Homeಚಳವಳಿಶ್ರದ್ಧಾಂಜಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರ ದನಿ ಹಮೀದಾ ಬೀ...

ಶ್ರದ್ಧಾಂಜಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರ ದನಿ ಹಮೀದಾ ಬೀ…

ಮಂಗಳವಾರ ತಮ್ಮ 74ನೆ ವರ್ಷದಲ್ಲಿ ನಿಧನರಾದ ಹಮೀದಾ ಬೀ ಖುದ್ದು ಅನಿಲ ದುರಂತದ ಸಂತ್ರಸ್ತೆಯಾಗಿದ್ದು, 30 ವರ್ಷಗಳ ಕಾಲ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಹೋರಾಡಿದವರು.

- Advertisement -
- Advertisement -

ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನ್ (ಬಿಜಿಪಿಎಂಯುಎಸ್) ಸಂಘಟನೆಯ ಅಧ್ಯಕ್ಷೆ ಮತ್ತು ದಣಿವರಿಯದ ಆಕ್ಟಿವಿಸ್ಟ್ ಆಗಿದ್ದ ಹಮೀದಾ ಬೀ ಡಿಸೆಂಬರ್ 29 ರಂದು ನಿಧನರಾಗಿದ್ದಾರೆ.
‘ಆಕೆಯ ಸಾವಿಗೆ ಕಾರಣ ಮುದಿ ವಯಸ್ಸಲ್ಲ; ಯುನಿಯನ್ ಕಾರ್ಬೈಡ್ ಪ್ಲ್ಯಾಂಟ್’ ಎನ್ನುತ್ತಾರೆ ಹಮೀದಾ ಬೀ ಅವರ ಬಹುಕಾಲದ ಗೆಳತಿ ಮತ್ತು ಬಿಜಿಪಿಎಂಯುಎಸ್ ಸದಸ್ಯೆ ರಯಿಸಾ ಬೀ.

ಸ್ವತಃ ಆ ದುರಂತದ ಸಂತ್ರಸ್ತೆಯಾಗಿದ್ದ ಹಮೀದಾ, ಮನುಷ್ಯ ನಿರ್ಮಿತ ಆ ದುರಂತದಿಂದ ಸಂತ್ರಸ್ತರಾದವರನ್ನು ಒಗ್ಗೂಡಿಸಿ ಭೋಪಾಲದ ಬೀದಿ-ರಸ್ತೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತ, ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಡಿದರು. ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಹಾರ ಲಭಿಸಬೇಕೆಂಬ ಬೇಡಿಕೆಗಳನ್ನು ಮುನ್ನೆಲೆಗೆ ತಂದಿದ್ದರು. ಇಂತಹ ಹೋರಾಟದ ಪರಿಣಾಮವಾಗಿ ಅಷ್ಟಿಷ್ಟಾದರೂ ನ್ಯಾಯ ದೊರಕಿದೆ. ಆದರೆ ಈ ಹೋರಾಟ ಮುಂದುವರೆದೇ ಇದೆ.

‘ಸಮಾಜದ ಅಶಕ್ತ ವಿಭಾಗಗಳಿಗೆ ಸೇರಿದ ಅನಿಲ ದುರಂತದ ಸಂತ್ರಸ್ತರಿಗೇಕೆ ಒಂದು ಸರಿಯಾದ ಬದುಕು ಇರಬಾರದು?’ -ಸಾಯುವ ತಿಂಗಳು ಮೊದಲು ಅವರ ಮಗಳ ಮನೆಯಲ್ಲಿ ಕಟ್ಟಿಗೆ ಮಂಚದಲ್ಲಿ ಮಲಗಿದ್ದ ಅವರು ಈ ಬರಹಗಾರರನ್ನು ಕೇಳಿದ್ದರು.

ಭೋಪಾಲ್‌ನಲ್ಲಿ ಜನಿಸಿದ ಹಮೀದಾ ಬೀ ಅವರ ಪ್ರತಿಭಟನೆ ಹೋರಾಟ ಸುದೀರ್ಘವಾದದ್ದು ಮತ್ತು ಸ್ಥಿರವಾದದ್ದು. ದುರಂತದಲ್ಲಿ ಅವರ ಸಂಬಂಧಿಗಳನೇಕರು ಅಸು ನೀಗಿದ್ದಾರೆ.

ಜನವರಿ 23, 1986ರಿಂದ ಪ್ರತಿ ಶನಿವಾರ (ಲಾಕ್‌ಡೌನ್ ಶುರುವಾಗುವವರೆಗೂ) ಬಿಜಿಪಿಎಂಯುಎಸ್ ಸಭೆಗಳಿಗೆ ಹಾಜರಾಗಲು ಇಬ್ರಾಹಿಂಪುರದ ತಮ್ಮ ಮನೆಯಿಂದ ಸೆಂಟ್ರಲ್ ಲೈಬ್ರರಿ ಸಮೀಪದ ಪಾರ್ಕಿಗೆ ಅವರು ನಡೆದೇ ಹೋಗುತ್ತಿದ್ದರು. ಅಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಅವರು, ಹಕ್ಕು ಪಡೆಯಲು ಮುಂದೆ ಮಾಡಬೇಕಾದ ಹೋರಾಟದ ಬಗ್ಗೆ ಅವರನ್ನು ಸಂಘಟಿಸುತ್ತಿದ್ದರು.

ವಾರದ ಉಳಿದ ದಿನಗಳಂದು ಬಿಜಿಪಿಎಂಯುಎಸ್‌ನ ಸ್ವಾಭಿಮಾನ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ, ಹೆಣಿಕೆ ತರಹದ ಜೀವನೋಪಾಯದ ಕೌಶಲ್ಯಗಳನ್ನು ಕಲಿಸುತ್ತಿದ್ದರು.

ಹೋರಾಟದ ಮೂಲಕ ಮತ್ತು ನ್ಯಾಯಾಲಯದ ಮೂಲಕ ಸಂತ್ರಸ್ತರಿಗೆ ಎಷ್ಟು ಸಾಧ್ಯವೋ ಅಷ್ಟು ನೆರವು-ಪರಿಹಾರ, ಚಿಕಿತ್ಸೆ ಸಿಗುವಂತೆ ಹಮೀದಾ ಶ್ರಮಿಸಿದರು. ಬಿಜಿಪಿಎಂಯುಎಸ್ ಸಂಘಟನೆಯ ಸಂಚಾಲಕರಾಗಿ ಸಂತ್ರಸ್ತರ ಹೋರಾಟಕ್ಕೆ ಒಂದು ದೃಢ ಸಂಕಲ್ಪ ರೂಪಿಸಿದ್ದ ಅಬ್ದುಲ್ ಜಬ್ಬಾರ್ ನಿಧನದ ನಂತರ ಹಮೀದಾರನ್ನು ಅಧ್ಯಕ್ಷೆಯನ್ನಾಗಿ ಸಂತ್ರಸ್ತರು ನೇಮಿಸಿಕೊಂಡಿದ್ದರು.

ಅವರ ಪತಿ ಇದ್ರಿಸ್ ಭಾಯ್ ಕೂಡ ಈ ಹೋರಾಟಕ್ಕೆ ಜೀವನ ಮೀಸಲಿಟ್ಟು ನಿಧನರಾದರು. ಹೋರಾಟಗಾರ್ತಿಯಾಗುವ ಮೊದಲು ಸಾಮಾನ್ಯ ಗೃಹಿಣಿಯಾಗಿದ್ದ ಅವರು ಸಂಪ್ರದಾಯಸ್ಥ ವ್ಯವಸ್ಥೆಯ ನಿರ್ಬಂಧಗಳಲ್ಲೇ ಬದುಕಿದ್ದರು. ಆದರೆ ಆ ಮನುಷ್ಯ ನಿರ್ಮಿತ ದುರಂತ ಉಂಟು ಮಾಡಿದ ಆಘಾತ, ನೋವು ಅವರನ್ನು ಸಂತ್ರಸ್ತರ ದನಿಯಾಗುವಂತೆ ಪ್ರೇರೆಪಿಸಿತು.

-ಅನೂಪ್ ದತ್ತಾ

(ಬರಹ ಕೃಪೆ: ದಿ ವೈರ್)


ಇದನ್ನೂ ಓದಿ; ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್‌ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...