Homeಕರ್ನಾಟಕಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

ಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

- Advertisement -
- Advertisement -

ದಕ್ಷಿಣ ಕನ್ನಡದವನು ಎಂದು ಪರಿಚಯಿಕೊಳ್ಳುವಾಗ ಎರಡು ರೀತಿಗಳಲ್ಲಿ ಗುರುತಿಸುತ್ತಾರೆ. ಒಂದು ಬುದ್ಧಿಶಾಲಿ ಜಿಲ್ಲೆಯವನೆಂದು ಮತ್ತೊಂದು ಕೋಮುವಾದದ ತವರಿನವನೆಂದು. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದು ವರ್ಷಕ್ಕೊಮ್ಮೆ ಬರುತ್ತಿದ್ದ ಶಾಲಾ ಕಾಲೇಜುಗಳು ಪರೀಕ್ಷಾ ಫಲಿತಾಂಶದ ಕಾರಣಕ್ಕೆ ಮಾತ್ರ ಅಲ್ಲ, ಬದಲಿಗೆ ಈ ಪ್ರದೇಶದ ಜನತೆಯ ಶಿಕ್ಷಣ, ರಾಜಕಾರಣ, ಉದ್ಯಮ, ಬ್ಯಾಂಕಿಂಗ್, ಸಾಹಿತ್ಯ, ವಿದ್ವತ್ ಮೊದಲಾದ ವಲಯಗಳಲ್ಲಿ ಮಾಡಿದ ಸಾಧನೆಗಳಿಂದ. ಇಂದು ಕೋಮುವಾದಿಗಳಾಗಿ ಹೊಸ ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬುದ್ಧಿವಂತರಾಗಿ ಉಳಿದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ!

ನನ್ನ ಬಾಲ್ಯದಿಂದಲೇ ’ಹಿಂದುತ್ವ’ದ ವಾತಾವರಣದಲ್ಲಿ ಬೆಳೆದ ಕಾರಣ, ನಾನು ಬರೆಯಬಲ್ಲ ಹಂತಕ್ಕೆ ಬಂದಾಗ ನನ್ನ ಜೊತೆಗಿನ ಎಲ್ಲಾ ಹುಡುಗರ ಹಾಗೆಯೇ ಪೂರ್ಣಪ್ರಮಾಣದ ಹಿಂದುತ್ವವಾದಿಯಾಗಿ ರೂಪುಗೊಂಡಿದ್ದೆ. ಆರ್.ಎಸ್.ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಆದರೆ ನನ್ನ ಓರಗೆಯ ಇತರ ಹುಡುಗರಿಗೂ ನನಗೂ ಇದ್ದ ವ್ಯತ್ಯಾಸ ಎಂದರೆ ನಾನು ಆರ್.ಎಸ್.ಎಸ್ ಮತ್ತು ರಾಷ್ಟ್ರೋತ್ಥಾನದ ಸಾಹಿತ್ಯಗಳನ್ನು ಓದಿದೆ. ಇದು ಸಂಘ ಪರಿವಾರ ಪ್ರಣೀತ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಯೋಚಿಸಲು ಕಾರಣವಾಗಿ ಚಿಂತನೆಗೆ ಹಚ್ಚಿತು.

ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಎಡವುತ್ತಿದ್ದೆ. ಯಾಕೆಂದರೆ ಹಿಂದುತ್ವ ಯಾವುದನ್ನು ಹಿಂದುತ್ವ ’ಭಾರತ’ ಎಂದು ವ್ಯಾಖ್ಯಾನಿಸುತ್ತದೆಯೋ ಅದು ಅಸ್ತಿತ್ವದಲ್ಲಿಯೇ ಇಲ್ಲ. ಹಿಂದುತ್ವದ ಸಮಸ್ಯೆ ಇರುವುದು ಭಾರತವನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಇಟ್ಟು ನೋಡುವುದು!

ಭಾರತ ಒಂದು ಬಹು ಸಾಂಸ್ಕೃತಿಕ ರಾಷ್ಟ್ರ. ಹಿಂದುತ್ವ ಎಂಬ ಒಂದು ಸೈದ್ಧಾಂತಿಕ ಆವರಣದ ಒಳಗಡೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂಸ್ಕೃತಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗುವಾಗ ಗಟ್ಟಿಗೊಳ್ಳುತ್ತಲೇಹೋಯಿತು. ಇದರ ಸುತ್ತ ನನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಯೋಚನೆಗಳನ್ನು ಕಟ್ಟಲುತೊಡಗಿದೆ.

ರಾಷ್ಟ್ರೀಯತೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆದಿವೆ. ಇದಕ್ಕಿರುವ ಭಿನ್ನಭಿನ್ನ ವ್ಯಾಖ್ಯಾನಗಳನ್ನು ಚರ್ಚಿಸಲಾಗುತ್ತಿದೆ. ಏಕದೇಶ, ಏಕಭಾಷೆ, ಏಕಧರ್ಮ – ಇವೇ ರಾಷ್ಟ್ರೀಯತೆಗೆ ಇರುವ ಸಾಮಾನ್ಯ ವ್ಯಾಖ್ಯಾನ. ಹಿಂದುತ್ವದ ಪ್ರತಿಪಾದಿಸುವುದು ಕೂಡ ಇದೇ ರಾಷ್ಟ್ರೀಯತೆಯನ್ನು. ಆರ್.ಎಸ್.ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಳ್ವಾಕರ್ ಅವರ ಪ್ರಕಾರ ದೇಶವನ್ನು ರೂಪಿಸುವ ಐದು ಏಕತೆಗಳು ಎಂದರೆ ದೇಶ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿ. ಅವರೇ ಹೇಳುವಂತೆ ಇವೆಲ್ಲಾ ಅಂಶಗಳೂ ಧರ್ಮಕೇಂದ್ರಿತ. ಯಾಕೆಂದರೆ ಧರ್ಮವೇ ಇವೆಲ್ಲವನ್ನೂ ರೂಪಿಸುತ್ತದೆ!

ಹಾಗಿದ್ದರೆ ಯಾವ ಸಂಸ್ಕೃತಿಯ ಮೂಲಕ ದೇಶವನ್ನು ಮತ್ತು ಹಿಂದೂ ಧರ್ಮವನ್ನು ನಿರ್ಧರಿಸಬೇಕು? ವೈದಿಕ ಸಾಹಿತ್ಯವೇ ಇವೆಲ್ಲವನ್ನೂ ನಿರ್ಧರಿಸುತ್ತದೆ ಎಂದರೆ ನನ್ನ ಊರಿನ ದೈವ ಪಾತ್ರಿ ಒಬ್ಬ ಹಾಡುವ ಪಾಡ್ದನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲವೇ? ಅಖಿಲ ಭಾರತ ಮಟ್ಟದಲ್ಲಿ ದೈವಾರಾಧನೆ, ಯಕ್ಷಗಾನಕ್ಕೆ ಇರುವ ಸ್ಥಾನ ಏನು? ಕೇವಲ ದೇವರನ್ನೇ ನಂಬುವುದು ದೇಶದ ಸಂಸ್ಕೃತಿ ಎಂದರೆ ದೇವರ ಅಸ್ತಿತ್ವವನ್ನು ಅಲ್ಲಗಳೆದು ಭಾರತೀಯ ತಾತ್ವಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಲೋಕಾಯತ, ನಾಸ್ತಿಕ, ಚಾರ್ವಾಕ ಮೊದಲಾದವರು ಭಾರತೀಯರೆಲ್ಲವೆ? ವೇದಗಳನ್ನು ತಿರಸ್ಕರಿಸಿ, ಜಾತಿವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ನಾಥ, ಕಾಳಾಮುಖ, ಸಾಂಖ್ಯ, ಬೌದ್ಧ, ಶರಣ ಮೊದಲಾದ ಪಂಥಗಳು ಭಾರತದಲ್ಲವೇ? ಸಾವಿರಾರು ಭಾಷೆಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಸಂಸ್ಕೃತಿಗಳು ಭಾರತಕ್ಕೆ ಬೇಡವೇ?

ಹಿಂದುತ್ವವನ್ನು ಪ್ರಶ್ನಿಸಿ ಅದರ ಕೋಮುವಾದಿ ರಾಷ್ಟ್ರೀಯತೆಗೆ ಉತ್ತರ ನೀಡಲು ನಮ್ಮ ಮುಂದೆ ಇರುವದು, ಈ ದೇಶ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಬಹುಮುಖಿ ಸಂಸ್ಕೃತಿ. ಇದಕ್ಕೆ ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದಲ್ಲಿಯೇ ನೂರಾರು ಉದಾಹರಣೆಗಳಿವೆ.

ಇವುಗಳನ್ನು ತಿರುಗಿ ನೋಡಿದಾಗ, ನನಗೆ ಏಕರೂಪಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಿಂದುತ್ವದಿಂದ ಬಹುತ್ವದ ಬೇರುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಭಯ ಗೋಚರಿಸುತ್ತದೆ. ತುಳುನಾಡಿನ ಸಂಸ್ಕೃತಿ ಒಡೆಯುವುದನ್ನು ಕಲಿಸಿಲ್ಲ. ಹಕ್ಕುಗಳಿಗೆ ಹೋರಾಡುವ ಕೋಟಿ ಚೆನ್ನಯರು, ಸ್ತ್ರೀಮತವನ್ನು ಉದ್ಧರಿಸಲು ತನ್ನ ಪತಿಯನ್ನು ತಿರಸ್ಕರಿಸುವ ಅಕ್ಕೆರಸು ಸಿರಿ, ತನ್ನ ಅರಸನನ್ನು ರಕ್ಷಿಸಲು ಪ್ರಾಣ ನೀಡುವ ಮಾಮ್ಮಾಲಿ ಬ್ಯಾರಿ, ಬಪ್ಪನಾಡಿನ ದುರ್ಗಾಪರಮೇಶ್ವರಿ, ಒಲಿದ ಬಪ್ಪ ಬ್ಯಾರಿ ಮೊದಲಾದ ಜಾನಪದ ನಾಯಕರು ಈ ನೆಲದ ಸಂಸ್ಕೃತಿಯನ್ನು ಕಟ್ಟಿದ್ದಾರೆ.

ಬೊಬ್ಬರ್ಯ ಎಂಬ ಮುಸಲ್ಮಾನ ಬ್ಯಾರಿಯೊಬ್ಬ ಮೀನುಗಾರರ ದೈವವಾಗುವುದು ಜಾನಪದದಿಂದ ಹೊರತು ರಾಜಕೀಯ ಪ್ರೇರಿತ ಮತೀಯತೆಯಿಂದಲ್ಲ. ಹಿಂದುತ್ವ ಹಿಂದೂ ಧರ್ಮವನ್ನು ಸುಧಾರಿಸುವ ಬದಲು ಒಂದು ಕರ್ಮಠ ಮತಧರ್ಮವನ್ನಾಗಿ ಮಾರ್ಪಾಡು ಮಾಡುವಾಗ ನಾವು ಬಹುತ್ವದ ಬಗ್ಗೆ ಹೆಚ್ಚುಹೆಚ್ಚು ಮಾತನಾಡಬೇಕಾಗಿದೆ. ಹಿಂದುತ್ವದಲ್ಲಿ ಬೊಬ್ಬರ್ಯ ದೈವದ ಕಥೆಯನ್ನು ಮಹಾಭಾರತದ ಬಬ್ರುವಾಹನನ ಕಥೆಯೊಂದಿಗೆ ಜೋಡಿಸಿ ತಿರುಚಲು ಯತ್ನಿಸಿದರೆ ಸಾಮಾನ್ಯನೊಬ್ಬ ಹಾಡುವ ಪಾಡ್ದನದಲ್ಲಿ ಅವನು ಒಬ್ಬ ಮುಸಲ್ಮಾನ!

ಹಿಂದುತ್ವದಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ. ತುಳುವಿನ ಸಬಲೀಕರಣದ ಬಗ್ಗೆ ಅದು ಮಾತನಾಡಿದರೂ ಅದಕ್ಕೆ ಬೇಕಾದ ಪಠ್ಯವನ್ನು ರೂಪಿಸುವಾಗ ಕೋಮುವಾದವನ್ನು ತರಲಾಗುತ್ತದೆ. ಹೀಗಾಗಿ ತುಳುವಿನ ಬಗೆಗಿನ ವಿದ್ವತ್‌ಪೂರ್ಣ ಚರ್ಚೆ ಕಳೆದ ಎರಡು ದಶಕಗಳಿಂದ ತೀರ ಕಡಿಮೆಯಾಗಿದೆ.

ನಮಗೆ ಬೇಕಾದದ್ದು ನಮ್ಮ ಹಿರಿಯರು ನೀಡಿದ ಎಲ್ಲರನ್ನೂ ಒಳಗೊಳ್ಳುವ ತುಳು ಸಂಸ್ಕೃತಿ. ಇದು ಕೇವಲ ತುಳುವಿನ ವಿಚಾರದಲ್ಲಿ ಮಾತ್ರವಲ್ಲ ಇಡೀ ದೇಶದ ವಿಚಾರದಲ್ಲೂ ಮುಖ್ಯವಾಗುತ್ತದೆ! ನನ್ನ ಮನೆಯ ಸಂಸ್ಕೃತಿಯ ಮೂಲಕ ನನ್ನ ದೇಶವನ್ನು ವ್ಯಾಖ್ಯಾನಿಸಲು ಸಾಧ್ಯವಾದರೆ ಅದೇ ನಿಜವಾದ ದೇಶಪ್ರೇಮ. ಹಾಗಾದಾಗ ಮಾತ್ರ ಭಾರತ ನಮ್ಮ ಒಳಗೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.

ಕೋಮುವಾದದಿಂದ ಅಧಃಪತನಕ್ಕೆ ಹೋಗುತ್ತಿರುವ ಭಾರತವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ. ಕವಿರಾಜ ಮಾರ್ಗಕಾರ ಹೇಳುವ “ಕನ್ನಡಂಗಳ” ವೈವಿಧ್ಯತೆಯ ಜೊತೆಗೆ ತುಳು, ಕೊರಗ, ಕೊಡವ ಮೊದಲಾದ ಕರ್ನಾಟಕದ ಭಾಷೆಗಳು ತಮ್ಮ ಅಸ್ತಿತ್ವದ ಬಗ್ಗೆ ದನಿ ಎತ್ತಿವೆ. ಈ ಸಂಸ್ಕೃತಿಗಳು ಕನ್ನಡನಾಡನ್ನು ಬೆಳೆಸಿವೆ. ಕನ್ನಡದ ದನಿಗಳು ತುಳುವಿನವೂ, ಕೊಡವ ಭಾಷೆಯದ್ದೂ, ಅಳಿವಿನಂಚಿನಲ್ಲಿ ಇರುವ ಕೊರಗರದ್ದೂ ಆಗಬೇಕು! ಈ ಪ್ರಜ್ಞೆ ಇಡೀ ಕರ್ನಾಟಕವನ್ನು ವ್ಯಾಪಿಸಬೇಕು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಿದ ಈ ಬಹುಮುಖಿ ನೆಲೆಗಳ ಉಳಿವಿನ ಬಗ್ಗೆ ದನಿ ಎತ್ತುವ ಮೂಲಕ ಪತನಮುಖಿ ಭಾರತದ ಚೈತನ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...