Homeಎಕಾನಮಿಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

ಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

- Advertisement -
- Advertisement -

ಇದು ಬಹುಕಾಲ ಅಮೇರಿಕದ ಫೆಡರಲ್ ರಿಜರ್ವ್ ಮುಖ್ಯಸ್ಥರಾಗಿದ್ದ ಆಲನ್ ಗ್ರೀನ್-ಸ್ಪ್ಯಾನ್ ಅವರು 1970ರಲ್ಲಿ ನೀಡಿದ ಹೇಳಿಕೆ ಮತ್ತು ಅವರ ಪ್ರಕಾರ ಇದೊಂದು ಮುಖ್ಯ ಆರ್ಥಿಕ ಸೂಚ್ಯಾಂಕ ಎಂದು ತಿಳಿಸುತ್ತಾ, ಪ್ರತಿಷ್ಠಿತ ಗುಲಾಬಿ ಪತ್ರಿಕೆ ದಿ ಎಕನಾಮಿಕ್ ಟೈಂಸ್ ಇಂದು ವರದಿಮಾಡಿದೆ. ಜೂನ್ ತಿಂಗಳಿಗೆ ಮುಗಿದ ಈ ವರ್ಷದ ಎರಡನೆಯ ತ್ರೈಮಾಸಿಕ ಅಂಕಿ-ಅಂಶಗಳ ಪ್ರಕಾರ ಪೇಜ್ ಇಂಡಸ್ಟ್ರೀಸ್ ಅವರ ಜಾಕಿ ಬ್ರ್ಯಾಂಡಿನ ಮಾರಾಟ ಕೇವಲ 2% ವೃದ್ಧಿ ಕಂಡಿದ್ದರೆ, ಡಾಲರ್ ಮತ್ತು ವಿಐಪಿ ಅವರ ಮಾರಾಟ ತಲಾ 4% ಮತ್ತು 20% ಕಡಿಮೆ ಆಗಿದೆ ಹಾಗೂ ಲಕ್ಸ್ ಅವರ ಮಾರಾಟ ಮಂಕಾಗಿದೆ. “ಮಾರುಕಟ್ಟೆಯ ಈ ಕ್ಷೇತ್ರದ ಅತ್ಯಂತ ಒಳ್ಳೆಯ ಸಮಯವಂತೂ ಇದಲ್ಲ” ಎಂದು ಪೇಜ್ ಇಂಡಸ್ಟ್ರೀಸ್ ಅವರ ಸಿಇಒ ವೇದ್ಜಿ ಟಿಕು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಹಾಗಾದರೆ ಗಂಡಸರು ಕಾಚಾ ಹಾಕುವುದನ್ನು ಬಿಟ್ಟಿದ್ದಾರೆಯೇ? ಎಂಬುದು ಹಲವರ ಆಶ್ಚರ್ಯಚಕಿತವಾದ ಪ್ರಶ್ನೆ ಆಗಿರಬಹುದು. ಜನರ ಬಳಿ ಖರ್ಚು ಮಾಡಲು ಹಣದ ಕೊರತೆಯಿಂದಾಗಿ ಇಂತಹ ವಸ್ತುಗಳ ಖರೀದಿಯನ್ನು ಅವರು ಮುಂದೂಡುತ್ತಿದ್ದಾರೆ ಎಂಬುದು ದೇಶದ ಆರ್ಥಿಕ ತಜ್ಞರ ಅಭಿಪ್ರಾಯ. ಹಾಗಾದರೆ ಬಹುತೇಕ ಲಾಂಡ್ರಿ ಬದಿಯಲ್ಲಿರುವ ರಫೂ ಅಂಗಡಿಯ ವ್ಯಾಪಾರವಾದರೂ ಜೋರಾಗಿರಬೇಕಲ್ಲ, ಇಲ್ಲವಾದರೆ ಹರಿದ ಕಾಚಾಗಳನ್ನೇ ಧರಿಸಿಕೊಂಡು ಜನರು ಓಡಾಡುತ್ತಿದ್ದಾರೆಯೇ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು.  ಆದರೆ ಹೇಗೆ ತನಿಖೆ ಮಾಡುವುದು? ಪೋಲಿಸ್ ಮುಖ್ಯಸ್ಥರನ್ನು ಕೇಳಿದರೆ ಹೇಗೆ?

ಡಾಲರ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ್ ಗುಪ್ತಾ ಅವರು ಈ ಪರಿಸ್ಥಿತಿಗೆ ಮುಖ್ಯ ಕಾರಣ ಗ್ರಾಮೀಣ ದುಃಸ್ಥಿತಿ, ಎಲ್ಲೂ ಸಾಲ ಸಿಗದಂತಾಗಿರುವ ಪರಿಸ್ಥಿತಿ, ಬ್ಯಾಂಕುಗಳಲ್ಲಿ ಹೆಚ್ಚಾಗಿರುವ ಎನ್.ಪಿ.ಎ., ಹಾಗೂ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಷನ್ ಅವರ ಅನಾರೋಗ್ಯ ಎನ್ನುತ್ತಾರೆ. ಹೌದು, ಕಾಚಾ ಖರೀದಿಸಲು ಯಾವ ಬ್ಯಾಂಕ್ ತಾನೇ ಸಾಲ ಕೊಡುತ್ತದೆ ಹೇಳಿ. ಅಥವಾ ಬ್ಯಾಂಕುಗಳು ಎನಾದರೂ ಸಾಲಗಾರರ ಚಡ್ಡಿ-ಬನೀನನ್ನೂ ಕಿತ್ತುಕೊಂಡು ತಮ್ಮ ಸಾಲ ವಸೂಲು ಮಾಡುವ ಯೋಜನೆ ಹಾಕುತ್ತಿದ್ದಾರೇನೋ ಗೊತ್ತಿಲ್ಲ. ಹಾಗೇನಾದರೂ ಇದ್ದಲ್ಲಿ ಹರಾಜು ಹಾಕಿದ ಚಡ್ಡಿ-ಬನೀನು ನಮ್ಮ ಜನ ಕೊಂಡುಕೊಳ್ಳುತಾರೆಯೇ ಎಂಬುದೂ ಸಹ ಯಕ್ಷ ಪ್ರಶ್ನೆ.

ಈ ಚಡ್ಡಿ-ಬನೀನಿನ ವಾರ್ಷಿಕ (ಅಂದಾಜು) ಮಾರಾಟ ರೂ. 27,931 ಕೋಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಇದು ಪ್ರತಿವರ್ಷ 10% ವೃದ್ಧಿಗೊಳ್ಳುತ್ತಿದ್ದ ಕ್ಷೇತ್ರವಾಗಿದ್ದು ಮುಂದಿನ ದಶಕದಲ್ಲಿ ಇದು ರೂ. 74,258 ಕೋಟಿ ತಲುಪಬಹುದಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜಿಡಿಪಿ ಐದು ಲಕ್ಷ ಕೋಟಿ ತಲುಪುತ್ತದೆ ಎಂದು ಪ್ರಧಾನ ಮಂತ್ರಿಗಳು ಭವಿಷ್ಯವಾಣಿ ನುಡಿದಿರುವಾಗ ಈ ಕುಸಿದಿರುವ ಮಾರಾಟ ಅಂಕಿ-ಅಂಶ ನಿಜಕ್ಕೂ ಆಘಾತಕಾರಿ ಎಂದೆನಿಸುತ್ತದೆ. ಇನ್ನು ಮುಂದೆ ಎಲ್ಲರೂ ಕನಿಷ್ಠ ಎರಡೆರಡು ಜೊತೆ ಚಡ್ಡಿ-ಬನೀನು ತೊಡಬೇಕೆಂಬ ಆದೇಶವೇನಾದರೂ ಹೊರಬಂದಲ್ಲಿ ಏನುಮಾಡುವುದು?

ಹಾಗಿರಲಾರದು ಏಕೆಂದರೆ ಆರ್ಥಿಕ ಒಳನೋಟ ಇರುವ ಸಂಸ್ಥೆ ಕ್ರೆಡಿಟ್-ಸ್ವಿಸ್ ಪೇಜ್ ಇಂಡಸ್ಟ್ರೀಸ್ ಅವರ ಲಾಭಾದಾಯವನ್ನು 9-11% ಕಡಿಮೆ ಮಾಡಿದೆ ಮತ್ತು ಕೋಟಕ್ ಇಕ್ವಿಟೀಸ್ ಅವರು ಕ್ಷೀಣಗೊಂಡಿರುವ ಕಂಪನಿಯ ಆದಾಯದ ಮೇರೆಗೆ ಶೇರು ಬೆಲೆಯನ್ನು 5-6%  ಕಡಿತಗೊಳಿಸಿದೆ.

ನಾನಾದರೂ ಇವೆಲ್ಲವನ್ನು ತಪ್ಪು ಮಾಹಿತಿ ಮತ್ತು ದೇಶದ ನಾಯಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಹುನ್ನಾರ ಎಂದು ಭಾವಿಸುತ್ತೇನೆ ಏಕೆಂದರೆ ನೆನ್ನೆ ತಾನೇ ನಾನು ಅರ್ಧ ಡಜನ್ ಒಳಚಡ್ಡಿ ಬನೀನು ಕೊಂಡುಕೊಂಡಿದ್ದೇನೆ. ದೇಶದ ಆರ್ಥಿಕ ಸಂರಕ್ಷಣೆಯಲ್ಲಿ ನಿಮ್ಮ ಯೋಗದಾನವೂ ಇರಲಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...