Homeಕರ್ನಾಟಕಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಸ್ವಯಂಪ್ರೇರಣೆಯಿಂದ ಸರ್ಕಾರದ ಸಹಾಯವಾಣಿಯನ್ನು ಪ್ರಚಾರ ಮಾಡಿದ ನಾನುಗೌರಿ.ಕಾಂಗೆ ಆಘಾತ ಕಾದಿತ್ತು.

- Advertisement -
- Advertisement -

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ನಾನುಗೌರಿ.ಕಾಂ ಸರ್ಕಾರವನ್ನು ಪ್ರಶ್ನೆ ಮಾಡುವುದಷ್ಟೇ ಮಾಡಬಾರದು ಎಂದು ಭಾವಿಸಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆಗೂ ನಿಂತು ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜನರಿಗೆ ನೆರವು ಒದಗಿಸುತ್ತಿರುವ ಹಲವು ಸಂಸ್ಥೆಗಳಿಗೂ ಮತ್ತು ಸಾಮಾನ್ಯ ಬಡಜನರಿಗೂ ನಡುವೆ ಸೇತುವೆಯಂತೆ ಕೆಲಸ ಮಾಡಲು ಪ್ರಯತ್ನ ನಡೆಸಿದೆ. ಆದರೆ, ಅದೇ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ದೀರ್ಘ ಕಾಲ ನೆರವು ಸಿಗಬೇಕೆಂದರೆ ಸರ್ಕಾರವೇ ಕೆಲಸ ಮಾಡಬೇಕಾಗುತ್ತದೆ.

ಆ ಹಿನ್ನೆಲೆಯಲ್ಲಿ ನಾನುಗೌರಿ.ಕಾಂನಿಂದ ಸರ್ಕಾರದ ಸಹಾಯವಾಣಿ 155214ಗೆ ಕರೆ ಮಾಡಿ ಅದು ಕೆಲಸ ಮಾಡುತ್ತಿದೆಯೇ  ಎಂದು ಪರಿಶೀಲಿಸಲಾಯಿತು ಮತ್ತು ಫೋನ್‌ ಕರೆ ಸ್ವೀಕರಿಸಿದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಆ ನಂಬರ್‌ ಅನ್ನು ಹಾಕಿ ಪೋಸ್ಟರ್‌ ಮಾಡಿ ಸಾಮಾನ್ಯ ಜನರು ಮತ್ತು ಸ್ವಯಂಸೇವಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಜೊತೆಗೆ ಉತ್ತರಹಳ್ಳಿಯ ಅಂಬೇಡ್ಕರ್‌ ನಗರದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಅಗತ್ಯವಿದ್ದ ನೆರವಿಗಾಗಿ ಪ್ರಯತ್ನ ಮಾಡುತ್ತಿದ್ದ ಸ್ಥಳೀಯರಿಗೂ ಈ ಹೆಲ್ಪ್‌ಲೈನ್‌ ನಂಬರ್‌ ನೀಡಿ ಸಂಪರ್ಕಿಸಲು ಹೇಳಲಾಯಿತು. ಅವರ ಅನುಭವವು ನಮ್ಮಲ್ಲಿ ನಿರಾಶೆಯನ್ನು ಮೂಡಿಸಿತು.

ಉತ್ತರಹಳ್ಳಿಯ ಆಸುಪಾಸಿನಲ್ಲೇ ವಾಸಿಸುವ ಬರಹಗಾರ, ಸಾಮಾಜಿಕ ಚಿಂತಕ ಶ್ರೀಪಾದ್‌ ಅವರ ಅನುಭವವು ಕೆಳಕಂಡಂತಿದೆ.

ದಿನಾಂಕ : 29.3.2020 ರಂದು 155214 ಸಹಾಯವಾಣಿಗೆ ಕರೆ ಮಾಡಿ ಉತ್ತರಹಳ್ಳಿಯ ಅಂಬೇಡ್ಕರ್ ನಗರದ ಸಾವಿತ್ರಿ ಬಾ ಫುಲೆ ಕಾಲನಿ ಸ್ಲಂಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅನಾಥರಾಗಿವೆ ಮತ್ತು ಅವರಿಗೆ ತುರ್ತಾಗಿ ಆಹಾರದ ಪೂರೈಕೆ ಮಾಡಬೇಕು ಎಂದು ಮನವಿ ಸಲ್ಲಿಸಿಲಾಯಿತು. ಆ ಸಹಾಯವಾಣಿಯವರೂ ನಮ್ಮ ಕೋರಿಕೆಗೆ ಪ್ರತಿಕ್ರಿಯಿಸಿ ಸಂಜೆಯ ಒಳಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಆದರೆ ರಾತ್ರಿಯವರೆಗೂ ಯಾವುದೇ ಸಹಾಯ ದೊರಕಲಿಲ್ಲ.

ನಂತರ ಪರಿಚಯದ ಸರಕಾರಿ ಅಧಿಕಾರಿಯೊಬ್ಬರಿಗೆ ಈ ಕುರಿತು ಗಮನ ಸೆಳೆಯಲಾಯಿತು. ಅವರೂ ಸಹ ಭರವಸೆ ನೀಡಿದರು.

ಇದನ್ನೂ ಓದಿ: ಊರಿಗೆ ಬಂದ ವಲಸೆ ಕಾರ್ಮಿಕರಿಗೆ ಅಲ್ಲೂ ಅವಮಾನ

ದಿನಾಂಕ 30.3.2020ರಂದು ಮರಳಿ ವಿಚಾರಿಸಲಾಗಿ ಇಲ್ಲಿಯವರೆಗೂ (ಸಂಜೆ 6.30) ಯಾವುದೇ ಬಗೆಯ ಪರಿಹಾರ ದೊರಕಿಲ್ಲ. ಅಲ್ಲಿನ ಕುಟುಂಬಗಳು ಆಹಾರ ಪೂರೈಕೆ ಇಲ್ಲದೆ ಕಂಗಾಲಾಗಿದ್ದಾರೆ. ದಾನಿಗಳ ಮೂಲಕ ತಾತ್ಕಾಲಿಕವಾಗಿ ಸಣ್ಣ ಪ್ರಮಾಣದ ದಿನಸಿ ವಸ್ತುಗಳನ್ನು ಕೊಡಲಾಗಿದೆ. ಆದರೆ ಅದು ಸಾಕಾಗುವುದಿಲ್ಲ.

155214 ಸಹಾಯವಾಣಿ ಹೊಣೆ ಹೊತ್ತ ಬಿಬಿಎಂಪಿ ತುರ್ತು ಪರಿಸ್ಥಿತಿಯಂತಹ ಈ ದಿನಗಳಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ ಆ ರೀತಿ ಮಾಡುತ್ತಿಲ್ಲ. ಇವರನ್ನು ಫಾಲೋ ಅಪ್ ಅಪ್ ಮಾಡುವುದೆ ಒಂದು ಕೆಲಸವಾದರೆ ಅದು ಕಷ್ಟದ ಕೆಲಸ.

ಸಾರ್ವಜನಿಕವಾಗಿ ಹೊಣೆಗಾರಿಕೆಯನ್ನು ನಿಭಾಯಿಸಲು ಕರಾರುವಕ್ಕಾದ ಕಾರ್ಯಯೋಜನೆ ಮತ್ತು ಪ್ರತಿಕ್ರಿಯೆ ತುಂಬಾ ಅವಶ್ಯಕ. ಆದರೆ ಈ ಉತ್ತರ ಹಳ್ಳಿ ಸ್ಲಂ ಗಳ ವಿಷಯದಲ್ಲಿ ಮೇಲೆ ತಿಳಿಸಿದ ಸಹಾಯವಾಣಿಯಿಂದ ತುರ್ತು ಸಹಾಯ ದೊರಕಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್‌ ವಿರುದ್ಧ ಭಾರತ ಮೊದಲೇ ಸಜ್ಜಾಗಿತ್ತು: ಕೇಂದ್ರ ಸರ್ಕಾರ

ಇನ್ನೊಂದು ಉದಾಹರಣೆ ಈ ರೀತಿ ಇದೆ. ಕೆ.ಆರ್‌.ಪುರದಾಚೆಗಿನ ನಲ್ಲಿ ಸುಮಾರು 150ರಿಂದ 200 ಜನ ವಲಸೆ ಕಾರ್ಮಿಕರಿದ್ದು ನಾಳೆ ಅವರಲ್ಲಿರುವ ಆಹಾರ ಪದಾರ್ಥಗಳು ಕೊನೆಯಾಗಲಿದ್ದು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮೂಲಕ ಅವರು ನಾನುಗೌರಿ.ಕಾಂಅನ್ನು ಸಂಪರ್ಕಿಸಿದರು. ಅವರಿಗೆ ಸದರಿ ಹೆಲ್ಪ್‌ಲೈನ್‌ ನಂಬರ್‌ಅನ್ನು ಸಂಪರ್ಕಿಸಲು ತಿಳಿಸಲಾಯಿತು. ಸುಮಾರು 20 ಸಾರಿ ಕರೆ ಮಾಡಿದರೂ ಆ ನಂಬರ್‌ಅನ್ನು ಯಾರೂ ಸ್ವೀಕರಿಸಲಿಲ್ಲವೆಂದು ಆ ವಲಸೆ ಕಾರ್ಮಿಕರಲ್ಲೊಬ್ಬರಾದ ಕಿಶನ್‌ (ಹೆಸರು ಬದಲಿಸಲಾಗಿದೆ) ತಿಳಿಸಿದರು.

ನಾನುಗೌರಿ.ಕಾಂ ಕಳಿಸಿದ ಪೋಸ್ಟರ್‌ಅನ್ನು ಷೇರ್‌ ಮಾಡಿದ ವಿಜಯ್‌ಕುಮಾರ್‌ ಸೀತಪ್ಪ ಅವರ ಸ್ನೇಹಿತರೊಬ್ಬರು ಸದರಿ ನಂಬರ್‌ಗೆ ಕರೆ ಮಾಡಿದರೆ ಅವರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂತೆಂದು ತಿಳಿಸಿದ್ದಾರೆ.

ಹೀಗಾದಲ್ಲಿ ವಲಸೆ ಕಾರ್ಮಿಕರ ಗತಿಯೇನು? ನೂರಾರು ಕಿ.ಮೀ ನಡೆದಾದರೂ ಸರಿ, ನಮ್ಮೂರಿನಲ್ಲಿ ಇದ್ದರೆ ಕ್ಷೇಮ ಎಂದು ಅವರು ಹೊರಡುವುದು ಸಹಜ ತಾನೇ? ಈ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಅಧಿಕಾರಿಗಳು ನೆರವು ನೀಡುವುದಾದಲ್ಲಿ ಮೇಲಿನ ಎಲ್ಲಾ ವಿವರಗಳನ್ನೂ (ಹೆಸರುಗಳು, ಫೋನ್‌ ನಂಬರ್‌ ಸಮೇತ) ನೀಡುತ್ತೇವೆ ಮತ್ತು ಸರ್ಕಾರದ ಸಕಾರಾತ್ಮಕ ಕೆಲಸವನ್ನು ಮತ್ತಷ್ಟು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತೇವೆ.

ಸಂಬಂಧಿಸಿದ ಅಧಿಕಾರಿಯನ್ನು ಉತ್ತರಹಳ್ಳಿಯಲ್ಲಿ ಸಂಪರ್ಕ ಮಾಡಿದರೂ ಪರಿಹಾರ ಸಿಗದೇ ಇದ್ದುದರಿಂದ ಇದನ್ನು ವರದಿ ಮಾಡುವ ಅಗತ್ಯವಿದೆಯೆಂದು ಭಾವಿಸಿ ಈ ವರದಿ ಬರೆಯಲಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಉದ್ದೇಶದಿಂದ ಈ ವರದಿಯನ್ನು ಷೇರ್‌ ಮಾಡಬೇಕೆಂದು ಕೋರುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...