Homeಅಂಕಣಗಳುದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

- Advertisement -
- Advertisement -

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಒಂದು ಕೃತಿ. ಅದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನಂತಹ ಸರ್ವಾಧಿಕಾರಿಗೆ ಅತಿಮಾನವತೆಯ ಪಾಠ ಮಾಡಿತೇ? ಯಾವ ರಣ-ರತಿಗಳಿಗೆ ಅಮಾನವೀಯ ರೌದ್ರವನ್ನು ತುಂಬಿ ಮನುಕುಲದಲ್ಲಿಯೇ ರಕ್ತದಲ್ಲಿ ಕೆಟ್ಟ ಇತಿಹಾಸ ಬರೆದ ನಾಜಿಗಳಿಗೆ ಪುಕ್ಕಟೆಯಾಗಿ ಈ ದಸ್ ಸ್ಪೋಕ್ ಝರತುಷ್ಟ್ರ ಹಂಚುವಷ್ಟು ಕೇಡಿನ ಸಂಚಾಗಿತ್ತೇ ಈ ಕೃತಿ.

ಇಲ್ಲ. “ಮನುಷ್ಯತ್ವ ಎಂಬುವುದು ಪಶುತ್ವ ಮತ್ತು ಅತಿಮಾನವತ್ವದ ನಡುವಿನ ಆಳವಾದ ಕಣಿವೆಯ ಮೇಲೆ ಕಟ್ಟಲ್ಪಟ್ಟಿರುವ ಹಗ್ಗ. ಇದರ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ, ಹಿಂದಕ್ಕೆ ತಿರುಗಿ ನೋಡುವುದಾಗಲಿ, ಅಲ್ಲಿಯೇ ನಿಂತು ತಳಮಳಗೊಳ್ಳುವುದಾಗಲಿ ಅಪಾಯಕರ. ಮನುಷ್ಯನೆಂದರೆ ಪಶುತ್ವ ಮತ್ತು ಅತಿಮಾನವತ್ವ; ಈ ಎರಡರ ನಡುವಿನ ಸೇತುವೆಯೇ ಹೊರತು, ಮನುಷ್ಯತ್ವವು ಗುರಿಯೇನಲ್ಲ.” ಹಾಗೆಂದು ಝರತುಷ್ಟ್ರನಿಂದ ಹೇಳಿಸುವ ನೀಷೆಗೆ ಮನುಷ್ಯನೆಂದರೆ ಇಷ್ಟ. ಏಕೆಂದರೆ ಅವನು ಹಿಂದಕ್ಕೂ ಸರಿಯಬಲ್ಲ. ಮುಂದಕ್ಕೂ ಸಾಗಬಲ್ಲ.

ತೂಗಾಡುವ ಲೋಲಕದಂತಿರುವ ಡೋಲಾಯಮಾನದ ಸ್ಥಿತಿಯಲ್ಲಿರುವ ಮನಸ್ಸಿನ ಒಂದೊಂದು ಅತಿ ಸಣ್ಣ ಚಲನೆಯ ಸ್ಥಿತಿಯನ್ನು ಒಪ್ಪುವ ಅಥವಾ ಮೆಚ್ಚುವ ಝರತುಷ್ಟ್ರ ನೀಷೆಯ ಮನಸ್ಸಿನ ತಾತ್ವಿಕ ತಾಕಲಾಟಗಳೇ ಆಗಿವೆ. ಅವನು ಒಳಿತು ಕೆಡಕುಗಳ ಆಚೆಗೆ ಸಾಗುವ ಚೈತನ್ಯ. ಚೈತನ್ಯವು ಇದು ಸಮ್ಮತ, ಇದು ತಿರಸ್ಕೃತವೆಂದು ನೋಡದು. ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದು. ಇದು ತಮ್ಮವರು, ಅವರು ಪರಕೀಯರೆಂದು ಪಕ್ಷಪಾತ ಮಾಡದು.

ದೇವರು ಸತ್ತ ಎಂದು ತಾನು ಸ್ಪಷ್ಟವಾಗಿ ಅರಿತವನಂತೆ ಘೋಷಿಸುತ್ತಾ ಕ್ರೈಸ್ತ ಧರ್ಮಕ್ಕೆ ವಿರೋಧದ ದಾರಿಯಲ್ಲಿ ನಡೆದವನಂತೆ ಕಾಣುತ್ತಾನೆ. ಆದರೆ, “ಕೆಳಕ್ಕೆ ಬಿದ್ದಿರುವವರನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ಆಚೆಯ ತೀರಕ್ಕಾಗಿ ಹಾತೊರೆಯುತ್ತಿರುವ ಅವರು ಗೌರವಕ್ಕೆ ಪಾತ್ರರಾಗುತ್ತಾರೆ. ಸ್ವರ್ಗಗಳಿಗಾಗಿ ಬೀಳಲು ಸಿದ್ಧವಿರುವ, ತ್ಯಾಗಗಳನ್ನು ಮಾಡುವವರನ್ನು ನಾನು ಮೆಚ್ಚುವುದಿಲ್ಲ” ಎಂದು ಯೇಸುವಿನ ದನಿಯನ್ನು ಪುನರುಚ್ಚರಿಸುತ್ತಾನೆ.

ಜೂಜಾಡುವಾಗ ದಾಳಗಳು ತನ್ನ ಅನುಕೂಲಕ್ಕೆ ಬಿದ್ದರೆ ನಾನು ಮೋಸಗಾರನೇ ಎಂದು ನಾಚುವವನನ್ನು ಮೆಚ್ಚುವ ನೀಷೆಯಲ್ಲಿ ಅಪರಾಧ ಪ್ರಜ್ಞೆಯೂ ಇರುತ್ತದೆ. ಅದನ್ನು ಅಪರಾಧವೆಂದು ಹೇಳಲು ಸಿದ್ಧವಿಲ್ಲದೇ ಅಸ್ತಿತ್ವದಲ್ಲಿ ಘಟಿಸುತ್ತಿರುವ ಒಂದು ವಿದ್ಯಮಾನದಂತೆ ಮೆಚ್ಚುವ ಮನಸ್ಥಿತಿಯೂ ಇದೆ.

ಇಂಥಾ ದ್ವಂದ್ವ ಮನಸ್ಥಿತಿಯನ್ನು ಪ್ರಾಮಾಣಿಕವಾಗಿಯೇ ಹೊಂದಿದ್ದ ನೀಷೆ ಹುಚ್ಚಾಸ್ಪತ್ರೆಯಲ್ಲಿ ದಿನಗಳನ್ನು ಕಳೆಯಬೇಕಾಯಿತು. ಹೊರಗಿದ್ದ ಲೋಕವನ್ನೂ ಮತ್ತು ತಾನು ಕಂಡುಕೊಂಡಿದ್ದ ಲೋಕವನ್ನೂ ಏಕಕಾಲದಲ್ಲಿ ಲೋಲಕದಂತೆ ಡೋಲಾಯಮಾನದ ಸ್ಥಿತಿಯಲ್ಲಿ ನೋಡುತ್ತಿದ್ದ. ಪಕ್ಷಪಾತಗಳಿಲ್ಲದೇ ನೋಡುತ್ತಿದ್ದ. ಒಳಿತು ಕೆಡಕುಗಳ ಭಾವಗಳಿಲ್ಲದೇ ನೋಡುತ್ತಿದ್ದ. ಪಕ್ಷವಹಿಸದ ಕಾರಣ ಅವನ ಮುಕ್ತ ಚೈತನ್ಯವಾಗಿದ್ದ. ಮುಕ್ತವಾದ ಹೃದಯವನ್ನು ಹೊಂದಿದ್ದ. ಸಂಘರ್ಷಪ್ರಿಯ ಸಮಾಜದಲ್ಲಿ ಯಾವುದಾದರೂ ಪಕ್ಷವನ್ನು ವಹಿಸದಿದ್ದರೆ ಅವನನ್ನು ಬೆಂಬಲಿಸಲು ಯಾವ ಪಕ್ಷದವರೂ ಬರುವುದಿಲ್ಲ. ಗಾಯವಾದರೆ ಆಗಲಿ ಎನ್ನುತ್ತಾನೆ. ಹುಚ್ಚನಲ್ಲವೇ ಅವನು? ಗಾಯಗಳನ್ನು ಸಹಿಸಿಕೊಳ್ಳುತ್ತಾ ತನ್ನ ಆಂತರ್ಯವನ್ನು ಕಾಪಾಡಿಕೊಳ್ಳುವವನು ಹೆಚ್ಚಲ್ಲವೇ ಅವನು?

ಖಲೀಲ್ ಗಿಬ್ರಾನನ ಅಲ್‍ಮುಸ್ತಾಫನಂತೆ ಝರತುಷ್ಟ್ರ ಯೌವನದ ಪ್ರೌಡಿಮೆಯ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬೆಟ್ಟಗುಡ್ಡಗಳ ಕಡೆ ತೆರಳಿ ಏಕಾಂತದಲ್ಲಿ ಹತ್ತು ವರ್ಷಗಳನ್ನು ಕಳೆದ. ಮಿಂಚನ್ನು ಕಂಡುಕೊಂಡ. ಆನಂದದಿಂದಲೇ ಹೊತ್ತುಹೊತ್ತನ್ನೂ ಕಳೆದ. ಕೊನೆಗೊಂದು ದಿನ ತಾನು ಏನನ್ನು ಕಂಡುಕೊಂಡಿದ್ದಾನೆಯೋ, ಅದನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ. ಏಕೆಂದರೆ, “ಅತಿಯಾಗಿ ಮಧುವನ್ನು ಹೀರಿದ ದುಂಬಿಯು ಆಯಾಸಗೊಂಡಿರುವಂತೆ ನಾನು ಪಡೆದಿರುವ ಅರಿವಿನಿಂದ ನಾನು ಬಳಲಿದ್ದೇನೆ. ಈಗ ಈ ಮಧುಕರ ವೃತ್ತಿಯನ್ನು ಮಾಡಬೇಕು. ಸೂರ್ಯನು ಪಡುವಣದಲ್ಲಿ ಸಂಜೆ ಇಳಿಯುವಂತೆ ಈ ಪ್ರವಾದಿಯೂ, ದಾರ್ಶನಿಕನೂ, ಮಿಂಚನ್ನು ಕಂಡುಕೊಂಡಿರುವ ಅತಿಮಾನವನೂ, ಆನಂದದ ಪ್ರತಿಮೆಯಾಗಿರುವವನೂ ಇಳಿಯಬೇಕಿದೆ. ಏಕೆಂದರೆ, ಇಳಿಯದೇ ಹೋದರೆ ಕೆಳಗಿರುವ ಜನರಿಗೆ ನಾವು ಪಡೆದಿರುವುದನ್ನು ನೀಡಲಾಗುವುದಿಲ್ಲ. ಏರುತ್ತಲೇ ಹೋದರೆ ಏರಲಾಗದವರಿಗೆ ಅತಿಮಾನವನ ಚೈತನ್ಯವನ್ನು ತಗುಲಿಸುವುದಾದರೂ ಹೇಗೆ?” ಎನ್ನುತ್ತಾ ಸೂರ್ಯನನ್ನು ಸಮಾನತೆಯ ಕಣ್ಣು ಎಂದು ಕರೆಯುತ್ತಾನೆ.

ರಾತ್ರಿ ಸುಖವಾದ ನಿದ್ರೆ ಮಾಡಲು ಇಡೀ ದಿನ ಎಚ್ಚರವಾಗಿರಬೇಕು ಎಂಬ ಅರ್ಥದಲ್ಲಿ ನ್ಶೆತಿಕತೆಯನ್ನು ಬೋಧಿಸುವ ಪಂಡಿತರನ್ನು ಕಂಡು ಕಂಡು ಇವನಿಗೆ ನಗುಬರುತ್ತದೆ. ಬದುಕಿನ ಕೊನೆಯಲ್ಲಿ ಶಾಂತಿಗಾಣಲು ಇಡೀ ಬದುಕು ಸದ್ಗುಣಗಳನ್ನು ಪಾಲಿಸುವುದು, ಒಳ್ಳೆಯವನಾಗಿರುವುದಕ್ಕೆ ಹೆಣಗಾಡುವುದು ನಗೆ ತರುವುದು ನೀಷೆಗೆ. ಇಂತಹ ಆಷಾಢಭೂತಿಗಿಂತ ಪ್ರಾಮಾಣಿಕ ವ್ಯಕ್ತಿಯಾಗಿ ಹುಚ್ಚನ್ನು ಹೊಂದಿರುವುದು ಒಂದು ಅನುಗ್ರಹವೆನ್ನುತ್ತಾನೆ ನೀಷೆ.

“ಯಾರೂ ತಿಳಿಯದ ಅನೇಕಾನೇಕ ಬಗೆಯ ಅಂತರಂಗಗಳು ಈ ಲೋಕದಲ್ಲಿವೆ. ಸರಿ, ಇದನ್ನು ತಿಳಿಯಬೇಕೆಂದರೆ ಮೊದಲು ತನ್ನದೇ ಅಂತರಂಗವನ್ನು ರೂಪಿಸಿಕೊಳ್ಳಬೇಕು. ಆಮೇಲೆ ತಿಳಿದುಕೊಳ್ಳಬೇಕು” ಎನ್ನುವ ಝರತುಷ್ಟ್ರ ವ್ಯಕ್ತಿವಾದಿಯಂತೆ ಕಾಣುತ್ತಾನೆ. ಆದರೆ, ಝರತುಷ್ಟ್ರ ಭೇಟಿ ಮಾಡುವ ಯುವಕನಾಗಲಿ, ಇತರರಾಗಲಿ ಒಬ್ಬೊಬ್ಬರೂ ಒಂದೊಂದು ಅರಿಮೆಗಳಿಂದ, ವ್ಯಸನಗಳಿಂದ, ಗೀಳುಗಳಿಂದ; ಒಟ್ಟಾರೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವರು. ಆದರೆ ಝರತುಷ್ಟ್ರ ಅವನ್ನು ಸಮಸ್ಯೆ ಎನ್ನುವುದಿಲ್ಲ. ವಾಸ್ತವ ಎನ್ನುತ್ತಾನೆ. ಆದರೆ ಸಂವಾದಗಳಿಂದ ಸಮಾಲೋಚನೆ ಮಾಡಿ ಅವುಗಳಿಂದ ಹೊರತಾಗಲು ನೆರವಾಗುತ್ತಾನೆ.

ದಸ್ ಸ್ಪೋಕ್ ಝರತುಷ್ಟ್ರ ಜಗತ್ತಿನ ಮಾನವ ಮನಸ್ಥಿತಿಯ ಡೋಲಾಯಮಾನದ ಸ್ಥಿತಿಗತಿಗಳನ್ನು ಒಳಿತು ಕೆಡಕುಗಳಿಂದಾಚೆಗೆ ಮೆಚ್ಚುತ್ತಾ ಬೆತ್ತಲೆಯಾಗಿರುವ ಚೈತನ್ಯವಾಗಿ ನಿಲ್ಲುತ್ತದೆ. ಅದೊಂದು ವಿದ್ಯುತ್ಚಕ್ತಿಯಂತೆ ಬರಿಯ ಚೈತನ್ಯ. ಯಾರು ಯಾವುದಕ್ಕೆ ಬಳಸಿಕೊಳ್ಳುವರೋ ಅವರವರ ವಿವೇಚನೆ ಮತ್ತು ಗ್ರಹಿಕೆಗೆ ಬಿಟ್ಟದ್ದು. ಮೂಲದ್ರವ್ಯದಂತೆ ಒದಗುವ ಯಾವುದೇ ಚೈತ್ಯನ್ಯದ ಜಾಯಮಾನ ಅದೇ ಆಗಿರುತ್ತದೆ.

ಭಗವತ್ಗೀತೆಯನ್ನು ಗೋಡ್ಸೆಯೂ ಓದುತ್ತಿದ್ದ, ಗಾಂಧಿಯೂ ಓದುತ್ತಿದ್ದರು. ಬಾಲ ಗಂಗಾಧರ ತಿಲಕ್ ಓದಿ ರಚಿಸಿದ ಭಾರತೀಯರ ತಾತ್ವಿಕತೆಯು ಡಿ ಡಿ ಕೋಸಾಂಬಿಯವರು ಗೀತೆಯಿಂದ ಗ್ರಹಿಸಿದ್ದಕ್ಕಿಂತ ಭಿನ್ನ. ಆದರೆ ಅವರವರ ಪ್ರಾಮಾಣಿಕ ಬದ್ಧತೆಯಿಂದ ಅವರು ಗ್ರಹಿಸಿದ ತಾತ್ವಿಕತೆಯು ಅವರವರ ನಡೆನುಡಿಗಳಲ್ಲಿ ಪುಟಕಿಟ್ಟುಕೊಳ್ಳುತ್ತದೆ.

ಹಿಟ್ಲರನಿಗೆ ಅರ್ಥವಾದ ನೀಷೆಯ ಅತಿಮಾನವತ್ವವಾದವು ಬೇರೊಬ್ಬರ ಗ್ರಹಿಕೆಯಲ್ಲಿ ಮನುಷ್ಯತ್ವ ಮತ್ತು ಪಶುತ್ವಗಳನ್ನು ಮೀರಿದ ಬಯಲಲ್ಲಿ ಕರುಣೆಯ ಕಣ್ಣ ಮಿಂಚಾದರೆ, ಪಡೆದ ಸಮಭಾವದ ಆನಂದವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ‘ಝರತುಷ್ಟ್ರ ಹಾಗೆಂದದ್ದು’ ಮೂಲದ್ರವ್ಯಗಳನ್ನೇ ಹೊರತು ಸಿದ್ಧವಿಷಯಗಳನ್ನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...