Homeಚಳವಳಿಶ್ರದ್ಧಾಂಜಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರ ದನಿ ಹಮೀದಾ ಬೀ...

ಶ್ರದ್ಧಾಂಜಲಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರ ದನಿ ಹಮೀದಾ ಬೀ…

ಮಂಗಳವಾರ ತಮ್ಮ 74ನೆ ವರ್ಷದಲ್ಲಿ ನಿಧನರಾದ ಹಮೀದಾ ಬೀ ಖುದ್ದು ಅನಿಲ ದುರಂತದ ಸಂತ್ರಸ್ತೆಯಾಗಿದ್ದು, 30 ವರ್ಷಗಳ ಕಾಲ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಹೋರಾಡಿದವರು.

- Advertisement -
- Advertisement -

ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನ್ (ಬಿಜಿಪಿಎಂಯುಎಸ್) ಸಂಘಟನೆಯ ಅಧ್ಯಕ್ಷೆ ಮತ್ತು ದಣಿವರಿಯದ ಆಕ್ಟಿವಿಸ್ಟ್ ಆಗಿದ್ದ ಹಮೀದಾ ಬೀ ಡಿಸೆಂಬರ್ 29 ರಂದು ನಿಧನರಾಗಿದ್ದಾರೆ.
‘ಆಕೆಯ ಸಾವಿಗೆ ಕಾರಣ ಮುದಿ ವಯಸ್ಸಲ್ಲ; ಯುನಿಯನ್ ಕಾರ್ಬೈಡ್ ಪ್ಲ್ಯಾಂಟ್’ ಎನ್ನುತ್ತಾರೆ ಹಮೀದಾ ಬೀ ಅವರ ಬಹುಕಾಲದ ಗೆಳತಿ ಮತ್ತು ಬಿಜಿಪಿಎಂಯುಎಸ್ ಸದಸ್ಯೆ ರಯಿಸಾ ಬೀ.

ಸ್ವತಃ ಆ ದುರಂತದ ಸಂತ್ರಸ್ತೆಯಾಗಿದ್ದ ಹಮೀದಾ, ಮನುಷ್ಯ ನಿರ್ಮಿತ ಆ ದುರಂತದಿಂದ ಸಂತ್ರಸ್ತರಾದವರನ್ನು ಒಗ್ಗೂಡಿಸಿ ಭೋಪಾಲದ ಬೀದಿ-ರಸ್ತೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತ, ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಡಿದರು. ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಹಾರ ಲಭಿಸಬೇಕೆಂಬ ಬೇಡಿಕೆಗಳನ್ನು ಮುನ್ನೆಲೆಗೆ ತಂದಿದ್ದರು. ಇಂತಹ ಹೋರಾಟದ ಪರಿಣಾಮವಾಗಿ ಅಷ್ಟಿಷ್ಟಾದರೂ ನ್ಯಾಯ ದೊರಕಿದೆ. ಆದರೆ ಈ ಹೋರಾಟ ಮುಂದುವರೆದೇ ಇದೆ.

‘ಸಮಾಜದ ಅಶಕ್ತ ವಿಭಾಗಗಳಿಗೆ ಸೇರಿದ ಅನಿಲ ದುರಂತದ ಸಂತ್ರಸ್ತರಿಗೇಕೆ ಒಂದು ಸರಿಯಾದ ಬದುಕು ಇರಬಾರದು?’ -ಸಾಯುವ ತಿಂಗಳು ಮೊದಲು ಅವರ ಮಗಳ ಮನೆಯಲ್ಲಿ ಕಟ್ಟಿಗೆ ಮಂಚದಲ್ಲಿ ಮಲಗಿದ್ದ ಅವರು ಈ ಬರಹಗಾರರನ್ನು ಕೇಳಿದ್ದರು.

ಭೋಪಾಲ್‌ನಲ್ಲಿ ಜನಿಸಿದ ಹಮೀದಾ ಬೀ ಅವರ ಪ್ರತಿಭಟನೆ ಹೋರಾಟ ಸುದೀರ್ಘವಾದದ್ದು ಮತ್ತು ಸ್ಥಿರವಾದದ್ದು. ದುರಂತದಲ್ಲಿ ಅವರ ಸಂಬಂಧಿಗಳನೇಕರು ಅಸು ನೀಗಿದ್ದಾರೆ.

ಜನವರಿ 23, 1986ರಿಂದ ಪ್ರತಿ ಶನಿವಾರ (ಲಾಕ್‌ಡೌನ್ ಶುರುವಾಗುವವರೆಗೂ) ಬಿಜಿಪಿಎಂಯುಎಸ್ ಸಭೆಗಳಿಗೆ ಹಾಜರಾಗಲು ಇಬ್ರಾಹಿಂಪುರದ ತಮ್ಮ ಮನೆಯಿಂದ ಸೆಂಟ್ರಲ್ ಲೈಬ್ರರಿ ಸಮೀಪದ ಪಾರ್ಕಿಗೆ ಅವರು ನಡೆದೇ ಹೋಗುತ್ತಿದ್ದರು. ಅಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಅವರು, ಹಕ್ಕು ಪಡೆಯಲು ಮುಂದೆ ಮಾಡಬೇಕಾದ ಹೋರಾಟದ ಬಗ್ಗೆ ಅವರನ್ನು ಸಂಘಟಿಸುತ್ತಿದ್ದರು.

ವಾರದ ಉಳಿದ ದಿನಗಳಂದು ಬಿಜಿಪಿಎಂಯುಎಸ್‌ನ ಸ್ವಾಭಿಮಾನ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ, ಹೆಣಿಕೆ ತರಹದ ಜೀವನೋಪಾಯದ ಕೌಶಲ್ಯಗಳನ್ನು ಕಲಿಸುತ್ತಿದ್ದರು.

ಹೋರಾಟದ ಮೂಲಕ ಮತ್ತು ನ್ಯಾಯಾಲಯದ ಮೂಲಕ ಸಂತ್ರಸ್ತರಿಗೆ ಎಷ್ಟು ಸಾಧ್ಯವೋ ಅಷ್ಟು ನೆರವು-ಪರಿಹಾರ, ಚಿಕಿತ್ಸೆ ಸಿಗುವಂತೆ ಹಮೀದಾ ಶ್ರಮಿಸಿದರು. ಬಿಜಿಪಿಎಂಯುಎಸ್ ಸಂಘಟನೆಯ ಸಂಚಾಲಕರಾಗಿ ಸಂತ್ರಸ್ತರ ಹೋರಾಟಕ್ಕೆ ಒಂದು ದೃಢ ಸಂಕಲ್ಪ ರೂಪಿಸಿದ್ದ ಅಬ್ದುಲ್ ಜಬ್ಬಾರ್ ನಿಧನದ ನಂತರ ಹಮೀದಾರನ್ನು ಅಧ್ಯಕ್ಷೆಯನ್ನಾಗಿ ಸಂತ್ರಸ್ತರು ನೇಮಿಸಿಕೊಂಡಿದ್ದರು.

ಅವರ ಪತಿ ಇದ್ರಿಸ್ ಭಾಯ್ ಕೂಡ ಈ ಹೋರಾಟಕ್ಕೆ ಜೀವನ ಮೀಸಲಿಟ್ಟು ನಿಧನರಾದರು. ಹೋರಾಟಗಾರ್ತಿಯಾಗುವ ಮೊದಲು ಸಾಮಾನ್ಯ ಗೃಹಿಣಿಯಾಗಿದ್ದ ಅವರು ಸಂಪ್ರದಾಯಸ್ಥ ವ್ಯವಸ್ಥೆಯ ನಿರ್ಬಂಧಗಳಲ್ಲೇ ಬದುಕಿದ್ದರು. ಆದರೆ ಆ ಮನುಷ್ಯ ನಿರ್ಮಿತ ದುರಂತ ಉಂಟು ಮಾಡಿದ ಆಘಾತ, ನೋವು ಅವರನ್ನು ಸಂತ್ರಸ್ತರ ದನಿಯಾಗುವಂತೆ ಪ್ರೇರೆಪಿಸಿತು.

-ಅನೂಪ್ ದತ್ತಾ

(ಬರಹ ಕೃಪೆ: ದಿ ವೈರ್)


ಇದನ್ನೂ ಓದಿ; ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್‌ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...