Homeಕರ್ನಾಟಕನಿಮಾನ್ಸ್‌‌ ನೇಮಕಾತಿ ಪ್ರಕಟಣೆ: ಮೇಲ್ಜಾತಿಗೆ ಶೇ.64ರಷ್ಟು ಹುದ್ದೆ ಸಿಗುವಂತೆ ಹಂಚಿಕೆ- ಆರೋಪ

ನಿಮಾನ್ಸ್‌‌ ನೇಮಕಾತಿ ಪ್ರಕಟಣೆ: ಮೇಲ್ಜಾತಿಗೆ ಶೇ.64ರಷ್ಟು ಹುದ್ದೆ ಸಿಗುವಂತೆ ಹಂಚಿಕೆ- ಆರೋಪ

50% ಜನಸಂಖ್ಯೆಗೆ ಕೇವಲ 9 ಹುದ್ದೆಗಳನ್ನು ನೀಡಿ, ಬೆರಳೆಣಿಯಷ್ಟಿರುವ ಜಾತಿಗೆ 16 ಹುದ್ದೆಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಬಂದಿದೆ.

- Advertisement -
- Advertisement -

ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮಾನ್ಸ್‌‌) ನೀಡಿರುವ ನೇಮಕಾತಿ ಪ್ರಕಟಣೆಯು ಅನ್ಯಾಯದಿಂದ ಕೂಡಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯ ಎಸಗುವಂತೆ ಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಸ್ಪಶ್ಯ ಮೇಲ್ಜಾತಿಗಳಿಗೆ ಮುಖ್ಯವಾಗಿ ಬ್ರಾಹ್ಮಣರಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ. ಇದು ಸಂಘಪರಿವಾರದ ಸಾಮಾಜಿಕ ನ್ಯಾಯ ಎಂದು ಚಿಂತಕರು ಆರೋಪಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, “ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ನಿಮಾನ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸಮಾಡಲು, ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಇಂದು ನೋಟಿಫಿಕೇಶನ್ ಪ್ರಕಟವಾಗಿದೆ. ಇಲ್ಲಿ ಒಟ್ಟಾರೆ 25 ಹುದ್ದೆಗಳಿವೆ. ಇದರಲ್ಲಿ 11 ಹುದ್ದೆಗಳನ್ನು ಯುಆರ್‌‌ (unreserved) ಅಡಿ ನೀಡಲಾಗಿದೆ. ಅಂದರೆ ಜನರಲ್ ಕ್ಯಾಟಗರಿಯವರು ತೆಗೆದುಕೊಳ್ಳುತ್ತಾರೆ. ಈ ‘ಜನರಲ್’ನಲ್ಲಿ ಈ ಹುದ್ದೆಗಳನ್ನು ಯಾರು ಪಡೆಯುತ್ತಾರೆಂದು ವಿವರಿಸಬೇಕಿಲ್ಲ” ಎಂದು ತಿಳಿಸಿದ್ದಾರೆ.

“ಮಿಕ್ಕಂತೆ 5 ಪೋಸ್ಟ್‌ಗಳನ್ನು ಇಡಬ್ಲ್ಯೂಎಸ್‌ (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲು ಮಾಡಲಾಗಿದೆ. ಅಂದರೆ ಮೇಲ್ಜಾತಿ ಮತ್ತು ಮೇಲ್ಜಾತಿ ‘ಬಡವರಿಗೆ’ ಒಟ್ಟು 16 ಹುದ್ದೆಗಳು, ಮಿಕ್ಕಂತೆ ಒಬಿಸಿಗೆಗಳಿಗೆ 5, ಎಸ್‌ಸಿಗೆ 3, ಮತ್ತು ಎಸ್‌ಟಿಗೆ 1 ಪೋಸ್ಟ್ ಅನ್ನು ನೀಡಲಾಗಿದೆ. ಅಂದರೆ ಒಟ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸೇರಿ 50% ಜನಸಂಖ್ಯೆಗೆ ಕೇವಲ 9 ಹುದ್ದೆಗಳು. ಹೇಗಿದೆ ಸಂಘಪರಿವಾರ ಸರ್ಕಾರದ ‘ಸಾಮಾಜಿಕ ನ್ಯಾಯ!?’ ಅಲ್ಲಿ ಜೀತ ಮಾಡುತ್ತಿರುವ, ಚೆಡ್ಡಿ ಹೊರುತ್ತಿರುವ ನಮ್ಮ ಎಸ್‌ಸಿ, ಎಸ್‌ಟಿ, ಒಬಿಸಿ ಗೇಟ್ ಕೀಪರ್‌ಗಳಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಕಸ್ಮಾತ್ ಅರ್ಥವಾದರೂ ಬಾಯಿಗೆ ಲಕ್ವ ಬಡಿದವರಂತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಂತಕರಾದ ಶ್ರೀಪಾದ್ ಭಟ್ ಅವರು ನಿಮಾನ್ಸ್‌‌ ನೇಮಕಾತಿಗೆ ಸಂಬಂಧಿಸಿದಂತೆ ಎದ್ದಿರುವ ಆಕ್ಷೇಪಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು. “ಇಡಬ್ಲ್ಯೂಎಸ್‌ ಅಡಿ ಬರುವ ಜಾತಿಗಳ ಅಧಿಕೃತ ಪಟ್ಟಿಯನ್ನೇ ಕರ್ನಾಟಕ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಇಡಬ್ಲ್ಯೂಎಸ್‌‌ ಹೇಗೆ ಕೊಡುತ್ತಾರೆ?” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ ಇಡಬ್ಲ್ಯೂಎಸ್‌ ಅಡಿ ಫಲಾನುಭವಿಗಳಾಗುವುದು ಬ್ರಾಹ್ಮಣರು ಮಾತ್ರ. ಉಳಿದಂತೆ ನಾಯರ್‌ಗಳು, ಮೊದಲಿಯಾರ್‌ಗಳು, ಕೋಮ್ಟ ಶೆಟ್ಟರು, ಮಾರ್ವಾಡಿಗಳು ಅರ್ಜಿ ಸಲ್ಲಿಸುವುದು ಅನುಮಾನ. ಹೀಗಾಗಿ ಇಡಬ್ಲ್ಯೂಎಸ್‌ನ ಐದು ಪೋಸ್ಟ್‌ಗಳನ್ನೂ ಬ್ರಾಹ್ಮಣರೇ ಪಡೆದುಕೊಳ್ಳುತ್ತಾರೆ” ಎಂದು ವಿವರಿಸಿದರು.

“ಇಡಬ್ಲ್ಯೂಎಸ್‌ಗೆ ನೀಡಿರುವ ಐದು ಪೋಸ್ಟ್‌ಗಳನ್ನು ಎಲ್ಲಿಂದ ಕಿತ್ತುಕೊಂಡಿದ್ದಾರೆ? ಹಿಂದೆ ಎಸ್‌ಸಿ, ಎಸ್‌ಟಿ, ಒಬಿಸಿ, ಜನರಲ್ ಕ್ಯಾಟಗರಿಗಳಿಗೆ ಎಷ್ಟು ಸ್ಥಾನಗಳು ಮೀಸಲಾಗಿದ್ದವು? ಇಡಬ್ಲ್ಯೂಎಸ್‌ಗಾಗಿ ಹೊಸ ಪೋಸ್ಟ್‌ಗಳನ್ನು ಸೃಷ್ಟಿ ಮಾಡಿದ್ದಾರಾ? ಅಥವಾ ಎಸ್‌ಸಿ, ಎಸ್‌ಟಿ, ಒಬಿಸಿಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಿ ಇಡಬ್ಲ್ಯೂಎಸ್‌ ಕೋಟಾ ನೀಡಿದ್ದಾರಾ?- ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬೇಕು” ಎಂದು ಆಗ್ರಹಿಸಿದರು.

 ಇದನ್ನೂ ಓದಿರಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

“ಬ್ರಾಹ್ಮಣೇತರ ಜಾತಿಗಳ ಅಭ್ಯರ್ಥಿಗಳು ಕೂಡ ಜನರಲ್‌ ಕ್ಯಾಟಗರಿಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ಸಂದರ್ಶನಗಳಲ್ಲಿ ಮೇಲ್ಜಾತಿ ವ್ಯಕ್ತಿಗಳೇ ಕೂತಿರುತ್ತಾರೆ. ಹೀಗಾಗಿ ಅನೇಕ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಜಾತಿಗಳ ವ್ಯಕ್ತಿಗಳನ್ನು ವ್ಯವಸ್ಥಿತಿವಾಗಿ ಹೊರಗೆ ಹಾಕಲಾಗುತ್ತದೆ. ತಾಂತ್ರಿಕ ಕಾರಣವನ್ನೋ, ಮತ್ಯಾವುದೋ ತಕರಾರರನ್ನೋ ತೆಗೆದು ಈಗಿರುವ 11 ಸ್ಥಾನಗಳೂ ಬ್ರಾಹ್ಮಣರಿಗೆ ಸಿಗುವಂತೆ ನೋಡಿಕೊಳ್ಳುತ್ತಾರೆ. ಇಡಬ್ಲ್ಯೂಎಸ್‌ ಮತ್ತು ಜನರಲ್ ಕ್ಯಾಟಗರಿ ಸೇರಿ 16 ಪೋಸ್ಟ್‌ಗಳನ್ನು ಬ್ರಾಹ್ಮಣರೇ ಪಡೆದುಕೊಳ್ಳುತ್ತಾರೆ” ಎಂದು ವಿಷಾದಿಸಿದರು.

ಚಿಂತಕರು ಆರೋಪಿಸುತ್ತಿರುವಂತೆ 25 ಪೋಸ್ಟ್‌ಗಳಲ್ಲಿ 16 ಹುದ್ದೆಗಳು ಬ್ರಾಹ್ಮಣರಿಗೆ ಹೋದರೆ ಶೇ. 64ರಷ್ಟು ಸ್ಥಾನಗಳು ಒಂದು ಜಾತಿಗೆ ಸಿಕ್ಕಂತಾಗುತ್ತದೆ. ಈಗ ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಅಂಕಿ-ಅಂಶದ ಪ್ರಕಾರ ಶೇ. 2ರಷ್ಟಿರುವ ಬ್ರಾಹ್ಮಣರಿಗೆ 64ರಷ್ಟು ಅವಕಾಶ ನೀಡಿದಂತಾಗುತ್ತದೆ. ಒಂದು ವೇಳೆ ಇಡಬ್ಲೂಎಸ್‌ ಅಡಿ ಬರುವ ಇತರ ಸಮುದಾಯದಲ್ಲಿ ಯಾರಾದರೂ ಅರ್ಜಿ ಹಾಕಿದರೂ ಶೇ. 90ರಷ್ಟು ಫಲಾನುಭವಿಗಳು ಬ್ರಾಹ್ಮಣರೇ ಆಗಿರುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 50% ಜನಸಂಖ್ಯೆಗೆ ಕೇವಲ 9 ಹುದ್ದೆಗಳನ್ನು ನೀಡಿ, ಶೇ. 2ರಷ್ಟಿರುವ ಜಾತಿಗೆ 16 ಹುದ್ದೆಗಳನ್ನು ನೀಡಲಾಗುತ್ತಿದೆ ಎಂಬ ವಾದ ಮುನ್ನೆಲೆಗೆ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಅಹಿಂದ ವರ್ಗದವರು ಒಗ್ಗಟ್ಟಿನಿಂದ ಇಂತಹ ಅನ್ಯಾಯಗಳನ್ನು ಪ್ರತಿಬಟಿಸಬೇಕು.

  2. ಅಂದರೆ ದ್ವಾರಕಾನಾಥ್ ಪ್ರಕಾರ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಲ್ಲಿ ಪ್ರತಿಭೆ ಇಲ್ಲ ಹಾಗಾಗಿ ಜೆನರಲ್ ಕೆಟೊಗರಿಯ ಎಲ್ಲಾ ಹುದ್ದೆಗಳೂ ಬ್ರಾಹ್ಮಣರ ಪಾಲಾಗುತ್ತವೆ ಎನ್ನುವ ವಾದ ಎಷ್ಟು ಸಾರಿ? ಇದು ಬ್ರಾಹ್ಮಣ ಏತರರಿಗೆ ಮಾಡುವ ಅವಮಾನ ಅಲ್ಲವೇ?

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...