Homeಕರ್ನಾಟಕಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

ಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

1992 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡು ಅದು ಹೆಚ್ಚಾಗುತ್ತಾ ಇದ್ದು, ಈಗ ಹುಣ್ಣು ಆಗಿ, ಕೀವು ಆಗುತ್ತಿದೆ ಎಂದು ಅವರು ಹೇಳಿದರು

- Advertisement -
- Advertisement -

ಭಾಷೆಗಳು ಸಾಯುತ್ತಿದ್ದಾಗ ಭಾಷೆಗೆ ಸಂಬಂಧ ಪಟ್ಟಂತಹ ಸಂಘ-ಸಂಸ್ಥೆಗಳು ಏನು ಮಾಡುತ್ತಿವೆ ಎಂಬುವುದು ಬಹಳ ಮುಖ್ಯವಾದ ಪ್ರಶ್ನೆಯಾಗಿದ್ದು, ಕಾಟಾಚಾರಕ್ಕೆ ಯಾವುದೋ ಕಾರ್ಯಕ್ರಮಗಳನ್ನು ಮಾಡಿದರೆ ಅದನ್ನು ಬಹಿಷ್ಕರಿಸುವುದೇ ಸರಿ ಎಂದು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಜೆಎನ್‌ಯು ನಿವೃತ್ತ ಪ್ರಾದ್ಯಾಪಕ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಭಾನುವಾರ ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

“ಅಲ್ಲಿ ಹೋಗಿ ಏನು ಮಾಡುವುದಿದೆ? ಅಲ್ಲಿಗೆ ಹೋಗಬೇಕಾಗಿಲ್ಲ. ಹಾಗಾಗಿ ಜನಸಾಹಿತ್ಯ ಸಮ್ಮೇಳನದಂತಹ ಸಮಾವೇಶಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಲ್ಲಿ ಏರ್ಪಡಿಸುವುದರ ಜೊತೆಗೆ ಕರ್ನಾಟಕಕ್ಕೆ ಅತ್ಯಗತ್ಯವಾದ ಭಾಷಾ ನೀತಿಯನ್ನು ರೂಪಿಸುವ ಹಾಗೆ ಸರ್ಕಾರ, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮೇಲೆ ನಾವು ಒತ್ತಡ ಹಾಕಬೇಕಾಗಿದೆ” ಎಂದು ಅವರು ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚೆ ಮಾಡಲು ಸೂಕ್ತ ವೇದಿಕೆ ಇಲ್ಲ. ವಿಶ್ವವಿದ್ಯಾಲಯಗಳು, ಸರ್ಕಾರದಿಂದ ಅನುದಾನ ಪಡೆಯುವ ಇತರ ಅಕಾಡೆಮಿಗಳು ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಏನಾಗುತ್ತಿದೆ ಎಂಬುವುದನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಹೇಳಬೇಕಾಗಿತ್ತು. ಆದರೆ ಇಂದಿನ “ಹಾವೇರಿ ಸಾಹಿತ್ಯ ಸಮ್ಮೇಳನ ಕಾಟಾಚಾರದ ಸಮ್ಮೇಳನ”ಳಾಗಿವೆ. ಅವರು ಕರ್ನಾಟದ ಭವಿಷ್ಯವನ್ನು ಕಟ್ಟುವುದಕ್ಕೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಮಾರ್ಗದರ್ಶನ ಮಾಡಬಲ್ಲಂತಹ ಯಾವ ವಿಚಾರಗಳನ್ನು ಕೂಡಾ ಒಳಗೊಂಡಿಲ್ಲ ಎಂದು ಪ್ರೊ. ಬಿಳಿಮಲೆ ಹೇಳಿದರು.

2011 ರ ಜನಗಣತಿಯ ಪ್ರಕಾರ ಭಾರತದ ದೇಶದಲ್ಲಿ ತಾಯಿನುಡಿಗಳ ಸಂಖ್ಯೆ 19,659. ಇವುಗಳಲ್ಲಿ ನಮ್ಮ ದೇಶದ ಸಂವಿಧಾನ ಅಂಗೀಕರಿಸಿದ ಭಾಷೆಗಳು 22 ಆಗಿದೆ. ಈ 22 ಭಾಷೆಗಳಲ್ಲಿ ಉತ್ತರ ಭಾರತದ ಭಾಷೆಗಳು 18 ದಕ್ಷಿಣ ಭಾರತದ ಭಾಷೆಗಳು ಕೇವಲ 4. ಆದರೆ ಕರ್ನಾಟಕ ಒಂದರಲ್ಲೇ 72 ಭಾಷೆಗಳಿವೆ. ಇವುಗಳಲ್ಲಿ ಅನೇಕ ಭಾಷೆಗಳು ಅವಸಾನದತ್ತ ಚಲಿಸುತ್ತಾ ಇವೆ. 1871 ರಲ್ಲೇ 58 ಸಾವಿರದಷ್ಟು ಕೊರಗ ಭಾಷೆ ಮಾತನಾಡುತ್ತಿದ್ದ ಜನರ ಸಂಖ್ಯೆ 3 ಸಾವಿರಕ್ಕೆ ತಲುಪಿದೆ. ಅದಲ್ಲದೆ ಕೊರಗ ಸಮುದಾಯದ ಸಂಖ್ಯೆ ಕೂಡಾ 11 ಸಾವಿರಕ್ಕೆ ತಲುಪಿದೆ ಎಂದು ಅವರು ವಿಷಾದಿಸಿದರು.

ಕರ್ನಾಟಕದ ಜೀವ ಚೈತನ್ಯವಾಗಿದ್ದ ಭಾಷೆ ನಮ್ಮ ಮುಂದೆಯೆ ಪತನಮುಖಿಯಾಗುತ್ತಿದ್ದಾಗ ಪರಿಷತ್ತು ಹಾಗೂ ಅಕಾಡೆಮಿಗಳು ಇದರ ಬಗ್ಗ ಯೋಚನೆ ಮಾಡಿ ವಿದ್ವಾಂಸರನ್ನು ಕರೆಸಿ, ಚರ್ಚೆ ಮಾಡಿ ಈ ಭಾಷೆಯನ್ನು ಉಳಿಸುವ ಬಗೆ ಹೇಗೆ ಎಂಬುದಕ್ಕೆ ಸೂಕ್ತವಾದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕೊಟ್ಟು ಸರ್ಕಾರದಿಂದ ಅವುಗಳನ್ನು ಇಂಪ್ಲಿಮೆಂಟ್ ಆಗುವ ಹಾಗೆ ಮಾಡಬೇಕು. ಇವು ಸ್ವಾಯತ್ತ ಸಂಸ್ಥೆಗಳ ಕೆಲಸ. ಆದರೆ ಅಲ್ಲಿರುವವರು ಅವುಗಳನ್ನು ಮಾಡದೆ, ತಮಗೆ ಮಂತ್ರಿ ಪದವಿಯ ಸಮಾನವಾದ ಸ್ಥಾನಮಾನ ಬೇಕು ಎಂದು ಅದನ್ನು ಪತ್ರಿಕೆ ಹಾಗೂ ಲೆಟರ್‌ಹೆಡ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಹಿತಿಗಳು ಹಾಗೂ ಕಲಾವಿದರು ನಾಚಿಕೊಳ್ಳಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“2011 ಜನಗಣತಿಯ ಪ್ರಕಾರ ತುಳು, ಕೊಡವ, ಬಂಜಾರ ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೇಳುತ್ತಿವೆ. ಒಟ್ಟು 99 ಭಾಷೆಗಳು ಇವತ್ತು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೋರಾಟ ಮಾಡುತ್ತಿವೆ. ಉರ್ದು ವಿಚಾರ ಹೇಳಬೇಕಾದರೆ, ಅದು ಕರ್ನಾಟಕದ ದಖ್ಖನಿ ಭಾಷೆ. ಈಗ ಅದು ವಿಶ್ವದ ಭಾಷೆಯಾಗಿದೆ. ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಭಾಷೆ. ನಮ್ಮದಲ್ಲದ ಸಂಸ್ಕೃತ ಭಾಷೆ ಆಗುತ್ತದೆ, ಆದರೆ ನಮ್ಮದೆ ಭಾಷೆಯಾದ ಉರ್ದು ಯಾಕೆ ಆಗಬಾರದು? ಇವೆಲ್ಲವೂ ನಮ್ಮ ಸಣ್ಣತನ ಎಂದು ಅವರು ಹೇಳಿದರು.

ನಾನೇನು ಸಂಸ್ಕೃತದ ವಿರೋಧಿ ಏನಲ್ಲ. ಯಾಕೆಂದರೆ ಪಂಪ, ಪೊನ್ನ, ಕುಮಾರವ್ಯಾಸನನ್ನು ಓದಿದವರು ಹೇಗೆ ಸಂಸ್ಕೃತದ ಜೊತೆಗೆ ಸಂವಾದ ಬೆಳೆಸಿಕೊಂಡಿದ್ದೇವೆ ಎಂಬವುದು ನನಗೆ ಗೊತ್ತಿದೆ ಎಂದು ಪ್ರೊ. ಬಿಳಿಮಲೆ ತಿಳಿಸಿದರು.

ರಾಜ್ಯದಲ್ಲಿರುವ 72 ಭಾಷೆಗಳಲ್ಲಿ ಒಂದು ಭಾಷೆ ಸತ್ತರು ಕೂಡಾ ಕರ್ನಾಟಕ ಅಷ್ಟರ ಮಟ್ಟಿಗೆ ಬಡವಾಗುತ್ತದೆ. ಕರ್ನಾಟಕ ಎಂಬುವುದು ಅನೇಕ ಬಣ್ಣಗಳು ಒಂದು ರಂಗೋಲಿ. ಅದಕ್ಕೆ ಹೆಚ್ಚು ಹೆಚ್ಚು ಬಣ್ಣ ಹಾಕಿದಷ್ಟು ರಂಗೋಲಿ ಚಂದವಾಗಿ ಕಾಣುತ್ತದೆ ಎಂದು ಅವರು ತಿಳಿಸಿದರು.

90 ದಶಕದಲ್ಲಿ ಪ್ರಾರಂಭವಾದ ಜಾಗತೀಕರಣದ ನಂತರ ನಮ್ಮ ಬದುಕಿನಲ್ಲಿ ಅಮೂಲಗ್ರ ಬದಲಾವಣೆ ನಡೆಯಿತು. ಇದರ ನಂತರ 92 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡಿತು ಮತ್ತು ಇದು ಹೆಚ್ಚಾಗುತ್ತಾ ಇದೆ, ಅಲ್ಲದೆ ಅದೀಗ ಹುಣ್ಣು ಆಗುತ್ತಿದೆ, ಕೀವು ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ಹಾಗೂ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಲೇಖಕನ ಜವಾಬ್ದಾರಿ ಏನು ಎಂಬ ಪ್ರಶ್ನೆಯನ್ನು ಕರ್ನಾಟಕದ ಪ್ರತಿಯೊಬ್ಬ ಲೇಕನನಿಗೂ ಕೇಳಬೇಕು ಎಂದು ಅವರು ಕರೆ ನೀಡಿದರು.

ಗೀತಾ ಹರಿಹರ ಅವರು ಎಂಎಂ ಕಲಬುರ್ಗಿ ಅವರ ಸಾವನ್ನು ಇಟ್ಟುಕೊಂಡು ಒಂದು ಕಾದಂಬರಿ ಬರೆದಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಕನ್ನಡದಲ್ಲಿ ಯಾವ ಕತೆ ಅಥವಾ ಕಾದಂಬರಿ ಬಂದಿದೆ? ಸೃಜನಶೀಲ ಕೃತಿಗಳಲ್ಲಿ ಲೇಖಕರ ಜವಾಬ್ದಾರಿಯನ್ನು ಪುನರ್‌ವಿವೇಚಿಸಿ, ನಮ್ಮ ಚಿಂತನಾ ಕ್ರಮಗಳನ್ನು ಜನರ ಕಡೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಈ ಮೂಲಕ ನಮ್ಮ ಬರಹಗಳಿಗೆ ಚೈತ್ಯನ್ಯವನ್ನು ತಂದುಕೊಳ್ಳಬೇಕಾಗಿದೆ. ಇಲ್ಲವೆಂದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.

ಈಗ ಸಂಸ್ಕೃತಿಯ ಬಗ್ಗೆ ಅಪವ್ಯಾಖ್ಯಾನಗಳು ಹೆಚ್ಚಾದ್ದು, ಅವುಗಳೇ ನಂಬಿಕೆಯಾಗಿ, ನಿಜವಾದ ವ್ಯಾಖ್ಯಾನಗಳು ಹಿನ್ನಲೆಗೆ ಸರಿದಿವೆ. ಕರ್ನಾಟಕದ ‘ಕರ್ನಾಟ’ ಎಂಬುವುದರ ಹಳೆಯ ಶಬ್ಧ, ಆ ಕಾಲಗಟ್ಟದಲ್ಲಿ ಗುಲ್ಬರ್ಗದ ಸನ್ನತಿಯಿಂದ, ಕೊಪ್ಪಳದ ಗವೀಮಠದಿಂದ, ಮಸ್ಕಿಯಿಂದ, ಚಿತ್ರದುರ್ಗದಿಂದ, ಮಂಗಳೂರಿನ ಕದ್ರಿಯಿಂದ ಈ ಸಂಸ್ಕೃತಿಯ ಮೂಲಭೂತ ಗುಣಗಳನ್ನು ಕಟ್ಟಿದವರು ಬೌದ್ಧರಾಗಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಜನಪದ ಕಾವ್ಯದಲ್ಲಿ ಕಾಣುವ ಜ್ಯೋತ್ಯಪ್ಪ, ಬೆಳಕಪ್ಪ, ಅದು ಬೌದ್ಧ ಧರ್ಮದಿಂದ ಬಂದಿದೆ. ಆಮೇಲೆ ಕ್ರಿ.ಶ. 3 ನೇ ಶತಮಾನದಲ್ಲಿ ಬಿಹಾರದಿಂದ ವಲಸೆ ಬಂದಂತಹ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ನೆಲೆ ನಿಂತಿದ್ದು ಕರ್ನಾಟಕದಲ್ಲಿ. ಮುಂದೆ ಜಿನ ಧರ್ಮ ಕರ್ನಾಟಕದಲ್ಲಿ ಬೆಳೆಯಿತು. ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ, ರತ್ನಾಕರವರ್ಣಿ ಸೇರಿದಂತೆ ಕನ್ನಡ ಸಾಹಿತ್ಯವೆಂದರೆ ಅದು ಜೈನ ಸಾಹಿತ್ಯ ಎಂಬಂತೆ ಒಳಗೊಂಡಿತ್ತು. ಆಮೇಲೆ ಧಾರ್ಮಿಕವಾಗಿ ತಮಿಳುನಾಡಿನಿಂದ ಚೋಳರು ಓಡಿಸಿದ ರಾಮನುಜಾಚಾರ್ಯರಿಗೆ ನಾವು ಮೇಲುಕೋಟೆಯಲ್ಲಿ ನೆಲೆಕೊಟ್ಟೆವು ಎಂದು ಅವರು ತಿಳಿಸಿದರು.

ಉತ್ತರದ ಬಿಹಾರದಿಂದ ಬಂದ ಸುರೇಶಾಚಾರ್ಯರು ಶೃಂಗೇರಿಯಲ್ಲಿ ನೆಲೆನಿಂತರು. ದ್ವೈತವನ್ನು ನಾವು ಒಳಗೊಂಡಿದ್ದೇವೆ. ಕ್ರಿಶ್ಚಿಯನ್ನರು ಆ ಕಾಲದಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿದರು. ಆ ಕಾಲದಲ್ಲಿ ಅವರು ಶಾಲೆಗಳನ್ನು ಆರಂಭ ಮಾಡದೆ ಇದ್ದರೆ ನಾನು  ಈಗ ಈ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಮುನ್ನೂರು ವರ್ಷಗಳ ಬಿಜಾಪುರದ ಸುಲ್ತಾನರು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಚನ ಚಳವಳಿ ಬಂತು. ಇವೆಲ್ಲವೂ ನಮ್ಮ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಬೇರೆ ರಾಜ್ಯಗಳಿಗಿಂತ ಕರ್ನಾಟಕ 72 ಭಾಷೆಗಳನ್ನು ಒಳಗೊಂಡಿದೆ. ಇದು ನಮ್ಮ ರಾಜ್ಯ ಒಳಗೊಳ್ಳುವ ಗುಣವನ್ನು ಹೇಳುತ್ತದೆ. ಈ ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ನಮ್ಮ ಪರಂಪರೆಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ. ಯಾರು ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೋ ಅವರು ಪರಂಪರೆಯ ದುಷ್ಕೃತ್ಯಗಳನ್ನು ಹೇಳುತ್ತಿದ್ದರೆ, ನಾವು ಪರಂಪರೆಯಲ್ಲಿರವ ಒಳ್ಳೆಯ ಗುಣಗಳನ್ನು ಹೇಳಬೇಕು. ಅದಕ್ಕಾಗಿ ನಾವು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಕುವೆಂಪು ಅವರು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಒಳಗೊಳ್ಳುವ ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಪ್ರತಿರೋಧಿಸುತ್ತಾ, ಜಾಗತಿಕವಾಗಿ ಭಾಷೆ ಎದುರಿಸುವ ಸಮಸ್ಯೆಗಳನ್ನು ಅರಿತು ಮುನ್ನಡೆಯಬೇಕಿದೆ ಎಂದು ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...