Homeಮುಖಪುಟರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

- Advertisement -
- Advertisement -

ಪ್ರಸ್ತುತ ಪ್ರಜಾಸತ್ತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಪ್ರಭುತ್ವದ ಆಚರಣೆಗಳು ಬ್ರಾಹ್ಮಣಶಾಹಿಯ ದಿಗ್ವಿಜಯದಂತಿವೆ. ಪ್ರಧಾನಿ ನರೇಂದ್ರ ಮೋದಿಯವರು ಬ್ರಾಹ್ಮಣ ಪುರೋಹಿತರ ದಂಡಿನೊಂದಿಗೆ ದಕ್ಷಿಣದ ಚೋಳ ರಾಜರ ಕಾಲದ್ದೆಂಬ ರಾಜದಂಡ “ಸೆಂಗೋಲ್”ಅನ್ನು ಸಂಸತ್ ಭವನದಲ್ಲಿ ಯಜ್ಞದೀಕ್ಷಿತರಾಗಿ ಪ್ರತಿಷ್ಠಾಪಿಸಿದರು-ರಾಜನ ಪಟ್ಟಾಭಿಷೇಕದಂತೆ.

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಶಿಷ್ಟಾಚಾರ’ ಕಾರಣದಿಂದ ಆಹ್ವಾನಿಸಿರಲಿಲ್ಲ. ಆದರೆ, ಆ ಶಿಷ್ಟಾಚಾರ ಏನೆಂದು ತಿಳಿದುಬರುವುದಿಲ್ಲ. ಮೊದಲಿಗೆ, ಮುರ್ಮು ಅವರು ಒಬ್ಬ ವಿಧವೆ, ಅದೂ ಬುಡಕಟ್ಟು (ಎಸ್.ಟಿ) ಮಹಿಳೆ. ಆದ್ದರಿಂದ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರೆ ಅದರ ಪಾವಿತ್ರ್ಯತೆಗೆ ಭಂಗ ಬರುತ್ತದೆ ಎಂಬ ಸನಾತನ ’ಶಿಷ್ಟತೆ’ಗಳು ಕಾರಣವಾದವೇ? ಅಥವಾ ’ಸೆಂಗೋಲ್’ ಎಂಬ ರಾಜದಂಡವನ್ನು ಪುರುಷನು ಮಾತ್ರ ಸ್ವೀಕರಿಸಲರ್ಹ ಎಂಬ ರಾಜಪ್ರಭುತ್ವದ ಸಂಪ್ರದಾಯವೋ?- ಈ ಚರ್ಚೆಗಳು ಜಾರಿಯಲ್ಲಿವೆ. ಒಟ್ಟಾರೆ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಸ್ತ್ರೀ ಸಂಕುಲವನ್ನೇ ಅವಮಾನಿಸಲಾಯಿತು. ಇದು ಪ್ರಜಾತಂತ್ರದಲ್ಲಿ ದೇಶದ ಪ್ರಥಮ ಮಹಿಳೆಗೆ ನಾವು ತೋರಿದ ಅಕ್ಷಮ್ಯ ಅಪರಾಧ!

ಎರಡನೆಯದಾಗಿ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ವಿರುದ್ಧ ಕಳೆದೊಂದು ತಿಂಗಳಿನಿಂದ ಜಂತರ್‌ಮಂತರ್‌ನಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಧರಣಿ ಸತ್ಯಾಗ್ರಹ ಹಿಡಿದಿದ್ದಾರೆ. ಅವರು ಇದೇ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದ ದಿನ ಇಂಡಿಯಾ ಗೇಟ್ ಬಳಿ ಧರಣಿ ಕೂರಲು ಹೊರಟರು. ಆದರೆ ಇದರಿಂದ ಶಾಂತಿ ಭಂಗವಾಗುತ್ತದೆಂದು ನೆಪವೊಡ್ಡಿ ಪೊಲೀಸರು ಅವರನ್ನು ಬಡಿದು ಎಳೆದು ಹಾಕಿದರು. ಆ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದುಬಂತು. ಅತ್ತ ಉದ್ಘಾಟನೆಯ ಮಂತ್ರಘೋಷ ದಿಗ್ಮಂಡಲ ತುಂಬಿದರೆ, ಇತ್ತ ಒಲಂಪಿಕ್ಸ್‌ನಲ್ಲಿ ಪದಕಗಳಿಸಿ ದೇಶದ ಕೀರ್ತಿಯನ್ನು ದಿಗಂತ ವಿಸ್ತಾರಗೊಳಿಸಿದ ಮಹಿಳಾ ಕುಸ್ತಿಪಟುಗಳ ಅಸಹಾಯಕ ಅರಣ್ಯ ರೋದನ. ಈ ಪ್ರಹಸನದ ಬಗ್ಗೆ ಪ್ರಧಾನಿ ಮೋದಿಯವರು ತುಟಿಬಿಚ್ಚುತ್ತಿಲ್ಲ; ಗುಟ್ಟು ಏನೆಂದು ತಿಳಿಯುತ್ತಿಲ್ಲ. ನಮ್ಮ ರಾಷ್ಟ್ರಪತಿಗಳಾದರೂ ಮೌನ ಮುರಿಯುತ್ತಿಲ್ಲ. ಏಕೆ? ಕಾರಣ ತಿಳಿಯುತ್ತಿಲ್ಲ!

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈ ದೇಶದಲ್ಲಿ ಮಹಿಳೆಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಹೆಣ್ಣು ಏನಿದ್ದರೂ ಗೃಹಸ್ವಾಮಿನಿ ಮಾತ್ರ ಎನ್ನುತ್ತದೆ ಮನುಧರ್ಮ ಶಾಸ್ತ್ರ. ಈ ಎಲ್ಲ ಬೆಳವಣಿಗೆಯನ್ನು ಮನಗಂಡು ನಮ್ಮ ರಾಷ್ಟ್ರಪತಿಯವರು ಸರ್ಕಾರಕ್ಕೆ ಸ್ಪಷ್ಟೀಕರಣ ಕೋರಿ ಒಂದು ದಿಟ್ಟ ಕ್ರಮಕ್ಕಾದರೂ ಮುಂದಾಗಬಹುದೇ?. ಹಾಗೆ ಮಾಡಬೇಕೆಂಬುದು ಪ್ರಜಾತಂತ್ರವಾದಿಗಳ ಅದಮ್ಯ ಅಪೇಕ್ಷೆ! ಇದು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಮಾಡಬಹುದಾಗಿದ್ದರೆ, ಅಧಿಕಾರದಾಚೆಗೂ ಪ್ರತಿಭಟಿಸುವ ಅವಕಾಶ ಅವರಿಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಕೆನೆಯಂತಿರುವ ರಾಮಾಯಣದ ಹಾಗೂ ಶಾಕುಂತಲ ನಾಟಕದ ಸೀತಾ-ಶಕುಂತಲೆಯರ ಪಾತ್ರಗಳ ನಿರ್ಧಾರವನ್ನು ಇಲ್ಲಿ ಪ್ರಸ್ತಾಪಿಸಬಹುದು. ಈ ಇಬ್ಬರು ನಾಯಕಿಯರು ತಾವು ತೀವ್ರ ಅವಮಾನಿತರಾದಾಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಅನುಪಮ. ಮೊದಲಿಗೆ, ಲವ-ಕುಶರ ಕಾಳಗದ ನಂತರ ಪುರುಷೋತ್ತಮ ರಾಮನು ಸೀತೆಯನ್ನು ಸಂಧಿಸಿ ಅಯೋಧ್ಯೆಗೆ ಬರಲು ಆಹ್ವಾನಿಸುತ್ತಾನೆ. ಆದರೆ ಅಂದು ಪರಿತ್ಯಾಗಗೊಂಡ ಭೂಜಾತೆ ಸೀತೆ ತಣ್ಣಗೆ ರಾಜನ ಆಹ್ವಾನವನ್ನು ನಿರಾಕರಿಸಿ ವಾಲ್ಮೀಕಿ ಆಶ್ರಮದಲ್ಲೇ ಉಳಿಯುತ್ತಾಳೆ. ಇದು ಉತ್ತರ ರಾಮಾಯಣದ ಅಮೋಘ ದರ್ಶನ ಸಾರ.

ಇನ್ನು ಶಾಕುಂತಲ ನಾಟಕದಲ್ಲಿ ಬೇಟೆಗೆಂದು ಬಂದ ದುಷ್ಯಂತ ಕಣ್ವಾಶ್ರಮದಲ್ಲಿ ಮಗ ಭರತ ಹಾಗೂ ಅವನ ತಾಯಿ ಶಕುಂತಲೆಯನ್ನು ಕಂಡು ’ವಸಂತಕಾಲಕ್ಕೆ ಬಳ್ಳಿ ಹೂ ತಳೆಯುವಂತೆ ನೀನು ಈ ಅಭಿಜ್ಞಾನವನ್ನು ಪುನಃ ತೊಡು’ ಎಂದು ಗುರುತಿನ ಉಂಗುರವನ್ನು ನೀಡುತ್ತಾನೆ. ಆದರೆ ’ಸರಿಯಾದ ಸಮಯಕ್ಕೆ ಅದು ನನಗೆ ಕೈ ಕೊಟ್ಟಿತು, ಬೇಡ’ ಎಂದು ತಣ್ಣಗೆ ನಿರಾಕರಿಸುತ್ತಾಳೆ. ಮತ್ತು ಋಷ್ಯಾಶ್ರಮದಲ್ಲೇ ಉಳಿಯುತ್ತಾಳೆ ಶಕುಂತಲೆ. ಈ ಎರಡೂ ಜಾಗತಿಕ ಪ್ರತಿರೋಧಗಳು ಸ್ತ್ರೀ ಸಂವೇದನೆಯ ಸಂಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಂದರ್ಭಗಳಾಗಿವೆ.

ಅದಿರಲಿ, ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಸಂದರ್ಭದಲ್ಲಿ ವಿಚಾರ ಮಾಡಿದರೆ ಪುರುಷಪಾರಮ್ಯದ ನೀತಿಯನ್ನನುಸರಿಸುವ ಪ್ರಧಾನಿ ಮೋದಿಯವರ ನಡೆ ನೋಡಿದರೆ ಈ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬೀಗುತ್ತಿದೆಯೇ ಹೊರತು ವಾಸ್ತವವಾಗಿ ಮಹಿಳೆಯರಿಗೆ ನೀಡುವ ಘನತೆ ಗೌರವಗಳಿಗೆ ಲೋಪವೆಸಗುತ್ತಾ ಬರುತ್ತಿದೆ. ಆದ ಪ್ರಯುಕ್ತ ಈ ಸಂಘರ್ಷ ಸಮಯದಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ದೃಢನನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಭವನದಿಂದ ಹೊರಬರುವುದು ಪ್ರತಿಭಟನೆಯ ಸಂಕೇತವಾದೀತು. ಈ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವೆ? ಹಾಗೇನಾದರೂ ಅವರು ಮಾಡಿದರಾದರೆ ಇದೊಂದು ಅನನ್ಯ ಐತಿಹಾಸಿಕ ಘಟನೆಯಾಗುತ್ತದೆ. ಮುರ್ಮು ಅವರ ಹೆಸರು ಸೀತಾ-ಶಕುಂತಲೆಯರ ಸಾಲಿಗೆ ನಿಲ್ಲುತ್ತದೆ. ಮತ್ತು ಜಾಗತಿಕ ಸ್ತ್ರೀ ಸಂಕುಲದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುರ್ಮು ಅವರು ಬಡತನ ಸಿರಿತನಗಳನ್ನು ಕಂಡುಂಡು ಬಾಳಿ ಬದುಕಿದವರು. ಅವರಿಗೆ ರಾಷ್ಟ್ರಪತಿ ಭವನವನ್ನು ತೊರೆದು ಬರಲು ಅಂಥ ಮೋಹವೇನೂ ಇರಲಾರದು. ಹೇಗೂ ಐದು ವರ್ಷದ ತರುವಾಯ ತೆರವುಗೊಳಿಸಲೇಬೇಕಲ್ಲಾ! ’ನಾಳೆ ಬಪ್ಪುದು ಇಂದೇ ಬರಲಿ’ ಎಂದು ಹೊರಬಂದರೆ ಅದೊಂದು ಅಮೃತ ಮುಹೂರ್ತ! ಅದು ಎಷ್ಟೋ ದಮನಿತ ಮಹಿಳೆಯರಿಗೆ ಸ್ಪೂರ್ತಿದಾಯಕವೂ ಆದೀತು ಮತ್ತು ಅವರ ಹೆಸರು ಹಿಮಾಲಯದೆತ್ತರಕ್ಕೆ ಏರುತ್ತದೆ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...