Homeಎಕಾನಮಿಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

ಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

- Advertisement -
- Advertisement -

ಇದು ಬಹುಕಾಲ ಅಮೇರಿಕದ ಫೆಡರಲ್ ರಿಜರ್ವ್ ಮುಖ್ಯಸ್ಥರಾಗಿದ್ದ ಆಲನ್ ಗ್ರೀನ್-ಸ್ಪ್ಯಾನ್ ಅವರು 1970ರಲ್ಲಿ ನೀಡಿದ ಹೇಳಿಕೆ ಮತ್ತು ಅವರ ಪ್ರಕಾರ ಇದೊಂದು ಮುಖ್ಯ ಆರ್ಥಿಕ ಸೂಚ್ಯಾಂಕ ಎಂದು ತಿಳಿಸುತ್ತಾ, ಪ್ರತಿಷ್ಠಿತ ಗುಲಾಬಿ ಪತ್ರಿಕೆ ದಿ ಎಕನಾಮಿಕ್ ಟೈಂಸ್ ಇಂದು ವರದಿಮಾಡಿದೆ. ಜೂನ್ ತಿಂಗಳಿಗೆ ಮುಗಿದ ಈ ವರ್ಷದ ಎರಡನೆಯ ತ್ರೈಮಾಸಿಕ ಅಂಕಿ-ಅಂಶಗಳ ಪ್ರಕಾರ ಪೇಜ್ ಇಂಡಸ್ಟ್ರೀಸ್ ಅವರ ಜಾಕಿ ಬ್ರ್ಯಾಂಡಿನ ಮಾರಾಟ ಕೇವಲ 2% ವೃದ್ಧಿ ಕಂಡಿದ್ದರೆ, ಡಾಲರ್ ಮತ್ತು ವಿಐಪಿ ಅವರ ಮಾರಾಟ ತಲಾ 4% ಮತ್ತು 20% ಕಡಿಮೆ ಆಗಿದೆ ಹಾಗೂ ಲಕ್ಸ್ ಅವರ ಮಾರಾಟ ಮಂಕಾಗಿದೆ. “ಮಾರುಕಟ್ಟೆಯ ಈ ಕ್ಷೇತ್ರದ ಅತ್ಯಂತ ಒಳ್ಳೆಯ ಸಮಯವಂತೂ ಇದಲ್ಲ” ಎಂದು ಪೇಜ್ ಇಂಡಸ್ಟ್ರೀಸ್ ಅವರ ಸಿಇಒ ವೇದ್ಜಿ ಟಿಕು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಹಾಗಾದರೆ ಗಂಡಸರು ಕಾಚಾ ಹಾಕುವುದನ್ನು ಬಿಟ್ಟಿದ್ದಾರೆಯೇ? ಎಂಬುದು ಹಲವರ ಆಶ್ಚರ್ಯಚಕಿತವಾದ ಪ್ರಶ್ನೆ ಆಗಿರಬಹುದು. ಜನರ ಬಳಿ ಖರ್ಚು ಮಾಡಲು ಹಣದ ಕೊರತೆಯಿಂದಾಗಿ ಇಂತಹ ವಸ್ತುಗಳ ಖರೀದಿಯನ್ನು ಅವರು ಮುಂದೂಡುತ್ತಿದ್ದಾರೆ ಎಂಬುದು ದೇಶದ ಆರ್ಥಿಕ ತಜ್ಞರ ಅಭಿಪ್ರಾಯ. ಹಾಗಾದರೆ ಬಹುತೇಕ ಲಾಂಡ್ರಿ ಬದಿಯಲ್ಲಿರುವ ರಫೂ ಅಂಗಡಿಯ ವ್ಯಾಪಾರವಾದರೂ ಜೋರಾಗಿರಬೇಕಲ್ಲ, ಇಲ್ಲವಾದರೆ ಹರಿದ ಕಾಚಾಗಳನ್ನೇ ಧರಿಸಿಕೊಂಡು ಜನರು ಓಡಾಡುತ್ತಿದ್ದಾರೆಯೇ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು.  ಆದರೆ ಹೇಗೆ ತನಿಖೆ ಮಾಡುವುದು? ಪೋಲಿಸ್ ಮುಖ್ಯಸ್ಥರನ್ನು ಕೇಳಿದರೆ ಹೇಗೆ?

ಡಾಲರ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ್ ಗುಪ್ತಾ ಅವರು ಈ ಪರಿಸ್ಥಿತಿಗೆ ಮುಖ್ಯ ಕಾರಣ ಗ್ರಾಮೀಣ ದುಃಸ್ಥಿತಿ, ಎಲ್ಲೂ ಸಾಲ ಸಿಗದಂತಾಗಿರುವ ಪರಿಸ್ಥಿತಿ, ಬ್ಯಾಂಕುಗಳಲ್ಲಿ ಹೆಚ್ಚಾಗಿರುವ ಎನ್.ಪಿ.ಎ., ಹಾಗೂ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಷನ್ ಅವರ ಅನಾರೋಗ್ಯ ಎನ್ನುತ್ತಾರೆ. ಹೌದು, ಕಾಚಾ ಖರೀದಿಸಲು ಯಾವ ಬ್ಯಾಂಕ್ ತಾನೇ ಸಾಲ ಕೊಡುತ್ತದೆ ಹೇಳಿ. ಅಥವಾ ಬ್ಯಾಂಕುಗಳು ಎನಾದರೂ ಸಾಲಗಾರರ ಚಡ್ಡಿ-ಬನೀನನ್ನೂ ಕಿತ್ತುಕೊಂಡು ತಮ್ಮ ಸಾಲ ವಸೂಲು ಮಾಡುವ ಯೋಜನೆ ಹಾಕುತ್ತಿದ್ದಾರೇನೋ ಗೊತ್ತಿಲ್ಲ. ಹಾಗೇನಾದರೂ ಇದ್ದಲ್ಲಿ ಹರಾಜು ಹಾಕಿದ ಚಡ್ಡಿ-ಬನೀನು ನಮ್ಮ ಜನ ಕೊಂಡುಕೊಳ್ಳುತಾರೆಯೇ ಎಂಬುದೂ ಸಹ ಯಕ್ಷ ಪ್ರಶ್ನೆ.

ಈ ಚಡ್ಡಿ-ಬನೀನಿನ ವಾರ್ಷಿಕ (ಅಂದಾಜು) ಮಾರಾಟ ರೂ. 27,931 ಕೋಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಇದು ಪ್ರತಿವರ್ಷ 10% ವೃದ್ಧಿಗೊಳ್ಳುತ್ತಿದ್ದ ಕ್ಷೇತ್ರವಾಗಿದ್ದು ಮುಂದಿನ ದಶಕದಲ್ಲಿ ಇದು ರೂ. 74,258 ಕೋಟಿ ತಲುಪಬಹುದಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜಿಡಿಪಿ ಐದು ಲಕ್ಷ ಕೋಟಿ ತಲುಪುತ್ತದೆ ಎಂದು ಪ್ರಧಾನ ಮಂತ್ರಿಗಳು ಭವಿಷ್ಯವಾಣಿ ನುಡಿದಿರುವಾಗ ಈ ಕುಸಿದಿರುವ ಮಾರಾಟ ಅಂಕಿ-ಅಂಶ ನಿಜಕ್ಕೂ ಆಘಾತಕಾರಿ ಎಂದೆನಿಸುತ್ತದೆ. ಇನ್ನು ಮುಂದೆ ಎಲ್ಲರೂ ಕನಿಷ್ಠ ಎರಡೆರಡು ಜೊತೆ ಚಡ್ಡಿ-ಬನೀನು ತೊಡಬೇಕೆಂಬ ಆದೇಶವೇನಾದರೂ ಹೊರಬಂದಲ್ಲಿ ಏನುಮಾಡುವುದು?

ಹಾಗಿರಲಾರದು ಏಕೆಂದರೆ ಆರ್ಥಿಕ ಒಳನೋಟ ಇರುವ ಸಂಸ್ಥೆ ಕ್ರೆಡಿಟ್-ಸ್ವಿಸ್ ಪೇಜ್ ಇಂಡಸ್ಟ್ರೀಸ್ ಅವರ ಲಾಭಾದಾಯವನ್ನು 9-11% ಕಡಿಮೆ ಮಾಡಿದೆ ಮತ್ತು ಕೋಟಕ್ ಇಕ್ವಿಟೀಸ್ ಅವರು ಕ್ಷೀಣಗೊಂಡಿರುವ ಕಂಪನಿಯ ಆದಾಯದ ಮೇರೆಗೆ ಶೇರು ಬೆಲೆಯನ್ನು 5-6%  ಕಡಿತಗೊಳಿಸಿದೆ.

ನಾನಾದರೂ ಇವೆಲ್ಲವನ್ನು ತಪ್ಪು ಮಾಹಿತಿ ಮತ್ತು ದೇಶದ ನಾಯಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಹುನ್ನಾರ ಎಂದು ಭಾವಿಸುತ್ತೇನೆ ಏಕೆಂದರೆ ನೆನ್ನೆ ತಾನೇ ನಾನು ಅರ್ಧ ಡಜನ್ ಒಳಚಡ್ಡಿ ಬನೀನು ಕೊಂಡುಕೊಂಡಿದ್ದೇನೆ. ದೇಶದ ಆರ್ಥಿಕ ಸಂರಕ್ಷಣೆಯಲ್ಲಿ ನಿಮ್ಮ ಯೋಗದಾನವೂ ಇರಲಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...