Homeಅಂತರಾಷ್ಟ್ರೀಯವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

ವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

- Advertisement -
- Advertisement -

ಅಕ್ಟೋಬರ್ 7ರ ದಾಳಿಯಲ್ಲಿ ಗಾಜಾಕ್ಕೆ ಕರೆದೊಯ್ದ ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಭವಿಷ್ಯದ ಕುರಿತು ಕಳವಳವನ್ನು ವ್ಯಕ್ತಪಡಿಸಿವೆ. ಏಕೆಂದರೆ ಈ ಒತ್ತೆಯಾಳುಗಳಲ್ಲಿ ಎಷ್ಟು ಜನರು ಇನ್ನೂ ಜೀವಂತವಾಗಿದ್ದಾರೆ ಎಂಬ ಅನುಮಾನಗಳು ಅವರಲ್ಲಿ ಬೆಳೆಯುತ್ತಿವೆ.

ಒತ್ತೆಯಾಳುಗಳು “ಪ್ರತಿದಿನ” ಅಪಾಯದಲ್ಲಿದ್ದಾರೆ ಎಂದು ಒಂದು ಕುಟುಂಬ ಹೇಳಿದೆ. ಈ ವಾರ ಜೀವಂತವಾಗಿದ್ದಾರೆಂದು ನಂಬಲಾಗಿದ್ದ 24 ಒತ್ತೆಯಾಳುಗಳಲ್ಲಿ ಮೂವರ ಸ್ಥಿತಿಯ ಬಗ್ಗೆ “ಅನಿಶ್ಚಿತತೆ” ಇದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ನೇತೃತ್ವದ ದಾಳಿಯಲ್ಲಿ ಸೆರೆಹಿಡಿಯಲ್ಪಟ್ಟವರಲ್ಲಿ ಕೇವಲ 21 ಜನರು ಮಾತ್ರ ಇನ್ನೂ ಜೀವಂತವಾಗಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂಗಳವಾರದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾದಲ್ಲಿ ವಿಸ್ತೃತ ದಾಳಿಯನ್ನು ಅನುಮೋದಿಸಿದ ನಂತರ ಈ ವರ್ಷ ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುವಿನ ಸಹೋದರ ಸೇರಿದಂತೆ ಎರಡು ಕುಟುಂಬಗಳೊಂದಿಗೆ ‘ಬಿಬಿಸಿ’ ಸುದ್ದಿ ಸಂಸ್ಥೆ ಮಾತನಾಡಿತು. ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ರಕ್ಷಿಸಲು ಇಸ್ರೇಲ್ ಸಂಪುಟವು ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ “ಬಲವಂತದ ಕಾರ್ಯಾಚರಣೆ”ಗೆ ನಿರ್ಧರಿಸಿದೆ ಮತ್ತು ಗಾಜಾದ 2.1 ಮಿಲಿಯನ್ ಜನರ ರಕ್ಷಣೆಗಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಸಹಾಯ ಮಾಡಲು ಸೈನಿಕ ಪಡೆಗಳನ್ನು ಬಳಸಲಾಗುತ್ತಿದೆ ಎಂದು ಒಂದು ಕುಟುಂಬ ಬಿಬಿಸಿಗೆ ತಿಳಿಸಿದೆ.

ಲಿರಾನ್ ಬೆರ್ಮನ್ ಅವರ ಅವಳಿ ಸಹೋದರರಾದ ಗಾಲಿ ಮತ್ತು ಜಿವ್ ಅವರನ್ನು ಅಕ್ಟೋಬರ್ 7, 2023ರಂದು ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿರುವ ಅವರ ಮನೆಯಿಂದ ಅಪಹರಿಸಿದ ನಂತರ ಅವರನ್ನು 19 ತಿಂಗಳಿನಿಂದ ಇನ್ನೂ ಹಮಾಸ್ ಬಂಧನದಲ್ಲಿದ್ದಾರೆ. ಆ ದಿನ ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಸುಮಾರು 1,200 ಜನರನ್ನು ಕೊಂದಿದ್ದರು. ಆದರೆ ಒತ್ತೆಯಾಳುಗಳಾಗಿರಿಸಲ್ಪಟ್ಟ 251 ಇತರರಲ್ಲಿ ಗಾಲಿ ಮತ್ತು ಜಿವ್ ಸೇರಿದ್ದಾರೆ. ನಂತರದ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಪ್ಯಾಲೇಸ್ತೀನಿನ 52,780ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಮಾರ್ಚ್ 2ರಿಂದ ಇಸ್ರೇಲ್ ಪ್ಯಾಲೇಸ್ತೀನಿಗೆ ಎಲ್ಲಾ ನೆರವು ಮತ್ತು ಇತರ ಸರಬರಾಜುಗಳನ್ನು ಕಡಿತಗೊಳಿಸಿದೆ ಮತ್ತು ಎರಡು ತಿಂಗಳ ಕದನ ವಿರಾಮವನ್ನು ಮುರಿದ ನಂತರ ಎರಡು ವಾರಗಳ ನಂತರ ತನ್ನ ದಾಳಿಯನ್ನು ಪುನರಾರಂಭಿಸಿತು. ಇದಕ್ಕೂ ಮೊದಲು ಇಸ್ರೇಲಿ ಜೈಲುಗಳಲ್ಲಿದ್ದ ಸುಮಾರು 1,900 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಐದು ಥಾಯ್ ಒತ್ತೆಯಾಳುಗಳನ್ನು  ಹಮಾಸ್ ಬಿಡುಗಡೆ ಮಾಡಿತ್ತು.

ಹಮಾಸ್ ಈ ತಕ್ಷಣವೇ ಹೊಸ ಕದನವಿರಾಮಕ್ಕೆ ಒಪ್ಪಿಕೊಂಡು ಉಳಿದ ಈ 24 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಗಾಜಾದಲ್ಲಿ ಸಾವಿರಾರು ಸೈನಿಕರನ್ನು ಬಳಸಿಕೊಂಡು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಲಿರಾನ್ ಬೆರ್ಮನ್ ಬಿಬಿಸಿ ನ್ಯೂಸ್‌ಗೆ  ಹೇಳಿದರು. “ಹಮಾಸ್ ಮೇಲೆ ಒತ್ತಡ ಹೇರಲು ಇಸ್ರೇಲ್ ಪಡೆಗಳನ್ನು ಕಳುಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ತಮ್ಮ 27 ವರ್ಷದ ತನ್ನ ಸಹೋದರರು “ಪ್ರತಿದಿನ ಅಪಾಯದಲ್ಲಿದ್ದಾರೆ. ಅವರು ಜೀವಂತವಾಗಿದ್ದಾರೆಂದು ನಮಗೆ ತಿಳಿದಿದೆ. ಬಿಡುಗಡೆಯಾದ ಒತ್ತೆಯಾಳುಗಳು ಅವರನ್ನು ನೋಡಿದ್ದಾರೆ ಎಂದು ಬೆರ್ಮನ್ ಹೇಳಿದರು.

ಗಾಲಿ ಮತ್ತು ಜಿವ್ ಅವರನ್ನು ಬಂಧಿಸಿದಾಗ ಅವರು ಗಾಯಗೊಂಡಿದ್ದರು ಎಂದು ಅವರು ನಂಬಿದ್ದರು. ಆದರೆ ಇಷ್ಟು ದಿನ ಸೆರೆಯಲ್ಲಿದ್ದಾರೆಂದರೆ ಅವರು ಅಷ್ಟು ಗಾಯಗೊಂಡಿರಲಿಲ್ಲವೆನಿಸುತ್ತದೆ. ಇಷ್ಟು ದಿನದ ಒತ್ತೆಸೆರೆಯಿಂದಾಗಿ ಅವರ ಮಾನಸಿಕ ಸ್ಥಿತಿ “ಉತ್ತಮವಾಗಿಲ್ಲ ಎಂದು ತಾವು ಚಿಂತಿತರಾಗಿದ್ದೇವೆಂದು ಅವರು ಹೇಳಿದರು. ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಕೃಶ ಮತ್ತು ದುರ್ಬಲ ಒತ್ತೆಯಾಳುಗಳ ಬಿಡುಗಡೆಯೊಂದಿಗೆ  ತಮ್ಮ ಸಹೋದರರ ಸ್ಥಿತಿಯ ಬಗ್ಗೆ ಚಿಂತಿತರಾಗಿರಾಗಿದ್ದೇವೆಂದು ಬೆರ್ಮನ್ ಹೇಳಿದರು.

ನಾವು ಹಮಾಸ್ ಮತ್ತು ಅದರ ಬೆಂಬಲಿಗರ ಮೇಲೆ ಒತ್ತಡ ಹೇರಬೇಕಾಗಿದೆ. ಅಕ್ಟೋಬರ್ 7 ರಂದು ನೋವಾ ಸಂಗೀತ ಉತ್ಸವದ ಮೇಲಿನ ದಾಳಿಯಿಂದ ಓರ್ ಲೆವಿ ಅವರ ಪತ್ನಿ ಐನಾವ್ ಬದುಕುಳಿದಿದ್ದಾರೆಯೇ ಎಂದು ತಿಳಿಯದೆ 491 ದಿನಗಳ ಕಾಲ ಹಮಾಸ್ ಅವರನ್ನು ಬಂಧಿಸಿತ್ತು. ಅವಳು ಬದುಕಲಿಲ್ಲ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಅವರ ಮೂರು ವರ್ಷದ ಮಗ ಅಲ್ಮೋಗ್ ಇಬ್ಬರೂ ಪೋಷಕರು ಇಲ್ಲದೆ ಇದ್ದನು. ಫೆಬ್ರವರಿಯಲ್ಲಿ ಸಣಕಲು ದೇಹದ ಓರ್ ಲೆವಿಯನ್ನು ಹಮಾಸ್ ಬಿಡುಗಡೆ ಮಾಡಿತು. ಇಸ್ರೇಲ್ ಗಾಜಾಗೆ ಹೆಚ್ಚಿನ ಸೈನಿಕರನ್ನು ಕಳುಹಿಸಿದರೆ ಒತ್ತೆಯಾಳುಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅವರ ಸಹೋದರ ಮೈಕೆಲ್ ಲೆವಿ ಬಿಬಿಸಿ ನ್ಯೂಸ್‌ಗೆ ತಿಳಿಸಿದರು.

ಇದು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ಆಗ ಹಮಾಸ್ ಇವರನ್ನು ಏನಾದರೂ ಮಾಡಲು ನಿರ್ಧರಿಸಬಹುದು ಎಂದು ಅವರು ಹೇಳಿದರು. “ಸೇನೆಯು ತಾನು ಏನು ಮಾಡುತ್ತಿದೆ ಎಂದು ತಿಳಿದಿದೆ ಮತ್ತು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರದಂತೆ ಅವರು ಖಚಿತಪಡಿಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ, ಆದರೆ ಇದು ಯಾವಾಗಲೂ ಕಳವಳಕಾರಿಯಾಗಿದೆ ಎಂದು ಮೈಕೆಲ್ ಲೆವಿ ಹೇಳಿದರು. ಆದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಒತ್ತಡ ಹೇರಬೇಕೆಂದು ಅವರು ಅಭಿಪ್ರಾಯಿಸಿದರು.

ಮಾನವೀಯತೆಯ ವಿರುದ್ಧ ಅಪರಾಧವಿದೆ ಮತ್ತು ಅಧ್ಯಕ್ಷ ಟ್ರಂಪ್ ಸೇರಿದಂತೆ ಎಲ್ಲರೂ ಅವರನ್ನು ಮರಳಿ ಕರೆತರಲು ಹೆಚ್ಚಿನದನ್ನು ಮಾಡಬೇಕಾಗಿದೆ. ಗಾಜಾದಲ್ಲಿ ಹಮಾಸ್‌ನ ಭೂಗತ ಸುರಂಗಗಳಲ್ಲಿ ಒತ್ತೆಯಾಳುಗಳಾಗಿದ್ದಾಗ ತನ್ನ ಸಹೋದರನಿಗೆ ಸಾಕಷ್ಟು ಆಹಾರ ಸಿಗಲಿಲ್ಲ ಮತ್ತು ಸೂರ್ಯನ ಬೆಳಕನ್ನು ನೋಡಲಾಗಲಿಲ್ಲ. ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿದರು ಎಂದು ಅವರು ಹೇಳಿದರು.

ಉಳಿದ ಒತ್ತೆಯಾಳುಗಳು ಸೆರೆಯಲ್ಲಿ ಸಾಯುತ್ತಾರೆ ಎಂಬ ಅಂಶದ ಕುರಿತು ನನ್ನ ಸಹೋದರ ಚಿಂತೆ ಮಾಡುತ್ತಾನೆ ಏಕೆಂದರೆ ಅದು ಅವನ ಭಯವಾಗಿದೆ. ಅಕ್ಟೋಬರ್ 7ರಂದು ಒತ್ತೆಯಾಳಾಗಿರಿಸಲ್ಪಟ್ಟ 251 ಜನರಲ್ಲಿ ಕೆಲವರು ಸೇರಿದಂತೆ ಈ ದಾಳಿಗೆ ಸುಮಾರು ಒಂದು ದಶಕದ ಮೊದಲು ಹಮಾಸ್ ವಶಪಡಿಸಿಕೊಂಡಿದ್ದ ಇತರ ನಾಲ್ವರು ಬಂಧಿತರು ಸೇರಿ 59 ಜನರು ಈಗ ಗಾಜಾದಲ್ಲಿಯೇ ಇದ್ದಾರೆ. ಇಸ್ರೇಲ್ ಸರ್ಕಾರವು 35 ಜನರ ಸಾವನ್ನು ಸಾರ್ವಜನಿಕವಾಗಿ ದೃಢಪಡಿಸಿದೆ, 24 ಜನರು ಮಾತ್ರ ಒತ್ತೆಯಾಳುಗಳಾಗಿ ಇರುವುದಾಗಿ ಹೇಳಿದೆ. ಅವರಲ್ಲಿ ಮೂವರ ಭವಿಷ್ಯದ ಬಗ್ಗೆ ಈಗ ಅನಿಶ್ಚಿತತೆ ಇದೆ ಎಂದಿದೆ.

ಏಪ್ರಿಲ್‌ನಲ್ಲಿ 48 ವರ್ಷ ತುಂಬಿದ ಓಮ್ರಿ ಮಿರಾನ್ ಹೊರತುಪಡಿಸಿ ಜೀವಂತ ಒತ್ತೆಯಾಳುಗಳು 20 ಅಥವಾ 30ರ ಹರೆಯದ ಪುರುಷರಾಗಿದ್ದಾರೆ. ಇಸ್ರೇಲ್ ದೃಢಪಡಿಸಿದ 35 ಜನರ ಮೃತದೇಹಗಳನ್ನು ಗಾಜಾದಲ್ಲಿ ಇರಿಸಲಾಗಿದ್ದು, ಬಹುತೇಕ ಎಲ್ಲರೂ 19ರಿಂದ 86 ವರ್ಷ ವಯಸ್ಸಿನ ಪುರುಷರಾಗಿದ್ದು, ಮೂವರು ಮಾತ್ರ ಮಹಿಳೆಯರು ಎಂದು ಹೇಳಿದೆ.

‘ದಿನಕ್ಕೆ ಒಂದು ಬ್ರೆಡ್’

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾದಾಗಿನಿಂದ, ಮಾಜಿ ಒತ್ತೆಯಾಳುಗಳು ಈಗ ಮಾಧ್ಯಮಗಳು ಮತ್ತು ಇತರರೊಂದಿಗೆ ತಮ್ಮ ಹಮಾಸ್ ನೊಂದಿಗಿನ ಸೆರೆವಾಸದ ಸಮಯದ ಬಗ್ಗೆ ಮಾತನಾಡುತ್ತಿದ್ದಾರೆ. 505 ದಿನಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದ 49 ವರ್ಷದ ತಾಲ್ ಶೋಹಮ್ ಕಳೆದ ತಿಂಗಳು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, “ಇಡೀ ದಿನಕ್ಕೆ ನಾವು ಒಂದೇ ಒಂದು ಪಿಟಾ ಬ್ರೆಡ್ ಅನ್ನು ಪಡೆದಿದ್ದೇವೆ. ಹಸಿವಿನಿಂದ ಆಘಾತಕ್ಕೊಳಗಾಗಿ, ನಾವು ಒಂದರ ನಂತರ ಒಂದರಂತೆ ತುಂಡುಗಳನ್ನು ಸಂಗ್ರಹಿಸಿದ್ದೇವೆ” ಎಂದಿದ್ದಾರೆ.

505 ದಿನಗಳ ಕಾಲ ಬಂಧನದಲ್ಲಿದ್ದ 28 ವರ್ಷದ ಎಲಿಯಾ ಕೊಹೆನ್, ಇಸ್ರೇಲ್‌ನ ಚಾನೆಲ್ 12ಗೆ ಮಾತನಾಡಿ, ವಾರಕ್ಕೊಮ್ಮೆ ಹಮಾಸ್ ಬಂದೂಕುಧಾರಿಗಳು ತನ್ನ ಮತ್ತು ಇತರ ಒತ್ತೆಯಾಳುಗಳಿಂದ ತಮ್ಮ ಎಲ್ಲಾ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದರು ಮತ್ತು ಅವರು ತಮಗೆ ಹೀಗೆ ಹೇಳುತ್ತಿದ್ದರು: “ನೀವು ಸಾಕಷ್ಟು ತೆಳ್ಳಗಿಲ್ಲ… ನಾನು ಆಹಾರವನ್ನು ಇನ್ನಷ್ಟು ಕಡಿತಗೊಳಿಸುವ ಕುರಿತು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ನವೆಂಬರ್ 2023ರಲ್ಲಿ ಮತ್ತೊಂದು ಕದನ ವಿರಾಮದ ಸಮಯದಲ್ಲಿ ಇಲಾನಾ ಗ್ರಿಟ್ಜೆವ್ಸ್ಕಿಯನ್ನು ಬಿಡುಗಡೆ ಮಾಡಲಾಯಿತು. ಅವರ ಜೊತೆಗಿದ್ದ ಮತನ್ ಜಂಗೌಕರ್ ಇನ್ನೂ ಒತ್ತೆಯಾಳು ಆಗಿದ್ದಾರೆ. 31 ವರ್ಷದ ಮಹಿಳೆ ಮಾರ್ಚ್‌ನಲ್ಲಿ ತನ್ನ ಮನೆಯಿಂದ ಅಪಹರಿಸಲ್ಪಟ್ಟಾಗ ಅಪಹರಣಕಾರರಲ್ಲಿ ಒಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದರು. ಗಾಜಾದಲ್ಲಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದ್ದಾಗಿ ಲೇಖನ ಹೇಳುತ್ತದೆ.

ನೋವಾ ಸಂಗೀತ ಉತ್ಸವದಿಂದ ಸೌಂಡ್ ಎಂಜಿನಿಯರ್ ರಾನ್ ಕ್ರಿವೊಯ್ ಅವರನ್ನು ಅಪಹರಿಸಲಾಯಿತು.
ಕಳೆದ ತಿಂಗಳು ಅವರು ದಿ ಟೈಮ್ಸ್ ಆಫ್ ಇಸ್ರೇಲ್ ಚಾನೆಲ್ 12ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಮಾಸ್ ನಿರ್ಮಿಸಿದ ಸುರಂಗಗಳ ಕುರಿತು ವಿವರಿಸಿದ್ದರು. ನಾವು ತುಂಬಾ ಚಿಕ್ಕ ಪಂಜರದೊಳಗೆ ಇದ್ದೆವು ಮತ್ತು ನಾವು ಅದರಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಾಗಿತ್ತು. ನಮಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸುರಂಗವು ಎತ್ತರವಿರಲಿಲ್ಲ, ಅಲ್ಲಿ ಶೌಚಾಲಯವಿಲ್ಲ, ಆಹಾರವಿರಲಿಲ್ಲ. ಅಲ್ಲಿ ನಾವು ಐದು ಜನ ಒತ್ತೆಯಾಳಾಗಿದ್ದೆವು” ಎಂದಿದ್ದಾರೆ.

ಪತ್ರಿಕಾ ಸಂಪಾದಕರನ್ನು ಭೇಟಿಯಾದ ಸಚಿವ ಅಶ್ವಿನಿ ವೈಷ್ಣವ್: ಭಾರತ-ಪಾಕಿಸ್ತಾನ ಸಂಘರ್ಷ ಕುರಿತು ವಾಸ್ತವ ವರದಿ ಪ್ರಕಟಿಸಲು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...