Homeಕರ್ನಾಟಕಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?

ಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?

- Advertisement -
- Advertisement -

(ಈ ಲೇಖನ ನ್ಯಾಯಪಥ ಪತ್ರಿಕೆಯಲ್ಲಿ ಮುದ್ರಣಕ್ಕೆ ಹೋಗುವ ಸಮಯಕ್ಕೆ ಸಚಿವಸಂಪುಟದ ಹೆಸರುಗಳು ಘೋಷಣೆಯಾಗಿರಲಿಲ್ಲ. ಈಗ ಹೆಸರುಗಳು ಘೋಷಣೆಯಾಗಿ, ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದಿದ್ದರೂ ಖಾತೆಗಳು ಹಂಚಿಕೆಯಾಗಿಲ್ಲ. ಒಟ್ಟಿನಲ್ಲಿ ಅನಿಶ್ಚಿತತೆ ಮಾತ್ರ ನಿರಂತರವಾಗಿ ಮುಂದುವರೆದಿದೆ.)

’ನಾನು ಯಾರ ರಬ್ಬರ್ ಸ್ಟಾಂಪೂ ಅಲ್ಲ’ ಎಂದು ಘೋಷಿಸಿದ ಮೂರನೆಯ ದಿನ ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ’ಒಬ್ಬನೇ ಕೆಲಸ ಮಾಡೋದು ಕಷ್ಟ ಆಗುತ್ತಿದೆ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು’ ಎಂಬಂತಹ ಹೇಳಿಕೆಯನ್ನೂ ಕೊಟ್ಟರು. ಸಚಿವ ಸಂಪುಟ ರಚನೆ ಮಾಡಿಕೊಳ್ಳುವುದು ಮುಖ್ಯಮಂತ್ರಿಯ ಪರಮಾಧಿಕಾರ ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿಯೇ ಇರಲಿ, ಕಾಂಗ್ರೆಸ್ಸೇ ಇರಲಿ ಮುಖ್ಯಮಂತ್ರಿಗಳು ಅಂತಹ ಪರಮಾಧಿಕಾರವನ್ನು ಹೊಂದಿಲ್ಲವೆಂಬುದು ಸ್ಪಷ್ಟ. ಎರಡೂ ಕಡೆ ಹೈಕಮಾಂಡ್ ಎಂಬ ದೆಹಲಿ ವರಿಷ್ಠರು ಬೆಂಗಳೂರಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕಾದವರು ಯಾರ್‍ಯಾರು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಿಜೆಪಿಯ ಮಟ್ಟಿಗೆ ಅಂತಹವರ ಪಟ್ಟಿಯನ್ನು ನಿರ್ಧರಿಸುವ ವಿಚಾರದಲ್ಲಿ ಜಾತಿಶ್ರೀಗಳ (ಜಾತಿ ಉಪಜಾತಿಗಳ ಮಠಗಳ ಮುಖ್ಯಸ್ಥರು) ಬ್ಲ್ಯಾಕ್‌ಮೇಲ್ ಸಹಾ ಮುಖ್ಯವಾಗುತ್ತದೆ.

ಮೇಲಿನ ಹೇಳಿಕೆಯ ಎರಡು ದಿನಗಳ ನಂತರ ಬಸವರಾಜ ಬೊಮ್ಮಾಯಿಯವರು ದೆಹಲಿಗೇ ಓಡಿದರು. ಅಲ್ಲಿ ಬಿಜೆಪಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಡನೆ ಮಾತುಕತೆಯ ನಂತರ, ಹೊರಗಡೆ ಕಾದುಕೊಂಡಿದ್ದ ಕರ್ನಾಟಕದ ಮಾಧ್ಯಮಗಳ ದೆಹಲಿ ಪತ್ರಕರ್ತರು ಅವರಿಗೆ ಅಕ್ಷರಶಃ ಮುತ್ತಿಗೆ ಹಾಕಿದರು. ಅವರಿಗೆಲ್ಲಾ ಹೊಸ ಮುಖ್ಯಮಂತ್ರಿಯಿಂದ ಒಂದೇ ಒಂದು ಬೈಟ್ ಪಡೆಯುವ ಕಾತುರ. ಆದರೆ, ಆ ಹೊಸ ಮುಖ್ಯಮಂತ್ರಿ ಅರ್ಧ ಪೋಸ್ಟ್‌ಮನ್ ಮತ್ತರ್ಧ ಬೇಡಿಕೊಳ್ಳಲು ಬಂದಿರುವ ಸಾಮಂತರಷ್ಟೇ ಆಗಿದ್ದರು. ಅಲ್ಲಿನ ಸಂಭಾಷಣೆಯು ವಿಡಿಯೋ ರೂಪದಲ್ಲಿ ಲಭ್ಯವಿದ್ದು, ಅದರ ಆಯ್ದ ಪಾಠ ಈ ರೀತಿ ಇದೆ.

’ಹೈಕಮಾಂಡ್ ಜೊತೆ ಚರ್ಚೆ ನಡೆದಿದ್ದು, ಅಂತಿಮವಾದ ಪಟ್ಟಿಯನ್ನು ಅವರೇ ಪ್ರಕಟ ಮಾಡ್ತಾರೆ’. ’ನಾವು ಎರಡು ಪಟ್ಟಿಗಳನ್ನು ಕೊಟ್ಟಿದ್ದೇವೆ, ಆದರೆ ಎಷ್ಟನ್ನು ಮಾಡಬೇಕು, ಎಷ್ಟನ್ನ ಬಿಡಬೇಕು ಅಂತ ಅವರು ತೀರ್ಮಾನ ಮಾಡ್ತಾರೆ’. ’ಡಿಸಿಎಂ ಸ್ಥಾನಗಳ ಕುರಿತು ತೀರ್ಮಾನ ಆಗಿದೆಯಾ?’, ’ಅದನ್ನೂ ಅವರೇ ಫೈನಲ್ ಮಾಡ್ತಾರೆ’. ’ಮೊದಲ ಬಾರಿಗೆ 25 ಜನ ಸಚಿವರು ಆಗಬಹುದಾ?’ ’ಅವರು (ಹೈಕಮಾಂಡ್) ಏನು (ತೀರ್ಮಾನ) ಮಾಡ್ತಾರೆ ಅಂತ ನನಗೂ ಗೊತ್ತಿಲ್ಲ. ಬಹುತೇಕ ಅವರು ಇನ್ನೊಂದು ಬಾರಿ ಚರ್ಚೆ ಮಾಡಿ ಫೈನಲ್ ಮಾಡ್ತಾರೆ; ಆಗ ನಂಬರ್ ಕೂಡಾ ಗೊತ್ತಾಗುತ್ತದೆ.’

ಮರುದಿನ ರಾತ್ರಿ ಮತ್ತೆ ಸಿಎಂ ಪತ್ರಕರ್ತರಿಗೆ ಸಿಕ್ಕರು. ಆದರೆ ಹಿಂದಿನ ದಿನದಷ್ಟು ಆತುರ ಪತ್ರಕರ್ತರಿಗೂ ಇರಲಿಲ್ಲ, ಬೊಮ್ಮಾಯಿಯವರಿಗೂ ಇರಲಿಲ್ಲ. ’ಹಿರಿಯರನ್ನು ತೆಗೆಯಬೇಕು ಅಂತ ವಾದ ಕೇಳಿಬಂದಿದೆಯಂತಲ್ಲಾ?’ ಪತ್ರಕರ್ತರ ಪ್ರಶ್ನೆಗೆ, ಏನೋ ಅರ್ಧಂಬರ್ಧ ಹೇಳಿದರು. ಅಷ್ಟರಲ್ಲಿ ಅವರಿಗೆ ಇನ್ನೊಂದು ಪ್ರಶ್ನೆ ತೂರಿ ಬಂದಿತು. ’ಎಷ್ಟು ಜನ ಇರುತ್ತಾರೆ?’, ’ನಾನು ಹೇಳೋಕಾಗಲ್ಲ’. ’ಒಂದೇ ಹಂತದ ವಿಸ್ತರಣೆಯಾ?’, ’2 ಹಂತ ಅಂತ ನಿರೀಕ್ಷೆ ಮಾಡ್ತೀನಿ’.

’ಹಳಬರನ್ನು ಎಷ್ಟು ಜನರನ್ನು ತೆಗೀತೀರಿ?’, ’ತೆಗೆಯೋದಾಗಲಿ, ಸೇರಿಸೋದಾಗಲಿ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾಳೆ ತಿಳಿಸ್ತೀನಿ’. ಬೊಮ್ಮಾಯಿಯವರ ಪರಿಸ್ಥಿತಿ ನೋಡಿ, ಒಬ್ಬ ಪತ್ರಕರ್ತರು ಹೀಗೂ ಹೇಳಿದರು. ’ಯೂ ಆರ್ ಲುಕಿಂಗ್ ಟೈರ್‍ಡ್’. ’ಹೇ ಹಾಗೇನಿಲ್ಲ ಚೆನ್ನಾಗಿಯೇ ಇದ್ದೀನಿ’ ಎಂದ ಸಿಎಂರ ದನಿಯಲ್ಲಿ ಸುಸ್ತಿತ್ತು. ಆದರೆ, ’ನಾಳೆ ಬೆಳಿಗ್ಗೆಯ ಹೊತ್ತಿಗೆ ಶುಭ ಸೂಚನೆ ಸಿಗಬಹುದು’ ಎಂದರು. ದೇವರ ಮುಂದೆ ಹೂವಿಗಾಗಿ ಕಾದು ಕೂತವರ ರೀತಿ ಧ್ವನಿಸುತ್ತಿದ್ದ ಆ ಮಾತುಗಳನ್ನು ಮುಂದುವರೆಸಿ, ’ನಡ್ಡಾಜಿಯವರು ನಿನ್ನೆಯೂ ಮಾಹಿತಿ ಪಡೆದುಕೊಂಡರು, ಕೆಲವು ಕ್ಲಾರಿಫಿಕೇಷನ್ ಕೇಳಿದರು. ಅವನ್ನು ಒದಗಿಸಿದ್ದೇವೆ…… ಅವರು ಅಂತಿಮವಾಗಿ ಹೇಳಿದ ನಂತರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಡುತ್ತೇವೆ.’ ಎಂದರು. ಕೊನೆಗೆ ’ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸವಿದೆ’ ಎಂದು ಮುಗಿಸಿದರು.

ಇಡೀ ಎಪಿಸೋಡು ಕರ್ನಾಟಕದ ಹೊಸ ಮುಖ್ಯಮಂತ್ರಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಅವರು ಏನೊಂದನ್ನೂ ತೀರ್ಮಾನಿಸುವ ಸ್ಥಿತಿಯಲ್ಲಿಲ್ಲ ಅಥವಾ ಒಂದು ಪ್ರಸ್ತಾಪವನ್ನು ಅವರ ಪಕ್ಷದ ವರಿಷ್ಠರ ಮುಂದಿಟ್ಟರೂ ಅದಕ್ಕೆ ತಾನು ಹೊಣೆ ಹೊರುವ ಶಕ್ತಿ ಹೊಂದಿಲ್ಲ. ಏಕೆಂದರೆ ನಂತರ ಯಡಿಯೂರಪ್ಪನವರಾಗಲೀ, ಪಕ್ಷದ ಇತರರಾಗಲೀ, ವಿವಿಧ ಬ್ಲ್ಯಾಕ್‌ಮೇಲ್ ಜಾತಿಮಠಶ್ರೀಗಳಾಗಲೀ ಕೇಳಿದರೆ ಅದ್ಯಾವುದನ್ನೂ ತೀರ್ಮಾನಿಸಿದ, ತೀರ್ಮಾನಿಸುವ ವ್ಯಕ್ತಿ ನಾನಲ್ಲ ಎಂದು ಬಿಂಬಿಸಿಕೊಳ್ಳುವುದೇ ಅವರಿಗೆ ಸುರಕ್ಷಿತವಾದುದು. ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಕರ್ನಾಟಕ ರಾಜ್ಯ ಹಾಗೂ ಕರ್ನಾಟಕ ಸರ್ಕಾರ ಬಂತೇ ಎಂದು ಆತಂಕ ಪಡಬೇಕಿದೆ.

ವಿವಿಧ ಜಾತಿ ಸಮುದಾಯಗಳ ಲಾಬಿಗಳ ಒತ್ತಡ, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಡ ಹಾಗೂ ನಿರ್ಣಾಯಕ ಸ್ಥಾನದಲ್ಲಿರುವ ಹೈಕಮಾಂಡ್‌ನ ಒತ್ತಡ ಇವುಗಳ ನಡುವೆ ಒಬ್ಬ ಅಸಹಾಯಕ ಮುಖ್ಯಮಂತ್ರಿಯಾಗಷ್ಟೇ ಬಸವರಾಜ ಬೊಮ್ಮಾಯಿಯವರು ಪ್ರತಿಷ್ಠಾಪನೆಗೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಡಿಯೂರಪ್ಪನವರಿಗೂ ಸಂಪುಟ ರಚನೆ ಮಾಡಲು ಹೈಕಮಾಂಡ್ ಬಹಳ ಕಾಲ ಬಿಟ್ಟಿರಲಿಲ್ಲ. ಆದರೆ ಆ ವಿಚಾರದಲ್ಲಿ ಒಂದಷ್ಟು ತನ್ನ ಅಭಿಪ್ರಾಯಗಳನ್ನೂ ಮುಂದಿಟ್ಟು ಒಪ್ಪಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಈಗ ಆ ಶಕ್ತಿಯೂ ಇಲ್ಲದ, ಬದಲಿಗೆ ಯಡಿಯೂರಪ್ಪನವರ ವಿರುದ್ಧವೂ ದಾಳವಾಗಿ ಪ್ರಯೋಗಿಸಲ್ಪಡಲೆಂದೇ ಪ್ರತಿಷ್ಠಾಪನೆಗೊಂಡಿರುವ ಹೊಸ ಸಿಎಂ ಇನ್ನು ಯಾವ ಬಗೆಯ ಆಡಳಿತವನ್ನು ಕರ್ನಾಟಕಕ್ಕೆ ನೀಡಿಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಆದರೆ ಇದು ಸಿಎಂ ಒಬ್ಬರ ವ್ಯಕ್ತಿಗತ ಅಶಕ್ತತೆ ಮತ್ತು ಅಸಹಾಯಕತೆಯ ವಿಚಾರವಷ್ಟೇ ಆಗಿಲ್ಲ. ಕೋಟ್ಯಾಂತರ ಜನರ ಪ್ರತಿನಿಧಿಯಾಗಿ ಅವರಿರುವುದರಿಂದ, ಈ ರಾಜ್ಯದ ಅಸಹಾಯಕತೆ ವಿಚಾರವಾಗಿಯೂ ಇದನ್ನು ನೋಡಬೇಕಿದೆ. ಇಂತಹ ಸಂಗತಿಗಳಲ್ಲೇ ಬಳಲಿ ಬೆಂಡಾಗಿಬಿಡುವ ಇವರು ಇನ್ನು ಜಿಎಸ್‌ಟಿ ಪರಿಹಾರ, ನೆರೆ ಬರ ಪರಿಹಾರ, ವಿಶೇಷ ಪ್ಯಾಕೇಜ್, ಹಣಕಾಸು ಅನುದಾನ ಇತ್ಯಾದಿಗಳನ್ನು ತರುವ ಪ್ರಶ್ನೆ ದೂರವೇ ಉಳಿದೀತು.

ಬಹುತೇಕ ನಾಳೆ ಅಥವಾ ನಾಳಿದ್ದು ರೂಪುಗೊಳ್ಳಲಿರುವ (?) ಮೊದಲ ಹಂತದ ಸಚಿವ ಸಂಪುಟ ಹಾಗೂ ಖಾತೆ ಹಂಚಿಕೆಯು ಕರ್ನಾಟಕದ ಬಿಜೆಪಿಯಲ್ಲಿ ಈ ಸದ್ಯ ಇರುವ ಬಣಗಳು ಹಾಗೂ ಅವುಗಳ ಪ್ರಾಬಲ್ಯದ ಕುರಿತು ಒಂದು ಅಂದಾಜನ್ನು ನೀಡಲಿವೆ. ಆದರೆ, ಕರ್ನಾಟಕದ ಪ್ರಾಬಲ್ಯವಂತೂ ಕುಸಿದುಹೋಗಿದೆ ಎಂಬುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ 5 ನೂತನ ಸಚಿವರಿವರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...