Homeಥೂತ್ತೇರಿಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮಿಗಳು ಭಕ್ತರನ್ನು ಮೀರಿಸಿ ಮೋದಿಯವರನ್ನ ಹಿಗ್ಗಾಮುಗ್ಗ ಹೊಗಳಿದ ಒಂದು ಸಾಲನ್ನು ತೆಗೆದು ನಾವು ಟಿಕೀಸಿದ್ದಕ್ಕೆ ಸಿದ್ದೇಶ್ವರ ಸ್ವಾಮಿ ಮಠೋಪಜೀವಿಗಳು ನಮ್ಮನ್ನ ಹಂದಿಗೆ ಹೋಲಿಸಿವೆ. ಇದು ನಮಗೆ ಅವಮಾನಕರವಲ್ಲ, ಯಾಕೆಂದರೆ ಪರಮಾತ್ಮನೆ ಒಮ್ಮೆ ವರಾಹ ಅವತಾರವೆತ್ತಿದ್ದ ಎನ್ನುತ್ತಾರಲ್ಲಾ. ಅಂತಹ ಮಹಾತ್ಮನಿಗೆ ಹೋಲಿಸಿದ್ದು ಸರಿ. ಯಾಕೆಂದರೆ ಹಂದಿಯಿದ್ದರೆ ಕೇರಿ ಚಂದ ಎಂದು ಹಳ್ಳಿಯ ಕಡೆ ಗಾದೆಯಿದೆ. ಕೇರಿ ಸ್ವಚ್ಛ ಮಾಡಲು ಬಂದ ಹಂದಿಯನ್ನ ನೋಡಿ ನಾಯಿಗಳು ಬೊಗಳುತ್ತವೆ, ಅದರಲ್ಲೂ ಮಠೋಪ ಜೀವಿ ಶ್ವಾನಗಳು ದೊಡ್ಡ ಗಂಟಲಲ್ಲಿ ಬೊಗಳುತ್ತವೆ. ಏಕೆಂದರೆ ತಮ್ಮ ದನಿ ಮಠದ ಮಾಲೀಕರಿಗೆ ತಿಳಿಯಬೇಕೆಂಬುದೇ ಅವುಗಳ ಇಂಗಿತವಾಗಿರುತ್ತದೆ. ನಾವು ಕೂಡ ಸಿದ್ದೇಶ್ವರ ಸ್ವಾಮಿಗ: ಅಭಿಮಾನಿಗಳೆ. ಆದರೆ,
ಈಗ ಅಭಿಮಾನಕ್ಕೆ ಕುಂದುಂಟಾಗಿದೆ, ಯಾಕೆಂದರೆ ಸಿದ್ದೇಶ್ವರ ಶ್ರೀಗಳು ಮೋದಿ ಹೊಗಳುವುದರಲ್ಲಿ ಚಕ್ರವರ್ತಿ ಸೂಲಿಬೆಲೆ ಸೈಡ್ ಹೊಡೆದಿದ್ದಾರೆ. ನಮ್ಮ ಮಾತಂತಿರಲಿ. ಕರ್ನಾಟಕದ ಸಾವಿರಾರು ಸ್ವಾಮಿಗಳು ಸಿದ್ದೇಶ್ವರ ಸ್ವಾಮಿ ಮಾತಿಗೆ ದಂಗುಬಡಿದುಹೋಗಿದ್ದಾರೆ. ಏಕೆಂದರೆ ಅವರಾಡಿರುವ ಮಾತು ಹಾಗಿವೆ, “ಮೋದಿ ಅತ್ಯಂತ ಜನಪ್ರಿಯ ಪ್ರಧಾನಿ. ಅವರನ್ನು ನೋಡುವುದೇ ನಮ್ಮ ಸೌಭಾಗ್ಯ. ಅವರು ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿದೆಯೊ ಅಷ್ಟೇ ಸಂತೋಷ ನಮಗೂ ಆಗಿದೆ. ಇಂತಹ ಬಲ್ಲ ಪ್ರಧಾನಿ ನಮ್ಮ ದೇಶಕ್ಕೆ ದೊರೆತದ್ದು ನಮ್ಮ ಸುದೈವ, ದಿನದ ಎಲ್ಲ ತಾಸುಗಳನ್ನು ಜನರ ಚಿಂತನೆಗೆ ಬಳಸಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಈ ನಮ್ಮ ಪ್ರಧಾನಿಯನ್ನ ಜಗತ್ತೇ ಪ್ರೀತಿಸುತ್ತಿದೆ” ಎಂದರಲ್ಲದೆ, “ಅವರು ಜೇಬನ್ನು ತುಂಬಿಸುವ ಬಗ್ಗೆ ಯೋಚಿಸದೆ ಜನರ ಹೃದಯವನ್ನು ತುಂಬಿದ್ದಾರೆ” ಎಂಬ ಭಾಷಣ ದೇಶದಲ್ಲೇ ದಾಖಲಾಗಿದೆಯಂತಲ್ಲಾ, ಥೂತ್ತೇರಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ ಪ್ರಧಾನಿಯ ಜುಬ್ಬಕ್ಕೆ ಜೇಬುಗಳಿದ್ದರೂ ಅವು ಖಾಲಿ ಇರಬಹುದು, ಆದರೆ ಅವರನ್ನು ಪ್ರಧಾನಿ ಮಾಡಿದವರ ಜೇಬು ತುಂಬಿತುಳುಕುತ್ತಿರುವುದು ದಿವ್ಯದೃಷ್ಟಿಯ ಸಿದ್ದೇಶ್ವರರಿಗೆ ಅರಿವಾಗಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ಯಾರವಾನ್ ಪತ್ರಿಕೆ ಮೂವತ್ತು ಪುಟದಲ್ಲಿ ರಫೇಲ್ ಹಗರಣ ಬರೆದ ಲೇಖನವನ್ನು ಸಿದ್ದೇಶ್ವರರು ಓದಬೇಕಿತ್ತು. ಓದದಿರುವುದು ಅಪರಾಧವಲ್ಲ, ಏಕೆಂದರೆ ಎಲ್ಲಾ ಪತ್ರಿಕೆಯನ್ನು ಓದಲಾಗುವುದಿಲ್ಲ. ಜೊತೆಗೆ ಬಿಜೆಪಿಗಳನ್ನ ಹೊಗಳುವ ಬಿಜೆಪಿ ಪತ್ರಿಕೆಗಳನ್ನ ಓದಿದರೆ ಏನೂ ಸಿಗುವುದಿಲ್ಲ. ಆದರೆ ಸಿದ್ದೇಶ್ವರ ಶ್ರೀಗಳು ನಿಂತು ಮಾತನಾಡುತ್ತಿದ್ದ ಜಾಗ ನಲವತ್ತು ಪರಸೆಂಟಿನ ಜಾಗ. ಮೋದಿಯವರದ್ದೇ ಸರಕಾರ ಕರ್ನಾಟಕದಲ್ಲಿದ್ದು ಅದು ಸಿದ್ದರಾಮಯ್ಯನ ಸರಕಾರದ ಕಾಲದಲ್ಲಿದ್ದ ಹತ್ತು ಪರಸೆಂಟು ಕಮಿಷನ್ನನ್ನು ನಲವತ್ತು ಪರಸೆಂಟಿಗೆ ತಲುಪಿ, ಅದನ್ನ ಕೊಡಲಾಗದವನೊಬ್ಬ ಆತ್ಮಹತ್ಯೆಗೆ ಶರಣಾಗಿ, ಬಿಜೆಪಿಯ ದೊಡ್ಡಗಂಟಲ ರಾಜಕಾರಣಿಯೊಬ್ಬ ರಾಜಿನಾಮೆ ನೀಡಿದ್ದು ಪ್ರಧಾನಿಗಾಗಲಿ ಸಿದ್ದೇಶ್ವರರಿಗಾಗಲಿ ಗೊತ್ತಿಲ್ಲದ ಸಂಗತಿಗಳಲ್ಲ. ಸದಾ ಮಠದೂಳಗಿದ್ದು ಮುಂದಿನ ಸಭೆಗೆ ಮನಮುಟ್ಟುವಂತಹ ಭಾಷಣ ತಯಾರಿಸಿಕೊಂಡು ಹೋಗಿ ಜನರನ್ನ ಮರುಳ ಮಾಡುವ ಸಿದ್ದೇಶ್ವರರು ಈ ದೇಶವನ್ನಾಳುವತ್ತಿರುವ ಮೋದಿಯವರ ಆಡಳಿತ ವೈಖರಿಯನ್ನ ಗಮನಿಸಿ ಮಾತನಾಡಬೇಕಿತ್ತು. ಈಗ ಎಲ್ಲರಿಗೂ ತಿಳಿದಿರುವ ಸಂಗತಿಯ ಪ್ರಕಾರ ಬಸವಣ್ಣ ವೈದಿಕ ಧರ್ಮದ ಕಂದಾಚಾರದ ಶೋಷಣೆಯಿಂದ ಸಿಡಿದು ಬಂದು ವಚನ ದೀವಿಗೆ ಕೊಟ್ಟವರು. ಆ ವಚನ ಸಂಪ್ರದಾಯ ಬಂಡಾಯದಿಂದ ಕೂಡಿವೆ. ಆದರೆ ಸಿದ್ದೇಶ್ವರರು ಎಂದೂ ಬಂಡಾಯದ ಮಾತನಾಡಿದವರಲ್ಲ. ಯಥಾಸ್ಥಿತಿಯ ಅನಾವರಣ ಮಾಡಿ ಅನಂದಪಟ್ಟವರು. ಆದ್ದರಿಂದ ಅವರ ಮೋದಿಯ ಅಂಧಾಭಿಮಾನದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬೇಡಿರೆಂದು ಸಾಧಾರಣ ಸ್ವಾಮಿಗಳ ಸೂಚನೆಯಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ಜೈ ಸಿದ್ದೇಶ್ವರ ಸ್ವಾಮಿ

ಕರ್ನಾಟಕದಲ್ಲಿ ಮುಂಗಾರಿನ ದೆಸೆಯಿಂದ ಅತಿವೃಷ್ಟಿ ಸಂಭವಿಸಿದೆ. ಸಮುದ್ರ ಕಡಲನ್ನ ಕೊರೆಯುತ್ತಿದೆ. ಒಮ್ಮೆ ಸಮುದ್ರಕ್ಕೆ ಜಾರಿದ ಮಣ್ಣು ಮರಳಿ ಬರಲಾರದು. ಮಳೆಯಿಂದ ಸಂತ್ರಸ್ತರಾದವರು ಮಳೆ ದೂರುತ್ತಾರೆಯೇ ಹೊರತು ನಮಗ್ಯಾರಾದರೂ ಇದ್ದಾರೆ ಎಂದು ಭಾವಿಸುವುದಿಲ್ಲ. ಇಂತಹ ಭಾವನೆ ಬರಬೇಕಾದರೆ ಆಳುವ ಸರಕಾರ ಸತ್ತು ಹೋಗಿರಬಹುದು. ಸರಕಾರವನ್ನು ಎಚ್ಚರಿಸಿ ಸಂತ್ರಸ್ತರಿಗೆ ಸಹಾಯ ಮಾಡಬಹುದಾದ ನಮ್ಮ ದೃಶ್ಯಮಾಧ್ಯಮಗಳು ಹೆಗಲ ಮೇಲೆ ಕ್ಯಾಮರಾ ಹೊತ್ತು ಪವಿತ್ರ ಲೋಕೇಶ್ ಮತ್ತು ನರೇಶ್ ಯಾವ ಲಾಡ್ಜಿನಲ್ಲಿದ್ದಾರೆ ಎಂದು ಹುಡುಕತೊಡಗಿದರಂತಲ್ಲಾ. ಕಡೆಗೂ ಪವಿತ್ರ ಮತ್ತು ನರೇಶ್ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇದ್ದದ್ದನ್ನ ಏನೋ ಬಹಳ ವೀಶೆಷವೆಂಬಂತೆ ಇಡೀ ಭಾನುವಾರ ಪ್ರಸಾರ ಮಾಡಿದರಂತಲ್ಲಾ. ಈ ಪೈಕಿ ಪವರ್ ಟಿವಿಯ ಸಂಸ್ಥಾಪಕನೇ ಬಂದು ಕುಳಿತುಕೊಂಡು ಚರ್ಚಿಸಿದ ಕಾರ್ಯಕ್ರಮ ಬಿತ್ತರಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದು ನೋಡಿದರೆ, ಇವರು ತಲುಪಿರುವ ಗಟಾರ ಇನ್ನೆಂತಹದ್ದಿರಬಹುದೆಂದು ನೋಡುಗರೇ ಅಚ್ಚರಿ ಪಡತೊಡಗಿದ್ದಾರಂತಲ್ಲ. ಮೀಡಿಯಾದವರ ಹೊಟ್ಟೆ ತುಂಬಿಸುವ ಕನ್ನಡದ ಜನ ಸುಮ್ಮನಿದ್ದರೆ ಈ ಮೀಡಿಯಾದವರು ಪ್ರತಿಯೊಬ್ಬರ ಖಾಸಗಿ ಕೋಣೆಗೆ ಕ್ಯಾಮರ ಹೊತ್ತು ಬರುವ ದಿನ ದೂರವಿಲ್ಲವಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನುರಿತ ರಾಜಕಾರಣಿ ರಾಜಣ್ಣ ದೇವೇಗೌಡರ ವಿಷಯದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ರಂಜನೆಯೊದಗಿಸಲು ಮಾತನಾಡಿದರೆ ಕಾರ್ಯಕರ್ತರಿಗಿಂತಲೂ, ವಾರಸುದಾರರಿಗೆ ನೋವಾಗುತ್ತದೆ. ಮಾನ್ಯ ದೇವೇಗೌಡರು ಸೊಪ್ಪು ಸಾರು ಮುದ್ದೆ ಅವಲಂಬಿಸಿ ನಿರೋಗಿಗಳಾಗಿ ನೂರರ ಗಡಿಯಕಡೆ ಹೊರಟಿದ್ದಾರೆ. ಇದು ಹೆಮ್ಮೆಯ ಸಂಗತಿ ಇಂತಿರುವಾಗ ದೇವೇಗೌಡರೀಗ ಇಬ್ಬರನ್ನು ಆಶ್ರಯಿಸಿ ನಡೆಯುತ್ತಾರೆ, ಮುಂದೆ ನಾಲ್ಕು ಜನ ಬೇಕಾಗಬಹುದು ಎಂಬುದು ಅನಾಗರಿಕ ಮಾತೆಂದು ಕಾಂಗೈನವರೇ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ದೇವೇಗೌಡರ ಮಗ ಮತ್ತು ಮೊಮ್ಮಗನ ಪ್ರತಿಕ್ರಿಯೆ ಕುತೂಹಲಕಾರಿ. ರಾಜಣ್ಣನ ಮಾತು ಸಿದ್ದರಾಮಯ್ಯನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರೆ, ಪ್ರಜ್ವಲ ರೇವಣ್ಣ ಆ ರಾಜಣ್ಣನಿಗೆ ಜನರೆ ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದುಬಿಟ್ಟಿದ್ದಾರಲ್ಲಾ. ಹೀಗೆ ಪ್ರತಿಕ್ರಿಯಿಸುವ ಮುನ್ನ ದೇವೇಗೌಡರು ಟೀಕಿಸಿದ ಎದುರಾಳಿಗಳಿಗೆ ಹೇಗೆ ಉತ್ತರ ಕೊಡುತ್ತಿದ್ದರು ಎಂಬುದನ್ನು ಮಗ ಮೊಮ್ಮಗ ಗ್ರಹಿಸಬೇಕಿತ್ತು. ಹಿಂದೊಮ್ಮೆ ಪಟೇಲರು ಮತ್ತು ಹೆಗಡೆ ಹಾಸನದಲ್ಲಿ ಸಭೆ ಮಾಡುತ್ತಿದ್ದಾಗ ಕಲ್ಲು ಬೀರಿ ಓಡಿಸಲಾಯ್ತು. ಸಿಟ್ಟುಗೊಂಡ ಪಟೇಲರು “ಈ ದೇವೆಗೌಡ ದಾವಣಗೆರೆಗೆ ಬರ್ಲಿ, ಕಾಲು ಮುರಿದು ಕಳುಸ್ತಿನಿ” ಅಂದರು.

ಅದಕ್ಕೆ ದೇವೇಗೌಡರು “ಪಟೇಲರು ನನ್ನ ಗೆಳೆಯರು, ನನ್ನ ಕಾಲು ಮುರಿದಾಗ ಅವರು ಸುಮ್ಮನಿದ್ದಾರೆಯೇ, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ” ಎಂದರು. ಅಲ್ಲಿಗೆ ಎಲ್ಲವೂ ಶಮನವಾಯ್ತು. ಹಾಗೆ ನೋಡಿದರೆ ಸೇಡಿನ ಮಾತುಗಳು, ಹಲ್ಲೆ ಮಾತುಗಳು ಈ ಬಿಜೆಪಿಗಳು ಉದ್ಭವಿಸಿದ ಮೇಲೆ ಜಾಸ್ತಿಯಾದವಂತಲ್ಲಾ. ಇದರ ಉದ್ಘಾಟಕರು ಈಶ್ವರಪ್ಪನಾದರೆ ಮುಂದುವರೆಸಿಕೊಂಡು ಹೋಗುತ್ತಿರುವವರ ಪೈಕಿ ಸಿ.ಟಿ ರವಿ, ಪ್ರತಾಪ ಸಿಮ್ಮ, ರೇಣುಕಾಚಾರಿ ಇನ್ನ ಮುಂತಾದವುಗಳಿವೆಯಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...