Homeಕರ್ನಾಟಕಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

ಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

- Advertisement -
- Advertisement -

ಜೂನ್ 30ರಂದು ಅಬ್ದುಲ್ ಹಕೀಂ ಎಂಬ ಪತ್ರಕರ್ತರೊಬ್ಬರ ವಿರುದ್ಧ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ನೀಡಿದ ದೂರಿನ ಮೇರೆಗೆ ಐಪಿಸಿಯ ಕಾಯ್ದೆಯ 9 ಕಲಂಗಳಡಿ ಪ್ರಕರಣ ದಾಖಲಾಗಿದೆ. ಇಲ್ಲಿ ಹಕೀಂ ಅವರ ಮೇಲೆ ಇರುವ ಆಪಾದನೆ ಎಂದರೆ ಉತ್ತರಪ್ರದೇಶದ ಝಾನ್ಸಿ ಬುಂದೇಲಖಂಡ ವಿವಿಯ ಖೊಟ್ಟಿ ಪದವಿ ದಾಖಲೆ ಪತ್ರಗಳನ್ನು ಹಂಪಿ ವಿವಿಗೆ ಸಲ್ಲಿಸಿ ‘ಅಭಿವೃದ್ಧಿ ಅಧ್ಯಯನ’ದಲ್ಲಿ ಪಿಎಚ್‍ಡಿ ಪಡೆದುಕೊಂಡಿದ್ದಾರೆ ಅನ್ನೋದು. ಈ ಆರೋಪದ ಮೇಲೆ ವಿವಿ ಅವರ ಪದವಿ ಮತ್ತು ಡಾಕ್ಟರೇಟ್‍ಗಳನ್ನು ರದ್ದು ಮಾಡಿದೆ.

ಹಕೀಂ ವಾದವೇನು?

ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅಬ್ದುಲ್ ಹಕೀಂ ವಿವಿಯ ಅಧಿಕಾರಿಗಳ ವಿರುದ್ಧ ಕಾನೂನು ಸಮರಕ್ಕೆ ಸಿದ್ದ ಎಂದು ಸಾರಿದ್ದಾರೆ. ತಾವು ಕುವೆಂಪು ವಿವಿಯಿಂದ ಎಂಎ ಪದವಿ ಪಡೆದಿರುವೆ ಎಂದು ‘ದಾಖಲೆಗಳನ್ನು’ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ಆದರೆ ಈಗ ಎದ್ದಿರುವ ಪ್ರಶ್ನೆ ಎಂದರೆ, ಇಲ್ಲಿ ಅವರು ಕುವೆಂಪು ವಿವಿಯನ್ನೂ ಯಾಮಾರಿಸಿ ಎಂ.ಎ ಪದವಿ ಪಡೆದಿದ್ದಾರಾ ಎಂಬುದು. ಏಕೆಂದರೆ ಹಂಪಿ ವಿವಿ ದೂರು ಕೊಟ್ಟಿರೋದು ಅವರ ಎಂಎ ಪ್ರಮಾಣಪತ್ರದ ಬಗ್ಗೆಯಲ್ಲ, ಪದವಿ ಪ್ರಮಾಣಪತ್ರದ ಬಗ್ಗೆ. ಅದು ಯಾವ ಯುನಿವರ್ಸಿಟಿಯ ಯಾವ ಕಾಲೇಜಿನ ಪದವಿ ಪ್ರಮಾಣ ಪತ್ರ ಎಂಬುದರ ಬಗ್ಗೆ ಈ ಪ್ರಕರಣದಲ್ಲಿ ಸ್ಪಷ್ಟವೇ ಆಗಿಲ್ಲ. ಅದನ್ನು ಹಕೀಂ ಸಾಹೇಬರೂ ಸ್ಪಷ್ಟಗೊಳಿಸಿಲ್ಲ.

ಜನಸಾಮಾನ್ಯರ ಪ್ರಶ್ನೆಗಳಿಷ್ಟೇ

ಹಕೀಂ ಪ್ರಕಾರ, ಅವರು ಬೆಂಗಳೂರು ವಿವಿಯ ಕಾನೂನು ಪದವಿ ಮತ್ತು ಕುವೆಂಪು ವಿವಿಯ ರಾಜ್ಯಶಾಸ್ತ್ರ ಎಂಎ ಪದವಿ ಆಧಾರದ ಮೇಲೆ ಹಂಪಿ ವಿವಿಗೆ ಪಿಎಚ್ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅವರನ್ನು ಕಂಡರಾಗದ ಹಂಪಿ ವಿವಿಯ ಸೋಮನಾಥ್ ಎಂಬ ಅಧಿಕಾರಿ, ಹಕೀಂ ಅವರ ‘ಒರಿಜಿನಲ್’ ಪ್ರಮಾಣ ಪತ್ರಗಳನ್ನು ತೆಗೆದು ಹಾಕಿ, ಅಲ್ಲಿ ಬುಂದೇಲಖಂಡ ವಿವಿಯ ಫೇಕ್ ಡಿಗ್ರಿ ಸರ್ಟಿಫಿಕೇಟುಗಳನ್ನು ತುರುಕಿದ್ದಾರಂತೆ. ಓಕೆ, ಅವರು ಕೊಟ್ಟ ಡಿಗ್ರಿ ಸರ್ಟಿಫಿಕೇಟುಗಳನ್ನು ಬದಲಿಸಿ, ಫೇಕ್ ಡಿಗ್ರಿಗಳನ್ನು ಲಗತ್ತಿಸಿರುವ ಸಾಧ್ಯತೆಯನ್ನೂ ಒಪ್ಪಿಕೊಳ್ಳೋಣ. ಆದ್ರೆ, ಹಕೀಂ ಸ್ವತಃ ತಮ್ಮ ಕೈರಬಹದಲ್ಲಿ ಬರೆದ ಪಿ.ಎಚ್‍ಡಿ ಅರ್ಜಿಯಲ್ಲಿ ಪದವಿಯನ್ನು ಬಂದೇಲ್‍ಖಂಡ್ ವಿವಿಯಿಂದಲೇ ಪಡೆದಿರುವುದಾಗಿ ಬರೆದುಕೊಟ್ಟಿದ್ದಾರೆ! ಇದರ ಬಗ್ಗೆ ಅವರ ಯಾವ ಸ್ಪಷ್ಟಣೆಯನ್ನೂ ಕೊಟ್ಟಿಲ್ಲ.
ಹಕೀಂರನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿರೋ ಸಂಗತಿ ಅಂದ್ರೆ, ಆ ಪಿ.ಎಚ್ಡಿ ಪಡೆಯುವಾಗ ಅವರು ಅದೇ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದರು. ಸಹಜವಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂಥಾ ಯಡವಟ್ಟು ಮಾಡಿಕೊಂಡರಾ ಅನ್ನಿಸದಿರದು.

ಇನ್ನೊಂದು ವಿಚಿತ್ರ ಎಂದರೆ ಹಂಪಿ ವಿವಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆದಾಗ, ಬುಂದೇಲಖಂಡ ವಿವಿಯ ಅಧಿಕಾರಿಗಳು ಈ ಹೆಸರಿನ ಕರ್ನಾಟಕದ ಯಾವ ವ್ಯಕ್ತಿಯೂ ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂದು ಅಧಿಕೃತ ದಾಖಲೆ ನೀಡಿದ್ದಾರೆ. ನಿಜ, ಅಲ್ಲಿ ಹಕೀಂ ಓದಿಯೇ ಇಲ್ಲ. ಕುಚೋದ್ಯವೆಂದರೆ ಹಕೀಂ ಕೂಡಾ ಅದನ್ನೇ ಹೇಳುತ್ತಿದ್ದಾರೆ…

ಹಂಪಿ ವಿವಿಯ ದೂರು ಏನು?

ಜೂನ್ 28ರಂದು ಹಂಪಿ ವಿವಿ ಕುಲಸಚಿವ ಕಮಲಾಪುರದ ಠಾಣೆಯಲ್ಲಿ ದೂರು ದಾಖಲಿಸಿ, ಹಂಪಿ ವಿವಿಯಲ್ಲಿ ಪಿಎಚ್‍ಡಿ ಪಡೆಯಲು ಅಬ್ದುಲ್ ಹಕೀಂ ಅವರು ಖೊಟ್ಟಿ ಪದವಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಆಪಾದಿಸುತ್ತಾರೆ.

ಹಕೀಂ ಅವರು ಉತ್ತರಪ್ರದೇಶದ ಝಾನ್ಸಿಯ ಬುಂದೇಲಖಂಡ್ ವಿವಿಯ ಪದವಿಯ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ 2012-13ರಲ್ಲಿ ಎಂಎ ಪತ್ರಿಕೋದ್ಯಮ (ದೂರಶಿಕ್ಷಣ) ಪದವಿಯನ್ನು ಮತ್ತು 2014-15ರಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಪಿಎಚ್‍ಡಿ ಪದವಿ ಪಡೆದಿರುವುದು ದೂರಿನಲ್ಲಿ ದಾಖಲಾಗಿದೆ. ಹಕೀಂ ಅವರ ಇತಿಹಾಸವನ್ನು ನೋಡಿದರೆ ಇದರಲ್ಲೇನೂ ಆಶ್ಚರ್ಯ ಎನಿಸದು. ಅವರು ಹಂಪಿ ವಿವಿಯ ಕೆಲವು ಅಧಿಕಾರಿಗಳನ್ನು ಬೆದರಿಸಿಯೂ ತಮ್ಮ ಕೆಲಸ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆಯೂ ಕೇಳಿಬಂದಿದ್ದವು.
ನನಗೆ ನೌಕರಿ ಮಾಡಲು ಈ ಪದವಿ, ಪಿಎಚ್‍ಡಿ ಅಗತ್ಯವಿಲ್ಲ, ನನ್ನ ಗೌರವಕ್ಕೆ ಧಕ್ಕೆ ತರುವ ಈ ಕೆಲಸವನ್ನು ನಾನು ಸಹಿಸಲಾರೆ ಎಂದು ಅವರು ಅಬ್ಬರಿಸಿದ್ದಾರೆ. ಈ ಹಿಂದೆಯೇ ಅವರ ಈ ಪಿಎಚ್‍ಡಿ ವಿರುದ್ಧ ದಾಖಲೆ ಸಹಿತ ಪತ್ರಕರ್ತರೊಬ್ಬರು ವರದಿ ಮಾಡಿದ್ದರೂ ಆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಹಾಶಯರು ಅದನ್ನು ಪ್ರಕಟಿಸಲಿಲ್ಲ ಮಾತ್ರವಲ್ಲ. ಇಂಥದ್ದೇನಲ್ಲ ಬರೆಯಕೂಡದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂದು ಆ ಪತ್ರಕರ್ತರು ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗವಾಗೇ ಬರೆದುಕೊಂಡಿದ್ದಾರೆ. ಹೀಗೆ ವಾರ್ನಿಂಗ್ ಕೊಟ್ಟ ಕಾರ್ಯ ನಿರ್ವಾಹಕ ಸಂಪಾದಕರಿಗೆ ಹಕೀಂ ಜೊತೆಗಿದ್ದ ಗಳಸ್ಯ ಕಂಠಸ್ಯ ಗೆಳೆತನವೇ ವರದಿಯನ್ನು ತಡೆಹಿಡಿಯುವಂತೆ ಮಾಡಿದ್ದಿರಲೂಬಹುದು.

ಹುಬ್ಬಳ್ಳಿಯ ‘ಪ್ರಪಂಚ’ 2 ‘ಹೊಡಿ ಒಂಭತ್’ ಟಿವಿವರೆಗೆ!

ಈಗ ‘ಹಕೀಕತ್ತಿನ’ ಕ್ಲೈಮಾಕ್ಸಿನಲ್ಲಿ ಕೆಲವು ರೋಚಕ ಆದರೆ ಪುಟ್ಟಾಪೂರಾ ಸತ್ಯಗಳನ್ನು ನಿಮ್ಮ ಮುಂದೆ ಇಡಲೇಬೇಕು. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯಲ್ಲಿ ಹಕೀಂ ಒಂದರ್ಥದಲ್ಲಿ ಸೆಕೆಂಡ್ ಸಂಪಾದಕರೇ ಆಗಿದ್ದ ಕಾಲವೂ ಇತ್ತು. ಬೆಂಗಳೂರಲ್ಲಿ ಕೂತು ಅವರು ಹುಬ್ಬಳ್ಳಿಯ ‘ಪ್ರಪಂಚ’ಕ್ಕೆ ಪಿಚ್ಚರ್ ವರದಿ ಕೊಡ್ತಾ ಇದ್ದರು. ಮುಂದೆ ಪಾಪು ಅವರ ಟೈಟಲ್ ಪಡೆದು ಅದನ್ನು ಸಿನಿಮಾ ಪತ್ರಿಕೆ ಮಾಡಿದರು, ನಂತರ ಕ್ರೀಡಾ ಪತ್ರಿಕೆ ಮಾಡಿದರು, ಫೈನಲಿ ಅದನ್ನು ಸ್ಪರ್ಧಾ ಪತ್ರಿಕೆಯನ್ನೂ ಮಾಡಿಬಿಟ್ಟರು. ಅದನ್ನು ಎಷ್ಟು ಜನ ಓದಿದರೋ ಗೊತ್ತಿಲ್ಲ, ಆದರೆ ಹಕೀಂ ಮಾತ್ರ ‘ಭವ್ಯ’ ಪತ್ರಕರ್ತರಾದರು.

ಹಂಪಿ ವಿವಿಯ ಪಿಎಚ್‍ಡಿ ಪದವಿ ಪಡೆದು ಅವರು ‘ಹೊಡಿ ಒಂಭತ್’ ಚಾನೆಲ್ ಸೇರಿದರು. ಅಲ್ಲಿ ಅವರ ಪೋಸ್ಟ್ ಏನೆಂಬುದು ನಿಗೂಢವಾಗಿದೆಯಾದರು ಹೊಡಿ ಒಂಭತ್ ಗ್ಯಾಂಗಿಗೆ ಇಂತಹ ಸಕಲಕಲಾವಲ್ಲಭರ ಅಗತ್ಯವಂತೂ ಇದ್ದೇ ಇದೆ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...