Homeಕರ್ನಾಟಕಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

ಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

- Advertisement -
- Advertisement -

ದಕ್ಷಿಣ ಕನ್ನಡದವನು ಎಂದು ಪರಿಚಯಿಕೊಳ್ಳುವಾಗ ಎರಡು ರೀತಿಗಳಲ್ಲಿ ಗುರುತಿಸುತ್ತಾರೆ. ಒಂದು ಬುದ್ಧಿಶಾಲಿ ಜಿಲ್ಲೆಯವನೆಂದು ಮತ್ತೊಂದು ಕೋಮುವಾದದ ತವರಿನವನೆಂದು. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದು ವರ್ಷಕ್ಕೊಮ್ಮೆ ಬರುತ್ತಿದ್ದ ಶಾಲಾ ಕಾಲೇಜುಗಳು ಪರೀಕ್ಷಾ ಫಲಿತಾಂಶದ ಕಾರಣಕ್ಕೆ ಮಾತ್ರ ಅಲ್ಲ, ಬದಲಿಗೆ ಈ ಪ್ರದೇಶದ ಜನತೆಯ ಶಿಕ್ಷಣ, ರಾಜಕಾರಣ, ಉದ್ಯಮ, ಬ್ಯಾಂಕಿಂಗ್, ಸಾಹಿತ್ಯ, ವಿದ್ವತ್ ಮೊದಲಾದ ವಲಯಗಳಲ್ಲಿ ಮಾಡಿದ ಸಾಧನೆಗಳಿಂದ. ಇಂದು ಕೋಮುವಾದಿಗಳಾಗಿ ಹೊಸ ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬುದ್ಧಿವಂತರಾಗಿ ಉಳಿದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ!

ನನ್ನ ಬಾಲ್ಯದಿಂದಲೇ ’ಹಿಂದುತ್ವ’ದ ವಾತಾವರಣದಲ್ಲಿ ಬೆಳೆದ ಕಾರಣ, ನಾನು ಬರೆಯಬಲ್ಲ ಹಂತಕ್ಕೆ ಬಂದಾಗ ನನ್ನ ಜೊತೆಗಿನ ಎಲ್ಲಾ ಹುಡುಗರ ಹಾಗೆಯೇ ಪೂರ್ಣಪ್ರಮಾಣದ ಹಿಂದುತ್ವವಾದಿಯಾಗಿ ರೂಪುಗೊಂಡಿದ್ದೆ. ಆರ್.ಎಸ್.ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಆದರೆ ನನ್ನ ಓರಗೆಯ ಇತರ ಹುಡುಗರಿಗೂ ನನಗೂ ಇದ್ದ ವ್ಯತ್ಯಾಸ ಎಂದರೆ ನಾನು ಆರ್.ಎಸ್.ಎಸ್ ಮತ್ತು ರಾಷ್ಟ್ರೋತ್ಥಾನದ ಸಾಹಿತ್ಯಗಳನ್ನು ಓದಿದೆ. ಇದು ಸಂಘ ಪರಿವಾರ ಪ್ರಣೀತ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಯೋಚಿಸಲು ಕಾರಣವಾಗಿ ಚಿಂತನೆಗೆ ಹಚ್ಚಿತು.

ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಎಡವುತ್ತಿದ್ದೆ. ಯಾಕೆಂದರೆ ಹಿಂದುತ್ವ ಯಾವುದನ್ನು ಹಿಂದುತ್ವ ’ಭಾರತ’ ಎಂದು ವ್ಯಾಖ್ಯಾನಿಸುತ್ತದೆಯೋ ಅದು ಅಸ್ತಿತ್ವದಲ್ಲಿಯೇ ಇಲ್ಲ. ಹಿಂದುತ್ವದ ಸಮಸ್ಯೆ ಇರುವುದು ಭಾರತವನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಇಟ್ಟು ನೋಡುವುದು!

ಭಾರತ ಒಂದು ಬಹು ಸಾಂಸ್ಕೃತಿಕ ರಾಷ್ಟ್ರ. ಹಿಂದುತ್ವ ಎಂಬ ಒಂದು ಸೈದ್ಧಾಂತಿಕ ಆವರಣದ ಒಳಗಡೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂಸ್ಕೃತಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗುವಾಗ ಗಟ್ಟಿಗೊಳ್ಳುತ್ತಲೇಹೋಯಿತು. ಇದರ ಸುತ್ತ ನನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಯೋಚನೆಗಳನ್ನು ಕಟ್ಟಲುತೊಡಗಿದೆ.

ರಾಷ್ಟ್ರೀಯತೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆದಿವೆ. ಇದಕ್ಕಿರುವ ಭಿನ್ನಭಿನ್ನ ವ್ಯಾಖ್ಯಾನಗಳನ್ನು ಚರ್ಚಿಸಲಾಗುತ್ತಿದೆ. ಏಕದೇಶ, ಏಕಭಾಷೆ, ಏಕಧರ್ಮ – ಇವೇ ರಾಷ್ಟ್ರೀಯತೆಗೆ ಇರುವ ಸಾಮಾನ್ಯ ವ್ಯಾಖ್ಯಾನ. ಹಿಂದುತ್ವದ ಪ್ರತಿಪಾದಿಸುವುದು ಕೂಡ ಇದೇ ರಾಷ್ಟ್ರೀಯತೆಯನ್ನು. ಆರ್.ಎಸ್.ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಳ್ವಾಕರ್ ಅವರ ಪ್ರಕಾರ ದೇಶವನ್ನು ರೂಪಿಸುವ ಐದು ಏಕತೆಗಳು ಎಂದರೆ ದೇಶ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿ. ಅವರೇ ಹೇಳುವಂತೆ ಇವೆಲ್ಲಾ ಅಂಶಗಳೂ ಧರ್ಮಕೇಂದ್ರಿತ. ಯಾಕೆಂದರೆ ಧರ್ಮವೇ ಇವೆಲ್ಲವನ್ನೂ ರೂಪಿಸುತ್ತದೆ!

ಹಾಗಿದ್ದರೆ ಯಾವ ಸಂಸ್ಕೃತಿಯ ಮೂಲಕ ದೇಶವನ್ನು ಮತ್ತು ಹಿಂದೂ ಧರ್ಮವನ್ನು ನಿರ್ಧರಿಸಬೇಕು? ವೈದಿಕ ಸಾಹಿತ್ಯವೇ ಇವೆಲ್ಲವನ್ನೂ ನಿರ್ಧರಿಸುತ್ತದೆ ಎಂದರೆ ನನ್ನ ಊರಿನ ದೈವ ಪಾತ್ರಿ ಒಬ್ಬ ಹಾಡುವ ಪಾಡ್ದನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲವೇ? ಅಖಿಲ ಭಾರತ ಮಟ್ಟದಲ್ಲಿ ದೈವಾರಾಧನೆ, ಯಕ್ಷಗಾನಕ್ಕೆ ಇರುವ ಸ್ಥಾನ ಏನು? ಕೇವಲ ದೇವರನ್ನೇ ನಂಬುವುದು ದೇಶದ ಸಂಸ್ಕೃತಿ ಎಂದರೆ ದೇವರ ಅಸ್ತಿತ್ವವನ್ನು ಅಲ್ಲಗಳೆದು ಭಾರತೀಯ ತಾತ್ವಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಲೋಕಾಯತ, ನಾಸ್ತಿಕ, ಚಾರ್ವಾಕ ಮೊದಲಾದವರು ಭಾರತೀಯರೆಲ್ಲವೆ? ವೇದಗಳನ್ನು ತಿರಸ್ಕರಿಸಿ, ಜಾತಿವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ನಾಥ, ಕಾಳಾಮುಖ, ಸಾಂಖ್ಯ, ಬೌದ್ಧ, ಶರಣ ಮೊದಲಾದ ಪಂಥಗಳು ಭಾರತದಲ್ಲವೇ? ಸಾವಿರಾರು ಭಾಷೆಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಸಂಸ್ಕೃತಿಗಳು ಭಾರತಕ್ಕೆ ಬೇಡವೇ?

ಹಿಂದುತ್ವವನ್ನು ಪ್ರಶ್ನಿಸಿ ಅದರ ಕೋಮುವಾದಿ ರಾಷ್ಟ್ರೀಯತೆಗೆ ಉತ್ತರ ನೀಡಲು ನಮ್ಮ ಮುಂದೆ ಇರುವದು, ಈ ದೇಶ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಬಹುಮುಖಿ ಸಂಸ್ಕೃತಿ. ಇದಕ್ಕೆ ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದಲ್ಲಿಯೇ ನೂರಾರು ಉದಾಹರಣೆಗಳಿವೆ.

ಇವುಗಳನ್ನು ತಿರುಗಿ ನೋಡಿದಾಗ, ನನಗೆ ಏಕರೂಪಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಿಂದುತ್ವದಿಂದ ಬಹುತ್ವದ ಬೇರುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಭಯ ಗೋಚರಿಸುತ್ತದೆ. ತುಳುನಾಡಿನ ಸಂಸ್ಕೃತಿ ಒಡೆಯುವುದನ್ನು ಕಲಿಸಿಲ್ಲ. ಹಕ್ಕುಗಳಿಗೆ ಹೋರಾಡುವ ಕೋಟಿ ಚೆನ್ನಯರು, ಸ್ತ್ರೀಮತವನ್ನು ಉದ್ಧರಿಸಲು ತನ್ನ ಪತಿಯನ್ನು ತಿರಸ್ಕರಿಸುವ ಅಕ್ಕೆರಸು ಸಿರಿ, ತನ್ನ ಅರಸನನ್ನು ರಕ್ಷಿಸಲು ಪ್ರಾಣ ನೀಡುವ ಮಾಮ್ಮಾಲಿ ಬ್ಯಾರಿ, ಬಪ್ಪನಾಡಿನ ದುರ್ಗಾಪರಮೇಶ್ವರಿ, ಒಲಿದ ಬಪ್ಪ ಬ್ಯಾರಿ ಮೊದಲಾದ ಜಾನಪದ ನಾಯಕರು ಈ ನೆಲದ ಸಂಸ್ಕೃತಿಯನ್ನು ಕಟ್ಟಿದ್ದಾರೆ.

ಬೊಬ್ಬರ್ಯ ಎಂಬ ಮುಸಲ್ಮಾನ ಬ್ಯಾರಿಯೊಬ್ಬ ಮೀನುಗಾರರ ದೈವವಾಗುವುದು ಜಾನಪದದಿಂದ ಹೊರತು ರಾಜಕೀಯ ಪ್ರೇರಿತ ಮತೀಯತೆಯಿಂದಲ್ಲ. ಹಿಂದುತ್ವ ಹಿಂದೂ ಧರ್ಮವನ್ನು ಸುಧಾರಿಸುವ ಬದಲು ಒಂದು ಕರ್ಮಠ ಮತಧರ್ಮವನ್ನಾಗಿ ಮಾರ್ಪಾಡು ಮಾಡುವಾಗ ನಾವು ಬಹುತ್ವದ ಬಗ್ಗೆ ಹೆಚ್ಚುಹೆಚ್ಚು ಮಾತನಾಡಬೇಕಾಗಿದೆ. ಹಿಂದುತ್ವದಲ್ಲಿ ಬೊಬ್ಬರ್ಯ ದೈವದ ಕಥೆಯನ್ನು ಮಹಾಭಾರತದ ಬಬ್ರುವಾಹನನ ಕಥೆಯೊಂದಿಗೆ ಜೋಡಿಸಿ ತಿರುಚಲು ಯತ್ನಿಸಿದರೆ ಸಾಮಾನ್ಯನೊಬ್ಬ ಹಾಡುವ ಪಾಡ್ದನದಲ್ಲಿ ಅವನು ಒಬ್ಬ ಮುಸಲ್ಮಾನ!

ಹಿಂದುತ್ವದಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ. ತುಳುವಿನ ಸಬಲೀಕರಣದ ಬಗ್ಗೆ ಅದು ಮಾತನಾಡಿದರೂ ಅದಕ್ಕೆ ಬೇಕಾದ ಪಠ್ಯವನ್ನು ರೂಪಿಸುವಾಗ ಕೋಮುವಾದವನ್ನು ತರಲಾಗುತ್ತದೆ. ಹೀಗಾಗಿ ತುಳುವಿನ ಬಗೆಗಿನ ವಿದ್ವತ್‌ಪೂರ್ಣ ಚರ್ಚೆ ಕಳೆದ ಎರಡು ದಶಕಗಳಿಂದ ತೀರ ಕಡಿಮೆಯಾಗಿದೆ.

ನಮಗೆ ಬೇಕಾದದ್ದು ನಮ್ಮ ಹಿರಿಯರು ನೀಡಿದ ಎಲ್ಲರನ್ನೂ ಒಳಗೊಳ್ಳುವ ತುಳು ಸಂಸ್ಕೃತಿ. ಇದು ಕೇವಲ ತುಳುವಿನ ವಿಚಾರದಲ್ಲಿ ಮಾತ್ರವಲ್ಲ ಇಡೀ ದೇಶದ ವಿಚಾರದಲ್ಲೂ ಮುಖ್ಯವಾಗುತ್ತದೆ! ನನ್ನ ಮನೆಯ ಸಂಸ್ಕೃತಿಯ ಮೂಲಕ ನನ್ನ ದೇಶವನ್ನು ವ್ಯಾಖ್ಯಾನಿಸಲು ಸಾಧ್ಯವಾದರೆ ಅದೇ ನಿಜವಾದ ದೇಶಪ್ರೇಮ. ಹಾಗಾದಾಗ ಮಾತ್ರ ಭಾರತ ನಮ್ಮ ಒಳಗೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.

ಕೋಮುವಾದದಿಂದ ಅಧಃಪತನಕ್ಕೆ ಹೋಗುತ್ತಿರುವ ಭಾರತವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ. ಕವಿರಾಜ ಮಾರ್ಗಕಾರ ಹೇಳುವ “ಕನ್ನಡಂಗಳ” ವೈವಿಧ್ಯತೆಯ ಜೊತೆಗೆ ತುಳು, ಕೊರಗ, ಕೊಡವ ಮೊದಲಾದ ಕರ್ನಾಟಕದ ಭಾಷೆಗಳು ತಮ್ಮ ಅಸ್ತಿತ್ವದ ಬಗ್ಗೆ ದನಿ ಎತ್ತಿವೆ. ಈ ಸಂಸ್ಕೃತಿಗಳು ಕನ್ನಡನಾಡನ್ನು ಬೆಳೆಸಿವೆ. ಕನ್ನಡದ ದನಿಗಳು ತುಳುವಿನವೂ, ಕೊಡವ ಭಾಷೆಯದ್ದೂ, ಅಳಿವಿನಂಚಿನಲ್ಲಿ ಇರುವ ಕೊರಗರದ್ದೂ ಆಗಬೇಕು! ಈ ಪ್ರಜ್ಞೆ ಇಡೀ ಕರ್ನಾಟಕವನ್ನು ವ್ಯಾಪಿಸಬೇಕು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಿದ ಈ ಬಹುಮುಖಿ ನೆಲೆಗಳ ಉಳಿವಿನ ಬಗ್ಗೆ ದನಿ ಎತ್ತುವ ಮೂಲಕ ಪತನಮುಖಿ ಭಾರತದ ಚೈತನ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...