Homeಚಳವಳಿನೂತನ ಪಠ್ಯ: ರಾಜ್ಯದ ಜಿಲ್ಲೆಗಳ ಮಾಹಿತಿಗೆ ಕತ್ತರಿ, ದೇವೇಗೌಡರ ಭಾವಚಿತ್ರ ಸೇರಿದಂತೆ ಹಲವು ವಿವರಗಳಿಗೆ ಕೋಕ್‌!

ನೂತನ ಪಠ್ಯ: ರಾಜ್ಯದ ಜಿಲ್ಲೆಗಳ ಮಾಹಿತಿಗೆ ಕತ್ತರಿ, ದೇವೇಗೌಡರ ಭಾವಚಿತ್ರ ಸೇರಿದಂತೆ ಹಲವು ವಿವರಗಳಿಗೆ ಕೋಕ್‌!

ಇದು ಪ್ರಾದೇಶಿಕ ವಾದವನ್ನು ಕಿತ್ತುಹಾಕಿ ಒಂದು ದೇಶ- ಒಂದು ಸಂಸ್ಕೃತಿ ಎಂಬ ಸಿದ್ದಾಂತ ಹೇರಲು ನಡೆಸುತ್ತಿರುವ ಯತ್ನವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -
- Advertisement -

ಬಿಜೆಪಿ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಅದ್ವಾನಗಳು ದಿನೇ ದಿನೇ ಹೊರಬರುತ್ತಿವೆ. ಸರ್ಕಾರವೇನೂ ಸಮಿತಿ ವಿಸರ್ಜನೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಅವರು ಮಾಡಿರುವ ಅದ್ವಾನಗಳನ್ನು ಸರಿಪಡಿಸಲು ತೀವ್ರ ಕಸರತ್ತು ಮಾಡಲಾಗಿದೆ. ಸಮಿತಿಯು ನೂತನ ಪಠ್ಯದ 6 ನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕ ಭಾಗ-1 ರಲ್ಲಿದ್ದ ‘ನಮ್ಮ ಕರ್ನಾಟಕ’ ಪಾಠಕ್ಕೇ ಕತ್ತರಿ ಆಡಿಸಿದ್ದು, ಕರ್ನಾಟಕ ಎನ್ನುವ ಪರಿಕಲ್ಪನೆಗೆ ಧಕ್ಕೆ ತರುವ ರೀತಿಯಲ್ಲಿ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ನಮ್ಮ ಕರ್ನಾಟಕ ಪಠ್ಯದಲ್ಲಿ ಕರ್ನಾಟಕದ ಸಮಸ್ತ 28 ಜಿಲ್ಲೆಗಳ ಬಗ್ಗೆ ಸಂಪೂರ್ಣ ಚಿತ್ರ ಸಹಿತ ಮಾಹಿತಿ ನೀಡಿತ್ತು. ಜಿಲ್ಲೆಗಳು ಯಾವ ಸಂದರ್ಭದಲ್ಲಿ ರಚನೆಯಾದವು? ಪ್ರತಿ ಜಿಲ್ಲೆಗಳ ಸಾಂಸ್ಕೃತಿಕ ಕೊಡುಗೆಯೇನು ಎಂಬುದನ್ನು ಸವಿವರವಾಗಿ ಉಲ್ಲೇಖಿಸಲಾಗಿತ್ತು. ಪ್ರತಿ ಜಿಲ್ಲೆಗಳ ಸಾಧಕರನ್ನು ಚಿತ್ರ ಸಮೇತ ಪರಿಚಯಿಸಲಾಗಿತ್ತು. ಅದನ್ನು ಓದಿದ ಮಕ್ಕಳಿಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಅನಿಸುತ್ತಿತ್ತು. ನಾಡಿನ ಬಗೆಗಿನ ಪ್ರೀತಿ, ಗೌರವ ಹಿಮ್ಮಡಿಯಾಗುತ್ತಿತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಆ ಪಠ್ಯಕ್ಕೆ ಕತ್ತರಿ ಹಾಕಿಬಿಟ್ಟಿದೆ.

ಪಠ್ಯದಲ್ಲಿ ಉಲ್ಲೇಖಿಸಲಾಗಿದ್ದ ಜಿಲ್ಲೆಗಳ ಮಹತ್ವವನ್ನು ಕಿತ್ತು ಹಾಕಲಾಗಿದೆ. ಬದಲಿಗೆ ನಾಲ್ಕು ವಲಯಗಳಾಗಿ ಮಾತ್ರ ವಿಂಗಡಿಸಿ ಅಲ್ಪಸ್ವಲ್ಪ ಮಾಹಿತಿ ಮಾತ್ರ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಮಂಡ್ಯ ಜಿಲ್ಲೆಯ ಅಸ್ಮಿತೆ ಟಿಪ್ಪು ಸುಲ್ತಾನ್, ಹಾಸನ ಜಿಲ್ಲೆಯಲ್ಲಿ ಹುಟ್ಟಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಎಚ್.ಡಿ ದೇವೇಗೌಡರವರ ಭಾವಚಿತ್ರ ಸೇರಿದಂತೆ ಅಪರೂಪದ, ಮಹತ್ವದ ಭಾವಚಿತ್ರಗಳನ್ನು ಪಠ್ಯದಿಂದ ಕಿತ್ತು ಹಾಕಲಾಗಿದೆ. ಅದರ ವಿವರ ಇಲ್ಲಿದೆ.

ಹಳೆಯ ಪಠ್ಯಪುಸ್ತಕದಲ್ಲಿದ್ದ ವಿವರಗಳು

ನೂತನ ಪಠ್ಯದಲ್ಲಿ ಕೈಬಿಡಲಾಗಿರುವ ಮಾಹಿತಿಗಳು ಮತ್ತು ಭಾವಚಿತ್ರಗಳು

ಬೆಂಗಳೂರು ನಗರ: ಜಿಲ್ಲೆಯ ವಿಧಾನಸೌಧ, ಟಿಪ್ಪು ಅರಮನೆ, ಸೆಂಟ್ ಮೆರೀಸ್ ಚರ್ಚ್, ಜಾಮೀಯ ಮಸೀದಿ ಮಾಹಿತಿ ಮತ್ತು ಫೋಟೊಗಳನ್ನು ಕೈಬಿಡಲಾಗಿದೆ.

ರಾಮನಗರ: ಜಿಲ್ಲೆಯ ಚನ್ನಪಟ್ಟಣ ಗೊಂಬೆಗಳು.

ಚಿಕ್ಕಬಳ್ಳಾಪುರ: ಜಿಲ್ಲೆಯ ಕೈವಾರ ತಾತಯ್ಯ, ಕೈವಾರ ದೇವಾಲಯ, ವಿಧುರಾಶ್ವತ್ಥ ವೀರಸೌಧ, ನಂದಿದುರ್ಗ.

ಕೋಲಾರ: ಜಿಲ್ಲೆಯ ಅಂತರಗಂಗೆ, ಹೈದರಾಲಿ ದರ್ಗಾ.

ತುಮಕೂರು: ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟ, ದೇವರಾಯನ ದುರ್ಗ.

ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ಬೆಟ್ಟ, ಮದಕರಿ‌ ನಾಯಕ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ದಾವಣಗೆರೆ: ಜಿಲ್ಲೆಯ ಶಾಂತಿಸಾಗರ ಕೆರೆ.

ಶಿವಮೊಗ್ಗ: ಜಿಲ್ಲೆಯ ಜೋಗ್ ಜಲಪಾತ, ಕುಪ್ಪಳ್ಳಿ ಕುವೆಂಪು ಮನೆ.

ಮೈಸೂರು: ಜಿಲ್ಲೆಯ ಸಂತ ಫಿಲೊಮಿನ ಚರ್ಚ್, ಜಗನ್ ಮೋಹನ ಪ್ಯಾಲೇಸ್, ಚಾಮುಂಡಿಬೆಟ್ಟ, ಬೈಲಕುಪ್ಪೆ ಬುದ್ಧವಿಹಾರ.

ಚಾಮರಾಜನಗರ: ಜಿಲ್ಲೆಯ ಮಲೈ ಮಹದೇಶ್ವರ ದೇವಾಲಯ, ಬಂಡೀಪುರ.

ಹಾಸನ: ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ, ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡರು.

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾಂಬಾ ದೇವಾಲಯ, ಬಾಬಾಬುಡನ್ ಗಿರಿ ದರ್ಗಾ, ಸೇಂಟ್ ಆಂಡ್ರೂಸ್ ಚರ್ಚ್.

ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ ದೇವಾಲಯ, ದರಿಯಾ ದೌಲತ್ ಬಾಗ್.

ಕೊಡಗು: ಜಿಲ್ಲೆಯ ವಿರಾಜಪೇಟೆ ಚರ್ಚ್, ತಲಕಾವೇರಿ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ದಕ್ಷಿಣ ಕನ್ನಡ: ಜಿಲ್ಲೆಯ ಮೂಡಬಿದಿರೆ ಸಾವಿರ ಕಂಬಗಳ ಬಸದಿ, ಧರ್ಮಸ್ಥಳ ಮಂಜುನಾಥ ದೇವಾಲಯ, ಉಲ್ಲಾಳ ಜುಮ್ಮಾ ಮಸೀದಿ, ಸಂತ ಅಲೋಸಿಯಸ್ ಚರ್ಚ್.

ಉಡುಪಿ‌: ಜಿಲ್ಲೆಯ ಶ್ರೀಕೃಷ್ಣ ದೇವಾಲಯ, ಕಾರ್ಕಳದ ಗೊಮ್ಮಟ, ಸೇಂಟ್ ಲಾರೆನ್ಸ್ ಚರ್ಚ್, ಮಂಗಳೂರು ಬಂದರು.

ಕಲಬುರಗಿ: ಜಿಲ್ಲೆಯ ಖ್ವಾಜಾ ಬಂದೇ ನವಾಜ್

ಬೀದರ್: ಜಿಲ್ಲೆಯ ಬಿದರಿ ಕಲೆ, ಗುರುದ್ವಾರ, ಬೀದರ್ ಕೋಟೆ.

ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಮಸ್ಕಿ ಅಶೋಕ ಶಿಲಾಶಾಸನ.

ಕೊಪ್ಪಳ: ಜಿಲ್ಲೆಯ ಇಟಗಿ ಮಹಾದೇವ ದೇವಾಲಯ.

ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ‌ ಕಾರ್ಖಾನೆ.

ವಿಜಯನಗರ: ಜಿಲ್ಲೆಯ ಹಂಪಿ, ಕನ್ನಡ ವಿಶ್ವವಿದ್ಯಾಲಯ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ಹಾವೇರಿ: ಜಿಲ್ಲೆಯ ಕನಕದಾಸ, ಸರ್ವಜ್ಞ ಕವಿ.

ಗದಗ: ಜಿಲ್ಲೆಯ ಕುಮಾರವ್ಯಾಸ, ವೀರನಾರಾಯಣ ಗುಡಿ.

ವಿಜಯಪುರ: ಜಿಲ್ಲೆಯ ಗೋಳಗುಮ್ಮಟ, ಕೂಡಲಸಂಗಮ ಐಕ್ಯ ಮಂಟಪ.

ಬಾಗಲಕೋಟೆ: ಜಿಲ್ಲೆಯ ಅಬೂಬಕರ್ ದರ್ಗಾ, ಐಹೊಳೆ ದೇವಾಲಯ.

ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆ.

ಉತ್ತರ ಕನ್ನಡ: ಜಿಲ್ಲೆಯ ಕೈಗಾ ವಿದ್ಯುತ್ ಕೇಂದ್ರ, ಸೀಬರ್ಡ್ ನೌಕಾನೆಲೆ.

ಇದಿಷ್ಟೇ ಅಲ್ಲದೆ ಹಿಂದಿನ ಪಠ್ಯದಲ್ಲಿ ಪ್ರತಿ‌ ಜಿಲ್ಲೆಯ ಪ್ರಸಿದ್ಧ ದೇಗುಲ, ಚರ್ಚ್, ಬಸದಿ, ಮಸೀದಿ, ವಿಹಾರ, ಗುರುದ್ವಾರಗಳ ಬಗ್ಗೆ ಪರಿಚಯವಿತ್ತು. ಪ್ರತಿ ಜಿಲ್ಲೆ ಸ್ಥಾಪನೆಗೊಂಡ ವರ್ಷವಿತ್ತು. ಪ್ರತಿ ಜಿಲ್ಲೆಯ ಪ್ರಸಿದ್ಧ ಆಚರಣೆಗಳಿದ್ದವು. ನದಿಗಳ ಹೆಸರಿತ್ತು, ಅಣೆಕಟ್ಟೆಗಳಿತ್ತು, ಸಾಹಿತಿಗಳ ಹೆಸರಿತ್ತು, ಕಾಡುಗಳ ಹೆಸರಿತ್ತು, ಬೆಳೆಯುವ ಬೆಳೆ, ತಿನ್ನುವ ಆಹಾರ, ಆಳಿದ ರಾಜಮನೆತನ ಇತ್ಯಾದಿ ಇತ್ಯಾದಿಗಳಿತ್ತು. ಇಡೀ ಕರ್ನಾಟಕದ ಚಿತ್ರಣವೇ ಕಣ್ಣ ಮುಂದೆ ಬರುವಂತಿತ್ತು. ಅದೆಲ್ಲವನ್ನು ನೂತನ ಸಮಿತಿ ಕಿತ್ತು ಹಾಕಿದೆ.

ಈ ‘ನಮ್ಮ ಕರ್ನಾಟಕ’ ಪಾಠದ ಜಿಲ್ಲೆಗಳ ವಿಶಿಷ್ಟತೆ ತಿಳಿಸುವ ಈ ಭಾಗಗಳನ್ನು ಏಕೆ ತೆಗೆದು ಹಾಕಲಾಗಿದೆ? ನಮ್ಮ ಜಿಲ್ಲೆಗಳಿಂದ ರಾಜ್ಯ, ರಾಜ್ಯದಿಂದ ದೇಶ ಅಲ್ಲವೇ? ಬರೀ ದೇಶದ ಮಾಹಿತಿ ಇದ್ದು ರಾಜ್ಯಗಳ, ಜಿಲ್ಲೆಗಳ ಮಾಹಿತಿಯನ್ನು ನಮ್ಮ ಮಕ್ಕಳು ತಿಳಿಯಬಾರದೆ? ಇದು ಪ್ರಾದೇಶಿಕ ವಾದವನ್ನು ಕಿತ್ತುಹಾಕಿ ಒಂದು ದೇಶ- ಒಂದು ಸಂಸ್ಕೃತಿ ಎಂಬ ಸಿದ್ದಾಂತ ಹೇರಲು ನಡೆಸುತ್ತಿರುವ ಯತ್ನವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಮಕ್ಕಳ ಎದೆಗೆ ಬೀಳುವ ಅಕ್ಷರ ತಮ್ಮ ಸಹಜೀವಿಗಳ ಬಗೆಗೆ ಅಂತಃಕರಣ ಹಾಗೂ ಪ್ರೀತಿಯನ್ನಷ್ಟೇ ಕಲಿಸುವಂತಾಗಬೇಕು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. India is becoming one more Talibhan type style working.
    Present trend and events happening in our state . It is the sign of Talibhan type of culture.
    For this solution is counter action like Indipendentce movement i.e non cooperation movement to start from public against the Govt.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...