Homeಕರ್ನಾಟಕಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು!...

ಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು! ನಾಳೆ ಏನಾಗಲಿದೆ?

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ರಮೇಶಕುಮಾರ್ ಅವರು ಇಂದು ರವಿವಾರ ನೀಡಿದ ತೀರ್ಪು ಮತ್ತೆ 14 ಶಾಸಕರಿಗರನ್ನು ತಲ್ಲಣಗೊಳಿಸಿ ಬಿಟ್ಟಿದೆ. ಮುಂಬೈ, ಪೂಣೆಯಲ್ಲಿ ಈಗ ಸುರಿಯುತ್ತಿರುವ ಮಳೆ ನೀಡುತ್ತಿರುವ ತಂಪು ಮತ್ತು ಅಲ್ಲಿನ ಐಷಾರಾಮಿ ಹೊಟೆಲ್‍ಗಳಲ್ಲಿ ಇರುವ ಎ.ಸಿ.ಯ ನಡುವೆಯೂ ಅತೃಪ್ತ ಶಾಸಕರು ಮೈ ಮನಸ್ಸುಗಳೆಲ್ಲ ಬೆವರಿನಿಂದ ಒದ್ದೆಯಾಗಿವೆ.

ಹೇಗೂ ನಮ್ಮ ಸರ್ಕಾರವೇ, ಈ ಅತೃಪ್ತರು ಅನರ್ಹಗೊಂಡ ಕಾರಣಕ್ಕೆ ನಮ್ಮ ಶಾಸಕರಿಗೆ ಸಚಿವಗಿರಿ ಕೊಡಬಹುದು ಎಂದು ಒಳಗಡೆ ಖುಷಿ ಪಡುತ್ತಿರುವ ಬಿಜೆಪಿ, ಇದು ಅನ್ಯಾಯ ಎಂದೆಲ್ಲ ಅತೃಪ್ತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಇಂದಿನ ‘ಸ್ವಾರ್ಥಕ್ಕಾಗಿ ಬೆನ್ನಿಗೆ ಚೂರಿ ಹಾಕುವ’ ಮೋದಿ-ಶಾಗಳ ರಾಜಕೀಯದ ಮುಂದುವರಿಕೆಯ ಸ್ಯಾಂಪಲ್ ಆಗಿದೆ…..

ಮೊನ್ನೆ ಮುಂಬೈಯಿಂದ ಓಡೋಡಿ ಬಂದು ಯಲ್ಲಪುರದ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ‘ವ್ಯವಹಾರ’ ಮುಗಿಸಿಕೊಂಡು ಮತ್ತೆ ಮುಂಬೈಗೋ. ಪುಣೈಗೋ ಪಲಾಯನ ಮಾಡಿದ ಅಲ್ಲಿನ ಶಾಸಕ ಶಿವರಾಮ್ ಹೆಬ್ಬಾರ್ ನಾಳೆ ಮುಂಜಾನೆ ಯಲ್ಲಾಪುರದ ಯಾವ ಕಚೇರಿಗೆ ಹೋದರೂ ಕವಡೆ ಕಾಸಿನ ಕಿಮ್ಮತ್ತೇ ಇಲ್ಲ!

ಇದು ಸೋಮಶೇಖರ್, ಬೈರತಿ ಬಸವರಾಜು, ವಿಶ್ವನಾಥ್, ಮುನಿರತ್ನ ಇತ್ಯಾದಿ ಎಲ್ಲರಿಗೂ ಅನ್ವಯವೇ! ಸ್ಪೀಕರ್ ರಮೇಶಕುಮಾರ್ ಕೊಟ್ಟ ಶಾಕೇ ಹಾಗಿದೆ. ಬಿಜೆಪಿಯ ಮಾತು ಕೇಳಿಕೊಂಡು ಸರ್ಕಾರ ಬೀಳಿಸಲು ‘ಮಹತ್ತರ’ ಪಾತ್ರ ವಹಿಸಿದ್ದ 17 ಶಾಸಕರಿಗೆ ಇನ್ನು ಕನಿಷ್ಠ 4 ವರ್ಷಗಳ ಕಾಲ ಅವರದೇ ಕ್ಷೇತ್ರಗಳಲ್ಲಿ ಸಾರ್ವಜನಿಕ ಮಾನ್ಯತೆಯೇ ಇಲ್ಲ. ಈಗ ಅವರು ಕರ್ನಾಟಕಕ್ಕೆ ಬರಲೇಬೇಕು. ಬಹುಷ: ಅವರ ಕುಟುಂಬದವರನ್ನು ಬಿಟ್ಟರೆ ಅವರನ್ನು ಸ್ವಾಗತಿಸಲು ಕೆಲವು ಹುಂಬಾತಿಹುಂಬ ಕಾರ್ಯಕರ್ತರನ್ನು ಬಿಟ್ಟರೆ ಮತ್ಯಾರು ಇಲ್ಲಿ ಇರಲ್ಲ.

ನಾಳೆ ಏನಾಗಬಹುದು?
17 ಶಾಸಕರ ಅನರ್ಹತೆಯ ಕಾರಣಕ್ಕೆ ಈಗ ಸದನದ ಸದಸ್ಯರ ಸಂಖ್ಯೆ 207. ಬಹುಮತ ಸಾಬೀತಿಗೆ 104 ಸಂಖ್ಯೆ ಸಾಕು. ಈಗಾಗಲೇ ಬಿಜೆಪಿಗೆ 105 ಶಾಸಕರ ಸಂಖ್ಯೆ ಇರುವುದರಿಂದ ವಿಶ್ವಾಸಮತ ಗೆಲ್ಲಬಹುದು. ಆದರೆ, ಇತ್ತ ಅತೃಪ್ತರಾಗೇ ಉಳಿದುಬಿಟ್ಟ ಶಾಸಕರ (ಇವರೀಗ ಶಾಸಕರೇ ಅಲ್ಲ ಬಿಡಿ..), ಅಲ್ಲ ಮಹಾಮಹಿಮರನ್ನು ಬಿಜೆಪಿ ಸಮಾಧಾನ ಮಾಡಬೇಕು. ಈ ಗದ್ದಲದಲ್ಲಿ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ಕೈ ಹಾಕಿಬಿಟ್ಟರೆ ಬಿಜೆಪಿ ಸಂಕಟಕ್ಕೆ ಸಿಲುಕುವುದಂತೂ ಸತ್ಯ.

ಆದರೆ, ಒಟ್ಟಿನಲ್ಲಿ ಸ್ಪೀಕರ್ ರಮೇಶಕುಮಾರ್ ಅವರ ನಿರ್ಧಾರ ಸಾಮಾನ್ಯ ಮತದಾರರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಖುಷಿ ಕೊಟ್ಟೇ ಇದೆ. ವಿಚಿತ್ರ ಎಂದರೆ ಬಿಜೆಪಿಗೂ ಒಂದರ್ಥದಲ್ಲಿ ಇದು ಖುಷಿಯ ವಿಷಯವೇ. ಅಂದರೆ ಈಗ ಅನರ್ಹಗೊಂಡವರೆಲ್ಲ ಅಂತರ್ ಪಿಶಾಚಿಗಳು ಅಷ್ಟೇ… ಅವರಿಗಿರುವ ಏಕೈಕ ದಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...