Homeಕರ್ನಾಟಕಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?

ಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?

- Advertisement -
- Advertisement -

(ಈ ಲೇಖನ ನ್ಯಾಯಪಥ ಪತ್ರಿಕೆಯಲ್ಲಿ ಮುದ್ರಣಕ್ಕೆ ಹೋಗುವ ಸಮಯಕ್ಕೆ ಸಚಿವಸಂಪುಟದ ಹೆಸರುಗಳು ಘೋಷಣೆಯಾಗಿರಲಿಲ್ಲ. ಈಗ ಹೆಸರುಗಳು ಘೋಷಣೆಯಾಗಿ, ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದಿದ್ದರೂ ಖಾತೆಗಳು ಹಂಚಿಕೆಯಾಗಿಲ್ಲ. ಒಟ್ಟಿನಲ್ಲಿ ಅನಿಶ್ಚಿತತೆ ಮಾತ್ರ ನಿರಂತರವಾಗಿ ಮುಂದುವರೆದಿದೆ.)

’ನಾನು ಯಾರ ರಬ್ಬರ್ ಸ್ಟಾಂಪೂ ಅಲ್ಲ’ ಎಂದು ಘೋಷಿಸಿದ ಮೂರನೆಯ ದಿನ ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ’ಒಬ್ಬನೇ ಕೆಲಸ ಮಾಡೋದು ಕಷ್ಟ ಆಗುತ್ತಿದೆ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು’ ಎಂಬಂತಹ ಹೇಳಿಕೆಯನ್ನೂ ಕೊಟ್ಟರು. ಸಚಿವ ಸಂಪುಟ ರಚನೆ ಮಾಡಿಕೊಳ್ಳುವುದು ಮುಖ್ಯಮಂತ್ರಿಯ ಪರಮಾಧಿಕಾರ ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿಯೇ ಇರಲಿ, ಕಾಂಗ್ರೆಸ್ಸೇ ಇರಲಿ ಮುಖ್ಯಮಂತ್ರಿಗಳು ಅಂತಹ ಪರಮಾಧಿಕಾರವನ್ನು ಹೊಂದಿಲ್ಲವೆಂಬುದು ಸ್ಪಷ್ಟ. ಎರಡೂ ಕಡೆ ಹೈಕಮಾಂಡ್ ಎಂಬ ದೆಹಲಿ ವರಿಷ್ಠರು ಬೆಂಗಳೂರಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕಾದವರು ಯಾರ್‍ಯಾರು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಿಜೆಪಿಯ ಮಟ್ಟಿಗೆ ಅಂತಹವರ ಪಟ್ಟಿಯನ್ನು ನಿರ್ಧರಿಸುವ ವಿಚಾರದಲ್ಲಿ ಜಾತಿಶ್ರೀಗಳ (ಜಾತಿ ಉಪಜಾತಿಗಳ ಮಠಗಳ ಮುಖ್ಯಸ್ಥರು) ಬ್ಲ್ಯಾಕ್‌ಮೇಲ್ ಸಹಾ ಮುಖ್ಯವಾಗುತ್ತದೆ.

ಮೇಲಿನ ಹೇಳಿಕೆಯ ಎರಡು ದಿನಗಳ ನಂತರ ಬಸವರಾಜ ಬೊಮ್ಮಾಯಿಯವರು ದೆಹಲಿಗೇ ಓಡಿದರು. ಅಲ್ಲಿ ಬಿಜೆಪಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಡನೆ ಮಾತುಕತೆಯ ನಂತರ, ಹೊರಗಡೆ ಕಾದುಕೊಂಡಿದ್ದ ಕರ್ನಾಟಕದ ಮಾಧ್ಯಮಗಳ ದೆಹಲಿ ಪತ್ರಕರ್ತರು ಅವರಿಗೆ ಅಕ್ಷರಶಃ ಮುತ್ತಿಗೆ ಹಾಕಿದರು. ಅವರಿಗೆಲ್ಲಾ ಹೊಸ ಮುಖ್ಯಮಂತ್ರಿಯಿಂದ ಒಂದೇ ಒಂದು ಬೈಟ್ ಪಡೆಯುವ ಕಾತುರ. ಆದರೆ, ಆ ಹೊಸ ಮುಖ್ಯಮಂತ್ರಿ ಅರ್ಧ ಪೋಸ್ಟ್‌ಮನ್ ಮತ್ತರ್ಧ ಬೇಡಿಕೊಳ್ಳಲು ಬಂದಿರುವ ಸಾಮಂತರಷ್ಟೇ ಆಗಿದ್ದರು. ಅಲ್ಲಿನ ಸಂಭಾಷಣೆಯು ವಿಡಿಯೋ ರೂಪದಲ್ಲಿ ಲಭ್ಯವಿದ್ದು, ಅದರ ಆಯ್ದ ಪಾಠ ಈ ರೀತಿ ಇದೆ.

’ಹೈಕಮಾಂಡ್ ಜೊತೆ ಚರ್ಚೆ ನಡೆದಿದ್ದು, ಅಂತಿಮವಾದ ಪಟ್ಟಿಯನ್ನು ಅವರೇ ಪ್ರಕಟ ಮಾಡ್ತಾರೆ’. ’ನಾವು ಎರಡು ಪಟ್ಟಿಗಳನ್ನು ಕೊಟ್ಟಿದ್ದೇವೆ, ಆದರೆ ಎಷ್ಟನ್ನು ಮಾಡಬೇಕು, ಎಷ್ಟನ್ನ ಬಿಡಬೇಕು ಅಂತ ಅವರು ತೀರ್ಮಾನ ಮಾಡ್ತಾರೆ’. ’ಡಿಸಿಎಂ ಸ್ಥಾನಗಳ ಕುರಿತು ತೀರ್ಮಾನ ಆಗಿದೆಯಾ?’, ’ಅದನ್ನೂ ಅವರೇ ಫೈನಲ್ ಮಾಡ್ತಾರೆ’. ’ಮೊದಲ ಬಾರಿಗೆ 25 ಜನ ಸಚಿವರು ಆಗಬಹುದಾ?’ ’ಅವರು (ಹೈಕಮಾಂಡ್) ಏನು (ತೀರ್ಮಾನ) ಮಾಡ್ತಾರೆ ಅಂತ ನನಗೂ ಗೊತ್ತಿಲ್ಲ. ಬಹುತೇಕ ಅವರು ಇನ್ನೊಂದು ಬಾರಿ ಚರ್ಚೆ ಮಾಡಿ ಫೈನಲ್ ಮಾಡ್ತಾರೆ; ಆಗ ನಂಬರ್ ಕೂಡಾ ಗೊತ್ತಾಗುತ್ತದೆ.’

ಮರುದಿನ ರಾತ್ರಿ ಮತ್ತೆ ಸಿಎಂ ಪತ್ರಕರ್ತರಿಗೆ ಸಿಕ್ಕರು. ಆದರೆ ಹಿಂದಿನ ದಿನದಷ್ಟು ಆತುರ ಪತ್ರಕರ್ತರಿಗೂ ಇರಲಿಲ್ಲ, ಬೊಮ್ಮಾಯಿಯವರಿಗೂ ಇರಲಿಲ್ಲ. ’ಹಿರಿಯರನ್ನು ತೆಗೆಯಬೇಕು ಅಂತ ವಾದ ಕೇಳಿಬಂದಿದೆಯಂತಲ್ಲಾ?’ ಪತ್ರಕರ್ತರ ಪ್ರಶ್ನೆಗೆ, ಏನೋ ಅರ್ಧಂಬರ್ಧ ಹೇಳಿದರು. ಅಷ್ಟರಲ್ಲಿ ಅವರಿಗೆ ಇನ್ನೊಂದು ಪ್ರಶ್ನೆ ತೂರಿ ಬಂದಿತು. ’ಎಷ್ಟು ಜನ ಇರುತ್ತಾರೆ?’, ’ನಾನು ಹೇಳೋಕಾಗಲ್ಲ’. ’ಒಂದೇ ಹಂತದ ವಿಸ್ತರಣೆಯಾ?’, ’2 ಹಂತ ಅಂತ ನಿರೀಕ್ಷೆ ಮಾಡ್ತೀನಿ’.

’ಹಳಬರನ್ನು ಎಷ್ಟು ಜನರನ್ನು ತೆಗೀತೀರಿ?’, ’ತೆಗೆಯೋದಾಗಲಿ, ಸೇರಿಸೋದಾಗಲಿ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾಳೆ ತಿಳಿಸ್ತೀನಿ’. ಬೊಮ್ಮಾಯಿಯವರ ಪರಿಸ್ಥಿತಿ ನೋಡಿ, ಒಬ್ಬ ಪತ್ರಕರ್ತರು ಹೀಗೂ ಹೇಳಿದರು. ’ಯೂ ಆರ್ ಲುಕಿಂಗ್ ಟೈರ್‍ಡ್’. ’ಹೇ ಹಾಗೇನಿಲ್ಲ ಚೆನ್ನಾಗಿಯೇ ಇದ್ದೀನಿ’ ಎಂದ ಸಿಎಂರ ದನಿಯಲ್ಲಿ ಸುಸ್ತಿತ್ತು. ಆದರೆ, ’ನಾಳೆ ಬೆಳಿಗ್ಗೆಯ ಹೊತ್ತಿಗೆ ಶುಭ ಸೂಚನೆ ಸಿಗಬಹುದು’ ಎಂದರು. ದೇವರ ಮುಂದೆ ಹೂವಿಗಾಗಿ ಕಾದು ಕೂತವರ ರೀತಿ ಧ್ವನಿಸುತ್ತಿದ್ದ ಆ ಮಾತುಗಳನ್ನು ಮುಂದುವರೆಸಿ, ’ನಡ್ಡಾಜಿಯವರು ನಿನ್ನೆಯೂ ಮಾಹಿತಿ ಪಡೆದುಕೊಂಡರು, ಕೆಲವು ಕ್ಲಾರಿಫಿಕೇಷನ್ ಕೇಳಿದರು. ಅವನ್ನು ಒದಗಿಸಿದ್ದೇವೆ…… ಅವರು ಅಂತಿಮವಾಗಿ ಹೇಳಿದ ನಂತರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಡುತ್ತೇವೆ.’ ಎಂದರು. ಕೊನೆಗೆ ’ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸವಿದೆ’ ಎಂದು ಮುಗಿಸಿದರು.

ಇಡೀ ಎಪಿಸೋಡು ಕರ್ನಾಟಕದ ಹೊಸ ಮುಖ್ಯಮಂತ್ರಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಅವರು ಏನೊಂದನ್ನೂ ತೀರ್ಮಾನಿಸುವ ಸ್ಥಿತಿಯಲ್ಲಿಲ್ಲ ಅಥವಾ ಒಂದು ಪ್ರಸ್ತಾಪವನ್ನು ಅವರ ಪಕ್ಷದ ವರಿಷ್ಠರ ಮುಂದಿಟ್ಟರೂ ಅದಕ್ಕೆ ತಾನು ಹೊಣೆ ಹೊರುವ ಶಕ್ತಿ ಹೊಂದಿಲ್ಲ. ಏಕೆಂದರೆ ನಂತರ ಯಡಿಯೂರಪ್ಪನವರಾಗಲೀ, ಪಕ್ಷದ ಇತರರಾಗಲೀ, ವಿವಿಧ ಬ್ಲ್ಯಾಕ್‌ಮೇಲ್ ಜಾತಿಮಠಶ್ರೀಗಳಾಗಲೀ ಕೇಳಿದರೆ ಅದ್ಯಾವುದನ್ನೂ ತೀರ್ಮಾನಿಸಿದ, ತೀರ್ಮಾನಿಸುವ ವ್ಯಕ್ತಿ ನಾನಲ್ಲ ಎಂದು ಬಿಂಬಿಸಿಕೊಳ್ಳುವುದೇ ಅವರಿಗೆ ಸುರಕ್ಷಿತವಾದುದು. ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಕರ್ನಾಟಕ ರಾಜ್ಯ ಹಾಗೂ ಕರ್ನಾಟಕ ಸರ್ಕಾರ ಬಂತೇ ಎಂದು ಆತಂಕ ಪಡಬೇಕಿದೆ.

ವಿವಿಧ ಜಾತಿ ಸಮುದಾಯಗಳ ಲಾಬಿಗಳ ಒತ್ತಡ, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಡ ಹಾಗೂ ನಿರ್ಣಾಯಕ ಸ್ಥಾನದಲ್ಲಿರುವ ಹೈಕಮಾಂಡ್‌ನ ಒತ್ತಡ ಇವುಗಳ ನಡುವೆ ಒಬ್ಬ ಅಸಹಾಯಕ ಮುಖ್ಯಮಂತ್ರಿಯಾಗಷ್ಟೇ ಬಸವರಾಜ ಬೊಮ್ಮಾಯಿಯವರು ಪ್ರತಿಷ್ಠಾಪನೆಗೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಡಿಯೂರಪ್ಪನವರಿಗೂ ಸಂಪುಟ ರಚನೆ ಮಾಡಲು ಹೈಕಮಾಂಡ್ ಬಹಳ ಕಾಲ ಬಿಟ್ಟಿರಲಿಲ್ಲ. ಆದರೆ ಆ ವಿಚಾರದಲ್ಲಿ ಒಂದಷ್ಟು ತನ್ನ ಅಭಿಪ್ರಾಯಗಳನ್ನೂ ಮುಂದಿಟ್ಟು ಒಪ್ಪಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಈಗ ಆ ಶಕ್ತಿಯೂ ಇಲ್ಲದ, ಬದಲಿಗೆ ಯಡಿಯೂರಪ್ಪನವರ ವಿರುದ್ಧವೂ ದಾಳವಾಗಿ ಪ್ರಯೋಗಿಸಲ್ಪಡಲೆಂದೇ ಪ್ರತಿಷ್ಠಾಪನೆಗೊಂಡಿರುವ ಹೊಸ ಸಿಎಂ ಇನ್ನು ಯಾವ ಬಗೆಯ ಆಡಳಿತವನ್ನು ಕರ್ನಾಟಕಕ್ಕೆ ನೀಡಿಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಆದರೆ ಇದು ಸಿಎಂ ಒಬ್ಬರ ವ್ಯಕ್ತಿಗತ ಅಶಕ್ತತೆ ಮತ್ತು ಅಸಹಾಯಕತೆಯ ವಿಚಾರವಷ್ಟೇ ಆಗಿಲ್ಲ. ಕೋಟ್ಯಾಂತರ ಜನರ ಪ್ರತಿನಿಧಿಯಾಗಿ ಅವರಿರುವುದರಿಂದ, ಈ ರಾಜ್ಯದ ಅಸಹಾಯಕತೆ ವಿಚಾರವಾಗಿಯೂ ಇದನ್ನು ನೋಡಬೇಕಿದೆ. ಇಂತಹ ಸಂಗತಿಗಳಲ್ಲೇ ಬಳಲಿ ಬೆಂಡಾಗಿಬಿಡುವ ಇವರು ಇನ್ನು ಜಿಎಸ್‌ಟಿ ಪರಿಹಾರ, ನೆರೆ ಬರ ಪರಿಹಾರ, ವಿಶೇಷ ಪ್ಯಾಕೇಜ್, ಹಣಕಾಸು ಅನುದಾನ ಇತ್ಯಾದಿಗಳನ್ನು ತರುವ ಪ್ರಶ್ನೆ ದೂರವೇ ಉಳಿದೀತು.

ಬಹುತೇಕ ನಾಳೆ ಅಥವಾ ನಾಳಿದ್ದು ರೂಪುಗೊಳ್ಳಲಿರುವ (?) ಮೊದಲ ಹಂತದ ಸಚಿವ ಸಂಪುಟ ಹಾಗೂ ಖಾತೆ ಹಂಚಿಕೆಯು ಕರ್ನಾಟಕದ ಬಿಜೆಪಿಯಲ್ಲಿ ಈ ಸದ್ಯ ಇರುವ ಬಣಗಳು ಹಾಗೂ ಅವುಗಳ ಪ್ರಾಬಲ್ಯದ ಕುರಿತು ಒಂದು ಅಂದಾಜನ್ನು ನೀಡಲಿವೆ. ಆದರೆ, ಕರ್ನಾಟಕದ ಪ್ರಾಬಲ್ಯವಂತೂ ಕುಸಿದುಹೋಗಿದೆ ಎಂಬುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ 5 ನೂತನ ಸಚಿವರಿವರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...