Homeಅಂತರಾಷ್ಟ್ರೀಯಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

ಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

- Advertisement -
- Advertisement -

 

| ಭರತ್ ಹೆಬ್ಬಾಳ |

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್‍ನ ಸಂಬಂಧಗಳು ಹದಗೆಡುತ್ತಲೇ ಇವೆ. ಇದನ್ನೇ ಮುಂದುವರೆಸಿ, ಏಪ್ರಿಲ್ 22ರಂದು ಅಮೆರಿಕ ದೇಶವು ಇರಾನಿನ ಮೇಲೆ ಸಂಪೂರ್ಣ ಆರ್ಥಿಕ ಸಮರವನ್ನೇ ಘೋಷಿಸಿದೆ. ‘ಇರಾನಿನಿಂದ ಇತರ ದೇಶಗಳಿಗೆ ರಫ್ತು ಆಗುವ ತೈಲದ ಪ್ರಮಾಣವನ್ನು ಸೊನ್ನೆಗೆ ಇಳಿಸುವುದೇ ಈ ನಿರ್ಧಾರದ ಉದ್ದೇಶ. ಅದರಿಂದ ಆ ದೇಶದ ಆದಾಯದ ಪ್ರಮುಖ ಮೂಲವನ್ನು ಇಲ್ಲವಾಗಿಸುವುದು’. ಈ ಹೇಳಿಕೆ ಬಂದಿದ್ದು ಅಮೇರಿಕದ ವೈಟ್‍ಹೌಸ್‍ನಿಂದ. ತೈಲವೇ ಇರಾನಿನ ಪ್ರಮುಖ ರಫ್ತು ಆಗಿದ್ದು, ಅಮೇರಿಕದಲ್ಲಿ ಟ್ರಂಪ್ ಆಡಳಿತ ಬಂದನಂತರ ಇರಾನ್ ದೇಶದ ಕತ್ತುಹಿಸುಕಿ ತನ್ನ ತಾಳಕ್ಕೆ ಕುಣಿಯುವಂತೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಪ್ರಸ್ತುತ ಸಮಯದಲ್ಲಿ ಇರಾನ್ ಪ್ರತಿನಿತ್ಯ 10 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. 2018ರ ನವೆಂಬರ್ 5ರಂದು ಮೊದಲ ಬಾರಿ ನಿರ್ಬಂಧನೆಗಳನ್ನು ಹೇರಲಾಗಿತ್ತು. ಆಗ ಅಮೆರಿಕ 8 ದೇಶಗಳಿಗೆ ತೈಲದ ಆಮದನ್ನು ನಿಲ್ಲಿಸಲು 6 ತಿಂಗಳ ಸಮಯಾವಕಾಶವನ್ನು ನೀಡಲಾಗಿತ್ತು. ಒಂದೇ ಬಾರಿ ಸಂಪೂರ್ಣ ನಿರ್ಬಂಧ ಹೇರಿದರೆ ಮಾರುಕಟ್ಟೆಗಳು ಅತಂತ್ರಗೊಳ್ಳುವವು ಎನ್ನುವ ಆತಂಕದ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ನಿರ್ಬಂಧನೆಗಳಿಗಿರುವ ಈ ವಿನಾಯಿತಿಗಳು ಏಪ್ರಿಲ್ 30 ರಂದು ಕೊನೆಗೊಳ್ಳುತ್ತವೆ, ಮೇ 1ರಿಂದ ಎಲ್ಲ ಎಂಟೂ ದೇಶಗಳು ನಿರ್ಬಂಧನೆಗಳಿಗೆ ಬದ್ಧವಾಗಬೇಕಿದೆ.

ಚೈನಾ, ಭಾರತ, ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಟರ್ಕಿ, ಇಟಲಿ ಮತ್ತು ಗ್ರೀಸ್ ಈ ನಿರ್ಬಂಧನೆಯಿಂದ 6 ತಿಂಗಳು ವಿನಾಯಿತಿ ಪಡೆದ ದೇಶಗಳು. ಜಪಾನ್, ದಕ್ಷಿಣ ಕೋರಿಯಾ ಮತ್ತು ತೈವಾನ್ ದೇಶಗಳು ಎರಡನೇ ಮಹಾಯುದ್ಧದ ನಂತರ ಅಮೇರಿಕವೇ ಈ ದೇಶಗಳ ರಕ್ಷಕ ದೇಶವಾಗಿರುವುದರಿಂದ ದಿಗ್ಬಂಧನೆಗಳಿಗೆ ಒಪ್ಪಿಕೊಳ್ಳುತ್ತವೆ. ಇಟಲಿ ಮತ್ತು ಗ್ರೀಸ್ ದೇಶಗಳು ಇರಾನ್‍ನಿಂದ ತುಂಬಾ ಕಡಿಮೆ ತೈಲ ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಚೈನಾ ದೇಶ ಈ ದಿಗ್ಬಂಧನೆಗಳಿಗೆ ಬದ್ಧವಾಗುವುದೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಟ್ರೇಡ್ ವಾರ್ ಮೇಲೆ ಅವಲಂಬಿತವಾಗಿದೆ. ಭಾರತದ ಪೆಟ್ರೋಲಿಯಮ್ ಸಚಿವರು ಅಮೆರಿಕ ವಿಧಿಸಿದ ದಿಗ್ಬಂಧನೆಗಳಿಗೆ ಬದ್ಧರಿರುವುದಾಗಿ ಹೇಳಿಕೆ ನೀಡಿದ್ದರಾದರೂ ಅಂತಿಮ ನಿರ್ಣಯ ಹೊಸ ಸರಕಾರ ಬಂದ ನಂತರವೇ. ಇರಾನ್‍ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ದೇಶ ಟರ್ಕಿ. ಈಗ ಬೇರೆ ಮೂಲಗಳಿಂದ ಇಷ್ಟು ಕಡಿಮೆ ಸಮಯದಲ್ಲಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದಾಗಿ, ಅದರ ಪರಿಣಾಮಗಳನ್ನು ಎದುರಿಸಬೇಕಾಗುವುದು.

ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್ (ಜೆಸಿಪಿಓಏ) ಎಂದು ಕರೆಯಲಾಗುವ ಬಹುಪಕ್ಷೀಯ ನ್ಯೂಕ್ಲಿಯರ್ ಒಪ್ಪಂದದಿಂದ ಮೇ 2018ರಲ್ಲಿ ಅಮೇರಿಕವು ಏಕಪಕ್ಷೀಯವಾಗಿ ಹಿಂತೆಗೆದು ಕೊಂಡಿತು, ಅಂದಿನಿಂದ ಈ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಬರಾಕ್ ಒಬಾಮಾ ಆಡಳಿತದ ಕಾಲದಲ್ಲಿ(2015) ಇರಾನ್ ಮತ್ತು ಆರು ವಿಶ್ವಶಕ್ತಿಗಳ ಮಧ್ಯೆ ಜೆಸಿಪಿಓಏ ರಚಿಸಲಾಗಿತ್ತು. ಆ ಒಪ್ಪಂದದಲ್ಲಿ ಹಿಂಪಡೆಯಲಾದ ಏಕಪಕ್ಷೀಯ ದಿಗ್ಬಂಧನೆಗಳನ್ನು ಟ್ರಂಪ್ ಆಡಳಿತ ಮತ್ತೆ ವಿಧಿಸಿದೆ. ಇತ್ತೀಚಿಗೆ ಹಲವಾರು ಷರತ್ತುಗಳ ಅಡಿಯಲ್ಲಿ ಈ ಒಪ್ಪಂದವನ್ನು ಇನ್ನೊಂದು ಸುತ್ತು ಚರ್ಚಿಸುವ ಪ್ರಸ್ತಾಪ ಇಟ್ಟಿದೆ. ಸಿರಿಯಾದಲ್ಲಿ ಆಳ್ವಿಕೆ ಬದಲಾವಣೆಗಾಗಿ ಅಮೆರಿಕ ಮಾಡಿದ ಯತ್ನಗಳು, ವೆನೆಜುವೆಲಾದಲ್ಲೂ ಮಾಡಿದ ಪ್ರಯತ್ನ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಯುದ್ಧಗಳ ಮಧ್ಯೆ ಇರಾನ್ ಅನ್ನು ಒಂದು ದುಷ್ಟ ಭಯೋತ್ಪಾದಕ ದೇಶವನ್ನಾಗಿ ಚಿತ್ರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನಿನ ಆಳ್ವಿಕೆಯು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೆಂದೂ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆಗಳನ್ನು ಹರಡಿಸುವ ಪ್ರಯತ್ನ ಇರಾನ್ ಮಾಡುತ್ತಿದೆ ಎಂದು ಅಮೆರಿಕ ಚಿತ್ರಿಸುತ್ತಿದೆ. 2002ರಲ್ಲಿ ಪ್ರಾರಂಭಿಸಿದ ಇರಾಕ್‍ನ ಯುದ್ಧವನ್ನೂ ಇದೇ ರೀತಿಯಲ್ಲಿ ಪ್ರಾರಂಭಿಸಲಾಗಿತ್ತು. ಆಗಲೂ ಈಗಿರುವ ರಕ್ಷಣಾ ಸಲಹಾಕಾರರಾದ ಜಾನ್ ಬೋಲ್ಟನ್ ಅವರೇ ಸಲಹಾಕಾರರಾಗಿದ್ದರು.

ಈಗ ಅಮೇರಿಕವು ಮಾತುಕತೆಗಳಿಗೆ ಇಟ್ಟಿರುವ ಷರತ್ತುಗಳನ್ನು ‘ಸುಳ್ಳುಗಳ ಸರಮಾಲೆ, ಇರಾನ್ ದೇಶವನ್ನು ತನ್ನ ಮಂಡಿಯೂರಿಸುವ ಉದ್ದೇಶದಿಂದ ವಿಧಿಸಲಾಗಿದ್ದು’ ಎಂದು ಇರಾನ್‍ನ ಅಧ್ಯಕ್ಷ ಹಸನ್ ರೋಹಾನಿ ಹೇಳಿದರು. ‘ಈ ಮುಂಚೆ ಮಾಡಿದ ಒಪ್ಪಂದಗಳಿಂದ ಅಮೆರಿಕ ಹಿಂದಕ್ಕೆ ಹೋಗಿರುವಾಗ ಇನ್ನೊಂದು ಹೊಸ ಒಪ್ಪಂದಕ್ಕೆ ಇರಾನ್ ದೇಶ ಏಕೆ ಸೇರಬೇಕು’ ಎಂದು ಇರಾನ್‍ನ ವಿದೇಶಾಂಗ ಸಚಿವ ಕೇಳಿದರು. ಅವರು ಸ್ಪಷ್ಟವಾಗಿ ಹೇಳಿದ ಇನ್ನೊಂದು ವಿಷಯವೇನೆಂದರೆ, ‘ಟ್ರಂಪ್ ಯುದ್ಧವನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವರ ಸಲಹಾಕಾರರೆ (ಬಿ-ಟೀಮ್) ಈ ಬಿಕ್ಕಟ್ಟಿಗೆ ಕಾರಣ’. ಇಲ್ಲಿ ಬಿ ಟೀಮ್ ಎಂದರೆ, ಇಸ್ರೇಲಿನ ಬಿಬಿ, ಸೌದಿಯ ಬಿನ್ ಸಲ್ಮಾನ್, ಯು.ಏ.ಈ.ಯ ಬಿನ್ ಖಾಲೆದ್ ಹಾಗೂ ಅಮೇರಿಕದ ಜಾನ್ ಬೋಲ್ಟನ್. ಇಂತಹ ಒತ್ತಡದ ತಂತ್ರಗಾರಿಕೆಯಿಂದ ಇರಾನ್ ದೇಶವನ್ನು ಮಂಡಿಯೂರುವ ಪರಿಸ್ಥಿತಿಗೆ ತರಲಾಗದು ಎಂತಲೂ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಸ್ಟ್ರೇಟ್ ಆಫ್ ಹೊರ್ಮುಝ್’ ಎಂದು ಕರೆಯಲಾಗುವ ಪರ್ಷಿಯನ್ ಕೊಲ್ಲಿಯಿಂದಲೇ ವಿಶ್ವದ 35% ತೈಲ ಹಾದುಹೋಗಬೇಕಿದೆ. ಆ ಕೊಲ್ಲಿ ಇರಾನ್‍ನ ಜಲಭಾಗವನ್ನು ಹೊಂದಿದೆ. ಇರಾನಿನ ರೆವಲೂಷನರಿ ಗಾಡ್ರ್ಸ್ ಆ ಕೊಲ್ಲಿಯ ರಕ್ಷಣೆ ಮಾಡುತ್ತಾರೆ. ಏಪ್ರಿಲ್ 8 ರಂದು ಟ್ರಂಪ್ ಆಡಳಿತವು ಇರಾನಿಯನ್ ರೆವಲೂಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಅಮೆರಿಕವು ಈ ರೀತಿ ಬೇರೊಂದು ದೇಶದ ಸೈನ್ಯವನ್ನು ‘ಭಯೋತ್ಪಾದಕ ಗುಂಪು’ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು. ಇರಾನ್ ಅದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ದೇಶವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಕರೆದು, ಆ ಭಾಗದಲ್ಲಿರುವ ಅಮೆರಿಕದ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪು’ಗಳು ಎಂದು ಕರೆದಿದೆ.

ಐತಿಹಾಸಿಕವಾಗಿ, ಭಾರತ ಮತ್ತು ಇರಾನ್ ಒಳ್ಳೆಯ ಬಾಂಧವ್ಯಗಳನ್ನು ಹೊಂದಿವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯ ಆಳ್ವಿಕೆಯ ಕಾಲದಲ್ಲಿ ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಹೇರಿದ್ದಾಗ ಭಾರತವು ಇರಾನ್ ಜೊತೆಗೆ ನಿಂತು, ಆ ದೇಶಕ್ಕೆ ಸಹಾಯ ನೀಡಿದೆ. ಅಮೆರಿಕದ ಒತ್ತಡದ ಪರಿಸ್ಥಿತಿಯಲ್ಲಿ ಮುಂದೆ ಈ ಪ್ರಾದೇಶಿಕ ಸಂಬಂಧವನ್ನು ಗಟ್ಟಿಗೊಳಿಸುವುದೋ ಅಥವಾ ಅಮೆರಿಕಾದ ಒತ್ತಡಕ್ಕೆ ಮಣಿದು ಎರಡು ದೇಶಗಳ ಐತಿಹಾಸಿಕ ಸ್ನೇಹಕ್ಕೆ ದ್ರೋಹಬಗೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...