Homeಮುಖಪುಟರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

- Advertisement -
- Advertisement -

ಪ್ರಸ್ತುತ ಪ್ರಜಾಸತ್ತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಪ್ರಭುತ್ವದ ಆಚರಣೆಗಳು ಬ್ರಾಹ್ಮಣಶಾಹಿಯ ದಿಗ್ವಿಜಯದಂತಿವೆ. ಪ್ರಧಾನಿ ನರೇಂದ್ರ ಮೋದಿಯವರು ಬ್ರಾಹ್ಮಣ ಪುರೋಹಿತರ ದಂಡಿನೊಂದಿಗೆ ದಕ್ಷಿಣದ ಚೋಳ ರಾಜರ ಕಾಲದ್ದೆಂಬ ರಾಜದಂಡ “ಸೆಂಗೋಲ್”ಅನ್ನು ಸಂಸತ್ ಭವನದಲ್ಲಿ ಯಜ್ಞದೀಕ್ಷಿತರಾಗಿ ಪ್ರತಿಷ್ಠಾಪಿಸಿದರು-ರಾಜನ ಪಟ್ಟಾಭಿಷೇಕದಂತೆ.

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಶಿಷ್ಟಾಚಾರ’ ಕಾರಣದಿಂದ ಆಹ್ವಾನಿಸಿರಲಿಲ್ಲ. ಆದರೆ, ಆ ಶಿಷ್ಟಾಚಾರ ಏನೆಂದು ತಿಳಿದುಬರುವುದಿಲ್ಲ. ಮೊದಲಿಗೆ, ಮುರ್ಮು ಅವರು ಒಬ್ಬ ವಿಧವೆ, ಅದೂ ಬುಡಕಟ್ಟು (ಎಸ್.ಟಿ) ಮಹಿಳೆ. ಆದ್ದರಿಂದ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರೆ ಅದರ ಪಾವಿತ್ರ್ಯತೆಗೆ ಭಂಗ ಬರುತ್ತದೆ ಎಂಬ ಸನಾತನ ’ಶಿಷ್ಟತೆ’ಗಳು ಕಾರಣವಾದವೇ? ಅಥವಾ ’ಸೆಂಗೋಲ್’ ಎಂಬ ರಾಜದಂಡವನ್ನು ಪುರುಷನು ಮಾತ್ರ ಸ್ವೀಕರಿಸಲರ್ಹ ಎಂಬ ರಾಜಪ್ರಭುತ್ವದ ಸಂಪ್ರದಾಯವೋ?- ಈ ಚರ್ಚೆಗಳು ಜಾರಿಯಲ್ಲಿವೆ. ಒಟ್ಟಾರೆ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಸ್ತ್ರೀ ಸಂಕುಲವನ್ನೇ ಅವಮಾನಿಸಲಾಯಿತು. ಇದು ಪ್ರಜಾತಂತ್ರದಲ್ಲಿ ದೇಶದ ಪ್ರಥಮ ಮಹಿಳೆಗೆ ನಾವು ತೋರಿದ ಅಕ್ಷಮ್ಯ ಅಪರಾಧ!

ಎರಡನೆಯದಾಗಿ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ವಿರುದ್ಧ ಕಳೆದೊಂದು ತಿಂಗಳಿನಿಂದ ಜಂತರ್‌ಮಂತರ್‌ನಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಧರಣಿ ಸತ್ಯಾಗ್ರಹ ಹಿಡಿದಿದ್ದಾರೆ. ಅವರು ಇದೇ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದ ದಿನ ಇಂಡಿಯಾ ಗೇಟ್ ಬಳಿ ಧರಣಿ ಕೂರಲು ಹೊರಟರು. ಆದರೆ ಇದರಿಂದ ಶಾಂತಿ ಭಂಗವಾಗುತ್ತದೆಂದು ನೆಪವೊಡ್ಡಿ ಪೊಲೀಸರು ಅವರನ್ನು ಬಡಿದು ಎಳೆದು ಹಾಕಿದರು. ಆ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದುಬಂತು. ಅತ್ತ ಉದ್ಘಾಟನೆಯ ಮಂತ್ರಘೋಷ ದಿಗ್ಮಂಡಲ ತುಂಬಿದರೆ, ಇತ್ತ ಒಲಂಪಿಕ್ಸ್‌ನಲ್ಲಿ ಪದಕಗಳಿಸಿ ದೇಶದ ಕೀರ್ತಿಯನ್ನು ದಿಗಂತ ವಿಸ್ತಾರಗೊಳಿಸಿದ ಮಹಿಳಾ ಕುಸ್ತಿಪಟುಗಳ ಅಸಹಾಯಕ ಅರಣ್ಯ ರೋದನ. ಈ ಪ್ರಹಸನದ ಬಗ್ಗೆ ಪ್ರಧಾನಿ ಮೋದಿಯವರು ತುಟಿಬಿಚ್ಚುತ್ತಿಲ್ಲ; ಗುಟ್ಟು ಏನೆಂದು ತಿಳಿಯುತ್ತಿಲ್ಲ. ನಮ್ಮ ರಾಷ್ಟ್ರಪತಿಗಳಾದರೂ ಮೌನ ಮುರಿಯುತ್ತಿಲ್ಲ. ಏಕೆ? ಕಾರಣ ತಿಳಿಯುತ್ತಿಲ್ಲ!

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈ ದೇಶದಲ್ಲಿ ಮಹಿಳೆಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಹೆಣ್ಣು ಏನಿದ್ದರೂ ಗೃಹಸ್ವಾಮಿನಿ ಮಾತ್ರ ಎನ್ನುತ್ತದೆ ಮನುಧರ್ಮ ಶಾಸ್ತ್ರ. ಈ ಎಲ್ಲ ಬೆಳವಣಿಗೆಯನ್ನು ಮನಗಂಡು ನಮ್ಮ ರಾಷ್ಟ್ರಪತಿಯವರು ಸರ್ಕಾರಕ್ಕೆ ಸ್ಪಷ್ಟೀಕರಣ ಕೋರಿ ಒಂದು ದಿಟ್ಟ ಕ್ರಮಕ್ಕಾದರೂ ಮುಂದಾಗಬಹುದೇ?. ಹಾಗೆ ಮಾಡಬೇಕೆಂಬುದು ಪ್ರಜಾತಂತ್ರವಾದಿಗಳ ಅದಮ್ಯ ಅಪೇಕ್ಷೆ! ಇದು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಮಾಡಬಹುದಾಗಿದ್ದರೆ, ಅಧಿಕಾರದಾಚೆಗೂ ಪ್ರತಿಭಟಿಸುವ ಅವಕಾಶ ಅವರಿಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಕೆನೆಯಂತಿರುವ ರಾಮಾಯಣದ ಹಾಗೂ ಶಾಕುಂತಲ ನಾಟಕದ ಸೀತಾ-ಶಕುಂತಲೆಯರ ಪಾತ್ರಗಳ ನಿರ್ಧಾರವನ್ನು ಇಲ್ಲಿ ಪ್ರಸ್ತಾಪಿಸಬಹುದು. ಈ ಇಬ್ಬರು ನಾಯಕಿಯರು ತಾವು ತೀವ್ರ ಅವಮಾನಿತರಾದಾಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಅನುಪಮ. ಮೊದಲಿಗೆ, ಲವ-ಕುಶರ ಕಾಳಗದ ನಂತರ ಪುರುಷೋತ್ತಮ ರಾಮನು ಸೀತೆಯನ್ನು ಸಂಧಿಸಿ ಅಯೋಧ್ಯೆಗೆ ಬರಲು ಆಹ್ವಾನಿಸುತ್ತಾನೆ. ಆದರೆ ಅಂದು ಪರಿತ್ಯಾಗಗೊಂಡ ಭೂಜಾತೆ ಸೀತೆ ತಣ್ಣಗೆ ರಾಜನ ಆಹ್ವಾನವನ್ನು ನಿರಾಕರಿಸಿ ವಾಲ್ಮೀಕಿ ಆಶ್ರಮದಲ್ಲೇ ಉಳಿಯುತ್ತಾಳೆ. ಇದು ಉತ್ತರ ರಾಮಾಯಣದ ಅಮೋಘ ದರ್ಶನ ಸಾರ.

ಇನ್ನು ಶಾಕುಂತಲ ನಾಟಕದಲ್ಲಿ ಬೇಟೆಗೆಂದು ಬಂದ ದುಷ್ಯಂತ ಕಣ್ವಾಶ್ರಮದಲ್ಲಿ ಮಗ ಭರತ ಹಾಗೂ ಅವನ ತಾಯಿ ಶಕುಂತಲೆಯನ್ನು ಕಂಡು ’ವಸಂತಕಾಲಕ್ಕೆ ಬಳ್ಳಿ ಹೂ ತಳೆಯುವಂತೆ ನೀನು ಈ ಅಭಿಜ್ಞಾನವನ್ನು ಪುನಃ ತೊಡು’ ಎಂದು ಗುರುತಿನ ಉಂಗುರವನ್ನು ನೀಡುತ್ತಾನೆ. ಆದರೆ ’ಸರಿಯಾದ ಸಮಯಕ್ಕೆ ಅದು ನನಗೆ ಕೈ ಕೊಟ್ಟಿತು, ಬೇಡ’ ಎಂದು ತಣ್ಣಗೆ ನಿರಾಕರಿಸುತ್ತಾಳೆ. ಮತ್ತು ಋಷ್ಯಾಶ್ರಮದಲ್ಲೇ ಉಳಿಯುತ್ತಾಳೆ ಶಕುಂತಲೆ. ಈ ಎರಡೂ ಜಾಗತಿಕ ಪ್ರತಿರೋಧಗಳು ಸ್ತ್ರೀ ಸಂವೇದನೆಯ ಸಂಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಂದರ್ಭಗಳಾಗಿವೆ.

ಅದಿರಲಿ, ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಸಂದರ್ಭದಲ್ಲಿ ವಿಚಾರ ಮಾಡಿದರೆ ಪುರುಷಪಾರಮ್ಯದ ನೀತಿಯನ್ನನುಸರಿಸುವ ಪ್ರಧಾನಿ ಮೋದಿಯವರ ನಡೆ ನೋಡಿದರೆ ಈ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬೀಗುತ್ತಿದೆಯೇ ಹೊರತು ವಾಸ್ತವವಾಗಿ ಮಹಿಳೆಯರಿಗೆ ನೀಡುವ ಘನತೆ ಗೌರವಗಳಿಗೆ ಲೋಪವೆಸಗುತ್ತಾ ಬರುತ್ತಿದೆ. ಆದ ಪ್ರಯುಕ್ತ ಈ ಸಂಘರ್ಷ ಸಮಯದಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ದೃಢನನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಭವನದಿಂದ ಹೊರಬರುವುದು ಪ್ರತಿಭಟನೆಯ ಸಂಕೇತವಾದೀತು. ಈ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವೆ? ಹಾಗೇನಾದರೂ ಅವರು ಮಾಡಿದರಾದರೆ ಇದೊಂದು ಅನನ್ಯ ಐತಿಹಾಸಿಕ ಘಟನೆಯಾಗುತ್ತದೆ. ಮುರ್ಮು ಅವರ ಹೆಸರು ಸೀತಾ-ಶಕುಂತಲೆಯರ ಸಾಲಿಗೆ ನಿಲ್ಲುತ್ತದೆ. ಮತ್ತು ಜಾಗತಿಕ ಸ್ತ್ರೀ ಸಂಕುಲದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುರ್ಮು ಅವರು ಬಡತನ ಸಿರಿತನಗಳನ್ನು ಕಂಡುಂಡು ಬಾಳಿ ಬದುಕಿದವರು. ಅವರಿಗೆ ರಾಷ್ಟ್ರಪತಿ ಭವನವನ್ನು ತೊರೆದು ಬರಲು ಅಂಥ ಮೋಹವೇನೂ ಇರಲಾರದು. ಹೇಗೂ ಐದು ವರ್ಷದ ತರುವಾಯ ತೆರವುಗೊಳಿಸಲೇಬೇಕಲ್ಲಾ! ’ನಾಳೆ ಬಪ್ಪುದು ಇಂದೇ ಬರಲಿ’ ಎಂದು ಹೊರಬಂದರೆ ಅದೊಂದು ಅಮೃತ ಮುಹೂರ್ತ! ಅದು ಎಷ್ಟೋ ದಮನಿತ ಮಹಿಳೆಯರಿಗೆ ಸ್ಪೂರ್ತಿದಾಯಕವೂ ಆದೀತು ಮತ್ತು ಅವರ ಹೆಸರು ಹಿಮಾಲಯದೆತ್ತರಕ್ಕೆ ಏರುತ್ತದೆ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...