Homeಎಕಾನಮಿಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

ಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

- Advertisement -
- Advertisement -

ಇದು ಬಹುಕಾಲ ಅಮೇರಿಕದ ಫೆಡರಲ್ ರಿಜರ್ವ್ ಮುಖ್ಯಸ್ಥರಾಗಿದ್ದ ಆಲನ್ ಗ್ರೀನ್-ಸ್ಪ್ಯಾನ್ ಅವರು 1970ರಲ್ಲಿ ನೀಡಿದ ಹೇಳಿಕೆ ಮತ್ತು ಅವರ ಪ್ರಕಾರ ಇದೊಂದು ಮುಖ್ಯ ಆರ್ಥಿಕ ಸೂಚ್ಯಾಂಕ ಎಂದು ತಿಳಿಸುತ್ತಾ, ಪ್ರತಿಷ್ಠಿತ ಗುಲಾಬಿ ಪತ್ರಿಕೆ ದಿ ಎಕನಾಮಿಕ್ ಟೈಂಸ್ ಇಂದು ವರದಿಮಾಡಿದೆ. ಜೂನ್ ತಿಂಗಳಿಗೆ ಮುಗಿದ ಈ ವರ್ಷದ ಎರಡನೆಯ ತ್ರೈಮಾಸಿಕ ಅಂಕಿ-ಅಂಶಗಳ ಪ್ರಕಾರ ಪೇಜ್ ಇಂಡಸ್ಟ್ರೀಸ್ ಅವರ ಜಾಕಿ ಬ್ರ್ಯಾಂಡಿನ ಮಾರಾಟ ಕೇವಲ 2% ವೃದ್ಧಿ ಕಂಡಿದ್ದರೆ, ಡಾಲರ್ ಮತ್ತು ವಿಐಪಿ ಅವರ ಮಾರಾಟ ತಲಾ 4% ಮತ್ತು 20% ಕಡಿಮೆ ಆಗಿದೆ ಹಾಗೂ ಲಕ್ಸ್ ಅವರ ಮಾರಾಟ ಮಂಕಾಗಿದೆ. “ಮಾರುಕಟ್ಟೆಯ ಈ ಕ್ಷೇತ್ರದ ಅತ್ಯಂತ ಒಳ್ಳೆಯ ಸಮಯವಂತೂ ಇದಲ್ಲ” ಎಂದು ಪೇಜ್ ಇಂಡಸ್ಟ್ರೀಸ್ ಅವರ ಸಿಇಒ ವೇದ್ಜಿ ಟಿಕು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಹಾಗಾದರೆ ಗಂಡಸರು ಕಾಚಾ ಹಾಕುವುದನ್ನು ಬಿಟ್ಟಿದ್ದಾರೆಯೇ? ಎಂಬುದು ಹಲವರ ಆಶ್ಚರ್ಯಚಕಿತವಾದ ಪ್ರಶ್ನೆ ಆಗಿರಬಹುದು. ಜನರ ಬಳಿ ಖರ್ಚು ಮಾಡಲು ಹಣದ ಕೊರತೆಯಿಂದಾಗಿ ಇಂತಹ ವಸ್ತುಗಳ ಖರೀದಿಯನ್ನು ಅವರು ಮುಂದೂಡುತ್ತಿದ್ದಾರೆ ಎಂಬುದು ದೇಶದ ಆರ್ಥಿಕ ತಜ್ಞರ ಅಭಿಪ್ರಾಯ. ಹಾಗಾದರೆ ಬಹುತೇಕ ಲಾಂಡ್ರಿ ಬದಿಯಲ್ಲಿರುವ ರಫೂ ಅಂಗಡಿಯ ವ್ಯಾಪಾರವಾದರೂ ಜೋರಾಗಿರಬೇಕಲ್ಲ, ಇಲ್ಲವಾದರೆ ಹರಿದ ಕಾಚಾಗಳನ್ನೇ ಧರಿಸಿಕೊಂಡು ಜನರು ಓಡಾಡುತ್ತಿದ್ದಾರೆಯೇ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು.  ಆದರೆ ಹೇಗೆ ತನಿಖೆ ಮಾಡುವುದು? ಪೋಲಿಸ್ ಮುಖ್ಯಸ್ಥರನ್ನು ಕೇಳಿದರೆ ಹೇಗೆ?

ಡಾಲರ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ್ ಗುಪ್ತಾ ಅವರು ಈ ಪರಿಸ್ಥಿತಿಗೆ ಮುಖ್ಯ ಕಾರಣ ಗ್ರಾಮೀಣ ದುಃಸ್ಥಿತಿ, ಎಲ್ಲೂ ಸಾಲ ಸಿಗದಂತಾಗಿರುವ ಪರಿಸ್ಥಿತಿ, ಬ್ಯಾಂಕುಗಳಲ್ಲಿ ಹೆಚ್ಚಾಗಿರುವ ಎನ್.ಪಿ.ಎ., ಹಾಗೂ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಷನ್ ಅವರ ಅನಾರೋಗ್ಯ ಎನ್ನುತ್ತಾರೆ. ಹೌದು, ಕಾಚಾ ಖರೀದಿಸಲು ಯಾವ ಬ್ಯಾಂಕ್ ತಾನೇ ಸಾಲ ಕೊಡುತ್ತದೆ ಹೇಳಿ. ಅಥವಾ ಬ್ಯಾಂಕುಗಳು ಎನಾದರೂ ಸಾಲಗಾರರ ಚಡ್ಡಿ-ಬನೀನನ್ನೂ ಕಿತ್ತುಕೊಂಡು ತಮ್ಮ ಸಾಲ ವಸೂಲು ಮಾಡುವ ಯೋಜನೆ ಹಾಕುತ್ತಿದ್ದಾರೇನೋ ಗೊತ್ತಿಲ್ಲ. ಹಾಗೇನಾದರೂ ಇದ್ದಲ್ಲಿ ಹರಾಜು ಹಾಕಿದ ಚಡ್ಡಿ-ಬನೀನು ನಮ್ಮ ಜನ ಕೊಂಡುಕೊಳ್ಳುತಾರೆಯೇ ಎಂಬುದೂ ಸಹ ಯಕ್ಷ ಪ್ರಶ್ನೆ.

ಈ ಚಡ್ಡಿ-ಬನೀನಿನ ವಾರ್ಷಿಕ (ಅಂದಾಜು) ಮಾರಾಟ ರೂ. 27,931 ಕೋಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಇದು ಪ್ರತಿವರ್ಷ 10% ವೃದ್ಧಿಗೊಳ್ಳುತ್ತಿದ್ದ ಕ್ಷೇತ್ರವಾಗಿದ್ದು ಮುಂದಿನ ದಶಕದಲ್ಲಿ ಇದು ರೂ. 74,258 ಕೋಟಿ ತಲುಪಬಹುದಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜಿಡಿಪಿ ಐದು ಲಕ್ಷ ಕೋಟಿ ತಲುಪುತ್ತದೆ ಎಂದು ಪ್ರಧಾನ ಮಂತ್ರಿಗಳು ಭವಿಷ್ಯವಾಣಿ ನುಡಿದಿರುವಾಗ ಈ ಕುಸಿದಿರುವ ಮಾರಾಟ ಅಂಕಿ-ಅಂಶ ನಿಜಕ್ಕೂ ಆಘಾತಕಾರಿ ಎಂದೆನಿಸುತ್ತದೆ. ಇನ್ನು ಮುಂದೆ ಎಲ್ಲರೂ ಕನಿಷ್ಠ ಎರಡೆರಡು ಜೊತೆ ಚಡ್ಡಿ-ಬನೀನು ತೊಡಬೇಕೆಂಬ ಆದೇಶವೇನಾದರೂ ಹೊರಬಂದಲ್ಲಿ ಏನುಮಾಡುವುದು?

ಹಾಗಿರಲಾರದು ಏಕೆಂದರೆ ಆರ್ಥಿಕ ಒಳನೋಟ ಇರುವ ಸಂಸ್ಥೆ ಕ್ರೆಡಿಟ್-ಸ್ವಿಸ್ ಪೇಜ್ ಇಂಡಸ್ಟ್ರೀಸ್ ಅವರ ಲಾಭಾದಾಯವನ್ನು 9-11% ಕಡಿಮೆ ಮಾಡಿದೆ ಮತ್ತು ಕೋಟಕ್ ಇಕ್ವಿಟೀಸ್ ಅವರು ಕ್ಷೀಣಗೊಂಡಿರುವ ಕಂಪನಿಯ ಆದಾಯದ ಮೇರೆಗೆ ಶೇರು ಬೆಲೆಯನ್ನು 5-6%  ಕಡಿತಗೊಳಿಸಿದೆ.

ನಾನಾದರೂ ಇವೆಲ್ಲವನ್ನು ತಪ್ಪು ಮಾಹಿತಿ ಮತ್ತು ದೇಶದ ನಾಯಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಹುನ್ನಾರ ಎಂದು ಭಾವಿಸುತ್ತೇನೆ ಏಕೆಂದರೆ ನೆನ್ನೆ ತಾನೇ ನಾನು ಅರ್ಧ ಡಜನ್ ಒಳಚಡ್ಡಿ ಬನೀನು ಕೊಂಡುಕೊಂಡಿದ್ದೇನೆ. ದೇಶದ ಆರ್ಥಿಕ ಸಂರಕ್ಷಣೆಯಲ್ಲಿ ನಿಮ್ಮ ಯೋಗದಾನವೂ ಇರಲಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...