Homeಕರ್ನಾಟಕ19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ...

19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ ಸಿದ್ಧತೆ

ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ.

- Advertisement -
- Advertisement -

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಯುವಜೋಡಿಗಳ ಪ್ರಕರಣ ಸಿನಿಮಿಯ ರೀತಿಯಲ್ಲಿ ಕೊನೆಗೊಂಡಿದೆ. ಕೊನೆಗೂ ಆ ಪ್ರಕರಣದಲ್ಲಿ ಊರ ಹಿರಿಯರು ಎನಿಸಿಕೊಳ್ಳುವ ನೈತಿಕತೆಯ ವಾರಸುದಾರರು ಹುಡುಗ ಹುಡುಗಿಯನ್ನು ಬೇರ್ಪಡಿಸಿ ದುರಂತ ಅಂತ್ಯದ ಷರಾ ಬರೆದಿದ್ದಾರೆ.

ಹುಡುಗ ಗಾಣಿಗ ಸಮುದಾಯದವ. ಹುಡುಗಿ ಮಾದರ ಜಾತಿಗೆ ಸೇರಿದವಳು. ಈ ಯುವಪ್ರೇಮಿಗಳು ಕಳೆದ ಅಕ್ಟೋಬರ್ 24ರಂದು ಕಾನೂನುಬದ್ಧವಾಗಿಯೇ ರಜಿಸ್ಟರ್ ಮದುವೆಯಾಗಿದ್ದರು. ಕೇವಲ ಮದುವೆಯಾಗಿ 19 ದಿನಗಳಲ್ಲೆ ಮುರಿದು ಬಿದ್ದಿದೆ. ಮತ್ತು ಈ ಪ್ರಕರಣ ಗೊತ್ತಿದ್ದರೂ ಏನು ಮಾಡಲಿಕ್ಕಾಗದೇ  ಹಲವಾರು ಜೀವಪರ ಮನಸ್ಸುಗಳು ದಲಿತಪರ ಸಂಘಟನೆಗಳು ಏನೂ ಮಡಲಾಗದೇ ಕೈ ಚೆಲ್ಲಿ ಕುಳಿತಿವೆ.

ನಿಮ್ಮ ಮದುವೆಯನ್ನು ಮಾನ್ಯ ಮಾಡುತ್ತೇವೆ ಬನ್ನಿ ಎಂದು ಊರಿಂದ ತಪ್ಪಿಸಿಕೊಂಡು ದೂರ ಹೋಗಿದ್ದ ಯುವಪ್ರೇಮಿಗಳನ್ನು ಊರಿನ ನೈತಿಕತೆಯ ವಾರಸುದಾರರು ವಾಪಸ್ ಕರೆಸಿಕೊಂಡಿದ್ದರು. ಆದರೆ, ಆದದ್ದೇ ಬೇರೆ. ಹುಡುಗಿಯದ್ದು ಕೀಳುಜಾತಿಯಾದ್ದರಿಂದ ಹುಡುಗಿಯನ್ನು ಮರೆತುಬಿಡಬೇಕೆಂದು ಹುಡುಗನಿಗೆ ವಾರ್ನಿಂಗ್ ಮಾಡಿದ್ದಾರೆ. ಹುಡುಗ ಒಪ್ಪದಿದ್ದುದ್ದಕ್ಕೆ ಅವನನ್ನು ಮೈ ಬಾಯುವ ಹಾಗೆ ಮುಖ ಮೋತಿಯನ್ನದೇ ಬಡಿದು ಹೆದರಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಕೆಲವು ದಲಿತಪರ ಹೋರಾಟಗಾರರಾದ ನಾಗಮ್ಮ, ರಮೇಶ ಕೋಳೂರು ಮತ್ತಿತರರು ಧಾವಿಸಿ ಬಂದು ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಎರಡು ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಸುಖಾಂತ್ಯ ಹಾಡಲು ನೋಡಿದ್ದಾರೆ.

ಆದರೆ, ಅಷ್ಟೊತ್ತಿಗೆಗಾಗಲೇ ನೈತಿಕ ವಾರಸುದಾರರು ಹೆದರಿಸುವಿಕೆ ಮತ್ತು ಪುಸಲಾಯಿಸುವಿಕೆ ಎಷ್ಟರಮಟ್ಟಿಗೆ ಇತ್ತೆಂದರೆ ಸಂಜೆ ಅಷ್ಟೊತ್ತಿಗೆ ನಾನು ಆ ಹುಡುಗನೊಂದಿಗೆ ಬಾಳ್ವೆ ಮಾಡಲು ಸುತಾರಂ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ  ಎಂದು ಪೊಲೀಸರ ಮುಂದೆಯೇ ಹುಡುಗಿ ಉಲ್ಟಾ ಹೊಡೆದಿದ್ದಾಳೆ. “ನೀನು ಅವನನ್ನು ಬಿಟ್ಟರೆ ನಿನ್ನನ್ನು ಇವನೊಂದಿಗೆ ಮದುವೆಯ ಮಾಡುತ್ತೇವೆ ಬಿಡು” ಎಂದು ನೈತಿಕತೆಯ ವಾರಸುದಾರರು ಮೊದಲೇ ರೆಡಿ ಇಟ್ಟುಕೊಂಡಿದ್ದ ಸಜಾತಿಯ ವರನನ್ನು ಹುಡುಗಿ ಮುಂದೆ ನಿಲ್ಲಿಸಿದ್ದಾರೆ.  “ಇವನೊಂದಿಗೆ ಮದವೆ ಮಾಡುವ ಜವಾಬ್ಧಾರಿ ನಮ್ಮದು” ಎಂದು ಹುಡುಗಿಗೆ ಧೈರ್ಯ ತುಂಬಿದ್ದಾರೆ. ಕೋಲೆ ಬಸವನಂತ ಆ ಹುಡುಗ ಕೂಡ ತಲೆಯಾಡಿಸಿದ್ದಾನೆ.

ಹೀಗೆ ಸಂಜೆಯ ಹೊತ್ತಿಗೆ ಪೊಲೀಸ್ ಠಾಣೆಯಲ್ಲೆ ಸಿನಿಮಿಯ ರೀತಿಯಲ್ಲಿ ಉಲ್ಟಾ ಹೊಡೆದ ಪ್ರಕರಣ ನೋಡಿದ ಪೊಲೀಸ್ ಇನ್ಸಪೆಕ್ಟರ್ ಸಹ “ಆ ಹುಡುಗ ಹುಡುಗಿಯ ಬದುಕನ್ನು ಬಲಿಪಶು ತೊಗೊತ್ತಿದ್ದಿರಲ್ಲ ನೀವು, ನಾಚಿಕೆಯಾಗಲ್ವಾ, ಈ ಹೊಸ ಹುಡುಗ ಈ ಹುಡುಗಿಯನ್ನು ಮುಂದೆ ಚನ್ನಾಗಿ ಬಾಳಿಸದಿದ್ದರೆ, ಅನುಮಾನಪಡತೊಡಗಿದರೆ ಏನ್ ಮಾಡ್ತಿರಿ ಎಂದು ಎರಡೂ ಕಡೆಯವರನ್ನು ಹತಾಶೆಯಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂತೂ ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ. ನನ್ನ ಹುಡುಗಿಯನ್ನು ನನಗೆ ಕೊಡಿಸಿದರೆ ಸಾಕು ಎಂದು ಆತ ಅಳತೊಡಗಿದ್ದಾನೆ.

ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಅಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಯುವ ದಂಪತಿಗಳ ಜೋಡಿ ಕೊಲೆ ನಡೆದಿತ್ತು. ಅದು ನಡೆದ ಒಂದೇ ವಾರದಲ್ಲಿ ಈಗ ಈ ಪ್ರಕರಣ ನಡೆದಿದೆ. ಹಾಗೆ ನೋಡಿದರೆ ಜಾತಿ ಗೋಡೆಯನ್ನು ಕಿತ್ತೆಸೆದು, ಧರ್ಮದ ಬೇಲಿಗೆ ಕಿವಿಗೊಡದೇ ಹಲವಾರು ಯುವ ಜೋಡಿಗಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಆ ಜೋಡಿಗಳು ನೆಮ್ಮದಿಯಿಂದ ಬಾಳುವೆ ಮಾಡುವ ವಾತಾವರಣ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬರುವುದಿಲ್ಲ. ಈ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಗಳು ಸಹ ಅಷ್ಟೊಂದು ಸಕ್ರಿಯವಾಗಿಲ್ಲ.

ಮಾಡದ ತಪ್ಪಿಗೆ ಆತ ತನ್ನ ಹುಡುಗಿಯನ್ನು ಇನ್ನೊಂದು ಹುಡುಗನೊಂದಿಗ ಮದುವೆ ಮಾಡಿಸಲು ಖರ್ಚಿನ ಬಾಬ್ತು ಎಂದು ಮೂರು ಲಕ್ಷ ರೂಪಾಯಿ ತಪ್ಪುದಂಡ ಕೊಡಬೇಕು. ಈ ಹಣದಲ್ಲಿ ಒಂದಿಷ್ಟು ಪಾಲು ಎರಡು ಕಡೆಯ ನೈತಿಕ ವಾರಸುದಾರರಿಗೂ ಹಂಚಿಕೆಯಾಗುತ್ತದೆ ಎಂಬ ಆರೋಪವೂ ಸ್ಥಳಿಯರಿಂದ ಕೇಳಿ ಬಂದಿದೆ.

ಈ ಎರಡು ಪ್ರಕರಣಗಳ ಹಿಂದೆ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಧೈರ್ಯ ತುಂಬುವ, ಕರೆತಂದು ಮದುವೆ ಮಾಡಿಸುವ, ಇಂಥ ಯುವಜೋಡಿಗಳ ಮೇಲೆ ಹಲ್ಲೆಗಳು ನಡೆದಾಗ ಬೀದಿಗಿಳಿದು ಪ್ರತಿಭಟನೆ ಮಾಡುವ ಸಂಘಟನೆಗಳ, ಜೀವಪರ ಮನಸ್ಸುಗಳ ಕೊರತೆ ಇದೆ. ಹೀಗಾಗಿ ಇಲ್ಲಿನ ಅಂತರ್ಜಾತಿ ವಿವಾಹಗಳು ದುರಂತ ಅಂತ್ಯ ಕಾಣುತ್ತವೆ ಎಂದು ಗದಗದ ದಲಿತಪರ ಹೋರಾಟಗಾರ ರಮೇಶ ಕೋಳೂರು ನೋವಿನಿಂದ ಹೇಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತೀಯತೆ ಎನ್ನುವುದು ಮೇಲ್ಜಾತಿಯ ಜನರಲ್ಲಿ ಮಾತ್ರವಲ್ಲ, ಬಹುತೇಕ ಜಾತಿಗಳಲ್ಲಿ ತುಂಬಿ ತುಳುಕುತ್ತಿದೆ. ಇದೇ ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...