್ರೆಸ್ಸಿಗರು ಪಾಲಿಸುತ್ತಿದ್ದರು. ಅಸಂಗ್ರಹ ಎಂದರೆ ಕೂಡಿಹಾಕದೆ ಇರುವುದು. ಸಂಗ್ರಹಬುದ್ಧಿ ದುರಾಸೆಯಿಂದ ಕೂಡಿದ ಬುದ್ಧಿ. ಕೂಡಿಹಾಕುವ ಬುದ್ಧಿ ಬೆಳೆದಹಾಗೆ ಇತರರ ಸ್ವತ್ತನ್ನು ಸ್ವಾಹ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಸಂಗ್ರಹ ಬುದ್ಧಿ ವೃದ್ಧಿಯಾದಂತೆ ನ್ಯಾಯಯುತವಾಗಿಯೋ ಅಪಮಾರ್ಗದಿಂದಲೋ ಸಂಪಾದನೆ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಇದರಿಂದ ಉಳ್ಳವರು, ಕೊಂಡವರ ಮಧ್ಯದ ಕಂದಕ ಬೆಳೆಯುತ್ತಾ ಹೋಗುತ್ತದೆ. ಧನಿಕ ವರ್ಗ ಬಡವರ ಸಮೂಹಗಳ ಮಾನವ ಸಂಬಂಧ ಕೆಡುತ್ತದೆ. ಇದು ಮುಂದೆ ವರ್ಗ ಕಲಹಕ್ಕೂ, ಘರ್ಷಣೆಗೂ ಕಾರಣವಾಗುತ್ತದೆ. ಲೆನಿನ್ನನ ಕಾಲದಲ್ಲಿ ರಷ್ಯಾದಲ್ಲಿ ಈ ಬಗೆಯ ಘರ್ಷಣೆ ಏರ್ಪಟ್ಟು ಶ್ರೀಮಂತ ಭೂಮಾಲೀಕರ ತಲೆಗಳನ್ನು ಕಡಿಯಲಾಯಿತು.

ಸ್ವಾತಂತ್ರ್ಯ ಬಂದಮೇಲೆ ಈ ಶ್ರೀಮಂತರ ವರ್ಗ ರಾಜಕೀಯ ಪಕ್ಷಗಳನ್ನು ಸೇರಿ ಶಾಸಕರು, ಪಾರ್ಲಿಮೆಂಟ್ ಸದಸ್ಯರೂ, ಮಂತ್ರಿಗಳೂ ಆಗಿದ್ದಾರೆ. ಹಿಂದೆ ನಾವು ದೇಶಕ್ಕಾಗಿ ತ್ಯಾಗ ಮಾಡಿದವರನ್ನು, ಸ್ವಾತಂತ್ರ್ಯ ಆಂದೋಲನದಲ್ಲಿ ಸೆರೆಮನೆಗೆ ಹೋಗಿದ್ದವರನ್ನು ಕಾಂಗ್ರೆಸ್ಸಿನಿಂದ ಚುನಾವಣೆಗೆ ನಿಲ್ಲಿಸುತ್ತಿದ್ದೆವು. ಇವರ ವಿರುದ್ಧವಾಗಿ ನಿಂತ ಪಟ್ಟಭದ್ರರು, ಸಾಹುಕಾರರು ಠೇವಣಿ ಕಳೆದುಕೊಳ್ಳುತ್ತಿದ್ದರು. ಈಗ ಕಾಲ ಎಷ್ಟು ಕೆಟ್ಟಿದೆಯೆಂದರೆ, ಈ ಪಟ್ಟಭದ್ರರ ಎದುರಾಳಿಯಾಗಿ ಸಮಾಜಸೇವಕ ನಿಂತರೆ ಅವನು ಠೇವಣಿ ಕಳೆದುಕೊಳ್ಳುತ್ತಾನೆ.

ಈ ಪಟ್ಟಭದ್ರರ ಪಟ್ಟಿಯಲ್ಲಿ ಕತ್ತಿ ಸೋದರರು, ಡಿ.ಕೆ. ಸೋದರರು, ದೇವೇಗೌಡರ ಕುಟುಂಬ, ಕುಪೇಂದ್ರ ರೆಡ್ಡಿ, ಎಂಟಿಬಿ ನಾಗರಾಜ್, ಈಶ್ವರಪ್ಪ, ಯಡಿಯೂರಪ್ಪ ಮತ್ತವರ ಮಕ್ಕಳು, ಕರಂದ್ಲಾಜೆ, ಹುಕ್ಕೇರಿ ಕುಟುಂಬ, ಜಾರಕಿಹೊಳಿ ಸಹೋದರರು ಮುಂತಾದ ನೂರಕ್ಕೂ ಹೆಚ್ಚು ಜನ ಇದ್ದಾರೆ.

ಗ್ರೀಕ್ ಜನಪದ ಕಥೆಗಳಲ್ಲಿ ಮೈದಾಸ್ ಎಂಬುವವನಿದ್ದನಂತೆ. ಅವನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತಂತೆ. ಅವನು ಚಿನ್ನದ ಆಸೆಯಿಂದ ತನ್ನ ಮಗಳನ್ನು ಮುಟ್ಟಿದನಂತೆ. ಅವಳೂ ಚಿನ್ನವಾದಳು. ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿದರೂ, ನೂರಾರು ಎಕರೆ ಜಮೀನು ಕೊಂಡರೂ, ನೂರಾರು ಸೈಟ್‌ಗಳನ್ನು ಮಾಡಿದರೂ ಇನ್ನೂ ದೋಚಬೇಕು, ಬಾಚಬೇಕು ಎಂಬ ದುರಾಸೆ ಇದೆಯಲ್ಲಾ, ಅಬ್ಬಾ! ಇಷ್ಟೆಲ್ಲ ಐಶ್ವರ್ಯವನ್ನು ಇವರು ಹೇಗೆ ಅನುಭವಿಸುತ್ತಾರೆ?

ಚಿಕ್ಕಮಕ್ಕಳನ್ನು ಸಮುದ್ರ ತಡಿಯಲ್ಲಿ ಬಿಟ್ಟುನೋಡಿ, ಅವರು ಕಪ್ಪೆಚಿಪ್ಪು, ಕವಡೆ ಆರಿಸಲು ಶುರು ಮಾಡುತ್ತಾರೆ. ಎಷ್ಟು ಸಂಗ್ರಹಿಸಿದರೂ ಆ ಮಕ್ಕಳಿಗೆ ತೃಪ್ತಿ ಅನ್ನುವುದೇ ಇರಲ್ಲ. ಕಂಡದ್ದನ್ನೆಲ್ಲ ಎತ್ತಿಟ್ಟುಕೊಳ್ಳುತ್ತಾರೆ. ಇಲ್ಲಿ ಮುಗ್ಧ ಮನಸ್ಸಿನ ಮಕ್ಕಳ ಸಂಗ್ರಹದ ಹಿಂದೆ ಅಷ್ಟೇ ಮುಗ್ಧವಾದ ಖುಷಿ ಇರುತ್ತದೆ. ಅದನ್ನು ಬಿಟ್ಟರೆ, ಯಾವ ದುರಾಸೆಯೂ ಇರುವುದಿಲ್ಲ. ಈ ಪಟ್ಟಭದ್ರರು ಆ ಮಕ್ಕಳಂತೆಯೇ ಮುಗಿಬಿದ್ದು ಆಸ್ತಿ ಮಾಡಲು ಹಪಾಹಪಿಸುತ್ತಾರೆ, ಆದರೆ ಅಂತಹ ಹಪಾಹಪಿತನದ ಹಿಂದೆ ಆ ಮಕ್ಕಳಿಗಿದ್ದಂತೆ ಮುಗ್ಧ ಖುಷಿ ಇರುವುದಿಲ್ಲ, ಬದಲಿಗೆ ಕೆಟ್ಟ ದುರಾಸೆ, ದುಷ್ಟ ಸಂಚುಗಳು ಇರುತ್ತವೆ. ಸಂಪಾದಿಸಿರುವ ಎಲ್ಲಾ ಐಶ್ವರ್ಯಕ್ಕೂ ದಾಖಲೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಇಷ್ಟೊಂದು ಕಲೆಹಾಕುವ ಅಗತ್ಯ ನಿಮಗಿದೆಯೇ? ಎಂದು ಕೇಳಿದರೆ, `ದುಡ್ಡು ಮಾಡಲು ಯೋಗ್ಯತೆ ಇಲ್ಲದಿರುವ ನೀವು ಕೇಳುವ ಮಾತು ಇದು. ನಿಮ್ಮನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ’ ಎನ್ನುತ್ತಾರೆ.

ಒಂದು ತಲೆಮಾರಿಗೆ ಬೇಕಾದಷ್ಟು, ಎರಡು ತಲೆಮಾರು ಕೂತು ತಿಂದರೂ ಸವೆಯದಷ್ಟು, ಅದಕ್ಕಿಂತಲೂ ಹೆಚ್ಚು ಸಂಪಾದಿಸಿ ಕೊನೆಗೆ ಲಾಯರಿಗೆ, ಕೋರ್ಟಿಗೆ, ಕಚೇರಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ಕೊಟ್ಟಿರಿ ಎಂದಿಟ್ಟುಕೊಳ್ಳಿ ಆಗ ನಿಮಗೆ ನೆಮ್ಮದಿ ಇರುತ್ತಾ? ಸೆರೆಮನೆ ವಾಸ, ಪೊಲೀಸ್ ಕಸ್ಟಡಿ, ವಿಚಾರಣೆ, ಮುಟ್ಟುಗೋಲು, ಸಜಾ ಇವುಗಳ ಭಯ ಸದಾ ಕಾಡುತ್ತಲೇ ಇರುತ್ತದೆಯಲ್ಲವೇ?. ಕೊಳ್ಳೆಹೊಡೆದ ಆಸ್ತಿ ಉಳಿಸಿಕೊಳ್ಳುವ ಆಲೋಚನೆಯಲ್ಲಿ ರಕ್ತದೊತ್ತಡ, ಹೃದಯಬೇನೆಯಂತಹ ತೀವ್ರತರನಾದ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಲಿಯೋ ಟಾಲ್‌ಸ್ಟಾಯ್ `ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’ ಎಂಬ ಒಂದು ಕತೆ ಬರೆದಿದ್ದಾನೆ. ಭೂಮಿ ದಾಹವುಳ್ಳ ಒಬ್ಬ ಮನುಷ್ಯ ಇದ್ದ. ಅವನಿಗೆ ಎಷ್ಟು ಭೂಮಿಕೊಂಡರೂ ತೃಪ್ತಿ ಇಲ್ಲ. ಇವನನ್ನು ಆ ಊರಿನ ಬೆಟ್ಟದ ಮೇಲಿರುವ ಸೈತಾನ್ ಬರಮಾಡಿಕೊಳ್ಳುತ್ತಾನೆ. `50 ಸಾವಿರ ಪೌಂಡ್ ಹಣವಿರುವ ಚೀಲ ಇಲ್ಲಿಡು, ಬೆಟ್ಟದ ಪೂರ್ವಭಾಗದಲ್ಲಿರುವ ಭೂಮಿಯೆಲ್ಲಾ ನನ್ನದೇ. ನೀನು ಬೆಳಿಗ್ಗೆ ಹೊರಟು ನಿನಗೆ ಬೇಕಾದ ಜಮೀನಿಗೆ ಇಂದು ಬಾಂದ್‌ಕಲ್ಲನ್ನು ಇಟ್ಟುಕೊಂಡು ಹೋಗು, ಸಂಜೆವೇಳೆಗೆ ನೀನೆಷ್ಟು ಜಮೀನಿಗೆ ಬಾಂದ್ ಕಲ್ಲು ಇಡುವೆಯೋ ಅದೆಲ್ಲಾ ನಿನ್ನದು. ಆದರೆ ಒಂದು ಕರಾರು. ನೀನು ಸೂರ್ಯಾಸ್ತಮಯದ ಹೊತ್ತಿಗೆ ಬೆಟ್ಟ ಹತ್ತಿ ನಾನು ಕುಳಿತಿರುವಲ್ಲಿಗೆ ಬರಬೇಕು. ನೀನು ಸೂರ್ಯಾಸ್ತದ ಒಳಗೆ ನಾನು ಕುಳಿತಿರುವಲ್ಲಿಗೆ ಬರುವೆಯಾದರೆ ನೀನು ಗುರುತಿಸಿರುವ ಎಲ್ಲಾ ಜಮೀನು ನಿನ್ನದು, ಆದರೆ ನೀನು ನಿಗದಿತ ಸಮಯದೊಳಗೆ ಈ ಸ್ಥಳ ತಲುಪಲು ವಿಫಲವಾದರೆ ಈ 50 ಸಾವಿರ ಪೌಂಡ್ ನನ್ನದಾಗುತ್ತದೆ, ನಿನಗೆ ಒಂದು ಕವಡೆ ಜಮೀನೂ ದಕ್ಕುವುದಿಲ್ಲ.

ಈ ಆಸೆಬುರುಕ ಸರಸರ ಬೆಟ್ಟ ಇಳಿದು ಪೂರ್ವ ದಿಕ್ಕಿನ ಜಮೀನುಗಳ ಅನ್ವೇಷಣೆಗಾಗಿ ಹೊರಟ. ಎದುರುಗಡೆ ವಿಸ್ತಾರವಾದ ಉತ್ಕೃಷ್ಟ ಜಮೀನು ಹರಡಿಕೊಂಡಿದೆ. ಅದರ ಪಕ್ಕದಲ್ಲಿ ನದಿ ಹರಿದುಹೋಗುತ್ತದೆ. ಜಮೀನನ್ನು ಸುತ್ತುಹಾಕಿ ಕಲ್ಲು ನೆಟ್ಟು ಮುಂದಕ್ಕೆ ಹೋದರೆ, ಒಂದು ದೊಡ್ಡ ಕೆರೆ, ಅದರ ಪಕ್ಕದಲ್ಲಿ ಹರಡಿಕೊಂಡಿದ್ದ ಜಮೀನು. ಅದಕ್ಕೂ ಪ್ರದಕ್ಷಿಣೆ ಹಾಕಿ ಕಲ್ಲು ನೆಟ್ಟಿದ್ದಾಯ್ತು. ಅಷ್ಟು ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮುಂದೆ ಹೊರಟ. ಒಂದು ವಿಶಾಲವಾದ ಪ್ರದೇಶ, ಬಂಜರು ಭೂಮಿ. ಅದರ ಆಚೆಗೆ ಕಾಣಿಸಿತು ಹಚ್ಚಹಸುರಿನ ವಿಸ್ತಾರವಾದ ಭೂಮಿ. ಅಲ್ಲಿಗೆ ದಾಪುಗಾಲು ಹಾಕುತ್ತಾ ಹೋದ. ಅದನ್ನೂ ಸುತ್ತಿ ಒಂದು ಕಲ್ಲುನೆಟ್ಟ. ಸಂಜೆ ನಾಲ್ಕೂವರೆ ಗಂಟೆ. ಬಹುದೂರ ನಡೆದು ಬಂದುಬಿಟ್ಟಿದ್ದಾನೆ. ಸೂರ್ಯ ಮುಳುಗುವುದರ ಒಳಗೆ ಬೆಟ್ಟದ ತುದಿ ಸೇರಬೇಕೆಂಬ ತವಕ. ಸುಸ್ತಾಗಿಬಿಟ್ಟಿದ್ದಾನೆ. ಏದುಸಿರು ಬಿಡುತ್ತಾ ಪ್ರಯಾಸದಿಂದ ಬೆಟ್ಟ ಹತ್ತಿದ. ಬೆಟ್ಟದ ತುದಿ ಮುಟ್ಟಬೇಕು, ಅಷ್ಟರಲ್ಲಿ ಸೂರ್ಯ ದಿಗಂತಕ್ಕೆ ಸರಿದಿದ್ದ. ಗಾಬರಿಯಾಯಿತು. ಜೀವ ಹಿಡಿದುಕೊಂಡು ಶಿಖರದತ್ತ ಧಾವಿಸಿದ. ಬೆಟ್ಟದ ಶಿಖರಕ್ಕೆ ಬಂದವನೇ ತಾನಿಟ್ಟು ಹೋಗಿದ್ದ ಹಣದ ಗಂಟನ್ನು ಪಟ್ಟಾಗಿ ಹಿಡಿದುಕೊಂಡ. ಆದರೆ ಪ್ರಾಣಪಕ್ಷಿ ಹಾರಿಹೋಯಿತು! ಇಷ್ಟೊಂದು ಪ್ರಯಾಸಪಟ್ಟು ನೂರಾರು ಎಕರೆ ಜಮೀನಿನ ಒಡೆಯನಾಗುವ ಅವನ ಆಸೆ ಕಮರಿಹೋಯಿತು.

ಅವನನ್ನು ಮೂರಡಿ, ಆರಡಿ ಅಳತೆಯ ಹಳ್ಳ ತೆಗೆದು ಹೂಳಲಾಯಿತು!

ತಾತ್ಪರ್ಯ ಇಷ್ಟೇ, ಅಪಮಾರ್ಗದಲ್ಲೇ ಆಗಲಿ, ಯೋಗ್ಯ ಮಾರ್ಗದಲ್ಲೇ ಆಗಲಿ ಮನುಷ್ಯ ಎಷ್ಟೇ ಎಕರೆ ಜಮೀನು ಸಂಪಾದಿಸಿಟ್ಟರೂ ಅವನಿಗೆ ದಕ್ಕುವುದು ಮೂರಡಿ, ಆರಡಿ ಜಾಗ ಮಾತ್ರ!

ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಂಡು, ದುರಾಸೆಯ ಪರಾಕಾಷ್ಠೆ ಏರಿರುವ ಡಿ.ಕೆ.ಶಿವಕುಮಾರ್ ಥರದವರಿಗೆ ಈ ಮಾತು ಅರ್ಥವಾದೀತೆಂದು ಭಾವಿಸಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಥೆ ಮಾರ್ಮಿಕವಾಗಿದೆ. ಇಷ್ಟಕ್ಕೆಲ್ಲಾ ಭ್ರಷ್ಟ ಮತದಾರರು ಕಾರಣ.

LEAVE A REPLY

Please enter your comment!
Please enter your name here

- Advertisment -

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...