Homeಅಂತರಾಷ್ಟ್ರೀಯವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

ವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?

- Advertisement -
- Advertisement -

ಅಕ್ಟೋಬರ್ 7ರ ದಾಳಿಯಲ್ಲಿ ಗಾಜಾಕ್ಕೆ ಕರೆದೊಯ್ದ ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಭವಿಷ್ಯದ ಕುರಿತು ಕಳವಳವನ್ನು ವ್ಯಕ್ತಪಡಿಸಿವೆ. ಏಕೆಂದರೆ ಈ ಒತ್ತೆಯಾಳುಗಳಲ್ಲಿ ಎಷ್ಟು ಜನರು ಇನ್ನೂ ಜೀವಂತವಾಗಿದ್ದಾರೆ ಎಂಬ ಅನುಮಾನಗಳು ಅವರಲ್ಲಿ ಬೆಳೆಯುತ್ತಿವೆ.

ಒತ್ತೆಯಾಳುಗಳು “ಪ್ರತಿದಿನ” ಅಪಾಯದಲ್ಲಿದ್ದಾರೆ ಎಂದು ಒಂದು ಕುಟುಂಬ ಹೇಳಿದೆ. ಈ ವಾರ ಜೀವಂತವಾಗಿದ್ದಾರೆಂದು ನಂಬಲಾಗಿದ್ದ 24 ಒತ್ತೆಯಾಳುಗಳಲ್ಲಿ ಮೂವರ ಸ್ಥಿತಿಯ ಬಗ್ಗೆ “ಅನಿಶ್ಚಿತತೆ” ಇದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ನೇತೃತ್ವದ ದಾಳಿಯಲ್ಲಿ ಸೆರೆಹಿಡಿಯಲ್ಪಟ್ಟವರಲ್ಲಿ ಕೇವಲ 21 ಜನರು ಮಾತ್ರ ಇನ್ನೂ ಜೀವಂತವಾಗಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂಗಳವಾರದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಗಾಜಾದಲ್ಲಿ ವಿಸ್ತೃತ ದಾಳಿಯನ್ನು ಅನುಮೋದಿಸಿದ ನಂತರ ಈ ವರ್ಷ ಹಮಾಸ್‌ನಿಂದ ಬಿಡುಗಡೆಯಾದ ಒತ್ತೆಯಾಳುವಿನ ಸಹೋದರ ಸೇರಿದಂತೆ ಎರಡು ಕುಟುಂಬಗಳೊಂದಿಗೆ ‘ಬಿಬಿಸಿ’ ಸುದ್ದಿ ಸಂಸ್ಥೆ ಮಾತನಾಡಿತು. ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ರಕ್ಷಿಸಲು ಇಸ್ರೇಲ್ ಸಂಪುಟವು ಗಾಜಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ “ಬಲವಂತದ ಕಾರ್ಯಾಚರಣೆ”ಗೆ ನಿರ್ಧರಿಸಿದೆ ಮತ್ತು ಗಾಜಾದ 2.1 ಮಿಲಿಯನ್ ಜನರ ರಕ್ಷಣೆಗಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಸಹಾಯ ಮಾಡಲು ಸೈನಿಕ ಪಡೆಗಳನ್ನು ಬಳಸಲಾಗುತ್ತಿದೆ ಎಂದು ಒಂದು ಕುಟುಂಬ ಬಿಬಿಸಿಗೆ ತಿಳಿಸಿದೆ.

ಲಿರಾನ್ ಬೆರ್ಮನ್ ಅವರ ಅವಳಿ ಸಹೋದರರಾದ ಗಾಲಿ ಮತ್ತು ಜಿವ್ ಅವರನ್ನು ಅಕ್ಟೋಬರ್ 7, 2023ರಂದು ಕಿಬ್ಬುಟ್ಜ್ ಕ್ಫರ್ ಅಜಾದಲ್ಲಿರುವ ಅವರ ಮನೆಯಿಂದ ಅಪಹರಿಸಿದ ನಂತರ ಅವರನ್ನು 19 ತಿಂಗಳಿನಿಂದ ಇನ್ನೂ ಹಮಾಸ್ ಬಂಧನದಲ್ಲಿದ್ದಾರೆ. ಆ ದಿನ ಹಮಾಸ್ ನೇತೃತ್ವದ ಬಂದೂಕುಧಾರಿಗಳು ಇಸ್ರೇಲ್ ಸುಮಾರು 1,200 ಜನರನ್ನು ಕೊಂದಿದ್ದರು. ಆದರೆ ಒತ್ತೆಯಾಳುಗಳಾಗಿರಿಸಲ್ಪಟ್ಟ 251 ಇತರರಲ್ಲಿ ಗಾಲಿ ಮತ್ತು ಜಿವ್ ಸೇರಿದ್ದಾರೆ. ನಂತರದ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಪ್ಯಾಲೇಸ್ತೀನಿನ 52,780ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಮಾರ್ಚ್ 2ರಿಂದ ಇಸ್ರೇಲ್ ಪ್ಯಾಲೇಸ್ತೀನಿಗೆ ಎಲ್ಲಾ ನೆರವು ಮತ್ತು ಇತರ ಸರಬರಾಜುಗಳನ್ನು ಕಡಿತಗೊಳಿಸಿದೆ ಮತ್ತು ಎರಡು ತಿಂಗಳ ಕದನ ವಿರಾಮವನ್ನು ಮುರಿದ ನಂತರ ಎರಡು ವಾರಗಳ ನಂತರ ತನ್ನ ದಾಳಿಯನ್ನು ಪುನರಾರಂಭಿಸಿತು. ಇದಕ್ಕೂ ಮೊದಲು ಇಸ್ರೇಲಿ ಜೈಲುಗಳಲ್ಲಿದ್ದ ಸುಮಾರು 1,900 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಐದು ಥಾಯ್ ಒತ್ತೆಯಾಳುಗಳನ್ನು  ಹಮಾಸ್ ಬಿಡುಗಡೆ ಮಾಡಿತ್ತು.

ಹಮಾಸ್ ಈ ತಕ್ಷಣವೇ ಹೊಸ ಕದನವಿರಾಮಕ್ಕೆ ಒಪ್ಪಿಕೊಂಡು ಉಳಿದ ಈ 24 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಗಾಜಾದಲ್ಲಿ ಸಾವಿರಾರು ಸೈನಿಕರನ್ನು ಬಳಸಿಕೊಂಡು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಲಿರಾನ್ ಬೆರ್ಮನ್ ಬಿಬಿಸಿ ನ್ಯೂಸ್‌ಗೆ  ಹೇಳಿದರು. “ಹಮಾಸ್ ಮೇಲೆ ಒತ್ತಡ ಹೇರಲು ಇಸ್ರೇಲ್ ಪಡೆಗಳನ್ನು ಕಳುಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ತಮ್ಮ 27 ವರ್ಷದ ತನ್ನ ಸಹೋದರರು “ಪ್ರತಿದಿನ ಅಪಾಯದಲ್ಲಿದ್ದಾರೆ. ಅವರು ಜೀವಂತವಾಗಿದ್ದಾರೆಂದು ನಮಗೆ ತಿಳಿದಿದೆ. ಬಿಡುಗಡೆಯಾದ ಒತ್ತೆಯಾಳುಗಳು ಅವರನ್ನು ನೋಡಿದ್ದಾರೆ ಎಂದು ಬೆರ್ಮನ್ ಹೇಳಿದರು.

ಗಾಲಿ ಮತ್ತು ಜಿವ್ ಅವರನ್ನು ಬಂಧಿಸಿದಾಗ ಅವರು ಗಾಯಗೊಂಡಿದ್ದರು ಎಂದು ಅವರು ನಂಬಿದ್ದರು. ಆದರೆ ಇಷ್ಟು ದಿನ ಸೆರೆಯಲ್ಲಿದ್ದಾರೆಂದರೆ ಅವರು ಅಷ್ಟು ಗಾಯಗೊಂಡಿರಲಿಲ್ಲವೆನಿಸುತ್ತದೆ. ಇಷ್ಟು ದಿನದ ಒತ್ತೆಸೆರೆಯಿಂದಾಗಿ ಅವರ ಮಾನಸಿಕ ಸ್ಥಿತಿ “ಉತ್ತಮವಾಗಿಲ್ಲ ಎಂದು ತಾವು ಚಿಂತಿತರಾಗಿದ್ದೇವೆಂದು ಅವರು ಹೇಳಿದರು. ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಕೃಶ ಮತ್ತು ದುರ್ಬಲ ಒತ್ತೆಯಾಳುಗಳ ಬಿಡುಗಡೆಯೊಂದಿಗೆ  ತಮ್ಮ ಸಹೋದರರ ಸ್ಥಿತಿಯ ಬಗ್ಗೆ ಚಿಂತಿತರಾಗಿರಾಗಿದ್ದೇವೆಂದು ಬೆರ್ಮನ್ ಹೇಳಿದರು.

ನಾವು ಹಮಾಸ್ ಮತ್ತು ಅದರ ಬೆಂಬಲಿಗರ ಮೇಲೆ ಒತ್ತಡ ಹೇರಬೇಕಾಗಿದೆ. ಅಕ್ಟೋಬರ್ 7 ರಂದು ನೋವಾ ಸಂಗೀತ ಉತ್ಸವದ ಮೇಲಿನ ದಾಳಿಯಿಂದ ಓರ್ ಲೆವಿ ಅವರ ಪತ್ನಿ ಐನಾವ್ ಬದುಕುಳಿದಿದ್ದಾರೆಯೇ ಎಂದು ತಿಳಿಯದೆ 491 ದಿನಗಳ ಕಾಲ ಹಮಾಸ್ ಅವರನ್ನು ಬಂಧಿಸಿತ್ತು. ಅವಳು ಬದುಕಲಿಲ್ಲ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಅವರ ಮೂರು ವರ್ಷದ ಮಗ ಅಲ್ಮೋಗ್ ಇಬ್ಬರೂ ಪೋಷಕರು ಇಲ್ಲದೆ ಇದ್ದನು. ಫೆಬ್ರವರಿಯಲ್ಲಿ ಸಣಕಲು ದೇಹದ ಓರ್ ಲೆವಿಯನ್ನು ಹಮಾಸ್ ಬಿಡುಗಡೆ ಮಾಡಿತು. ಇಸ್ರೇಲ್ ಗಾಜಾಗೆ ಹೆಚ್ಚಿನ ಸೈನಿಕರನ್ನು ಕಳುಹಿಸಿದರೆ ಒತ್ತೆಯಾಳುಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಅವರ ಸಹೋದರ ಮೈಕೆಲ್ ಲೆವಿ ಬಿಬಿಸಿ ನ್ಯೂಸ್‌ಗೆ ತಿಳಿಸಿದರು.

ಇದು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ಆಗ ಹಮಾಸ್ ಇವರನ್ನು ಏನಾದರೂ ಮಾಡಲು ನಿರ್ಧರಿಸಬಹುದು ಎಂದು ಅವರು ಹೇಳಿದರು. “ಸೇನೆಯು ತಾನು ಏನು ಮಾಡುತ್ತಿದೆ ಎಂದು ತಿಳಿದಿದೆ ಮತ್ತು ಒತ್ತೆಯಾಳುಗಳ ಮೇಲೆ ಪರಿಣಾಮ ಬೀರದಂತೆ ಅವರು ಖಚಿತಪಡಿಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ, ಆದರೆ ಇದು ಯಾವಾಗಲೂ ಕಳವಳಕಾರಿಯಾಗಿದೆ ಎಂದು ಮೈಕೆಲ್ ಲೆವಿ ಹೇಳಿದರು. ಆದರೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಒತ್ತಡ ಹೇರಬೇಕೆಂದು ಅವರು ಅಭಿಪ್ರಾಯಿಸಿದರು.

ಮಾನವೀಯತೆಯ ವಿರುದ್ಧ ಅಪರಾಧವಿದೆ ಮತ್ತು ಅಧ್ಯಕ್ಷ ಟ್ರಂಪ್ ಸೇರಿದಂತೆ ಎಲ್ಲರೂ ಅವರನ್ನು ಮರಳಿ ಕರೆತರಲು ಹೆಚ್ಚಿನದನ್ನು ಮಾಡಬೇಕಾಗಿದೆ. ಗಾಜಾದಲ್ಲಿ ಹಮಾಸ್‌ನ ಭೂಗತ ಸುರಂಗಗಳಲ್ಲಿ ಒತ್ತೆಯಾಳುಗಳಾಗಿದ್ದಾಗ ತನ್ನ ಸಹೋದರನಿಗೆ ಸಾಕಷ್ಟು ಆಹಾರ ಸಿಗಲಿಲ್ಲ ಮತ್ತು ಸೂರ್ಯನ ಬೆಳಕನ್ನು ನೋಡಲಾಗಲಿಲ್ಲ. ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿದರು ಎಂದು ಅವರು ಹೇಳಿದರು.

ಉಳಿದ ಒತ್ತೆಯಾಳುಗಳು ಸೆರೆಯಲ್ಲಿ ಸಾಯುತ್ತಾರೆ ಎಂಬ ಅಂಶದ ಕುರಿತು ನನ್ನ ಸಹೋದರ ಚಿಂತೆ ಮಾಡುತ್ತಾನೆ ಏಕೆಂದರೆ ಅದು ಅವನ ಭಯವಾಗಿದೆ. ಅಕ್ಟೋಬರ್ 7ರಂದು ಒತ್ತೆಯಾಳಾಗಿರಿಸಲ್ಪಟ್ಟ 251 ಜನರಲ್ಲಿ ಕೆಲವರು ಸೇರಿದಂತೆ ಈ ದಾಳಿಗೆ ಸುಮಾರು ಒಂದು ದಶಕದ ಮೊದಲು ಹಮಾಸ್ ವಶಪಡಿಸಿಕೊಂಡಿದ್ದ ಇತರ ನಾಲ್ವರು ಬಂಧಿತರು ಸೇರಿ 59 ಜನರು ಈಗ ಗಾಜಾದಲ್ಲಿಯೇ ಇದ್ದಾರೆ. ಇಸ್ರೇಲ್ ಸರ್ಕಾರವು 35 ಜನರ ಸಾವನ್ನು ಸಾರ್ವಜನಿಕವಾಗಿ ದೃಢಪಡಿಸಿದೆ, 24 ಜನರು ಮಾತ್ರ ಒತ್ತೆಯಾಳುಗಳಾಗಿ ಇರುವುದಾಗಿ ಹೇಳಿದೆ. ಅವರಲ್ಲಿ ಮೂವರ ಭವಿಷ್ಯದ ಬಗ್ಗೆ ಈಗ ಅನಿಶ್ಚಿತತೆ ಇದೆ ಎಂದಿದೆ.

ಏಪ್ರಿಲ್‌ನಲ್ಲಿ 48 ವರ್ಷ ತುಂಬಿದ ಓಮ್ರಿ ಮಿರಾನ್ ಹೊರತುಪಡಿಸಿ ಜೀವಂತ ಒತ್ತೆಯಾಳುಗಳು 20 ಅಥವಾ 30ರ ಹರೆಯದ ಪುರುಷರಾಗಿದ್ದಾರೆ. ಇಸ್ರೇಲ್ ದೃಢಪಡಿಸಿದ 35 ಜನರ ಮೃತದೇಹಗಳನ್ನು ಗಾಜಾದಲ್ಲಿ ಇರಿಸಲಾಗಿದ್ದು, ಬಹುತೇಕ ಎಲ್ಲರೂ 19ರಿಂದ 86 ವರ್ಷ ವಯಸ್ಸಿನ ಪುರುಷರಾಗಿದ್ದು, ಮೂವರು ಮಾತ್ರ ಮಹಿಳೆಯರು ಎಂದು ಹೇಳಿದೆ.

‘ದಿನಕ್ಕೆ ಒಂದು ಬ್ರೆಡ್’

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾದಾಗಿನಿಂದ, ಮಾಜಿ ಒತ್ತೆಯಾಳುಗಳು ಈಗ ಮಾಧ್ಯಮಗಳು ಮತ್ತು ಇತರರೊಂದಿಗೆ ತಮ್ಮ ಹಮಾಸ್ ನೊಂದಿಗಿನ ಸೆರೆವಾಸದ ಸಮಯದ ಬಗ್ಗೆ ಮಾತನಾಡುತ್ತಿದ್ದಾರೆ. 505 ದಿನಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದ 49 ವರ್ಷದ ತಾಲ್ ಶೋಹಮ್ ಕಳೆದ ತಿಂಗಳು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, “ಇಡೀ ದಿನಕ್ಕೆ ನಾವು ಒಂದೇ ಒಂದು ಪಿಟಾ ಬ್ರೆಡ್ ಅನ್ನು ಪಡೆದಿದ್ದೇವೆ. ಹಸಿವಿನಿಂದ ಆಘಾತಕ್ಕೊಳಗಾಗಿ, ನಾವು ಒಂದರ ನಂತರ ಒಂದರಂತೆ ತುಂಡುಗಳನ್ನು ಸಂಗ್ರಹಿಸಿದ್ದೇವೆ” ಎಂದಿದ್ದಾರೆ.

505 ದಿನಗಳ ಕಾಲ ಬಂಧನದಲ್ಲಿದ್ದ 28 ವರ್ಷದ ಎಲಿಯಾ ಕೊಹೆನ್, ಇಸ್ರೇಲ್‌ನ ಚಾನೆಲ್ 12ಗೆ ಮಾತನಾಡಿ, ವಾರಕ್ಕೊಮ್ಮೆ ಹಮಾಸ್ ಬಂದೂಕುಧಾರಿಗಳು ತನ್ನ ಮತ್ತು ಇತರ ಒತ್ತೆಯಾಳುಗಳಿಂದ ತಮ್ಮ ಎಲ್ಲಾ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದರು ಮತ್ತು ಅವರು ತಮಗೆ ಹೀಗೆ ಹೇಳುತ್ತಿದ್ದರು: “ನೀವು ಸಾಕಷ್ಟು ತೆಳ್ಳಗಿಲ್ಲ… ನಾನು ಆಹಾರವನ್ನು ಇನ್ನಷ್ಟು ಕಡಿತಗೊಳಿಸುವ ಕುರಿತು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ನವೆಂಬರ್ 2023ರಲ್ಲಿ ಮತ್ತೊಂದು ಕದನ ವಿರಾಮದ ಸಮಯದಲ್ಲಿ ಇಲಾನಾ ಗ್ರಿಟ್ಜೆವ್ಸ್ಕಿಯನ್ನು ಬಿಡುಗಡೆ ಮಾಡಲಾಯಿತು. ಅವರ ಜೊತೆಗಿದ್ದ ಮತನ್ ಜಂಗೌಕರ್ ಇನ್ನೂ ಒತ್ತೆಯಾಳು ಆಗಿದ್ದಾರೆ. 31 ವರ್ಷದ ಮಹಿಳೆ ಮಾರ್ಚ್‌ನಲ್ಲಿ ತನ್ನ ಮನೆಯಿಂದ ಅಪಹರಿಸಲ್ಪಟ್ಟಾಗ ಅಪಹರಣಕಾರರಲ್ಲಿ ಒಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದರು. ಗಾಜಾದಲ್ಲಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದ್ದಾಗಿ ಲೇಖನ ಹೇಳುತ್ತದೆ.

ನೋವಾ ಸಂಗೀತ ಉತ್ಸವದಿಂದ ಸೌಂಡ್ ಎಂಜಿನಿಯರ್ ರಾನ್ ಕ್ರಿವೊಯ್ ಅವರನ್ನು ಅಪಹರಿಸಲಾಯಿತು.
ಕಳೆದ ತಿಂಗಳು ಅವರು ದಿ ಟೈಮ್ಸ್ ಆಫ್ ಇಸ್ರೇಲ್ ಚಾನೆಲ್ 12ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಮಾಸ್ ನಿರ್ಮಿಸಿದ ಸುರಂಗಗಳ ಕುರಿತು ವಿವರಿಸಿದ್ದರು. ನಾವು ತುಂಬಾ ಚಿಕ್ಕ ಪಂಜರದೊಳಗೆ ಇದ್ದೆವು ಮತ್ತು ನಾವು ಅದರಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಾಗಿತ್ತು. ನಮಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸುರಂಗವು ಎತ್ತರವಿರಲಿಲ್ಲ, ಅಲ್ಲಿ ಶೌಚಾಲಯವಿಲ್ಲ, ಆಹಾರವಿರಲಿಲ್ಲ. ಅಲ್ಲಿ ನಾವು ಐದು ಜನ ಒತ್ತೆಯಾಳಾಗಿದ್ದೆವು” ಎಂದಿದ್ದಾರೆ.

ಪತ್ರಿಕಾ ಸಂಪಾದಕರನ್ನು ಭೇಟಿಯಾದ ಸಚಿವ ಅಶ್ವಿನಿ ವೈಷ್ಣವ್: ಭಾರತ-ಪಾಕಿಸ್ತಾನ ಸಂಘರ್ಷ ಕುರಿತು ವಾಸ್ತವ ವರದಿ ಪ್ರಕಟಿಸಲು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...