Homeಥೂತ್ತೇರಿಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮಿಗಳು ಭಕ್ತರನ್ನು ಮೀರಿಸಿ ಮೋದಿಯವರನ್ನ ಹಿಗ್ಗಾಮುಗ್ಗ ಹೊಗಳಿದ ಒಂದು ಸಾಲನ್ನು ತೆಗೆದು ನಾವು ಟಿಕೀಸಿದ್ದಕ್ಕೆ ಸಿದ್ದೇಶ್ವರ ಸ್ವಾಮಿ ಮಠೋಪಜೀವಿಗಳು ನಮ್ಮನ್ನ ಹಂದಿಗೆ ಹೋಲಿಸಿವೆ. ಇದು ನಮಗೆ ಅವಮಾನಕರವಲ್ಲ, ಯಾಕೆಂದರೆ ಪರಮಾತ್ಮನೆ ಒಮ್ಮೆ ವರಾಹ ಅವತಾರವೆತ್ತಿದ್ದ ಎನ್ನುತ್ತಾರಲ್ಲಾ. ಅಂತಹ ಮಹಾತ್ಮನಿಗೆ ಹೋಲಿಸಿದ್ದು ಸರಿ. ಯಾಕೆಂದರೆ ಹಂದಿಯಿದ್ದರೆ ಕೇರಿ ಚಂದ ಎಂದು ಹಳ್ಳಿಯ ಕಡೆ ಗಾದೆಯಿದೆ. ಕೇರಿ ಸ್ವಚ್ಛ ಮಾಡಲು ಬಂದ ಹಂದಿಯನ್ನ ನೋಡಿ ನಾಯಿಗಳು ಬೊಗಳುತ್ತವೆ, ಅದರಲ್ಲೂ ಮಠೋಪ ಜೀವಿ ಶ್ವಾನಗಳು ದೊಡ್ಡ ಗಂಟಲಲ್ಲಿ ಬೊಗಳುತ್ತವೆ. ಏಕೆಂದರೆ ತಮ್ಮ ದನಿ ಮಠದ ಮಾಲೀಕರಿಗೆ ತಿಳಿಯಬೇಕೆಂಬುದೇ ಅವುಗಳ ಇಂಗಿತವಾಗಿರುತ್ತದೆ. ನಾವು ಕೂಡ ಸಿದ್ದೇಶ್ವರ ಸ್ವಾಮಿಗ: ಅಭಿಮಾನಿಗಳೆ. ಆದರೆ,
ಈಗ ಅಭಿಮಾನಕ್ಕೆ ಕುಂದುಂಟಾಗಿದೆ, ಯಾಕೆಂದರೆ ಸಿದ್ದೇಶ್ವರ ಶ್ರೀಗಳು ಮೋದಿ ಹೊಗಳುವುದರಲ್ಲಿ ಚಕ್ರವರ್ತಿ ಸೂಲಿಬೆಲೆ ಸೈಡ್ ಹೊಡೆದಿದ್ದಾರೆ. ನಮ್ಮ ಮಾತಂತಿರಲಿ. ಕರ್ನಾಟಕದ ಸಾವಿರಾರು ಸ್ವಾಮಿಗಳು ಸಿದ್ದೇಶ್ವರ ಸ್ವಾಮಿ ಮಾತಿಗೆ ದಂಗುಬಡಿದುಹೋಗಿದ್ದಾರೆ. ಏಕೆಂದರೆ ಅವರಾಡಿರುವ ಮಾತು ಹಾಗಿವೆ, “ಮೋದಿ ಅತ್ಯಂತ ಜನಪ್ರಿಯ ಪ್ರಧಾನಿ. ಅವರನ್ನು ನೋಡುವುದೇ ನಮ್ಮ ಸೌಭಾಗ್ಯ. ಅವರು ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿದೆಯೊ ಅಷ್ಟೇ ಸಂತೋಷ ನಮಗೂ ಆಗಿದೆ. ಇಂತಹ ಬಲ್ಲ ಪ್ರಧಾನಿ ನಮ್ಮ ದೇಶಕ್ಕೆ ದೊರೆತದ್ದು ನಮ್ಮ ಸುದೈವ, ದಿನದ ಎಲ್ಲ ತಾಸುಗಳನ್ನು ಜನರ ಚಿಂತನೆಗೆ ಬಳಸಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಈ ನಮ್ಮ ಪ್ರಧಾನಿಯನ್ನ ಜಗತ್ತೇ ಪ್ರೀತಿಸುತ್ತಿದೆ” ಎಂದರಲ್ಲದೆ, “ಅವರು ಜೇಬನ್ನು ತುಂಬಿಸುವ ಬಗ್ಗೆ ಯೋಚಿಸದೆ ಜನರ ಹೃದಯವನ್ನು ತುಂಬಿದ್ದಾರೆ” ಎಂಬ ಭಾಷಣ ದೇಶದಲ್ಲೇ ದಾಖಲಾಗಿದೆಯಂತಲ್ಲಾ, ಥೂತ್ತೇರಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ ಪ್ರಧಾನಿಯ ಜುಬ್ಬಕ್ಕೆ ಜೇಬುಗಳಿದ್ದರೂ ಅವು ಖಾಲಿ ಇರಬಹುದು, ಆದರೆ ಅವರನ್ನು ಪ್ರಧಾನಿ ಮಾಡಿದವರ ಜೇಬು ತುಂಬಿತುಳುಕುತ್ತಿರುವುದು ದಿವ್ಯದೃಷ್ಟಿಯ ಸಿದ್ದೇಶ್ವರರಿಗೆ ಅರಿವಾಗಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ಯಾರವಾನ್ ಪತ್ರಿಕೆ ಮೂವತ್ತು ಪುಟದಲ್ಲಿ ರಫೇಲ್ ಹಗರಣ ಬರೆದ ಲೇಖನವನ್ನು ಸಿದ್ದೇಶ್ವರರು ಓದಬೇಕಿತ್ತು. ಓದದಿರುವುದು ಅಪರಾಧವಲ್ಲ, ಏಕೆಂದರೆ ಎಲ್ಲಾ ಪತ್ರಿಕೆಯನ್ನು ಓದಲಾಗುವುದಿಲ್ಲ. ಜೊತೆಗೆ ಬಿಜೆಪಿಗಳನ್ನ ಹೊಗಳುವ ಬಿಜೆಪಿ ಪತ್ರಿಕೆಗಳನ್ನ ಓದಿದರೆ ಏನೂ ಸಿಗುವುದಿಲ್ಲ. ಆದರೆ ಸಿದ್ದೇಶ್ವರ ಶ್ರೀಗಳು ನಿಂತು ಮಾತನಾಡುತ್ತಿದ್ದ ಜಾಗ ನಲವತ್ತು ಪರಸೆಂಟಿನ ಜಾಗ. ಮೋದಿಯವರದ್ದೇ ಸರಕಾರ ಕರ್ನಾಟಕದಲ್ಲಿದ್ದು ಅದು ಸಿದ್ದರಾಮಯ್ಯನ ಸರಕಾರದ ಕಾಲದಲ್ಲಿದ್ದ ಹತ್ತು ಪರಸೆಂಟು ಕಮಿಷನ್ನನ್ನು ನಲವತ್ತು ಪರಸೆಂಟಿಗೆ ತಲುಪಿ, ಅದನ್ನ ಕೊಡಲಾಗದವನೊಬ್ಬ ಆತ್ಮಹತ್ಯೆಗೆ ಶರಣಾಗಿ, ಬಿಜೆಪಿಯ ದೊಡ್ಡಗಂಟಲ ರಾಜಕಾರಣಿಯೊಬ್ಬ ರಾಜಿನಾಮೆ ನೀಡಿದ್ದು ಪ್ರಧಾನಿಗಾಗಲಿ ಸಿದ್ದೇಶ್ವರರಿಗಾಗಲಿ ಗೊತ್ತಿಲ್ಲದ ಸಂಗತಿಗಳಲ್ಲ. ಸದಾ ಮಠದೂಳಗಿದ್ದು ಮುಂದಿನ ಸಭೆಗೆ ಮನಮುಟ್ಟುವಂತಹ ಭಾಷಣ ತಯಾರಿಸಿಕೊಂಡು ಹೋಗಿ ಜನರನ್ನ ಮರುಳ ಮಾಡುವ ಸಿದ್ದೇಶ್ವರರು ಈ ದೇಶವನ್ನಾಳುವತ್ತಿರುವ ಮೋದಿಯವರ ಆಡಳಿತ ವೈಖರಿಯನ್ನ ಗಮನಿಸಿ ಮಾತನಾಡಬೇಕಿತ್ತು. ಈಗ ಎಲ್ಲರಿಗೂ ತಿಳಿದಿರುವ ಸಂಗತಿಯ ಪ್ರಕಾರ ಬಸವಣ್ಣ ವೈದಿಕ ಧರ್ಮದ ಕಂದಾಚಾರದ ಶೋಷಣೆಯಿಂದ ಸಿಡಿದು ಬಂದು ವಚನ ದೀವಿಗೆ ಕೊಟ್ಟವರು. ಆ ವಚನ ಸಂಪ್ರದಾಯ ಬಂಡಾಯದಿಂದ ಕೂಡಿವೆ. ಆದರೆ ಸಿದ್ದೇಶ್ವರರು ಎಂದೂ ಬಂಡಾಯದ ಮಾತನಾಡಿದವರಲ್ಲ. ಯಥಾಸ್ಥಿತಿಯ ಅನಾವರಣ ಮಾಡಿ ಅನಂದಪಟ್ಟವರು. ಆದ್ದರಿಂದ ಅವರ ಮೋದಿಯ ಅಂಧಾಭಿಮಾನದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬೇಡಿರೆಂದು ಸಾಧಾರಣ ಸ್ವಾಮಿಗಳ ಸೂಚನೆಯಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ಜೈ ಸಿದ್ದೇಶ್ವರ ಸ್ವಾಮಿ

ಕರ್ನಾಟಕದಲ್ಲಿ ಮುಂಗಾರಿನ ದೆಸೆಯಿಂದ ಅತಿವೃಷ್ಟಿ ಸಂಭವಿಸಿದೆ. ಸಮುದ್ರ ಕಡಲನ್ನ ಕೊರೆಯುತ್ತಿದೆ. ಒಮ್ಮೆ ಸಮುದ್ರಕ್ಕೆ ಜಾರಿದ ಮಣ್ಣು ಮರಳಿ ಬರಲಾರದು. ಮಳೆಯಿಂದ ಸಂತ್ರಸ್ತರಾದವರು ಮಳೆ ದೂರುತ್ತಾರೆಯೇ ಹೊರತು ನಮಗ್ಯಾರಾದರೂ ಇದ್ದಾರೆ ಎಂದು ಭಾವಿಸುವುದಿಲ್ಲ. ಇಂತಹ ಭಾವನೆ ಬರಬೇಕಾದರೆ ಆಳುವ ಸರಕಾರ ಸತ್ತು ಹೋಗಿರಬಹುದು. ಸರಕಾರವನ್ನು ಎಚ್ಚರಿಸಿ ಸಂತ್ರಸ್ತರಿಗೆ ಸಹಾಯ ಮಾಡಬಹುದಾದ ನಮ್ಮ ದೃಶ್ಯಮಾಧ್ಯಮಗಳು ಹೆಗಲ ಮೇಲೆ ಕ್ಯಾಮರಾ ಹೊತ್ತು ಪವಿತ್ರ ಲೋಕೇಶ್ ಮತ್ತು ನರೇಶ್ ಯಾವ ಲಾಡ್ಜಿನಲ್ಲಿದ್ದಾರೆ ಎಂದು ಹುಡುಕತೊಡಗಿದರಂತಲ್ಲಾ. ಕಡೆಗೂ ಪವಿತ್ರ ಮತ್ತು ನರೇಶ್ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇದ್ದದ್ದನ್ನ ಏನೋ ಬಹಳ ವೀಶೆಷವೆಂಬಂತೆ ಇಡೀ ಭಾನುವಾರ ಪ್ರಸಾರ ಮಾಡಿದರಂತಲ್ಲಾ. ಈ ಪೈಕಿ ಪವರ್ ಟಿವಿಯ ಸಂಸ್ಥಾಪಕನೇ ಬಂದು ಕುಳಿತುಕೊಂಡು ಚರ್ಚಿಸಿದ ಕಾರ್ಯಕ್ರಮ ಬಿತ್ತರಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದು ನೋಡಿದರೆ, ಇವರು ತಲುಪಿರುವ ಗಟಾರ ಇನ್ನೆಂತಹದ್ದಿರಬಹುದೆಂದು ನೋಡುಗರೇ ಅಚ್ಚರಿ ಪಡತೊಡಗಿದ್ದಾರಂತಲ್ಲ. ಮೀಡಿಯಾದವರ ಹೊಟ್ಟೆ ತುಂಬಿಸುವ ಕನ್ನಡದ ಜನ ಸುಮ್ಮನಿದ್ದರೆ ಈ ಮೀಡಿಯಾದವರು ಪ್ರತಿಯೊಬ್ಬರ ಖಾಸಗಿ ಕೋಣೆಗೆ ಕ್ಯಾಮರ ಹೊತ್ತು ಬರುವ ದಿನ ದೂರವಿಲ್ಲವಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನುರಿತ ರಾಜಕಾರಣಿ ರಾಜಣ್ಣ ದೇವೇಗೌಡರ ವಿಷಯದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ರಂಜನೆಯೊದಗಿಸಲು ಮಾತನಾಡಿದರೆ ಕಾರ್ಯಕರ್ತರಿಗಿಂತಲೂ, ವಾರಸುದಾರರಿಗೆ ನೋವಾಗುತ್ತದೆ. ಮಾನ್ಯ ದೇವೇಗೌಡರು ಸೊಪ್ಪು ಸಾರು ಮುದ್ದೆ ಅವಲಂಬಿಸಿ ನಿರೋಗಿಗಳಾಗಿ ನೂರರ ಗಡಿಯಕಡೆ ಹೊರಟಿದ್ದಾರೆ. ಇದು ಹೆಮ್ಮೆಯ ಸಂಗತಿ ಇಂತಿರುವಾಗ ದೇವೇಗೌಡರೀಗ ಇಬ್ಬರನ್ನು ಆಶ್ರಯಿಸಿ ನಡೆಯುತ್ತಾರೆ, ಮುಂದೆ ನಾಲ್ಕು ಜನ ಬೇಕಾಗಬಹುದು ಎಂಬುದು ಅನಾಗರಿಕ ಮಾತೆಂದು ಕಾಂಗೈನವರೇ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ದೇವೇಗೌಡರ ಮಗ ಮತ್ತು ಮೊಮ್ಮಗನ ಪ್ರತಿಕ್ರಿಯೆ ಕುತೂಹಲಕಾರಿ. ರಾಜಣ್ಣನ ಮಾತು ಸಿದ್ದರಾಮಯ್ಯನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರೆ, ಪ್ರಜ್ವಲ ರೇವಣ್ಣ ಆ ರಾಜಣ್ಣನಿಗೆ ಜನರೆ ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದುಬಿಟ್ಟಿದ್ದಾರಲ್ಲಾ. ಹೀಗೆ ಪ್ರತಿಕ್ರಿಯಿಸುವ ಮುನ್ನ ದೇವೇಗೌಡರು ಟೀಕಿಸಿದ ಎದುರಾಳಿಗಳಿಗೆ ಹೇಗೆ ಉತ್ತರ ಕೊಡುತ್ತಿದ್ದರು ಎಂಬುದನ್ನು ಮಗ ಮೊಮ್ಮಗ ಗ್ರಹಿಸಬೇಕಿತ್ತು. ಹಿಂದೊಮ್ಮೆ ಪಟೇಲರು ಮತ್ತು ಹೆಗಡೆ ಹಾಸನದಲ್ಲಿ ಸಭೆ ಮಾಡುತ್ತಿದ್ದಾಗ ಕಲ್ಲು ಬೀರಿ ಓಡಿಸಲಾಯ್ತು. ಸಿಟ್ಟುಗೊಂಡ ಪಟೇಲರು “ಈ ದೇವೆಗೌಡ ದಾವಣಗೆರೆಗೆ ಬರ್ಲಿ, ಕಾಲು ಮುರಿದು ಕಳುಸ್ತಿನಿ” ಅಂದರು.

ಅದಕ್ಕೆ ದೇವೇಗೌಡರು “ಪಟೇಲರು ನನ್ನ ಗೆಳೆಯರು, ನನ್ನ ಕಾಲು ಮುರಿದಾಗ ಅವರು ಸುಮ್ಮನಿದ್ದಾರೆಯೇ, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ” ಎಂದರು. ಅಲ್ಲಿಗೆ ಎಲ್ಲವೂ ಶಮನವಾಯ್ತು. ಹಾಗೆ ನೋಡಿದರೆ ಸೇಡಿನ ಮಾತುಗಳು, ಹಲ್ಲೆ ಮಾತುಗಳು ಈ ಬಿಜೆಪಿಗಳು ಉದ್ಭವಿಸಿದ ಮೇಲೆ ಜಾಸ್ತಿಯಾದವಂತಲ್ಲಾ. ಇದರ ಉದ್ಘಾಟಕರು ಈಶ್ವರಪ್ಪನಾದರೆ ಮುಂದುವರೆಸಿಕೊಂಡು ಹೋಗುತ್ತಿರುವವರ ಪೈಕಿ ಸಿ.ಟಿ ರವಿ, ಪ್ರತಾಪ ಸಿಮ್ಮ, ರೇಣುಕಾಚಾರಿ ಇನ್ನ ಮುಂತಾದವುಗಳಿವೆಯಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...