Homeಕರ್ನಾಟಕಶ್ರೀರಂಗಪಟ್ಟಣದ ಮಸೀದಿ ನಿರ್ಮಾಣವಾಗಿದ್ದು ಹೇಗೆ? ಇತಿಹಾಸತಜ್ಞ ಪ್ರೊ.ನಂಜರಾಜ ಅರಸು ಹೇಳುವುದೇನು?

ಶ್ರೀರಂಗಪಟ್ಟಣದ ಮಸೀದಿ ನಿರ್ಮಾಣವಾಗಿದ್ದು ಹೇಗೆ? ಇತಿಹಾಸತಜ್ಞ ಪ್ರೊ.ನಂಜರಾಜ ಅರಸು ಹೇಳುವುದೇನು?

- Advertisement -
- Advertisement -

ಶ್ರೀರಂಗಪಟ್ಟಣದ ಜಾಮೀಯ ಮಸೀದಿಯು ಮೂಲದಲ್ಲಿ ದೇವಾಲಯವಾಗಿದ್ದು, ಅದನ್ನು ಒಡೆದು ಹಾಕಬೇಕೆಂದು ವಿವಾದ ಸೃಷ್ಟಿಸಲಾಗಿದ್ದು, ಶಾಂತಿ ಸಹಬಾಳ್ವೆಯಿಂದ ನೆಮ್ಮದಿಯಾಗಿದ್ದ ಶ್ರೀರಂಗಪಟ್ಟಣಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಹೊರಗಿನ ಶಕ್ತಿಗಳು ಮಾಡುತ್ತಿವೆ.

“ಟಿಪ್ಪು ಕಾಲದಲ್ಲಿ ಆಂಜನೇಯ ದೇವಾಲಯವನ್ನು ಒಡೆದು ಮಸೀದಿಯನ್ನು ಕಟ್ಟಲಾಯಿತು. ಟಿಪ್ಪು ಹಿಂದೂ ವಿರೋಧಿ” ಎಂದು ಕೂಗುತ್ತಾ ಜನರ ನಡುವೆ ದ್ವೇಷ ಬಿತ್ತಲಾಗುತ್ತಿದೆ. ಆದರೆ ಈ ಜಾಮಿಯಾ ಮಸೀದಿಯ ಕುರಿತು ಕೆದಕಿದರೆ ಹಲವು ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ.

“ಮಸೀದಿಗೂ ಮೊದಲು ಮಂದಿರವಿದ್ದದ್ದು ನಿಜ” ಎಂದು ಹೇಳುವ ಇತಿಹಾಸತಜ್ಞರಾದ ಪ್ರೊ.ಪಿ.ವಿ.ನಂಜರಾಜ ಅರಸು, “ದೇವಾಲಯವನ್ನು ಒಡೆದದ್ದು ರಾಜತಾಂತ್ರಿಕ ಕಾರಣಕ್ಕೆ ಹೊರತು, ಮತೀಯ ಉದ್ದೇಶಕ್ಕಲ್ಲ” ಎಂದು ವಿವರಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಟಿಪ್ಪು ಸುಲ್ತಾನ್’ ಹಾಗೂ ‘ಮೈಸೂರು ಇತಿಹಾಸ’ದ ಕುರಿತು ಆಳವಾಗಿ ಅಧ್ಯಯನ ಮಾಡಿದವರಾದ ಪ್ರೊ.ಅರಸು, ‘ನಾನುಗೌರಿ.ಕಾಂ’ ಜೊತೆ ಮಾತನಾಡಿ ಜಾಮಿಯ ಮಸೀದಿಯ ಹಿಂದಿನ ಕಥೆಯನ್ನು ವಿಸ್ತೃತವಾಗಿ ತಿಳಿಸಿದ್ದಾರೆ.

“ಶ್ರೀರಂಗಪಟ್ಟಣದಲ್ಲಿ ದೇವಸ್ಥಾನ ಇದ್ದದ್ದು ನಿಜ. ಅದು ಎಲ್ಲರಿಗೂ ಗೊತ್ತು. ಪ್ರಮೋದ್‌ ಮುತಾಲಿಕ್‌ ಹಾಗೂ ಅದ್ಯಾರೋ ಕಾಳಿ ಸ್ವಾಮೀಜಿಗೂ ಇದು ಗೊತ್ತು. ಟಿಪ್ಪು ಕದ್ದು ಮುಚ್ಚಿ ಈ ವ್ಯವಹಾರ ಮಾಡಿದವನ್ನಲ್ಲ” ಎಂದರು.

ಇದನ್ನೂ ಓದಿರಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

“ಒಂದು ರಾಜ್ಯದ ರಾಜಧಾನಿ ಅಂದಾಗ ಶತ್ರುಗಳ ದಾಳಿಯನ್ನು ಗಮನಿಸುತ್ತಿರಬೇಕಾಗುತ್ತದೆ. ಅದಕ್ಕಾಗಿ ಕಾವಲು ಗೋಪುರಗಳು ಬೇಕಾಗಿರುತ್ತವೆ. ಇಂದು ನಾವು ಡ್ರೋನ್‌ಗಳನ್ನು ಬಳಸಿ ಕಾಯುತ್ತಿದ್ದೇವೆ. ಆದರೂ ಚೀನಾ ದಾಳಿ ಮಾಡುತ್ತಿರುವುದು ತಿಳಿಯುತ್ತಿಲ್ಲ” ಎಂದು ವಿಷಾದಿಸಿದರು.

ಪ್ರಶ್ನೆ: ‘ಕಾವಲು ಗೋಪುರ’ಕ್ಕಾಗಿ ದೇವಾಲಯವನ್ನು ಟಿಪ್ಪು ಒಡೆದನೆಂದು ಹೇಳುತ್ತೀರಿ. ಆದರೆ ಅದರ ಸುತ್ತಲೂ ಹಲವು ಗೊಂದಲಗಳು ಉಂಟಾಗುತ್ತವೆ. ದೇವಾಲಯವನ್ನೇ ಏಕೆ ಒಡೆಯಬೇಕಿತ್ತು? ಟಿಪ್ಪು ಹಿಂದೂ ವಿರೋಧಿಯಾಗಿದ್ದರಿಂದಲೇ ದೇವಾಲಯ ಒಡೆದ ಎನ್ನುವ ವಾದ ಮಾಡಬಹುದಲ್ಲ?

ನಂಜರಾಜ ಅರಸ್‌: ರಾಜಧಾನಿಗೆ ಕಾವಲು ಗೋಪುರಗಳು ಬೇಕಿತ್ತು. ಬ್ರಿಟಿಷರ ನಡುವೆ ಟಿಪ್ಪು ನಡೆಸಿದ ನಾಲ್ಕು ಆಂಗ್ಲೋ ಮೈಸೂರು ಯುದ್ಧದಲ್ಲೂ ಬ್ರಿಟಿಷರು ದಾಳಿ ಮಾಡಿದ್ದು ಮಳವಳ್ಳಿ ಕಡೆಯಿಂದ. ಮದ್ದೂರು, ಮಂಡ್ಯ ಕಡೆಯಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನದಿ ದಾಟುವುದು ಕಷ್ಟವಿತ್ತು. ಹೀಗಾಗಿ ಮಳವಳ್ಳಿ ಮಾರ್ಗವನ್ನು ಬ್ರಿಟಿಷರು ಆಯ್ದುಕೊಂಡರು. ಹೀಗಾಗಿ ಕಾವಲು ಗೋಪುರಗಳನ್ನು ನಿರ್ಮಿಸಲಾಯಿತು. ಈ ಮಸೀದಿಯಲ್ಲಿನ ಕಾವಲು ಗೋಪುರದ ಒಳಗೆ 200 ಮೆಟ್ಟಿಲುಗಳಿವೆ. ಈಗ ಬೀಗ ಹಾಕಿದ್ದಾರೆ. ನೀವು ಬೀಗ ತೆಗೆಸಿ ಹೋಗಿ ನೋಡಿ. ಸುಮಾರು ನಲವತ್ತು ಮೈಲಿ ದೂರದ ಮಳವಳ್ಳಿವರೆಗೂ ನೋಡಬಹುದು. ಮತ್ತೆ ಈ ಕಡೆ ತಿರುಗಿ ನೋಡಿದರೆ ಮದ್ದೂರುವರೆಗೂ ನೋಡಬಹುದು. ಇದಕ್ಕಾಗಿ ದೇವಾಲಯವನ್ನು ಮಸೀದಿಯಾಗಿ ರೂಪಾಂತರಿಸುತ್ತಾನೆ.

ದೇವಾಲಯನ್ನೇ ಏಕೆ ಆಯ್ಕೆ ಮಾಡಿಕೊಂಡ ಎಂಬ ಪ್ರಶ್ನೆ ಬರುತ್ತದೆ. ದೇವಾಲಯವನ್ನು ಮಸೀದಿಯಾಗಿ ಬದಲಾಯಿಸುವ ಮುನ್ನ ದೇವರನ್ನು ಕಿತ್ತು ಹೊಳೆಗೆ ಬೀಸಾಕಲಿಲ್ಲ. ದಿವಾನ್‌ ಪೂರ್ಣಯ್ಯನವರ ನೇತೃತ್ವದಲ್ಲಿ ಕೋಟೆ ಒಳಗೆ ಮರುಸ್ಥಾಪನೆ ಮಾಡಿಸುತ್ತಾನೆ. ಈಗ ಉತ್ತರಕ್ಕೆ ಬಾಗಿಲು ಇದೆ. ಮೂಡಲಬಾಗಿಲು ಆಂಜನೇಯ ಎಂದಾಗ ಪೂರ್ವಕ್ಕೆ ಬಾಗಿಲಿತ್ತು. ಈಗ ಉತ್ತರಕ್ಕೆ ಇದೆ. ಆದರೂ ಮೂಡಲಬಾಗಿಲು ಆಂಜನೇಯ ಎಂಬ ಹೆಸರೇ ಇದೆ. ಶರಣಾಂಬಿಕ ದೇವಿ ಆವರಣದಲ್ಲಿ ದೇವರನ್ನು ಟಿಪ್ಪು ಪ್ರತಿಷ್ಠಾಪನೆ ಮಾಡಿಸುತ್ತಾನೆ.

ಇದನ್ನೂ ಓದಿರಿ: ಮತ್ತೆ ಮತ್ತೆ ನೆನೆಯಬೇಕಾದ ‘ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ’

ಕಾವಲು ಗೋಪುರ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬಾರದು, ರಹಸ್ಯವಾಗಿರಬೇಕು ಎಂಬುದಕ್ಕಾಗಿ ಮಸೀದಿಯೊಳಗೆ ಕಾವಲು ಗೋಪುರ ನಿರ್ಮಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಎಂದಿಗೂ ರಹಸ್ಯವಾಗಿರುತ್ತದೆ. ಆಂಜನೇಯ ದೇವಸ್ಥಾನದ ಮೇಲೆಯೇ ದೇವಸ್ಥಾನ ಕಟ್ಟಬಹುದಿತ್ತು. ಆದರೆ ರಕ್ಷಣಾ ಕಾರ್ಯದ ಉದ್ದೇಶದಿಂದ ಸೈನಿಕರು ಓಡಾಡುತ್ತಲೇ ಇರುತ್ತಾರಲ್ಲ. ತಾರಸಿ ಮೇಲೆ ಓಡಾಡುವಾಗ ದೇವರ ಗರ್ಭಗುಡಿಯನ್ನು ತುಳಿಯುತ್ತಾನೆಂಬ ಆರೋಪಗಳು ಬರುತ್ತವೆ. ‌ಇದನ್ನು ತಪ್ಪಿಸುವುದಕ್ಕಾಗಿ ಟಿಪ್ಪು ಮಸೀದಿ ನಿರ್ಮಿಸಿದೆ.

ದೇವಾಲಯದ ಸುತ್ತ ಕಲ್ಲು ಕಂಬಗಳಿವೆ. ಟಿಪ್ಪುವಿಗೆ ದುರುದ್ದೇಶ ಇದ್ದರೆ ಕಂಬಗಳನ್ನು ಕಿತ್ತು ಹೊಳೆಗೆ ಬೀಸಾಕಬೇಕಿತ್ತಲ್ಲ! ಆದರೆ ಹಿಂದೂ ದೇವರ ಚಿಹ್ನೆಗಳಿರುವ ಕಂಬಗಳು ಹಾಗೆಯೇ ಇವೆ. ಈಗ ಈ ಕಂಬಗಳನ್ನು ನೋಡಿ, ಓ ಇಲ್ಲಿ ದೇವಸ್ಥಾನ ಇತ್ತು ಎಂದು ಗುಲ್ಲೆಬ್ಬಿಸುತ್ತಾರೆ. ಇದಕ್ಕೆ ಇಂಟಲಿಜೆನ್ಸ್ ರಿಪೋರ್ಟ್ ತೆಗೆದುಕೊಳ್ಳುವ, ಸರ್ವೇ ಮಾಡುವ ಅವಶ್ಯಕತೆ ಇಲ್ಲ. ಮುಸ್ಲಿಂ ಎನ್ನುವ ಕಾರಣಕ್ಕೆ ಟಿಪ್ಪು ಮೇಲೆ ದ್ವೇಷ ಹಬ್ಬಿಸಲಾಗುತ್ತಿದೆ.

ಪ್ರಶ್ನೆ: ಟಿಪ್ಪು ಧರ್ಮ ದ್ವೇಷಿಯೇ?

ನಂಜರಾಜ ಅರಸು: ಟಿಪ್ಪು ಸುಲ್ತಾನ್‌ನ ಅರಮನೆಯ ಮುಂದೆ ನಿಂತು ಜೋರಾಗಿ ಒಂದು ಕಲ್ಲನ್ನು ಬಿಸಾಕಿದರೆ ನರಸಿಂಹಸ್ವಾಮಿ ದೇವಸ್ಥಾನದ ಅಂಗಳಕ್ಕೆ ಹೋಗಿ ಬೀಳುತ್ತದೆ. ರಂಗನಾಥಸ್ವಾಮಿ ದೇವಸ್ಥಾನ, ತುಪ್ಪದ ಕೊಳ ಸಮೀಪದಲ್ಲೇ ಇವೆ. ರಣಧೀರ ಕಂಠೀರವ ನರಸರಾಜ್ ಒಡೆಯರ್‌ ಕುಸ್ತಿ ಪೈಲ್ವಾನರಾಗಿದ್ದರು. ಇವರು 1640- 1650ರ ಅವಧಿಯಲ್ಲಿ ನರಸಿಂಹಸ್ವಾಮಿ ದೇವಾಲಯವನ್ನು ಕಟ್ಟಿಸಿದರು. ಟಿಪ್ಪು ತನ್ನ ಅರಮನೆಯ ಎಡದ ಭಾಗಕ್ಕೆ ಹೊರಟರೇ ಆ ದೇವಸ್ಥಾನದ ಮುಂದೆಯೇ ಹೋಗಬೇಕಿತ್ತು. ಅರ್ಧ ಪರ್ಲಾಂಗು ದೂರದಲ್ಲಿದ್ದ ದೇವಾಲಯವನ್ನು ಟಿಪ್ಪು ಏಕೆ ಒಡೆಯಲಿಲ್ಲ? ಬಲದ ಕಡೆಯಲ್ಲಿ ಮತ್ತೊಂದು ದೇವಾಲಯವಿದೆ. ಅದನ್ನು ಏಕೆ ಒಡೆಯಲಿಲ್ಲ? ಎಲ್ಲ ದೇವಸ್ಥಾನಗಳು ಯಥಾಸ್ಥಿತಿಯಲ್ಲಿವೆ. ಹತ್ತು ಸಾವಿರ ದೇವಾಲಯಗಳನ್ನು ಟಿಪ್ಪು ಒಡೆದುಹಾಕಿದ ಎನ್ನುತ್ತಾರಲ್ಲ, ದಾಖಲೆ ತೋರಿಸಲಿ. ದೇವಾಲಯಗಳಿಗೆ ದತ್ತಿ ಕೊಟ್ಟವನು ಟಿಪ್ಪು.

ಹದಿನಾರು ಕಥೆ ಗೊತ್ತೆ?

ಇತಿಹಾಸವನ್ನು ಕೆದಕುತ್ತಾ ಹೋದರೆ ದೇವಾಲಯಗಳ ಅಡಿಯಲ್ಲಿ ಜೈನ ಹಾಗೂ ಬೌದ್ಧ ಧರ್ಮದ ಕುರುಹುಗಳು ಸಿಗುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಪತ್ತೆಯಾದ ಜೈನ ತೀರ್ಥಂಕರರ ವಿಗ್ರಹದ ಇತಿಹಾಸವನ್ನು ಪ್ರೊ.ನಂಜರಾಜ ಅರಸು ಅವರು ವಿವರಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್‌ರನ್ನು ಜಿಹಾದಿ, ಅತ್ಯಾಚಾರಿ ಎಂದು ಕರೆದಿಲ್ಲ

“ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹದಿನಾರು ಗ್ರಾಮದ ಇತಿಹಾಸವನ್ನು ಬರೆಯಲು ಹೊರಟಾಗ ಹಲವಾರು ಸಂಗತಿಗಳು ತೆರೆದುಕೊಂಡವು. ಯದುವಂಶ ಹುಟ್ಟಿದ್ದು ಇದೇ ಗ್ರಾಮದಲ್ಲಿ ಎನ್ನುತ್ತಾರೆ. ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಹದಿನಾರು ಗ್ರಾಮದ ನಿವಾಸಿ ಎಚ್.ಸಿ.ಮಹದೇವಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ಹದಿನಾರು ಗ್ರಾಮದ ಅಭಿವೃದ್ಧಿಗೆ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಿದರು. ಆಗ ಜೈನ ತೀರ್ಥಂಕರರ ವಿಗ್ರಹ ಪತ್ತೆಯಾಗಿತ್ತು” ಎಂದು ಪ್ರೊ.ಅರಸು ತಿಳಿಸಿದರು.

“ಹದಿನಾರು ಗ್ರಾಮದಲ್ಲಿ ಚೆನ್ನಕೇಶವ ದೇವಾಲಯವಿದೆ. ಅದು ವೈಷ್ಣವ ದೇವರು. ವಿಜಯನಗರ ಕಾಲದ ವಾಸ್ತು ಶಿಲ್ಪದಲ್ಲಿ ದೇವಾಲಯವನ್ನು ಕಾಣಬಹುದು. ದೇವಾಲಯದ ಗೋಡೆಗಳು ಶಿಥಿಲವಾಗಿದ್ದರಿಂದ ಹೊಸದಾಗಿಯೇ ಕಟ್ಟಲು ಮಹದೇವಪ್ಪ ಸೂಚಿಸಿದರು. ಗರ್ಭಗುಡಿಯಲ್ಲಿನ ದೇವರನ್ನು ಗೋಣಿಚೀಲ, ಟಾರ್ಪಲ್‌ ಇತ್ಯಾದಿಗಳಿಂದ ಮುಚ್ಚಿ ಸುರಕ್ಷಿತವಾಗಿಟ್ಟು ಗೋಡೆಗಳನ್ನು ಒಡೆಯುತ್ತಾರೆ. ಹೊಸದಾಗಿ ಗೋಡೆ ನಿರ್ಮಿಸಲು ಒಂದು ಬದಿಯ ಗೋಡೆಯ ಬಳಿ ಆರು ಅಡಿ ಅಗೆದಾಗ ತೀರ್ಥಂಕರರ ಅರ್ಧಭಾಗ (ಸೊಂಟದ ಮೇಲಿನ ಭಾಗ) ಸಿಕ್ಕಿತು. ಇನ್ನೊಂದು ಗೋಡೆ ಒಡೆದಾಗ ಸೊಂಟದಿಂದ ಕೆಳಭಾಗ ಸಿಕ್ಕಿತು. ಅಂದರೆ ಇಲ್ಲಿ ಮೊದಲು ಜೈನರ ಬಸದಿ ಇತ್ತು. ಅದನ್ನು ವೈಷ್ಣವರು ಒಡೆದುಹಾಕಿದ್ದಾರೆ. ಅದನ್ನು ನಂತರ ವಿಗ್ರಹವನ್ನು ಅಲ್ಲಿಯೇ ಮುಚ್ಚಿಹಾಕಿ ವಿಷ್ಣು ದೇವಾಲಯ ಕಟ್ಟಿದ್ದಾರೆ ಎಂದಾಯಿತಲ್ಲ. ಮುತಾಲಿಕ್ ಹಾಗೂ ಕೆಲವು ಸ್ವಾಮೀಜಿಗಳು ಚೆನ್ನಕೇಶವನ ವಿಗ್ರಹ ತೆರವು ಮಾಡಿ, ಪಾರ್ಶ್ವನಾಥರ ವಿಗ್ರಹವನ್ನು ಪ್ರತಿಷ್ಠಾಪಿಸಬೇಕಲ್ಲವೇ?” ಎಂದು ಪ್ರಶ್ನಿಸಿದರು.

“ನನಗೆ ಯಾವ ದೇವರ ಬಗ್ಗೆಯೂ ಆಸಕ್ತಿ ಇಲ್ಲ. ಆದರೆ ಮಸೀದಿ ಒಡೆದು ದೇವಸ್ಥಾನ ಮಾಡುತ್ತೇವೆ ಎನ್ನುತ್ತಾರಲ್ಲ. ಹದಿನಾರು ಗ್ರಾಮದಲ್ಲಿ ಯಾವುದನ್ನು ಒಡೆಯುತ್ತಾರೆ? ಮೈಸೂರಿನಿಂದ ಪಶ್ಚಿಮವಾಹಿನಿಗೆ ಹೊರಟರೆ ದಾರಿಯಲ್ಲಿ ಕಳಸ್ತವಾಡಿ ಎಂಬ ಗ್ರಾಮ ಸಿಗುತ್ತದೆ. ಮುತಾಲಿಕ್‌ ಉಲ್ಲೇಖಿಸುವ ಬ್ರಿಟಿಷರೇ ಬರೆದ ಪ್ರಕಾರ, 1484ರ ಅವಧಿಯಲ್ಲಿ ತಿಮ್ಮಣ್ಣನಾಯಕನಿಗೆ ವಿಜಯನಗರದ ಅರಸರು ಅನುಮತಿ ನೀಡಿ ಕಳಸ್ತವಾಡಿಯಲ್ಲಿದ್ದ 100 ಜೈನಬಸದಿಗಳನ್ನು ಒಡೆದುಹಾಕುತ್ತಾರೆ. ನಂತರ ಇಲ್ಲಿನ ಜೈನ ಬಸದಿಗಳಿಂದ ಕಲ್ಲು, ಮರದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನವನ್ನು ವಿಸ್ತಾರಗೊಳಿಸಲಾಗುತ್ತದೆ. ಮುತಾಲಿಕ್‌ ಅವರೇ ಇದನ್ನು ನಿಮ್ಮ ಬ್ರಿಟಿಷರೇ ಬರೆದಿದ್ದಾರೆ. ನೂರೊಂದು ಜೈನ ಬಸದಿ ಇತ್ತೆಂದು ಇಲ್ಲಿನ ಜನರಿಗೇ ಗೊತ್ತೇ ಇಲ್ಲ. ಹೊಸದಾಗಿ ಪ್ರತಿಷ್ಠಾಪನೆ ಮಾಡುತ್ತೀರಾ?” ಎಂದು ಕೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ ಮೂಲದಲ್ಲಿ ಬೌದ್ಧ ವಿಹಾರವಾಗಿತ್ತು ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ಮಂಜುಶ್ರೀ ಎಂಬ ಬೌದ್ಧ ಭಿಕ್ಷುವಿಗಾಗಿ ಸಾಮ್ರಾಟ ಅಶೋಕ ಕಟ್ಟಿಸಿದ್ದ ಬೌದ್ಧ ವಿಹಾರ ಇದಾಗಿದೆ. ಇದನ್ನು ತಕ್ಷಣ ಬೌದ್ಧರಿಗೆ ಬಿಟ್ಟು ಕೊಡಬೇಕು.

  2. ಉಡುಪಿ ಕೃಷ್ಣ ಮಠ ಮೂಲದಲ್ಲಿ ಜೈನರ ಬಸದಿ ಆಗಿತ್ತು ಎಂಬುದಕ್ಕೆ ದಾಖಲೆಗಳಿವೆ.
    ಈ ಕೃಷ್ಣ ಮಠವನ್ನು ಜೈನರಿಗೆ ತಕ್ಷಣ ಬಿಟ್ಟು ಕೊಡಬೇಕು.
    ಉಡುಪಿಯ ಚಂದ್ರನಾಥ ಬಸದಿಯೇ ಚಂದ್ರ ಮೌಳೀಶ್ವರ ದೇವಸ್ಥಾನವಾಯಿತು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...