Homeಥೂತ್ತೇರಿಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮಿಗಳು ಭಕ್ತರನ್ನು ಮೀರಿಸಿ ಮೋದಿಯವರನ್ನ ಹಿಗ್ಗಾಮುಗ್ಗ ಹೊಗಳಿದ ಒಂದು ಸಾಲನ್ನು ತೆಗೆದು ನಾವು ಟಿಕೀಸಿದ್ದಕ್ಕೆ ಸಿದ್ದೇಶ್ವರ ಸ್ವಾಮಿ ಮಠೋಪಜೀವಿಗಳು ನಮ್ಮನ್ನ ಹಂದಿಗೆ ಹೋಲಿಸಿವೆ. ಇದು ನಮಗೆ ಅವಮಾನಕರವಲ್ಲ, ಯಾಕೆಂದರೆ ಪರಮಾತ್ಮನೆ ಒಮ್ಮೆ ವರಾಹ ಅವತಾರವೆತ್ತಿದ್ದ ಎನ್ನುತ್ತಾರಲ್ಲಾ. ಅಂತಹ ಮಹಾತ್ಮನಿಗೆ ಹೋಲಿಸಿದ್ದು ಸರಿ. ಯಾಕೆಂದರೆ ಹಂದಿಯಿದ್ದರೆ ಕೇರಿ ಚಂದ ಎಂದು ಹಳ್ಳಿಯ ಕಡೆ ಗಾದೆಯಿದೆ. ಕೇರಿ ಸ್ವಚ್ಛ ಮಾಡಲು ಬಂದ ಹಂದಿಯನ್ನ ನೋಡಿ ನಾಯಿಗಳು ಬೊಗಳುತ್ತವೆ, ಅದರಲ್ಲೂ ಮಠೋಪ ಜೀವಿ ಶ್ವಾನಗಳು ದೊಡ್ಡ ಗಂಟಲಲ್ಲಿ ಬೊಗಳುತ್ತವೆ. ಏಕೆಂದರೆ ತಮ್ಮ ದನಿ ಮಠದ ಮಾಲೀಕರಿಗೆ ತಿಳಿಯಬೇಕೆಂಬುದೇ ಅವುಗಳ ಇಂಗಿತವಾಗಿರುತ್ತದೆ. ನಾವು ಕೂಡ ಸಿದ್ದೇಶ್ವರ ಸ್ವಾಮಿಗ: ಅಭಿಮಾನಿಗಳೆ. ಆದರೆ,
ಈಗ ಅಭಿಮಾನಕ್ಕೆ ಕುಂದುಂಟಾಗಿದೆ, ಯಾಕೆಂದರೆ ಸಿದ್ದೇಶ್ವರ ಶ್ರೀಗಳು ಮೋದಿ ಹೊಗಳುವುದರಲ್ಲಿ ಚಕ್ರವರ್ತಿ ಸೂಲಿಬೆಲೆ ಸೈಡ್ ಹೊಡೆದಿದ್ದಾರೆ. ನಮ್ಮ ಮಾತಂತಿರಲಿ. ಕರ್ನಾಟಕದ ಸಾವಿರಾರು ಸ್ವಾಮಿಗಳು ಸಿದ್ದೇಶ್ವರ ಸ್ವಾಮಿ ಮಾತಿಗೆ ದಂಗುಬಡಿದುಹೋಗಿದ್ದಾರೆ. ಏಕೆಂದರೆ ಅವರಾಡಿರುವ ಮಾತು ಹಾಗಿವೆ, “ಮೋದಿ ಅತ್ಯಂತ ಜನಪ್ರಿಯ ಪ್ರಧಾನಿ. ಅವರನ್ನು ನೋಡುವುದೇ ನಮ್ಮ ಸೌಭಾಗ್ಯ. ಅವರು ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿದೆಯೊ ಅಷ್ಟೇ ಸಂತೋಷ ನಮಗೂ ಆಗಿದೆ. ಇಂತಹ ಬಲ್ಲ ಪ್ರಧಾನಿ ನಮ್ಮ ದೇಶಕ್ಕೆ ದೊರೆತದ್ದು ನಮ್ಮ ಸುದೈವ, ದಿನದ ಎಲ್ಲ ತಾಸುಗಳನ್ನು ಜನರ ಚಿಂತನೆಗೆ ಬಳಸಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಈ ನಮ್ಮ ಪ್ರಧಾನಿಯನ್ನ ಜಗತ್ತೇ ಪ್ರೀತಿಸುತ್ತಿದೆ” ಎಂದರಲ್ಲದೆ, “ಅವರು ಜೇಬನ್ನು ತುಂಬಿಸುವ ಬಗ್ಗೆ ಯೋಚಿಸದೆ ಜನರ ಹೃದಯವನ್ನು ತುಂಬಿದ್ದಾರೆ” ಎಂಬ ಭಾಷಣ ದೇಶದಲ್ಲೇ ದಾಖಲಾಗಿದೆಯಂತಲ್ಲಾ, ಥೂತ್ತೇರಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ ಪ್ರಧಾನಿಯ ಜುಬ್ಬಕ್ಕೆ ಜೇಬುಗಳಿದ್ದರೂ ಅವು ಖಾಲಿ ಇರಬಹುದು, ಆದರೆ ಅವರನ್ನು ಪ್ರಧಾನಿ ಮಾಡಿದವರ ಜೇಬು ತುಂಬಿತುಳುಕುತ್ತಿರುವುದು ದಿವ್ಯದೃಷ್ಟಿಯ ಸಿದ್ದೇಶ್ವರರಿಗೆ ಅರಿವಾಗಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ಯಾರವಾನ್ ಪತ್ರಿಕೆ ಮೂವತ್ತು ಪುಟದಲ್ಲಿ ರಫೇಲ್ ಹಗರಣ ಬರೆದ ಲೇಖನವನ್ನು ಸಿದ್ದೇಶ್ವರರು ಓದಬೇಕಿತ್ತು. ಓದದಿರುವುದು ಅಪರಾಧವಲ್ಲ, ಏಕೆಂದರೆ ಎಲ್ಲಾ ಪತ್ರಿಕೆಯನ್ನು ಓದಲಾಗುವುದಿಲ್ಲ. ಜೊತೆಗೆ ಬಿಜೆಪಿಗಳನ್ನ ಹೊಗಳುವ ಬಿಜೆಪಿ ಪತ್ರಿಕೆಗಳನ್ನ ಓದಿದರೆ ಏನೂ ಸಿಗುವುದಿಲ್ಲ. ಆದರೆ ಸಿದ್ದೇಶ್ವರ ಶ್ರೀಗಳು ನಿಂತು ಮಾತನಾಡುತ್ತಿದ್ದ ಜಾಗ ನಲವತ್ತು ಪರಸೆಂಟಿನ ಜಾಗ. ಮೋದಿಯವರದ್ದೇ ಸರಕಾರ ಕರ್ನಾಟಕದಲ್ಲಿದ್ದು ಅದು ಸಿದ್ದರಾಮಯ್ಯನ ಸರಕಾರದ ಕಾಲದಲ್ಲಿದ್ದ ಹತ್ತು ಪರಸೆಂಟು ಕಮಿಷನ್ನನ್ನು ನಲವತ್ತು ಪರಸೆಂಟಿಗೆ ತಲುಪಿ, ಅದನ್ನ ಕೊಡಲಾಗದವನೊಬ್ಬ ಆತ್ಮಹತ್ಯೆಗೆ ಶರಣಾಗಿ, ಬಿಜೆಪಿಯ ದೊಡ್ಡಗಂಟಲ ರಾಜಕಾರಣಿಯೊಬ್ಬ ರಾಜಿನಾಮೆ ನೀಡಿದ್ದು ಪ್ರಧಾನಿಗಾಗಲಿ ಸಿದ್ದೇಶ್ವರರಿಗಾಗಲಿ ಗೊತ್ತಿಲ್ಲದ ಸಂಗತಿಗಳಲ್ಲ. ಸದಾ ಮಠದೂಳಗಿದ್ದು ಮುಂದಿನ ಸಭೆಗೆ ಮನಮುಟ್ಟುವಂತಹ ಭಾಷಣ ತಯಾರಿಸಿಕೊಂಡು ಹೋಗಿ ಜನರನ್ನ ಮರುಳ ಮಾಡುವ ಸಿದ್ದೇಶ್ವರರು ಈ ದೇಶವನ್ನಾಳುವತ್ತಿರುವ ಮೋದಿಯವರ ಆಡಳಿತ ವೈಖರಿಯನ್ನ ಗಮನಿಸಿ ಮಾತನಾಡಬೇಕಿತ್ತು. ಈಗ ಎಲ್ಲರಿಗೂ ತಿಳಿದಿರುವ ಸಂಗತಿಯ ಪ್ರಕಾರ ಬಸವಣ್ಣ ವೈದಿಕ ಧರ್ಮದ ಕಂದಾಚಾರದ ಶೋಷಣೆಯಿಂದ ಸಿಡಿದು ಬಂದು ವಚನ ದೀವಿಗೆ ಕೊಟ್ಟವರು. ಆ ವಚನ ಸಂಪ್ರದಾಯ ಬಂಡಾಯದಿಂದ ಕೂಡಿವೆ. ಆದರೆ ಸಿದ್ದೇಶ್ವರರು ಎಂದೂ ಬಂಡಾಯದ ಮಾತನಾಡಿದವರಲ್ಲ. ಯಥಾಸ್ಥಿತಿಯ ಅನಾವರಣ ಮಾಡಿ ಅನಂದಪಟ್ಟವರು. ಆದ್ದರಿಂದ ಅವರ ಮೋದಿಯ ಅಂಧಾಭಿಮಾನದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬೇಡಿರೆಂದು ಸಾಧಾರಣ ಸ್ವಾಮಿಗಳ ಸೂಚನೆಯಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ಜೈ ಸಿದ್ದೇಶ್ವರ ಸ್ವಾಮಿ

ಕರ್ನಾಟಕದಲ್ಲಿ ಮುಂಗಾರಿನ ದೆಸೆಯಿಂದ ಅತಿವೃಷ್ಟಿ ಸಂಭವಿಸಿದೆ. ಸಮುದ್ರ ಕಡಲನ್ನ ಕೊರೆಯುತ್ತಿದೆ. ಒಮ್ಮೆ ಸಮುದ್ರಕ್ಕೆ ಜಾರಿದ ಮಣ್ಣು ಮರಳಿ ಬರಲಾರದು. ಮಳೆಯಿಂದ ಸಂತ್ರಸ್ತರಾದವರು ಮಳೆ ದೂರುತ್ತಾರೆಯೇ ಹೊರತು ನಮಗ್ಯಾರಾದರೂ ಇದ್ದಾರೆ ಎಂದು ಭಾವಿಸುವುದಿಲ್ಲ. ಇಂತಹ ಭಾವನೆ ಬರಬೇಕಾದರೆ ಆಳುವ ಸರಕಾರ ಸತ್ತು ಹೋಗಿರಬಹುದು. ಸರಕಾರವನ್ನು ಎಚ್ಚರಿಸಿ ಸಂತ್ರಸ್ತರಿಗೆ ಸಹಾಯ ಮಾಡಬಹುದಾದ ನಮ್ಮ ದೃಶ್ಯಮಾಧ್ಯಮಗಳು ಹೆಗಲ ಮೇಲೆ ಕ್ಯಾಮರಾ ಹೊತ್ತು ಪವಿತ್ರ ಲೋಕೇಶ್ ಮತ್ತು ನರೇಶ್ ಯಾವ ಲಾಡ್ಜಿನಲ್ಲಿದ್ದಾರೆ ಎಂದು ಹುಡುಕತೊಡಗಿದರಂತಲ್ಲಾ. ಕಡೆಗೂ ಪವಿತ್ರ ಮತ್ತು ನರೇಶ್ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇದ್ದದ್ದನ್ನ ಏನೋ ಬಹಳ ವೀಶೆಷವೆಂಬಂತೆ ಇಡೀ ಭಾನುವಾರ ಪ್ರಸಾರ ಮಾಡಿದರಂತಲ್ಲಾ. ಈ ಪೈಕಿ ಪವರ್ ಟಿವಿಯ ಸಂಸ್ಥಾಪಕನೇ ಬಂದು ಕುಳಿತುಕೊಂಡು ಚರ್ಚಿಸಿದ ಕಾರ್ಯಕ್ರಮ ಬಿತ್ತರಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದು ನೋಡಿದರೆ, ಇವರು ತಲುಪಿರುವ ಗಟಾರ ಇನ್ನೆಂತಹದ್ದಿರಬಹುದೆಂದು ನೋಡುಗರೇ ಅಚ್ಚರಿ ಪಡತೊಡಗಿದ್ದಾರಂತಲ್ಲ. ಮೀಡಿಯಾದವರ ಹೊಟ್ಟೆ ತುಂಬಿಸುವ ಕನ್ನಡದ ಜನ ಸುಮ್ಮನಿದ್ದರೆ ಈ ಮೀಡಿಯಾದವರು ಪ್ರತಿಯೊಬ್ಬರ ಖಾಸಗಿ ಕೋಣೆಗೆ ಕ್ಯಾಮರ ಹೊತ್ತು ಬರುವ ದಿನ ದೂರವಿಲ್ಲವಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನುರಿತ ರಾಜಕಾರಣಿ ರಾಜಣ್ಣ ದೇವೇಗೌಡರ ವಿಷಯದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ರಂಜನೆಯೊದಗಿಸಲು ಮಾತನಾಡಿದರೆ ಕಾರ್ಯಕರ್ತರಿಗಿಂತಲೂ, ವಾರಸುದಾರರಿಗೆ ನೋವಾಗುತ್ತದೆ. ಮಾನ್ಯ ದೇವೇಗೌಡರು ಸೊಪ್ಪು ಸಾರು ಮುದ್ದೆ ಅವಲಂಬಿಸಿ ನಿರೋಗಿಗಳಾಗಿ ನೂರರ ಗಡಿಯಕಡೆ ಹೊರಟಿದ್ದಾರೆ. ಇದು ಹೆಮ್ಮೆಯ ಸಂಗತಿ ಇಂತಿರುವಾಗ ದೇವೇಗೌಡರೀಗ ಇಬ್ಬರನ್ನು ಆಶ್ರಯಿಸಿ ನಡೆಯುತ್ತಾರೆ, ಮುಂದೆ ನಾಲ್ಕು ಜನ ಬೇಕಾಗಬಹುದು ಎಂಬುದು ಅನಾಗರಿಕ ಮಾತೆಂದು ಕಾಂಗೈನವರೇ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ದೇವೇಗೌಡರ ಮಗ ಮತ್ತು ಮೊಮ್ಮಗನ ಪ್ರತಿಕ್ರಿಯೆ ಕುತೂಹಲಕಾರಿ. ರಾಜಣ್ಣನ ಮಾತು ಸಿದ್ದರಾಮಯ್ಯನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರೆ, ಪ್ರಜ್ವಲ ರೇವಣ್ಣ ಆ ರಾಜಣ್ಣನಿಗೆ ಜನರೆ ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದುಬಿಟ್ಟಿದ್ದಾರಲ್ಲಾ. ಹೀಗೆ ಪ್ರತಿಕ್ರಿಯಿಸುವ ಮುನ್ನ ದೇವೇಗೌಡರು ಟೀಕಿಸಿದ ಎದುರಾಳಿಗಳಿಗೆ ಹೇಗೆ ಉತ್ತರ ಕೊಡುತ್ತಿದ್ದರು ಎಂಬುದನ್ನು ಮಗ ಮೊಮ್ಮಗ ಗ್ರಹಿಸಬೇಕಿತ್ತು. ಹಿಂದೊಮ್ಮೆ ಪಟೇಲರು ಮತ್ತು ಹೆಗಡೆ ಹಾಸನದಲ್ಲಿ ಸಭೆ ಮಾಡುತ್ತಿದ್ದಾಗ ಕಲ್ಲು ಬೀರಿ ಓಡಿಸಲಾಯ್ತು. ಸಿಟ್ಟುಗೊಂಡ ಪಟೇಲರು “ಈ ದೇವೆಗೌಡ ದಾವಣಗೆರೆಗೆ ಬರ್ಲಿ, ಕಾಲು ಮುರಿದು ಕಳುಸ್ತಿನಿ” ಅಂದರು.

ಅದಕ್ಕೆ ದೇವೇಗೌಡರು “ಪಟೇಲರು ನನ್ನ ಗೆಳೆಯರು, ನನ್ನ ಕಾಲು ಮುರಿದಾಗ ಅವರು ಸುಮ್ಮನಿದ್ದಾರೆಯೇ, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ” ಎಂದರು. ಅಲ್ಲಿಗೆ ಎಲ್ಲವೂ ಶಮನವಾಯ್ತು. ಹಾಗೆ ನೋಡಿದರೆ ಸೇಡಿನ ಮಾತುಗಳು, ಹಲ್ಲೆ ಮಾತುಗಳು ಈ ಬಿಜೆಪಿಗಳು ಉದ್ಭವಿಸಿದ ಮೇಲೆ ಜಾಸ್ತಿಯಾದವಂತಲ್ಲಾ. ಇದರ ಉದ್ಘಾಟಕರು ಈಶ್ವರಪ್ಪನಾದರೆ ಮುಂದುವರೆಸಿಕೊಂಡು ಹೋಗುತ್ತಿರುವವರ ಪೈಕಿ ಸಿ.ಟಿ ರವಿ, ಪ್ರತಾಪ ಸಿಮ್ಮ, ರೇಣುಕಾಚಾರಿ ಇನ್ನ ಮುಂತಾದವುಗಳಿವೆಯಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...