Homeಕರ್ನಾಟಕಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

ಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

- Advertisement -
- Advertisement -

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಅಂಬಣ್ಣ ಅರೋಲಿಕರ್‌ ಅವರ ತಂದೆ ಷಣ್ಮುಖಪ್ಪ ಅರೋಲಿ ನಿಧನರಾಗಿದ್ದಾರೆ.

ಶತಾಯುಷಿಯಾಗಿದ್ದ ಷಣ್ಮುಖಪ್ಪ ಅವರು ವಯೋಸಹಜ ಅನಾರೋಗ್ಯದಲ್ಲಿದ್ದರು. ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಬುಧವಾರ 2.30ಕ್ಕೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಅರೋಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ನಿಧನದ ಕುರಿತು ‘ಒಳಮೀಸಲಾತಿ’ ಫೇಸ್‌ಬುಕ್‌ ಪುಟದಲ್ಲಿ ತಿಳಿಸಲಾಗಿದ್ದು, “ವಯಸ್ಸಾದ, ಅನಾರೋಗ್ಯದಲ್ಲಿದ್ದ ತಂದೆಯನ್ನು ಮನೆಯಲ್ಲಿ ಬಿಟ್ಟು ಶೋಷಿತ, ಅವಕಾಶ ವಂಚಿತ ಜನರ ಹಕ್ಕುಗಳಿಗಾಗಿ ಹಲವಾರು ದಿನ, ನೂರಾರು ಊರು ಕೇರಿ ಸುತ್ತಿ ಅಂಬಣ್ಣ ಅರೋಲಿಕರ್‌‌ ಪಾದಯಾತ್ರೆ ಮಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟದಲ್ಲಿದ್ದ ಅಂಬಣ್ಣ ಅವರ ತಂದೆ ಈಗ ನಮ್ಮನ್ನ ಅಗಲಿದ್ದಾರೆ. ಇವರಿಗೆ ಎಲ್ಲಾ ರೀತಿಯಲ್ಲೂ ಅನೇಕ ಹೋರಾಟದ ಸಂಗಾತಿಗಳು ಜೊತೆ ನಿಂತಿದ್ದಾರೆ. ಹೋರಾಟವೂ ಮುಂದುವರೆಯುತ್ತಿದೆ. ಇಂತಹ ಹೊತ್ತಲ್ಲಿ ತಂದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅಂಬಣ್ಣ ಮತ್ತು ಅವರ ಕುಟುಂಬಕ್ಕೆ ಬರಲಿ. ನಿಮ್ಮ ದುಃಖದಲ್ಲಿ ನಾವೆಲ್ಲ ಭಾಗಿ, ನಿಮ್ಮ ಜೊತೆಯಲ್ಲಿ ನಾವಿದ್ದೇವೆ” ಎಂದು ಸಂತಾಪ ಸೂಚಿಸಲಾಗಿದೆ.

ಚಿಂತಕರಾದ ಹುಲಿಕುಂಟೆಮೂರ್ತಿಯವರು ಪ್ರತಿಕ್ರಿಯಿಸಿ, “ಒಳಮೀಸಲಾತಿ ಕಾಲ್ನಡಿಗೆ ಜಾಥಾ ತುಮಕೂರಿಗೆ ಬಂದ ದಿನವೇ ಅಂಬಣ್ಣ ಅವರ ತಂದೆ ಆರೋಗ್ಯದಲ್ಲಿ ಹೆಚ್ಚೇ ಏರುಪೇರಾಗಿತ್ತು. ಅಂಬಣ್ಣ ಹೋಗಿ ಜಾಥಾ ನೆಲಮಂಗಲ ತಲುಪುವಷ್ಟರಲ್ಲಿ ಬಂದುಬಿಟ್ಟರು. ಅವರಿಗೆ ತಂದೆಯ ಅನಾರೋಗ್ಯ ಮತ್ತು ಹೋರಾಟದ ದಿಕ್ಕು ಎರಡೂ ತಲೆಯಲ್ಲಿ ಕೊರೆಯುತ್ತಿದ್ದವು. ಜೈಲಿಗೂ ಹೋಗಿಬಂದರು. ಒಳಗಿನ ಕಾರಣಗಳಿಗೆ‌ ಕಣ್ಣೀರು ಹಾಕಿದರು. ಅಪ್ಪ ಅಂಬಣ್ಣನನ್ನು ಬಿಟ್ಟು ಹೋಗೇಬಿಟ್ಟರು. ಅಂತ್ಯಕ್ರಿಯೆ ಮುಗಿಸಿ ಅಂಬಣ್ಣ ನಾಳೆಯೇ ಬೆಂಗಳೂರಿಗೆ ಬರ್ತಿದಾರೆ. ಹೋರಾಟ ನಿಲ್ಲುವುದಿಲ್ಲ” ಎಂದಿದ್ದಾರೆ.

ಮುಖಂಡರಾದ ಉದಯ್ ಅರೋಲಿಕರ್‌ ಅವರು ಅಂಬಣ್ಣ ಅವರ ಪ್ರತಿಕ್ರಿಯೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನಪ್ಪ ಡಿಸೆಂಬರ್ 11 ರ ಹೋರಾಟಕ್ಕೂ ಮುನ್ನವೇ ಕೊನೆಯುಸಿರು ಬಿಡಬಹುದೆಂಬ ಆತಂಕ ನನ್ನ ಕುಟುಂಬಕ್ಕಿತ್ತು. ಭರವಸೆಯನ್ನು ತಂದೆ ಹುಸಿಗೊಳಿಸಿ ಹೋರಾಟದ ಗಡುವಿಗೆ ಜೀವತುಂಬಿ ಇಂದು ಜೀವ ಬಿಟ್ಟಿದ್ದಾರೆ. ಅಪ್ಪನ ಅಂತಿಮ ಪಯಣಕ್ಕೆ ನಾವುಗಳು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸೋಣ. ನನ್ನ ತಾಯಿ ನಾನು 11 ವರ್ಷದವನಿದ್ದಾಗಲೇ ಕಾಲರಾಕ್ಕೆ ಬಲಿಯಾದಾಗಿನಿಂದ ನನಗೆ ತಂದೆಯೇ ನನಗೆ ತಾಯಿಯಾಗಿದ್ದರು.  ಮಾರ್ಗದರ್ಶಕನಾಗಿರುವುದಲ್ಲದೇ ನನ್ನ ಹೋರಾಟದ ಹಾದಿಗೆ ಎಂದು ಅಡ್ಡಿಪಡಿಸದೇ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ನನ್ಪಪ್ಪನದು ಸಹ ಅವಿಶ್ರಾಂತ ಹೋರಾಟದ ದಾರಿಯೆನ್ನುವುದರಲ್ಲಿ ಸಂಶಯವಿಲ್ಲ” ಎಂದು ಅಂಬಣ್ಣ ಸ್ಮರಿಸಿದ್ದಾರೆ.

“ಸಾಲಿ ಮಾಸ್ತಾರನಾಗಬೇಕೆಂಬ ನನ್ನ ತಂದೆಯ ಆಶಯಕ್ಕೆ ತದ್ವಿರುದ್ಧವಾಗಿ ತಮಟೆ ಬಾರಿಸಿದ ನನ್ನ ಮೇಲೆ ಹಾಗೂ ನನ್ನ ಹೋರಾಟದ ಸ್ಫೂರ್ತಿಯಾದ ಪ್ರಜಾಯುದ್ದನೌಕೆ ಗದ್ದರ್ ವಿರುದ್ಧದ ಕೋಪ ಇಂದಿಗೂ ಶಮನವಾಗದಿದ್ದರೂ ನಾನು ನಡೆವ ದಾರಿ ನೂರಾರು ಜನರಿಗೆ ಉಪಯುಕ್ತ ಮಾರ್ಗವೆಂಬ ಖಾತರಿ ಇರುವುದರಿಂದ ನನಗೆ ಸಂಪೂರ್ಣ ವಿನಾಯಿತಿ ಸಿಕ್ಕಿತ್ತು” ಎಂದು ನೆನೆದಿದ್ದಾರೆ.

“ಮೂರು ದಿನಗಳ ಹಿಂದೆ ಹೋರಾಟದ ಒತ್ತಡಗಳ ಮಧ್ಯೆ ಒಮ್ಮೆ ನೋಡಿ ಕಣ್ತುಂಬಿಸಿಕೊಂಡಿದ್ದೆ. ಡಿಸೆಂಬರ್ 11ರ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಡಿಸೆಂಬರ್‌‌ 19ರ ಅಧಿವೇಶನದಲ್ಲಿ ಒಳಮೀಸಲಾತಿ ಪ್ರಸ್ತಾಪಕ್ಕೆ ಸರ್ಕಾರದ ಗಮನಸೆಳೆಯುವ ಬಿರುಸಿನ ಪ್ರಯತ್ನಕ್ಕಾಗಿ ಇಂದು ಒಡನಾಡಿಗಳು ಖಾಯಂ ಹೋರಾಟದ ಬಿಡಾರ ಸಜ್ಜುಗೊಳಿಸುವ ಪ್ರಯತ್ನದಲ್ಲಿದ್ದೆವು. ಈ ಸಂದರ್ಭದಲ್ಲಿ ನನ್ನ ಪತ್ನಿ ಸುಜಾತಾ ಅಘಾತಕರ ಸುದ್ದಿಯನ್ನು ತಿಳಿಸಿದರು. ರಾಜಧಾನಿಯಿಂದ ರಾಯಚೂರಿಗೆ ಪಯಣ ಬೆಳೆಸಿರುವೆ” ಎಂದು ಹೇಳಿದ್ದಾರೆ.

“ನನ್ನ ಅನುಪಸ್ಥಿತಿಯಲ್ಲಿ ನನ್ನ ಮಡದಿ ಸುಜಾತಳ ಹಾರೈಕೆಯಿಂದಾಗಿ ಅಪ್ಪ ಇಷ್ಟು ವರ್ಷ ನಮ್ಮೊಂದಿಗಿರಲು ಸಾಧ್ಯವಾಗಿದೆ. ಸರ್ಕಾರ ಪ್ರಕಟಿಸಿರುವ ಒಳಮೀಸಲಾತಿ ಕುರಿತ ಉಪಸಮಿತಿ ಹಾಗೂ ಉಪಸಮಿತಿಯ ಮೊದಲ ಸಭೆ ಘೋಷಣೆಯ ಹಿನ್ನೆಲೆಯಲ್ಲಿ ಮುಂದೆ ಹಮ್ಮಿಕೊಳ್ಳಬೇಕಾದ ಹೋರಾಟದ ಹೆಜ್ಜೆಗಳನ್ನು ಅತ್ಯಂತ ಜಾಗರೂಕತೆಯಿಂದ ಮುಂದುವರೆಸೋಣ ಎಂದು ತಮ್ಮಲ್ಲಿ ಕೋರುತ್ತಾ ಅಪ್ಪನ ಅಂತಿಮ ಪಯಣಕ್ಕೆ ಹೋಗಿಬರುವೆ” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...