Homeಕರ್ನಾಟಕಕಾರಾಗೃಹವಾಗುತ್ತಿರುವ ಕಾರ್ಖಾನೆಗಳು: ಹಾಸನದಲ್ಲೊಂದು ಅಮಾನುಷ ಜೀತದ ಘಟನೆ

ಕಾರಾಗೃಹವಾಗುತ್ತಿರುವ ಕಾರ್ಖಾನೆಗಳು: ಹಾಸನದಲ್ಲೊಂದು ಅಮಾನುಷ ಜೀತದ ಘಟನೆ

ಈ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಸ್ಥೀತಿ ತೀರಾ ಶೋಚನೀಯವಾಗಿದೆ. ಜೀತಪದ್ದತಿಯ ಮತ್ತೊಂದು ಉದಾಹರಣೆ ಇಲ್ಲಿದೆ.

- Advertisement -
- Advertisement -

ಬುಧವಾರ ಬೆಳಿಗ್ಗೆ ಹಾಸನದ ಹಿಮಂತ್ ಸ್ಟಿಂಗ್ಕಾ ಲೈನ್ಸ್ ಗಾರ್ಮೆಂಟ್ ನಲ್ಲಿ ಬಿಹಾರ ಮೂಲದ ಕಾರ್ಮಿಕರಿಂದ ಗೂಂಡಾಗಿರಿ, ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ, 7 ಪೊಲೀಸರಿಗೆ ಗಾಯ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಚ್, ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು, ಹಲವು ಪ್ರತಿಭಟನಾಕಾರರ ಬಂಧನ ಎಂಬ ಸುದ್ದಿ ಬಂತು. ಹೊರಗಿನ ರಾಜ್ಯದವರ ಅನಿಯಂತ್ರಿತ ವಲಸೆಯೇ ಇದಕ್ಕೆ ಕಾರಣ, ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂಬ ಸಲಹೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದವು.

ಆನಂತರ ಆ ಘಟನೆ ಜರುಗಲು ಕಾರಣವೇನು? ಅವರೆಲ್ಲಾ ಏಕೆ ಹಾಗೆ ಮಾಡಿದರು ಎಂಬುದನ್ನು ಕೇಳಿದರೆ ಎಂತವರ ಮನಸ್ಸು ಮರಗಟ್ಟುತ್ತದೆ. ಅಷ್ಟೊಂದು ಕ್ರೂರ ಆಳ್ವಿಕೆಯಲ್ಲಿ ಇಲ್ಲಿ ಸಾವಿರಾರು ಕಾರ್ಮಿಕರು ಜೀತ ಮಾಡುತ್ತಿದ್ದಾರೆ. ಆ ಕಾರ್ಮಿಕರ ಮೇಲಿನ ಅನಿಯಂತ್ರಿತ ಹಿಂಸೆ ಮತ್ತು ಒತ್ತಡದ ಪರಿಣಾಮವಾಗಿ ಆ ಘಟನೆ ನಡೆದಿದೆ ಅಷ್ಟೇ. ಅದಕ್ಕೂ ಮೊದಲು ಆ ಗಾರ್ಮೆಂಟ್ ಕಂಪನಿಯಲ್ಲಿನ ಕಾರ್ಮಿಕರನ್ನು ಅದರಲ್ಲೂ ಮಹಿಳಾ ಕಾರ್ಮಿಕರನ್ನು ನಡೆಸಿಕೊಂಡ ರೀತಿ ತಿಳಿದರೆ ಅಯ್ಯೋ ಅನಿಸದೇ ಇರಲಾರದು.

ರಾಜ್ಯದ ಹಲವು ಭಾಗಗಳಲ್ಲಿ ಆರಂಭವಾದಂತೆ ಹಾಸನದಲ್ಲಿಯೂ ಎರಡು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಆರಂಭವಾದರು. ಸದ್ಯ ಅಲ್ಲಿ 4 ಸಾವಿರ ಜನ ದುಡಿಯುತ್ತಿದ್ದಾರೆ. ಸುಮಾರು ಅರ್ಧದಷ್ಟು ಜನರು ಉತ್ತರ ಭಾರತದಿಂದ ವಲಸೆ ಬಂದು ಈ ಫ್ಯಾಕ್ಟರಿ ಸೇರಿದ್ದಾರೆ. ಅವರಿಗೆ ಫ್ಯಾಕ್ಟರಿ ವತಿಯಿಂದಲೇ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.

ಆ ಹಾಸ್ಟೆಲ್ ಗಳ ಭಯಾನಕ ವ್ಯವಸ್ಥೇ ಬೆಚ್ಚಿ ಬೀಳುಸುತ್ತದೆ. ಗಾರ್ಮೆಂಟ್ ನಲ್ಲಿ 12 ಗಂಟೆ ದುಡಿಯಬೇಕು. ಅದು ಸಹ ನಿಂತುಕೊಂಡೆ. ಇಷ್ಟಕ್ಕೂ ಅವರಿಗೆ ಸಿಗುವ ಸಂಬಳ ಸರಾಸರಿ 8000 ಮಾತ್ರ. ಸುಮಾರು 700 ಜನರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಕೆಲಸ ಮುಗಿಸಿದ ಕೂಡಲೇ ಫ್ಯಾಕ್ಟರಿಯ ವಾಹನ ಬಂದು ಅವರನ್ನು ಹಾಸ್ಟೆಲ್ ಗಳಿಗೆ ಸಾಗಿಸಲಾಗುತ್ತದೆ. ಯಾರು ಕೂಡ ಹೊರಹೋಗುವಂತಿಲ್ಲ.

ಹಾಸ್ಟೆಲ್ ಗಳಲ್ಲಿಯೂ ಸಹ 24/7 ಅವಧಿಯು ಸಿಸಿಟಿವಿಗಳು ಆ ಕೆಲಸಗಾರರ ಮೇಲೆ ಕಣ್ಣಿಟ್ಟಿರುತ್ತವೆ. ಅವರ್ಯಾರು ಫೋನ್ ಕೂಡ ಬಳಸುವಂತಿಲ್ಲ. ವಾರಕ್ಕೊಮ್ಮೆ ಫ್ಯಾಕ್ಟರಿಯವರೇ ನೀಡುವ ಬೇಸಿಕ್ ಪೋನ ಮೂಲಕವೇ ತಮ್ಮ ಪೋಷಕರೊಡನೆ ಮಾತನಾಡಲು ಅವರಿಗೆ ಅವಕಾಶ..

ಇನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗಲೇ ಪ್ರತಿ ಹೆಣ್ಣು ಮಕ್ಕಳು ಸಹ ತಮ್ಮ ಕುಟುಂಬದವರ ಭಾವಚಿತ್ರ ನೀಡಿರಬೇಕು. ಒಂದು ವೇಳೆ ಯಾರಾದರೂ ಪೋಷಕರು ಇಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳನ್ನು ನೋಡಲು ಬಂದರೆ, ಅವರ ಭಾವಚಿತ್ರ ಇಲ್ಲಿ ಇದ್ದಲ್ಲಿ ಮಾತ್ರ ಅವರಿಗೆ ಅವಕಾಶ. ಇಲ್ಲಿನ ಮಹಿಳಾ ಕಾರ್ಮಿಕರು ಏನಾದರೂ ಕೊಂಡುಕೊಳ್ಳಲು ಪೇಟೆಗೆ ಹೋಗಲು ಸಹ ಸಾಧ್ಯವಿಲ್ಲ. ಯಾವಾಗಲಾದರೊಮ್ಮೆ ನಾಲ್ಕೈದು ಜನರೊಡನೆ ಮಾತ್ರ ಹೋಗಬಹದು.

ಹಾಸ್ಟೆಲ್ ನಲ್ಲಿ ಯಾವ ರೂಮಿಗೆ ಬಾಗಿಲುಗಳಿಲ್ಲ. ಕೇಳಿದರೆ ನಿಮ್ಮ ಸೆಫ್ಟಿಗಾಗಿ ಹೀಗೆ ಮಾಡಿದ್ದೇವೆ ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಕೊಠಡಿಗಳಲ್ಲಿ ಫ್ಯಾನ್ ಗಳಿಲ್ಲ. ಏಕೆಂದರೆ ಮತ್ತೆ ಅದೇ ಭದ್ರತೆಯ ಉತ್ತರ. ಇಲ್ಲಿರುವ ಯಾರಾದರೂ ಹೆಣ್ಣು ಮಕ್ಕಳು ಮದುವೆಯಾಗುತ್ತಾರೆಂದರೆ ಅವರು ಇಲ್ಲಿಂದ ಕೆಲಸ ಬಿಡಬೇಕು ಅಷ್ಟೇ. ನಂತರ ಅವರು ತಮ್ಮ ಹಣಕ್ಕಾಗಿ ಅಲೆದು ಅಲೆದು ಸುಸ್ತಾಗಿ ಅದರ ಆಸೆ ಕೈಬಿಡಬೇಕು ಅಷ್ಟೇ.

ನೀವು ನಂಬುತ್ತೀರೊ ಬಿಡುತ್ತಾರೆ ಇದಕ್ಕೆಲ್ಲಾ ಈ ಕುತಂತ್ರ ಕಂಪನಿಗಳು ಅವರ ಪೋಷಕರಿಂದ ಒಪ್ಪಿಗೆ ಪಡೆದಿರುತ್ತಾರೆ. ಏಕೆಂದರೆ ಅವರ ಪೋಷಕರ ಬಳಿ ನಿಮ್ಮ ಮಕ್ಕಳನ್ನು ದೂರದೂರಿಗೆ ಕೆಲಸಕ್ಕೆ ಕಳಿಸಿದಾಗ ಅವರ ಭದ್ರತೆ ಬಹಳ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರೀತಿ-ಮದುವೆ ಅಂತ ಯಾವುದೇ ಕೆಲಸಕ್ಕೆ ಕೈಹಾಕಬಾರದು, ಯಾರ ಜೊತೆಯೂ ಓಡಿ ಹೋಗಬಾರದು ನೋಡಿ ಅದಕ್ಕೆ ಈ ನಿಬಂಧನೆಗಳನ್ನು ಹಾಕಿದ್ದೇವೆ ಎಂದು ಹೇಳಿ ಪೋಷಕರನ್ನು ಈ ಟ್ರಾಪ್ ಗೆ ಬೀಳಿಸುತ್ತಿರುವುದು ದುರಂತವಾಗಿದೆ.

ಹಾಸ್ಟೆಲ್ ನಲ್ಲಾಗಲಿ, ಗಾರ್ಮೆಂಟ್ ಫ್ಯಾಕ್ಟರಿಯಲ್ಲಾಗಲಿ ಸ್ಮಾರ್ಟ್ ಫೋನ್ ಗಳನ್ನು ಬ್ಯಾನ್ ಮಾಡಲಾಗಿದೆ. ಏಕೆಂದರೆ ಅವು ತೊಂದರೆಗಳಿಗೆ ಆಹ್ವಾನ ನೀಡುವುದಲ್ಲದೇ, ಅಹಿತಕರ ಘಟನೆಗಳಿಗೆ ಕಾರಣವಾಗುತ್ತವೆ ಅಂತೆ..

ಇನ್ನು ಪುರುಷ ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅವರು ನತದೃಷ್ಟರೆ. ಯಾರಾದರೂ ಕೆಲಸದಲ್ಲಿ ಅಪ್ಪಿ ತಪ್ಪಿ ತಪ್ಪು ಮಾಡಿದರೆ ಅವರನ್ನು ಬೆಡ್ ರೂಂ ನಲ್ಲಿ ಕೂಡಿಹಾಕಿಕೊಂಡು ಮನಬಂದಂತೆ ಥಳಿಸಲಾಗುತ್ತದೆ. ಯಾರಾದರೂ ಹುಡುಗಿಯನ್ನೇನಾದರೂ ಮಾತಾಡಿಸಿದರೆ ಆತನಿಗೆ ಚೆನ್ನಾಗಿ ಥಳಿಸಲಾಗುತ್ತದೆ, ಆತನ ಉಗುರುಗಳನ್ನು ಕೀಳುವ ಮೂಲಕ ಚಿತ್ರಹಿಂಸೆ ನೀಡಲಾಗುತ್ತದೆ. ಆತ ಸುಲಭವಾಗಿ ಕೆಲಸ ಬಿಟ್ಟು ಸಹ ಹೋಗುವಂತಿಲ್ಲ. ಮರು ಮಾತಾಡದೇ ಕತ್ತೆ ದುಡಿದಂಗೆ ದುಡಿದರೆ ಮಾತ್ರ ಇಲ್ಲಿ ಬದುಕಲಿಕ್ಕೆ ಸಾಧ್ಯ.

ಎರಡು ಮೂರು ವಾರದ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲಕ ಯುವತಿಯೊಬ್ಬಳು ಫ್ಯಾಕ್ಟರಿಯೊಳಗೆ ಸತ್ತು ಹೋಗಿದ್ದಾಳೆ. ಆದರೆ ವಿಷಯ ಹೊರಗೆ ಬರದಂತೆ ಮುಚ್ಚಿ ಹಾಕಲಾಗಿದೆ. ಅದಾದ ನಂತರ ಸೋಮವಾರ ರಾತ್ರಿ ಅಲ್ಲಿ ಗಲಾಟೆಯಾಗಿದ್ದು ಐದಾರು ಜನ ಕಾರ್ಮಿಕರಿಗೆ ಥಳಿಸಲಾಗಿದೆ. ಅದರಲ್ಲಿ ಒಬ್ಬ ಕಾಣೆಯಾಗಿದ್ದು ಆತ ಕೂಡ ಸತ್ತುಹೋಗಿರಬೇಕೆಂಬ ಶಂಕೆಯಿದೆ. ಅದೇ ಕಾರಣಕ್ಕಾಗಿಯೇ ಅಲ್ಲಿನ ಕಾರ್ಮಿಕರು ಇಷ್ಟು ದಿನ ತಮ್ಮೊಳಗೆ ಅದುಮಿಟ್ಟುಕೊಂಡಿದ್ದ ಆಕ್ರೋಶ, ಸಿಟ್ಟು, ಹತಾಶೆಯನ್ನು ಪ್ರತಿಭಟನೆಯ ಮೂಲಕ ಹೊರಹಾಕಿದ್ದಾರೆ.

ಆದರೆ ಅವರ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಲು ಫ್ಯಾಕ್ಟರಿ ಅಧಿಕಾರಿಗಳು ಮುಂದಾಗಿದ್ದಾರೆ. ಸೆಕ್ಯುರಿಟಿಗಳು ಪ್ರತಿಭಟನಾಕಾರರ ಮೇಲೆ ಬೇಕಾಬಿಟ್ಟಿ ಥಳಿಸಿದ್ದಾರೆ. ಇದಕ್ಕೆ ಪೊಲೀಸರು ಜೊತೆಗೂಡಿದ್ದಾರೆ. ಇದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿದೆ. ನೋವುಂಡವರ ಮೇಲೆಯೇ ಮತ್ತಷ್ಟು ದೌರ್ಜನ್ಯದಿಂದ ಅವರು ತಿರುಗಿಬಿದ್ದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಆದರೆ ಬಡವರ ಸಿಟ್ಟು ದವಡೆಗೆ ಮೂಲ ಎಂಬಂತೆ ಆ ಕಾರ್ಮಿಕರನ್ನು ಬಗ್ಗುಬಡಿದು ಆ ಸೆರಮನೆಯಿಂದ ಪೊಲೀಸ್ ಸೆರೆಮನೆಗೆ ತಂದು ಬಿಡಲಾಗಿದೆ. ಮಾತ್ರವಲ್ಲ ಅವರದೇ ತಪ್ಪು ಎಂಬ ರೀತಿ ಬಿಂಬಸಲಾಗುತ್ತಿದೆ.

ಇದಕ್ಕೆಲ್ಲಾ ಕಾರಣ ಎಸ್.ಇ.ಜೆಡ್

ಈ ಗಾರ್ಮೆಂಟ್ ಕಾರ್ಖಾನೆ ವಿಶೇಷ ಆರ್ಥಿಕ ವಲಯ(ಸ್ಪೆಷಲ್ ಎಕಾನಾಮಿಕ್ ಜೋನ್) ವ್ಯಾಪ್ತಿಗೆ ಬರುತ್ತಿದೆ. ಅದರೊಳಗೆ ಪ್ರವೇಶಿಸಲು ಪೊಲೀಸರು ಸಹ ಹೆದರುತ್ತಾರೆ. ಅಂತಹ ಸ್ವಂತ ಕ್ರೂರ ಸಾಮ್ರಾಜ್ಯ ಅವರದು. ಇದು ಕೇವಲ ಹಾಸನ ಗಾರ್ಮೆಂಟ್ಸ್ ನ ಕಥೆಯಲ್ಲ, ಬದಲಿಗೆ ರಾಜ್ಯದ ನೂರಾರು ಫ್ಯಾಕ್ಟರಿಗಳು ಸಹ ಇದೇ ರೀತಿ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿವೆ. ಆದರೆ ಹಾಸನದಲ್ಲಿ ಈ ಕಾರ್ಖಾನೆಯ ದುರ್ವತನೆ ಮಾತ್ರ ಮಿತಿ ಮೀರಿದೆ

ಡಿ.ಕೆ ಹಿಮಂತ್ ಸ್ಟಿಂಗ್ಕಾ ಎನ್ನವ ಬಂಡವಾಳಶಾಹಿಯ ಕಾರ್ಖಾನೆಯಾದ ಇದು ಹಲವು ಕಡೆ ಬ್ರಾಂಚ್ ಗಳನ್ನು ಹೊಂದಿದೆ. ಶ್ರೀಕಾಂತ್ ಹಿಮಂತ್ ಸ್ಟಿಂಗ್ಕಾ ಇದರ ಸಿಇಓ. ತಮ್ಮ ಲಾಭದ ದುರಾಸೆಗಾಗಿ ಇಲ್ಲಿ ಕಾರ್ಖಾನೆ ಹಾಕಿರುವ ಇವರು ಕನಿಷ್ಠ ಕೂಲಿ ನೀಡಿ ಇಲ್ಲಿನ ಜನರಿಂದ ಜೀತ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿರುವ ಕಾರ್ಮಿಕರಿಗೆ ಯಾವ ಸ್ವಾತಂತ್ರ್ಯವೂ ಸಹ ಇಲ್ಲ. ಯಾವ ಕಾರ್ಮಿಕ ಕಾನೂನಗಳು ಇಲ್ಲಿ ಅನ್ವಯವಾಗುವುದಿಲ್ಲ. ಇಂತಹ ಕಿರಾತಕರು ಸೇರಿಯೇ ಇದ್ದಬದ್ದ ಕಾರ್ಮಿಕ ಕಾನೂನುಗಳನ್ನೆಲ್ಲಾ ಕಿತ್ತಾಕುವಂತೆ ಆಳುವವರಿಗೆ ಒತ್ತಾಯಿಸುತ್ತಿದ್ದಾರೆ. ಆಳುವವರು ಸಹ ಇಂಥವರ ತಾಳಕ್ಕೆ ಕುಣಿಯುತ್ತಿರುವುದರಿಂದಲೇ ಈ ದುಸ್ಥಿತಿ ಬಂದಿದೆ.

ಲಾಭ ಕೊಡದ ಕೃಷಿ, ಮಿತಿ ಮೀರಿದ ನಿರುದ್ಯೋಗವೂ ಇದಕ್ಕೆ ಕಾರಣ

ಇಂತಹ ಜೈಲಿನಂತಹ ವಾತವಾರಣದಲ್ಲಿ ಈ ಜೀತ ಮಾಡಲು ಆ ಕಾರ್ಮಿಕರು ಏಕೆ ಮುಂದಾಗುತ್ತಾರೆ? ಕೆಲಸ ಬಿಟ್ಟು ಬರಬಹುದಲ್ಲವೇ ಎಂದು ಹಲವರು ಕೇಳಬಹುದು. ಆದರೆ ಭಾರತದ ಬಡಜನರ ಬದುಕು ದಿನೇ ದಿನೇ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಎಷ್ಟೇ ಪರದಾಡಿ ಕೃಷಿ ಮಾಡಿದರು ಲಾಭವಿರಲಿ ಅಸಲೇ ಕೈಗತ್ತುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಇಂತಹ ಫ್ಯಾಕ್ಟರಿಗಳ ದಳ್ಳುರಿಗೆ ತಳ್ಳಲ್ಪಡುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ತಮ್ಮ ಕಸುವನ್ನೆಲ್ಲ ಬಸಿದು ದುಡಿಯುತ್ತಿದ್ದಾರೆ. ತಮ್ಮ ಜೀವಚೈತನ್ಯವನ್ನೇ ಹಿಂಡಿಕೊಳ್ಳುತ್ತಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಇಂತಹ ಉದ್ಯೋಗಗಳಿಗೆ ಭಾರೀ ಬೇಡಿಕೆ ಬಂದುಬಿಟ್ಟಿದೆ. ಏನು ಉದ್ಯೋಗ ಸಿಗದಿದ್ದಾಗ ಇಂತಹ ಕಾರ್ಖಾನೆಗಳಲ್ಲಿ ಜೀತ ಮಾಡುವುದು ಬಡವರಿಗೆ ಅನಿವಾರ್ಯವಾಗುತ್ತಿದೆ. ಗೇಟಿನ ಹೊರಗೆ ಕೆಲಸಕ್ಕಾಗಿ ಕಾಯುತ್ತಿರುವ ಸಂಖ್ಯೆ ಹೆಚ್ಚಿದಂತೆ ಒಳಗಿನವರ ಸಂಬಳ ಕಡಿಮೆಯಾಗುತ್ತದೆ ಮತ್ತು ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾಧನೀಯ.

ಸತ್ತು ಹೋದ ಕಾರ್ಮಿಕ ಇಲಾಖೆ

ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಗಮನಹರಿಸಿಲ್ಲ. ಏಕೆಂದರೆ ಅದು ಸತ್ತು ಹೋಗಿದೆ. ಹಾಸನದ ಈ ಘಟನೆಯಲ್ಲಿ ಹೆಣ್ಣು ಮಗಳೊಬ್ಬಳ ಅನುಮಾನಾಸ್ಪದ ಸಾವಿನ ಕುರಿತು ಕಾರ್ಮಿಕ ಇಲಾಖೆಯ ಮುಖ್ಯ ಅಧಿಕಾರಿಗಳ ಗಮನಕ್ಕೆ ವಾರದ ಮುಂಚೆಯೇ ತಂದರು ಅವರು ಕೈಚೆಲ್ಲಿ ಕುಳಿತಿದ್ದಾರೆ. ನಮಗೆ ಯಾರು ದೂರು ನೀಡುತ್ತಿಲ್ಲ ನಾವೇನು ಮಾಡುವುದು ಎನ್ನುವ ನೆಪ ಹೇಳುತ್ತಿದ್ದಾರೆ. ಹೋಗಿ ವಿಚಾರಿಸಿದೆವು ಎಲ್ಲಾ ಚೆನ್ನಾಗಿದೆ ಏನು ಸಮಸ್ಯೆಯಿಲ್ಲ ಎಂದು ಫ್ಯಾಕ್ಟರಿ ಪರ ಸರ್ಟಿಫಿಕೆಟ್ ಕೂಡ ನೀಡುತ್ತಾರೆ.

ಪೊಲೀಸರ ಕಣ್ಣಿಗೆ ಈ ಕಾರ್ಮಿಕರು ಉಗ್ರಗಾಮಿಗಳಂತೆ ಕಾಣುತ್ತಾರೆ. ಅದಕ್ಕಾಗಿಯೇ ಈ ಹಾಸನದ ಘಟನೆಗೆ ಮೇಲ್ನೋಟಕ್ಕೆ ಕಾರ್ಮಿಕರೇ ಕಾರಣ ಎಂದು ತೋರುತ್ತದೆ. ಮುಖ್ಯವಾಹಿನಿ ಮಾಧ್ಯಮವೂ ಸಹ ಸತ್ಯ ತಿಳಿಸುವುದಿಲ್ಲ. ಏಕೆಂದರೆ ಪೊಲೀಸರು, ಕಾರ್ಮಿಕ ಇಲಾಖೆಯವರು, ಆಳುವವರು ಇಂತಹ ಬಂಡವಾಳಶಾಹಿಗಳ ಋಣದಲ್ಲಿಯೇ ಬದುಕುತ್ತಿದ್ದಾರೆ. ಹಾಗಾಗಿ ಬಡ ಕಾರ್ಮಿಕರ ನೋವಿಗಿಂತ ತಮ್ಮ ಧಣಿಗಳ ಹಿತ ಅವರಿಗೆ ಮುಖ್ಯ.

ಇಂತಹ ಘೋರ ಸಂದರ್ಭದಲ್ಲಿ ಇದನ್ನು ದಿನ ನಡೆಯುವ ಒಂದು ಘಟನೆಯಾಗಿ ನೋಡಿ ಸುಮ್ಮನಿರವುದ? ಇಲ್ಲಾ ಇದರ ವಿರುದ್ಧ ಏನಾದರೂ ಮಾಡುವುದಾ? ನಮ್ಮ ಪಾತ್ರವೇನು ನೀವೇ ಹೇಳಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. This is real fact sir, I now but i am helpless
    Company ge ondhu Union madodu thumba mukya bekadre nammadu pakkada company precot meridian, namma union inda union madodakke support madthivi.

  2. Avarannu kole maadidru tappilla sir badavaru nemdiyag jeevana maadtare..Nam hassan police lancha tagondirodhu 100/200% Nija.Naanu a factory alle 1 year kelsa maadi sattu badhkidini….

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...