Homeಕರ್ನಾಟಕಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು!...

ಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು! ನಾಳೆ ಏನಾಗಲಿದೆ?

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ರಮೇಶಕುಮಾರ್ ಅವರು ಇಂದು ರವಿವಾರ ನೀಡಿದ ತೀರ್ಪು ಮತ್ತೆ 14 ಶಾಸಕರಿಗರನ್ನು ತಲ್ಲಣಗೊಳಿಸಿ ಬಿಟ್ಟಿದೆ. ಮುಂಬೈ, ಪೂಣೆಯಲ್ಲಿ ಈಗ ಸುರಿಯುತ್ತಿರುವ ಮಳೆ ನೀಡುತ್ತಿರುವ ತಂಪು ಮತ್ತು ಅಲ್ಲಿನ ಐಷಾರಾಮಿ ಹೊಟೆಲ್‍ಗಳಲ್ಲಿ ಇರುವ ಎ.ಸಿ.ಯ ನಡುವೆಯೂ ಅತೃಪ್ತ ಶಾಸಕರು ಮೈ ಮನಸ್ಸುಗಳೆಲ್ಲ ಬೆವರಿನಿಂದ ಒದ್ದೆಯಾಗಿವೆ.

ಹೇಗೂ ನಮ್ಮ ಸರ್ಕಾರವೇ, ಈ ಅತೃಪ್ತರು ಅನರ್ಹಗೊಂಡ ಕಾರಣಕ್ಕೆ ನಮ್ಮ ಶಾಸಕರಿಗೆ ಸಚಿವಗಿರಿ ಕೊಡಬಹುದು ಎಂದು ಒಳಗಡೆ ಖುಷಿ ಪಡುತ್ತಿರುವ ಬಿಜೆಪಿ, ಇದು ಅನ್ಯಾಯ ಎಂದೆಲ್ಲ ಅತೃಪ್ತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಇಂದಿನ ‘ಸ್ವಾರ್ಥಕ್ಕಾಗಿ ಬೆನ್ನಿಗೆ ಚೂರಿ ಹಾಕುವ’ ಮೋದಿ-ಶಾಗಳ ರಾಜಕೀಯದ ಮುಂದುವರಿಕೆಯ ಸ್ಯಾಂಪಲ್ ಆಗಿದೆ…..

ಮೊನ್ನೆ ಮುಂಬೈಯಿಂದ ಓಡೋಡಿ ಬಂದು ಯಲ್ಲಪುರದ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ‘ವ್ಯವಹಾರ’ ಮುಗಿಸಿಕೊಂಡು ಮತ್ತೆ ಮುಂಬೈಗೋ. ಪುಣೈಗೋ ಪಲಾಯನ ಮಾಡಿದ ಅಲ್ಲಿನ ಶಾಸಕ ಶಿವರಾಮ್ ಹೆಬ್ಬಾರ್ ನಾಳೆ ಮುಂಜಾನೆ ಯಲ್ಲಾಪುರದ ಯಾವ ಕಚೇರಿಗೆ ಹೋದರೂ ಕವಡೆ ಕಾಸಿನ ಕಿಮ್ಮತ್ತೇ ಇಲ್ಲ!

ಇದು ಸೋಮಶೇಖರ್, ಬೈರತಿ ಬಸವರಾಜು, ವಿಶ್ವನಾಥ್, ಮುನಿರತ್ನ ಇತ್ಯಾದಿ ಎಲ್ಲರಿಗೂ ಅನ್ವಯವೇ! ಸ್ಪೀಕರ್ ರಮೇಶಕುಮಾರ್ ಕೊಟ್ಟ ಶಾಕೇ ಹಾಗಿದೆ. ಬಿಜೆಪಿಯ ಮಾತು ಕೇಳಿಕೊಂಡು ಸರ್ಕಾರ ಬೀಳಿಸಲು ‘ಮಹತ್ತರ’ ಪಾತ್ರ ವಹಿಸಿದ್ದ 17 ಶಾಸಕರಿಗೆ ಇನ್ನು ಕನಿಷ್ಠ 4 ವರ್ಷಗಳ ಕಾಲ ಅವರದೇ ಕ್ಷೇತ್ರಗಳಲ್ಲಿ ಸಾರ್ವಜನಿಕ ಮಾನ್ಯತೆಯೇ ಇಲ್ಲ. ಈಗ ಅವರು ಕರ್ನಾಟಕಕ್ಕೆ ಬರಲೇಬೇಕು. ಬಹುಷ: ಅವರ ಕುಟುಂಬದವರನ್ನು ಬಿಟ್ಟರೆ ಅವರನ್ನು ಸ್ವಾಗತಿಸಲು ಕೆಲವು ಹುಂಬಾತಿಹುಂಬ ಕಾರ್ಯಕರ್ತರನ್ನು ಬಿಟ್ಟರೆ ಮತ್ಯಾರು ಇಲ್ಲಿ ಇರಲ್ಲ.

ನಾಳೆ ಏನಾಗಬಹುದು?
17 ಶಾಸಕರ ಅನರ್ಹತೆಯ ಕಾರಣಕ್ಕೆ ಈಗ ಸದನದ ಸದಸ್ಯರ ಸಂಖ್ಯೆ 207. ಬಹುಮತ ಸಾಬೀತಿಗೆ 104 ಸಂಖ್ಯೆ ಸಾಕು. ಈಗಾಗಲೇ ಬಿಜೆಪಿಗೆ 105 ಶಾಸಕರ ಸಂಖ್ಯೆ ಇರುವುದರಿಂದ ವಿಶ್ವಾಸಮತ ಗೆಲ್ಲಬಹುದು. ಆದರೆ, ಇತ್ತ ಅತೃಪ್ತರಾಗೇ ಉಳಿದುಬಿಟ್ಟ ಶಾಸಕರ (ಇವರೀಗ ಶಾಸಕರೇ ಅಲ್ಲ ಬಿಡಿ..), ಅಲ್ಲ ಮಹಾಮಹಿಮರನ್ನು ಬಿಜೆಪಿ ಸಮಾಧಾನ ಮಾಡಬೇಕು. ಈ ಗದ್ದಲದಲ್ಲಿ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ಕೈ ಹಾಕಿಬಿಟ್ಟರೆ ಬಿಜೆಪಿ ಸಂಕಟಕ್ಕೆ ಸಿಲುಕುವುದಂತೂ ಸತ್ಯ.

ಆದರೆ, ಒಟ್ಟಿನಲ್ಲಿ ಸ್ಪೀಕರ್ ರಮೇಶಕುಮಾರ್ ಅವರ ನಿರ್ಧಾರ ಸಾಮಾನ್ಯ ಮತದಾರರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಖುಷಿ ಕೊಟ್ಟೇ ಇದೆ. ವಿಚಿತ್ರ ಎಂದರೆ ಬಿಜೆಪಿಗೂ ಒಂದರ್ಥದಲ್ಲಿ ಇದು ಖುಷಿಯ ವಿಷಯವೇ. ಅಂದರೆ ಈಗ ಅನರ್ಹಗೊಂಡವರೆಲ್ಲ ಅಂತರ್ ಪಿಶಾಚಿಗಳು ಅಷ್ಟೇ… ಅವರಿಗಿರುವ ಏಕೈಕ ದಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...