Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

ಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

- Advertisement -
- Advertisement -

ಕೊರೋನಾ ಮಹಾಮಾರಿ ವಿರುದ್ಧ ಸಮರ ಹೂಡಿ ಆಗಿದೆ. ರೋಗದ ಪತ್ತೆಯ ಕೆಲಸವನ್ನು ಇನ್ನೂ ಮೊದಲೇ ಆರಂಭಿಸಬಹುದಿತ್ತು. 40 ಕೋಟಿ ಜನರನ್ನು ಬಡತನದಲ್ಲಿಡಲಾಗಿದೆ. ಇವರಿಗೆ ಯಾವ ಜೀವಭದ್ರತೆಯೂ ಇಲ್ಲ. ಊಟ ಮೊದಲೇ ಇಲ್ಲ. ಇವರು ಹೇಗೆ ಜೀವಿಸಬೇಕು? ವಲಸಿಗ ಕಾರ್ಮಿಕರ ಪರಿಸ್ಥಿತಿಯಂತೂ ಇನ್ನೂ ಘನಘೋರ; ಮಹಮದೀಯರೆ ರೋಗ ಹರಡಲು ಕಾರಣರು ಎಂದು ಜನತೆಯ ಮನಸ್ಸಿನಲ್ಲಿ ವಿಷ ಬಿಜ ಬಿತ್ತಿ ಹಿಂದುರಾಷ್ಟ್ರ ಆಗಬೇಕೆನ್ನುವ ಹುಂಬರು, ತಲೆಕೆಟ್ಟವರಂತೆ ಮಾತನಾಡುತ್ತಾ, ಜನರ ಮನಸ್ಸಿನಲ್ಲಿ ಕೋಮುವ್ಯಾಧಿ ಕೆರಳುವಂತೆ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ತನ್ನ ಮೌನದ ಮೂಲಕ ಅವರ ನಿಲುವನ್ನು ಸಮರ್ಥಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಸ್ಥಾಪನೆಯ 40ನೇ ವರ್ಷದ ದಿನದಂದೇ ಎಲ್ಲರು ರಾತ್ರಿ ಒಂಭತ್ತು ಘಂಟೆಯಿಂದ 9 ನಿಮಿಷ ಕಾಲ ಮೋಂಬತ್ತಿ ಹತ್ತಿಸಬೇಕೆಂದು ಫರ್ಮಾನ್ ಹೊರಡಿಸುವ ಮೂಲಕ ಕೊರೋನಾದ ದುರುಪಯೋಗ ಮಾಡಿಕೊಂಡದ್ದು ಸರಿಯೇ ಎಂದು ಪ್ರಶ್ನಿಸುವವರಿದ್ದಾರೆ. ಭಾರತದ ಕೊನೇ ಪಕ್ಷ ಹತ್ತು ಕೋಟಿ ಜನ ಆ ದಿನ ಮೋಂಬತ್ತಿ ಹಚ್ಚಿದ್ದರೆ, ಮೋಂಬತ್ತಿಗೆ 20 ಕೋಟಿ ರೂಗಳನ್ನು ವೆಚ್ಚ ಮಾಡಿದಂತಾಯಿತು. ಅದೇ 20 ಕೋಟಿಯನ್ನು ಕೊರೋನಾ ತಡೆಗಟ್ಟುವುದಕ್ಕೆ ಉಪಯೋಗಿಸಬಹುದಿತ್ತು, ಇಲ್ಲವೇ ಒಂದಷ್ಟು ಜನರಿಗೆ ಊಟ ಕೊಡಬಹುದಾಗಿತ್ತಲ್ಲವೇ ಎಂದು ಕೇಳುವವರೂ ಇದ್ದಾರೆ. ಇವೆಲ್ಲಕ್ಕಿಂತ ಮೊದಲು ಕೇಳುವ ಪ್ರಶ್ನೆ ಒಂದು ತಿಂಗಳ ಹಿಂದೆಯೇ ಕೊರೋನಾ ಹರಡುತ್ತಿರುವ ಸುದ್ದಿ ಸರ್ಕಾರಕ್ಕೆ ಗೊತ್ತಾದರೂ ಕೂಡಲೆ ಕ್ರಮ ಕೈಗೊಳ್ಳಲಿಲ್ಲ ಎಂಬುದು. ಇದೆಲ್ಲದಕ್ಕೂ ಮೋದಿ ಅವರ ಉತ್ತರ ‘ದಿವ್ಯಮೌನ’. ಇದು ಎಲ್ಲರಿಗೂ ತಿಳಿದ ವಿಷಯ; ಮೋದಿಜಿ ತಮಗೆ ತೋಚಿದ್ದನ್ನು ಹೇಳುವವರೇ ಹೊರತು ಜನ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಜಾಯಮಾನದವರಲ್ಲ. ತಮಗೆ ಬೇಕಾದರೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೂ ಉತ್ತರ ಕೊಡುತ್ತಾರೆ. ಆದರೆ ಈ ಗಹನ ವಿಚಾರಕ್ಕಲ್ಲ. ಬಿಜೆಪಿ ಸಂಘಪರಿವಾರದ ಕೆಲವರನ್ನು ಸಾಕಿಕೊಂಡಿದ್ದಾರೆ ಮೋದಿ. ಈ ಮತಾಂಧರು ನೂರು ಸಾರಿ ವಿಷಕಾರಿದರೂ ಮೋದಿ ಮತ್ತು ಷಾ ಅವರನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಕಾರಣ ಅವರೆಲ್ಲ Hidden Agendaಗೆ ಅನುಗುಣವಾಗಿ ಮಾತನಾಡುವ (ಅಪ) ಪ್ರಚಾರಕರು!

ಇವೆಲ್ಲ ಒತ್ತಟ್ಟಿಗಿರಲಿ. ಈಗ ಸರ್ಕಾರ ಮಾಡಬೇಕಾದ್ದೇನು? ನಾವು ಅದನ್ನು ಕುರಿತು ಯೋಚನೆ ಮಾಡುವ. ಎಂದಿನಂತೆಯೇ ನಾವು ಮುಂದೆಯೂ People’s curfew, 144ನೇ ಸೆಕ್ಷನ್ ಜಾರಿ ಇವುಗಳನ್ನೇ ಮುಂದುವರೆಸಿಕೊಂಡೇ ಹೋಗುವುದೇ? ಇಲ್ಲವೇ ಜನರಿಗೆ ರೋಗದ ಬಗ್ಗೆ ತಿಳುವಳಿಕೆ ಕೊಟ್ಟು, ಅವರನ್ನು ಜಾಗೃತಗೊಳಿಸುವುದೇ? ಇದುವರೆಗೆ ಸರ್ಕಾರ ಮಾಡಿರುವುದೆಲ್ಲ ಇದನ್ನೆ. ಇದು ಮಾಬಾಪ್ ಸರ್ಕಾರ ಎಂದು ಜನ ಭಾವಿಸಿದ್ದಾರೆ. ರೋಗ ಬಂದರೆ ಸರ್ಕಾರ ಅದನ್ನು ತಡೆ ಹಿಡಿಯುತ್ತದೆ. ನಾವ್ಯಾಕೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಕು ಎಂದುಕೊಂಡು ಜನ ಜಡರಾಗುತ್ತಿದ್ದಾರೆ. ಬಿಹಾರದಲ್ಲಿ ಗಂಗಾ ನದಿ ಪ್ರವಾಹ ಬಂದು ಕೊಚ್ಚಿಕೊಂಡು ಹೋಗುವ ಸೂಚನೆ ಇದ್ದಾಗಲೂ ಜನ ಸಿನಿಮಾಕ್ಕೆ ಹೋಗಿ ಕೂತಿರುತ್ತಾರಂತೆ. ಮಾಬಾಪ್ ಗೌರ್ನಮೆಂಟ್ ನಮ್ಮನ್ನು ಪ್ರವಾಹದಿಂದ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿಂದ. ಪ್ರವಾಹ ಬರುವುದಿದ್ದರೆ ಎಲ್ಲಿಗೆ ಹೋಗಬೇಕು? ಮರ ಹತ್ತಿ ಕೂಡೋಣವೇ, ಗಂಗಾ ನದಿಯಿಂದ ದೂರವಿರುವ ಗ್ರಾಮಕ್ಕೆ ಹೋಗಿ ತಾತ್ಕಾಲಿಕವಾಗಿ ರಕ್ಷಣೆ ಪಡೆಯಬೇಕೇ ಎಂದು ಹಿಂದಿನ ದಿನಗಳಲ್ಲಿ ಜನ ಯೋಚಿಸುತ್ತಿದ್ದರು. ಈಗಿನ ಜನ ಸರ್ಕಾರ ನಮ್ಮ ರಕ್ಷಣೆ ಮಾಡುತ್ತದೆ, ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುತ್ತಾರೆ.

ಸರ್ಕಾರ ತಾನೇನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ಇನ್ನಾದರೂ ಜನತೆಗೆ ‘ನಿಮ್ಮ ಜವಾಬ್ದಾರಿ ನಿರ್ವಹಿಸಿ, ರೋಗ ಹರಡದಂತೆ ತಡೆಗಟ್ಟಲು ನೀವೇನೂ ಮಾಡಬೇಕೋ ವಿಚಾರ ಮಾಡಿ’ ಎಂದು ತಿಳಿಸಬೇಕು. ಕರ್ತವ್ಯ ನಿರ್ವಹಣೆ ಮಾಡಿ ಎಂದು ತಿಳುವಳಿಕೆ ನೀಡಿ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಪರಿವರ್ತಿಸಬೇಕು. ಈಗ ಜನರನ್ನ ಮೋದಿ ವಿಚಾರ ಶೂನ್ಯರನ್ನಾಗಿ ಮಾಡಿದೆ. ಬೇಜವಾಬ್ದಾರಿಯಿಂದ ನಡೆಸಿಕೊಳ್ಳಲು ಬೇಕಾದ ವಾತಾವರಣ ಸೃಷ್ಟಿ ಮಾಡಿದೆ. ಇನ್ನಾದರೂ ಎಚ್ಚೆತ್ತು ಸರ್ಕಾರ ಸಮಾಜದ ವಿಚಾರವಂತರು ಏನು ಮಾಡಬೇಕು? ಕಾರ್ಮಿಕರು ಏನು ಮಾಡಬೇಕು, ವಿದ್ಯಾರ್ಥಿಗಳು ಯುವಕರು ಏನು ಮಾಡಬಹುದು? ಜನಸಾಮಾನ್ಯರು ಅನುಸರಿಸಬೇಕಾದ ನಿಯಮಗಳೇನು? ಎಂಬುದನ್ನು ಕುರಿತು ಅವರಿಗೆಲ್ಲ ಹೇಳಬೇಕು. ರಚನಾತ್ಮಕ ಸಲಹೆಗಳನ್ನು ಅವರಿಗೆ ನೀಡಬೇಕು. ಒಟ್ಟಿನಲ್ಲಿ ಜನಜಾಗೃತಿ ಮೂಡಿಸಿ ಅವರೆಲ್ಲ ಜವಬ್ದಾರಿಯಿಂದ ವರ್ತಿಸುವಂತೆ ಪ್ರೇರಣೆ ನೀಡಬೇಕು.


ಇದನ್ನು ಓದಿ: ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಳ್ಳೆ ಉಡುಪು, ಮೇಕಪ್…ಅಪರೂಪಕ್ಕೊಮ್ಮೆ ಬೆಚ್ಚಿಬೀಳಿಸುವ ಮವ್ನಿ ಬಾಬಾನಂತೆ…ಅಬ್ಬಾ! ನಾಡಿಗೆ ಉಳಿಗಾಲವುಂಟೆ!

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...