Homeಕರ್ನಾಟಕ19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ...

19 ದಿನಗಳಲ್ಲಿ ಮುರಿದು ಬಿದ್ದ ಅಂತರ್ಜಾತಿ ವಿವಾಹ : ಹುಡುಗ ಆಸ್ಪತ್ರೆಯಲ್ಲಿ, ಹುಡುಗಿಗೆ ಮತ್ತೊಂದು ಮದುವೆಗೆ ಸಿದ್ಧತೆ

ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ.

- Advertisement -
- Advertisement -

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಯುವಜೋಡಿಗಳ ಪ್ರಕರಣ ಸಿನಿಮಿಯ ರೀತಿಯಲ್ಲಿ ಕೊನೆಗೊಂಡಿದೆ. ಕೊನೆಗೂ ಆ ಪ್ರಕರಣದಲ್ಲಿ ಊರ ಹಿರಿಯರು ಎನಿಸಿಕೊಳ್ಳುವ ನೈತಿಕತೆಯ ವಾರಸುದಾರರು ಹುಡುಗ ಹುಡುಗಿಯನ್ನು ಬೇರ್ಪಡಿಸಿ ದುರಂತ ಅಂತ್ಯದ ಷರಾ ಬರೆದಿದ್ದಾರೆ.

ಹುಡುಗ ಗಾಣಿಗ ಸಮುದಾಯದವ. ಹುಡುಗಿ ಮಾದರ ಜಾತಿಗೆ ಸೇರಿದವಳು. ಈ ಯುವಪ್ರೇಮಿಗಳು ಕಳೆದ ಅಕ್ಟೋಬರ್ 24ರಂದು ಕಾನೂನುಬದ್ಧವಾಗಿಯೇ ರಜಿಸ್ಟರ್ ಮದುವೆಯಾಗಿದ್ದರು. ಕೇವಲ ಮದುವೆಯಾಗಿ 19 ದಿನಗಳಲ್ಲೆ ಮುರಿದು ಬಿದ್ದಿದೆ. ಮತ್ತು ಈ ಪ್ರಕರಣ ಗೊತ್ತಿದ್ದರೂ ಏನು ಮಾಡಲಿಕ್ಕಾಗದೇ  ಹಲವಾರು ಜೀವಪರ ಮನಸ್ಸುಗಳು ದಲಿತಪರ ಸಂಘಟನೆಗಳು ಏನೂ ಮಡಲಾಗದೇ ಕೈ ಚೆಲ್ಲಿ ಕುಳಿತಿವೆ.

ನಿಮ್ಮ ಮದುವೆಯನ್ನು ಮಾನ್ಯ ಮಾಡುತ್ತೇವೆ ಬನ್ನಿ ಎಂದು ಊರಿಂದ ತಪ್ಪಿಸಿಕೊಂಡು ದೂರ ಹೋಗಿದ್ದ ಯುವಪ್ರೇಮಿಗಳನ್ನು ಊರಿನ ನೈತಿಕತೆಯ ವಾರಸುದಾರರು ವಾಪಸ್ ಕರೆಸಿಕೊಂಡಿದ್ದರು. ಆದರೆ, ಆದದ್ದೇ ಬೇರೆ. ಹುಡುಗಿಯದ್ದು ಕೀಳುಜಾತಿಯಾದ್ದರಿಂದ ಹುಡುಗಿಯನ್ನು ಮರೆತುಬಿಡಬೇಕೆಂದು ಹುಡುಗನಿಗೆ ವಾರ್ನಿಂಗ್ ಮಾಡಿದ್ದಾರೆ. ಹುಡುಗ ಒಪ್ಪದಿದ್ದುದ್ದಕ್ಕೆ ಅವನನ್ನು ಮೈ ಬಾಯುವ ಹಾಗೆ ಮುಖ ಮೋತಿಯನ್ನದೇ ಬಡಿದು ಹೆದರಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಕೆಲವು ದಲಿತಪರ ಹೋರಾಟಗಾರರಾದ ನಾಗಮ್ಮ, ರಮೇಶ ಕೋಳೂರು ಮತ್ತಿತರರು ಧಾವಿಸಿ ಬಂದು ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಎರಡು ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಸುಖಾಂತ್ಯ ಹಾಡಲು ನೋಡಿದ್ದಾರೆ.

ಆದರೆ, ಅಷ್ಟೊತ್ತಿಗೆಗಾಗಲೇ ನೈತಿಕ ವಾರಸುದಾರರು ಹೆದರಿಸುವಿಕೆ ಮತ್ತು ಪುಸಲಾಯಿಸುವಿಕೆ ಎಷ್ಟರಮಟ್ಟಿಗೆ ಇತ್ತೆಂದರೆ ಸಂಜೆ ಅಷ್ಟೊತ್ತಿಗೆ ನಾನು ಆ ಹುಡುಗನೊಂದಿಗೆ ಬಾಳ್ವೆ ಮಾಡಲು ಸುತಾರಂ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ  ಎಂದು ಪೊಲೀಸರ ಮುಂದೆಯೇ ಹುಡುಗಿ ಉಲ್ಟಾ ಹೊಡೆದಿದ್ದಾಳೆ. “ನೀನು ಅವನನ್ನು ಬಿಟ್ಟರೆ ನಿನ್ನನ್ನು ಇವನೊಂದಿಗೆ ಮದುವೆಯ ಮಾಡುತ್ತೇವೆ ಬಿಡು” ಎಂದು ನೈತಿಕತೆಯ ವಾರಸುದಾರರು ಮೊದಲೇ ರೆಡಿ ಇಟ್ಟುಕೊಂಡಿದ್ದ ಸಜಾತಿಯ ವರನನ್ನು ಹುಡುಗಿ ಮುಂದೆ ನಿಲ್ಲಿಸಿದ್ದಾರೆ.  “ಇವನೊಂದಿಗೆ ಮದವೆ ಮಾಡುವ ಜವಾಬ್ಧಾರಿ ನಮ್ಮದು” ಎಂದು ಹುಡುಗಿಗೆ ಧೈರ್ಯ ತುಂಬಿದ್ದಾರೆ. ಕೋಲೆ ಬಸವನಂತ ಆ ಹುಡುಗ ಕೂಡ ತಲೆಯಾಡಿಸಿದ್ದಾನೆ.

ಹೀಗೆ ಸಂಜೆಯ ಹೊತ್ತಿಗೆ ಪೊಲೀಸ್ ಠಾಣೆಯಲ್ಲೆ ಸಿನಿಮಿಯ ರೀತಿಯಲ್ಲಿ ಉಲ್ಟಾ ಹೊಡೆದ ಪ್ರಕರಣ ನೋಡಿದ ಪೊಲೀಸ್ ಇನ್ಸಪೆಕ್ಟರ್ ಸಹ “ಆ ಹುಡುಗ ಹುಡುಗಿಯ ಬದುಕನ್ನು ಬಲಿಪಶು ತೊಗೊತ್ತಿದ್ದಿರಲ್ಲ ನೀವು, ನಾಚಿಕೆಯಾಗಲ್ವಾ, ಈ ಹೊಸ ಹುಡುಗ ಈ ಹುಡುಗಿಯನ್ನು ಮುಂದೆ ಚನ್ನಾಗಿ ಬಾಳಿಸದಿದ್ದರೆ, ಅನುಮಾನಪಡತೊಡಗಿದರೆ ಏನ್ ಮಾಡ್ತಿರಿ ಎಂದು ಎರಡೂ ಕಡೆಯವರನ್ನು ಹತಾಶೆಯಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂತೂ ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ. ನನ್ನ ಹುಡುಗಿಯನ್ನು ನನಗೆ ಕೊಡಿಸಿದರೆ ಸಾಕು ಎಂದು ಆತ ಅಳತೊಡಗಿದ್ದಾನೆ.

ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಅಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಯುವ ದಂಪತಿಗಳ ಜೋಡಿ ಕೊಲೆ ನಡೆದಿತ್ತು. ಅದು ನಡೆದ ಒಂದೇ ವಾರದಲ್ಲಿ ಈಗ ಈ ಪ್ರಕರಣ ನಡೆದಿದೆ. ಹಾಗೆ ನೋಡಿದರೆ ಜಾತಿ ಗೋಡೆಯನ್ನು ಕಿತ್ತೆಸೆದು, ಧರ್ಮದ ಬೇಲಿಗೆ ಕಿವಿಗೊಡದೇ ಹಲವಾರು ಯುವ ಜೋಡಿಗಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಆ ಜೋಡಿಗಳು ನೆಮ್ಮದಿಯಿಂದ ಬಾಳುವೆ ಮಾಡುವ ವಾತಾವರಣ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬರುವುದಿಲ್ಲ. ಈ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಗಳು ಸಹ ಅಷ್ಟೊಂದು ಸಕ್ರಿಯವಾಗಿಲ್ಲ.

ಮಾಡದ ತಪ್ಪಿಗೆ ಆತ ತನ್ನ ಹುಡುಗಿಯನ್ನು ಇನ್ನೊಂದು ಹುಡುಗನೊಂದಿಗ ಮದುವೆ ಮಾಡಿಸಲು ಖರ್ಚಿನ ಬಾಬ್ತು ಎಂದು ಮೂರು ಲಕ್ಷ ರೂಪಾಯಿ ತಪ್ಪುದಂಡ ಕೊಡಬೇಕು. ಈ ಹಣದಲ್ಲಿ ಒಂದಿಷ್ಟು ಪಾಲು ಎರಡು ಕಡೆಯ ನೈತಿಕ ವಾರಸುದಾರರಿಗೂ ಹಂಚಿಕೆಯಾಗುತ್ತದೆ ಎಂಬ ಆರೋಪವೂ ಸ್ಥಳಿಯರಿಂದ ಕೇಳಿ ಬಂದಿದೆ.

ಈ ಎರಡು ಪ್ರಕರಣಗಳ ಹಿಂದೆ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಧೈರ್ಯ ತುಂಬುವ, ಕರೆತಂದು ಮದುವೆ ಮಾಡಿಸುವ, ಇಂಥ ಯುವಜೋಡಿಗಳ ಮೇಲೆ ಹಲ್ಲೆಗಳು ನಡೆದಾಗ ಬೀದಿಗಿಳಿದು ಪ್ರತಿಭಟನೆ ಮಾಡುವ ಸಂಘಟನೆಗಳ, ಜೀವಪರ ಮನಸ್ಸುಗಳ ಕೊರತೆ ಇದೆ. ಹೀಗಾಗಿ ಇಲ್ಲಿನ ಅಂತರ್ಜಾತಿ ವಿವಾಹಗಳು ದುರಂತ ಅಂತ್ಯ ಕಾಣುತ್ತವೆ ಎಂದು ಗದಗದ ದಲಿತಪರ ಹೋರಾಟಗಾರ ರಮೇಶ ಕೋಳೂರು ನೋವಿನಿಂದ ಹೇಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತೀಯತೆ ಎನ್ನುವುದು ಮೇಲ್ಜಾತಿಯ ಜನರಲ್ಲಿ ಮಾತ್ರವಲ್ಲ, ಬಹುತೇಕ ಜಾತಿಗಳಲ್ಲಿ ತುಂಬಿ ತುಳುಕುತ್ತಿದೆ. ಇದೇ ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...