Homeಥೂತ್ತೇರಿಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮಿಗಳು ಭಕ್ತರನ್ನು ಮೀರಿಸಿ ಮೋದಿಯವರನ್ನ ಹಿಗ್ಗಾಮುಗ್ಗ ಹೊಗಳಿದ ಒಂದು ಸಾಲನ್ನು ತೆಗೆದು ನಾವು ಟಿಕೀಸಿದ್ದಕ್ಕೆ ಸಿದ್ದೇಶ್ವರ ಸ್ವಾಮಿ ಮಠೋಪಜೀವಿಗಳು ನಮ್ಮನ್ನ ಹಂದಿಗೆ ಹೋಲಿಸಿವೆ. ಇದು ನಮಗೆ ಅವಮಾನಕರವಲ್ಲ, ಯಾಕೆಂದರೆ ಪರಮಾತ್ಮನೆ ಒಮ್ಮೆ ವರಾಹ ಅವತಾರವೆತ್ತಿದ್ದ ಎನ್ನುತ್ತಾರಲ್ಲಾ. ಅಂತಹ ಮಹಾತ್ಮನಿಗೆ ಹೋಲಿಸಿದ್ದು ಸರಿ. ಯಾಕೆಂದರೆ ಹಂದಿಯಿದ್ದರೆ ಕೇರಿ ಚಂದ ಎಂದು ಹಳ್ಳಿಯ ಕಡೆ ಗಾದೆಯಿದೆ. ಕೇರಿ ಸ್ವಚ್ಛ ಮಾಡಲು ಬಂದ ಹಂದಿಯನ್ನ ನೋಡಿ ನಾಯಿಗಳು ಬೊಗಳುತ್ತವೆ, ಅದರಲ್ಲೂ ಮಠೋಪ ಜೀವಿ ಶ್ವಾನಗಳು ದೊಡ್ಡ ಗಂಟಲಲ್ಲಿ ಬೊಗಳುತ್ತವೆ. ಏಕೆಂದರೆ ತಮ್ಮ ದನಿ ಮಠದ ಮಾಲೀಕರಿಗೆ ತಿಳಿಯಬೇಕೆಂಬುದೇ ಅವುಗಳ ಇಂಗಿತವಾಗಿರುತ್ತದೆ. ನಾವು ಕೂಡ ಸಿದ್ದೇಶ್ವರ ಸ್ವಾಮಿಗ: ಅಭಿಮಾನಿಗಳೆ. ಆದರೆ,
ಈಗ ಅಭಿಮಾನಕ್ಕೆ ಕುಂದುಂಟಾಗಿದೆ, ಯಾಕೆಂದರೆ ಸಿದ್ದೇಶ್ವರ ಶ್ರೀಗಳು ಮೋದಿ ಹೊಗಳುವುದರಲ್ಲಿ ಚಕ್ರವರ್ತಿ ಸೂಲಿಬೆಲೆ ಸೈಡ್ ಹೊಡೆದಿದ್ದಾರೆ. ನಮ್ಮ ಮಾತಂತಿರಲಿ. ಕರ್ನಾಟಕದ ಸಾವಿರಾರು ಸ್ವಾಮಿಗಳು ಸಿದ್ದೇಶ್ವರ ಸ್ವಾಮಿ ಮಾತಿಗೆ ದಂಗುಬಡಿದುಹೋಗಿದ್ದಾರೆ. ಏಕೆಂದರೆ ಅವರಾಡಿರುವ ಮಾತು ಹಾಗಿವೆ, “ಮೋದಿ ಅತ್ಯಂತ ಜನಪ್ರಿಯ ಪ್ರಧಾನಿ. ಅವರನ್ನು ನೋಡುವುದೇ ನಮ್ಮ ಸೌಭಾಗ್ಯ. ಅವರು ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿದೆಯೊ ಅಷ್ಟೇ ಸಂತೋಷ ನಮಗೂ ಆಗಿದೆ. ಇಂತಹ ಬಲ್ಲ ಪ್ರಧಾನಿ ನಮ್ಮ ದೇಶಕ್ಕೆ ದೊರೆತದ್ದು ನಮ್ಮ ಸುದೈವ, ದಿನದ ಎಲ್ಲ ತಾಸುಗಳನ್ನು ಜನರ ಚಿಂತನೆಗೆ ಬಳಸಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಈ ನಮ್ಮ ಪ್ರಧಾನಿಯನ್ನ ಜಗತ್ತೇ ಪ್ರೀತಿಸುತ್ತಿದೆ” ಎಂದರಲ್ಲದೆ, “ಅವರು ಜೇಬನ್ನು ತುಂಬಿಸುವ ಬಗ್ಗೆ ಯೋಚಿಸದೆ ಜನರ ಹೃದಯವನ್ನು ತುಂಬಿದ್ದಾರೆ” ಎಂಬ ಭಾಷಣ ದೇಶದಲ್ಲೇ ದಾಖಲಾಗಿದೆಯಂತಲ್ಲಾ, ಥೂತ್ತೇರಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ ಪ್ರಧಾನಿಯ ಜುಬ್ಬಕ್ಕೆ ಜೇಬುಗಳಿದ್ದರೂ ಅವು ಖಾಲಿ ಇರಬಹುದು, ಆದರೆ ಅವರನ್ನು ಪ್ರಧಾನಿ ಮಾಡಿದವರ ಜೇಬು ತುಂಬಿತುಳುಕುತ್ತಿರುವುದು ದಿವ್ಯದೃಷ್ಟಿಯ ಸಿದ್ದೇಶ್ವರರಿಗೆ ಅರಿವಾಗಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ಯಾರವಾನ್ ಪತ್ರಿಕೆ ಮೂವತ್ತು ಪುಟದಲ್ಲಿ ರಫೇಲ್ ಹಗರಣ ಬರೆದ ಲೇಖನವನ್ನು ಸಿದ್ದೇಶ್ವರರು ಓದಬೇಕಿತ್ತು. ಓದದಿರುವುದು ಅಪರಾಧವಲ್ಲ, ಏಕೆಂದರೆ ಎಲ್ಲಾ ಪತ್ರಿಕೆಯನ್ನು ಓದಲಾಗುವುದಿಲ್ಲ. ಜೊತೆಗೆ ಬಿಜೆಪಿಗಳನ್ನ ಹೊಗಳುವ ಬಿಜೆಪಿ ಪತ್ರಿಕೆಗಳನ್ನ ಓದಿದರೆ ಏನೂ ಸಿಗುವುದಿಲ್ಲ. ಆದರೆ ಸಿದ್ದೇಶ್ವರ ಶ್ರೀಗಳು ನಿಂತು ಮಾತನಾಡುತ್ತಿದ್ದ ಜಾಗ ನಲವತ್ತು ಪರಸೆಂಟಿನ ಜಾಗ. ಮೋದಿಯವರದ್ದೇ ಸರಕಾರ ಕರ್ನಾಟಕದಲ್ಲಿದ್ದು ಅದು ಸಿದ್ದರಾಮಯ್ಯನ ಸರಕಾರದ ಕಾಲದಲ್ಲಿದ್ದ ಹತ್ತು ಪರಸೆಂಟು ಕಮಿಷನ್ನನ್ನು ನಲವತ್ತು ಪರಸೆಂಟಿಗೆ ತಲುಪಿ, ಅದನ್ನ ಕೊಡಲಾಗದವನೊಬ್ಬ ಆತ್ಮಹತ್ಯೆಗೆ ಶರಣಾಗಿ, ಬಿಜೆಪಿಯ ದೊಡ್ಡಗಂಟಲ ರಾಜಕಾರಣಿಯೊಬ್ಬ ರಾಜಿನಾಮೆ ನೀಡಿದ್ದು ಪ್ರಧಾನಿಗಾಗಲಿ ಸಿದ್ದೇಶ್ವರರಿಗಾಗಲಿ ಗೊತ್ತಿಲ್ಲದ ಸಂಗತಿಗಳಲ್ಲ. ಸದಾ ಮಠದೂಳಗಿದ್ದು ಮುಂದಿನ ಸಭೆಗೆ ಮನಮುಟ್ಟುವಂತಹ ಭಾಷಣ ತಯಾರಿಸಿಕೊಂಡು ಹೋಗಿ ಜನರನ್ನ ಮರುಳ ಮಾಡುವ ಸಿದ್ದೇಶ್ವರರು ಈ ದೇಶವನ್ನಾಳುವತ್ತಿರುವ ಮೋದಿಯವರ ಆಡಳಿತ ವೈಖರಿಯನ್ನ ಗಮನಿಸಿ ಮಾತನಾಡಬೇಕಿತ್ತು. ಈಗ ಎಲ್ಲರಿಗೂ ತಿಳಿದಿರುವ ಸಂಗತಿಯ ಪ್ರಕಾರ ಬಸವಣ್ಣ ವೈದಿಕ ಧರ್ಮದ ಕಂದಾಚಾರದ ಶೋಷಣೆಯಿಂದ ಸಿಡಿದು ಬಂದು ವಚನ ದೀವಿಗೆ ಕೊಟ್ಟವರು. ಆ ವಚನ ಸಂಪ್ರದಾಯ ಬಂಡಾಯದಿಂದ ಕೂಡಿವೆ. ಆದರೆ ಸಿದ್ದೇಶ್ವರರು ಎಂದೂ ಬಂಡಾಯದ ಮಾತನಾಡಿದವರಲ್ಲ. ಯಥಾಸ್ಥಿತಿಯ ಅನಾವರಣ ಮಾಡಿ ಅನಂದಪಟ್ಟವರು. ಆದ್ದರಿಂದ ಅವರ ಮೋದಿಯ ಅಂಧಾಭಿಮಾನದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬೇಡಿರೆಂದು ಸಾಧಾರಣ ಸ್ವಾಮಿಗಳ ಸೂಚನೆಯಾಗಿದೆಯಲ್ಲಾ, ಥೂತ್ತೇರಿ.
ಇದನ್ನೂ ಓದಿ: ಜೈ ಸಿದ್ದೇಶ್ವರ ಸ್ವಾಮಿ

ಕರ್ನಾಟಕದಲ್ಲಿ ಮುಂಗಾರಿನ ದೆಸೆಯಿಂದ ಅತಿವೃಷ್ಟಿ ಸಂಭವಿಸಿದೆ. ಸಮುದ್ರ ಕಡಲನ್ನ ಕೊರೆಯುತ್ತಿದೆ. ಒಮ್ಮೆ ಸಮುದ್ರಕ್ಕೆ ಜಾರಿದ ಮಣ್ಣು ಮರಳಿ ಬರಲಾರದು. ಮಳೆಯಿಂದ ಸಂತ್ರಸ್ತರಾದವರು ಮಳೆ ದೂರುತ್ತಾರೆಯೇ ಹೊರತು ನಮಗ್ಯಾರಾದರೂ ಇದ್ದಾರೆ ಎಂದು ಭಾವಿಸುವುದಿಲ್ಲ. ಇಂತಹ ಭಾವನೆ ಬರಬೇಕಾದರೆ ಆಳುವ ಸರಕಾರ ಸತ್ತು ಹೋಗಿರಬಹುದು. ಸರಕಾರವನ್ನು ಎಚ್ಚರಿಸಿ ಸಂತ್ರಸ್ತರಿಗೆ ಸಹಾಯ ಮಾಡಬಹುದಾದ ನಮ್ಮ ದೃಶ್ಯಮಾಧ್ಯಮಗಳು ಹೆಗಲ ಮೇಲೆ ಕ್ಯಾಮರಾ ಹೊತ್ತು ಪವಿತ್ರ ಲೋಕೇಶ್ ಮತ್ತು ನರೇಶ್ ಯಾವ ಲಾಡ್ಜಿನಲ್ಲಿದ್ದಾರೆ ಎಂದು ಹುಡುಕತೊಡಗಿದರಂತಲ್ಲಾ. ಕಡೆಗೂ ಪವಿತ್ರ ಮತ್ತು ನರೇಶ್ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇದ್ದದ್ದನ್ನ ಏನೋ ಬಹಳ ವೀಶೆಷವೆಂಬಂತೆ ಇಡೀ ಭಾನುವಾರ ಪ್ರಸಾರ ಮಾಡಿದರಂತಲ್ಲಾ. ಈ ಪೈಕಿ ಪವರ್ ಟಿವಿಯ ಸಂಸ್ಥಾಪಕನೇ ಬಂದು ಕುಳಿತುಕೊಂಡು ಚರ್ಚಿಸಿದ ಕಾರ್ಯಕ್ರಮ ಬಿತ್ತರಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದು ನೋಡಿದರೆ, ಇವರು ತಲುಪಿರುವ ಗಟಾರ ಇನ್ನೆಂತಹದ್ದಿರಬಹುದೆಂದು ನೋಡುಗರೇ ಅಚ್ಚರಿ ಪಡತೊಡಗಿದ್ದಾರಂತಲ್ಲ. ಮೀಡಿಯಾದವರ ಹೊಟ್ಟೆ ತುಂಬಿಸುವ ಕನ್ನಡದ ಜನ ಸುಮ್ಮನಿದ್ದರೆ ಈ ಮೀಡಿಯಾದವರು ಪ್ರತಿಯೊಬ್ಬರ ಖಾಸಗಿ ಕೋಣೆಗೆ ಕ್ಯಾಮರ ಹೊತ್ತು ಬರುವ ದಿನ ದೂರವಿಲ್ಲವಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನುರಿತ ರಾಜಕಾರಣಿ ರಾಜಣ್ಣ ದೇವೇಗೌಡರ ವಿಷಯದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ರಂಜನೆಯೊದಗಿಸಲು ಮಾತನಾಡಿದರೆ ಕಾರ್ಯಕರ್ತರಿಗಿಂತಲೂ, ವಾರಸುದಾರರಿಗೆ ನೋವಾಗುತ್ತದೆ. ಮಾನ್ಯ ದೇವೇಗೌಡರು ಸೊಪ್ಪು ಸಾರು ಮುದ್ದೆ ಅವಲಂಬಿಸಿ ನಿರೋಗಿಗಳಾಗಿ ನೂರರ ಗಡಿಯಕಡೆ ಹೊರಟಿದ್ದಾರೆ. ಇದು ಹೆಮ್ಮೆಯ ಸಂಗತಿ ಇಂತಿರುವಾಗ ದೇವೇಗೌಡರೀಗ ಇಬ್ಬರನ್ನು ಆಶ್ರಯಿಸಿ ನಡೆಯುತ್ತಾರೆ, ಮುಂದೆ ನಾಲ್ಕು ಜನ ಬೇಕಾಗಬಹುದು ಎಂಬುದು ಅನಾಗರಿಕ ಮಾತೆಂದು ಕಾಂಗೈನವರೇ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ದೇವೇಗೌಡರ ಮಗ ಮತ್ತು ಮೊಮ್ಮಗನ ಪ್ರತಿಕ್ರಿಯೆ ಕುತೂಹಲಕಾರಿ. ರಾಜಣ್ಣನ ಮಾತು ಸಿದ್ದರಾಮಯ್ಯನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರೆ, ಪ್ರಜ್ವಲ ರೇವಣ್ಣ ಆ ರಾಜಣ್ಣನಿಗೆ ಜನರೆ ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದುಬಿಟ್ಟಿದ್ದಾರಲ್ಲಾ. ಹೀಗೆ ಪ್ರತಿಕ್ರಿಯಿಸುವ ಮುನ್ನ ದೇವೇಗೌಡರು ಟೀಕಿಸಿದ ಎದುರಾಳಿಗಳಿಗೆ ಹೇಗೆ ಉತ್ತರ ಕೊಡುತ್ತಿದ್ದರು ಎಂಬುದನ್ನು ಮಗ ಮೊಮ್ಮಗ ಗ್ರಹಿಸಬೇಕಿತ್ತು. ಹಿಂದೊಮ್ಮೆ ಪಟೇಲರು ಮತ್ತು ಹೆಗಡೆ ಹಾಸನದಲ್ಲಿ ಸಭೆ ಮಾಡುತ್ತಿದ್ದಾಗ ಕಲ್ಲು ಬೀರಿ ಓಡಿಸಲಾಯ್ತು. ಸಿಟ್ಟುಗೊಂಡ ಪಟೇಲರು “ಈ ದೇವೆಗೌಡ ದಾವಣಗೆರೆಗೆ ಬರ್ಲಿ, ಕಾಲು ಮುರಿದು ಕಳುಸ್ತಿನಿ” ಅಂದರು.

ಅದಕ್ಕೆ ದೇವೇಗೌಡರು “ಪಟೇಲರು ನನ್ನ ಗೆಳೆಯರು, ನನ್ನ ಕಾಲು ಮುರಿದಾಗ ಅವರು ಸುಮ್ಮನಿದ್ದಾರೆಯೇ, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ” ಎಂದರು. ಅಲ್ಲಿಗೆ ಎಲ್ಲವೂ ಶಮನವಾಯ್ತು. ಹಾಗೆ ನೋಡಿದರೆ ಸೇಡಿನ ಮಾತುಗಳು, ಹಲ್ಲೆ ಮಾತುಗಳು ಈ ಬಿಜೆಪಿಗಳು ಉದ್ಭವಿಸಿದ ಮೇಲೆ ಜಾಸ್ತಿಯಾದವಂತಲ್ಲಾ. ಇದರ ಉದ್ಘಾಟಕರು ಈಶ್ವರಪ್ಪನಾದರೆ ಮುಂದುವರೆಸಿಕೊಂಡು ಹೋಗುತ್ತಿರುವವರ ಪೈಕಿ ಸಿ.ಟಿ ರವಿ, ಪ್ರತಾಪ ಸಿಮ್ಮ, ರೇಣುಕಾಚಾರಿ ಇನ್ನ ಮುಂತಾದವುಗಳಿವೆಯಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...