Homeಅಂತರಾಷ್ಟ್ರೀಯವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

ವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

- Advertisement -
- Advertisement -

ಅಕ್ಟೋಬರ್ 7ರ ದಾಳಿಯಲ್ಲಿ ಗಾಜಾಕ್ಕೆ ಕರೆದೊಯ್ದ ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಭವಿಷ್ಯದ ಕುರಿತು ಕಳವಳವನ್ನು ವ್ಯಕ್ತಪಡಿಸಿವೆ. ಏಕೆಂದರೆ ಈ ಒತ್ತೆಯಾಳುಗಳಲ್ಲಿ ಎಷ್ಟು ಜನರು ಇನ್ನೂ ಜೀವಂತವಾಗಿದ್ದಾರೆ ಎಂಬ ಅನುಮಾನಗಳು ಅವರಲ್ಲಿ ಬೆಳೆಯುತ್ತಿವೆ.

ಒತ್ತೆಯಾಳುಗಳು “ಪ್ರತಿದಿನ” ಅಪಾಯದಲ್ಲಿದ್ದಾರೆ ಎಂದು ಒಂದು ಕುಟುಂಬ ಹೇಳಿದೆ. ಈ ವಾರ ಜೀವಂತವಾಗಿದ್ದಾರೆಂದು ನಂಬಲಾಗಿದ್ದ 24 ಒತ್ತೆಯಾಳುಗಳಲ್ಲಿ ಮೂವರ ಸ್ಥಿತಿಯ ಬಗ್ಗೆ “ಅನಿಶ್ಚಿತತೆ” ಇದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ನೇತೃತ್ವದ ದಾಳಿಯಲ್ಲಿ ಸೆರೆಹಿಡಿಯಲ್ಪಟ್ಟವರಲ್ಲಿ ಕೇವಲ 21 ಜನರು ಮಾತ್ರ ಇನ್ನೂ ಜೀವಂತವಾಗಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂಗಳವಾರದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾದಲ್ಲಿ ವಿಸ್ತೃತ ದಾಳಿಯನ್ನು ಅನುಮೋದಿಸಿದ ನಂತರ ಈ ವರ್ಷ ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುವಿನ ಸಹೋದರ ಸೇರಿದಂತೆ ಎರಡು ಕುಟುಂಬಗಳೊಂದಿಗೆ ‘ಬಿಬಿಸಿ’ ಸುದ್ದಿ ಸಂಸ್ಥೆ ಮಾತನಾಡಿತು. ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ರಕ್ಷಿಸಲು ಇಸ್ರೇಲ್ ಸಂಪುಟವು ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ “ಬಲವಂತದ ಕಾರ್ಯಾಚರಣೆ”ಗೆ ನಿರ್ಧರಿಸಿದೆ ಮತ್ತು ಗಾಜಾದ 2.1 ಮಿಲಿಯನ್ ಜನರ ರಕ್ಷಣೆಗಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಸಹಾಯ ಮಾಡಲು ಸೈನಿಕ ಪಡೆಗಳನ್ನು ಬಳಸಲಾಗುತ್ತಿದೆ ಎಂದು ಒಂದು ಕುಟುಂಬ ಬಿಬಿಸಿಗೆ ತಿಳಿಸಿದೆ.

ಲಿರಾನ್ ಬೆರ್ಮನ್ ಅವರ ಅವಳಿ ಸಹೋದರರಾದ ಗಾಲಿ ಮತ್ತು ಜಿವ್ ಅವರನ್ನು ಅಕ್ಟೋಬರ್ 7, 2023ರಂದು ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿರುವ ಅವರ ಮನೆಯಿಂದ ಅಪಹರಿಸಿದ ನಂತರ ಅವರನ್ನು 19 ತಿಂಗಳಿನಿಂದ ಇನ್ನೂ ಹಮಾಸ್ ಬಂಧನದಲ್ಲಿದ್ದಾರೆ. ಆ ದಿನ ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಸುಮಾರು 1,200 ಜನರನ್ನು ಕೊಂದಿದ್ದರು. ಆದರೆ ಒತ್ತೆಯಾಳುಗಳಾಗಿರಿಸಲ್ಪಟ್ಟ 251 ಇತರರಲ್ಲಿ ಗಾಲಿ ಮತ್ತು ಜಿವ್ ಸೇರಿದ್ದಾರೆ. ನಂತರದ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಪ್ಯಾಲೇಸ್ತೀನಿನ 52,780ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಮಾರ್ಚ್ 2ರಿಂದ ಇಸ್ರೇಲ್ ಪ್ಯಾಲೇಸ್ತೀನಿಗೆ ಎಲ್ಲಾ ನೆರವು ಮತ್ತು ಇತರ ಸರಬರಾಜುಗಳನ್ನು ಕಡಿತಗೊಳಿಸಿದೆ ಮತ್ತು ಎರಡು ತಿಂಗಳ ಕದನ ವಿರಾಮವನ್ನು ಮುರಿದ ನಂತರ ಎರಡು ವಾರಗಳ ನಂತರ ತನ್ನ ದಾಳಿಯನ್ನು ಪುನರಾರಂಭಿಸಿತು. ಇದಕ್ಕೂ ಮೊದಲು ಇಸ್ರೇಲಿ ಜೈಲುಗಳಲ್ಲಿದ್ದ ಸುಮಾರು 1,900 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಐದು ಥಾಯ್ ಒತ್ತೆಯಾಳುಗಳನ್ನು  ಹಮಾಸ್ ಬಿಡುಗಡೆ ಮಾಡಿತ್ತು.

ಹಮಾಸ್ ಈ ತಕ್ಷಣವೇ ಹೊಸ ಕದನವಿರಾಮಕ್ಕೆ ಒಪ್ಪಿಕೊಂಡು ಉಳಿದ ಈ 24 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಗಾಜಾದಲ್ಲಿ ಸಾವಿರಾರು ಸೈನಿಕರನ್ನು ಬಳಸಿಕೊಂಡು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಲಿರಾನ್ ಬೆರ್ಮನ್ ಬಿಬಿಸಿ ನ್ಯೂಸ್‌ಗೆ  ಹೇಳಿದರು. “ಹಮಾಸ್ ಮೇಲೆ ಒತ್ತಡ ಹೇರಲು ಇಸ್ರೇಲ್ ಪಡೆಗಳನ್ನು ಕಳುಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ತಮ್ಮ 27 ವರ್ಷದ ತನ್ನ ಸಹೋದರರು “ಪ್ರತಿದಿನ ಅಪಾಯದಲ್ಲಿದ್ದಾರೆ. ಅವರು ಜೀವಂತವಾಗಿದ್ದಾರೆಂದು ನಮಗೆ ತಿಳಿದಿದೆ. ಬಿಡುಗಡೆಯಾದ ಒತ್ತೆಯಾಳುಗಳು ಅವರನ್ನು ನೋಡಿದ್ದಾರೆ ಎಂದು ಬೆರ್ಮನ್ ಹೇಳಿದರು.

ಗಾಲಿ ಮತ್ತು ಜಿವ್ ಅವರನ್ನು ಬಂಧಿಸಿದಾಗ ಅವರು ಗಾಯಗೊಂಡಿದ್ದರು ಎಂದು ಅವರು ನಂಬಿದ್ದರು. ಆದರೆ ಇಷ್ಟು ದಿನ ಸೆರೆಯಲ್ಲಿದ್ದಾರೆಂದರೆ ಅವರು ಅಷ್ಟು ಗಾಯಗೊಂಡಿರಲಿಲ್ಲವೆನಿಸುತ್ತದೆ. ಇಷ್ಟು ದಿನದ ಒತ್ತೆಸೆರೆಯಿಂದಾಗಿ ಅವರ ಮಾನಸಿಕ ಸ್ಥಿತಿ “ಉತ್ತಮವಾಗಿಲ್ಲ ಎಂದು ತಾವು ಚಿಂತಿತರಾಗಿದ್ದೇವೆಂದು ಅವರು ಹೇಳಿದರು. ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಕೃಶ ಮತ್ತು ದುರ್ಬಲ ಒತ್ತೆಯಾಳುಗಳ ಬಿಡುಗಡೆಯೊಂದಿಗೆ  ತಮ್ಮ ಸಹೋದರರ ಸ್ಥಿತಿಯ ಬಗ್ಗೆ ಚಿಂತಿತರಾಗಿರಾಗಿದ್ದೇವೆಂದು ಬೆರ್ಮನ್ ಹೇಳಿದರು.

ನಾವು ಹಮಾಸ್ ಮತ್ತು ಅದರ ಬೆಂಬಲಿಗರ ಮೇಲೆ ಒತ್ತಡ ಹೇರಬೇಕಾಗಿದೆ. ಅಕ್ಟೋಬರ್ 7 ರಂದು ನೋವಾ ಸಂಗೀತ ಉತ್ಸವದ ಮೇಲಿನ ದಾಳಿಯಿಂದ ಓರ್ ಲೆವಿ ಅವರ ಪತ್ನಿ ಐನಾವ್ ಬದುಕುಳಿದಿದ್ದಾರೆಯೇ ಎಂದು ತಿಳಿಯದೆ 491 ದಿನಗಳ ಕಾಲ ಹಮಾಸ್ ಅವರನ್ನು ಬಂಧಿಸಿತ್ತು. ಅವಳು ಬದುಕಲಿಲ್ಲ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಅವರ ಮೂರು ವರ್ಷದ ಮಗ ಅಲ್ಮೋಗ್ ಇಬ್ಬರೂ ಪೋಷಕರು ಇಲ್ಲದೆ ಇದ್ದನು. ಫೆಬ್ರವರಿಯಲ್ಲಿ ಸಣಕಲು ದೇಹದ ಓರ್ ಲೆವಿಯನ್ನು ಹಮಾಸ್ ಬಿಡುಗಡೆ ಮಾಡಿತು. ಇಸ್ರೇಲ್ ಗಾಜಾಗೆ ಹೆಚ್ಚಿನ ಸೈನಿಕರನ್ನು ಕಳುಹಿಸಿದರೆ ಒತ್ತೆಯಾಳುಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅವರ ಸಹೋದರ ಮೈಕೆಲ್ ಲೆವಿ ಬಿಬಿಸಿ ನ್ಯೂಸ್‌ಗೆ ತಿಳಿಸಿದರು.

ಇದು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ಆಗ ಹಮಾಸ್ ಇವರನ್ನು ಏನಾದರೂ ಮಾಡಲು ನಿರ್ಧರಿಸಬಹುದು ಎಂದು ಅವರು ಹೇಳಿದರು. “ಸೇನೆಯು ತಾನು ಏನು ಮಾಡುತ್ತಿದೆ ಎಂದು ತಿಳಿದಿದೆ ಮತ್ತು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರದಂತೆ ಅವರು ಖಚಿತಪಡಿಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ, ಆದರೆ ಇದು ಯಾವಾಗಲೂ ಕಳವಳಕಾರಿಯಾಗಿದೆ ಎಂದು ಮೈಕೆಲ್ ಲೆವಿ ಹೇಳಿದರು. ಆದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಒತ್ತಡ ಹೇರಬೇಕೆಂದು ಅವರು ಅಭಿಪ್ರಾಯಿಸಿದರು.

ಮಾನವೀಯತೆಯ ವಿರುದ್ಧ ಅಪರಾಧವಿದೆ ಮತ್ತು ಅಧ್ಯಕ್ಷ ಟ್ರಂಪ್ ಸೇರಿದಂತೆ ಎಲ್ಲರೂ ಅವರನ್ನು ಮರಳಿ ಕರೆತರಲು ಹೆಚ್ಚಿನದನ್ನು ಮಾಡಬೇಕಾಗಿದೆ. ಗಾಜಾದಲ್ಲಿ ಹಮಾಸ್‌ನ ಭೂಗತ ಸುರಂಗಗಳಲ್ಲಿ ಒತ್ತೆಯಾಳುಗಳಾಗಿದ್ದಾಗ ತನ್ನ ಸಹೋದರನಿಗೆ ಸಾಕಷ್ಟು ಆಹಾರ ಸಿಗಲಿಲ್ಲ ಮತ್ತು ಸೂರ್ಯನ ಬೆಳಕನ್ನು ನೋಡಲಾಗಲಿಲ್ಲ. ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿದರು ಎಂದು ಅವರು ಹೇಳಿದರು.

ಉಳಿದ ಒತ್ತೆಯಾಳುಗಳು ಸೆರೆಯಲ್ಲಿ ಸಾಯುತ್ತಾರೆ ಎಂಬ ಅಂಶದ ಕುರಿತು ನನ್ನ ಸಹೋದರ ಚಿಂತೆ ಮಾಡುತ್ತಾನೆ ಏಕೆಂದರೆ ಅದು ಅವನ ಭಯವಾಗಿದೆ. ಅಕ್ಟೋಬರ್ 7ರಂದು ಒತ್ತೆಯಾಳಾಗಿರಿಸಲ್ಪಟ್ಟ 251 ಜನರಲ್ಲಿ ಕೆಲವರು ಸೇರಿದಂತೆ ಈ ದಾಳಿಗೆ ಸುಮಾರು ಒಂದು ದಶಕದ ಮೊದಲು ಹಮಾಸ್ ವಶಪಡಿಸಿಕೊಂಡಿದ್ದ ಇತರ ನಾಲ್ವರು ಬಂಧಿತರು ಸೇರಿ 59 ಜನರು ಈಗ ಗಾಜಾದಲ್ಲಿಯೇ ಇದ್ದಾರೆ. ಇಸ್ರೇಲ್ ಸರ್ಕಾರವು 35 ಜನರ ಸಾವನ್ನು ಸಾರ್ವಜನಿಕವಾಗಿ ದೃಢಪಡಿಸಿದೆ, 24 ಜನರು ಮಾತ್ರ ಒತ್ತೆಯಾಳುಗಳಾಗಿ ಇರುವುದಾಗಿ ಹೇಳಿದೆ. ಅವರಲ್ಲಿ ಮೂವರ ಭವಿಷ್ಯದ ಬಗ್ಗೆ ಈಗ ಅನಿಶ್ಚಿತತೆ ಇದೆ ಎಂದಿದೆ.

ಏಪ್ರಿಲ್‌ನಲ್ಲಿ 48 ವರ್ಷ ತುಂಬಿದ ಓಮ್ರಿ ಮಿರಾನ್ ಹೊರತುಪಡಿಸಿ ಜೀವಂತ ಒತ್ತೆಯಾಳುಗಳು 20 ಅಥವಾ 30ರ ಹರೆಯದ ಪುರುಷರಾಗಿದ್ದಾರೆ. ಇಸ್ರೇಲ್ ದೃಢಪಡಿಸಿದ 35 ಜನರ ಮೃತದೇಹಗಳನ್ನು ಗಾಜಾದಲ್ಲಿ ಇರಿಸಲಾಗಿದ್ದು, ಬಹುತೇಕ ಎಲ್ಲರೂ 19ರಿಂದ 86 ವರ್ಷ ವಯಸ್ಸಿನ ಪುರುಷರಾಗಿದ್ದು, ಮೂವರು ಮಾತ್ರ ಮಹಿಳೆಯರು ಎಂದು ಹೇಳಿದೆ.

‘ದಿನಕ್ಕೆ ಒಂದು ಬ್ರೆಡ್’

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾದಾಗಿನಿಂದ, ಮಾಜಿ ಒತ್ತೆಯಾಳುಗಳು ಈಗ ಮಾಧ್ಯಮಗಳು ಮತ್ತು ಇತರರೊಂದಿಗೆ ತಮ್ಮ ಹಮಾಸ್ ನೊಂದಿಗಿನ ಸೆರೆವಾಸದ ಸಮಯದ ಬಗ್ಗೆ ಮಾತನಾಡುತ್ತಿದ್ದಾರೆ. 505 ದಿನಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದ 49 ವರ್ಷದ ತಾಲ್ ಶೋಹಮ್ ಕಳೆದ ತಿಂಗಳು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, “ಇಡೀ ದಿನಕ್ಕೆ ನಾವು ಒಂದೇ ಒಂದು ಪಿಟಾ ಬ್ರೆಡ್ ಅನ್ನು ಪಡೆದಿದ್ದೇವೆ. ಹಸಿವಿನಿಂದ ಆಘಾತಕ್ಕೊಳಗಾಗಿ, ನಾವು ಒಂದರ ನಂತರ ಒಂದರಂತೆ ತುಂಡುಗಳನ್ನು ಸಂಗ್ರಹಿಸಿದ್ದೇವೆ” ಎಂದಿದ್ದಾರೆ.

505 ದಿನಗಳ ಕಾಲ ಬಂಧನದಲ್ಲಿದ್ದ 28 ವರ್ಷದ ಎಲಿಯಾ ಕೊಹೆನ್, ಇಸ್ರೇಲ್‌ನ ಚಾನೆಲ್ 12ಗೆ ಮಾತನಾಡಿ, ವಾರಕ್ಕೊಮ್ಮೆ ಹಮಾಸ್ ಬಂದೂಕುಧಾರಿಗಳು ತನ್ನ ಮತ್ತು ಇತರ ಒತ್ತೆಯಾಳುಗಳಿಂದ ತಮ್ಮ ಎಲ್ಲಾ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದರು ಮತ್ತು ಅವರು ತಮಗೆ ಹೀಗೆ ಹೇಳುತ್ತಿದ್ದರು: “ನೀವು ಸಾಕಷ್ಟು ತೆಳ್ಳಗಿಲ್ಲ… ನಾನು ಆಹಾರವನ್ನು ಇನ್ನಷ್ಟು ಕಡಿತಗೊಳಿಸುವ ಕುರಿತು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ನವೆಂಬರ್ 2023ರಲ್ಲಿ ಮತ್ತೊಂದು ಕದನ ವಿರಾಮದ ಸಮಯದಲ್ಲಿ ಇಲಾನಾ ಗ್ರಿಟ್ಜೆವ್ಸ್ಕಿಯನ್ನು ಬಿಡುಗಡೆ ಮಾಡಲಾಯಿತು. ಅವರ ಜೊತೆಗಿದ್ದ ಮತನ್ ಜಂಗೌಕರ್ ಇನ್ನೂ ಒತ್ತೆಯಾಳು ಆಗಿದ್ದಾರೆ. 31 ವರ್ಷದ ಮಹಿಳೆ ಮಾರ್ಚ್‌ನಲ್ಲಿ ತನ್ನ ಮನೆಯಿಂದ ಅಪಹರಿಸಲ್ಪಟ್ಟಾಗ ಅಪಹರಣಕಾರರಲ್ಲಿ ಒಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದರು. ಗಾಜಾದಲ್ಲಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದ್ದಾಗಿ ಲೇಖನ ಹೇಳುತ್ತದೆ.

ನೋವಾ ಸಂಗೀತ ಉತ್ಸವದಿಂದ ಸೌಂಡ್ ಎಂಜಿನಿಯರ್ ರಾನ್ ಕ್ರಿವೊಯ್ ಅವರನ್ನು ಅಪಹರಿಸಲಾಯಿತು.
ಕಳೆದ ತಿಂಗಳು ಅವರು ದಿ ಟೈಮ್ಸ್ ಆಫ್ ಇಸ್ರೇಲ್ ಚಾನೆಲ್ 12ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಮಾಸ್ ನಿರ್ಮಿಸಿದ ಸುರಂಗಗಳ ಕುರಿತು ವಿವರಿಸಿದ್ದರು. ನಾವು ತುಂಬಾ ಚಿಕ್ಕ ಪಂಜರದೊಳಗೆ ಇದ್ದೆವು ಮತ್ತು ನಾವು ಅದರಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಾಗಿತ್ತು. ನಮಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸುರಂಗವು ಎತ್ತರವಿರಲಿಲ್ಲ, ಅಲ್ಲಿ ಶೌಚಾಲಯವಿಲ್ಲ, ಆಹಾರವಿರಲಿಲ್ಲ. ಅಲ್ಲಿ ನಾವು ಐದು ಜನ ಒತ್ತೆಯಾಳಾಗಿದ್ದೆವು” ಎಂದಿದ್ದಾರೆ.

ಪತ್ರಿಕಾ ಸಂಪಾದಕರನ್ನು ಭೇಟಿಯಾದ ಸಚಿವ ಅಶ್ವಿನಿ ವೈಷ್ಣವ್: ಭಾರತ-ಪಾಕಿಸ್ತಾನ ಸಂಘರ್ಷ ಕುರಿತು ವಾಸ್ತವ ವರದಿ ಪ್ರಕಟಿಸಲು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...