Homeಅಂಕಣಗಳುಮುತ್ತು-ಸುತ್ತು: ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡಿದ್ದೀರಾ?

ಮುತ್ತು-ಸುತ್ತು: ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡಿದ್ದೀರಾ?

- Advertisement -
- Advertisement -

’ಜೀವನದಾಗೆ ಒಮ್ಮೆ ನೋಡಿ ಜೋಗದ ಗುಂಡಿ’ ಅಂತ ಮೂಗೂರು ಮಲ್ಲಪ್ಪನವರು ಬರೆದ ಹಾಡನ್ನು ಅಣ್ಣಾವ್ರು ಜೀವನಚೈತ್ರ ಸಿನಿಮಾದಲ್ಲಿ ಹಾಡಿದ್ದು ಕೇಳಿ ಎಷ್ಟೋ ಜನ ಜೋಗ ಜಲಪಾತ ನೋಡಿರಬಹುದು. ಇನ್ನು ಕೆಲವರಿಗೆ ಬೆಂಗಳೂರಿನಿಂದ ದೂರವಿರುವ (400 ಕಿ.ಮೀ) ಜೋಗ ಜಲಪಾತವನ್ನು ಒಂದು ದಿನದಲ್ಲಿ ನೋಡಿಬರಲು ಆಗದೇ ಇರಬಹುದು. ಜೋಗ ನೋಡಿರುವವರು ಮತ್ತು ನೋಡದೇ ಇರುವವರು ಎಲ್ಲರೂ ನೋಡಲೇಬೇಕಾದ, ಬೆಂಗಳೂರಿನಿಂದ ಒಂದು ದಿನದಲ್ಲಿ ನೋಡಿ ಬರಬಹುದಾದ ಆಕರ್ಷಕ ಪ್ರೇಕ್ಷಣೀಯ ಸ್ಥಳವೆಂದರೆ ಗಗನಚುಕ್ಕಿ, ಭರಚುಕ್ಕಿ ಜಲಪಾತ.

ಬೆಂಗಳೂರಿನಿಂದ 130 ಕಿ.ಮೀ ದೂರವಿರುವ, ಮಂಡ್ಯ ಮತ್ತು ಚಾಮರಾಜನಗರ ಗಡಿಭಾಗ ಶಿವನಸಮುದ್ರ ಎಂಬ ಊರಿನಲ್ಲಿರುವ ಈ ಎರಡು ಜಲಪಾತಗಳು ಮನಸ್ಸಿಗೆ ಮುದ ನೀಡುವುದರಲ್ಲಿ ಸಂದೇಹವೇ ಇಲ್ಲ. ಬೆಂಗಳೂರಿನಿಂದ ಕನಕಪುರ ಮಳವಳ್ಳಿ ಅಥವಾ ರಾಮನಗರ-ಮದ್ದೂರು-ಮಳವಳ್ಳಿ ಮಾರ್ಗದಲ್ಲಿ ನಾವು ಶಿವನಸಮುದ್ರ ತಲುಪಬಹುದು. ಜೂನ್‌ನಿಂದ ಜನವರಿವರೆಗಿನ ಸಮಯವು ಈ ಪ್ರವಾಸಕ್ಕೆ ಸೂಕ್ತವಾಗಿದ್ದು ದಾರಿಯುದ್ದಕ್ಕೂ ಹಸಿರು ಮರಗಳು, ಬೆಟ್ಟಗಳು ಕಣ್ಮನ ಸೆಳೆಯುತ್ತವೆ.

ಕಾವೇರಿ ಮತ್ತು ಕಬಿನಿ ನದಿಗಳು ಒಟ್ಟಾಗಿ ಹರಿಯುವಾಗ ಎರಡು ಕವಲಾಗಿ ಹೊಡೆದು ಎತ್ತರದಿಂದ ಧುಮ್ಮಿಕ್ಕುವುದೇ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಾಗಿವೆ. ಗಗನಚುಕ್ಕಿ ಜಲಪಾತವು ಮಂಡ್ಯ ಜಿಲ್ಲೆಯ ಮಳವಳ್ಳಿ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಭರಚುಕ್ಕಿಯು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ.

ಐತಿಹಾಸಿಕ ಮಹತ್ವ

ಈ ಎರಡು ಜಲಪಾತಗಳನ್ನು ಶಿಂಷಾ ಜಲಪಾತ ಎಂತಲೂ ಕರೆಯುತ್ತಾರೆ. ಕಾರಣವೆಂದರೆ 1902ರಲ್ಲಿ ಇಲ್ಲಿ ಶಿಂಷಾ ಜಲವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಗಿತ್ತು. ಅಂದರೆ 120 ವರ್ಷದ ಹಿಂದೆಯೇ ಇಲ್ಲಿ ಜಲವಿದ್ಯುತ್ ಉತ್ಪಾದಿಸಿ ಕೋಲಾರ್ ಗೋಲ್ಡ್ ಫೀಲ್ಡ್‌ನಲ್ಲಿ (ಕೆಜಿಎಫ್ ಕೋಲಾರ) ಚಿನ್ನದ ಗಣಿಗಾರಿಕೆ ನಡೆಸಲು ಸರಬರಾಜು ಮಾಡಲಾಗುತ್ತಿತ್ತು. ಇದು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂದು ಪ್ರಸಿದ್ಧಿಯಾಗಿದೆ. ಹಾಗೆಯೇ ಶಿವನ ಸಮುದ್ರ ಊರಿನ ಪಕ್ಕ ಈ ಜಲಪಾತಗಳಿರುವುದಿಂದ ಶಿವನಸಮುದ್ರ ಜಲಪಾತ, ಬ್ಲಫ್ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತದೆ.

ಗಗನ ಚುಕ್ಕಿ

ಕಾವೇರಿ ಮತ್ತು ಕಬಿನಿ ನದಿಗಳು ಒಟ್ಟಾಗಿ ಧುಮ್ಮಿಕ್ಕುವುದೇ ಗಗನ ಚುಕ್ಕಿ ಜಲಪಾತ. ಈ ಜಲಪಾತವನ್ನು ನೋಡಲಿಕ್ಕಾಗಿಯೇ ದೂರದಿಂದ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಅಲ್ಲಿ ಸರ್ಕಾರದ ಮಯೂರ ಹೋಟೆಲ್ ಸಹ ಇದ್ದು ತಂಗಲು ಬಯಸುವವರಿಗೆ ಅವಕಾಶವಿದೆ. 75 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ನೋಡಲು ಸಾಕಷ್ಟು ಪ್ರವಾಸಿಗರು ನೆರೆಯುತ್ತಾರೆ. ಅಲ್ಲದೆ ಜಲಪಾತದ ಸಮೀಪದಲ್ಲಿಯೇ ಹಜರತ್ ಮರ್ದಾನ ಎ-ಫೈಬ್ ಎಂಬ ದರ್ಗಾ ಇದ್ದು ಅಲ್ಲಿಂದ ಬಹಳ ಹತ್ತಿರದಲ್ಲಿ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.

ಭರಚುಕ್ಕಿ

ಕಾವೇರಿ ನದಿಯ ಮತ್ತೊಂದು ಕವಲು ಭರಚುಕ್ಕಿಯಾಗಿ ಧುಮ್ಮಿಕ್ಕುತ್ತದೆ. ಐದಾರು ಕಡೆ ಹಾಲುನೊರೆಯಂತೆ ಉಕ್ಕುವ ನೀರು ದೊಡ್ಡ ಸದ್ದು ಮಾಡುತ್ತದೆ. ಪೂರ್ತಿ ತಳದವರೆಗೂ ಹೋಗಲು ಮೆಟ್ಟಿಲುಗಳಿದ್ದು, ಈ ಮುಂಚೆ ನೀರು ಬೀಳವವರೆಗೂ ಹೋಗಿ ಮೈಯೊಡ್ಡಬಹುದಿತ್ತು. ಆದರೆ ನೀರಿನ ರಭಸ ಹೆಚ್ಚಾದಂತೆ ಈಗ ಕೆಳಗಿಳಿಯಲು ಅವಕಾಶವಿಲ್ಲ. ಮೇಲಿಂದಲೇ ನೋಡಲು ವೀಕ್ಷಣಾ ಗೋಪುರಗಳಿದ್ದು ಅಲ್ಲಿಂದಲೆ ಜಲಪಾತದ ಸೌಂದರ್ಯ ಸವಿಯಬಹುದು.

ಗಗನಚುಕ್ಕಿ, ಭರಚುಕ್ಕಿ ಜಲಪಾತೋತ್ಸವ

ಈ ಜಲಪಾತಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ಸರ್ಕಾರವು ಇಲ್ಲಿ ಪ್ರತಿವರ್ಷ ’ಗಗನಚುಕ್ಕಿ, ಭರಚುಕ್ಕಿ ಜಲಪಾತೋತ್ಸವ’ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತದೆ. ಖ್ಯಾತ ಚಲನಚಿತ್ರ ನಟ-ನಟಿಯರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುತ್ತಿತ್ತು. ಆದರೆ ಕಳೆದ ವರ್ಷದ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. 2021ರ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ನಡೆಸುವ ನಿರೀಕ್ಷೆಯಿದೆ.

ಪ್ಲಾಸ್ಟಿಕ್ ಮುಕ್ತ ವಲಯ

ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ವಲಯಗಳಾಗಿ ಘೋಷಿಸಲಾಗಿದೆ. ಹಾಗಾಗಿ ರಸ್ತೆಗಳು ಮತ್ತು ಅಲ್ಲಿನ ಪ್ರವಾಸಿತಾಣಗಳು ಸುಂದರವಾಗಿಯೂ, ಸ್ವಚ್ಛವಾಗಿಯೂ ಕಂಗೊಳಿಸುತ್ತಿವೆ. ಕುಟುಂಬಸಮೇತ ಯಾವುದೇ ಕುಂದುಕೊರತೆಗಳಿಲ್ಲದೆ ಪ್ರವಾಸ ಮಾಡಬಹುದಾದ ಸ್ಥಳ ಇದಾಗಿದೆ. ಇಲ್ಲಿ ಮೀನು ಮತ್ತು ಫಾಸ್ಟ್‌ಫುಡ್ ಮಾತ್ರ ದೊರೆಯುತ್ತಿದ್ದು, ಹತ್ತಿರದಲ್ಲಿ ಹೇಳಿಕೊಳ್ಳುವ ಉತ್ತಮ ಹೋಟೆಲ್‌ಗಳಿಲ್ಲ. ಮನೆಯಿಂದಲೇ ಅಡುಗೆ ಮಾಡಿ ಒಯ್ದರೆ ಜಲಪಾತ ನೋಡುತ್ತಾ ಊಟ ಮಾಡಬಹುದು.

ದೋಣಿವಿಹಾರ

ನಾವು ಶಿವನಸಮುದ್ರ ಗ್ರಾಮ ತಲುಪುವ ಮೊದಲೇ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ವಿಸ್ತಾರ ನದಿ ಕಾಣಬಹುದು. ಅಲ್ಲಿ ಮೀನುಗಾರರು ದೋಣಿ ನಡೆಸುತ್ತಾರೆ. ನೀರಿನ ಹರಿವು ಕಡಿಮೆ ಇದ್ದಾಗ ಆಸಕ್ತರು ತೆಪ್ಪದಲ್ಲಿ ವಿಹಾರ ನಡೆಸಬಹುದು. ಮಕ್ಕಳಂತೂ ಇದನ್ನು ತುಂಬಾ ಖುಷಿಪಟ್ಟು ಸಂಭ್ರಮಿಸುತ್ತಾರೆ.

ಹತ್ತಿರದ ಇತರ ಸ್ಥಳಗಳು

ಶಿವನ ಸಮುದ್ರದ ಅನತಿ ದೂರದಲ್ಲಿಯೇ ತಲಕಾಡು ಇದೆ. ಅಲ್ಲಿನ ಹೊಳೆಯಲ್ಲಿ ಈಜಾಡಬಹುದು. ಇನ್ನೂ ಮುಂದೆ ಹೋದರೆ ಸೋಮನಾಥಪುರ ದೇವಾಲಯ ನೋಡಬಹುದು. ಇನ್ನು ಬೆಂಗಳೂರಿನತ್ತ ಕನಕಪುರ ಮಾರ್ಗದಲ್ಲಿ ವಾಪಸ್ ಬರುವಾಗ ಸಂಗಮ, ತಲಕಾಡು, ಚುಂಚಿ ಫಾಲ್ಸ್, ಟಿಕೆ ಫಾಲ್ಸ್ ನೋಡಬಹುದು.

ಬಸ್ ವ್ಯವಸ್ಥೆ

ಸಮಯದ ದೃಷ್ಟಿಯಿಂದ ಸ್ವಂತ ವಾಹನದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದು. ಇಲ್ಲದಿದ್ದಲ್ಲಿ ಬೆಂಗಳೂರಿನಿಂದ ಮಳವಳ್ಳಿಗೆ ಬಸ್ ಹಿಡಿಯಬೇಕು ಮತ್ತು ಅಲ್ಲಿಂದ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ಗೆ ಬಸ್ ವ್ಯವಸ್ಥೆ ಇದೆ. ಅಲ್ಲಿಂದ ಆಟೊದಲ್ಲಿ ಪ್ರಯಾಣಿಸಬೇಕು.


ಇದನ್ನೂ ಓದಿ: ಮುತ್ತು-ಸುತ್ತು: ಕುಂತಿ ಬೆಟ್ಟ ಹತ್ತಿ ನೋಡಿ, ತೊಣ್ಣೂರು ಕೆರೆಯಲ್ಲಿ ಈಜಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಬಿನಿ,ಕಾವೇರಿ ಹೊಳೆಗಳು ಗಗನಚುಕ್ಕಿ,ಬರಚುಕ್ಕಿ ಗಳಿಂದ ಮೊದಲು ಸುಮಾರು ೨೦ ಕಿಮೀ ದೂರದ ತಿರುಮಕೂಡಲು ನರಸಿಪುರದಿಂದ ಸೇರುತ್ತವೆ.
    ತರುವಾಯ ಒಂದಾಗಿ ಹರಿಯುವ ಹೊಳೆ ಸತ್ತೇಗಾಲದ ತರುವಾಯ ಎರಡಾಗಿ ಈ ಎರಡು ಅಬ್ಬಿಗಳುಂಟಾಗುತ್ತವೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...