Homeಮುಖಪುಟಕೆಲಸಕ್ಕಾಗಿ ಇಂಟರ್ ವ್ಯೂ ನೀಡುವಾಗ ನೀವು ವಹಿಸಲೇಬೇಕಾದ ಎಚ್ಚರಿಕೆಗಳು

ಕೆಲಸಕ್ಕಾಗಿ ಇಂಟರ್ ವ್ಯೂ ನೀಡುವಾಗ ನೀವು ವಹಿಸಲೇಬೇಕಾದ ಎಚ್ಚರಿಕೆಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-25

ಕೆಲಸದ ಸಂದರ್ಶನ ನೀಡುವ ಕಲೆ

ಇತ್ತೀಚೆಗೆ ಕೆಲಸಗಳು ಸಿಗುವುದು ಕಷ್ಟಕರವಾಗುತ್ತಿದ್ದು, ಒಂದು ಹುದ್ದೆಗೆ ಸಾವಿರವೋ, ಲಕ್ಷವೋ ಅರ್ಜಿಗಳು ಬರುತ್ತವೆ. ಸಂದರ್ಶನಕ್ಕೆ ಕರೆದ ಕಂಪನಿಗಳು ಅರ್ಜಿಯ ಶುಲ್ಕದಿಂದಲೇ ಕೋಟಿಗಟ್ಟಲೆ ಸಂಗ್ರಹಿಸಿ, ನಿರುದ್ಯೋಗಿ ಯುವಕರ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಸುಲಿಯುತ್ತವೆ. ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೂ, ಕೇವಲ ಅರ್ಧ ಅಥವಾ ಒಂದು ನಿಮಿಷದಲ್ಲಿ, ಕಂಪನಿಯ ಹಿರಿಯ ಅಧಿಕಾರಿಗಳು, ನಾಲ್ಕಾರು ಪ್ರಶ್ನೆ ಕೇಳಿ, ಮುಂದಿನ ಅಭ್ಯರ್ಥಿಯನ್ನು ಒಳಗೆ ಕಳುಹಿಸಿ ಎಂದು ಹೇಳಿ ನೌಕರಿ ಕೇಳಲು ಬಂದ ಯುವಜನರನ್ನು ಸಾಗಹಾಕುತ್ತಾರೆ. 1 ನಿಮಿಷದಲ್ಲಿ ಒಬ್ಬ ಯುವಕನ/ಯುವತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಒಳಗೆ ಕುಳಿತಿರುವ ಅಧಿಕಾರಿಗಳಿಗೆ ಹೇಗೆ ಸಾಧ್ಯ, ಸಂದರ್ಶನವೆಲ್ಲಾ ಕೇವಲ ತೋರ್ಪಡಿಕೆ, ಕೆಲಸ ಯಾರಿಗೋ ಮೊದಲೇ ಒಳಗಿಂದೊಳಗೆ ಇತ್ಯರ್ಥವಾಗಿರುತ್ತದೆ ಎಂದು ನಿಮಗೆ ಅನಿಸಿಕೆ ಇರಬಹುದು.

ಹಾಗಾದರೆ ಯುವಕರು ಕೆಲಸಕ್ಕೆ ಅರ್ಜಿ ಸಲ್ಲಿಸಿ, ಪ್ರಾಮಾಣಿಕವಾಗಿ ಕೆಲಸ ಗಿಟ್ಟಿಸಿಕೊಳ್ಳುವುದನ್ನು ಖಾತರಿ ಪಡಿಸಿಕೊಳ್ಳುವುದು ಹೇಗೆ?

ಬಹುಶಃ ನೀವು ದಿನಾ ಟಿವಿ/ರೇಡಿಯೋ ನೋಡುತ್ತೀರಿ/ಕೇಳುತ್ತೀರಿ ಮತ್ತು ಅದರಲ್ಲಿ ಬರುವ ಎಷ್ಟೋ ಜಾಹಿರಾತುಗಳು ಚಿಕ್ಕಂದಿನಿಂದ ನಿಮ್ಮ ಗಮನ ಸೆಳೆದಿವೆ ಎಂದು ನಂಬಿದ್ದೇನೆ. ಸರಾಸರಿ ಒಂದು ಜಾಹಿರಾತಿನ ಸಮಯ ಎಷ್ಟಿರುತ್ತದೆ ಎಂದು ನಿಮಗೆ ಗೊತ್ತೇ? ಕೇವಲ 10 ಸೆಕೆಂಡು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ಇದಕ್ಕಿಂತ ಹೆಚ್ಚಿನ ಸಮಯದ ಜಾಹಿರಾತುಗಳೂ ಬರುತ್ತವೆ ಆದರೆ ಅವಕ್ಕೆ ಪ್ರತಿ ಹತ್ತು ಅಥವಾ ಐದು ಸೆಕೆಂಡಿಗೆ ಇನ್ನಷ್ಟು ಹಣ ಕಂಪನಿಯವರು ಟಿವಿ/ರೇಡಿಯೋ ರವರಿಗೆ ತೆರಬೇಕು.

ಕೇವಲ 10 ಸೆಕೆಂಡು? ಇಷ್ಟು ಕಡಿಮೆ ಸಮಯದಲ್ಲಿ ಒಂದು ವಸ್ತುವಿನ ಬಗ್ಗೆ ಗ್ರಾಹಕರ ಮನದಲ್ಲಿ ಛಾಪು ಮೂಡಿಸುವಂತೆ ಸಂದೇಶ ತಲುಪಿಸಲು ಸಾಧ್ಯವೇ ಎಂದು ನಿಮಗೆ ಅನಿಸಬಹುದು. ಆದರೆ ಅದು ದಿನನಿತ್ಯ ನಡೆಯುತ್ತಿರುತ್ತದೆ.  ಅದೇ ಒಂದು ನಿಮಿಷದಲ್ಲಿ, ಹತ್ತು ಸೆಕೆಂಡುಗಳ ಆರು ಟಿವಿ ಜಾಹಿರಾತು ನಿಮ್ಮ ಬಗ್ಗೆಯೇ ಇದ್ದರೆ, ನಿಮ್ಮ ಬಗ್ಗೆ ಒಳ್ಳೆಯ ಪ್ರಚಾರ ಮಾಡುವಂತಿದ್ದರೆ, ನಿಮ್ಮ ಕೆಲಸ ಗ್ಯಾರಂಟಿ ಪಡಿಸಿಕೊಳ್ಳಬಹುದು ಎಂದು ನಿಮಗೆ ಅನಿಸುವುದಿಲ್ಲವೇ?

ಇಲ್ಲಿದೆ ಕೆಲವು ಸುಲಭ ಉಪಾಯ.

ಸಂದರ್ಶನಕ್ಕೆ ಬಂದಾಗ ನಿಮ್ಮ ಹಸ್ತಲಿಖಿತ ಅರ್ಜಿ ಜೊತೆಯಲ್ಲಿ ತಂದಿದ್ದರೆ, ಅಥವಾ ಅದನ್ನು ಕಂಪನಿಗೆ ಮುಂಚಿತವಾಗಿ ಕಳುಹಿಸುವಾಗ, ಅದರಲ್ಲಿ ಯಾವುದೇ ತಪ್ಪು, ತಿದ್ದುಪಡಿಗಳಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಕ್ಷರ ಕೆಟ್ಟದಾಗಿರುವ, ತಪ್ಪು-ತಿದ್ದುಪಡಿ ಇರುವ ಲಿಖಿತ ಅರ್ಜಿಗಳು ನಿಮ್ಮ ಸ್ವಯಂನಿರ್ಮಿತ ನೇಣುಗಂಬ.

ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿ. ಸಂದರ್ಶನದ ಸಮಯ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ಎಂದು ಇದ್ದಲ್ಲಿ, ನೀವು ಬೆಳಿಗ್ಗೆ 9.00ರ ಮುಂಚೆ ಸ್ಥಳದಲ್ಲಿರಿ. ನಿಮ್ಮ ಆಗಮನದ ಸಮಯವನ್ನು ಎಲ್ಲೋ ಒಂದು ಕಡೆ ಗುರುತು ಹಾಕಿಕೊಳ್ಳಲಾಗಿರುತ್ತದೆ. ನಿಮ್ಮ ಸಮಯ ಪ್ರಜ್ಞೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಯಾರೋ ನೋಂದಾಯಿಸಿಕೊಳ್ಳುತ್ತಿರುತ್ತಾರೆ.

ಸಂದರ್ಶನಕ್ಕೆ ಬಂದಾಗ ನಿಮ್ಮ ವೇಷಭೂಷ ಕೆಲಸಕ್ಕೆ ತಕ್ಕಂತೆ ಇರಲಿ. ನಿಮ್ಮ ವೇಷಭೂಷ, ಹಾವಭಾವ ನಿಮಗಿಂತ ಹೆಚ್ಚು ಮಾತನಾಡುತ್ತವೆ. ನೀವು ಕಾಯಲು ಕುಳಿತಿರುವ ಶೈಲಿಯೂ ನಿಮ್ಮ ಬಗ್ಗೆ ಸಾರಿ ಹೇಳುತ್ತಿರುತ್ತದೆ.

ಎಲ್ಲರೂ ಒಂದೆಡೆ ಗುಂಪಾಗಿ ಕುಳಿತಿರುವಾಗ, ನೀವು ದೂರದಲ್ಲಿ ಒಂಟಿ ಕುರ್ಚಿಯಲ್ಲಿ ಹೋಗಿ ಕುಳಿತುಕೊಳ್ಳಬೇಡಿ. ಇದೂ ನಿಮ್ಮ ಬಗ್ಗೆ ಅಪಪ್ರಚಾರ.

ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು ಕಾಯಲು ವಿಶಾಲವಾದ ಕೊಠಡಿಯಲ್ಲಿ ಕುರ್ಚಿಗಳ ವ್ಯವಸ್ಥೆ ಇದೆ ಮತ್ತು ಅಲ್ಲಿ ಹೋಗಿ ಕೂತು, ಕಾಯಲು ನಿಮಗೆ ತಿಳಿಸಲಾಗಿದೆ ಎಂದುಕೊಳ್ಳಿ, ಆಗ ಅದನ್ನು ಬಿಟ್ಟು ಬೇರೆ ಸ್ಥಳದಲ್ಲಿ ನಿಂತು, ಬೇರೆ ಕೊಠಡಿಗಳಲ್ಲಿ ಇಣುಕಿ, ನಿಮ್ಮ ಮುಖ ತೋರಿಸಲು ಹೋಗಬೇಡಿ. ಇದೂ ಸಹ ನಿಮ್ಮ ಬಗ್ಗೆ ಅಪಪ್ರಚಾರವಾಗುತ್ತದೆ.

ಕಾಯುವ ಕೊಠಡಿ (ವೇಟಿಂಗ್ ರೂಂ) ನಲ್ಲಿ ಒಂದೆಡೆ ಕುಡಿಯುವ ನೀರು ಇಡಲಾಗಿದೆ ಮತ್ತು ಕುಡಿದ ಲೋಟ ಎಸೆಯಲು ಕಸದ ಪೆಟ್ಟಿಗೆ ಇದ್ದರೆ ಅದರಲ್ಲಿ ಸರಿಯಾಗಿ ಕಸವನ್ನು ಹಾಕಿ, ಇನ್ನೆಲ್ಲೋ ಎಸೆಯಬೇಡಿ.

ಅಲ್ಲಿ ನೀರು ಕುಡಿಯಲು ಲೋಟ ಇಟ್ಟಿಲ್ಲ ಎಂದುಕೊಳ್ಳಿ, ಎಲ್ಲರೂ ಮುಖ-ಮುಖ ನೋಡಿಕೊಳ್ಳುತ್ತಾ ಕುಳಿತಿರಬೇಡಿ, ನೀವು ಮೊದಲ ಹೆಜ್ಜೆ (ಇನಿಷಿಯೇಟಿವ್) ತೆಗೆದುಕೊಂಡು, ನೀರಿನ ಲೋಟ ಬೇಕೆಂದು ಸ್ವಾಗತಕಾರರ ಕಚೇರಿಯಲ್ಲಿ ಕೇಳಿ, ತಂದಿಡಿ.

ಕಾಯುವ ಕೊಠಡಿಯಲ್ಲಿ ಒಂದು ತಟ್ಟೆಯಲ್ಲಿ ಚಾಕಲೇಟ್ ಇಟ್ಟಿದ್ದಾರೆ ಮತ್ತು ಅಲ್ಲಿ ಅದನ್ನು ನೋಡಿಕೊಳ್ಳಲು ಯಾರೂ ಇಲ್ಲಎಂದುಕೊಳ್ಳಿ. ಸಮಯ ನೋಡಿ ಒಂದಿಷ್ಟು ಚಾಕಲೇಟ್ ನಿಮ್ಮ ಕಿಸೆಗೆ ಸೇರಿಸಿಕೊಳ್ಳಬೇಡಿ. ಮೊದಲೇ ತಿಳಿಸಿದಂತೆ ಕಾಣದ ಕಣ್ಣುಗಳು ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಿರುತ್ತವೆ.

ನೀವು ಕೆಲಸಕ್ಕೆ ಅರ್ಜಿ ಹಾಕಿರುವ ಕಂಪನಿಯ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿ, ಅವರ ಸಾಧನೆಗಳೇನು, ಅವರ ಶಕ್ತಿ ಏನು, ಅವರ ದುರ್ಬಲತೆ ಏನು ಎಂಬ ಬಗ್ಗೆ ಅಥವಾ ಅವರು ಇರುವ ಕ್ಷೇತ್ರದ ಮುನ್ನೋಟ ಏನು ಎಂಬುದರ ಬಗ್ಗೆ ಅಂತರ್ಜಾಲ ಶೋಧಿಸಿ ತಿಳಿದುಕೊಳ್ಳಿ. ಎಷ್ಟೋ ಬಾರಿ ಕಂಪನಿಯ ಈ ರೀತಿಯ ಮಾಹಿತಿ ಪತ್ರಗಳನ್ನು ಸಂದರ್ಶನದ ಕಾಯುವ ಕೊಠಡಿಯಲ್ಲಿ ಇಟ್ಟಿರುತ್ತಾರೆ ಅಥವಾ ಫಲಕದಲ್ಲಿ ಹಾಕಿರುತ್ತಾರೆ. ಅದನ್ನು ಗಮನವಿಟ್ಟು ಓದಿ.

ಸಂದರ್ಶನ ಒಂದು ವ್ಯಾವಹಾರಿಕ ಭೇಟಿ, ಅಲ್ಲಿ ನಿಮ್ಮ ನೆಂಟಸ್ತನ ತೋರಿಸಲು ಹೋಗಬೇಡಿ, ನನಗೆ ಅವರು ಗೊತ್ತು, ಇವರು ಗೊತ್ತು, ಅವರು ನನ್ನ ಸಂಬಂಧಿ ಎಂಬ ಅನಾವಶ್ಯಕ ಬುರುಡೆ ಬಿಡಬೇಡಿ.

ಹೆಚ್ಚು ಮಾತನಾಡಬೇಡಿ, ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಕಲಿಯಿರಿ.

ಕೆಲಸ ನಿಮಗೆ ಅತ್ಯವಶ್ಯಕವಾಗಿದೆ, ಇಲ್ಲದಿದ್ದರೆ ನೀವು ಉಪವಾಸ ಸಾಯುವ ಪರಿಸ್ಥಿತಿ ಇದೆ ಎಂದು ಖಂಡಿತಾ ಹೇಳಬೇಡಿ. ಯಾರೂ ಕನಿಕರ ತೋರಿಸಿ ನಿಮಗೆ ನೌಕರಿ ನೀಡುವುದಿಲ್ಲ.

ಸಂದರ್ಶನಕ್ಕೆ ಬೆಳಿಗ್ಗೆ ಕರೆದು, ಸಂಜೆಯ ತನಕ ಕಾಯಿಸಿದರು ಎಂದುಕೊಳ್ಳಿ, ನಿಮ್ಮ ಕೋಪ, ಹಸಿವು, ತಾಪದ ಮನಃಸ್ಥಿತಿಯನ್ನು ಸಂದರ್ಶನಕಾರರ ಮೇಲೆ ತೀರಿಸಿಕೊಳ್ಳಬೇಡಿ. ಬಡವನ ಸಿಟ್ಟು ದವಡೆಗೆ ಮೂಲ ಎಂಬ ಗಾದೆ ಕೇಳಿರಬಹುದು. ಅಭ್ಯರ್ಥಿಗಳನ್ನು ಕಾಯಿಸುವುದು ಅವರ ಪ್ರತಿಕ್ರಿಯೆ/ನಡವಳಿಕೆ ತಿಳಿದುಕೊಳ್ಳುವ ಒಂದು ವಿಧಾನ.

ಕಂಪನಿಯ ಬಗ್ಗೆ, ಕೆಲಸದ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲದಿದ್ದಲ್ಲಿ ಅಥವಾ ಕೆಲಸದ ಸಮಯ, ಸಂಬಳ ಇತ್ಯಾದಿಗಳ ಬಗ್ಗೆ ಬೇಕಿದ್ದರೆ, ನೀವೂ ಪ್ರಶ್ನೆ ಕೇಳಿ. ಪ್ರಶ್ನೆ ಕೇಳುವ ಅಧಿಕಾರ ನಿಮಗೂ ಇದೆ. ಆದರೆ ಸೌಜನ್ಯಪೂರ್ವಕವಾಗಿ ಮಾತನಾಡಿ.

ನಿಮ್ಮ ಬಗ್ಗೆ ನಿಮಗೇ ಸರಿಯಾದ ಅರಿವು ಇರಲಿ. “ನಿಮ್ಮ ಬಗ್ಗೆ ಏನಾದರೂ ಹೇಳಿ” ಎಂದು ಸಂದರ್ಶನಕಾರರು ಕೇಳಿದಾಗ ಕಕ್ಕಾಬಿಕ್ಕಿಯಾಗಬೇಡಿ. ನಿಮ್ಮ ಶಕ್ತಿಗಳ ಬಗ್ಗೆ, ಆಸಕ್ತಿ, ಆಕಾಂಕ್ಷೆಗಳ ಬಗ್ಗೆ ತಿಳಿಸಿ. ನೀವಾಗೇ ಹೇಳದಿದ್ದರೂ, ನಿಮ್ಮ ದೌರ್ಬಲ್ಯವೇನು ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನು ಅವರು ಇಟ್ಟುಕೊಂಡಿರುತ್ತಾರೆ, ಹಾಗಾಗಿ ಅವರೇ ಮುಂದಾಗಿ ನಿಮ್ಮ ದೌರ್ಬಲ್ಯದ ಬಗ್ಗೆ ಕೇಳಿದಲ್ಲಿ ಅದನ್ನು ನೀವು ಹೇಗೆ ಹೋಗಲಾಡಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ತಿಳಿಸಿ.

ಸಾವಿರ ಅರ್ಜಿದಾರರ ಪೈಕಿ ಕೆಲಸ ಪಡೆದ ಏಕೈಕ ಅಭ್ಯರ್ಥಿ ನೀವಾಗಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...